ಕಾಳಗಿಯಲ್ಲಿ ಕರ್ನಾಟಕ ರಾಜ್ಯೋತ್ಸವ ವೈಭವ

Share

ಕಾಳಗಿ:- ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ ಮಹತ್ವದ ಸ್ಥಾನ ಹೊಂದಿ, ಕವಿರಾಜ ಮಾರ್ಗ ಅತಿ ಮಹತ್ವದ ಕೃತಿಯಾಗಿ, ಕನ್ನಡ ನಾಡು ಮೌಲಿಕ ವಿಷಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾಷೆಯಾಗಿದೆ ಎಂದು ಸಾಹಿತಿ, ಪ್ರಾಧ್ಯಾಪಕ ಡಾ. ಶಿವಶರಣಪ್ಪ ಮೊತಕಪಳ್ಳಿ ಹೇಳಿದರು.

ಪಟ್ಟಣದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಯುವ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹಾಗೂ ಪರಂಪರೆ ಹೊಂದಿರುವ ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡ ಭಾಷೆಗೆ ಸಲ್ಲುತ್ತದೆ. ಕನ್ನಡ ನಾಡಿನ ಶಿಲ್ಪಕಲೆ, ಸಾಹಿತ್ಯ ಅಮೋಘವಾಗಿದೆ. ಕನ್ನಡ ನಾಡನ್ನು ಆಳಿದ ಅನೇಕ ರಾಜಮನೆತನಗಳು ಕನ್ನಡ ಭಾಷೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿವೆ. ಈ ಸುಂದರ ನಾಡಿನಲ್ಲಿ ವಾಸವಿರುವ ನಾವೇ ಧನ್ಯರು.
ನಾವು ನಮ್ಮ ಮಕ್ಕಳನ್ನು ಮಾತೃ ಭಾಷೆ ಕನ್ನಡದಲ್ಲೇ ಓದಿಸುವುದರ ಮೂಲಕ ಕನ್ನಡ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿದರು.

ಯುವ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಂಗಮನಾಥ ಹಿರೇಗೌಡ ಮಾತನಾಡಿ, ಕನ್ನಡ ಹಬ್ಬ ಆಚರಿಸುವ ಮೂಲಕ ಕನ್ನಡ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು. ಕನ್ನಡ ಕೂಗು ನವಂಬರ್ ತಿಂಗಳಿಗಷ್ಟೇ ಸೀಮಿತವಾಗದೆ ವರ್ಷಪೂರ್ತಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಶಾಸ್ತ್ರಿ ಮಾತನಾಡಿದರು. ಇದೇ ವೇಳೆ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಮೊದಲು ಬೆಳಗ್ಗೆ ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಸರ್ಕಾರಿ ಪ್ರೌಢ ಶಾಲಾ ಆವರಣದಿಂದ ಅಂಬೇಡ್ಕರ್ ವೃತ್ತ, ಹಳೆ ಬಸ್ ನಿಲ್ದಾಣ, ಮುಖ್ಯಬಜಾರ ಮೂಲಕ ನೀಲಕಂಠ ಕಾಳೇಶ್ವರ ದೇವಸ್ಥಾನದ ವರೆಗೆ ವಿವಿಧ ಕಲಾ ತಂಡಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯಗಳ ಮೂಲಕ ಅದ್ದೂರಿ ಮೆರವಣಿಗೆ ಜರುಗಿತು. ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಚಾಲಕರ ಸಂಘದಿಂದ ಕ್ರೋಸರ್ ಯ್ರಾಲಿ ನಡೆಯಿತು.

