ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.

Share

ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಿದರು. ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ರೈತರಿಗೆ 25 ಕೆವಿ ಟ್ರಾನ್ಸ್ ಫಾರ್ಮರ್ ನೀಡುವುದಾಗಿ 231 ರೈತರ ಹತ್ತಿರ ತಲಾ ರೂ.30,000ಗಳನ್ನು ಪಡೆಯಲಾಗಿದೆ. ಎರಡು ವರ್ಷಗಳಾದರೂ 25ಕೆವಿ ಟ್ರಾನ್ಸ್ ಫಾರ್ಮರ್ ನೀಡಿಲ್ಲ ಎಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದೇ ವೇಳೆಯಲ್ಲಿ ರೈತರ ಸಂಘ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಅವರು ಮಾತನಾಡಿ ದಿಬ್ಬೂರಹಳ್ಳಿ ಬೆಸ್ಕಾಂ ಶಾಖಾ ಧಿಕಾರಿ ಯವರು ಲಂಚ ಕೊಡುವವರಿಗೆ ಮತ್ತು ಗುತ್ತಿಗೆದಾರರು ಯಾರ ಹಣ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತಾರೆ, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯ ರೈತ ಸಂಘ(ಕೆಎಸ್ ಪುಟ್ಟಣ್ಣಯ್ಯ ಬಣ) ವತಿಯಿಂದ ರೈತರಿಗೆ ಆಗುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಬೆಸ್ಕಾಂ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮುನೇಗೌಡ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಶಂಕರ್ ನಾರಾಯಣ ತಾಲೂಕು ಉಪಾಧ್ಯಕ್ಷ, ಶ್ರೀನಾಥ್, ದೇವರಾಜ್ ,ನಾರಾಯಣಸ್ವಾಮಿ, ಡಿಎಸ್ಎಸ್ ಮುಖಂಡ ಗೊರ್ಲಪ್ಪ, ಚಿಕ್ಕನರಸಿಂಹಪ್ಪ ಇನ್ನು ಹಲವಾರು ರೈತರು ಭಾಗಿಯಾಗಿದ್ದರು


Share

ಧರ್ಮ-ಸಂಘರ್ಷ, ಪಿ.ಎಸ್.ಐ ಹಗರಣ-ಸಿ.ಎಂ. ಮೌನ.

