POST

8 ವರ್ಷದಿಂದ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ

ಹರಿಹರ ತಾಲೂಕು ಚಿಕ್ಕಬಿದರಿ ಗ್ರಾಮದ ರಾಮ್ ಸೇನಾ ಕರ್ನಾಟಕ ಚಿಕ್ಕಬಿದರಿ ಘಟಕದ ವತಿಯಿಂದ ಕೊಡುವ ಮನವಿ ಅರ್ಜಿ ಏನೆಂದರೆ ಹರಿಹರ ತಾಲೂಕು ಚಿಕ್ಕಬಿದರಿ ರಸ್ತೆ ದುರಸ್ತಿ ಮಾಡುವ ಬಗ್ಗೆ ಮನವಿ.

ಚಿಕ್ಕಬಿದರಿ ಗ್ರಾಮವು ಹರಿಹರ ಪಟ್ಟಣಕ್ಕೆ ಕೇವಲ 15 ಕಿಲೋಮೀಟರ್ ಅಂತರದಲ್ಲಿ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಕನಿಷ್ಠ 5 ಗ್ರಾಮಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ.

ಈ ಎಲ್ಲಾ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಹಾಗೂ ನೌಕರ ಸಿಬ್ಬಂದಿಗಳು ದಿನಪ್ರತಿ ಹರಿಹರ ಪಟ್ಟಣಕ್ಕೆ ಬರಬೇಕಾಗುತ್ತದೆ.
ಆದರೆ ಇಲ್ಲಿ ಚಿಕ್ಕಬಿದರಿ ಗ್ರಾಮದಿಂದ ಹರಿಹರಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಇಂತಹ ರಸ್ತೆಗಳು ದಾವಣಗೆರೆ ಜಿಲ್ಲೆಯಲ್ಲಿ ಆಗಲಿ ಕರ್ನಾಟಕ ರಾಜ್ಯದಲ್ಲಿಯೇ ಕಾಣಸಿಗುವುದಿಲ್ಲ.

ಈ ಹಿಂದೆ ಸ್ಥಳೀಯ ಶಾಸಕರು ಹಾಗೂ ಸಂಸದರಿಗೂ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಇದರ ಉದ್ದೇಶವೇನೆಂದರೆ , ಉದ್ದೇಶಪೂರ್ವಕವಾಗಿಯೇ ಗಂಗನರಸಿ ಕ್ರಾಸ್ ನಿಂದ ದೀಟೂರು, ಪಮೇನಹಳ್ಳಿ, ಸಾರಥಿ, ಹಾಗೂ ಚಿಕ್ಕಬಿದರಿ ಗ್ರಾಮಗಳಿಗೆ ಮಾಡಿರುವ ಅನ್ಯಾಯವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆದ್ದರಿಂದ ನಾವು ದಿನಾಂಕ 16 / 7/ 2021 ರಂದು ಸರಾಸರಿ 11 ಗಂಟೆಗೆ ನಮ್ಮ ರಾಮ್ ಸೇನಾ ಸಂಘಟನೆ ವತಿಯಿಂದ ಹಾಗೂ ಎಲ್ಲಾ ಗ್ರಾಮಗಳ ಸಾರ್ವಜನಿಕರು ಸೇರಿಕೊಂಡು ಗಂಗನರಸಿ ಕ್ರಾಸ್ ಶಿವಮೊಗ್ಗ ದಿಂದ ಹೊಸಪೇಟೆಗೆ ಹೋಗುವ ಎಲ್ಲಾ ವಾಹನಗಳನ್ನು ನಿಲ್ಲಿಸಿ (ತುರ್ತು ವಾಹನಗಳಿಗೆ ಅಡ್ಡಿಪಡಿಸದಂತೆ) ಪ್ರತಿಭಟನೆ ಕೈಗೊಂಡಿದ್ದೇವೆ ಆದ್ದರಿಂದ ತಾವುಗಳು ಸಹ ಪ್ರತಿಭಟನೆಗೆ ಸಹಕರಿಸಬೇಕೆಂದು ತಮ್ಮಲ್ಲಿ ಈ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ.

ವರದಿ ,,, ಫಕಿರೇಶ್ ಯಾದವ್

ಬೆಂಗಳೂರಿನಲ್ಲಿ ಆಟೋ ರಾಮಣ್ಣ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ

ಕನ್ನಡ ಚಿತ್ರರಂಗದ ಅಪ್ರತಿಮ ನಾಯಕ ನಟರಾದ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಅಭಿಮಾನಿ ಆಟೋ ರಾಮಣ್ಣನವರ ಆಟೋ ರಾಮಣ್ಣ ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂ 18ನೇ ಕ್ರಾಸ್ ರೇಣುಕಾಂಬ ಥಿಯೇಟರ್ ನಲ್ಲಿ ಚಿತ್ರ ರಸಿಕರ ನಡುವೆ ಸರಳವಾಗಿ ನಡೆಯಿತು. ಚಿಕ್ಕವಯಸ್ಸಿನಿಂದಲೂ ಮೆಟ್ರೋ ರಾಜ ಶಂಕರ್ ನಾಗ್ ರವರ ಅಭಿಮಾನಿಯಾಗಿದ್ದ ಈ ಆಟೋ ರಾಮಣ್ಣನವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನವೇ, ತನ್ನ ಹುಟ್ಟೂರಿನಲ್ಲಿ ಹಸು ಮೇಯಿಸಿ, ಪಟ್ಟಣದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿ ಕ್ಲೀನರ್ ಆಗಿ, ನಂತರದ ವರ್ಷಗಳಲ್ಲಿ ಆಟೋ ಡ್ರೈವರ್ ಆಗಿ ಜನರ ಸಾರಥಿಯಾಗಿ ನೋಡುಗರಿಗೆ ಆಟೋ ರಾಮಣ್ಣ ಎಂದೇ ಹೆಸರನ್ನುಗಳಿಸಿಕೊಂಡು, ತನ್ನ ನಿರ್ದೇಶನದ ಕನ್ನಡ ಚಿತ್ರವೊಂದಕ್ಕೆ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಸಾಹಸ ಗಾಯನ ನೃತ್ಯದ ಜೊತೆಗೆ ನಿರ್ಮಾಣ ಮಾಡಿದ್ದಾರೆ ಎಂದರೆ, ನಿಜಕ್ಕೂ ಅಚ್ಚರಿಯೇ ; ಹಾಗೇ ಸಿನಿಮಾ ಯುವ ವರ್ಗದವರಿಗೆ ಸ್ಪೂರ್ತಿಯೇ ಹೌದು !

ಚಿತ್ರದ ನಾಯಕ ಆಟೋ ರಾಮಣ್ಣ ಮಾತನಾಡಿ ” ನನ್ನ ಸನ್ನಿಧಾನಕ್ಕೆ ಬಂದ 25 ಜನರ ಹುಡುಗಿಯರ ಭಾವಚಿತ್ರದಲ್ಲಿ ಯೋಗಶ್ರೀ ಹುಡುಗಿಯನ್ನು ನನ್ನ ಚಿತ್ರಕ್ಕೆ ಆಯ್ಕೆ ಮಾಡಿದಾಗ, ಕೆಲವರು ಈ ಹುಡುಗಿ ಮುಖ ಲಕ್ಷಣ ಚೆನ್ನಾಗಿಲ್ಲ ಎಂದರು. ಅವರ ಮಾತಿಗೆ ನಾನು ತಲೆಕೆಡಿಸಿಕೊಳ್ಳದೇ, ಅವಳ ಪ್ರತಿಭೆಯನ್ನು ಈ ಚಿತ್ರಕ್ಕೆ ಹಿಂಡಿ ಬಳಸಿಕೊಂಡಿದ್ದೇನೆ. ಅಲ್ಲದೇ ನನ್ನ ಚಿತ್ರದಲ್ಲಿ ಪ್ರತೀಕ್ಷಾ ಅನ್ನೋ ಹುಡುಗಿ ಚೆನ್ನಾಗಿ ಅಭಿನಯ ಮಾಡಿದೆ. ನಾನು ಚಿತ್ರರಂಗಕ್ಕೆ ಬರುವ ಮುನ್ನವೇ, ಹಲವು ಜನರ ಮಾತಿನಿಂದ ನೊಂದು ಅವಮಾನ ಗೊಂಡಿದ್ದೇನೆ. ಅವಮಾನಗಳೇ ನನಗೆ ಮೆಟ್ಟಿಲಾಗಿ ಸನ್ಮಾನ ಗಳಾಗಿವೆ. ನಾನು ಸಾಯುವ ಮುನ್ನ ಇತಿಹಾಸವನ್ನು ಸೃಷ್ಟಿಸಿ ಹೋಗಬೇಕೆನ್ನುವ ಬಯಕೆ ಇದೆ. ಚಿತ್ರರಂಗಕ್ಕೆ ನಾನು ಬರಲು ನನ್ನ ಹೆಂಡತಿಗೆ ಇಷ್ಟವಿರಲಿಲ್ಲ. ಬಂದ ನಂತರ ನನ್ನ ಹೆಂಡತಿ ವಿಷ ಕುಡಿದಳು ಅವಳನ್ನು ಬದುಕಿಸಿಕೊಳ್ಳಲು 50 ಸಾವಿರ ಬೇಕಾಯಿತು. ನಮ್ಮ ಸ್ನೇಹಿತರು ನನಗೆ ಸಹಾಯ ಮಾಡಿದರು ಅವರಿಗೆ ನಾನು ಅಭಾರಿ, ನನ್ನ ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸಿದರೆ, 10 ವರ್ಷದಲ್ಲಿ 50 ಚಿತ್ರವನ್ನು ತೆಗೆಯಬೇಕು ಎಂದುಕೊಂಡಿದ್ದೇನೆ ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯ ಎಂದರು.

ಸಾಹಿತಿ ದೊಡ್ಡರಂಗೇಗೌಡರು ಮಾತನಾಡಿ, ಈ ಚಿತ್ರಕ್ಕೆ ನಾನು ಸಹ ಆರು ಸನ್ನಿವೇಶಗಳಿಗೆ ಹಾಡುಗಳನ್ನು ಬರೆದಿರುವೆ, ಇಡೀ ಭಾರತೀಯ ಚಿತ್ರರಂಗವೇ ನೋಡುವ ಒಂದು ಗೋವಿನ ಹಾಡಿದೆ. ಆ ಹಾಡಿನ ಮೇಲೆ ನನಗೆ ವಿಶ್ವಾಸವಿದೆ ಒಬ್ಬ ಬರಹಗಾರನಾಗಿ ನಾನು ಹೇಳ್ತಾ ಇದ್ದೀನಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಆ ಹಾಡು ಜಯಭೇರಿ ಬಾರಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಇನ್ನೂ ಹಾಸ್ಯನಟ ಡಿಂಗ್ರೀ ನಾಗರಾಜು ಮಾತನಾಡಿ ” ನಾನು ಬೇರೆ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗ ಆಟೋ ರಾಮಣ್ಣ ನನ್ನ ಬಳಿ ಬಂದು, ಸರ್ ನಾನು ಚಿತ್ರ ಮಾಡ್ತಾ ಇದ್ದೀನಿ ನಾನು ದಿನಕ್ಕೆ ನಿಮಗೆ 5000 ಕೊಡ್ತೀನಿ ತಾವು ಒಪ್ಪಿ ಚಿತ್ರ ಮುಗಿಸಿ ಕೊಡಿ ಎಂದರು. ಆಗ ನಾನು ಒಪ್ಪಿಕೊಂಡು ನಂತರ ಬೆಳಿಗ್ಗೆ ನಾನು ಇದ್ದ ಕಡೆ ಆಟೋ ಬಂದಾಗ, ಸರ್ ಆಟೋ ಬಂದಿದೆ ಹೋಗೋಣ ಹತ್ತಿ ಎಂದರು. ನಾನು ಅವಾಗ ಇದೇನಪ್ಪಾ..! ಶೂಟಿಂಗ್ ಸ್ಥಳಕ್ಕೆ ಆಟೋದಿಂದ ಡ್ರಾಪ ಎಂದು ಆಶ್ಚರ್ಯಪಟ್ಟೆ, ಆದ್ರೂ ರಾಮಣ್ಣ ಶೂಟಿಂಗ್ ಮುಗಿಯುವ ತನಕ ಚಿತ್ರಕ್ಕೆ ಶ್ರಮಿಸಿರುವ ಎಲ್ಲರನ್ನೂ ಆಟೋದಿಂದಲೇ, ಶೂಟಿಂಗ್ ಸ್ಥಳದಿಂದ ಮನೆಗೆ ಮನೆಯಿಂದ ಶೂಟಿಂಗ್ ಸ್ಥಳಕ್ಕೆ ಡ್ರಾಪ್ ಮಾಡಿಸ್ತ ಇದ್ರು. ಆಟೋದಲ್ಲಿ ಅವರು ದುಡಿದು ಅದರಿಂದ ಬಂದ ಲಾಭದಲ್ಲಿ ಈ ಚಿತ್ರವನ್ನು ಮಾಡಿಯೇ ಇವತ್ತು ಧ್ವನಿಸುರುಳಿ ಬಿಡುಗಡೆ ಮಾಡಿ ಇನ್ನೇನೋ, ಬಿಡುಗಡೆ ಹಂತಕ್ಕೆ ತಂದಿದ್ದಾರೆ ಎಂದರೇ, ಅವರಿಗೆ ದೊಡ್ಡದೊಂದು ಸಲಾಂ ಸಲ್ಲಿಸಬೇಕು. ಶೂಟಿಂಗ್ ಸ್ಥಳಕ್ಕೆ ಊಟವನ್ನು ಅಷ್ಟೇ, ಆಟೋದಲ್ಲಿ ತರಿಸುತ್ತಿದ್ದರು. ಕಲಾವಿದರಿಗೂ ಅಷ್ಟೇ ಸರಿಯಾದ ಸಮಯಕ್ಕೆ ಹಣ ಕೊಡುತ್ತಿದ್ದರು. ಈ ರಾಜ್ಯದಲ್ಲಿರುವ ಪ್ರತಿಯೊಬ್ಬ
ಆಟೋ ಡ್ರೈವರ್ ಗಳು ಸಿನಿಮಾ ನೋಡಿದ್ರೆ ಖಂಡಿತವಾಗಲೂ ಇವರು ಇನ್ನೊಂದು ಸಿನಿಮಾ ಮಾಡ್ತಾರೆ. ಈಗಾಗಲೇ ಅವರು ಕಥೆ ಬರೆದು ತಯಾರಿ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ಈ ಚಿತ್ರಕ್ಕೆ ಶುಭ ಹಾರೈಸಿದರು.

