ಇಂಗಳೇಶ್ವರದ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ.

Share

ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಸುಕ್ಷೇತ್ರ ಬಸವ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವವು ಇದೆ ಡಿಸೆಂಬರ್ 11 ರಿಂದ 18 ರ ವರೆಗೆ ಅದ್ದೂರಿಯಾಗಿ ನಡೆಯಲಿದ್ದು ಈ ವರ್ಷವು ಜಾತ್ರೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 1996 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಳಗದಿಂದ ಯೋಗ ಗುರುಗಳಾದ ಕಾಶಿನಾಥ್ ಅವಟಿ ನೇತೃತ್ವದಲ್ಲಿ ಡಿಸೆಂಬರ್ 9 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ 5:30 ರಿಂದ 7:30ರ ವರೆಗೆ ಯೋಗ ಶಿಬಿರ ನಡೆಯಲಿದೆ.

ದಿನಾಂಕ 11 ರಂದು ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಆಗಮನ ಪಲ್ಲಕ್ಕಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಶ್ರೀ ಬಸವೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸೇವೆ ನಡೆಯಲಿದೆ ಹಾಗೂ ಅನ್ನಪ್ರಸಾದ ನಡೆಯಲಿದ್ದು, ಆದೆ ದಿನ ರಾತ್ರಿ ಚೌಡಕಿಪದಗಳು ಜರುಗಲಿವೆ. ದಿನಾಂಕ 12 ರಂದು ಬೆಳಿಗ್ಗೆ 8 ಗಂಟೆಗೆ ಗೇರ್ ಗಾಡಿಯ ಸ್ಟೋ ಸೈಕಲ್ ಮೋಟರ್ ರೆಸ್, ಸಂಜೆ 4 ಗಂಟೆಗೆ ಚಿನ್ನು ಗ್ರೂಪ್ ವತಿಯಿಂದ ಹಾಲ ಹಲ್ಲಿನ ಟಗರು, ಎರಡು ಹಲ್ಲಿನ ಟಗರು, ನಾಲ್ಕು ಹಲ್ಲಿನ ಟಗರು ಹಾಗೂ ಓಪನ್ ಟಗರಿನ ಕಾಳಗ ನಡೆಯಲಿದೆ. ಸಂಜೆ 7ಗಂಟೆಗೆ 2007ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಶ್ರೀ ಕಲಾಗುರು ಮೆಲೋಡಿಸ್ ಇಂಗಳೇಶ್ವರ ಇವರಿಂದ ಹಾಸ್ಯರಸಮಂಜರಿ ಕಾರ್ಯಕ್ರಮ ಜರುಗಲಿದೆ. ದಿನಾಂಕ 13 ರಂದು 2007ನೇ ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಶಿರಗುಪ್ಪಿಯ ಶ್ರೀ ಸ್ವಾಮಿ ವಿವೇಕಾನಂದ ಯೋಗಿಮಂದಿರ ಮಲ್ಲಗಂಬ ತರಬೇತಿ ಕೇಂದ್ರದಿಂದ ಮಲ್ಲಗಂಬ ಪ್ರದರ್ಶನಗೊಳ್ಳಲಿದೆ. ದಿನಾಂಕ 14 ರಂದು ಬೆಳಿಗ್ಗೆ 9 ಗಂಟೆಗೆ ಒಂದು ಎತ್ತು ಒಂದು ಕುದುರೆ ಓಟದ ಸ್ಪರ್ಧೆ ನಡೆಯಲಿದೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯತ ವಿಜಯಪುರ,ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕುದುರಿಸಾಲೊಡಗಿ ಹಾಗೂ ಗ್ರಾಮ ಪಂಚಾಯಿತಿ ಇಂಗಳೇಶ್ವರ ಇವರ ಸಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ಅದೇ ದಿನ ಸಂಜೆ 5 ಗಂಟೆಗೆ 2000ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ 25ನೇ ವರ್ಷದ ಬೆಳ್ಳಿ ಮಹೋತ್ಸವ ಸ್ನೇಹ ಸಮ್ಮಿಲನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ತದನಂತರ ಕೊಣ್ಣೂರಿನ ಜೈ ಕಿಸಾನ್ ಸಂಸ್ಕೃತಿಕ ಮತ್ತು ಜನಪದ ಕಲಾತಂಡದಿಂದ ಜನಪದ ಜಾತ್ರೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಸಿದ್ದಪ್ಪ ಬಿದರಿಯವರು ಪಾಲ್ಗೊಳ್ಳಲಿದ್ದಾರೆ.

ದಿನಾಂಕ 15 ರಂದು ಬೆಳಿಗ್ಗೆ 8 ಗಂಟೆಗೆ ಜೋಡು ಎತ್ತಿನ ಓಟದ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ರೇವಣಸಿದ್ದೇಶ್ವರ ನವೋದಯ ಮತ್ತು ಸೈನಿಕ ಕೋಚಿಂಗ್ ಕ್ಲಾಸ್ ಇಂಗಳೇಶ್ವರ ವತಿಯಿಂದ ತಾಲೂಕು ಮಟ್ಟದ ರಸಪಶ್ನೆ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀ ನೆಲಮಾಳಸಿದ್ದೇಶ್ವರ ಡೊಳ್ಳಿನ ಹಾಡಕಿ ಸಂಘ ಇಂಗಳೇಶ್ವರ ಹಾಗೂ ಶ್ರೀ ರೇವಣಸಿದ್ದೇಶ್ವರ ಡೊಳ್ಳಿನ ಹಾಡಿಸಿ ಸಂಘ ಮನಗೂಳಿ ಇವರಿಂದ ಡೊಳ್ಳಿನ ಪದಗಳು ಜರಗುವುದು. ಸಂಜೆ 7:30ಕ್ಕೆ 2003 ನೇ ಸಾಲಿನ ಬಾಲ್ಯದ ಗೆಳೆಯರ ಬಳಗದ ವತಿಯಿಂದ ಜೀ ಕನ್ನಡ ಮಾದರಿಯ ಸರಿಗಮಪ ಗ್ರಾಂಡ್ ಫಿನಾಲೆ ಆದ್ಧೂರಿ ಕಾರ್ಯಕ್ರಮ ಹಾಗೂ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಲಿದೆ. ಅದೇ ದಿನ ರಾತ್ರಿ 9ಕ್ಕೆ ಶ್ರೀ ಬಸವೇಶ್ವರ ಭಜನಾ ಮಂಡಳಿ ಇಂಗಳೇಶ್ವರ ಹಾಗೂ ಪ್ರೀತಿಯ ಪಾರಿವಾಳ ಖ್ಯಾತಿಯ ರಮೇಶ್ ಕುರಬಗಟ್ಟಿ ಇವರ ಶ್ರೀ ಜಗದ್ಗುರು ಶ್ರೀ ಶಿವಾನಂದ ಭಜನಾ ಮಂಡಳಿ ಕುರುಬಗಟ್ಟಿ ಇವರಿಂದ ಬಜನಾ ಪದಗಳು ಜರಗಲಿವೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮ ಜರುಗಲಿವೆ ಎಂದು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಜಾತ್ರಾ ಕಮಿಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಯಮನಪ್ಪ ಚೌಧರಿ


Share

ರೋಟರಿ ಪರಿವಾರದ ಡಾಕ್ಟರ್ ಹಾಗೂ ಸಿ.ಎ ಗಳಿಗೆ ವಿಧಾತ್ರಿ ಅಕಾಡೆಮಿಯಿಂದ ಸನ್ಮಾನ.

Share

ಕುಮಟಾ : ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯ ಸಹಯೋಗದಲ್ಲಿ, ಇಲ್ಲಿನ ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ರೋಟರಿ ವಾರದ ಸಭೆಯಲ್ಲಿ ಕುಮಟಾ ತಾಲ್ಲೂಕಿನ ರೋಟರಿಯನ್ ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಡಾಕ್ಟರ್ಸ್ ಡೇ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ಡೇ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಹಿರಿಯ ವೈದ್ಯ ಡಾ. ಡಿ. ಡಿ. ನಾಯ್ಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾಕ್ಟರ್ ಗಳ ಕೆಲಸ ಸಾಮಾನ್ಯ ಕೆಲಸವಲ್ಲಾ, ಅವರು ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಸೇವೆಯನ್ನು ಒದಗಿಸುವ ಮನಸ್ಸಿನಲ್ಲಿಯೇ ಇರಬೇಕಾಗುತ್ತದೆ. ಕುಮಟಾದ ವೈದ್ಯರುಗಳು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸುವ ಕಾರ್ಯವನ್ನು ನಿರಂತರವಾಗಿ, ನಿಸ್ವಾರ್ಥವಾಗಿ ಮಾಡುತ್ತಾ ಬಂದಿದ್ದಾರೆ. ಡಾಕ್ಟರ್ ಗಳ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಹಾಗೂ ವಿಧಾತ್ರಿ ಅಕಾಡೆಮಿಯವರು ಗೌರವಿಸುತ್ತಿರುವುದು ಅವರ ಜನಪರ ಕಾಳಜಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದರು.ಇನ್ನೋರ್ವ ಖ್ಯಾತ ವೈದ್ಯ ಹೈಟೆಕ್ ಆಸ್ಪತ್ರೆಯ ಡಾ. ನಿತೀಶ ಶಾನಭಾಗ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಾ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಧಾತ್ರಿ ಅಕಾಡೆಮಿಯು ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಗುರುರಾಜ ಶೆಟ್ಟಿಯವರ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಕುಮಟಾ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಜನಮೆಚ್ಚುವಂತಾಗಿದೆ, ಹಾಗೆಯೇ ರೋಟರಿ ಕ್ಲಬ್ ನ ಸೇವಾ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿಧಾತ್ರಿ ಹಾಗೂ ರೋಟರಿ ಕ್ಲಬ್ ನ ಸೇವಾ ಕಾರ್ಯಗಳು ಹೀಗೆ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.ರೋಟರಿ ಕ್ಲಬ್ ಕುಮಟಾ ಶಾಖೆಯ ಅಧ್ಯಕ್ಷ ಅತುಲ್ ಕಾಮತ್, ಕಾರ್ಯದರ್ಶಿಯಾದ ವಿನಾಯಕ ಹೆಗಡೆ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಡಾಕ್ಟರ್ ಗಳಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಸನ್ಮಾನ ಕಾರ್ಯವನ್ನು ನೆರವೇರಿಸಿದರು.ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟ ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿಯವರು ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಗಳು ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಬಹುದು, ಅವರ ಮಾರ್ಗದರ್ಶನ ಸದಾಕಾಲವೂ ಒಬ್ಬ ವ್ಯಕ್ತಿ, ಸಂಸ್ಥೆ, ಉದ್ಯಮ, ಹೀಗೆ ವಿವಿಧ ಕ್ಷೇತಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೇ ಜೀವರಕ್ಷಕರಾದ ವೈದ್ಯರುಗಳ ಸೇವಾ ಕಾರ್ಯ ದೇವರಿಗೆ ಸಮಾನವಾದ್ದು. ಈ ಸಂದರ್ಭದಲ್ಲಿ ಇಂತವರನ್ನು ಗೌರವಿಸುವುದು ನಮ್ಮ ಸೌಭಾಗ್ಯ ಎಂದೆ ಭಾವಿಸಿಕೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಮಟಾದ ಖಜಾಂಚಿ ಪವನ ಶೇಟ್ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು

Add New Post


Share

ಮಣ್ಣೆತ್ತಿನ ಅಮಾವಾಸ್ಯೆಗೆ ಸಜ್ಜಾದ ಮಣ್ಣೆತ್ತುಗಳು

Share

ಚಿತ್ತಾಪುರ:- ಮುಂಗಾರು ಮಳೆ ಆರಂಭವಾದರೆ ರೈತರಿಗೆ ಹಬ್ಬದ ದಿನಗಳು ಆರಂಭವಾದಂತೆ. ಮುಂಗಾರು ಬಿತ್ತನೆಯ ಕೆಲಸ ಮುಗಿಯುತ್ತಿದ್ದಂತೆ ರೈತರು, ಹಬ್ಬಗಳ ಆಚರಣೆ ಆರಂಭಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕಾರಹುಣ್ಣಿಮೆಯನ್ನು ಆಚರಿಸಿರುವ ರೈತ ಬಾಂಧವರು ಇದೀಗ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಗೆ ಸಜ್ಜಾಗುತ್ತಿದ್ದಾರೆ.
ನಗರದಲ್ಲಿ ಮತ್ತು ತಾಲ್ಲೂಕಿನ ನಾಲವಾರ ಪಟ್ಟಣ‌ ಹಾಗೂ ವಿವಿಧ ಗ್ರಾಮದ ಮಾರುಕಟ್ಟೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಣ್ಣೆತ್ತುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಇಂದು ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ರೈತರು ಸೇರಿದಂತೆ ಸಾರ್ವಜನಿಕರು ಮಣ್ಣೆತ್ತಿನ ಗೊಂಬೆಗಳನ್ನು ಖರೀದಿಸುತ್ತಿದ್ದಾರೆ. ನಮ್ಮೂರಿನ ಕಲಾವಿದರಾದ ಕುಂಬಾರ ಸಮುದಾಯದ ಕೆಲವರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿನ ಕಲಾವಿದರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಲು ಸ್ಥಳೀಯವಾಗಿ ಉತ್ತಮ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ.
ತಯಾರಿಸಲು ಮಣ್ಣನ್ನು ಜರಡಿ ಹಿಡಿದು, ಸಣ್ಣನೆ ಮಣ್ಣನ್ನು ಕೆಲ ದಿನಗಳವರೆಗೆ ನೆನೆ ಹಾಕಿ, ನಂತರ ಹತ್ತಿಯನ್ನು ಮಣ್ಣಿನ ಜತೆ ಬೆರಸಿ, ಕುಟ್ಟುತ್ತಾರೆ. ಹದವಾದ ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ತೈಲ ವರ್ಣದಿಂದ ಎತ್ತುಗಳ ಕಣ್ಣು, ವಿಭೂತಿ ಮುಂತಾದವುಗಳನ್ನು ಚಿತ್ರಿಸುತ್ತಾರೆ. ಸುಂದರವಾದ ಮಣ್ಣೆತ್ತುಗಳನ್ನು ಜೋಡಿಗೆ 20 ರೊ. 30 ರೊ ಮಾರಾಟ ಮಾಡುತ್ತಾರೆ. ನಮ್ಮೂರಿನ ತಮ್ಮ ಸ್ವಂತ ಕುಲ ಕಸುಬು ಕಾಯಕದಲ್ಲಿ ಶ್ರೀ ಶಾಂತಮ್ಮ ಕುಂಬಾರ ಸುಗೂರ ಎನ್ ಈ ಹಿರಿಯ ಅಜ್ಜಿ ಬಡತನದ ಜೀವನದಲ್ಲಿ ತಮ್ಮ ಕಾಯಕ ವೃತ್ತಿಯನ್ನು ಹೀಗೆ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಈ ಕುರಿತು ಮಾತನಾಡಿ, 28 ಅಥವಾ 30 ವರ್ಷಗಳಿಂದ ಮಣ್ಣೆತ್ತುಗಳನ್ನು ತಯಾರು ಮಾಡುತ್ತಿದ್ದು, ಗ್ರಾಮದಲ್ಲಿ ಮನೆ ಮನೆಗೆ ಸ್ವತಃ ತಾವೇ ಹೋಗಿ ಮಣ್ಣೆತ್ತಿನ ಬಸವಣ್ಣ ನೀಡುತ್ತಾರೆ. ಕನಸಿನ ಭಾರತ್ ಭಾರತ ಪತ್ರಿಕೆಯ ವರದಿಗಾರರು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮನೆಗೆ ಹೋಗಿ ಭೇಟಿ ನೀಡಿ ಈ ವಿಷಯದ ಬಗ್ಗೆ ಪ್ರಸ್ತುತ ಪಡಿಸಿದರು ‌.ಅಜ್ಜಿಯವರು ಇದರಲ್ಲಿ ನಮಗೆ ಅಷ್ಟೇನು ಲಾಭವಿಲ್ಲ ಎಂದರು.
ರೈತಾಪಿ ವರ್ಗಕ್ಕೆ ಎತ್ತುಗಳೇ ದೇವರ ಸ್ವರೂಪಿಗಳಾಗಿವೆ. ಕಾಯಕದಲ್ಲಿ ತೊಡಗುವ ಎತ್ತುಗಳನ್ನೇ ದೇವರ ರೂಪದಲ್ಲಿ ಪೂಜೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಕಾರು ಹುಣ್ಣಿಮೆಯಲ್ಲಿ ಎತ್ತುಗಳನ್ನು ಅದ್ಧೂರಿಯಿಂದ ಮೆರವಣಿಗೆ ಮಾಡಿದರೆ, ಮಣ್ಣೆತ್ತಿನ ಅಮಾವಾಸ್ಯೆಯ ವೇಳೆ ಮಣ್ಣಿನ ಎತ್ತುಗಳನ್ನು ಪೂಜೆ ಮಾಡಿ ಸಂಜೆ ವೇಳೆ ಭಕ್ತಿಯಿಂದಲೇ ನದಿ ತಟಗಳಿಗೆ ವಿಸರ್ಜನೆ ಮಾಡುವ ಸಂಪ್ರದಾಯವಿದೆ. ಗ್ರಾಮೀಣ ಭಾಗದಲ್ಲಿ ಹುಡುಗರು ಎತ್ತಿನ ಗುಡಿಯನ್ನು ಮಾಡಿ ಮನೆ ಮನೆಯಿಂದ ಕಾಳು ಕೇಳಿ ತಂದು ಸಿಹಿ ಊಟ ಮಾಡಿ ಪೂಜ್ಯನೀಯವಾಗಿ ಮಣ್ಣಿನ ಎತ್ತು ವಿಸರ್ಜನೆ ಮಾಡುವ ಪದ್ಧತಿಯಿದೆ. ಈ ಹಬ್ಬದ ಸಡಗರವೂ ಜೋರಾಗಿಯೇ ಆಚರಿಸಲಾಗುತ್ತದೆ ಎಂದು ಶ್ರೀ ಬಸವರಾಜ ಹಡಪದ ಸುಗೂರ ಎನ್ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಹೇಳಿದರು. ‌ ‌ ವರದಿ-ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್


Share

ಕವನದ ಶೀರ್ಷಿಕೆ :- ಸತಿ-ಪತಿ

Share

ಗಂಡ ಹೆಂಡತಿ ಸಂಸಾರದ ಜೋಡು ಬಂಡಿ
ತಳ್ಳಬೇಕು ಜೀವನದ ಅವಿಭಾಜ್ಯ ಬಂಡಿ
ತಿಳಿದು ಬಂದಿದೆ ಆಷಾಢ ಮಾಸದ ಬಂಡಿ
ಕನಸು ಕಂಡೇ ನಾ ಸಾಗಲಿ ಈ ಬಂಡಿ

ಬಾಳ ಸಂಗಾತಿ ಇರಬೇಕು ಗುಣವಂತೆ
ಬಂಗಾರದ ಮನುಷ್ಯ ತನ್ನ ಗಂಡನಂತೆ
ನಂಬಿಕೆ ಪ್ರೀತಿ ಪ್ರೇಮದ ನನ್ನ ಹೆಂಡತಿ
ಮುತ್ತು ಕೊಟ್ಟಳು ಮುಗುಳ್ನಗೆಯ ಒಡತಿ

ಜೀವನದಲ್ಲಿ ಮಹತ್ವದ ಘಟಕ ಸತಿಪತಿ
ಕಷ್ಟಪಟ್ಟು ಧೈರ್ಯ ತುಂಬಿದಳು ಒಡತಿ
ಹೆಂಡತಿ ನೋವು ಅರ್ಥೈಸಿಕೊಂಡವನೇ ಪತಿ
ಪ್ರೀತಿಯ ಗೆಳತಿ ಗಂಡನ ಮಮತೆಯ ಮಾತೆ

ಬರುವ ಸಂತೋಷವನ್ನು ಆನಂದಿಸಿ
ಅತ್ತೆ ಮನೆಯ ಪ್ರೀತಿಯ ಓ ಚಿಕ್ಕಸೋಸೇ
ಜೀವನದಲ್ಲಿ ನಿಸ್ವಾರ್ಥಿಯಾಗಿರುವ ಮನಸೆ
ದೇಹ ಎರಡಾದರೆ ಮನಸ್ಸು ಒಂದು ಸತಿಪತಿದು