ತಹಶಿಲ್ದಾರ ಘಮಾವತಿ ರಾಠೋಡ ಕಾರ್ಯಕ್ರಮ ಉದ್ಘಾಟಿಸಿದರು. ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಕಾಳಗಿ ನೀಲಕಂಠ ಮರಿದೇವರು, ಯುವ ಕರಸೇ ತಾಲೂಕು ಗೌರವಾಧ್ಯಕ್ಷ ಪರಮೇಶ್ವರ ಕಟ್ಟಿಮನಿ, ತಾಲೂಕಾಧ್ಯಕ್ಷ ದತ್ತು ಗುತ್ತೇದಾರ, ನೀಲಕಂಠ ಗುತ್ತೇದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವಲಿಂಗಪ್ಪ ಡಿಗ್ಗಿ, ಪಿಡ್ಬ್ಲೂಡಿ ಎಇಇ ಮಲ್ಲಿಕಾರ್ಜುನ ದಂಡಿನ, ಸಿಪಿಐ ಜಗದೇವಪ್ಪ ಪಾಳ, ಕೃಷಿ ಅಧಿಕಾರಿ ಸರೋಜ ಕಲಬುರಗಿ, ಜೆಸ್ಕಾಂ ಎಇಇ ಇಲೀಯಾಜ್ ಅಹ್ಮದ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅನೀಲಕುಮಾರ ಗುತ್ತೇದಾರ, ಮಾಜಿ ಅಧ್ಯಕ್ಷ ಶರಣಗೌಡ ಪೆÇೀಲಿಸ್ ಪಾಟೀಲ, ಸಿಡಿಪಿಓ ಆರತಿ ತುಪ್ಪದ, ರಾಘವೇಂದ್ರ ಗುತ್ತೇದಾರ, ಮಲ್ಲಿನಾಥ ಪಾಟೀಲ, ಯುವ ಕರಸೇ ತಾಲೂಕು ಉಪಾಧ್ಯಕ್ಷ ಬಾಬು ನಾಟೀಕಾರ, ಚಿತ್ರಶೇಖರ ದಂಡೋತಿಕರ್, ದೀಲೀಪ ಅರಣಕಲ್, ಅನೀಲಕುಮಾರ ಗುತ್ತೇದಾರ, ಇಬ್ರಾಹಿಂ ಶಾ, ಕಾಳಶೆಟ್ಟಿ ಬೆಳಗುಂಪ್ಪಿ, ರೇವಣಸಿದ್ಧ ಪೂಜಾರಿ, ಮಂಜುನಾಥ ದಂಡಿನ, ಅವಿನಾಶ್ ಗುತ್ತೇದಾರ, ದತ್ತಾತ್ರೇಯ ಮದ್ದೂರ, ಕಾಳಪ್ಪ ತಳವಾರ, ಪ್ರಶಾಂತ ಕದಮ, ಶಿವಶರಣಪ್ಪ ಕಮಲಾಪೂರ, ಶಿವಶರಣಪ್ಪ ಗುತ್ತೇದಾರ, ವಿಶ್ವನಾಥ ವನಮಾಲಿ, ಸಂತೋಷ ನರನಾಳ, ಪರಮೇಶ್ವರ ಮಡಿವಾಳ ಇತರರು ಇದ್ದರು.

ದಯಾನಂದ ಹೊಸಮನಿ ಸ್ವಾಗತಿಸಿದರು, ಐಶ್ವರ್ಯ ಪ್ರಾರ್ಥಿಸಿದರು, ಬಾಬು ನಾಟೀಕಾರ ಪ್ರಾಸ್ತಾವಿಕ ಮಾತನಾಡಿದರು, ಶಿವರುದ್ರಯ್ಯಸ್ವಾಮಿ ಸಾಲಿ ನಾಡಗೀತೆ ಹಾಡಿದರು. ಪ್ರೀಯಾಂಕ ದಂಡಿನ ನಿರೂಪಿಸಿ ವಂದಿಸಿದರು ‌ ‌

ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ್


Share

ಶಕ್ತಿ ಯೋಜನೆಯ ಉಚಿತ ಬಸ್ಸ್ ಸ್ವಾಗತಿಸಿ ಸಂಭ್ರಮಿಸಿದ ಪಳ್ಳಿ ಗ್ರಾಮಸ್ಥರು

Share

ಕರ್ನಾಟಕ ಸರಕಾದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಬಸ್ಸನ್ನು ಇಂದು ಬೆಳಿಗ್ಗೆ ಪಳ್ಳಿ- ನಿಂಜೂರು ರಸ್ತೆಯಲ್ಲಿ ಪಳ್ಳಿ ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿಸುವುದರ ಮೂಲಕ ಸ್ವಾಗತಿಸಿದರು, ಪಳ್ಳಿ ವೃತ್ತದಲ್ಲಿ ಮೊದಲೇ ಸೇರಿದ್ದ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಸ್ಸ್ ಬಂದು ನಿಲ್ಲುತ್ತಿದ್ದಂತೆ ಬಾಳೆ ಗಿಡ ಹಾಗೂ ಹೂವಿನ ಮಾಲೆಗಳಿಂದ ಬಸ್ಸನ್ನು ಶೃಂಗಾರ ಮಾಡಿ ಅರ್ಚರ ಮೂಲಕ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿ ಸರಕಾರಕ್ಕೆ ಜೈಕಾರ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ಅನುಕೂಲವಾಗುವಂತೆ ಸ್ಥಳಿಯರ ಮನವಿಯ‌ ಮೇರೆಗೆ ಈ ಯೋಜನೆಯನ್ನು ತರಲಾಗಿದೆ, ಸಾರಿಗೆ ಸಚಿವರ ಸಹಕಾರದಲ್ಲಿ ಇದು ಸಾದ್ಯವಾಯಿತು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಈ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೂ ವಿಸ್ತರಿಸುವ ಅವಶ್ಯಕತೆ ಇದ್ದೆ ಎಂದರು.
ಬ್ಲಾಕ್ ಅದ್ಯಕ್ಷ ಶುಭದರಾವ್ ಮಾತನಾಡಿ ಕಾರ್ಕಳ ತಾಲೂಕಿನಲ್ಲಿ ಗ್ಯಾರಂಟಿಯ ಎಲ್ಲಾ ಐದು ಯೋಜನೆಗಳು ತಲುಪಿದ ಮೊದಲ ಗ್ರಾಮ ಪಳ್ಳಿ, ಸರಕಾರ ಈ ಯೋಜನೆಗಳನ್ನು ಪ್ರಾರಂಭಿಸಿದಾಗ ಅವಹೇಳನ ಮಾಡಿದ ಬಿಜೆಪಿ ಮುಖಂಡರು ಈಗ ಬಸ್ಸಿನ ಮುಂಭಾಗದಲ್ಲಿ ‌ನಿಂತು ಪೋಸ್ ಕೊಡುತ್ತಾರೆ ಈ ಯೋಜನೆಯ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಿಗಿಲ್ಲ, ಈ ರಸ್ತೆಯಲ್ಲಿ ಬಸ್ಸ್ ಬರಲು ಕಾರಣಕರ್ತರಾದ ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಸಮಿತಿಯ ಅದ್ಯಕ್ಷ ವಿಶ್ವನಾಥ್ ಭಂಡಾರಿ, ತಾ.ಪಂ ಮಾಜಿ ಸದಸ್ಯ ಸುಧಾಕರ್ ಶೆಟ್ಟಿ, ಕಾಂತಿ ಶೆಟ್ಟಿ ಸ್ಥಳಿಯರಾ ಚಂದ್ರಶೇಖರ್ ಶೆಟ್ಟಿ ಸಂತೋಷ್ ಶೆಟ್ಟಿ, ವಿಜಯ್ ಎಂ. ಶೆಟ್ಟಿ, ರಘುನಾಥ್ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.


Share

ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮ

Share

ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮ ನ.30 ಡಿ.01ರಂದು ಹಮ್ಮಿಕೊಳ್ಳ ಲಾಗುತ್ತಿದ್ದು ಕೆ.ಆ‌ರ್.ನಗರದಿಂದ ಚುಂಚನಕಟ್ಟೆ ಮಾರ್ಗದಲ್ಲಿ ವಿದ್ಯುತ್ ಅಲಂಕಾರ ಮಾಡಬೇಕು. ಹೆಸರಾಂತ ಕಲಾವಿದರಿಂದ ರಸಸಂಜೆ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಏರ್ಪಡಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ವಸ್ತು ಪ್ರದರ್ಶನ ಹಾಗೂ ವಿವಿಧ ಮಳಿಗೆಗಳನ್ನು ಆವರಣದಲ್ಲಿ ತೆರೆಯಬೇಕು. ಜಲಪಾತೋತ್ಸವ ಸಂಬಂಧ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಹೆಲ್ತ್ ಕ್ಯಾಂಪ್ ಮಾಡಿ ಬರುವ ಪ್ರವಾಸಿಗರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ ಉತ್ತಮ ವೇದಿಕೆ ವ್ಯವಸ್ಥೆ ಮಾಡಬೇಕು. ರಸ್ತೆ ಪಾಟ್ ಹೋಲ್‌ಗಳನ್ನು ಮುಚ್ಚುವ ವ್ಯವಸ್ಥೆ ಮಾಡಬೇಕು. ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಾಂ ಸ್ಕೃತಿಕ ಕಾರ್ಯಕ್ರಮ ನೀಡಲು ಕಲಾವಿದರನ್ನು ಗುರುತಿಸಿ ಕರೆಸಲು ಕ್ರಮ ವಹಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ

ಅಧಿಕಾರಿ ಕೆ.ಎಂ.ಗಾಯತ್ರಿ, ಹುಣಸೂರು ಉಪ ವಿಭಾಗಾಧಿಕಾರಿ ಗಳಾದ ವಿಜಯ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ .ಡಿ.ಎಂ.ಸುದರ್ಶನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇ ಶಕರಾದ ಟಿ.ಕೆ.ಹರೀಶ್, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭುಸ್ವಾಮಿ ಸೇರಿದಂತೆ ಕೆ.ಆರ್ ನಗರ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share

ಹೈನುಗಾರಿಕೆಯಿಂದ ಕುಟುಂಬದ ನಿರ್ವಹಣೆ.

Share

ಸಾಲಿಗ್ರಾಮ: ಕುಟುಂಬಗಳು ಹೈನುಗಾರಿಕೆಯಿಂದ ನಿರ್ವಹಣೆಯಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ತಾಲ್ಲೂಕಿನ ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ಎಷ್ಟೋ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಗ್ರಾಮದಲ್ಲಿ ವಾಸಿಸುತ್ತಿರುವ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ವಿಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ ಆದಷ್ಟು ಬೇಗ ಸಂಪರ್ಕ ಕಲ್ಪಿಸಲಾಗುವುದು. ಗ್ರಾಮದ ರಸ್ತೆಗಳು ಹಾಗು ಚರಂಡಿಗಳನ್ನು ಆದಷ್ಟು ಬೇಗ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡೈರಿ ಅಧ್ಯಕ್ಷ ಯೋಗೀಶ್, ಮುಖಂಡರುಗಳಾದ ನಿರ್ದೇಶಕರುಗಳು, ಬಸವರಾಜ್, ಅಂಕನಹಳ್ಳಿ ಗೋವಿಂದೇಗೌಡ, ನಟರಾಜ್, ದಿಲೀಪ್, ಉದಯ್, ನವೀನ್, ಆಪ್ತ ಸಹಾಯಕ ನವೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Share

ನಿರ್ಲಕ್ಷ ತೋರಿದ ರೈತ ಸಂಪರ್ಕ ಕೇಂದ್ರದ ಅವಳಿ ತಾಲೂಕಿನ ಅಧಿಕಾರಿಗಳ ವಿರುದ್ಧ ಗುಡುಗಿದ :ಡಾ ಮಲ್ಲಿಕಾರ್ಜುನ ನಾಯ್ಕೋಡಿ.

Share

ರೈತರು ಈ ದೇಶದ ಬೆನ್ನೆಲುಬು ಎಂದು ಹೇಳಿಕೊಂಡು ರಾಜಕೀಯದವರು ರಾಜ್ಯ ಭಾರ ಮಾಡುತ್ತಿದ್ದಾರೆ ಆದರೆ ಇಲ್ಲಿನ ಅಧಿಕಾರಿಗಳು ರೈತರ ರಕ್ತ ಹೀರುತ್ತಿದ್ದಾರೆ ಈ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ರೈತರಿಗೆ ನೀಡಬೇಕಾದ ಕ್ರಿಮಿ ರಾಸಾಯನಿಕ ಔಷಧಿಗಳು ಹಾಗೂ ಸ್ಪಿಂಕಲರ ಪೈಪುಗಳು ಹಾಗೂ ಇನ್ನಿತರ ಸಲಕರಣೆಗಳನ್ನು ನೀಡದೆ ಸತಾಯಿಸ್ತಿದ್ದು ಪ್ರತಿನಿತ್ಯ ರೈತರಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮನೆಗೆ ತೆರಳುವುದು ಒಂದು ಕೆಲಸವಾಗಿ ಬಿಟ್ಟಿದೆ ಆದರೆ ಒಂದು ವರ್ಷವಾದರೂ ಇನ್ನೂ ಕೆಲವು ರೈತರಿಗೆ ರೈತ ಸಂಪರ್ಕ ಕೇಂದ್ರದಿಂದ ಯಾವುದೇ ಒಂದು ಉಪಕರಣವನ್ನು ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡ್ರಾಮಿ:ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರಿಗೆ ವಿತರಿಸಬೇಕಾಗಿದ್ದ ರಾಸಾಯನಿಕ ಬೆಳೆಗೆ ಸಿಂಪಡಿಸಬೇಕಾದ ರಾಸಾಯನಿಕ ಔಷಧಿಗಳು ಹಾಗೂ ರಾಸಾಯನಿಕ ದಾಸ್ತಾನುಗಳು ಮತ್ತು ರೈತರಿಗೆ ವಿತರಿಸಬೇಕಾದ ಸ್ಪಿಂಕ್ಲರ್ ಪೈಪುಗಳು ಸರ್ಕಾರಿ ನಿಯಮದ ಪ್ರಕಾರ ವಿತರಿಸದೆ ಸರ್ಕಾರಿ ಧಾರಣೆಯ ಪ್ರಕಾರ ಮಾರಾಟ ಮಾಡದೆ ದುಡ್ಡು ಕೊಟ್ಟವರಿಗೆ ವಿತರಣೆ ಮಾಡುತ್ತಿದ್ದಾರೆಂದು ತಾಲೂಕಿನ ರೈತರ ಅಳಲು ತೋಡಿಕೊಂಡಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಯಾದ ಡಾ.ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಗರಂ ಆಗಿ ಗುಡುಗಿದ್ದಾರೆ.
ಅಷ್ಟೇ ಅಲ್ಲದೆ ಮುಂದೆ ಬರುವಂತ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಕಲಬುರಗಿ ಜಿಲ್ಲಾ ಮುಖ್ಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಕಚೇರಿಗೆ ಮುತ್ತಿಗೆಯನ್ನು ಹಾಕಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕೆಲವು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ರೈತ ಸಂಪರ್ಕ ಕೇಂದ್ರ ಬಾರದೆ ರಿಜಿಸ್ಟರ್ನಲ್ಲಿ ತಮ್ಮ ಹಾಜರತಿಯನ್ನು ಹಾಕಿ ತಮ್ಮ ವೈಯಕ್ತಿಕ ಕೆಲಸಗಳಿಗೆ ಹೋಗಿ ನಮಗೆ ಆಫೀಸ್ ನಲ್ಲಿ ಮೀಟಿಂಗ್ ಇತ್ತು ಅದಕ್ಕಾಗಿ ಇವತ್ತು ಬಂದಿಲ್ಲ ಎನ್ನುವ ನಿರ್ಲಕ್ಷ ಮಾತನಾಡಿ ರೈತರಿಗೆ ದಾರಿ ತಪ್ಪಿಸುವಂತೆ ಮಾಡುತ್ತಿದ್ದಾರೆ. ಎಲ್ಲ ಬೆಳವಣಿಗೆಗಳಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಕಾಂತಪ್ಪ ಕಟ್ಟಿಮನಿ ಹಾಗೂ ಜಿಲ್ಲಾ ಅಧಿಕಾರಿಗಳಾದ ಸಮದ ಪಟೇಲ್ ಅವರ ಕೈವಾಡ ಇರಬಹುದು ಎಂದು ಅನುಮಾನವನ್ನು ಪಟ್ಟಿದ್ದಾರೆ.
ಅತಿ ಶೀಘ್ರದಲ್ಲಿ ಈ ಅವ್ಯವಸ್ಥೆಯ ವಿರುದ್ಧ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸಾಕ್ಷಾಧಾರ ಸಮೇತ ಲೋಕಾಯುಕ್ತ ಅಧಿಕಾರಿಗಳ ಕಚೇರಿಗೆ ಆದಷ್ಟು ಶೀಘ್ರದಲ್ಲಿ ದೂರೂ ಸಲ್ಲಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಯಾದ ಡಾ .ಮಲ್ಲಿಕಾರ್ಜುನ್ ನಾಯ್ಕೋಡಿಯವರು ತಿಳಿಸಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳು ಲೂಟಿ ಮಾಡಲು ಸಿಸಿ ಕ್ಯಾಮೆರಾ ಗಳಿಗೆ ಅಡ್ಡಲಾಗಿ ಕಾಟನ್ ಬಾಕ್ಸ್ ಗಳು ಇಡಲಾಗಿದೆ ಇದರಿಂದ ಇಡೀ ರೈತ ಸಮುದಾಯಕ್ಕೆ ಗೊತ್ತಾಗುತ್ತದೆ ಅಧಿಕಾರಿಗಳು ಎಷ್ಟು ಕಳ್ಳರೆಂದು ಭಾವಿಸಿ ಇಜೇರಿ ಹಾಗೂ ಆಂದೋಲ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರಾಸಾಯನಿಕ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು ರೈತರಿಂದ ದುಪಟ್ಟ ಹಣ ವಸೂಲಿ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು
ಸ್ಪಿಂಕ್ಲರ್ ಪೈಪ್ ಕ್ರಿಮಿನಾಶಕಗಳು ಔಷಧಿ ಯಾವ ಕಂಪನಿಗಳಿಂದ ನೀವು ಟೆಂಡರ್ ಮಾಡಿದ್ದೀರಿ ಎಂಬುದಾಗಿ ರೈತರಿಗೆ ಬಹಿರಂಗವಾಗಿ ಅದರ ಬಗ್ಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ
ರೈತ ಸಂಪರ್ಕ ಕೇಂದ್ರಗಳಲ್ಲಿ ಬರುತ್ತಿರುವ ಸಲಕರಣೆಗಳು ರೈತರಿಗೆ ಸೇರದೆ ದುಡ್ಡು ಕೊಟ್ಟ ಕಲ್ಲಾಳಿಗಳಿಗೆ ಹಾಗೂ ಅಧಿಕಾರಿಗಳ ಸಂಬಂಧಿಕರ ಮನೆಗಳಿಗೆ ಮಾರಾಟ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದು ಇಂತಹ ನೀಚ ಕೃತ್ಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ ನಾಯ್ಕೋಡಿ ಗಂವ್ಹಾರ ಅವರು ತಿಳಿಸಿದ್ದಾರೆ.
ಮುಖ್ಯಾಂಶಗಳು:
1) ಅವಳಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ದುಪಟ್ಟ ಹಣ ವಸೂಲಿ

2)ರೈತರಿಗೆ ಸೇರಬೇಕಾದ ಸಲಕರಣೆಗಳು ಇನ್ಯಾರಿಗೋ ಸೇರುತ್ತವೆ.
3) ರೈತರು ವರ್ಷವಿಡೀ ಅಲೆದಾಡಿದರು ಸಿಗುತ್ತಿಲ್ಲ ಸ್ಪಿಂಕ್ಲರ್ ಪೈಪ್
4)ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತ ಜಿಲ್ಲಾ ಮತ್ತು ತಾಲೂಕ ಅಧಿಕಾರಿಗಳು
5) ಜಿಲ್ಲಾ ಕಚೇರಿ ಮುಂದೆ ಹೋರಾಟ ಕರ್ನಾಟಕರೈತ ಸಂಘ ಹಾಗೂ ಹಸಿರಸೇನೆ ರಾಜ್ಯ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ್ ನಾಯ್ಕೊಡಿ.ಗಂವ್ಹಾರ
6) ಸ್ಪಿಂಕ್ಲರ್ ಹಾಗೂ ಕ್ರಿಮಿನಾಶಕ ಔಷಧಿಗಳು ಯಾವ ಕಂಪನಿಯಿಂದ ಟೆಂಡರ್ ಮಾಡಿದ್ದೀರಿ ಎಂಬುದು ರೈತರಿಗೆ ಬಹಿರಂಗವಾಗಿ ತಿಳಿಸಿ
ವರದಿ ಜೆಟ್ಟೆಪ್ಪ ಎಸ್ ಪೂಜಾರಿ


Share

ಕರ್ನಾಟಕಕ್ಕೆ ಕೀರ್ತಿ ತಂದ ನಮ್ಮ ದಿಗಂತ್

Share

ಬೆಂಗಳೂರಿನ ಇಂದಿರಾ ನಗರದ ಪ್ಯಾಸ್ಟಿಕ್ ಸೊಸೈಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ, ಚಾಮರಾಜಪೇಟೆಯ ವಿಕಲಚೇತನ, ದಿಗಂತ್ ವೈನತೆಯ. ಇವರು ಅರ್ಜುನ್ ಪ್ರಶಸ್ತಿ ವಿಜೇತರಾದ ಶರತ್ ಗಾಯಕ್ವಾಡ್ ಅವರಿಂದ ತರಬೇತಿ ಪಡೆದು ಐದು ಬಾರಿ ಕರ್ನಾಟಕದಿಂದ ಚಿನ್ನದ ಪದಕ, ಹಾಗೂ ರಾಷ್ಟ್ರಮಟ್ಟದ ರಾಜಸ್ಥಾನ್ ಅಸ್ಸಾಂ, ಮಧ್ಯ ಪ್ರದೇಶ್, ಚಿನ್ನದ ಪದಕ ಪಡೆದು ದಿನಾಂಕ 19,20, 21, 22,ರಂದು ಗೋವಾದಲ್ಲಿ ನಡೆದ 24ನೇ ರಾಷ್ಟ್ರೀಯ ಪ್ಯಾರಾ ಸಿಮ್ಮಿಂಗ್ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಪಡೆದು ಚಾಮರಾಜಪೇಟೆ ಕ್ಷೇತ್ರಕ್ಕೂ ಕರ್ನಾಟಕಕ್ಕೆ ಕೀರ್ತಿ ತಂದ ನಮ್ಮ ದಿಗಂತ್


Share

ಕಡಿಮೆ ಶಾಲೆಯಲ್ಲಿ ಶಾರದಾ ಪೂಜೆ

Share


ಕುಮಟಾ ತಾಲೂಕಿನ ಗೋಕರ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಿಮೆಯಲ್ಲಿ ವರ್ಷಂಪ್ರತಿಯಂತೆ ತಮ್ಮ ಮಕ್ಕಳ ವಿದ್ಯಾಭ್ಯಾಸ ಪ್ರಗತಿಗಾಗಿ ಮತ್ತು ಜ್ಞಾನದ ಸುಧೆಯನ್ನು ಬೆಳಗಿಸಲು ಸಂಭ್ರಮ ಸಡಗರದಿಂದ ಶಾರದಾ ಪೂಜೆಯನ್ನು ಅರ್ಚಕರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ವಿದ್ಯಾರ್ಥಿಗಳು ದೇವಿ ಶಾರದೆಯ ಭಜನೆ ಮಾಡುವ ಮೂಲಕ ಶಾರದಾ ದೇವಿಗೆ ಗೀತನಮನ ಸಲ್ಲಿಸಿದರು. ಮುಖ್ಯಾಧ್ಯಾಪಕರಾದ ಉಮಾ ನಾಯ್ಕ, ಲತಾ ಗೌಡ, ರಾಜೀವ ಗಾಂವಕರ, ದೇವಯಾನಿ ನಾಯಕ, ಸರಿತಾ ಆಚಾರಿ, ಆನಂದ ನಾಯ್ಕ, ವೈಶಾಲಿ ನಾಯಕ, ನಾಗರತ್ನ ಗೌಡ, ಸವಿತಾ ಗೌಡ, ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದು ವಿದ್ಯೆಗೆ ಅಧಿದೇವತೆಯಾದ ಶಾರದಾ ಮಾತೆಯನ್ನು ವಿದ್ಯಾರ್ಥಿಗಳು ಮನಸಾರೆ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದರು.


Share

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಬಗೆಹರಿಸುವಂತೆ ಮನವಿ

Share

ಅರಸೀಕೆರೆ : ಪಡಿತರ ವಿತರಣೆಗೆ ಸರ್ವರ್ ಸಮಸ್ಯೆಯಿಂದ ಬೆರಳಚ್ಚು ಪಡೆಯಲು ತೊಂದರೆ ಉಂಟಾಗಿದ್ದು ತಾಲೂಕಿನಾದ್ಯಂತ ಬಿಪಿಎಲ್ ಕಾರ್ಡುದಾರರೂ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ಮಧ್ಯೆ ಸಂಘರ್ಷ ಉಂಟಾಗುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಅರಸೀಕೆರೆ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರು ತಾಲೂಕು ಅಧ್ಯಕ್ಷ ವೇದಮೂರ್ತಿ ಅವರ ನೇತೃತ್ವದಲ್ಲಿ ಗ್ರೇಡ್ 2 ತಹಶಿಲ್ದಾರ ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ವೇದಮೂರ್ತಿ ಸರ್ವರ್ ಸಮಸ್ಯೆ ಉಂಟಾಗಿರುವುದರಿಂದ ವಿತರಣೆ ಪ್ರಮಾಣ ತಾಲೂಕಿನಲ್ಲಿ ತುಂಬಾ ಕಮ್ಮಿಯಾಗಿದೆ ಸಮಯ ತುಂಬಾ ಕಮ್ಮಿ ಇದ್ದು ಈಗಾಗಲೇ 22ನೇ ತಾರೀಕು ಕಳೆದು ಹೋಗಿದೆ ಬರುವ ದಿನಗಳಲ್ಲಿ ಹಬ್ಬದ ದಿನಗಳಿದ್ದು ಪಡಿತರ ಕಾರ್ಡ್ದದಾರರು ಪಡಿತರ ವಸ್ತುಗಳು ಸಿಗುತ್ತವೆಯೋ ಇಲ್ಲವೋ ಎಂದು ಗೊಂದಲದಿಂದ ಪದೇ ಪದೇ ನ್ಯಾಯಬೆಲೆ ಅಂಗಡಿಗಳ ಮುಂದೆ ಜಮಾಯಿಸುತ್ತಿದ್ದಾರೆ ಇದರಿಂದ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೂ ಕಾಡುದಾರರಿಗೂ ಸಂಘರ್ಷ ಉಂಟಾಗುತ್ತಿದೆ ಹೀಗಾಗಿ ಸರ್ಕಾರ ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಯುವವರೆಗೂ ಸರಳ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಬೇಕು ಎಂದು ವೇದಮೂರ್ತಿ ಮನವಿ ಮಾಡಿದರು.ನಂತರ ಪಡಿತರ ವಿತರಕರನ್ನು ಉದ್ದೇಶಿಸಿ ಮಾತನಾಡಿದ ಗ್ರೇಟ್ 2 ತಹಶೀಲ್ದಾರ್ ಪಾಲಾಕ್ಷ ಕೂಡಲೇ ತಮ್ಮ ಮನವಿಯನ್ನು ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಟ್ಟು ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಚನ್ನಾಪುರ ಶಿವರಾಜ್ ಕಾರ್ಯದರ್ಶಿಗಳಾದ ರಾಮಸ್ವಾಮಿ ಖಜಾಂಚಿಯಾದ ಬಿ ಎಮ್ ಜಯಣ್ಣ ನಿರ್ದೇಶಕರುಗಳು ಮತ್ತು ತಾಲೂಕಿನ ಪಡಿತರ ವಿತರಕರು ಉಪಸ್ಥಿತರಿದ್ದರು .
ವರದಿ ಪರ್ವಿಜ್ ಅಹಮದ್ ಅರಸೀಕೆರೆ


Share

ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿರಲಿ.

Share

ಸಿದ್ದಾಪುರ : ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ 2ನೇ ತಾಯಿ ಇದ್ದಂತೆ, ಸಮಾಜದ ಮುಖ್ಯ ವಾಹಿನಿಗೆ ಮಕ್ಕಳನ್ನು ತರಲು ಅವರಿಗೆ ಸಂಸ್ಕಾರವನ್ನ ನೀಡಲು ಶ್ರಮಿಸುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯ ನಿಮ್ಮ ಕಾರ್ಯ ವ್ಯಾಪ್ತಿ ದೊಡ್ಡದಿದ್ದರೂ ಉತ್ತಮವಾಗಿ ಕಾರ್ಯನಿರ್ವಹಿಸುವ ಮನಸ್ಸು ನೀವು ಹೊಂದಿದ್ದೀರಿ,ಕೇಂದ್ರ ರಾಜ್ಯ ಸರಕಾರಗಳು ಮುಖ್ಯ ಮಂತ್ರಿಗಳು, ಸಚಿವರು ಇಲಾಖೆ ನಿಮ್ಮ ಸಮಸ್ಯೆ ಅರ್ಥೈಸಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು
ಅವರು ಪಟ್ಟಣದ ಶಂಕರ್ ಮಠದಲ್ಲಿ ಸ್ವತಂತ್ರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ದವರು ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಲಾಖೆ ನೀಡುವ ಸೌಲಭ್ಯಗಳನ್ನು ಮಕ್ಕಳಿಗೆ ನೀಡಿ ಅವರನ್ನು ಸದೃಢ ತನ್ನಾಗಿ ಮಾಡುವ ಕೆಲಸದ ಜೊತೆಯಲ್ಲಿ ತಂದೆ ತಾಯಿಂದ ಮನೆಯಲ್ಲಿ ನೋಡುವುದಕ್ಕಿಂತ ಹೆಚ್ಚಿನದಾಗಿ ಗಮನಕೊಟ್ಟು ಪಾಲನೆ ಮಾಡುತ್ತೀರಿ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಎಂದರು ಹಾಗೂ ನಿಮ್ಮ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುವೆ ಎನ್ನುವ ಭರವಸೆ ನೀಡಿದರು.
ಸಾಮಾಜಿಕ ಹೋರಾಟಗಾರ ಅನಂತ ಮೂರ್ತಿ ಹೆಗಡೆ ಮಾತನಾಡಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣ ವನ್ನ ಅಂಗನವಾಡಿಯಲ್ಲಿ ಕಲಿಸಲಾಗುತ್ತದೆ ಅದರ ಜೊತೆಯಲ್ಲಿ ತಮ್ಮ ಇಲಾಖೆ ಮತ್ತು ಬೇರೆ ಬೇರೆ ಇಲಾಖೆ ಕೆಲಸವನ್ನು ಸಹ ನಿರ್ವಹಿಸಬೇಕಿದೆ ಈ ರೀತಿ ಸರಕಾರದ 10 ಹಲವು ಯೋಜನೆಗಳನ್ನು ಜನರಿಗೆ ತಲುಪಿಸುವ ಇವರಿಗೆ ಕಡಿಮೆ ವೇತನವನ್ನು ನೀಡಿ ಸರ್ಕಾರಗಳು ಕಣ್ಣೀರು ಹಾಕುವಂತೆ ಮಾಡಿವೆ , ಇತರೆ ಇಲಾಖೆ ಅಧಿಕಾರಿಗಳಿಗೆ ನೀಡುವ ಸಂಬಳದಂತೆ ಇವರಿಗೂ ಯಾಕೆ ನೀಡುತ್ತಿಲ್ಲ ಇವರೇನು ಕೆಲಸ ಮಾಡುತ್ತಿಲ್ಲವಾ ಎಂದು ಪ್ರಶ್ನಿಸಿದರು, ಆದಷ್ಟು ಬೇಗ ನಿಮ್ಮ ಸಮಸ್ಯೆಗಳು ಬಗೆಹರಿಯಲಿ, ಮುಂದಿನ ದಿನದಲ್ಲಿ ನೀವು ಯಾವುದೇ ಹೋರಾಟಕ್ಕೂ ಕರೆದರೂ ನಾನು ಬರಲು ಸಿದ್ಧನಿದ್ದೇನೆ ಎಂದರು. ಸಂಘಟನೆಯ ರಾಜ್ಯಾಧ್ಯಕ್ಷೆ ಜಿ ಪ್ರೇಮಾ, ಜಿಲ್ಲಾಧ್ಯಕ್ಷೆ ಅನಿತಾ ಶೇಟ್, ಸಿಡಿಪಿಒ ಪೂರ್ಣಿಮಾ ದೊಡ್ಮನಿ ಮಾತನಾಡಿದರು. ಕೃಷ್ಣಮೂರ್ತಿ ಐಸೂರ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ಅಧ್ಯಕ್ಷೆ ಯಮುನಾ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಭಾರತಿ ನಾಯ್ಕ ಸ್ವಾಗತಿಸಿದರು. ರೇಖಾ ಹೆಗಡೆ ನಿರೂಪಿಸಿದರು. ಶೋಭಾ ನಾಯ್ಕ ವಂದಿಸಿದರು.


Share

ಅವಳಿ ತಾಲ್ಲೂಕುಗಳ ಅಬಕಾರಿ ನಿರೀಕ್ಷಕರಾಗಿ ವೈ.ಎಸ್.ಲೋಕೇಶ್

Share

ಕೆ.ಆ‌ರ್.ನಗರ: ಕೆ.ಆ‌ರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳ ಅಬಕಾರಿ ನಿರೀಕ್ಷಕರಾಗಿ ವೈ.ಎಸ್.ಲೋಕೇಶ್ ಸೋಮವಾರ ಅಧಿಕಾರ ವಹಿಸಿಕೊಂಡರು. ಈವರೆಗೆ ಇಲ್ಲಿದ್ದ ಅಬಕಾರಿ ನಿರೀಕ್ಷಕಿ ಶೈಲಜ ಅವರನ್ನು ಅಬಕಾರಿ ಸಂಚಾರ ದಳದ ನಿರೀಕ್ಷಕಿಯಾಗಿ ವರ್ಗಾವಣೆ ಮಾಡಲಾಗಿದೆ. ಪಟ್ಟಣದ ಅಬಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಮಾರಾಟ, ಗಾಂಜಾ ಮಾರಾಟ ಕಂಡು ಬಂದಲ್ಲಿ ತಕ್ಷಣ ನಮ್ಮ ಇಲಾಖೆ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು. ಕೆ.ಆ‌ರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ನಾಗರಿಕರ ಹಿತ ದೃಷ್ಟಿಯಿಂದ ಅಕ್ರಮವಾಗಿ ಮದ್ಯ, ಗಾಂಜಾ, ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡ ಬೇಕು ಎಂದರು. ಅಬಕಾರಿ ನಿರೀಕ್ಷಕ ವೈ.ಎಸ್.ಲೋಕೇಶ್ ಅವರನ್ನು ಕಾಂಗ್ರೆಸ್ ಪಕ್ಷದ ತಾಲ್ಲೂಕು ಎಸ್‌ ಟಿ ಘಟಕದ ತಿದ್ದೂರು ಮಹದೇವ ಅಭಿನಂದಿಸಿದರು. ಕಾಂಗ್ರೆಸ್ ರಾಜ್ಯ ಎಸ್‌ಟಿ ಘಟಕದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಮುಂಜನಹಳ್ಳಿ ಮಹದೇವನಾಯಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್.ಮಹದೇವ, ಎಂಎಸ್ಎಸ್ ತಾಲ್ಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾ‌ರ್, ಸೇವಾ ದಳದ ಅಧ್ಯಕ್ಷ ಬಿ.ಹೆಚ್.ಕುಮಾರ್ ಹಾಜರಿದ್ದರು.


Share
1 2 3 158