ವರದಿ : ಮಳವಳ್ಳಿ ಮಾದೇಶ್

ಔಷಧ ಸಿಂಪಡಣೆಗೆ ಚಾಲನೆ

ವಿಜಯಪುರ:-ಕರೋನ ಹಿನ್ನಲೆ ಬಬಲೇಶ್ವರ್ ಮತಕ್ಷೇತ್ರ ಬಬಲೇಶ್ವರ್ ಪಟ್ಟಣ್ಣದಲ್ಲಿ ಇವತ್ತು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ್ ಸಂಸ್ಥೆ ಅಧ್ಯಕ್ಷರು ಆದ ಶ್ರೀ ವಿಜುಗೌಡ ಎಸ್ ಪಾಟೀಲ್ ಹಾಗೂ ಸಂಸದರು ಆದ ಶ್ರೀ ರಮೇಶ ಜಿಗಜಿಣಗಿ ಇವರ ನೇತೃತ್ವದಲ್ಲಿ ಕರ್ನಾಟಕ ಸರಕಾರ ಸಚಿವರು ಆದ ಶ್ರೀ ಮುರಗೇಶ್ ನಿರಾಣಿ ಅವರ ಸಹಾಯದಿಂದ ಇವತ್ತು ಬಬಲೇಶ್ವರ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸುಮಾರು 40 ಟ್ರಾಕ್ಟರ್ ಮುಂಖಾತರ ಶ್ಯಾನಿಟೈಜರ ಮಾಡಲು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೂರಿಗೆ ಭತ್ತ ಬಿತ್ತನೆಗೆ ಮುಂದಾದ ರೈತರು

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಬಂಡ್ರಾಳ್ ಹತ್ತಿರದ ನೆಹರು ಕ್ಯಾoಪಿನಲ್ಲಿ ನಾಗಭೂಷಣಂ ಅವರ ಜಮೀನಿನಲ್ಲಿ ಕೂರಿಗೆ ಬಿತ್ತನೆ ಮಾಡುತ್ತಿರುವುದನ್ನು ಕೃಷಿ ಅಧಿಕಾರಿಗಳು ವೀಕ್ಷಿಸಿದರು.

ಮಳೆಗಾಲದ ಈ ಸಮಯದಲ್ಲಿ ಕಾಲುವೆ ನೀರನ್ನು ನಂಬಿ ಕೂರದೆ ಅಲ್ಪ ನೀರಿನಲ್ಲಿ ಭತ್ತ ಬೆಳೆಯುವ ಕೂರಿಗೆ ಬಿತ್ತನೆಗೆ ರೈತರು ಮುಂದಾಗಿದ್ದಾರೆ, ತಾಲೂಕಿನ ತುಂಗಭದ್ರಾ ಮತ್ತು ವೇದಾವತಿ ಹಗರಿ ಅಚ್ಚು ಕಟ್ಟು ಭಾಗದಲ್ಲಿ ನೇರ ಕೂರಿಗೆ ಭತ್ತದ ಬಿತ್ತನೆ ಪದ್ಧತಿ ಅಳವಡಿಸಿ ಕೊoಡಿರುವುದು ರೈತರಿಗೆ ವರದಾನವಾಗಿದೆ.
ಕಡಿಮೆ ಹೀರೋ ಸಮಯ ಕ್ಕೆ ಸರಿಯಾಗಿ ಬೆಳೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವಲ್ಲಿ ಈ ಪದ್ಧತಿ ಹೆಚ್ಚು ರೈತರಿಗೆ ಅನುಕೂಲ ಈಗಾಗಲೇ ತಾಲೂಕಿನಲ್ಲಿ ಸಾಕಷ್ಟು ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಬೆಳೆಯಲು ಮುಂದಾಗಿರುವುದಲ್ಲದೆ ಜೊತೆಗೆ ಪರ್ಯಾಯ ಬೆಳೆ ಬೆಳೆದು ಕೂಡ ಸೈ ಎನಿಸಿಕೊಡಿದ್ದಾರೆ.
ತಾಲೂಕಿನ ಹಚ್ಚೋಳ್ಳಿ, ತೆಕ್ಕಲಕೋಟೆ, ಕರೂರು, ಸಿರುಗುಪ್ಪ ಈ ನಾಲ್ಕು ಹೋಬಳಿಯ ಭಾಗಗಳಲ್ಲಿ 1000ಎಕರೆ ಪ್ರದೇಶದಲ್ಲಿ ಈ ಗಾಗಲೇ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಮಾಡಿದ್ದು ಜುಲೈ ಅಂತ್ಯದವರೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಪದ್ಧತಿ ಬಿತ್ತನೆ ಮಾಡಲಿದ್ದಾರೆ.

ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿಯ ಪ್ರತಿ ಎಕರೆಗೆ 25 ಸಾವಿರ ಖರ್ಚು ಮಾತ್ರ ಬರುತ್ತದೆ.
ಈ ಕೂರಿಗೆ ಭತ್ತ ಬಿತ್ತನೆಯಿಂದ ನಮಗೆ ಸಾಕಷ್ಟು ಲಾಭ, ಅನುಕೂಲ ಆಗಿದೆ. ನಾವು ಬೆಳೆದದ್ದನ್ನು ಕಂಡು ಸುತ್ತಮುತ್ತಲಿನ ಗ್ರಾಮದ ಕೆಲ ರೈತರು ಇದೇ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಈ ಪದ್ಧತಿಯನ್ನು ಎಲ್ಲಾರು ಅಳವಡಿಸಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ.ಈ ಕೃಷಿಯಿಂದ ಮಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಭವಿಷ್ಯದ ಪೀಳಿಗೆಗೂ ನೆಮ್ಮದಿಯ ವಾತಾವರಣ ನಿರ್ಮಿಸಿ ಕೊಳ್ಳಬಹುದಾಗಿದೆ ಎನ್ನುತ್ತಾರೆ ನಾಗಭೂಷಣo ಸಾಂಪ್ರದಾಯಕ ನಾಟಿ ಪದ್ಧತಿಗೆ ಅಧಿಕ ನೀರು, ಹೆಚ್ಚು ಕೂಲಿಕಾರರು, ವ್ಯಾಪಕ ರಸಗೊಬ್ಬರ, ಕೀಟನಾಶಕ ಬಳಕೆ ಮಾಡಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಬೀರುವ ಜೊತೆಗೆ ಮಣ್ಣಿನ ಮಾಲಿನ್ಯ ಫಲವತ್ತತೆ ಹಾಳಾಗುತ್ತದೆ.
ಆದರೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೂರಿಗೆ ಭತ್ತದ ಬಿತ್ತನೆ ರೈತರಿಗೆ ಹೆಚ್ಚು ವರದಾನ ಆಗಲಿದೆ, ತಾಲೂಕಿನ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಎಲ್ಲಾ ಕೊನೆಭಾಗದ ರೈತರು ನೀರಿನ ಸಮಸ್ಯೆಗೆ ಕೂರಿಗೆ ಭತ್ತದ ಬಿತ್ತನೆ ಪರಿಹಾರ ಮಾರ್ಗವಾಗಿದೆ. ಯಾವ ಪ್ರದೇಶದ ಭೂಮಿಗಳಲ್ಲಿ ಕೂರಿಗೆ ಬಿತ್ತನೆ ಮಾಡಲು ಸಾಧ್ಯವಿದೆಯೋ ಅಲ್ಲೆಲ್ಲಾ ಈ ಪದ್ದತಿಯನ್ನು ಅಳವಡಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಲಾಗುತ್ತದೆ, ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಶೇ, 50 ರಿಂದ 60 ರಷ್ಟು ನೀರಿನ ಸಮಸ್ಯೆ ನಿಯಂತ್ರಿಸಬಹುದು ನಮ್ಮ ತಾಲೂಕಿನಲ್ಲಿ 5 ಸಾವಿರ ಎಕರೆ ಬಿತ್ತನೆ ಗುರಿ ಹೊಂದಿದ್ದು. ಈ ಗಾಗಲೇ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಇದೆ.

ನಜೀರ್ ಅಹಮ್ಮದ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಸಿರುಗುಪ್ಪ

ನೀರಾವರಿ ಅಚ್ಚು ಕಟ್ಟು ಭಾಗದ ರೈತರು ಹಾಗೂ ಕೊನೆ ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು, ದೊರೆಯುವ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಅಳವಡಿಸಿಕೊಂಡರೆ ಹೆಚ್ಚು ಅನುಕೂಲ. ಈ ರೀತಿಯ ಬೆಳೆ ಪದ್ದತಿಯಿಂದ ಖರ್ಚು ವೆಚ್ಚು ಕಡಿಮೆ ಆಗುವ ಜೊತೆಗೆ ಅಧಿಕ ಲಾಭ ಪಡಿಯಬಹುದಾಗಿದೆ, ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದಾಗಿದೆ. ಸಂಪ್ರದಾಯಿಕ ಪದ್ದತಿಯಲ್ಲಿ ರೈತರಿಗೆ ಲಾಭಾಂಶ ದೊರೆಯುವುದು ಅಷ್ಟ ಕಸ್ಟೇ ಆದರೆ ಕೂರಿಗೆ ಭತ್ತ ಬಿತ್ತನೆಯಿಂದ ರೈತರ ಆದಾಯ ದ್ವಿಗುಣ ಆಗುವ ಜೊತೆಗೆ ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟು ಬಹುದಾಗಿದೆ. ಕೂರಿಗೆ ಬಿತ್ತನೆ ಮಾಡಿದ ಮರುದಿನ ಒಂದು ಎಕರೆಗೆ 700 ಎಂ ಎಲ್ ಪೆಂಡಿಮೈಥಿಲಿನ್ ಕಳೆ ನಾಶಕವನ್ನು 200 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.
ಡಾ ಎಂ ಬಸವಣ್ಣೆಪ್ಪ. ಮುಖ್ಯಸ್ಥರು, ಕೃಷಿ ಸಂಶೋಧನೆ ಕೇಂದ್ರ, ಸಿರುಗುಪ್ಪ.