Share

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ತಲೆದೂಗುತ್ತಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಉತ್ತರಿಸಬೆಕಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಯವರ ಮೌನದ ಹಿಂದದೆ ಲೆಕ್ಕವಿಲ್ಲದಷ್ಟು ಅರ್ಥಗಳು ಇರಬಹುದು. ಆದರೆ ಅಭಿಪ್ರಾಯದ ಲೆಕ್ಕದಲ್ಲಿ ಹೇಳುವುದಾದರೆ ಕರ್ನಾಟಕದ ಇಂದಿನ ಪರಿಸ್ಥಿತಿಗೆ ಜೆ.ಸಿ.ಬಿ ರಾಜಕಾರಣಿಗಳೇ ಕಾರಣ. ಧರ್ಮದ ಬೆಂಕಿ ಹಚಿಚಿ ಗುಂಡಾಗಿರಿ ನಡೆಸುತ್ತಿರುವುದು ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಅತಿ ಹೆಚ್ಚಾಗಿರುವುದು ,ಸಂತೋಷ ಆತ್ಮಹತ್ಯೆ, ಹಿಂದೂ ಮುಸ್ಲಿಂ ಗಲಾಟೆಗಳು ಈಗ 545 ಪಿ.ಎಸ್.ಐ ಹುದ್ದೆನೆಮಕತಿ ಪ್ರಕರಣದಲ್ಲಿ ಹಗರಣ ಹೀಗೆ ಸಲು ಸಲು ಸಮಸ್ಯೆಗಳು ಇರುವಗಲೂ ಸಿ.ಎಂ ಬಸವರಜ್ ಬೊಮ್ಮಯಿ ಅವರು ಮೌನÀವಹಿಸಿರುವುದನ್ನು ನೋಡಿದರೆ ಆಡಳಿತ ಯಂತ್ರ ಕುಸಿದಿರುವುದು ಕಂಡು ಬಂದರೂ ಕೂಡ ಪ್ರತಿಕ್ರಯೆ ನೀಡದಷ್ಟು ಸಿ.ಎ. ದೂರ ನಿಂತಿರುವುದನ್ನು ಕಂಡರೆ ಪಕ್ಷದ ಒತ್ತಡ ರಾಜಕಾರಣಿಗಳ, ಅಧಿಕರಿಗಳು ಮತ್ತು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಅದರಲ್ಲಿಯೂ ರಾಜ್ಯ, ದೇಶ ಕಂಡರಿಯದ ಪಿ.ಎಸ್.ಐ ಹಗರಣವೊಂದು ರಾಜ್ಯದಲ್ಲಿ ನಡೆದಿದೆ. ಈ ಹಗರಣದ ಮುಖ್ಯರುವಾರಿ ಕಲ್ಬುರ್ಗಿಯ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದು ಇದರ ಮಧ್ಯೆಯು ಹಳೆಯ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಅಕ್ರಮವು ಸೇರಿದಂತೆ 2011 ಕೆ.ಪಿ.ಸಿ.ಎಸ್ ಹಗರಣವು ಹೀಗೆ ಸಾಲು ಸಾಲು ಹಗರಣಗಳ ಜೀವಚಿತಿಕೆ ಮಧ್ಯೆ ಪಿ.ಎಸ್.ಐ ಹಗರಣದ ಬಗ್ಗೆ ಸಿಐಡಿ ತನಿಖೆಯನ್ನು ತೀವ್ರಗೊಳಿಸಿದ್ದು ಈ ಪಿ.ಎಸ್.ಐ ಪರೀಕೆಯು ಅಕ್ರಮದಲ್ಲಿ ಓ ಎಂ. ಆರ್ ಶೀಟ್ ತದ್ದುಪಡಿ ಸೆರಿದಂತೆ ಬ್ಲೂ ಟೂತ್ ಬಳಕೆ, ಬನಿಯನ್ ನಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಪರೀಕ್ಷೆಯಲ್ಲಿ, ಉತ್ತರ ಬರೆಸಿದ ಕೇಂದ್ರವು ಕಲ್ಬುರ್ಗಿಯ ಜ್ಞಾನ ಜ್ಯೋತಿ ಕಾಲ್ಭೆಜ್ ಆಗಿದ್ದು. 545 ಅಭ್ಯರ್ಥಿಗಳ ಪೈಕಿ ಸುಮಾರು 20 ಅಭ್ಯರ್ಥಿಗಳು ಈ ಕೇಂದ್ರದಲೇ ಆಯ್ಕೆಯಾಗಿರುವುದು ಬೆಳಕಿಗೆ ಬಂದಿದೆ. 1 ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಲೂ ಸಹಾಯ ಮಾಡುವುದಕ್ಕ್ಕಾಗಿ 30 ರಿಂದ 40 ಲಕ್ಷ ನಿಗದಿ ಪಡಿಸಲಾಗಿತ್ತು. ಈಗಾಗಲೇ ಹತ್ತಾರು ಜನರನ್ನು ಬಂಧಿಸಿದ ಸಿಐಡಿಗೆ ಪ್ರಕರಣದ ದಿಕ್ಕು ಇನ್ನೂ ಹೆಚ್ಚಾಗುತ್ತಿದ್ದು ಯಾದಗಿರಿ, ರಾಯಚೂರು, ಕಲ್ಬುರ್ಗಿಯ ಪ್ರಮುಖ ಅಧಿಕಾರಿಗಳು , ವ್ಯಕ್ತಿಗಳು ಭಾಗಿಯಾಗಿದ್ದು ಅದರಲ್ಲಿಯೂ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್‍ಪುರ್ ತಾಲೂಕಿನ 43 ಕ್ಕೂ ಅಧಿಕ ಅಭ್ಯರ್ಥಿಗಳು ಪಿ.ಎಸ್.ಐ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ. ಇದರ ಮಧ್ಯೆ ಆಳಂದ ಶಾಸಕ ಪಾಟೀಲರ ಅಂಗರಕ್ಷಕನ ಬಂಧನವು ಈ ಪ್ರಕರಣದ ರತಾಜಕೀಯ ವಾಸನೆಯನ್ನು ತಿಳಿಸುತ್ತದೆ. ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಈ ಪ್ರಕರಣದ ವಿರುದ್ದ ಗಟ್ಟಿಧ್ವನಿ ಎತ್ತಿದರೂ ಕೂಡ ರಾಜ್ಯದ ಗೃಹ ಸಚಿವ ಅರಗಜ್ಞಾನೇಂದ್ರ ಮತ್ತು ಸಿ.ಎಂ.ಬಸವರಾಜ ಬೊಮ್ಮಾಯಿ ಮೌನದ ಹಿಂದೆ ನಿಗೂಢ ಅರ್ಥಗಳಿವೆ. ಅರಗಜ್ಞಾನೇಂದ್ರ ಬೇರೆ ಪ್ರಕರಣಗಳಲ್ಲಿ ಬಾಯ್ಬಿಟ್ಟರೂ ಕೂಡ ಪಿ.ಎಸ್.ಐ ಪ್ರಕರಣದಲ್ಲಿ ಮೌನಕ್ಕೆ ಜಾರಿದ್ದರೆ. ಸಿಐಡಿ ಪೋಲಿಸರು ದಿವ್ಯ ಹಾಗರಗಿ ಬಂಧಿಸುವಲ್ಲಿ ಪ್ರಯತ್ನ ಮಾಡುತ್ತಿರುವಾಗಲೇ ಇನ್ನೋಂದಿಷ್ಟು ಹೊಸ ಹೊಸ ವ್ಯಕ್ತಿಗಳ ಆಗಮನ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.
ಹಿಜಾಬ್ ಕೇಸರಿ, ಧರ್ಮ ವ್ಯಾಪಾರ, ಮುಸ್ಲಿಂರಿಗೆ ವ್ಯಾಪರ ನಿಷೇಧ, ಹಲಾಲ್, ಜಟಕಾಕಟ್ ಶಿವಮೊಗ್ಗ ಹರೀಶನ ಹತ್ಯೆ ಶ್ರೀರಾಮ ಸೇನೆಯ ಪ್ರಮೋದ್ ಮುತಲಿಕ್ ಹೇಳಿಕೆಗಳು, ಹುಬ್ಬಳಿಯ ಮೌಲ್ವಿಯ ಹೇಳಿಕೆ, ರಾಜ್ಯದ ಗುಪ್ತದಳ ಹೇಳುವಂತೆ ಹುಬ್ಬಳಿಯ ಗಲಭೆಯು ಬೆಂಗಳೂರಿನ ಡಿ.ಜೆ.ಹಳ್ಲಿ, ಉತ್ತರಹಳ್ಳಿಗಳಂತೆ ಪೂರ್ವ ನಿಯೋಜಿತ ಘಟನೆಗಳಾಗಿದ್ದು ಹಾಗಾದರೆ ಹಿಜಾಬ್ ನಿಂದ ಹಿಡಿದು ಹುಬ್ಬಳ್ಳಿಯ ಗಲಾಟೆವರೆಗೂ ಸಂತೋಷನ ಆತ್ಮಹತ್ಯೆಯಿಂದಿಡಿದು ಪಿ.ಎಸ್.ಐ ಅಕ್ರಮದವರೆಗೂ ಎಲ್ಲರೂ ಮಾತನಾಡಿದರೂ ಮುಖ್ಯಮಂತ್ರಿ ಏಕೆ ಮಾತನಾಡುತ್ತಿಲ್ಲ? ಕೇಂದ್ರದ ನಾಯಕರ ಒತ್ತಡವೋ ಹಿರಿಯ ನಾಯಕರ ಆಜ್ಞೆಯೋ ಅಥವಾ ಈ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕೆಂದು ಸಿ.ಎಂ ಗೆ ಅರ್ಥವಾಗುತ್ತಿಲ್ಲವೋ ಅಥವಾ ಇದುವರೆಗೆ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದ ಬೊಮ್ಮಾಯಿಯವರಿಗೆ ಸಿ.ಎಂ ಎಂಬ ಮಹತ್ವದ ಹುದ್ದೆಯನ್ನು ನಿರ್ವಹಿಸಲು ಆಗುತ್ತಿಲ್ಲವೋ, ಎಸ್.ಆರ್.ಬೊಮ್ಮಾಯಿ ಯಂತೆ ಮಗ ಬಸವರಾಜ್ ಬೊಮ್ಮಾಯಿ ಆಡಳಿತ ನಡೆಸಲು ಆಗುತ್ತಿಲ್ಲ ಏಕೆ? ಇಚಿತಹ ಹಲವರು ಪ್ರಶ್ನೆಗಳನ್ನು ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಸ್ಭೆರಿದಂತೆ ರಾಜಕಾರಣಿಗಳು , ಬೇರೆ ಪಕ್ಷದ ಕಾರ್ಯಕರ್ತರು, ಜನ ಸಾಮಾನ್ಯರು ಪ್ರಶ್ನೆ ಮಾಡಬೇಕು? ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಷ್ಟು ಸಮಸ್ಯೆಗಳು ಒಚಿದೇ ಸಾರಿ ಬಂದಿರುವುದು ಇದೇ ಮೊದಲು ಎನ್ನಬಹುದು. ಜೊತೆಗೆ ಸಿ.ಎಂ. ಒಬ್ಬರು ಮೌನವಾಗಿರುವುದು ಇದೇ ಮೊದಲು ಎನ್ನಬಹುದು. ಪ್ರತಿಯೊಬ್ಬರು ಪ್ರಶ್ನೆಯನ್ನು ಮಾಡಲೇಬೇಕು. ಸಮಸ್ಯೆಗಳ ಮಧ್ಯೆಯು ಮೌನವಹಿಸುವುದನ್ನು ಕಂಡರೆ ಇತಿಹಸದಲ್ಲಿ ಒಬ್ಬ ರಾಜ ಅರಮನೆಗೆ ಬೆಂಕಿ ಬಿದ್ದಾಗ ಪಿಟೀಲು ನುಡಿಸುತ್ತಿದ್ದನಂತೆ ಹಾಗೆ ನಮ್ಮ ಕರ್ನಾಟಕದ ಪರಿಸ್ಥಿತಿಯಾಗಿದೆ. ಪಕ್ಷ ಮರೆತು ಪ್ರಶ್ನೆ ಮಾಡಿ ಪ್ರಜಾ ಪ್ರಭುತ್ವ ಉಳಿಸಿ.


Share

ಎಲ್ಲಿದ್ದೇ ಇಲಿಯತನಕ-ಸೋಗಲಾಡಿ ರಾಜಕಾರಣ

Share

ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ 2023ಕ್ಕೆ ಮುಗಿಯುತ್ತದೆ.ಇದರ ಮಧ್ಯ ಕೇಲವು ರಾಜಕಾರಣಿಗಳು ಮತ್ತು ರಾಜಕೀಯ ಚಿಂತಕರ ಅಭಿಪ್ರಾಯದಂತೆ ಇದೇ ವರ್ಷ ನವಂಬರ್ ಅಥವಾ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಬಹುದು ಅಂತ ರಾಜಕೀಯ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಬಿಜೆಪಿಯು ಕೂಡಾ ಸಂಪುಟ ವಿಸ್ತರಿಸುವ ಬದಲಿಗೆ ಚುನಾವಣೆಗೆ ಹೋಗುವ ಇಂಗಿತ ವ್ಯಕ್ತವಾದಂತೆ ಕಾಣುತ್ತದೆ. ರಾಜ್ಯ ಸೇರಿದಂತೆ ದೇಶದಲ್ಲಿ ಈ ಹಿಂದಿನ 4 ವರ್ಷಗಳಲ್ಲಿ ಹಲವಾರು ಬದಲಾವಣೆಗಳು ಕಂಡುಬಂದಿವೆ. ಕರೋನ ಇಡೀ ಜಗತ್ತನ್ನು 15ರಿಂದ 20 ವರ್ಷ ಹಿಂದಕ್ಕೆ ಒಯ್ಯುವ ಜೊತೆಗೆ ಮಾನವಕುಲಕ್ಕೆ ಭಯದ ಪರಿಚಯ ಮಾಡಿಸಿದೆ. ಇದು ದೇಶ ಮತ್ತು ರಾಜ್ಯದಲ್ಲೂ ನಡೆದಿದ್ದು, ಅಭಿವೃದ್ಧಿ ಮಾಡುವುದಕ್ಕಿಂತ ಬದುಕುವುದು ಮತ್ತು ಬದುಕಿಸುವುದೇ ದೊಡ್ಡ ಸಾಧನೆ ಆಗಿತ್ತು ಕರೋನ ಮೊದಲ ಅಲೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಕೊಟ್ಟಿತ್ತು ಎರಡನೆಯ ಅಲೆಗೆ ಕರ್ನಾಟಕ ಸ್ಭೆರಿಂದಂತೆ ಭಾರತವು ಸಿದ್ದವಾಗಿತ್ತು. ಈಗ ಮತ್ತೆ ಮೂರನೆಯ ಅಲೆಯ ಸದ್ದು ಮಾಡುತ್ತಿದೆ. ಇದರ ಮಧ್ಯ ಚುನಾವಣೆಗಳು ರಾಜಕಾರಣಿಗಳ ಪಕ್ಷಾಂತರ, ಅಧಿಕಾರಕ್ಕಾಗಿ ರಸ್ತೆಗಿಳಿದು ಜಗಳ ಹೀಗೆ ಮಾಡುತ್ತಾ ಕಾಲಕಳೆದ ರಾಜಕಾರಣಿಗಳು ಚುನಾವಣೆ ಹತ್ತಿರ ಬರುತ್ತಲ್ಲೆ ಜನರತ್ತ ಮುಖ ಮಾಡಿದ್ದಾರೆ. ಜೀವನವನ್ನೆ ನಡೆಸಲು ಕಷ್ಟವಾದಾಗ, ತಮ್ಮವರೇ ಸತ್ತಾಗ ಮುಖ ನೋಡಲು ಆಗದಿದ್ದಾಗ ಮತ್ತು ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಅನ್ನಿಸಿದ್ದಾಗ ಕಾಣದ ರಾಜಕಾರಣಿಗಳು ಈಗ ಕಷ್ಟ ಕೇಳಲು ಮನೆಗೆ ಬರುತ್ತಿದ್ದಾರೆ.
ಬಿಜೆಪಿ,ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯ ತಯಾರಿಗೆ ಸಿದ್ದತೆ ನಡೆಸುತ್ತಿವೆ. ಕಾಂಗ್ರೇಸ್ ಪಕ್ಷವು ಮೇಕೆದಾಟು ಹೋರಾಟ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ಹೋರಾಟಗಳು 2023 ಚುನಾವಣೆಗೆ ಬೆಂಬಲವಾಗಿವೆ ಹೊರತು ರಾಜ್ಯಕ್ಕೆ ಅನುಕೂಲವಾಗಲಿ ಅಂತ ಇಲ್ಲ. ಇನ್ನೂ ಜೆಡಿಎಸ್‍ವು ಜನತಾ ಜಲಧಾರೆ ಎಂಬ ಕಾರ್ಯಕ್ರಮ ರೂಪಿಸಿಕೊಂಡು ಜನತೆಯ ಹತ್ತಿರವಾಗುತ್ತಿದ್ದಾರೆ. ಕುಮಾರಸ್ವಾಮಿ ಅದೇ ಹಳೆಯ ವರ್ಷೆ ಪ್ರಾರಂಭಿಸಿದ್ದಾರೆ- ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ಪಕ್ಷವನ್ನು ವಿಸರ್ಜಸುತ್ತೇವೆ ಅನ್ನುತ್ತಲ್ಲೆ ಕಣ್ಣಿರು ಹಾಕುತ್ತಿದ್ದಾರೆ. ಹಿಂದೆ ಯಡ್ಡಿಯೂರಪ್ಪ ಅಧಿಕಾರ ನೀಡದೇ ಮೋಸ ಮಾಡಿದ ಕುಮಾರಸ್ವಾಮಿ ಮತ್ತು ಕಾಂಗ್ರೇಸ್‍ಗೂ ಅನ್ಯಾಯ ಮಾಡಿದ್ದಾರೆ ಆದರೂ ಕೂಡ ತಾವು ಅತ್ಯಂತ ಪ್ರಾಮಾಣಿಕ ಸಿದ್ದಾಂತವಾದಿ ರಾಜಕಾರಣಿಯಂತೆ ಪೋಜ್ ಕೋಡುತ್ತಿದ್ದಾರೆ. ತಾವೇ ಮುಖ್ಯಮಂತ್ರಿಯಾದಾಗ ಕೇಳಿದ ಸಮಸ್ಯೆಗಳನ್ನು ಬಗ್ಗೆ ಹರಿಸದೇ ಈಗ ಅವುಗಳನ್ನೆ ಕಾಂಗ್ರೇಸ್ ಮತ್ತು ಬಿಜೆಪಿ ಮೇಲೆ ಹಾಕುತ್ತಾ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.ಕುಮಾರ ಸ್ವಾಮಿ ಒಮ್ಮೆ ಬಿಜೆಪಿ ವಿರೋಧಿಸಿದ್ದರೆ ಮತ್ತೊಮ್ಮೆ ಹೋಗಳುತ್ತಾರೆ. ಇತ್ತ ಕಾಂಗ್ರೇಸ್ ಜೊತೆಗೂ ಅದೇ ರೀತಿ ನಡೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವು ಕನ್ನಡಿಗರ ಪಕ್ಷ ಅನ್ನುವುದಕ್ಕಿಂತ ದೇವೆಗೌಡರ ಕುಟುಂಬ ಪಕ್ಷ ಅನ್ನಬಹುದು. ಕುಮಾರಸ್ವಾಮಿಯ ನಾಟಕಗಳು ಚುನಾವಣೆ ಹತ್ತಿರವಾಗುತ್ತಲ್ಲೆ ಹೆಚ್ಚಾಗುತ್ತವೆ. ಇದೇ ಸಾಲಿನಲ್ಲಿ ಆಮ್ ಆದ್ಮೀ ಪಕ್ಷ ಮತ್ತು ಕೆ.ಆರ್.ಎಸ್ ಪಕ್ಷಗಳು ಕೂಡ ಚುನಾವಣೆ ಗೆಲ್ಲಬೇಕು ಅನ್ನುವ ಒಚಿದೇ ಕಾರಣಕ್ಕೆ ಒಂದಿಷ್ಟು ಕ್ರಿಯಾಶೀಲವಾಗಿ ಕಾಣುತ್ತಿವೆ.ಇಲ್ಲಿಯವರೆಗೆ ಸುಮ್ಮನಿದ್ದು ಚುನಾವಣೆ ಹತ್ತಿರ ಬರುತ್ತಲ್ಲೆ ಹೋರಾಟ, ಸೇವೆ ಮತ್ತು ಕಾರ್ಯಕ್ರಮಗಳು ಮತ್ತು ಭವಿಷ್ಯದ ದೃಷ್ಠಿಕೋನಗಳು ಹೀಗೆ ಹೇಳುತ್ತಾ ಜನರಿಗೆ ಹತ್ತಿರವಾಗುತ್ತಿರುವ ರಾಜಕಾರಣಿಗಳ ಸೋಗಲಾಡಿತನವನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹಿರಿಯ ಕಿರಿಯ ರಾಜಕಾರಣಿಗಳು ಕ್ಷೇತ್ರ ಸುತ್ತುವ ಜೊತೆಗೆ ಜನರ ಮನೆ ಬಾಗಲಿಗೆ ಹೋಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಸಮಯಸಾಧಕರು ತಮ್ಮ ಲಾಭಕ್ಕಗಿ ಜನರನ್ನು ಮರಳು ಮಾಡಲು ಬರುತ್ತಿದ್ದಾರೆ.
ಚುನಾವಣೆ ಹತ್ತಿರ ಬರುತ್ತಲ್ಲೆ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತವೆ, ಯುವ ನಾಯಕರು ಹುಟ್ಟಿಕೊಳ್ಳುತ್ತಾರೆ, ಸಮಾಜ ಸೇವಕರು ಹುಟ್ಟಿಕೊಳ್ಳುತ್ತಾರೆ ಹಾಗೂ ಪತ್ರಿಕೆಗಳು ಮಾಧ್ಯಮಗಳು ಹುಟ್ಟಿಕೊಳ್ಳುತ್ತವೆ ಚುನಾವಣೆ ಮುಗಿದ ನಂತರ ಎಲ್ಲವು ಮಾಯ ! ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮತ್ತು ಹೊಸ ಪಕ್ಷಗಳು ಚುನಾವಣೆಗೆ ಕೊಡುವಷ್ಟು ಮಹತ್ವವನ್ನು ಅಭಿವೃದ್ದಿಗೆ ನೀಡಿದ್ದರೆ ಸಮಸ್ಯೆಮುಕ್ತ ಜಗತ್ತಿನ ನಂಬರ್ ಒನ್ ದೇಶ ನಮ್ಮದಾಗಿರುತ್ತಿತ್ತು.ಜನ ಮರಳೋ ಜಾತ್ರೆ ಮರಳೋ ಅನ್ನುವಂತೆ ಜನತೆಯನ್ನು ಮರಳು ಮಾಡುತ್ತಿದ್ದಾರೆ ರಾಜಕಾರಣಿಗಳು. ಚುನಾವಣೆ ದೂರ ಇರುವಾಗ ಒಂದು ರೂಪಾಯಿ ಖರ್ಚು ಮಾಡದ ರಾಜಕಾರಣಿಗಳು ಚುನಾವಣೆ ಬರುತ್ತಲ್ಲೆ ಕೋಟಿ-ಕೋಟಿ ಖರ್ಚು ಮಾಡುತ್ತಾರೆ.ಕೇಳಿದ್ದು ಕೊಡುತ್ತಾರೆ. ಹೀಗೆ ಚುನಾವಣೆಗೆಗಾಗಿ ಚರ್ಚು ಮಾಡುವುದನ್ನೆ ಕೇಲವರು ಭವಿಷ್ಯದ ದೃಷ್ಟಿ ಅಥವಾ ಸಮಾಜಸೇವೆ ಅಂತ ಹೇಳುತ್ತಾರೆ.ಚುನಾವಣೆ ಮುಗಿದ ನಂತರ ನಾಪತ್ತೆ ಆಗುವ ರಾಜಕಾರಣಿಗಳು ಅಂದರೆ ಗೆದ್ದªರು ಸೋತ್ತವರು ಇಬ್ಬರು ಅಷ್ಟೆ ಏಕೆಂದರೆ ಒಂದೇ ಬಾವಿಯ ಕಪ್ಪೆಗಳಂತೆ ಈ ರಾಜಕಾರಣಿಗಳ ಬುದ್ದಿ.
ಚುನಾವಣೆಯ ಪ್ರಣಾಳಿಕೆ ಹೆಸರಿನಲ್ಲಿ ಜನತೆಗೆ ಹಲವಾರು ಆಶೆ ತೋರಿಸಿ ಮತ ಕಿತ್ತುಕೊಳ್ಳುತ್ತಾರೆ,ಕೆಲವರಿಗೆ ಹಣ ಹೆಚಿಡ ಬಟ್ಟೆ ಕುಕ್ಕರ್ ಇತ್ಯಾದಿ ಕೊಟ್ಟು ಕೊಂಡುಕೊಳ್ಳುತ್ತಾರೆ.ಹೀಗೆ ಮಾರಿದ ಅಥವಾ ಆಸೆಯಿಂದ ಕೊಟ್ಟ ಮತದಿಂದ ಕೊಳ್ಳೆಹೊಡೆಯುತ್ತಾರೆ.ಕಷ್ಟಕ್ಕೆ ಬರದ ರಾಜಕಾರಣಿಗಳು ಇನ್ನು ಮುಂದೆ ಬರುತ್ತಾರೆ ಏಕೆಂದರೆ 2023ಕ್ಕೆ ಚುನಾವಣೆಗಾಗಿ ಇದು ಹೇಗೆ ಅಂದರೆ ಅಂದು ಬ್ರಿಟಿಷರು ವ್ಯಾಪಾರಕ್ಕಾಗಿ ಬಂದು ದೇಶ ಆಳಿದರು ಇಂದು ಸಹಾಯ ಮಾಡುತ್ತೇವೆ ಅಥವಾ ಕನಸು ತುಂಬಿ ದೇಶ ಲೂಟಿ ಮಾಡುವ ಪ್ರಬುದ್ಧ ಕ್ರಿಮೀನಲ್ ಬರುತ್ತಾರೆ ಈಗಲಾದರೂ ಎಚ್ಚರದಿಂದ ಇರಿ. ಭವಿಷ್ಯದ ಅಭಿವೃದ್ಧಿಗಾಗಿ ಮತನೀಡಿ-ಪ್ರಜಾಪ್ರಭುತ್ವ


Share

ಏನಿದು ಎಣ್ಣೆಹೊಳೆ…?

Share

ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿ. ಈ ನದಿಯನ್ನು ಶಾಸನವು ‘ಚಂಡಿಹೊಳೆ’ ಎಂದು ಹೆಸರಿಸುತ್ತದೆ. ಪ್ರಾದೇಶಿಕವಾಗಿ ಈ ನದಿಯನ್ನು ‘ಎಣ್ಣೆಹೊಳೆ’ ಎಂದು ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದ ಶ್ರೇಣಿಯ ಮೇಲಬಂಗಾಡಿಯ ಜಾವಳಿಯಲ್ಲಿ ಉಗಮಿಸುವ ಈ ನದಿ, ಮಂಡ್ಯ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಸ್ವಲ್ಪದೂರ ಹಾಸನ ಮಂಡ್ಯ ಜಿಲ್ಲೆಗಳ ಗಡಿಯಾಗಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಅನಂತರ ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೇಹೊಸಹಳ್ಳಿ ಬಳಿ ಮಂಡ್ಯಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರದ ಹಿಂದಿನ ನೀರಿನಲ್ಲಿಕಾವೇರಿ ನದಿಯನ್ನು ಸೇರುತ್ತದೆ. ಹಿನ್ನೀರಿನ ಪ್ರದೇಶಕುಗ್ಗಿದಂತೆ ಬೇಸಿಗೆಯ ಕಾಲದಲ್ಲಿಕೃಷ್ಣರಾಜಪೇಟೆತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿಕಾವೇರಿ ನದಿಗೆ ಹೇಮಾವತಿ ನದಿಯು ಸೇರುವುದನ್ನು ಇಂದಿಗೂ ಕಾಣಬಹುದು. ಹಾಸನ ಜಿಲ್ಲೆಯಗೊರೊರಿನಲ್ಲಿ ಹೇಮಾವತಿ ನದಿಯಅಡ್ಡವಾಗಿಅಣೆಕಟ್ಟೆಯನ್ನುಕಟ್ಟಲಾಗಿದೆ. ಈ ನದಿಯು ಸುಮಾರು 245 ಕಿಲೋ ಮೀಟರ್‍ಉದ್ದ ಹಾಗೂ 5410 ಕಿಲೋ ಮೀಟರ್ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಇದು ಸುಮಾರು 5410 ಚದರ ಕಿಲೋ ಮೀಟರ್‍ಜಲಾ ಪ್ರದೇಶವನ್ನು ಹೊಂದಿದೆ.

ಹೇಮಾವತಿ ನದಿ ಜಾಬಾಲಿ ಸತ್ಯಕಾಮರ ವರಪ್ರಸಾದ
ಹೇಮಾವತಿ ನದಿಯ ಉಗಮ ಸ್ಥಳದಲ್ಲಿರುವ ಗಣೇಶನದೇವಾಲಯದಲ್ಲಿ ಹೇಮಾವತಿ ನದಿಯಉಗಮದ ಪುರಾಣಕಥೆ ಪ್ರಚಲಿತದಲ್ಲಿದೆ. ಬಹಳ ಹಿಂದೆಗೌತಮ ಮಹರ್ಷಿಗಳು ದಂಡಕಾರಣ್ಯ ಪ್ರದೇಶದಲ್ಲಿಆಶ್ರಮ ಮಾಡಿಕೊಂಡು ಸಂಚಾರ ಮಾಡುತ್ತಿದ್ದಕಾಲದಲ್ಲಿ ಸತ್ಯಕಾಮನೆಂಬ ಬಾಲಕನು ಗೌತಮರನ್ನುಕಂಡುತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಶಿಕ್ಷಣ ನೀಡುವಂತೆ ವಿನಂತಿಸಿದನು. ಆಗ ಗೌತಮರು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ಶಿಕ್ಷಣ ನ ಡುವ ಸಂಕಲ್ಪದವನಾಗಿದ್ದೇನೆ, ನಿನ್ನಗೋತ್ರ ಪ್ರವರಗಳನ್ನು ತಿಳಿಸು ಎಂದು ಸತ್ಯಕಾಮನನ್ನು ಕೇಳಿದರು. ಅದಕ್ಕೆಉತ್ತರವಾಗಿ ಸತ್ಯಕಾಮನು ನನಗೆ ನನ್ನತಾಯಿಗೊತ್ತೇ ವಿನಾ ಗೋತ್ರ, ಸೂತ್ರ, ಪ್ರವರಾದಿಗಳು ತಿಳಿದಿಲ್ಲ, ನಾನು ನನ್ನತಾಯಿಯನ್ನು ಕೇಳಿ ಆಕೆಯಿಂದು ತಿಳಿದು ನಿಮಗೆ ನನ್ನಗೋತ್ರ ಪ್ರವರಗಳನ್ನು ತಿಳಿಸುತ್ತೇನೆಂದು ಹೇಳಿ ಮನೆಗೆ ಬಂದನು. ಮನೆಗೆ ಬಂದ ಸತ್ಯಕಾಮನುತಾಯಿಯಲ್ಲಿತನ್ನಗೋತ್ರ, ಸೂತ್ರ, ಪ್ರವರಾದಿಗಳ ಬಗ್ಗೆ ಗೌತಮರು ಪ್ರಶ್ನಿಸಿದ್ದನ್ನು ತಿಳಿಸಿ, ನನ್ನಜನ್ಮಕಾರಣವನ್ನು ತಿಳಿಸುವಂತೆ ಕೇಳಿಕೊಂಡನು. ಅದಕ್ಕೆ ಸತ್ಯಕಾಮನತಾಯಿಜಾಬಾಲಿಯು, ‘ಮಗನೇ ನಾನು ಬ್ರಾಹ್ಮಣನೋರ್ವನ ಮನೆಯಲ್ಲಿ ದಸಿಯಾಗಿ ಸೇವೆಸಲ್ಲಿಸುತ್ತಿದ್ದ ವೇಳೆಯಲ್ಲಿ ನಾನು ಹಲವಾರು ಅತಿಥಿಗಳನ್ನು ಸತ್ಕರಿಸಿದ ಸಮಯದಲ್ಲಿ ನಿನ್ನಜನನವಾಗಿದೆ. ಹಾಗಾಗಿ ನಿನಗೆ ಪಿತೃಸ್ಥಾನವನ್ನು ನೀಡಿದ ವ್ಯಕ್ತಿಯನ್ನು ನಾನು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಸರನ್ನೇ ನಿನ್ನ ಹೆಸರಿನೊಂದಿಗೆ ಬಳಸಿ ಇನ್ನು ಮುಂದೆಜಾಬಾಲಿ ಸತ್ಯಕಾಮನೆಂದು ನಿನ್ನ ನಾಮಾಂಕಿತವನ್ನು ಹೇಳು’ ಎಂದು ತಿಳಿಸಿದಳು. ಸತ್ಯಕಾಮನುತಾಯಿಯಿಂದ ವಿಷಯವರಿತುಗೌತಮರಲ್ಲಿ ಮತ್ತೆ ಬಂದುತಾಯಿ ಹೇಳಿದ ಎಲ್ಲವನ್ನೂಅವರಿಗೆ ಹೇಳಿ ತನ್ನನ್ನು ಶಿಷ್ಯನಾಗುವಂತೆ ಕೇಳಿಕೊಂಡನು. ತ್ರಿಲೋಕ ಜ್ಞಾನಿಗಳಾದ ಗೌತಮ ಮಹರ್ಷಿಗಳು ಜಾಬಾಲಿಯಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ಉಪನಯನವನ್ನು ನೆರವೇರಿಸಿದರು. ಕೆಲವು ಕಾಲಾನಂತರಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ತಿಳಿಸಿದರು.
ಸತ್ಯಕಾಮನುತನಗೆಗೌತಮ ಮಹರ್ಷಿಗಳು ನೀಡಿದ ಹಸುಗಳ ಸಹಿತಕಾಡಿಗೆ ಬಂದು ನೆಲೆ ನಿಂತನು. ಕಾಡಿನಲ್ಲಿ ಪಂಚಭೂತಗಳು ಜಾಬಾಲಿ ಸತ್ಯಕಾಮನಿಗೆ ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಟ್ಟವು, ಸತ್ಯಕಾಮನುತಪಸ್ಸಗೆ ಕುಳಿತುಕೊಳ್ಳಲು ನಿರ್ಧರಿಸಿದ ಸ್ಥಳದಲ್ಲಿ ನೀರಿನಆಸರೆಇರಲಿಲ್ಲ. ಅದನ್ನು ಮನಗಂಡ ಸತ್ಯಕಾಮನು ಆದಿಶಕ್ತಿಯನ್ನು ಕುರಿತು ಅತಿಶಯ ಭಕ್ತಯಿಂದ ತಪಸ್ಸನ್ನಾಚರಿಸಿ ಶಿವನ ಜಟೆಯಿ/ ಮದ ಧುಮುಕುವ ಗಂಗೆಯನ್ನು ಕರುಣಿಸಲು ಉಧ್ಯುಕ್ತ ನಾಮನು ತಪಸ್ಸಿಗೆ ಕುಳಿತ ಸ್ಥಳವೇ ಜಾವಳಿಯ ಸಮೀಪವಿರುವ ಹೇಮಾವತಿ ಗುಡ್ಡವೆಂದು ಇಲ್ಲಿನ ಸ್ಥಳೀಯರು ನಂಬಿದ್ದಾರೆ. ಆತನು ನಿರ್ಮಿಸಿದ ಆಶ್ರಮದ ಬಳಿ ಇಂದು ಹೇಮಾವತಿ ನದಿಯ ಮೂಲಸ್ಥಾನವಿದೆ. ಸತ್ಯಕಾಮನ ತಪಸ್ಸಿಗೆ ಪಾರ್ವತಿದೇವಿಯು ಪ್ರತ್ಯಕ್ಷಳಾಗಿ ಸತ್ಯಕಾಮನಿಗೆ ವರವಿತ್ತಳು. ಹಿಮಾಲಯದ ಹಿಮ ಕರಗಿದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡಿದಳು. ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದುಕೊಟ್ಟಿಗೆ ಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ಹೇಮಾವತಿಗುಡ್ಡವೇ ಈ ಹೇಮಾವತಿ ನದಿಯ ಉಗಮಸ್ಥಾನ. ಇದರಿಂದ ಹಾಸನ ಜಿಲ್ಲೆ ಸಮೃದ್ಧವಾಯಿತು. ಆ ನದಿಯನ್ನು ಹಿಂದೆ ಹೇಮವಾಹಿನಿ ಎಂದೂ ಅನಂತರ ಹೇಮಾವತಿಯೆಂದೂ ಕರೆಯಲಾಯಿತು. ಇಂದು ಹೇಮಾವತಿ ನದಿ ಹಾಸನ, ಮಂಡ್ಯಜಿಲ್ಲೆಗೆ ವರಪ್ರಸಾದವಾಗಿ ಜನರ ಜೀವನಾಡಿಯಾಗಿ ಪರಿವರ್ತಿತವಾಗಿದೆ.

ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ


Share

ಲಾಲ್ ಬಹಾದುರ್ ಶಾಸ್ತ್ರಿ

Share

ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ 02, 1904 – ಜನವರಿ 11, 1966) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.
ಜೀವನ
ಲಾಲ್ ಬಹಾದುರ್ ಮೊಘಲ್ ಸಾರಾಯ್‍ನಲ್ಲಿ ಜನಿಸಿದ್ದು. 1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. 1926 ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಗಾಂಧೀಜಿಯವರ ಜನ್ಮದಿನದಂದೇ ಜನ್ಮದಿನ
ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ
ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ0ದ ವಲ್ಲಭ ಪ0ತ್ ಅವರ ಸರಕಾರದಲ್ಲಿ ಪೆÇೀಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. 1951ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‍ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ 1961ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ 27, 1964ರಂದು ಜವಾಹರ್‍ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‍ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ 9 ರಂದು ಭಾರತದ ಪ್ರಧಾನಿಯಾದರು.
ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು
ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-bಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
ಜನವರಿ 1966ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾμÉ್ಕಂಟ್‍ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ 10 ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು; ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು ಎಂಬ ಊಹೆ ಇದೆ. ಆದರೆ ಅದನ್ನು ಅಲ್ಲಿಯ ವೈದ್ಯರು ದೃಡಪಡಿಸಿಲ್ಲ.
ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.

ಪ್ರಾಮಾಣಿಕ, ಸ್ವಾಭಿಮಾನಿ
ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.

ಶಾಸ್ತ್ರಿ ಸೋಮವಾರ
ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಪ್ರಶಸ್ತಿಗಳು
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.

ಸಾವು
1965 ರ ಇಂಡೋ-ಪಾಕಿಸ್ತಾನ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ 11 ಜನವರಿ 1966 ರಂದು ಶಾಸ್ತ್ರಿ ತಾμÉ್ಕಂಟ್, ಉಜ್ಬೇಕಿಸ್ತಾನ್ (ಆಗಿನ ಸೋವಿಯತ್ ಒಕ್ಕೂಟ) ನಲ್ಲಿ ನಿಧನರಾದರು. ಶಾಸ್ತ್ರಿಯವರ ಬೆಂಬಲಿಗರು ಮತ್ತು ನಿಕಟ ಸಂಬಂಧಿಗಳಲ್ಲಿ ಅನೇಕರು, ಆ ಸಮಯದಲ್ಲಿ ನಿರಾಕರಿಸಿದರು ಮತ್ತು ಅವರ ಸಾವಿನ ಸಂದರ್ಭಗಳನ್ನು ನಂಬಲು ನಿರಾಕರಿಸಿದ್ದಾರೆ ಮತ್ತು ನಿಷ್ಪ್ರಯೋಜಕತೆಯನ್ನು ಆರೋಪಿಸಿದ್ದಾರೆ. ಅವರ ಸಾವಿನ ಕೆಲವೇ ಗಂಟೆಗಳಲ್ಲಿ ಪಿತೂರಿ ಸಿದ್ಧಾಂತಗಳು ಕಾಣಿಸಿಕೊಂಡವು ಮತ್ತು ನಂತರವೂ ಮುಂದುವರೆದಿದೆ. ಅವರನ್ನು ರಾಷ್ಟ್ರೀಯ ನಾಯಕ ಎಂದು ಸ್ತುತಿಸಲಾಯಿತು ಮತ್ತು ಅವರ ನೆನಪಿಗಾಗಿ ವಿಜಯ್ ಘಾಟ್ ಸ್ಮಾರಕವನ್ನು ಸ್ಥಾಪಿಸಲಾಯಿತು. ಅವರ ಮರಣದ ನಂತರ, ಗುಲ್ಜಾರಿಲಾಲ್ ನಂದಾ ಮತ್ತೊಮ್ಮೆ ಹಂಗಾಮಿ ಪ್ರಧಾನ ಮಂತ್ರಿಯ ಪಾತ್ರವನ್ನು ವಹಿಸಿಕೊಂಡರು, ಅಲ್ಲಿಯವರೆಗೆ ಕಾಂಗ್ರೆಸ್ ಸಂಸದೀಯ ಪಕ್ಷವು ಮೊರಾರ್ಜಿ ದೇಸಾಯಿಯವರ ಬದಲಿಗೆ ಇಂದಿರಾ ಗಾಂಧಿಯನ್ನು ಅಧಿಕೃತವಾಗಿ ಶಾಸ್ತ್ರಿಯ ಉತ್ತರಾಧಿಕಾರಿಯಾಗಿ ಆಯ್ಕೆಮಾಡುತ್ತದೆ.

ಶಾಸ್ತ್ರಿ ಅವರ ಸಾವಿನ ನಂತರ, ಅವರ ಪತ್ನಿ ಲಲಿತಾ ಶಾಸ್ತ್ರಿ ಅವರು ವಿಷ ಸೇವಿಸಿದ್ದಾರೆ ಎಂದು ಆರೋಪಿಸಿದರು. ