ದಿ ಕಾಶ್ಮೀರಿ ಪೈಲ್ಸ್ ಹಿಂದಿನ ಸತ್ಯವೇನು?

Share


ಭಾರತ ದೇಶದಲ್ಲಿ ಮನೋರಂಜನಾ ಮಾಧ್ಯಮವಾದ ಚಲನಚಿತ್ರವೂ ಕೂಡ ಒಂದೊಂದು ಸಾರಿ ಸತ್ಯ ಘಟನೆಯಾಧಾರಿತ ಚಿತ್ರ ನಿರ್ಮಿಸುವ ಮೂಲಕ ಹಲವಾರು ರೀತಿಯ ಸತ್ಯಗಳನ್ನು ಕೆದಕುವ ಪ್ರಯತ್ನವು ಮೊದಲಿನಿಂದಲೂ ನಡೆದು ಬಂದಿದೆ. ಈ ಪ್ರಯತ್ನದ ದಾರಿಯಲ್ಲಿ ದಿ ಕಾಶ್ಮೀರಿ ಪೈಲ್ಸ್ ಚಿತ್ರವು ನೀಲುತ್ತದೇಯೇ? ಈ ಚಿತ್ರಕ್ಕೆ ಭಾರತದ ಒಂದು ವರ್ಗವು ಬೆಂಬಲಕ್ಕೆ ನಿಲ್ಲುವ ಜೊತೆಗೆ ಬಿಜೆಪಿಯು ಚಿತ್ರವನ್ನು ನೋಡಲೇಬೇಕೆನ್ನುವಂತೆ ಜನರ ಮೇಲೆ ಮನಸಿಕ ಒತ್ತಡವನ್ನು ಏರುತ್ತಿದೆ. ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಸತ್ಯವನ್ನು ತೋರಿಸಿದ್ದೇವೆ ಎನ್ನುವ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಕೇಂದ್ರ ಸರ್ಕಾರವು ವೈಶ್ರೇಣಿಯ ಭದ್ರತೆಯನ್ನು ಒದಗಿಸಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಘೋಷಣೆ ಮಾಡಿದೆ. ದೇಶದ ಪುರಾಮಿ ಮೋದಿ ಈ ಚಿತ್ರವನ್ನು ಹಾಡಿ ಹೋಗಳುತ್ತಾರೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಮಾಡುವ ಜೊತೆಗೆ ಚಿತ್ರವನ್ನು ನೋಡುವಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಚಿತ್ರದ ಮುಖ್ಯ ಸಾರಾಂಶವು 1989-90ರ ಸಾಲಿನಲ್ಲಿ ನಡೆದ ಕಾಶ್ಮೀರ್ ಪಂಡಿತರ ಹತ್ಯೆಯ ಕುರಿತಾಗಿದೆ. 1990ರ ಸಂದಂರ್ಭದಲ್ಲಿ ಕಾಂಗ್ರೆಸ್ ಹೆತರ ಸರ್ಕಾರ ಆಡಳಿತ ಮಾಡುತ್ತಿತ್ತು. ಆ ಸಂದಂರ್ಭದಲ್ಲಿ ರಾಷ್ರ್ಟೀಯ ಪ್ರಂಟ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ಪಕ್ಷವು ನೇರವಾಗಿ ವಿ.ಪಿ.ಸಿಂಗ್‍ಗೆ ಬೆಂಬಲ ಕೊಟ್ಟಿದ್ದವು. ಆಗ ಲೋಕಸಭೆಯಲ್ಲಿ ವಾಜಪೇಯಿ ಮತ್ತು ಆಡ್ವಾನಿ ಸೇರಿದಂತೆ 89 ಸದಸ್ಯರನ್ನು ಒಳಗೊಂಡಿತ್ತು. ವಿ.ಪಿ.ಸಿಂಗ್ ಸರ್ಕಾರಕ್ಕೆ ಬಿ.ಜೆ.ಪಿ ಯ ಬೆಂಬಲವು ಅತ್ಯಂತ ನಿರ್ಣಯಕವಾಗಿತ್ತು. ಈ 1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯ ಪಾಲರಾಗಿ ಜಗಮೋಹನ್ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲ ಬಿ.ಜೆ.ಪಿ ಗರು ಮತ್ತು ವಾಜಪೇಯಿ ಮತ್ತು ಅಡ್ವಾನಿಯವರಿಂದ ನೇಮಕಗೊಂಡಿದ್ದರು. ಇಂತಹ ನರಮೇಧದ ಸಂದರ್ಭದಲ್ಲಿ ಸರಕಾರವಾಗಲೀ, ರಾಜ್ಯ ಪಾಲರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಕೇಂದ್ರ ಸರ್ಕಾರವು ಮೌನದಿಂದ ಇದ್ದು ಇದಕ್ಕೂ ನನಗೂ ಸಂಬಂಧವಿಲ್ಲದಂತಿತ್ತು. ಇದರ ಕುರಿತು ಸಂಸತ್ತಿನಲ್ಲಿ ರಾಜೀವ್ ಗಾಂಧಿ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಒದಗಿಸಬೇಕು ಮತ್ತು ಅವರಲ್ಲಿರುವ ಆತಂಕವನ್ನು ದೂರ ಮಾಡಿ ಕಾಶ್ಮೀರದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಆದರೂ ಕೂಡ ಸರ್ಕಾರವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರ ಹಿಂದೆ ಹತ್ತು ಹಲವು ಪ್ರಶ್ನೆಗಳು ಹೇಳುತ್ತವೆ. ಆ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ?

  1. ಈ ಘಟನೆಯಲ್ಲಿ ಕಾಂಗ್ರೆಸ್‍ನ ವೈಫಲ್ಯವೇನು? ರಾಜಕೀಯ ಪಾತ್ರವೇನು?
  2. 1990ರಲ್ಲಿ ಉಗ್ರಗಾಮಿಗಳನ್ನು 15,000 ಮುಸ್ಲಿಂರನ್ನು ಕೊಂದಿದ್ದರು. 300 ಹಿಂದೂಗಳನ್ನು ಕೊಂದಿದ್ದರು. ಈ ಮಾರಣ ಹೋಮದಲ್ಲಿ 219 ಕಾಶ್ಮೀರಿ ಪಂಡಿತರ ಹತ್ಯೆಯಾಗಿತ್ತು. ಆದರೆ ಚಿತ್ರದಲ್ಲಿ 4,000 ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ ಎಂದು ತೋರಿಸಲಾಗಿದೆ. ಹಾಗಾದರೆ ಈ ಚಿತ್ರವನ್ನು ಸತ್ಯ ಆಧಾರಿತ ಚಿತ್ರವೆಂದು ಹೇಗೆ ವರ್ಗೀಕರಣ ಮಾಡುವುದು?
  3. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಚಿತ್ರವನ್ನು ಏಕೆ ನಿರಾಕರಿಸುತ್ತಾರೆ?
  4. ರಾಜ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಾಶ್ಮೀರಿ ಪೈಲ್ಸ್ ಸಿನಿಮಾ ನೋಡದವರು ದೇಶ ದ್ರೋಹಿಗಳು ಎಂದು ಹೇಳಿದ್ದಾರೆ. ಇದು ಎಷ್ಟು ಸಮಂಜಸವಾದ ಹೇಳಿಕೆ? ರಾಜಕಾರಣಿಗಳ ನಾಲಿಗೆಗೂ ಮೆದುಳಿಗೂ ಸಂಬಂಧವೇ ಇಲ್ಲವೇ?
  5. ಕನ್ನಡದಲ್ಲಿ ರಾಷ್ರ್ಟೀಯ ಅಂತರರಾಷ್ರ್ಟಿಯ ಪ್ರಶಸ್ತಿ ಪಡೆದ ಅದೆಷ್ಟೋ ಚಿತ್ರಗಳಿದ್ದರೂ ಚಕಾರ ವೆತ್ತದ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಈ ಚಿತ್ರವನ್ನು ತಮ್ಮ ಕ್ಷೇತ್ರದಲ್ಲಿ ತಮ್ಮ ಹಣದಲ್ಲಿ ಉಚಿತವಾಗಿ ತೋರಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ?
  6. ವಿ.ಪಿ.ಸಿಂಗ್ ಸರಕಾರದ ನಂತರ ವಾಜಪೇಯಿಯವರ 5 ವರ್ಷದ ಸಂಪೂರ್ಣ ಸರಕಾರ ನಂತರದ ಮೋದಿಯ 2ನೇ ಅವಧಿಯ ಸರಕಾರ ಏಕೆ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೊಡಲಿಲ್ಲ?
  7. 1947 ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಅದೆಷ್ಟೋ ಹತ್ಯೆಗಳು ನಡೆದಿವೆ. ಆ ಹತ್ಯೆಗಳ ಹಿಂದೆ ಉಗ್ರಗಾಮಿಗಳಿದ್ದರು. ಅವರಿಗೆ ನೆರವಾದರು ಪಾಕಿಸ್ನಾನಿಗಳು ದೇಶದ ಒಳಗೆ ನುಸುಳಲು ನೆರವಾದವರು ಈ ದೇಶದ ರಾಜಕಾಣಿಗಳು ಇಂತಹವರಿಗೆ ಏಕೆ ಶಿಕ್ಷೆ ಆಗಲಿಲ್ಲ.
  8. ಭಯೋತ್ಪಾದಕರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್ ಧರ್ಮ ಜಾತಿ ನೋಡದೆ ಅದೆಷ್ಟೋ ಜನರನ್ನು ಕಾಶ್ಮೀರ್ ಸೇರಿದಂತೆ ದೇಶದಲ್ಲಿ ಕೊಂದಿದ್ದಾರೆ. ಆದರೆ ಪಂಡಿತರು ಮಾತ್ರ ಮನುಷ್ಯರು ಉಳಿದವರು ಮನುಷ್ಯರಲ್ಲವೇ?
  9. ಒಂದು ವಿಜ್ಞಾನದ ಅಧ್ಯಯನದ ಪ್ರಕಾರ ಬ್ರಾಹ್ಮಣರು ಈ ದೇಶದ ಮೂಲ ನಿವಾಸಿಗಳೇ ಅಲ್ಲ ಜೊತೆಗೆ ಇತಿಹಾಸದ ಪ್ರಕಾರವೂ ಕೂಡ ದ್ರಾವಿಡರು ಮೂಲ ನಿವಾಸಿಗಳು. ಆರ್ಯರು ಈ ದೇಶಕ್ಕೆ ನೆಲೆಸಲು ಬಂದು ದ್ರಾವಿಡರನ್ನು ಕೆಳತಳ್ಳಿದ್ದಾರೆ. ಇದರ ಬಗ್ಗೆ ಏಕೆ ಪ್ರಶ್ನೆ ಇಲ್ಲ?
  10. ದೇಶದಲ್ಲಿ ಮಳೆಯಿಂದ ಪ್ರಕೃತಿ ವಿಕೋಪದಿಂದ ಬೇರೆ ದಾಳಿಯಿಂದ ರೋಗರುಜಿನಗಳಿಂದ ಅದೆಷ್ಟೋ ಜನ ಸಾಯುತ್ತಾರೆ. ದಾಳಿಗಳಿಂದ ಅದೆಷ್ಟೋ ಸಮುದಾಯಗಳು ನಶಿಸಿ ಹೋಗಿವೆ. ಸರಕಾರದ ಕೆಲವು ಪ್ರಗತಿ ಯೋಜನೆಗಳು ಕೂಡ ಕೆಲವು ಬುಡಕಟ್ಟು ಜನಾಂಗಗಳನ್ನು ಒಕ್ಕಲು ಎಬ್ಬಿಸಿವೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕಾಶ್ಮೀರಿ ಪಂಡಿತರಿಗೆ ಆದ ಸಮಸ್ಯೆ ದೊಡ್ಡದೇ?
  11. ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಇದು ಸಂಘ ಪರಿವಾರದ ಶಕ್ತಿಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೊಳ್ಳುವ ಜೊತೆಗೆ ಆರ್.ಎಸ್.ಎಸ್. ನ ಗೀತೆ “ನಮಸ್ತೆ ಸದಾ ವತ್ಸಲೇ” ಸಭೀಕರು ಹಾಡುತ್ತಿರುವ ಒಂದು ತುಣುಕನ್ನು ಟ್ಯಾಗ್ ಮಾಡಿದ್ದಾರೆ. ಹಾಗಾದರೆ ದಿ ಕಾಶ್ಮೀರಿ ಪೈಲ್ಸ್ ಆರ್.ಎಸ್.ಎಎಸ್.ನ ಪ್ರಚಾರವೇ? ಹಾಗದರೆ ಆರ್.ಎಸ್.ಎಸ್ ವು ಕೇವಲ ಬ್ರಾಹ್ಮಣರಿಗೆ ಸೀಮಿತವೇ? ಹಿಂದೂ ಸಂಘಟನೆ ಅಲ್ಲವೇ?
  12. ಚಿತ್ರವನ್ನು ಮನೋರಂಜನೆ ಮಾಧ್ಯಮವಾಗಿ ನೋಡಲಿ ಆದರೆ ಸತ್ಯ ಹೇಳುವ ಕಥೆಯೆಂದು ಏಕೆ ಬಿಂಬಿಸಲಾಗುತ್ತಿದೆ?
  13. ಬಿ.ಜೆ.ಪಿ ರಾಜ್ಯ ಸರಕಾರಗಳಲ್ಲಿ ತೆರಿಗೆ ವಿನಾಯಿತಿ ಮಾಡಿರುವುದು ರಾಜ್ಯಂಗದ ಪ್ರಕಾರ ಎಷ್ಟು ಸರಿ?
  14. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇರುವಾಗ ಈ ಚಿತ್ರದ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ಚರ್ಚೆ ಬೇಕೆ?
  15. ಸ್ವಾಮಿ ವಿವೇಕಾನಂದರು ಹೇಳುವಂತೆ “ನಿನ್ನ ಧರ್ಮದ ಉನ್ನತ ವಿಚಾರಗಳನ್ನು ಹೇಳು ಆದರೆ ಬೇರೆ ಧರ್ಮದ ಬಗ್ಗೆ ಟೀಕೆ ಮಾಡಬೇಡ ಈ ವ್ಯಾಖ್ಯಾನವನ್ನು ಈ ದೇಶದ ಬುದ್ದಿ ಜೀವಿಗಳು ಆರ್.ಎಸ್.ಎಸ್. ನವರು ಹಿಂದೂ ರಾಜಕಾಣಿಗಳು ಹಿಂದೂ ಪರ ಸಂಘನೆಗಳು ಪಾಲಿಸುತ್ತಿದ್ದಾರಾ?
    ಹೋಗಲಿ ಬಿಡಿ ಸರ್ವ ಸಾಮಾನ್ಯನಾಗಿ ನಾನು ವಿಚಾರ ಮಾಡುವುದೇನೆಂದರೆ 80% ಹಿಂದೂಗಳು ಸೋತಿರುವುದು ಆತ್ಮ ವಿಮರ್ಶೆಯಿಲ್ಲದೆ. ಒಂದು ದೇಶದಲ್ಲಿ 80% ಇರುವ ಒಂದು ಧರ್ಮ ಒಂದು ಚಿತ್ರಕ್ಕೆ ಸೀಮಿತವಾಗಬೇಕೆ?
    ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಾವು ಸದೃಢ ಎಂದು ತೋರಿಸಿಕೊಳ್ಳಲು ಇಷ್ಟೇಲ್ಲಾ ಪ್ರಯತ್ನ ಬೇಕೆ! ನೂರು ಜನರಲ್ಲಿ 80 ಜನ ಒಂದಾದರೆ ಇನ್ನು 20 ಜನ ಏನು ಮಾಡುತ್ತಾರೆ? ಹಿಂದೂ ಪರ ಸಂಘನೆಗಳು ಮತ್ತು ಬಿ.ಜೆ.ಪಿ ಪಕ್ಷವು ಹಿಂದೂ ಪರ ಎನ್ನುತ್ತಲೇ ಮೇಲ್ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇನ್ನೂ ಕಾಂಗ್ರೆಸ್ ಪಕ್ಷವು ಮುಸ್ಲಿಂ ರು ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ಮೇಲ್ವರ್ಗವನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿವೆ? ಹಿಂದೂಗಳು ಅಂದರೆ ಬ್ರಾಹ್ಮಣರು, ಲಿಂಗಾಯಿತರು ಅಷ್ಟೇ? ದಲಿತರು ಸೇರಿದಂತೆ ಕೆಳವರ್ಗದವರು ಹಿಂದೂಗಳಲ್ಲವೇ? ಇಂತಹ ಅದೆಷ್ಟೋ ತಾರತಮ್ಯ ವಿಚಾರಗಳಿಂದ ಭಾರತದಲ್ಲಿ ಹಿಂದೂಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ? ದಿ ಕಾಶ್ಮೀರಿ ಪೈಲ್ಸ್ ಬದಿಗಿಟ್ಟು ಒಗ್ಗಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಭಾರತವು ವಿಶ್ವ ಗುರು ಆಗುತ್ತದೆ.

Share

ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ!

Share

ಅನಾರೋಗ್ಯದಿಂದ ಬಳಲುತ್ತಿದ್ದ  ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ನಿಧನರಾಗಿದ್ದಾರೆ.

ಕಳೆದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಜಯಂತಿ ಎರಡು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ರಾತ್ರಿ ಈ ಸಮಸ್ಯೆ ಉಲ್ಭಣಗೊಂಡು ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

1968ರಲ್ಲಿ ‘ಜೇನುಗೂಡು’ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶಿಸಿದ್ದ ನಟಿ ಜಯಂತಿ ಕನ್ನಡದ ಒಟ್ಟು 190 ಸಿನಿಮಾ ಸೇರಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿಕೊಂಡಿದ್ದರು. ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹೀಗೆ ಆರು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತಿ ಹೊಂದಿದ್ದರು.

ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

ಜಯಂತಿ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಅಭಿನಯ ಶಾರದೆ ಕಳೆದುಕೊಂಡ ಸ್ಯಾಂಡಲ್‌ವುಡ್‌ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


Share

ಬೆಂಗಳೂರಿನಲ್ಲಿ ಆಟೋ ರಾಮಣ್ಣ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ

Share

ಕನ್ನಡ ಚಿತ್ರರಂಗದ ಅಪ್ರತಿಮ ನಾಯಕ ನಟರಾದ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಅಭಿಮಾನಿ ಆಟೋ ರಾಮಣ್ಣನವರ ಆಟೋ ರಾಮಣ್ಣ ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂ 18ನೇ ಕ್ರಾಸ್ ರೇಣುಕಾಂಬ ಥಿಯೇಟರ್ ನಲ್ಲಿ ಚಿತ್ರ ರಸಿಕರ ನಡುವೆ ಸರಳವಾಗಿ ನಡೆಯಿತು. ಚಿಕ್ಕವಯಸ್ಸಿನಿಂದಲೂ ಮೆಟ್ರೋ ರಾಜ ಶಂಕರ್ ನಾಗ್ ರವರ ಅಭಿಮಾನಿಯಾಗಿದ್ದ ಈ ಆಟೋ ರಾಮಣ್ಣನವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನವೇ, ತನ್ನ ಹುಟ್ಟೂರಿನಲ್ಲಿ ಹಸು ಮೇಯಿಸಿ, ಪಟ್ಟಣದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿ ಕ್ಲೀನರ್ ಆಗಿ, ನಂತರದ ವರ್ಷಗಳಲ್ಲಿ ಆಟೋ ಡ್ರೈವರ್ ಆಗಿ ಜನರ ಸಾರಥಿಯಾಗಿ ನೋಡುಗರಿಗೆ ಆಟೋ ರಾಮಣ್ಣ ಎಂದೇ ಹೆಸರನ್ನುಗಳಿಸಿಕೊಂಡು, ತನ್ನ ನಿರ್ದೇಶನದ ಕನ್ನಡ ಚಿತ್ರವೊಂದಕ್ಕೆ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಸಾಹಸ ಗಾಯನ ನೃತ್ಯದ ಜೊತೆಗೆ ನಿರ್ಮಾಣ ಮಾಡಿದ್ದಾರೆ ಎಂದರೆ, ನಿಜಕ್ಕೂ ಅಚ್ಚರಿಯೇ ; ಹಾಗೇ ಸಿನಿಮಾ ಯುವ ವರ್ಗದವರಿಗೆ ಸ್ಪೂರ್ತಿಯೇ ಹೌದು !

ಚಿತ್ರದ ನಾಯಕ ಆಟೋ ರಾಮಣ್ಣ ಮಾತನಾಡಿ ” ನನ್ನ ಸನ್ನಿಧಾನಕ್ಕೆ ಬಂದ 25 ಜನರ ಹುಡುಗಿಯರ ಭಾವಚಿತ್ರದಲ್ಲಿ ಯೋಗಶ್ರೀ ಹುಡುಗಿಯನ್ನು ನನ್ನ ಚಿತ್ರಕ್ಕೆ ಆಯ್ಕೆ ಮಾಡಿದಾಗ, ಕೆಲವರು ಈ ಹುಡುಗಿ ಮುಖ ಲಕ್ಷಣ ಚೆನ್ನಾಗಿಲ್ಲ ಎಂದರು. ಅವರ ಮಾತಿಗೆ ನಾನು ತಲೆಕೆಡಿಸಿಕೊಳ್ಳದೇ, ಅವಳ ಪ್ರತಿಭೆಯನ್ನು ಈ ಚಿತ್ರಕ್ಕೆ ಹಿಂಡಿ ಬಳಸಿಕೊಂಡಿದ್ದೇನೆ. ಅಲ್ಲದೇ ನನ್ನ ಚಿತ್ರದಲ್ಲಿ ಪ್ರತೀಕ್ಷಾ ಅನ್ನೋ ಹುಡುಗಿ ಚೆನ್ನಾಗಿ ಅಭಿನಯ ಮಾಡಿದೆ. ನಾನು ಚಿತ್ರರಂಗಕ್ಕೆ ಬರುವ ಮುನ್ನವೇ, ಹಲವು ಜನರ ಮಾತಿನಿಂದ ನೊಂದು ಅವಮಾನ ಗೊಂಡಿದ್ದೇನೆ. ಅವಮಾನಗಳೇ ನನಗೆ ಮೆಟ್ಟಿಲಾಗಿ ಸನ್ಮಾನ ಗಳಾಗಿವೆ. ನಾನು ಸಾಯುವ ಮುನ್ನ ಇತಿಹಾಸವನ್ನು ಸೃಷ್ಟಿಸಿ ಹೋಗಬೇಕೆನ್ನುವ ಬಯಕೆ ಇದೆ. ಚಿತ್ರರಂಗಕ್ಕೆ ನಾನು ಬರಲು ನನ್ನ ಹೆಂಡತಿಗೆ ಇಷ್ಟವಿರಲಿಲ್ಲ. ಬಂದ ನಂತರ ನನ್ನ ಹೆಂಡತಿ ವಿಷ ಕುಡಿದಳು ಅವಳನ್ನು ಬದುಕಿಸಿಕೊಳ್ಳಲು 50 ಸಾವಿರ ಬೇಕಾಯಿತು. ನಮ್ಮ ಸ್ನೇಹಿತರು ನನಗೆ ಸಹಾಯ ಮಾಡಿದರು ಅವರಿಗೆ ನಾನು ಅಭಾರಿ, ನನ್ನ ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸಿದರೆ, 10 ವರ್ಷದಲ್ಲಿ 50 ಚಿತ್ರವನ್ನು ತೆಗೆಯಬೇಕು ಎಂದುಕೊಂಡಿದ್ದೇನೆ ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯ ಎಂದರು.

ಸಾಹಿತಿ ದೊಡ್ಡರಂಗೇಗೌಡರು ಮಾತನಾಡಿ, ಈ ಚಿತ್ರಕ್ಕೆ ನಾನು ಸಹ ಆರು ಸನ್ನಿವೇಶಗಳಿಗೆ ಹಾಡುಗಳನ್ನು ಬರೆದಿರುವೆ, ಇಡೀ ಭಾರತೀಯ ಚಿತ್ರರಂಗವೇ ನೋಡುವ ಒಂದು ಗೋವಿನ ಹಾಡಿದೆ. ಆ ಹಾಡಿನ ಮೇಲೆ ನನಗೆ ವಿಶ್ವಾಸವಿದೆ ಒಬ್ಬ ಬರಹಗಾರನಾಗಿ ನಾನು ಹೇಳ್ತಾ ಇದ್ದೀನಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಆ ಹಾಡು ಜಯಭೇರಿ ಬಾರಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಇನ್ನೂ ಹಾಸ್ಯನಟ ಡಿಂಗ್ರೀ ನಾಗರಾಜು ಮಾತನಾಡಿ ” ನಾನು ಬೇರೆ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗ ಆಟೋ ರಾಮಣ್ಣ ನನ್ನ ಬಳಿ ಬಂದು, ಸರ್ ನಾನು ಚಿತ್ರ ಮಾಡ್ತಾ ಇದ್ದೀನಿ ನಾನು ದಿನಕ್ಕೆ ನಿಮಗೆ 5000 ಕೊಡ್ತೀನಿ ತಾವು ಒಪ್ಪಿ ಚಿತ್ರ ಮುಗಿಸಿ ಕೊಡಿ ಎಂದರು. ಆಗ ನಾನು ಒಪ್ಪಿಕೊಂಡು ನಂತರ ಬೆಳಿಗ್ಗೆ ನಾನು ಇದ್ದ ಕಡೆ ಆಟೋ ಬಂದಾಗ, ಸರ್ ಆಟೋ ಬಂದಿದೆ ಹೋಗೋಣ ಹತ್ತಿ ಎಂದರು. ನಾನು ಅವಾಗ ಇದೇನಪ್ಪಾ..! ಶೂಟಿಂಗ್ ಸ್ಥಳಕ್ಕೆ ಆಟೋದಿಂದ ಡ್ರಾಪ ಎಂದು ಆಶ್ಚರ್ಯಪಟ್ಟೆ, ಆದ್ರೂ ರಾಮಣ್ಣ ಶೂಟಿಂಗ್ ಮುಗಿಯುವ ತನಕ ಚಿತ್ರಕ್ಕೆ ಶ್ರಮಿಸಿರುವ ಎಲ್ಲರನ್ನೂ ಆಟೋದಿಂದಲೇ, ಶೂಟಿಂಗ್ ಸ್ಥಳದಿಂದ ಮನೆಗೆ ಮನೆಯಿಂದ ಶೂಟಿಂಗ್ ಸ್ಥಳಕ್ಕೆ ಡ್ರಾಪ್ ಮಾಡಿಸ್ತ ಇದ್ರು. ಆಟೋದಲ್ಲಿ ಅವರು ದುಡಿದು ಅದರಿಂದ ಬಂದ ಲಾಭದಲ್ಲಿ ಈ ಚಿತ್ರವನ್ನು ಮಾಡಿಯೇ ಇವತ್ತು ಧ್ವನಿಸುರುಳಿ ಬಿಡುಗಡೆ ಮಾಡಿ ಇನ್ನೇನೋ, ಬಿಡುಗಡೆ ಹಂತಕ್ಕೆ ತಂದಿದ್ದಾರೆ ಎಂದರೇ, ಅವರಿಗೆ ದೊಡ್ಡದೊಂದು ಸಲಾಂ ಸಲ್ಲಿಸಬೇಕು. ಶೂಟಿಂಗ್ ಸ್ಥಳಕ್ಕೆ ಊಟವನ್ನು ಅಷ್ಟೇ, ಆಟೋದಲ್ಲಿ ತರಿಸುತ್ತಿದ್ದರು. ಕಲಾವಿದರಿಗೂ ಅಷ್ಟೇ ಸರಿಯಾದ ಸಮಯಕ್ಕೆ ಹಣ ಕೊಡುತ್ತಿದ್ದರು. ಈ ರಾಜ್ಯದಲ್ಲಿರುವ ಪ್ರತಿಯೊಬ್ಬ
ಆಟೋ ಡ್ರೈವರ್ ಗಳು ಸಿನಿಮಾ ನೋಡಿದ್ರೆ ಖಂಡಿತವಾಗಲೂ ಇವರು ಇನ್ನೊಂದು ಸಿನಿಮಾ ಮಾಡ್ತಾರೆ. ಈಗಾಗಲೇ ಅವರು ಕಥೆ ಬರೆದು ತಯಾರಿ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ಈ ಚಿತ್ರಕ್ಕೆ ಶುಭ ಹಾರೈಸಿದರು.

ವರದಿ : ಮಳವಳ್ಳಿ ಮಾದೇಶ್


Share

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಬಿ. ಜಯಾ ಇನ್ನಿಲ್ಲ

Share

ಚಂದನವನದ ಒಂದೊಂದೇ ಹಿರಿಯ ಕೊಂಡಿಗಳು ಕಳಚಿಕೊಳ್ಳುತ್ತಿವೆ. ಕೆಲವೇ ದಿನಗಳ ಹಿಂದೆ ‘ಶಂಖನಾದ’ ಅರವಿಂದ್, ಕೃಷ್ಣೇ ಗೌಡ, ನಿರ್ಮಾಪಕ ರಾಮು ಮುಂತಾದವರು ಕೊನೆಯುಸಿರು ಎಳೆದಿದ್ದಾರೆ. ಇದೀಗ ಖ್ಯಾತ ಹಿರಿಯ ನಟಿ ಬಿ. ಜಯಾ ಅವರು ಕೂಡ ನಿಧನರಾಗಿದ್ದಾರೆ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ. ಜಯಾ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಗುರುವಾರ (ಜೂ.3) ನಿಧನರಾಗಿದ್ದಾರೆ. ಅವರು ಒಂದು ತಿಂಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದರು ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ, ಕೊನೆಯುಸಿರೆಳೆದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಸುಮಾರು 6 ದಶಕಗಳಿಗೂ ಅಧಿಕ ಸಮಯ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಜಯಾ ಗುರುತಿಸಿಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಹಾಸ್ಯನಟಿ ಎಂದು ಜಯಾ ಜನಪ್ರಿಯರಾಗಿದ್ದರು. ಮೂರು ತಲೆಮಾರಿನ ನಟ, ನಟಿಯರೊಂದಿಗೆ ಅಭಿನಯಿಸಿರುವ ಹೆಗ್ಗಳಿಕೆ ಅವರದು. ಹಾಸ್ಯ ದಿಗ್ಗಜರಾದ ನರಸಿಂಹರಾಜು, ದ್ವಾರಕೀಶ್ ಮುಂತಾದವರೊಂದಿಗೆ ಜಯಾ ನಟಿಸಿದ ಹಾಸ್ಯ ದೃಶ್ಯಗಳು ಇಂದಿಗೂ ಜನಪ್ರಿಯ. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ರಂಗಭೂಮಿ, ಕಿರುತೆರೆಯಲ್ಲೂ ಅವರು ಬಹಳ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಚಿತ್ರರಂಗ ಮತ್ತು ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.

1958ರಲ್ಲಿ ತೆರೆಕಂಡ ‘ಭಕ್ತ ಪ್ರಹ್ಲಾದ’ ಸಿನಿಮಾ ಜಯಾ ಅವರು ಚೊಚ್ಚಲ ಸಿನಿಮಾ. ಡಾ. ರಾಜ್‌ಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕೀರ್ತಿ ಅವರದ್ದು. ಆಗಿನ ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಈಗಿನ ಯುವ ಪೀಳಿಗೆಯ ನಟರೊಂದಿಗೂ ಜಯಾ ನಟಿಸಿರುವುದು ವಿಶೇಷ.

ಅಂಬರೀಷ್ ನಟನೆಯ ‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ‘ದೈವಲೀಲೆ’, ‘ವಿಧಿ ವಿಲಾಸ’, ‘ಬೆಳ್ಳಿಮೋಡ’, ‘ಚಿನ್ನದ ಗೊಂಬೆ’, ‘ಪ್ರತಿಜ್ಞೆ’, ‘ಮಹದೇಶ್ವರ ಪೂಜಾಫಲ’, ‘ನ್ಯಾಯವೇ ದೇವರು’, ‘ಕುಲಗೌರವ’, ‘ಪೂರ್ಣಿಮಾ’, ‘ನಗುವ ಹೂವು’, ‘ಮುಕ್ತಿ’, ‘ಮಣ್ಣಿನ ಮಗ’, ‘ಶ್ರೀಕೃಷ್ಣ ದೇವರಾಯ’, ‘ಜೀವನ ಜೋಕಾಲಿ’, ‘ದೇವರು ಕೊಟ್ಟ ತಂಗಿ’, ‘ಗಂಧದ ಗುಡಿ’, ‘ಶುಭಮಂಗಳ’, ‘ದಾರಿ ತಪ್ಪಿದ ಮಗ’, ‘ಪ್ರೇಮದ ಕಾಣಿಕೆ’ ಮುಂತಾದ ಸಿನಿಮಾಗಳಲ್ಲಿ ಜಯಾ ನಟಿಸಿದ್ದರು. 1983ರಲ್ಲಿ ಕುಮಾರೇಶ್ವರ ನಾಟಕ ಸಂಘ ಕಟ್ಟಿದ ಬಿ. ಜಯಾ ಅವರು 1992ರವರೆಗೆ ಕಂಪನಿ ನಡೆಸಿದರು.


Share

ಕೋಟಿ ರಾಮುನ ಯಶೋಗಾಥೆ

Share

 

ಚಂದನವನದ ಗಟ್ಟಿ ನಿರ್ಮಾಪಕ, ಹೃದಯವಂತ, ಕೋಟಿ ನಿರ್ಮಾಪಕನೆಂದೇ ಖ್ಯಾತಿಯಾಗಿರುವ ಕನ್ನಡ ದುರ್ಗಿಯಾದ ಮಾಲಾಶ್ರೀಯ ಪತಿ ರಾಮು. ರಾಮು ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನವರು. ಚಿತ್ರರಂಗದ ಆಸೆ ಮತ್ತು ಬದುಕು ಕಟ್ಟಿಕೊಳ್ಳಬೇಕೆಂಬ ಹೆಬ್ಬಯಕೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಗಾಲ್ಫ್ ಕ್ಲಬ್‌ನಲ್ಲಿ ಸರ್ವರ್ ಆಗಿ ಹಲವಾರು ದಿನಗಳವರೆಗೆ ಕೆಲಸವನ್ನು ಮಾಡಿದ್ದಾರೆ. ರಾಮು ಅವರ ಬದುಕಿನಲ್ಲೂ ಕೂಡ ಹಲವಾರು ಅವಮಾನಗಳನ್ನು ಅನುಭವಿಸಿ ಬೆಳೆದ ಹೆಮ್ಮರ. ಹೋಟೆಲ್ ಉದ್ಯೋಗದಲ್ಲಿ ಊಟ, ಬಟ್ಟೆ, ವಸತಿ, ಸಿಕ್ಕಿದ್ದರಿಂದ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟು ಗಾಲ್ಫ್ ಕ್ಲಬ್‌ಗೆ ಬರುವ ಹಲವಾರು ಗಣ್ಯಾತಿಗಣ್ಯರ ಮುಂದೆ ತಮ್ಮ ಚಲನಚಿತ್ರದ ಆಸೆಯನ್ನು ಹೇಳುತ್ತಿದ್ದರು. ರಾಮು ಅವರ ಈ ಕನಸನ್ನು ವೈ.ಎನ್.ಕೆ. ಎಂಬುವವರು ಪ್ರೋತ್ಸಾಹಿಸಿ, ಶುಭ ಹಾರೈಸಿ ಸಹಾಯ ಮಾಡಿದರು. ರಾಮು ಅವರು ಏನೇ ಕೆಲಸ ಮಾಡಿದರೂ ಅವರಿಗೆ ಚಲನಚಿತ್ರದ ಮಿಡಿತ, ಮನರಂಜನೆ ಸದಾ ತುಂಬಿರುತ್ತಿತ್ತು. ಈ ಮಧ್ಯೆ ರಾಮು ಅವರು “ಚೈತ್ರದ ಪ್ರೇಮಾಂಜಲಿ” ಚಿತ್ರದ ಹಂಚಿಕೆಯನ್ನು ಕೆಲವು ಭಾಗಕ್ಕೆ ಪಡೆಯುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೧೯೬೯ರಲ್ಲಿ ಹುಟ್ಟಿದ ರಾಮು ಅವರಿಗೆ ಚಿತ್ರಗಳ ಹಂಚಿಕೆಯಿAದ ತಮ್ಮ ಸಿಹಿ ಕನಸು ನನಸಾಗುವ ದಿಶೆಯಲ್ಲಿತ್ತು. ಹಲವಾರು ಚಿತ್ರಗಳನ್ನು ಹಂಚಿಕೆ ಮಾಡುವ ಮೂಲಕ ಚಿತ್ರಗಳ ಯಶಸ್ಸಿಗೆ ಕಾರಣರಾದರು. ಅವರು ಹಂಚಿಕೆಯಿAದ ಪಡೆದ ಲಾಭದಲ್ಲಿ ನಿರ್ಮಾಪಕರಾಗಿ “ಅಧಿಪತಿ” ಚಿತ್ರವನ್ನು ನಿರ್ಮಿಸಿದರು. ಆದರೂ ಕೂಡ ಅವರಿಗೆ ಒಳ್ಳೆಯ ಬುನಾದಿ ಸಿಕ್ಕಿದ್ದು, “ಲಾಕಪ್‌ಡೆತ್” ಚಿತ್ರದ ಮೂಲಕ. ಕೋಟಿ ಹಣವನ್ನು ಹಾಕಿ ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತೆ “ಲಾಕಪ್‌ಡೆತ್” ಚಿತ್ರ ನಿರ್ಮಿಸಿದರು. ಈ ಚಿತ್ರದ ಮೂಲಕವೇ ನಿರ್ದೇಶಕ ಓಂ ಪ್ರಕಾಶ್ ರಾವ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಗೆ ಚಿತ್ರರಂಗದಲ್ಲಿ ಹೆಸರು ತಂದು ಕೊಟ್ಟಿತ್ತು. ಈ ಯಶಸ್ಸಿನಿಂದ ರಾಮು ಅವರು ಸುಮಾರು ಚಿತ್ರಗಳನ್ನು ನಿರ್ಮಿಸಿದರು. ಇವರ ಸರಳತೆ ಸಜ್ಜನಿಕೆ ಕಂಡು ಕನ್ನಡದ ಖ್ಯಾತ ನಟಿ, ಕನಸಿನ ರಾಣಿ ಎಂದೇ ಪ್ರಸಿದ್ಧರಾಗಿರುವ ಮಾಲಾಶ್ರೀರವರು ಇವರನ್ನು ಪ್ರೀತಿಸಿ ೧೯೯೫ರಲ್ಲಿ ಮದುವೆಯಾದರು. ನಂತರದ ದಿನಗಳಲ್ಲಿ ನಟಿಯನ್ನೇ ಮನೆಯಲ್ಲಿಟ್ಟುಕೊಂಡು ಚಿತ್ರ ಮಾಡದಿದ್ದರೆ ಹೇಗೆ ? ವರ್ಷಕ್ಕೆ ೧ ರಂತೆ ಮಾಲಾಶ್ರೀಯವರನ್ನೇ ಹಾಕಿಕೊಂಡು ಚಿತ್ರ ಮಾಡುತ್ತಾ ಬಂದರು. ಇವರದೊಂದು ಮುದ್ದಾದ ಸಂಸಾರ. ಪ್ರೀತಿಯ ಜೋಡಿಗೆ ಅಮೃತ ಎಂಬ ಮಗಳು, ದೇವದಾಸ್ ಎಂಬ ಮಗನಿದ್ದಾನೆ. ದೇವದಾಸ್ ಓರ್ವ ಬಾಲನಟನಾಗಿ ೨೦೦೭ರಲ್ಲಿ ಆನಂದ ಭೈರವಿ ಎಂಬ ಮಲಯಾಳಿ ಚಿತ್ರದಲ್ಲಿ ನಟನೆ ಮಾಡಿದರು. ಮುಂದೆ ಹಲವಾರು ನಟನೆಯ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ಮಾಪಕ ರಾಮುರವರು “ಲಾಕಪ್‌ಡೆತ್” ಚಿತ್ರದಿಂದ ತಮಿಳಿನ “೯೯” ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುವ ಮೂಲಕ ಚಿತ್ರದ ಮಧ್ಯೆ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. ೧೯೯೫ರ ನಂತರ ಹೆಚ್ಚಾಗಿ ಮಾಲಾಶ್ರೀ ಅವರ ಚಿತ್ರಗಳ ನಿರ್ಮಾಣ ಮಾಡುತ್ತಾ ಬಂದಿದ್ದು, ಬೇರೆ ಚಿತ್ರಗಳು ಕಮ್ಮಿ ಎನ್ನಬಹುದು. “೯೯” ಚಿತ್ರವನ್ನು ಹೊರತುಪಡಿಸಿದರೆ ಇನ್ನು ಬಿಡುಗಡೆಯಾಗದ ಪ್ರಜ್ವಲ್ ದೇವರಾಜ್, ಅಭಿನಯದ ಅರ್ಜುನ್‌ಗೌಡ ಚಿತ್ರವು ಅತ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರವು ತೆರೆಗೆ ಬರುವ ಮುನ್ನ ಕೋವಿಡ್-೧೯ ಮಹಾಮಾರಿಗೆ ೨೦೨೧ರ ಏಪ್ರಿಲ್ ೨೬ರಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಇಹಲೋಕವನ್ನು ತ್ಯಜಿಸಿದರು. ರಾಮು ಓರ್ವ ಚಿಂತಕ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವುಳ್ಳ ವ್ಯಕ್ತಿ. ತ್ಯಾಗಿ ತ್ಯಾಗಕ್ಕೆ ಉದಾಹರಣೆ ಹೇಳಬೇಕೆಂದರೆ, ಪುನೀತ್ ರಾಜ್‌ಕುಮಾರ್‌ರವರಿಗೆ “ರಾಜಕುಮಾರ” ಟೈಟಲ್ ಬಿಟ್ಟು ಕೊಟ್ಟಿರುವುದು. ಹೀಗೆ ಹಲವಾರು ಬಹುಮುಖ ಪ್ರತಿಭೆ ತಮ್ಮ ೫೨ನೇ ವಯಸ್ಸಿನಲ್ಲೇ ಕರೋನಾ ಮಾರಿಗೆ ಬಲಿಯಾಗಿದ್ದು, ಕನ್ನಡ ನಾಡಿಗೆ ತುಂಬಲಾರದ ನಷ್ಟ.


Share