ವರದಿ :ಶೇಖರ ಹೆಚ್ ರಾರಾವಿ

ಆಗಾಗ ಮುಖ ತೊಳೆಯಿರಿ

ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯ ತೈಲ ಗ್ರಂಥಿಗಳು ಹೆಚ್ಚು ಕೆಲಸ ಮಾಡುವ ಪರಿಣಾಮ ನಿಮ್ಮ ಮುಖದಲ್ಲಿ ಎಣ್ಣೆಯಾಂಶ ಕಂಡುಬರಬಹುದು. ಇದು ನಿಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳಲು ಮೊದಲ ಕಾರಣ. ಯಾವುದಾದರೂ ಒಳ್ಳೆಯ ಕ್ಲೀನ್ಸರ್ ನಿಂದ ಮುಖವನ್ನು ದಿನದಲ್ಲಿ ಎರಡು ಸಲವಾದರೂ ತೊಳೆಯಿರಿ. ಒಮ್ಮೆ ತೊಳೆದರೂ ಇದು ಕೆಲಸ ಮಾಡಬಹುದು. ದಿನದಲ್ಲಿ ಎಷ್ಟು ಸಲ ಮುಖ ತೊಳೆಯಬೇಕೆಂದು ನೀವು ನೋಡಲು ಪ್ರಯತ್ನಿಸಿ.
ಮೇಕಪ್ ತೆಗೆಯಿರಿ:
ಸುಂದರವಾಗಿ ಕಾಣಿಸಿಕೊಳ್ಳಲು ಮಹಿಳೆಯರು ಮೇಕಪ್ ಮೊರೆ ಹೋಗುವುದು ಹೊಸತೇನಲ್ಲ. ಇದನ್ನು ಸರಿಯಾದ ರೀತಿ ನಿಭಾಯಿಸದಿದ್ದರೆ ಆಗ ಮೊಡವೆ ಉಂಟಾಗಬಹುದು. ಮಲಗುವ ಮೊದಲು ನೀವು ಮೇಕಪ್ ತೆಗೆಯಿರಿ. ಹೀಗೆ ಮಾಡದಿದ್ದರೆ ನೀವು ಉದ್ದೇಶಪೂರ್ವಕವಾಗಿ ಮುಖದಲ್ಲಿ ಮೊಡವೆಗಳನ್ನು ಆಹ್ವಾನಿಸುತ್ತಿದ್ದೀರಿ.
ದಯವಿಟ್ಟು ಧೂಮಪಾನ ನಿಲ್ಲಿಸಿ:
ಹೌದು. ನಿಮಗೆ ನಾನು ಹೇಳುವುದು ಕೇಳಿದೆ. ಮೊಡವೆಯಿಂದ ಮುಕ್ತರಾಗಬೇಕಾದರೆ ನೀವು ಧೂಮಪಾನ ತ್ಯಜಿಸಲೇಬೇಕು. ಧೂಮಪಾನವು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವುದು ಮಾತ್ರವಲ್ಲದೆ ಮೊಡವೆಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹಾಲನ್ನು ಕುಡಿಯಿರಿ:
ಒಂದು ಲೋಟ ಹಾಲನ್ನು ಕುಡಿಸಿ ಗಟ್ಟಿಯಾದ ನಂತರ ಅದಕ್ಕೆ ಒಂದು ಹನಿ ನಿಂಬೆ ರಸ ಹಿಂಡಿ ಮತ್ತು ಒಲೆಯಿಂದ ಇಳಿಸಿ, ಕದಡುತ್ತಿರಿ. ಬಿಸಿ ತಣಿದ ನಂತರ ಮಲಗುವ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮತ್ತು ಮರುದಿನ ಬೆಳಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.ಇದು ಮೊಡವೆ ನಿವಾರಿಸಿ ಮೃದು ಕಾಂತಿ ನೀಡುತ್ತದೆ.
ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:
ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ. ತ್ವಚೆಯಲ್ಲಿ ಮೊಡವೆಗಳಿಲ್ಲದೆ ನೀವು ಜನರ ಮಧ್ಯೆ ತುಂಬಾ ಆತ್ಮವಿಶ್ವಾಸದಿಂದ ತಿರುಗಾಡಲು ಇದು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಸಲಹೆಗಳು. ಇಲ್ಲಿ ನೀಡಲಾಗಿರುವ ಕೆಲವೊಂದು ಸಲಹೆಗಳನ್ನು ಹೆಚ್ಚಿನ ಮಹಿಳೆಯರು ಕಡೆಗಣಿಸುತ್ತಾರೆ.
ಯಾಕೆಂದರೆ ಅವರಿಗೆ ಇದರಿಂದ ಹೆಚ್ಚು ಪರಿಣಾಮವಾಗುವುದಿಲ್ಲವೆಂದು ಭಾವಿಸುತ್ತಾರೆ. ಹೀಗಿದ್ದರೆ ಅದು ತಪ್ಪು. ಈ ಸಲಹೆಗಳನ್ನು ಪಾಲಿಸಿದರೆ ಬೇಸಿಗೆ ಕಾಲದಲ್ಲಿ ನೀವು ಮೊಡವೆ ಮುಕ್ತ ತ್ವಚೆ ಪಡೆಯಬಹುದು.

 

೫ sಣeಠಿs ಣo smooಣh sಞiಟಿ&soಜಿಣ bueಣಥಿಜಿuಟಟ..
೧.ಕ್ರೀಮ್ ಗಳನ್ನು ರಾತ್ರಿ ಹೊತ್ತು ಹಚ್ಚುವುದು ತುಂಬಾ ಪರಿಣಾಮಕಾರಿ ಅದರಲ್ಲೂ ನೈಸರ್ಗಿಕವಾದ ಕ್ರೀಮ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಗೆ ಸಂರಕ್ಷಣೆಗೆ ಒಳ್ಳೆಯದು. ಏಕೆಂದರೆ ಮಲಗಿದ್ದಾಗ ನಾವು ವಿಶ್ರಾಂತಿ ಅನುಭವಿಸುತ್ತಿರುವಾಗ ತ್ವಚೆ ಕಣಗಳು ಹೆಚ್ಚು ಕೆಲಸ ಮಾಡುತ್ತದೆ, ಆದ್ದರಿಂದ ಕ್ರೀಮ್ ಗಳನ್ನು ರಾತ್ರಿ ಹೊತ್ತಿನಲ್ಲಿ ಹಚ್ಚಿ. ಮುಖ ಕಾಂತಿಯುತವಾಗಿ, ಯೌವನಭರಿತವಾಗಿ ಕಾಣಲು ದೇಹದಲ್ಲಿ ಕೊಲೆಜಿನ್ ಅಂಶ ಅವಶ್ಯಕ. ಕ್ರೀಮ್ ಗಳನ್ನು ರಾತ್ರಿ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚಿಸುವ ಕೊಲೆಜಿನ್ (ಛಿoಟಟಚಿgeಟಿ ) ಮತ್ತು ಇಲಾಸ್ಟಿನ್ (eಟಚಿsಣiಟಿ) ಉತ್ಪತ್ತಿಗೆ ಸಹಕಾರಿಯಾಗಿದೆ.
೨. ಸಿಟ್ರಿಕ್ ಆಸಿಡ್ ಮತ್ತು ಗ್ಲೈಸೋಲಿಕ್ ಆಸಿಡ್ ನಿರ್ಜೀವ ತ್ವಚೆಯನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ವಿಟಮಿನ್ ಸಿ ಕೊಲೆಜಿನ್ ಅಂಶ ಹೆಚ್ಚು ಮಾಡಿ ತ್ವಚೆ ಕಾಂತಿ ಹೆಚ್ಚಿಸುವುದಲ್ಲದೆ ಅಕಾಲಿಕ ಮುಪ್ಪನ್ನು ತಡೆಗಟ್ಟುತ್ತದೆ.
೩. ರೆಟಿನೋಲ್ ಕ್ರೀಮ್ ಬಳಸುವುದು ತ್ವಚೆಗೆ ತುಂಬಾ ಒಳ್ಳೆಯದು. ಇದು ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ ಕೊಲೆಜಿನ್ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಅಕಾಲಿಕ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ.
೪. ಹೊಳೆಯುವ ತ್ವಚೆ ಬೇಕೆಂದು ಬಯಸುವುದಾದರೆ ಚಿಟಿಣioxiಜಚಿಟಿಣs ಅಧಿಕವಿರುವ ಆಹಾರವನ್ನು ಮತ್ತು ಹಣ್ಣುಗಳನ್ನು ತಿನ್ನಬೇಕು. ಬೆರ್ರಿ, ದಾಳಿಂಬೆ, ಗ್ರೀನ್ ಟೀ, ನಟ್ಸ್, ಬೀನ್ಸ್, ದವಸ ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
೫. ಮುಖಕ್ಕೆ ಸ್ಟೀಮ್ ಕೊಡಲು ನೀರನ್ನು ಕುದಿಸಿ ಕೊಡುವ ಬದಲು ಹಾಲನ್ನು ಕುದಿಸಿ ಸ್ಟೀಮ್ ಕೊಟ್ಟರೆ ಹೆಚ್ಚಿನ ಪ್ರಯೋಜನವನ್ನು ಪಡೆಯುಬಹುದು. ಮುಖವನ್ನು ಪ್ರತಿ ದಿನ ಕ್ಲೆನ್ಸ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ತ್ವಚೆ ಬೇಗನೆ ಮುಪ್ಪಾಗುವುದಿಲ್ಲ, ಸದಾ ಕಾಂತಿಯಿAದ ಕೂಡಿರುತ್ತದೆ.

ಅರಶಿನವು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವಾದ ಕೊಡುಗೆಯನ್ನು ನೀಡಿದೆ. ಮುಖದಲ್ಲಿ ಮೂಡುವ ಮೊಡವೆಗಳು, ಕಲೆಗಳ ನಿವಾರಣೆಗೆ ಅರಶಿನವು ಉಪಯುಕ್ತವಾಗಿದ್ದು, ಕೆನೆಹಾಲಿನ ಜೊತೆಗೆ ಅರಶಿನವನ್ನು ಹಚ್ಚುವುದರಿಂದ ಮುಖವು ಕಾಂತಿಯುತವಾಗಿ ಕಾಣುತ್ತದೆ. ಅರಶಿನ ಅಥವಾ ಅರಶಿನ ಕೊಂಬನ್ನು ತೇಯ್ದು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ನಂತರ ಇದನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಅರಶಿನವನ್ನು ಅರೆದು ಹಾಲಿನ ಕೆನೆಯನ್ನು ಮಿಶ್ರ ಮಾಡಿ ಈ ಮಿಶ್ರಣವನ್ನು ಕೂಡ ನೀವು ಮುಖಕ್ಕೆ ಲೇಪಿಸಬಹುದು. ಇದರಿಂದ ನಿಮ್ಮ ಎಣ್ಣೆಯುಕ್ತ ಮುಖವು ಶುಭ್ರಗೊಳ್ಳುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಬೆಳೆಯುವ ಶತಾವರಿಯ ಎಲೆ, ಕಾಂಡ ಮತ್ತು ಬೇರುಗಳನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ತರಕಾರಿಯನ್ನು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಬಳಸಬಹುದು. ಶತಾವರಿಯಿಂದ ಹಲವಾರು ಆರೋಗ್ಯ ಮತ್ತು ತ್ವಚೆಯ ಲಾಭಗಳಿವೆ. ಇದರಲ್ಲಿ ತ್ವಚೆಯನ್ನು ಶುಚಿಗೊಳಿಸುವ ಗುಣಗಳಿದೆ ಮತ್ತು ಇದನ್ನು ನೇರವಾಗಿ ತ್ವಚೆಗೆ ಹಚ್ಚಬಹುದು. ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತೆ ಆಗುವುದರಿಂದ ಇದನ್ನು ನಿವಾರಿಸಲು ಶತಾವರಿ ಬಳಸಬಹುದು. ಇದನ್ನು ತ್ವಚೆಯ ಆರೈಕೆಗೆ ಬಳಸುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ. ಇದು ತುಂಬಾ ಕಿರಿಕಿರಿ ಮತ್ತು ನಿಮ್ಮ ತ್ವಚೆಗೆ ಹೊಂದಿಕೊಳ್ಳದೆ ಇರಬಹುದು. ಮೊದಲು ಇದನ್ನು ಕೈಯ ಒಂದು ಭಾಗಕ್ಕೆ ಹಚ್ಚಿ ಯಾವುದೇ ಸಮಸ್ಯೆಯಾಗುತ್ತದೆಯಾ ಎಂದು ಮೊದಲು ತಿಳಿದುಕೊಳ್ಳಿ.

 

ಕಾಯಿಸಿ ಆರಿಸಿದ ಹಾಲಿಗೆ ಲಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ ಬ್ಲ್ಯಾಕ್ ಹೆಡ್ ನಾಶವಾಗಿ ತ್ವಚೆ ಕಾಂತಿಯುಕ್ತವಾಗುತ್ತದೆ.
ದಾಲ್ಚಿನಿ ಚೆಕ್ಕೆಯನ್ನು ತೇಯ್ದು, ಅದಕ್ಕೆ ಜೇನುತುಪ್ಪ ಬೆರೆಸ ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಬೊಟ್ಟು ಇಟ್ಟು ಮಲಗಿ ಬೆಳಗ್ಗೆ ಎದ್ದು ತೊಳೆದರೆ ಮೊಡವೆ ಸಂಪೂರ್ಣ ಮಾಯವಾಗುತ್ತದೆ.
ಕಹಿಬೇವಿನ ಎಲೆ ಅರೆದು ಅದಕ್ಕೆ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ನಾಶವಾಗಿ ಬೆಳ್ಳಗಿನ ತ್ವಚೆ ನಿಮ್ಮದಾಗುತ್ತದೆ.
ಮೆಂತೆಸೊಪ್ಪು ಅರೆದು ಮುಖಕ್ಕೆ ಹಚ್ಚಿ ೨೦ ನಿಮಿಷ ಬಿಟ್ಟು ತೊಳೆದರೆ ತ್ವಚೆ ನುಣುಪಾಗಿ ಮೊಡವೆಗಳು ಹಾಗೂ ಸುಕ್ಕು ಕಡಿಮೆಯಾಗುತ್ತದೆ.
ಕಿತ್ತಳೆ ಸಿಪ್ಪೆಯನ್ನು ನೀರಿನೊಂದಿಗೆ ಗಟ್ಟಿಯಾಗಿ ರುಬ್ಬಿ ಕಣ್ಣಿನ ಸುತ್ತ ಹೊರತುಪಡಿಸಿ ಮುಖಕ್ಕೆ ಹಚ್ಚಿದರೆ ಮುಖ ಕಾಂತಿಯುಕ್ತವಾಗಿ ಮೊಡವೆಗಳು ಮಾಯವಾಗುತ್ತದೆ.

ಕಹಿಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ಆನೀರಿನಿಂದ ಮುಖ ತೊಳೆಯಿರಿ. ಇದು ಮೊಡವೆ, ಕಪ್ಪುಚುಕ್ಕೆಗಳನ್ನು ಹೋಗಲಾಡಿಸುತ್ತದೆ.
ಮೊಡವೆಗಳಿಂದಾಗಿ ಮುಖದಲ್ಲಿ ಕಲೆಗಳಾಗಿದ್ದರೆ ತುಳ
ಸಿಯ ಪೇಸ್ಟ್ ಮಾಡಿ ದಿನವೂ ಮುಖಕ್ಕೆ ಹಚ್ಚಿ. ಕಲೆಗಳು ನಿವಾರಣೆಯಾಗುತ್ತದೆ.
ಮೊಡವೆಗಳಿದ್ದರೆ ದಿನವೂ ಸೌತೆಕಾಯಿ ರಸ, ಲಿಂಬೆ ರಸ, ಹಾಲು ಸಮಪ್ರಮಾಣದಲ್ಲಿ ಸೇರಿಸಿ, ಅದರಲ್ಲಿ ಹತ್ತಿ ತುಂಡು ಮುಳುಗಿಸಿ ಆ ಮೂಲಕ ಮುಖಕ್ಕೆ ಉಜ್ಜಿ.
ಮುಖದಲ್ಲಿ ಬ್ಲ್ಯಾಕ್ ಹೆಡ್‌ಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಲು ಮುಖಕ್ಕೆ ಮೊಸರಿನ ಜೊತೆಗೆ ಅಕ್ಕಿ ಪುಡಿಯನ್ನು ಸೇರಿಸಿ ದಿನವೂ ಹಚ್ಚಬೇಕು. ನಂತರ ಮೃದುವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.
ಮುಖ ತುಂಬ ತೈಲಯುಕ್ತವಾಗಿ ಕಾಣುತ್ತಿದ್ದರೆ, ಮುಲ್ತಾನಿ ಮಿಟ್ಟಿಯನ್ನು ರೋಸ್‌ವಾಟರ್‌ನಲ್ಲಿ ಕಲಸಿ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.

ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ. ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.

ಸೌಂದರ್ಯದ ದೃಷ್ಟಿಯಿಂದಲೂ ಮನುಷ್ಯನಿಗೂ ತಲೆ ಕೂದಲು ಅತಿ ಮುಖ್ಯ. ಮಹಿಳೆಯರಿಗಾಗಲಿ, ಪುರುಷರಿಗಾಗಲಿ ತಮ್ಮ ಕೂದಲು ಕಪ್ಪಾಗಿರಬೇಕು, ಸದೃಢವಾಗಿರಬೇಕು, ದಟ್ಟವಾಗಿರಬೇಕು ಎಂಬ ಮಹದಾಸೆ ಇದ್ದೇ ಇರುತ್ತದೆ. ಅದಕ್ಕಾಗಿ ದುಬಾರಿ ಎಣ್ಣೆ ಹಾಗೂ ಶ್ಯಾಂಪುಗಳಿಗೆ ದುಡ್ಡು ಸುರಿಯುತ್ತಾರೆ, ಹಾಗೆ ಇನ್ನೂ ಮುಂದೆ ದುಡ್ಡು ಸುರಿಯಬಾರದು ಎಂದು ಆಲೋಚಿಸಿದ್ದರೆ ಮುಂದೆ ಓದಿ.
ಕೂದಲ ಹೊಳಪಿಗೆ ದಾಸವಾಳದ ಎಲೆಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಒಳ್ಳೆಯದು. ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಈ ರೀತಿಯ ಸಮಸ್ಯೆಯಿದ್ದರೆ ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಎಣ್ಣೆ ಜೊತೆ ಹಾಕಿ ಕುದಿಸಿ ತಲೆಗೆ ಹಚ್ಚಬಹುದು. ಇಲ್ಲದಿದ್ದರೆ ನೆಲ್ಲಿಕಾಯಿ ಪೇಸ್ಟ್ ಅನ್ನು ಮೊಸರಿನ ಜೊತೆ ಮಿಕ್ಸ್ ಮಾಡಿಯೂ ತಲೆಗೆ ಹಚ್ಚಬಹುದು. ಮೊಸರನ್ನು ಜೇನು ಅಥವಾ ನಿಂಬೆ ರಸ ಹಚ್ಚಿ ತಲೆಗೆ ಹಚ್ಚಿದರೆ ಇದರಷ್ಟು ಉತ್ತಮವಾದ ಕಂಡೀಷನರ್ ಮತ್ತೊಂದಿಲ್ಲ. ಕೂದಲು ಎಣ್ಣೆ-ಎಣ್ಣೆಯಾಗುತ್ತಿದ್ದರೆ ಅದನ್ನು ಹೋಗಲಾಡಿಸಲು ನಿಂಬೆ ರಸ ಬಳಸಬಹುದು. ಶುದ್ಧವಾದ ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿನ ಸೌಂದರ್ಯ ಹೆಚ್ಚುವುದು. ತಿಂಗಳಿಗೊಮ್ಮೆ ಕೂದಲಿಗೆ ಮೆಹಂದಿ ಹಚ್ಚುವುದು ಒಳ್ಳೆಯದು. ಇದು ಕೂದಲನ್ನು ಮೃದುವಾಗಿಸುವುದರ ಜೊತೆಗೆ ಅಕಾಲಿಕ ನೆರಿಗೆಯನ್ನು ತಡೆಯುತ್ತದೆ. ತಲೆ ಸ್ನಾನವಾದ ಬಳಿಕ ಅರ್ಧ ಬಕೆಟ್ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಆ ನೀರನ್ನು ತಲೆಗೆ ಸುರಿದುಕೊಂಡರೆ ಕೂದಲು ಮೃದುವಾಗುವುದು ಕೆಲವೊಮ್ಮೆ ಇನ್ಫೆಕ್ಶನ್ ಆಗಿ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ. ಈ ರೀತಿಯಾದಾಗ ಬೇವಿನ ಎಲೆ ಹಚ್ಚಿದರೆ ಒಳ್ಳೆಯದು. ಯಾವುದೇ ಕೂದಲಿನ ಸಮಸ್ಯೆಯಿಲ್ಲದೆ ಮಂದವಾದ ಕೂದಲು ಬೇಕೆಂದರೆ ವಾರಕ್ಕೊಮ್ಮೆ ಮೆಂತೆ ಪೇಸ್ಟ್ ಅನ್ನು ತಲೆಗೆ ಹಚ್ಚಲು ಮರೆಯದಿರಿ. ಮೊಟ್ಟೆಯ ಬಿಳಿಯನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರು ನಿಮ್ಮ ಕೂದಲಿನ ಗುಣ ಮಟ್ಟ ಹೆಚ್ಚುವುದು. ಹರಳೆಣ್ಣೆ ಹಚ್ಚಿದರೆ ಕೂದಲು ಕಪ್ಪಾಗಿ, ಮಂದವಾಗಿ ಬೆಳೆಯುವುದು, ಆದರೆ ಇದನ್ನು ಹಚ್ಚಿದರೆ ತಲೆ ಜಿಡ್ಡು-ಜಿಡ್ಡಾಗಿರುವುದರಿಂದ ಹೆಚ್ಚಿನವರು ಬಳಸಲು ಇಷ್ಟಪಡುವುದಿಲ್ಲ. ಮಂದವಾದ, ಆರೋಗ್ಯಕರವಾದ ಕೂದಲಿಗಾಗಿ ಈ ಎಣ್ಣೆ ಬಳಸಬಹುದು. ಕೂದಲಿಗೆ ವಿಟಮಿನ್ ಬಿ ಕೊರತೆ ಉಂಟಾದರೆ ಕೂದಲು ಕವಲೊಡೆಯುತ್ತದೆ. ಲೋಳೆಸರ ಹಚ್ಚಿದರೆ ಕೂದಲಿಗೆ ಬೇಕಾದ ವಿಟಮಿನ್ ದೊರೆಯುವುದು ಹಾಗೂ ಕೂದಲು ಕವಲೊಡೆಯುವ ಸಮಸ್ಯೆಯೂ ಕಡಿಮೆಯಾಗುವುದು. ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು. ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ಶೀಯಾ ಬಟರ್ ಹಚ್ಚಿದರೆ ಸಾಕು, ಕೂದಲಿನಲ್ಲಿ ಮಾಯಿಶ್ಚರೈಸರ್ ಕಾಪಾಡಬಹುದು ತೆಂಗಿನ ಹಾಲನ್ನು ತಲೆಗೆ ಹಚ್ಚಿದರೆ ಕೂದಲು ಡ್ರೈಯಾಗುವುದನ್ನು ಣಚಿಜeಥಿbಚಿhuಜu

೧.ಸೌತೆಕಾಯಿ ರಸ ಕತ್ತಿನ ಚರ್ಮದ ಕಪ್ಪು ಬಣ್ಣವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ತ್ವಜೆಯನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಸೌತೆಕಾಯಿ ರಸ ಅಥವಾ ಪೇಸ್ಟ್ನ್ನು ಕುತ್ತಿಗೆಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಬಳಿಕ ಪನ್ನೀರು ಹಚ್ಚಿ ಒರೆಸಿಕೊಳ್ಳಿ. ಇದನ್ನು ವಾರಕ್ಕೊಂದು ಬಾರಿಯಾದರೂ ಮಾಡಿ.
೨. ಒಂದು ತುಂಡು ಆಲೂಗಡ್ಡೆಯನ್ನು ತೆಗೆದುಕೊಂಡು ಕತ್ತಿನ ಸುತ್ತ ಅದನ್ನು ಉಜ್ಜಿ. ಒಂದುವೇಳೆ ಇದು ಕಷ್ಟ ಎಂದಾದರೆ ಆಲೂಗಡ್ಡೆ ಜ್ಯೂಸ್ ಮಾಡಿ ಅದನ್ನು ಕತ್ತಿಗೆ ಹಚ್ಚಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀವು ಕಾಣುವಿರಿ.
೩.ಇನ್ನು ಲಿಂಬೆ ರಸ ಮತ್ತು ಪನ್ನೀರನ್ನು ಸಮಾನವಾಗಿ ತೆಗೆದುಕೊಂಡು ಮಿಶ್ರಣ ಮಾಡಿ. ಇದನ್ನು ರಾತ್ರಿ ಕತ್ತಿಗೆ ಹಚ್ಚಿ ಬೆಳಗ್ಗೆ ತೊಳೆದುಕೊಳ್ಳಿ. ಕೆಲವು ದಿನಗಳ ಕಾಲ ಇದನ್ನು ಮಾಡುತ್ತಾ ಹೋದರೆ ಕತ್ತಿನ ಚರ್ಮದಲ್ಲಿರುವ ಕಪ್ಪು ಕಲೆಗಳು ಹೋಗಿ ನೈಸರ್ಗಿಕ ಬಣ್ಣ ಲಭಿಸುತ್ತದೆ.
೪. ಇನ್ನು ಅಲೋವೆರಾ ಪೇಸ್ಟ್ ಕೂಡ ಕತ್ತಿನ ಕಪ್ಪನ್ನು ನಿವಾರಿಸಲು ನೆರವು ನೀಡುತ್ತದೆ. ಅಲೋವೆರಾದ ತಾಜಾ ಪೇಸ್ಟ್ ಸಿದ್ಧಪಡಿಸಿಕೊಂಡು ಕತ್ತಿಗೆ ಹಚ್ಚಿ. ೧೫ ನಿಮಿಷಗಳ ಬಳಿಕ ತೊಳೆಯಬೇಕು.
೫. ಅಲ್ಮೋಂಡ್ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ. ಬಳಿಕ ಅದನ್ನು ಕತ್ತಿಗೆ ಹಚ್ಚಿ ಮಸಾಜ್ ಮಾಡಬೇಕು. ಇದು ಕತ್ತು ಬಿಳಿಯಾಗುವುದರ ಜೊತೆಗೆ ರಕ್ತ ಸಂಚಾರ ಸುಧಾರಣೆಯಾಗಲು ಇದು ನೆರವು ನೀಡುತ್ತದೆ.
೬.ಹಾಲನ್ನು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯ ಜೊತೆಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕತ್ತಿಗೆ ಹಚ್ಚಿ ಒಣಗಿದ ಬಳಿಕ ಕತ್ತು ತೊಳೆದುಕೊಳ್ಳಿ. ಇದನ್ನು ಪ್ರತಿ ವಾರ ಮಾಡಿದರೆ ಸುಂದರ, ನೈಸರ್ಗಿಕ ಬಣ್ಣದ ಕತ್ತು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

ಬಾಳೆಹಣ್ಣಿನ ಮಾಸ್ಕ್

ನಿಮ್ಮ ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣ ತ್ವಚೆಯಾಗಿದ್ದರೆ, ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಸ್ವಲ್ಪ ಕೆನೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಸ್ವಚ್ಛ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದಜು ನಿಮ್ಮ ಮುಖವನ್ನು ತುಂಬ ನಯವಾಗಿಸುತ್ತದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದ ಮಾಸ್ಕ್.
ಮೊಟ್ಟೆಯ ಬಿಳಿಲೋಳೆಯ ಮಾಸ್ಕ್
ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ, ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ನಿಮ್ಮ ಚರ್ಮರಂಧ್ರಗಳನ್ನು ಟೈಟ್ ಮಾಡಿಸುತ್ತದೆ. ಇದು ನಿಮ್ಮನ್ನು ಇನ್ನು ಆರೋಗ್ಯಯುತವಾಗಿ ಕಂಗೊಳಿಸುವAತೆ ಮಾಡುತ್ತದೆ.
ಹಾಲಿನ ಮಾಸ್ಕ್
ಹಾಲಿನ ಕೆನೆ, ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಕಚೇರಿ ಕೆಲಸದಿಂದ ಸುಸ್ತಾಗಿರುವ ಮುಖದ ಚರ್ಮಕ್ಕಿದು ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕಿ ನಯವಾದ ಮುಖದ ಚರ್ಮ ನೀಡುತ್ತದೆ. ೧೦. ೧೫ ನಿಮಿಷದ ನಂತರ ಹಚ್ಚಿದ ಪ್ಯಾಕ್ ತೊಳೆಯಬಹುದು.
ಬೆಣ್ಣೆಹಣ್ಣಿನ ಮಾಸ್ಕ್
ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯನ್ನು ತಡೆಯಲು ಇದು ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್, ಪೋಷಣೆಯನ್ನು ನೀಡುವುದರಿಂದ ಇದು ಹೆಚ್ಚು ಒಣಗುವ ಒಡೆಯುವ ಚರ್ಮದವರಿಗೆ ಅತ್ಯುತ್ತಮ.
ಜೇನಿನ ಮಾಸ್ಕ್
ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. (ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳೆಯಿರಿ.
ಟೊಮ್ಯಾಟೋ-ಮೊಸರಿನ ಪ್ಯಾಕ್
ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. ೧೫ ನಿಮಿಷ ಬಿಟ್ಟು ತೊಳೆಯಿರಿ.

ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್
ಬಿಸಿಲಿನ ಝಳಕ್ಕೆ ಮುಖ ಕೆಂಪಗಾಗಿ ಬಿಳಿಚಿಕೊಂಡು ಸನ್‌ಬರ್ನ್ ಆಗುತ್ತದೆ. ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಮೇಲಾದ ಸನ್ ಬರ್ನ್ ಹೋಗೋತ್ತದೆ.
ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಅದು ಮುಖದಲ್ಲಿನ ಹೆಚ್ಚಿನ ಉಷ್ಣತೆಯನ್ನು ಹೀರಿ ಸನ್‌ಬರ್ನ್ ಮಾಯವಾಗಿಸುತ್ತದೆ.
ಸೌತೇಕಾಯಿಯ ಹೋಳನ್ನು ಮುಖಕ್ಕೆ ಉಜ್ಜುತ್ತಾ ಇದ್ದರೆ ಸನ್‌ಬರ್ನ್ ಕಡಿಮೆಯಾಗುತ್ತದೆ.
ಆಲೂಗಡ್ಡೆಯನ್ನು ತುರಿದು ಮುಖಕ್ಕೆ ಹಚ್ಚಿದರೂ ಅದು ಮುಖದ ಉಷ್ಣವನ್ನು ತಂಪಾಗಿಸುತ್ತದೆ.

ಪ್ರಾರಂಭಿಕ ಸ್ಥಿತಿ

ಅಭ್ಯಾಸ ೪ : ಗೂಲ್ಫ್ ಘೂರ್ಣನ್ (ಕಾಲಿನ ಹರಡನ್ನು ವಕ್ರವಾಗಿ ತಿರುಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ.
ಬಲಗಾಲನ್ನು ಮಡಿಸಿ, ಪಾದವನ್ನು ಎಡಪೃಷ್ಠದತ್ತ ತನ್ನಿ.
ಬಲ ಮೊಣಕಾಲನ್ನು ಹೊರಗಿಡಿಸಿ ಮತ್ತು ಬಲಪಾದವನ್ನು ಎಡತೊಡೆಯ ಮೇಲೆ ಇಡಿ.
ತೊಡೆಯ ಮೇಲೆ ಪಾದದ ಸ್ಥಾನವು ಪಾದದ ಕೀಲನ್ನು ತಿರುಗಿಸಲು ಅನುಕೂಲವಾಗುವಂತೆ ಇರಲಿ.
ಬಲಗೈಯಿಂದ ಬಲಪಾದದ ಹರಡನ್ನು, ಹರಡಿಗೆ ಆಧಾರವಾಗಿರುವಂತೆ ಹಿಡಿದುಕೊಳ್ಳಿ.
ಎಡಗೈಯಿಂದ ಬಲಪಾದದ ಬೆರಳುಗಳನ್ನು ಹಿಡಿದುಕೊಳ್ಳಿ.
ಎಡಗೈ ಸಹಾಯದಿಂದ ಬಲಪಾದವನ್ನು ಪ್ರದಕ್ಷಿಣಕ್ರಮದಲ್ಲಿ ೧೦ ಬಾರಿ ತಿರುಗಿಸಿ. ಆನಂತರ ಅಪ್ರದಕ್ಷಿಣ ದಿಕ್ಕಿಗೆ ೧೦ ಬಾರಿ ತಿರುಗಿಸಿ.
ಇದೇ ರೀತಿಯಲ್ಲಿ ಎಡಪಾದವನ್ನು ಬಲ ತೊಡೆಯ ಮೇಲಿಟ್ಟು ಮಾಡಿ.
ಉಸಿರಾಟ : ಪಾದವು ಮೇಲ್ಮುಖವಾಗಿ ಬರುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಪಾದ ಕೆಳಮುಖವಾದಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ತಿರುಗಿಸುವಿಕೆ ಮತ್ತು ಮನಸ್ಸಿನಲ್ಲಿ ಎಣಿಕೆಯ ಕಡೆಗೆ
ಪ್ರಯೋಜನಗಳು : ಪಾದಗಳು ಮತ್ತು ಕಣಕಾಲಿನ ಹಿಂಭಾಗದ ಆಸನಗಳಿಂದಾಗಿ ಸ್ಥಗಿತವಾಗಿರುವ ದುಗ್ಧರಸ ಮತ್ತು ಮಲಿನ ರಕ್ತನಾಳಗಳಲ್ಲಿ ಸ್ಥಗಿತಗೊಂಡ ರಕ್ತವು ಸರಾಗವಾಗಿ ಹರಿಯುವಂತಾಗುತ್ತದೆ. ಕಾಲುಗಳ ನಿಶ್ಯಕ್ತಿ ಮತ್ತು ಸ್ನಾಯು ಸಂಕೋಚನಗಳು ನಿವಾರಣೆಯಾಗುತ್ತವೆ. ಖಾಯಿಲೆಯಿಂದ ಹಾಸಿಗೆಹಿಡಿದವರ, ಶಸ್ತçಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವವರ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಸಹ ತಡೆಯುತ್ತದೆ.
ಅಭ್ಯಾಸ ೫ : ಜಾನುಫಲಕ ಆಕರ್ಷಣ್ (ಮೊಣಕಾಲು ಚಿಪ್ಪಿನ ಸಂಕುಚನ)
ಪ್ರಾರAಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ.
ಬಲಮೊಣಕಾಲಿನ ಚಿಪ್ಪನ್ನು ತೊಡೆಯ ಕಡೆಗಳೆದುಕೊಂಡು ಮೊಣಕಾಲಿನ ಸುತ್ತ ಇರುವ ಸ್ನಾಯುಗಳನ್ನು ಸಂಕುಚಿಸಿ.
ಮನಸ್ಸಿನಲ್ಲೇ ಎಣಿಸುತ್ತಾ ೩ ರಿಂದ ೫ ಸೆಕೆಂಡುಗಳವರೆಗೆ ಹಾಗೇ ಇರಿ.
ಮೊಣಕಾಲು ಚಿಪ್ಪನ್ನು ನಿಧಾನವಾಗಿ ಸಡಿಲಗೊಳಿಸಿ ಮೊದಲ ಸ್ಥಾನಕ್ಕೆ ತನ್ನಿ. ಹೀಗೆ ೫ ಬಾರಿ ಅಭ್ಯಾಸ ಮಾಡಿ. ಇದೇ ರೀತಿ ಎಡ ಮೊಣಕಾಲಿನ ಚಿಪ್ಪಿಗೂ ೫ ಬಾರಿ ಮಾಡಿ. ಅನಂತರ ಎರಡೂ ಮೊಣಕಾಲಿನ ಚಿಪ್ಪುಗಳಿಗೆ ಒಟ್ಟಿಗೆ ಈ ರೀತಿಯ ವ್ಯಾಯಾಮ ಮಾಡಿಸಿ.
ಉಸಿರಾಟ : ಸಂಕುಚಿಸುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ.
ಮೊಣಕಾಲು ಚಿಪ್ಪನ್ನು ಸಂಕುಚಿಸಿರುವಷ್ಟು ಸಮಯ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಮೊಣಕಾಲು ಸ್ನಾಯುಗಳನ್ನು ಸಡಿಲಗೊಳಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಹಾಗೂ ಸಂಕುಚಿಸುವುದರ ಕಡೆಗೆ.
ಜಾನು ನಮನ್

ಅಭ್ಯಾಸ ೬ : ಜಾನುನಮನ್ (ಮೊಣಕಾಲನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಬಲಮೊಣಕಾಲನ್ನು ಮಡಿಸುತ್ತಾ ಬಲತೊಡೆಯ ಒಳಭಾಗವನ್ನು ಕೈಗಳಿಂದ ಬಿಗಿಯಾಗಿ ಹಿಡಿದುಕೊಳ್ಳಿ. ಮೊಣಕಾಲ ಚಿಪ್ಪನ್ನು ಎಳೆದುಕೊಳ್ಳುತ್ತಾ ಬಲಗಾಲನ್ನು ನೇರವಾಗಿ ಮಾಡಿ. ಅಂಗೈಗಳು ತೊಡೆಯ ಕೆಳಗಿರಲಿ ಆದರೆ ಕೈಗಳು ನೇರವಾಗಿರಲಿ. ಹಿಮ್ಮಡಿ ಮತ್ತು ಕಾಲಿನ ಬೆರಳು ನೆಲಕ್ಕೆ ತಾಗದಿರಲಿ. ತೊಡೆಯು ಎದೆಯ ಸಮೀಪಕ್ಕೆ ಬರುವಂತೆ ಮತ್ತು ಹಿಮ್ಮಡಿಯು ಪೃಷ್ಠದ ಬಳಿ ಬರುವ ಹಾಗೆ ಬಲಗಾಲನ್ನು ಮಡಿಸಿ. ತಲೆ ಮತ್ತು ಬೆನ್ನು ನೇರವಾಗಿರಲಿ.
ಇದು ೧ ಸುತ್ತು.
ಹೀಗೆ ಬಲಗಾಲಿಗೆ ೧೦ ಸುತ್ತು, ಎಡಗಾಲಿಗೆ ೧೦ ಸುತ್ತು ಅಭ್ಯಾಸ ಮಾಡಿ.
ಉಸಿರಾಟ : ಕಾಲನ್ನು ನೇರವಾಗಿಸಿದಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಕಾಲನ್ನು ಬಾಗಿಸುವಾಗ ಉಸಿರನ್ನು ಹೊರಕ್ಕೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ, ತೊಡೆಯ ಸ್ನಾಯುಗಳಲ್ಲಿ ಚಾಚಿಕೊಂಡ ಅನುಭವ ಹಾಗೂ ಚಲನೆಯ ಮೇಳವಿಸುವಿಕೆಯ ಕಡೆಗೆ.
ಅಭ್ಯಾಸ ಸೂಚನೆ : ಮೊಣಕಾಲನ್ನು ಮಡಿಸುವಾಗ, ಮೊಣಕಾಲ ಕೆಳಭಾಗವನ್ನು ಸಹ ಕೈಗಳಿಂದ ಹಿಡಿದಿರಬಹುದು. ಹೀಗೆ ಮಾಡಿದಾಗ ತೊಡೆಯು ಕೆಳಹೊಟ್ಟೆಗೆ ಒತ್ತಿಕೊಂಡು ಅಲ್ಲಿನ ವಾಯುವು ಹೊರಬರಲು ಸಹಾಯವಾಗುತ್ತದೆ.
ಅಭ್ಯಾಸ ೭ : ದ್ವಿಜಾನು ನಮನ್ (ಎರಡೂ ಮೊಣಕಾಲನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಪೃಷ್ಠದ ಸ್ವಲ್ಪ ಮುಂಭಾಗದಲ್ಲಿ ಅಕ್ಕ ಪಕ್ಕಕ್ಕೆ ಎರಡೂ ಅಂಗೈಗಳನ್ನು ಊರಿ.
ಪಾದಗಳು ಪೃಷ್ಠದ ಮುಂಭಾಗದಲ್ಲಿ ನೆಲಕ್ಕೆ ತಾಗುವ ಹಾಗೆ ಎರಡೂ ಮೊಣಕಾಲನ್ನು ಒಟ್ಟಿಗೇ ಬಾಗಿಸಿ.
ಕಾಲುಗಳನ್ನು ನೇರವಾಗಿ ಮಾಡಿ ಮತ್ತು ಪಾದಗಳನ್ನು ನೆಲದಿಂದ ೮ ಸೆಂ.ಮೀ. ನಷ್ಟು ಮೇಲಕ್ಕೆತ್ತಿ. ಇದು ಅಂತಿಮ ಸ್ಥಿತಿ.
ಕಾಲಿನ ಬೆರಳು ಮುಂದಕ್ಕೆ ಚಾಚಿರಲಿ. ಹಸ್ತಗಳ ಮತ್ತು ತೋಳುಗಳ ಆಧಾರದಿಂದ ದೇಹವನ್ನು ಸಮತೋಲನ ಸ್ಥಿತಿಯಲ್ಲಿ ಇಡಿ.
ತಲೆ ಮತ್ತು ಬೆನ್ನು ನೇರವಾಗಿರಲಿ.
ಈ ಸ್ಥಿತಿಯಲ್ಲಿ ೧ ಸೆಕೆಂಡ್ ಕಾಲ ಇರಿ. ಕಾಲುಗಳನ್ನು ಮಡಿಚಿ ಪ್ರಾರಂಭಿಕ ಸ್ಥಿತಿಗೆ ತನ್ನಿ. ಆದರೆ ಹಿಮ್ಮಡಿಗಳು ನೆಲಕ್ಕೆ ತಾಗದೆ ಸ್ವಲ್ಪ ಮೇಲಕ್ಕಿರಲಿ.
ಕಾಲಿನ ಬೆರಳು ಕಣಕಾಲಕಡೆಗೆ ಬಾಗಿರಲಿ. ಇದು ೧ ಸುತ್ತು. ಹೀಗೆ ೫ ರಿಂದ ೧೦ ಬಾರಿ ಅಭ್ಯಾಸ ಮಾಡಿ. ಇಡೀ ಅಭ್ಯಾಸಕಾಲದಲ್ಲಿ ಹಿಮ್ಮಡಿಗಳು ನೆಲಕ್ಕೆ ತಾಗದಂತೆ ನೋಡಿಕೊಳ್ಳಿ.
ಉಸಿರಾಟ : ಕಾಲುಗಳನ್ನು ಚಾಚುವಾಗ ಉಸಿರನ್ನು ಒಳಗೆಳೆದುಕೊಳ್ಳಿ. ಕಾಲುಗಳನ್ನು ಬಾಗಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಮತ್ತು ಚಲನೆ ಹಾಗೂ ಸಮತೋಲನದ ಕಡೆಗೆ.
ವಿಧಿ ನಿಷೇಧಗಳು : ಇದು ಪ್ರಯಾಸದಾಯಕ ಅಭ್ಯಾಸ. ಹೊಟ್ಟೆಯ ಸ್ನಾಯುಗಳು ದುರ್ಬಲವಾಗಿದ್ದವರು, ಬೆನ್ನಿಗೆ ಸಂಬAಧಿಸಿದ ತೊಂದರೆಗಳಿರುವವರು, ರಕ್ತದ ಒತ್ತಡ ಹಾಗೂ ಹೃದಯದ ಸಮಸ್ಯೆ ಇದ್ದವರು ಈ ಅಭ್ಯಾಸವನ್ನು ಮಾಡಕೂಡದು.
ಅಭ್ಯಾಸ ಸೂಚನೆ : ಈ ಅಭ್ಯಾಸ ಮಾಡುವಾಗ ಜಾನು ನಮನ್ ಅಭ್ಯಾಸದಲ್ಲಿ ಮಾಡಿದಂತೆ ತೊಡೆಯ ಕೆಳಭಾಗವನ್ನು ಕೈಗಳಿಂದ ಹಿಡಿದುಕೊಳ್ಳಬಹುದು. ಈ ಆಸನವು ಬ್ರಹ್ಮಚರ್ಯಾಸನಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಒದಗಿಸುತ್ತದೆ.
ಜಾನು ಚಕ್ರ

 

ಅಭ್ಯಾಸ ೮ : ಜಾನು ಚಕ್ರ (ಮೊಣಕಾಲನ್ನು ವಕ್ರವಾಗಿ ತಿರುಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಅಭ್ಯಾಸ ೬ ರಲ್ಲಿ ಹೇಳಿರುವ ರೀತಿಯಲ್ಲಿ ಬಲ ಮೊಣಕಾಲನ್ನು ಮಡಿಸಿ ಬಲತೊಡೆಯ ಕೆಳಗೆ ಕೈಗಳಿಂದ ಅದುಮಿಹಿಡಿದುಕೊಳ್ಳಿ.
ಕೈಬೆರಳುಗಳು ಪರಸ್ಪರ ಹೆಣೆದಿರಲಿ. ಅಥವಾ ಎರಡೂ ಮೊಣಕೈ ಹಿಡಿದುಕೊಂಡು ತೋಳುಗಳಿಂದ ಅದುಮಿ.
ಬಲಪಾದವನ್ನು ನೆಲದಿಂದ ಮೇಲಕ್ಕೆತ್ತಿ.
ಮೊಣಕಾಲಿನಿಂದ ಕೆಳಭಾಗವನ್ನು ದೊಡ್ಡ ವರ್ತುಲಾಕಾರವಾಗಿ ತಿರುಗಿಸಿ. ಹೀಗೆ ಚಲಿಸುತ್ತ ಮೇಲಕ್ಕೆ ಬಂದಾಗ ಕಾಲನ್ನು ನೇರವಾಗಿ ಚಾಚಲು ಪ್ರಯತ್ನಿಸಿ. ಈ ಅಭ್ಯಾಸದಲ್ಲಿ ಮೊಣಕಾಲಿನಿಂದ ಮೇಲಿನ ಭಾಗ ಮತ್ತು ಮೈಭಾಗ ನಿಶ್ಚಲವಾಗಿರಲಿ.
ಪ್ರದಕ್ಷಿಣ ಕ್ರಮದಲ್ಲಿ ೧೦ ಬಾರಿ ಮತ್ತು ವಿರುದ್ಧ ದಿಕ್ಕಿನಲ್ಲಿ ೧೦ ಬಾರಿ ಈ ಅಭ್ಯಾಸವನ್ನು ಮಾಡಿ. ಎಡಗಾಲಿಗೂ ಇದೇ ಕ್ರಮ ಅನುಸರಿಸಿ.
ಉಸಿರಾಟ : ಕಾಲು ಮೇಲಕ್ಕೆ ಚಲಿಸಿದಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಕಾಲು ಕೆಳಕ್ಕೆ ಬರುವಾಗ ಉಸಿರನ್ನು ಹೊರಹಾಕಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಮತ್ತು ನಿಖರವಾಗಿ ವೃತ್ತಾಕಾರವಾಗಿ ತಿರುಗುವುದರ ಕಡೆಗೆ.
ಪ್ರಯೋಜನಗಳು : ಮೊಣಕಾಲಿನ ಕೀಲು ಇಡೀ ಶರೀರದ ಭಾಗವನ್ನು ಹೊರುವುದರಿಂದ ಮತ್ತು ಅದಕ್ಕೆ ಬಲಿಷ್ಠ ಸ್ನಾಯುಗಳ ಬೆಂಬಲ ಇಲ್ಲದಿರುವುದರಿಂದ ಅದು ಗಾಯಗಳಿಗೆ, ಉಳುಕಿಗೆ ಮತ್ತು ಎಲುಬಿನ ಸಂಧಿವಾತಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಎಲ್ಲ ರೀತಿಯ ಮೊಣಕಾಲಿನ ಆಸನಗಳು ಮೊಣಕಾಲು ಕೀಲಿನ ಚತುರಸ್ರ ಸ್ನಾಯುಗಳನ್ನು ಹಾಗೂ ಅಸ್ಥಿರಜ್ಜುಗಳನ್ನು ಬಲಪಡಿಸುತ್ತವೆ. ಈ ಆಸನಗಳು ಮೊಣಕಾಲಿನ ಕೀಲನ್ನು ಪುನರುಜ್ಜೀವಿಸಿ ಗುಣಕಾರಿ ಅಂಶಗಳನ್ನು ಕ್ರಿಯಾಶೀಲವಾಗಿಸುತ್ತವೆ.
ಅರ್ಧ ತಿತಲಿ ಆಸನ

 

ಅಭ್ಯಾಸ ೯ : ಅರ್ಧ ತಿತಲಿ ಆಸನ (ಅರ್ಧ ಚಿಟ್ಟೆಯಾಸನ)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಬಲಗಾಲನ್ನು ಮಡಿಸಿ ಬಲಪಾದವನ್ನು ಎಡತೊಡೆಯ ಮೇಲೆ ಸಾಧ್ಯವಿದ್ದಷ್ಟೂ ಮೇಲಕ್ಕೆ ತಂದಿಡಿ. ಬಲಗೈಯನ್ನು ಬಾಗಿಸಿದ ಬಲಮೊಣಚಿಪ್ಪಿನ ಮೇಲಿಡಿ. ಬಲಗಾಲಿನ ಬೆರಳುಗಳನ್ನು ಎಡಗೈನಿಂದ ಹಿಡಿದುಕೊಳ್ಳಿ. ಇದು ಆಸನದ ಪ್ರಾರಂಭದ ಭಂಗಿ.
ಹAತ ೧ : ಉಸಿರಾಟದೊಂದಿಗೆ ಮೇಳವಿಸುವುದು
ಉಸಿರನ್ನು ತೆಗೆದುಕೊಳ್ಳುತ್ತಾ ಬಲಮೊಣಕಾಲನ್ನು ನಿಧಾನವಾಗಿ ಎದೆಯ ಕಡೆಗೆ ತನ್ನಿ. ಉಸಿರನ್ನು ಹೊರಹಾಕುತ್ತಾ ಮೊಣಕಾಲನ್ನು ಕೆಳಮುಖವಾಗಿ ತರುತ್ತಾ ಅದನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ.
ಮೈಭಾಗವು ನಿಶ್ಚಲವಾಗಿರಲಿ. ಈ ಅಭ್ಯಾಸದಲ್ಲಿ ಯಾವುದೇ ಬಲಪ್ರಯೋಗ ಬೇಡ. ಕಾಲಿನ ಸ್ನಾಯುಗಳು ತಟಸ್ಥವಾಗಿರಲಿ ಮತ್ತು ಮೊಣಕಾಲಿನ ಚಲನೆಯನ್ನು ಬಲಗೈನ ಪ್ರಯತ್ನದಿಂದ ಮಾತ್ರವೇ ಸಾಧಿಸಿ.
ಈ ಅಭ್ಯಾಸವನ್ನು ನಿಧಾನವಾಗಿ ಮೇಲ್ಮುಖವಾಗಿ ೧೦ ಬಾರಿ ಕೆಳಮುಖವಾಗಿ ೧೦ ಬಾರಿ ಮಾಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ, ತೊಡೆಯ ಕೀಲು ಹಾಗೂ ತೊಡೆಯ ಒಳ ಸ್ನಾಯುಗಳ ಚಲನೆಯ ಕಡೆಗೆ.
ಹಂತ ೨ : ಉಸಿರಿನೊಂದಿಗೆ ಸಮನ್ವಯಗೊಳಿಸದೆ
ಬಲಗಾಲು, ಎಡತೊಡೆಯಮೇಲೆ ಇರುವ ಸ್ಥಿತಿಯಲ್ಲೇ ಇರಲಿ. ಬಲಗಾಲಿನ ಸ್ನಾಯುಗಳನ್ನು ಸಾಧ್ಯವಿರುವಷ್ಟೂ ಸಡಿಲ ಬಿಡಿ.
ಬಲಗೈಯಿಂದ ಬಲಮೊಣಕಾಲನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ. ಪ್ರಯಾಸ ಬೇಡ.
ಮೊಣಕಾಲು ತನ್ನಷ್ಟಕ್ಕೆ ತಾನೇ ಮೇಲೆ ಬರಲು ಬಿಡಿ. ಬಲತೋಳಿನ ಸಹಾಯದಿಂದಲೇ ಈ ಚಲನೆ ಸಾಧ್ಯವಾಗಬೇಕು. ಮೊಣಕಾಲು ವೇಗವಾಗಿ ಮೇಲಕ್ಕೂ ಕೆಳಕ್ಕೂ ಚಲಿಸಲಿ. ೩೦ ಸಲ ಹೀಗೆ ಮಾಡಿ. ಅಭ್ಯಾಸಕ್ಕೆ ಸಂಬAಧಪಡದAತೆ ಉಸಿರಾಟ ಸಹಜವಾಗಿರಲಿ. ಹಂತ ೧ ಮತ್ತು ೨ ಹಾಗೂ ಕಾಲನ್ನು ಬಿಡಿಸಿಕೊಳ್ಳುವ ಕ್ರಮ (ಕೆಳಗಿನ ಅಭ್ಯಾಸ ಸೂಚನೆ ನೋಡಿ) ವನ್ನು ಎಡಗಾಲಿನಿಂದ ಪುನರಾವರ್ತಿಸಿ.
ಗಮನ : ಮನಸ್ಸಿನಲ್ಲಿ ಎಣಿಕೆ, ತೊಡೆಯ ಕೀಲು ಹಾಗೂ ತೊಡೆಯ ಒಳಸ್ನಾಯುಗಳ ಸಡಿಲುವಿಕೆಯ ಕಡೆಗೆ.
ಪ್ರಯೋಜನಗಳು : ಈ ಆಸನವು ಮೊಣಕಾಲು ಮತ್ತು ತೊಡೆಯ ಸಂದುಗಳನ್ನು ಸಡಿಲಗೊಳಿಸಿ ಧ್ಯಾನಕ್ಕೆ ಸಂಬAಧಿಸಿದ ಭಂಗಿಗಳಿಗೆ ಪೂರ್ವಭಾವಿ ಆಸನವಾಗಿ ಬಹಳ ಸಹಕಾರಿಯಾಗಿದೆ. ಚಕ್ಕಂಬಕ್ಕಳ ಸ್ಥಿತಿಯಲ್ಲಿ ನಿರಾಯಾಸವಾಗಿ ಕೂರಲು ಸಾಧ್ಯವಿಲ್ಲದವರು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಅರ್ಧ ತಿತಲಿ ಆಸನವನ್ನು ಮಾಡುವುದು ಬಹು ಉತ್ತಮ.
ಅಭ್ಯಾಸ ಸೂಚನೆ : ಮಡಿಸಿದ ಕಾಲನ್ನು ಬಿಡಿಸುವುದಕ್ಕಾಗಿ ಅಭ್ಯಾಸದ ಎರಡನೇ ಹಂತ ಮುಗಿದನಂತರ ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ಕಾಲನ್ನು ನೇರವಾಗಿ ಚಾಚಿ.
ಅದನ್ನು ಒಂದು ಸಲ ಬಾಗಿಸಿ, ಹಿಮ್ಮಡಿಯನ್ನು ಪೃಷ್ಠದ ಬಳಿ ತನ್ನಿ. ಕಾಲನ್ನು ನೇರ ಮಾಡಿ. ಹೀಗೆ ಮಾಡುವುದರಿಂದ ಮೊಣಕಾಲಿನ ಕೀಲು ಸ್ವಸ್ಥಾನದಲ್ಲಿ ಸರಿಯಾಗಿ ಕೂರುತ್ತದೆ.

ಪ್ರಾರಂಭಿಕ ಸ್ಥಿತಿ (ಮೂಲ ಸ್ಥಿತಿ)

ಪವನಮುಕ್ತಾಸನ ಭಾಗ ೧ ರ ಎಲ್ಲ ಅಭ್ಯಾಸಗಳನ್ನು ನೆಲದ ಮೇಲೆ ಮೂಲ ಸ್ಥಿತಿಯಲ್ಲಿ ಕುಳಿತುಕೊಂಡೇ ಮಾಡಲಾಗುತ್ತದೆ. (ಚಿತ್ರವನ್ನು ನೋಡಿ) ಈ ಸರಣಿಯ ಆಸನಗಳನ್ನು ಮಾಡುವಾಗ ದೇಹವನ್ನು ಸಡಿಲಿಸಬೇಕು. ಯಾವ ಆಸನ ಮಾಡಲಾಗುತ್ತಿದೆಯೋ ಅದಕ್ಕೆ ಸಂಬAಧಪಟ್ಟ ಸ್ನಾಯುಗಳನ್ನು ಮಾತ್ರ ಉಪಯೋಗಿಸಬೇಕು. ಮೇಲೆ ತಿಳಿಸಿರುವ ಹಾಗೆ ಆಸನ ಮಾಡುತ್ತಿರುವಾಗ ಅದರ ಮೇಲೇ ಸಂಪೂರ್ಣ ಅರಿವು ಹೊಂದಿರಬೇಕು. ಕಣ್ಣುಗಳನ್ನು ಮುಚ್ಚಿಕೊಂಡರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಯಾಂತ್ರಿಕವಾಗಿ ಮಾಡಬೇಡಿ. ಅಭ್ಯಾಸದಾದ್ಯಂತವೂ ಜಾಗೃತವಾಗಿರಿ.
ಪ್ರಾರಂಭಿಕ ಸ್ಥಿತಿ (ಮೂಲ ಸ್ಥಿತಿ)
ಎರಡೂ ಕಾಲುಗಳನ್ನು ನೀಳವಾಗಿ ಚಾಚಿ ಕುಳಿತುಕೊಳ್ಳಿ.
ಪೃಷ್ಠಕ್ಕೆ ಸ್ವಲ್ಪ ಹಿಂಭಾಗದಲ್ಲಿ ಎರಡೂ ಅಂಗೈಗಳನ್ನು ನೆಲಕ್ಕೆ ಊರಿ.
ಬೆನ್ನು, ಕುತ್ತಿಗೆ ಮತ್ತು ತಲೆ ನೇರವಾಗಿರಲಿ.
ಮೊಣಕೈಗಳು ನೇರವಾಗಿರಲಿ.
ಕೈಗಳ ಮೇಲೆ ಭಾರಬಿಟ್ಟು ಸ್ವಲ್ಪ ಹಿಂದಕ್ಕೆ ಬಾಗಿ.
ಕಣ್ಣುಗಳನ್ನು ಮುಚ್ಚಿ. ಈ ಸ್ಥಿತಿಯಲ್ಲಿ ಇಡೀ ದೇಹವನ್ನು ಸಡಿಲಬಿಟ್ಟು ಹಾಯಾಗಿರಿ.
ಪಾದಾಂಗುಲಿ ನಮನ್ ಮತ್ತು ಗೂಲ್ಫ್ ನಮನ್

ಅಭ್ಯಾಸ ೧ : ಪಾದಾಂಗುಲಿ ನಮನ್ (ಕಾಲ್ಬೆರಳನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿದ್ದುಕೊಂಡೇ ಎರಡೂ ಕಾಲುಗಳನ್ನು ನೇರವಾಗಿ ಚಾಚಿ. ಮತ್ತು ಪಾದಗಳ ಮಧ್ಯೆ ಸ್ವಲ್ಪ ಅಂತರವಿರಲಿ. ಹಿಮ್ಮಡಿಯ ಕೀಲಿನಿಂದ ಪ್ರಾರಂಭಿಸಿ ಎರಡೂ ಪಾದಗಳನ್ನು ಹಿಂದಕ್ಕೂ ಮುಂದಕ್ಕೂ ಬಾಗಿಸಿ. ಮುಂದಕ್ಕೆ ಬಾಗಿಸಿದಾಗ ಪಾದಗಳನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ. ಅದೇ ರೀತಿ ಪಾದಗಳನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಮೊಣಕಾಲುಗಳ ಕಡೆಗೆ ಬಾಗಿಸಿ. ಪ್ರತಿ ಅವಸ್ಥೆಯೂ ಕೆಲವು ಸೆಕೆಂಡುಗಳ ಕಾಲ ಇರಲಿ. ಹೀಗೆ ೧೦ ಸಲ ಮಾಡಿ.
ಉಸಿರಾಟ : ಕಾಲ್ಬೆರಳನ್ನು ಹಿಂದಕ್ಕೆ ಬಾಗಿಸುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಮುಂದಕ್ಕೆ ಬಾಗಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಹಾಗೂ ಚಲನೆಯಿಂದುAಟಾದ ಚಾಚುವಿಕೆಯ ಅನುಭವದ ಕಡೆಗೆ.
ಅಭ್ಯಾಸ ೨ : ಗೂಲ್ಫ್ ನಮನ್ (ಕಾಲಿನ ಹರಡನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿರಿ. ಪಾದಗಳ ಮಧ್ಯೆ ಸ್ವಲ್ಪ ಅಂತರವಿರಲಿ. ಹಿಮ್ಮಡಿಯ ಕೀಲಿನಿಂದ ಪ್ರಾರಂಭಿಸಿ ಎರಡೂ ಪಾದಗಳನ್ನು ಹಿಂದಕ್ಕೂ ಮುಂದಕ್ಕೂ ಬಾಗಿಸಿ. ಮುಂದಕ್ಕೆ ಬಾಗಿಸಿದಾಗ ಪಾದಗಳನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ. ಅದೇ ರೀತಿ ಪಾದಗಳನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಮೊಣಕಾಲುಗಳ ಕಡೆಗೆ ಬಾಗಿಸಿ. ಪ್ರತಿ ಅವಸ್ಥೆಯೂ ಕೆಲವು ಸೆಕೆಂಡುಗಳ ಕಾಲ ಇರಲಿ. ಹೀಗೆ ೧೦ ಸಲ ಮಾಡಿ.
ಉಸಿರಾಟ : ಪಾದಗಳನ್ನು ಹಿಂದಕ್ಕೆ ಬಾಗಿಸುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಮುಂದಕ್ಕೆ ಬಾಗುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಹಾಗೂ ಕಾಲಿನ ಹರಡನ್ನು ಎಷ್ಟು ಸಲ ಬಾಗಿಸಿದೆವು ಎಂಬುದರ ಕಡೆಗೆ. ಮತ್ತು ಪಾದಗಳು, ಕೀಲುಗಳು, ಮೀನಖಂಡ ಹಾಗೂ ಕಾಲಿನ ಸ್ನಾಯುಗಳ ಚಾಚುವಿಕೆಯತ್ತ ಗಮನವಿರಲಿ.

 

ಅಭ್ಯಾಸ ೩ : ಗೂಲ್ಫ್ ಚಕ್ರ (ಕಾಲಿನ ಹರಡನ್ನು ತಿರುಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತಿರಿ. ಕಾಲುಗಳನ್ನು ಸ್ಥಿತಿಯಲ್ಲಿ ಕುಳಿತಿರಿ. ಕಾಲುಗಳನ್ನು ನೇರವಾಗಿಟ್ಟುಕೊಂಡು ಸ್ವಲ್ಪ ಅಗಲಿಸಿ.
ಹಂತ ೧ : ಬಲ ಪಾದದ ಹರಡಿನಿಂದ ಆರಂಭಿಸಿ ಪಾದವನ್ನು ಪ್ರದಕ್ಷಿಣ ಕ್ರಮದಲ್ಲಿ ೧೦ ಬಾರಿ ವೃತ್ತಾಕಾರವಾಗಿ ತಿರುಗಿಸಿ. ಮತ್ತು ಅಪ್ರದಕ್ಷಿಣ ದಿಕ್ಕಿನಲ್ಲಿ ೧೦ ಬಾರಿ ತಿರುಗಿಸಿ.
ಎಡ ಪಾದಕ್ಕೂ ಇದೇ ಕ್ರಮವನ್ನು ಅನುಸರಿಸಿ.
ಹಂತ ೨ : ಈಗ ಪಾದಗಳು ಒಂದಕ್ಕೊAದು ಕೂಡಿರಲಿ.
ಎರಡೂ ಪಾದಗಳನ್ನು ನಿಧಾನವಾಗಿ ಪ್ರದಕ್ಷಿಣ ಕ್ರಮದಲ್ಲಿ ೧೦ ಬಾರಿ ತಿರುಗಿಸಿ. ಹೀಗೆ ಮಾಡುವಾಗ ಮೊಣಕಾಲುಗಳು ಚಲಿಸದಂತೆ ನೋಡಿಕೊಳ್ಳಿ. ಇದೇ ರೀತಿ ಅಪ್ರದಕ್ಷಿಣವಾಗಿಯೂ ೧೦ ಬಾರಿ ಮಾಡಿ.
ಹಂತ ೩ : ಪಾದಗಳ ಮಧ್ಯೆ ಅಂತರವಿರಲಿ.
ನಿಧಾನವಾಗಿ ಎರಡೂ ಪಾದಗಳನ್ನು ವೃತ್ತಾಕಾರವಾಗಿ ತಿರುಗಿಸಿ. ಆದರೆ ಪ್ರತಿ ಪಾದವೂ ವಿರುದ್ಧ ದಿಕ್ಕಿನಲ್ಲಿ ತಿರುಗಲಿ. ಎರಡೂ ಪಾದಗಳು ಒಳಮುಖವಾಗಿ ತಿರುಗಿದಾಗ ಕಾಲಿನ ಹೆಬ್ಬೆರಳುಗಳು ಪರಸ್ಪರ ಸ್ಪರ್ಶಿಸುತ್ತಿರಲಿ.
ಹೀಗೆ ಒಂದೊAದು ದಿಕ್ಕಿಗೆ ೧೦ ಬಾರಿಯಂತೆ ತಿರುಗಿಸಿ.
ಉಸಿರಾಟ : ಪಾದಗಳು ಮೇಲ್ಮುಖವಾಗಿ ಚಲಿಸುವಾಗ ಉಸಿರನ್ನು ಒಳಗೆಳೆದುಕೊಳ್ಳಿ. ಕೆಳಮುಖವಾಗಿ ಚಲಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ, ಪಾದವನ್ನು ತಿರುಗಿಸುವುದರ ಕಡೆಗೆ.
ಗೂಲ್ಫ್ ಘೂರ್ಣನ್

ಪವನಮುಕ್ತಾಸನ ಭಾಗ ೧ ಸಂಧಿವಾತ ನಿರೋಧ ಗುಂಪು

ಈ ಗುಂಪಿನ ಆಸನಗಳು ದೇಹದ ಸಂದು ಅಥವಾ ಕೀಲುಗಳನ್ನು ಸಡಿಲಗೊಳಿಸುವುದಕ್ಕೆ ಸಂಬAಧಿಸಿವೆ. ಸಂಧಿವಾತ, ವಾತರೋಗ, ರಕ್ತದ ಒತ್ತಡ, ಹೃದ್ರೋಗಗಳು ಮತ್ತು ಇತರೆ ಖಾಯಿಲೆಯವರಿಗೆ ಹಾಗೂ ಹೆಚ್ಚಿನ ದೈಹಿಕ ಶ್ರಮ ಕೂಡದೆಂದು ಹೇಳಲಾಗಿರುವ ವ್ಯಕ್ತಿಗಳಿಗೆ ಅತ್ಯುತ್ತಮವಾಗಿವೆ. ಈ ಆಸನಗಳು ಕೀಲುಗಳಲ್ಲಿ ಮತ್ತು ದೇಹದ ಬಾಹ್ಯ ಅಂಗಗಳಲ್ಲಿ ಚೈತನ್ಯದ ಪ್ರವಾಹಕ್ಕೆ ಇರುವ ಅಡೆತಡೆಗಳನ್ನು ಕಿತ್ತೆಸೆಯುವುದರ ಜೊತೆಗೆ ಪ್ರಾಣಮಯ ಹಾಗೂ ಮನೋಮಯ ಶರೀರಗಳ ಮೇಲೂ ಪರಿಣಾಮ ಬೀರುತ್ತವೆ.
ಗಮನ : ಈ ಅಭ್ಯಾಸಗಳನ್ನು ಮೂರು ವಿಧಾನಗಳಲ್ಲಿ ಮಾಡಬಹುದು :
೧. ವಾಸ್ತವಿಕ ದೇಹ ಚಲನೆಯ ಮೇಲೆ ಗಮನವಿಟ್ಟು ಮಾಡಬಹುದು. ದೇಹದ ವಿವಿಧ ಅಂಗಾAಗಳ ಪರಸ್ಪರಕ್ರಿಯೆ ಅಂದರೆಸ ಎಲುಬು, ಕೀಲು, ಅಸ್ತಿರಜ್ಜು, ಸ್ನಾಯು ಇತ್ಯಾದಿಗಳ ಮೇಲೆ ಗಮನವಿರಿಸಬಹುದು. ದೇಹದ ಇತರ ಅಂಗಾAಗಗಳಿಗೆ ಸಂಬAಧಿಸಿದAತೆ ಗಮನವಿರಿಸಬಹುದು; ಪ್ರತಿಯೊಂದೂ ಪೂರ್ಣಸುತ್ತು ಮುಗಿಯುವ ತನಕ ಮನಸ್ಸಿನಲ್ಲಿ ಎಣಿಕೆ ಮಾಡಬೇಕು. ಜೊತೆಗೆ ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳ ಮೇಲೆ ಗಮನವಿರಿಸಬೇಕು. ಈ ರೀತಿಯ ಅಭ್ಯಾಸವು ಶಾಂತಿ, ಸಮಸ್ಥಿತಿ ಹಾಗೂ ಏಕಾಗ್ರತೆಯನ್ನುಂಟುಮಾಡಿ ದೈಹಿಕ ಶರೀರವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.
೨. ಉಸಿರಾಟದ ಬಗ್ಗೆ ಗಮನ ಹಾಗೂ ಅದನ್ನು ಮೇಳೈಸಿಕೊಳ್ಳುವ ವಿಧಾನ. ಮೇಲೆ ತಿಳಿದಂತೆ ದೈಹಿಕ ಚಲನೆಯ ಮೇಲೆ ಗಮನವಿರಿಸುವ ಜೊತೆಗೆ, ಒಂದೊAದು ಚಲನೆಯೊಂದಿಗೂ ಉಸಿರಾಟವನ್ನು ಮೇಳೈಸಬೇಕು. ಚಲನೆಗಳು ನಿಧಾನವಾಗುತ್ತಾ ಆ ಮೂಲಕ ಮಿದುಳಿನ ತರಂಗಗಳನ್ನು ನಿಧಾನಗೊಳಿಸುತ್ತವೆ. ಇದು ವಿಶ್ರಾಮಸ್ಥಿತಿ ಹಾಗೂ ಗಮನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಅಭ್ಯಾಸ ವಿಧಾನವು ದೈಹಿಕ ಹಾಗೂ ಪ್ರಾಣಮಯ ನೆಲೆಗಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ ಮತ್ತು ದೇಹವನ್ನು ಸಾಮರಸ್ಯಗೊಳಿಸಿ ಪುನಶ್ಚೇತನಗೊಳಿಸುವುದಕ್ಕೆ ಮತ್ತು ಆಂತರಿಕ ಅವಯವಗಳ ಕಾರ್ಯವನ್ನು ಸುಧಾರಿಸುವುದಕ್ಕೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಪ್ರತಿಯೊಂದು ಆಸನದ ಸಂದರ್ಭದಲ್ಲಿ ವಿವರಿಸಿರುವ ಪ್ರಕಾರ ಉಸಿರಾಟವನ್ನು ಅಭ್ಯಾಸ ಮಾಡಬೇಕು. ಇದಲ್ಲದೆ ಉಜ್ಜಾಯೀ ಪ್ರಾಣಾಯಾಮ (ಪ್ರಾಣಾಯಾಮ ಅಭ್ಯಾಸದ ಭಾಗವನ್ನು ನೋಡಿ)ವನ್ನು ಉಸಿರಾಟದ ವಿಧಾನವಾಗಿ ಅಭ್ಯಾಸಮಾಡಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಇದು, ನಾಡಿಗಳಲ್ಲಿ ಪ್ರವಹಿಸುತ್ತಿರುವ ಪ್ರಾಣಮಯ ಚೈತನ್ಯದ ಮೇಲೆ ಪರಿಣಾಮಕಾರಿಯಾದ ಪ್ರಚೋದನೆ ಉಂಟುಮಾಡುತ್ತದೆ ಹಾಗೂ ಸಮತೋಲನವನ್ನು ಸಾಧಿಸುತ್ತದೆ.
೩. ದೇಹದಲ್ಲಿ ಪ್ರಾಣವು ಚಲಿಸುತ್ತಿರುವುದರ ಮೇಲೆ ಗಮನವಿರಿಸುವುದು ಇನ್ನೊಂದು ವಿಧಾನ. ದೇಹದಲ್ಲಿ ಉಂಟಾಗುವ ಕ್ಷಣ ಕ್ಷಣ ಶಬ್ಧದ (ಣiಟಿgಟiಟಿg) ಸಂವೇದನೆಯ ಮೂಲಕ ಪ್ರಾಣದ ಸಂಚಲನೆಯನ್ನು ಅನುಭವಕ್ಕೆ ತಂದುಕೊಳ್ಳಬಹುದು. ಅಭ್ಯಾಸದಲ್ಲಿ ಪಳಗಿದ ಹಾಗೆ ಇದರ ಅರಿವು ಬೆಳೆಯುತ್ತದೆ.
ನಿಯತಕಾಲಿಕ ವಿಶ್ರಾಂತಿ : ಪ್ರತಿ ಎರಡು ಮೂರು ಚಲನೆಗಳ ನಂತರ ಪ್ರಾರಂಭಿಕ ಸ್ಥಿತಿಯಲ್ಲಿ ಅಲುಗಾಡದೆ ಕುಳಿತುಕೊಳ್ಳಿ. ಕಣ್ಣನ್ನು ಮುಚ್ಚಿ. ಸಹಜ ಉಸಿರಾಟದ ಮೇಲೆ, ಆಗಷ್ಟೇ ಚಲಿಸಿದ ದೇಹ ಭಾಗ ಅಥವಾ ಭಾಗಗಳ ಮೇಲೆ ಮತ್ತು ಮನಸ್ಸಿನಲ್ಲಿ ಉಂಟಾದ ಚಿಂತನೆ ಅಥವಾ ಭಾವನೆಗಳ ಮೇಲೆ ಗಮನವಿರಿಸಿ. ಸುಮಾರು ಒಂದು ನಿಮಿಷ ಬಿಟ್ಟು ಪುನಃ ಅಭ್ಯಾಸವನ್ನು ಮುಂದುವರೆಸಿ. ಹೀಗೆ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುವುದರ ಜೊತೆಗೆ ಆಂತರಿಕ ಚೈತನ್ಯ ವಿನ್ಯಾಸಗಳ ಅರಿವು ಮತ್ತು ಮಾನಸಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಗಳ ಅರಿವು ಬೆಳೆಯುತ್ತದೆ. ಈ ವಿಶ್ರಾಂತಿಯ ಭಾಗವೂ ಆಸನಗಳಷ್ಟೇ ಮುಖ್ಯ. ಆದ್ದರಿಂದ ಇದನ್ನು ಕಡೆಗಣಿಸಬಾರದು.
ಆಸನಾಭ್ಯಾಸ ಮಾಡುತ್ತಿರುವ ಯಾವುದೇ ಸಂದರ್ಭದಲ್ಲಿ ಆಯಾಸವೆನ್ನಿಸಿದರೆ ಶವಾಸನದಲ್ಲಿ ವಿಶ್ರಮಿಸಿ. ಆಸನಾಭ್ಯಾಸ ಮುಗಿದ ನಂತರ ಮೂರರಿಂದ ಐದು ನಿಮಿಷಗಳವರೆಗೆ ಶವಾಸನವನ್ನು ಮಾಡಬೇಕು.