ಮಹಾಂತೇಶ ಖೈನೂರ 
ಸಾ//ಯಾತನೂರ


Share

ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಾಡಿದ ಶ್ರೀ ಲಕ್ಸ್ಮಿಬೆಳ್ಮಣ್ಣು

Share

ಪ್ರಸಾದ್ ಬೆಳ್ಮಣ್ಣು ಹಾಗೂ ಉಷಾ ಬೆ ಳ್ಮಣ್ಣು ರವರ ಪುತ್ರಿ ಶ್ರೀ ಲಕ್ಸ್ಮಿ ಬೆಳ್ಮಣ್ಣು ಹಿಂದು ಸ್ಥಾನಿ ಶಾಸ್ತ್ರೀಯ ಸಂಗೀತ ವನ್ನು ಪಂಡಿತ್ ವಿನಾಯಕ್ ತೊರ್ವಿ ಯವರಲ್ಲಿ ಸಂಗೀತ ವನ್ನು ಅಭ್ಯಾಸ ಮಾಡುತ್ತಿದ್ದು ಕಾರ್ಕಳ ದ ನಿಟ್ಟೆ ಗ್ರಾಮದ ಶ್ರೀ ಕೈಲಾಜೆ ಉಮಾಮಹೇಶ್ವರ ದೇವಸ್ಥಾನಕ್ಕೆ ಬಂದು ದೇವರ ಸನ್ನಿದಾನದಲ್ಲಿ ಒಂದು ಸಂಗೀತ ಹಾಡನ್ನು ಹಾಡಬೇಕೆಂಬ ಇಚ್ಛೆಯಿಂದ ಹಾಡಿದರು. ಬೆಂಗಳೂರು ನಿಂದ ಊರಿಗೆ ಬಂದಿದ್ದು ಅಲ್ಲಿಂದ ಅವರ ಸಂಬಂಧಿಕರಾದ ಅತ್ತೂರು ಗುರುರಾಜ್ ಭಟ್ ಅಡುಗೆ ಭಟ್ರು ಅವರೊಂದಿಗೆ ಬಂದು ಉಮಾಮಹೇಶ್ವರ ದೇವರ ಸನ್ನಿದಾನ ಕ್ಕೆ ಭೇಟಿ ನೀಡಿದರು.


Share

ಮತ್ತೊಮ್ಮೆ ಡೀಪ್‌ಫೇಕ್‌ಗೆ ಬಲಿಯಾದ ರಶ್ಮಿಕಾ ಮಂದಣ್ಣ: ಈ ಬಾರಿ ಮಾಡೆಲ್‌ ಮುಖಕ್ಕೆ ಸಂಯೋಜನೆ!

Share

ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಡೀಪ್ ಫೇಕ್ ವಿಡಿಯೋಗೆ ಬಲಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ AI ಬಳಸಿ ಮಾರ್ಫಿಂಗ್ ಮಾಡಲಾಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಮುಖವನ್ನು ಮಾಡೆಲ್‌ನ ಮುಖದೊಂದಿಗೆ ಎಐ ಸಹಾಯದಿಂದ ಸಂಯೋಜಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, 2024ರ ಏಪ್ರಿಲ್ ನಲ್ಲಿ ಕೊಲಂಬಿಯಾದ ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಡೇನಿಯೆಲಾ ವಿಲ್ಲಾರ್ರಿಯಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಇದರಲ್ಲಿ ಅವರು ಸ್ಟ್ರಾಪ್‌ಲೆಸ್ ಬಿಕಿನಿಯಲ್ಲಿ ಜಲಪಾತದ ಬಳಿ ಪೋಸ್ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ, AI ಸಹಾಯದಿಂದ ಮಾಡೆಲ್‌ನ ಮುಖವನ್ನು ರಶ್ಮಿಕಾ ಅವರ ಮುಖದೊಂದಿಗೆ ಬದಲಾಯಿಸಲಾಗಿದ್ದು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.ಕಳೆದ ವರ್ಷ ನವೆಂಬರ್‌ನಲ್ಲಿ ರಶ್ಮಿಕಾ ಅವರ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು. ಆ ವಿಡಿಯೋ ಕೂಡ ಎಐ ಸಹಾಯದಿಂದ ಮಾರ್ಫಿಂಗ್ ಮಾಡಿ ಮಾಡಲಾಗಿತ್ತು. ಹಳೆಯ ವೈರಲ್ ವೀಡಿಯೊದಲ್ಲಿ ಬ್ರಿಟನ್ ಮೂಲದ ಜಾರಾ ಪಟೇಲ್ ಅವರ ದೇಹದ ಮೇಲೆ ರಶ್ಮಿಕಾ ಅವರ ಮುಖವನ್ನು ಅಳವಡಿಸಲಾಗಿತ್ತು. ಆದರೆ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ವಿಡಿಯೋ ವೈರಲ್ ಆದ ನಂತರ ನಟಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಚಿತ್ರದಲ್ಲಿ ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


Share

ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

Share

ಮೈಸೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮಂಗಳವಾರ ಸಂಜೆ ನಂಜನಗೂಡಿಗೆ ಭೇಟಿ ನೀಡಿ, ಶ್ರೀಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ದೇವರ ದರ್ಶನ ಪಡೆದ ನಂತರ ದೇವಾಲಯದ ವಸಂತ ಮಂಟಪದಲ್ಲಿ 5 ನಿಮಿಷಗಳ ಕಾಲ ಕುಳಿತು ಧ್ಯಾನಾಸಕ್ತರಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ಮೈಸೂರಿನ ಇಲವಾಲದಲ್ಲಿ ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಂದಿದ್ದೆ. ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಬಗ್ಗೆ ಬಹಳವಾಗಿ ಕೇಳಿದ್ದೆ. ಇಂದು ದೇವರ ದರ್ಶನ ಪಡೆಯುವ ಸೌಭಾಗ್ಯ ದೊರೆಯಿತು ಎಂದು ಹರ್ಷ ವ್ಯಕ್ತಪಡಿಸಿದರು.ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಬಹುತಾರಾಗಣ ಇದೆ. ಪರಭಾಷೆಯ ಕಲಾವಿದರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಂಜಯ್​ ದತ್​, ಶಿಲ್ಪಾ ಶೆಟ್ಟಿ, ರವಿಚಂದ್ರನ್​, ರಮೇಶ್​ ಅರವಿಂದ್​ ಅವರಂತಹ ಘಟಾನುಘಟಿ ಕಲಾವಿದರು ‘ಕೆಡಿ’ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಮೈಸೂರಿನಲ್ಲಿ ಶಿಲ್ಪಾ ಶೆಟ್ಟಿ ‘ಕೆಡಿ’ ಚಿತ್ರದ ಶೂಟಿಂಗ್ ​ನಲ್ಲಿ ಭಾಗಿ ಆಗಿದ್ದಾರೆ.


Share

ಕೆಂಪೇಗೌಡರ ಪಾತ್ರಕ್ಕೆ ಉಪೇಂದ್ರ?: ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರತಂಡ ಚಿಂತನೆ

Share

ಮುಂಬರುವ ಚಿತ್ರ ಧರ್ಮಭೀರು ನಾಡಪ್ರಭು ಕೆಂಪೇಗೌಡ ಶೀರ್ಷಿಕೆ ಹಕ್ಕುಗಳ ಕುರಿತು ನಿರ್ದೇಶಕ ಟಿಎಸ್ ನಾಗಾಭರಣ ಜೊತೆ ಕಾನೂನು ವಿವಾದದ ನಡುವೆ ನಿರ್ಮಾಪಕ ಕಿರಣ್ ತೋಟಂಬೈಲೆ ಚಿತ್ರಕ್ಕೆ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಸಿದ್ದಾರೆ.

ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರವನ್ನು ಅಮೃತವರ್ಷಿಣಿ ನಿರ್ದೇಶಕ ದಿನೇಶ್ ಬಾಬೂ ನಿರ್ದೇಶಿಸಲಿದ್ದು ಕಿರಣ್ ತೋಟಂಬೈಲೆ ನಿರ್ಮಿಸಲಿದ್ದಾರೆ. ಕೆಂಪೇಗೌಡರ ಪಾತ್ರಕ್ಕೆ ದೊಡ್ಡ ಸ್ಟಾರ್ ನಟನನ್ನು ತರಲು ಚಿತ್ರತಂಡ ಉತ್ಸುಕವಾಗಿದೆ. ಅದಕ್ಕಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಸಂಪರ್ಕಿಸಿದೆ. ಆರಂಭಿಕ ಚರ್ಚೆಗಳು ಪ್ರಾರಂಭವಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ.ಇನ್ನೂ ಉಪೇಂದ್ರ ಅವರು ಬಹುನಿರೀಕ್ಷಿತ UI ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ನಿರ್ಮಾಪಕರು ಆಶಿಕಾ ರಂಗನಾಥ್ ಅವರನ್ನು ಚಿತ್ರದ ನಾಯಕಿಯಾಗಿ ನಟಿಸಲು ಸಂಪರ್ಕಿಸಿದ್ದಾರೆ. ಇದು ಕನ್ನಡ-ಇಂಗ್ಲಿಷ್ ದ್ವಿಭಾಷೆಯಲ್ಲಿ ಮತ್ತು ದಿ ಪಯೋನಿಯರ್ ಆಫ್ ಬೆಂಗಳೂರು ಎಂಬ ಶೀರ್ಷಿಕೆಯನ್ನು ಇಂಗ್ಲಿಷ್ ಆವೃತ್ತಿಯಲ್ಲಿ ಹೊಂದಿದೆ.ಕೆಂಪೇಗೌಡರ ಜನ್ಮದಿನವಾದ ಜೂನ್ 27ರಂದು ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಚಾಲನೆ ಸಿಗಲಿದೆ. ದೊಡ್ಡ ಬಜೆಟ್‌ನ ಚಿತ್ರ ಅದ್ಧೂರಿಯಾಗಿ ಮೂಡಿಬರಲಿರುವ ಈ ಚಿತ್ರದಲ್ಲಿ ಹಿರಿಯ ನಟ ಭಾರತಿ ವಿಷ್ಣುವರ್ಧನ್, ವಸಿಷ್ಠ ಸಿಂಹ ಮತ್ತು ಶ್ರೀನಗರ ಕಿಟ್ಟಿ ಆಯ್ಕೆ ಅಂತಿಮವಾಗಿದೆ.

ಚೇತನ್ ರಾಜ್ ನಿರ್ಮಾಣ ಜವಾಬ್ದಾರಿಯನ್ನು ನೋಡಿಕೊಳ್ಳಲಿದ್ದು, ಡಿಒಪಿ ಸಂತೆ ಮೈಸ್ ಛಾಯಾಗ್ರಾಹಕರಾಗಿ ಮತ್ತು ಉಜ್ವಲ್ ಕುಲಕರ್ಣಿ ಸಂಕಲನ ಮಾಡಲಿದ್ದಾರೆ. ನಿರ್ಮಾಪಕ ಕಿರಣ್ ತೋಟಂಬೈಲೆ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.


Share

ಪ್ರೇಮಲು ಅಥವಾ ಮಂಜುಮ್ಮೆಲ್ ಬಾಯ್ಸ್‌ನಲ್ಲಿ ಮಹತ್ವದ ಕಥೆಯೇ ಕಾಣಲಿಲ್ಲ: ದಿಯಾ ನಿರ್ದೇಶಕ ಅಶೋಕ

Share

ಸೂಪರ್ ಹಿಟ್ ಚಿತ್ರಗಳಾದ 6-5=2 ಮತ್ತು ದಿಯಾ ಚಿತ್ರದ ನಿರ್ದೇಶಕ ಅಶೋಕ ಅವರು ತಮ್ಮ ಮೂರನೇ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಹೊಸ ಯೋಜನೆಗೆ ಮುಂದಾಗುತ್ತಿದ್ದಂತೆ ನಿರ್ದೇಶಕರು ಒಂದು ರೀತಿಯ ಭಯವನ್ನು ವ್ಯಕ್ತಪಡಿಸಿದ್ದಾರೆ.

ಹಿಂದಿನ ಚಿತ್ರಗಳ ಯಶಸ್ಸು, ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಹೆಚ್ಚಿನ ನಿರೀಕ್ಷೆಗಳು ಮತ್ತು ವೈಫಲ್ಯದ ಭಯ ಸೇರಿದಂತೆ ತನ್ನದೇ ಆದ ಸವಾಲುಗಳನ್ನು ತರಬಹುದು ಎಂದು ಅಶೋಕ ಹೇಳಿದರು.

ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗೆ ಬಂದರೆ, ದೊಡ್ಡ-ಬಜೆಟ್ ನ ಚಿತ್ರಗಳು ಮತ್ತು ಸಣ್ಣ ಚಿತ್ರಗಳ ನಡುವಿನ ಆಳವನ್ನು ಅಳೆದಿದ್ದಾರೆ. ದೊಡ್ಡ ಚಿತ್ರಗಳಿಗೆ ಮಾತ್ರ ಜನ ಬರುತ್ತಾರೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಸತ್ಯವೆಂದರೆ ಮನರಂಜನೆ ಮಾತ್ರ ಇಲ್ಲಿ ಮುಖ್ಯವಾಗುತ್ತದೆ. ಇದು ಕಥೆ ಹೇಳುವ ಮತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಡುವಿನ ಪರಿಪೂರ್ಣ ಸಮತೋಲನ ಕಂಡುಕೊಳ್ಳುವುದು, ಪ್ರಸ್ತುತ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ ಎಂದರು.ಇದಕ್ಕೆ ಇತರ ಉದ್ಯಮಗಳ ಉದಾಹರಣೆಯನ್ನು ನೀಡಿದ್ದು ಮಲಯಾಳಂ ಚಿತ್ರರಂಗದ ಅಲೆಯನ್ನು ಎತ್ತಿ ತೋರಿಸಿದ್ದಾರೆ. ಪ್ರೇಮಲು ಅಥವಾ ಮಂಜುಮ್ಮೆಲ್ ಬಾಯ್ಸ್ ನಂತಹ ಚಿತ್ರದಲ್ಲಿ ಏನಾದರೂ ಗಣನೀಯವಾದ ಕಥಾಹಂದರವಿದೆಯೇ? ಪ್ರಮುಖ ಕಥಾವಸ್ತುವಿನ ಕೊರತೆಯನ್ನು ಲೆಕ್ಕಿಸದೆಯೇ, ಈ ಪ್ರತಿಯೊಂದು ಚಿತ್ರವು ದೊಡ್ಡ ಗೆಲುವು ಸಾಧಿಸಿದ್ದು ಅಲ್ಲದೆ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅವರ ಯಶಸ್ಸು ಅವರ ಅದ್ಭುತ ಕಥೆಗೆ ಇಲ್ಲದಿದ್ದರೂ ಆಳವಾಗಿ ಪ್ರೇಕ್ಷಕರನ್ನು ಮನರಂಜಿಸುವ ಮತ್ತು ಹಿಡಿದಿಟ್ಟುಕೊಳ್ಳುವ ಅವರ ಸಾಮರ್ಥ್ಯವಾಗಿದೆ ಎಂದರು. ದಿನದ ಕೊನೆಯಲ್ಲಿ ಜನರು ಕೇವಲ ಕಥೆಗಾಗಿ ಚಿತ್ರಮಂದಿರಗಳಿಗೆ ಬರುವುದಿಲ್ಲ. ಅವರು ಅನುಭವಕ್ಕಾಗಿ, ಭಾವನೆಗಳಿಗಾಗಿ ಕೊನೆಗೆ ಮನರಂಜನೆಗಾಗಿ ಬರುತ್ತಾರೆ ಎಂದು ಅಶೋಕ ಹೇಳಿದರು. ಕೊನೆಗೆ ಪ್ರಾಣಿಗಳ ಚಿತ್ರಗಳ ಉದಾಹರಣೆಯನ್ನು ಸಹ ತೆಗೆದುಕೊಂಡರು. ಇದು ಟೀಕೆಗಳ ಹೊರತಾಗಿಯೂ ದೊಡ್ಡ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಗಮನಾರ್ಹ ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ನನ್ನ ಸ್ವಂತ ಚಿತ್ರ ದಿಯಾ ಕೂಡ ಭಾವನೆಗಳಿಂದ ತುಂಬಿದೆ. ಕಡಿಮೆ ಮನರಂಜನೆಯನ್ನು ಹೊಂದಿದೆ ಎಂದು ಅವರು ಸೇರಿಸುತ್ತಾರೆ.ತನ್ನ ಮುಂದಿನ ಚಿತ್ರದಲ್ಲಿ ಸ್ನೇಹ ಪ್ರಮುಖ ಸ್ಥಾನ ಪಡೆಯುತ್ತದೆ ಎಂದು ಅಶೋಕ ಹೇಳಿದರು. ಇದೀಗ ತಮ್ಮ ಮುಂದಿನ ಪ್ರಾಜೆಕ್ಟ್‌ಗಳಿಗಾಗಿ ಆಡಿಷನ್‌ಗೆ ಕರೆದಿರುವ ದಿಯಾ ನಿರ್ದೇಶಕರು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಉತ್ಸುಕರಾಗಿದ್ದಾರೆ. 200ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಆಡಿಷನ್ ಕೊಡಬಹುದು. ಕೊನೆಗೆ ಪಾತ್ರಗಳಿಗೆ ಸರಿಹೊಂದುವ ನಟರನ್ನು ಅಂತಿಮಗೊಳಿಸುತ್ತೇವೆ ಎಂದರು. ಕಥೆ ಕುರಿತಂತೆ ಸುಳಿವು ಕೊಟ್ಟ ನಿರ್ದೇಶಕರು, ಚಿತ್ರವು ಹಳ್ಳಿಯೊಂದರಲ್ಲಿ ನಡೆಯುವ ಸಾಮಾಜಿಕ ನಾಟಕವಾಗಿದ್ದು, ಅವರ ಜೀವನದ ವಿವಿಧ ಹಂತಗಳಲ್ಲಿ ಮೂವರು ಯುವಕರನ್ನು ಕೇಂದ್ರೀಕರಿಸುತ್ತದೆ. ಒಂದು ಕಥಾಹಂದರವು ಅವನ ಮದುವೆಯ ಸಮಯದಲ್ಲಿ ಒಂದು ಪಾತ್ರದ ಸುತ್ತ ಸುತ್ತುತ್ತದೆ. ಇನ್ನೊಂದು ಮದುವೆಯ ನಂತರ, ಮತ್ತು ಮೂರನೆಯದು ಪ್ರೀತಿಯ ಪಾತ್ರವನ್ನು ಒಳಗೊಂಡಿರುತ್ತದೆ, ಎಲ್ಲವೂ ಸಮಾನಾಂತರವಾಗಿ ಚಲಿಸುತ್ತದೆ ಎಂದು ಅವರು ಹೇಳುತ್ತಾರೆ.


Share

ಸಂಭವಾಮಿ ಯುಗೇಯುಗೇ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ; ಜೂನ್‌ನಲ್ಲಿ ತೆರೆಗೆ ಬರಲು ಸಿದ್ಧ

Share

ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ‘ಸಂಭವಾಮಿ ಯುಗೇ ಯುಗೇ’ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಜೂನ್ 21 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಜಾನಪದ ಶೈಲಿಯಲ್ಲಿ ಮೂಡಿಬಂದಿರುವ ‘ಡೋಲು ತಮಟೆ ವಾದ್ಯ…’ ಎಂಬ ಈ ಹಾಡನ್ನು ನಟಿ ಶ್ರುತಿ ಹರಿಹರನ್​ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ಗೀತಾ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಪೂರನ್ ಶೆಟ್ಟಿಗಾರ್ ಅವರ ಸಂಗೀತ ಸಂಯೋಜನೆಯಿದ್ದು, ನಕಾಶ್ ಮತ್ತು ಸ್ಪರ್ಶಾ ಅವರು ಧ್ವನಿ ನೀಡಿದ್ದಾರೆ.

ನಿರ್ಮಾಪಕಿ ಪ್ರತಿಭಾ ಅವರು ‘ರಾಜಲಕ್ಷ್ಮಿ ಎಂಟರ್‌ಟೈನ್‌ಮೆಂಟ್ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಕೃಷಿಯ ಸುತ್ತ ಸುತ್ತುತ್ತದೆ. ಯುವ ಪೀಳಿಗೆಯು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉದ್ಯೋಗಗಳನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವ ಬಗ್ಗೆ ಚರ್ಚಿಸುತ್ತದೆ. ರೈತರು ಮತ್ತು ಕೃಷಿಗೆ ಸಂಬಂಧಿಸಿದ ಈ ಸನ್ನಿವೇಶವನ್ನು ಸಂಭವಾಮಿ ಯುಗೇ ಯುಗೇನಲ್ಲಿ ಚಿತ್ರಿಸಲಾಗಿದೆ.

ಪ್ರಮುಖ ಪಾತ್ರದಲ್ಲಿ ನಟಿಸಿರುವ ಜಯ್ ಶೆಟ್ಟಿ ಗ್ರಾಮದ ಮುಖ್ಯಸ್ಥನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಿಶಾ ರಜಪೂತ್ ನಾಯಕಿಯಾಗಿದ್ದು, ಹಿರಿಯ ನಟಿಯರಾದ ಭವ್ಯಾ ಮತ್ತು ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ಅಭಯ್ ಪುನೀತ್, ಅಶ್ವಿನ್ ಹಾಸನ್ ಮತ್ತು ಪ್ರಮೋದ್ ಶೆಟ್ಟಿ ಕೂಡ ಇದ್ದಾರೆ.ಸಂಭವಾಮಿ ಯುಗೇ ಯುಗೇ ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣ ಮತ್ತು ರವೀಶ್ ಆತ್ಮರಾಮ್ ಅವರ ಸಂಕಲನವಿದೆ. ಚಿತ್ರಕ್ಕೆ ಪೂರನ್ ಶೆಟ್ಟಿಗಾರ್ ಅವರ ಸಂಗೀತ ಮತ್ತು ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತವಿದೆ.


Share
1 2 3 5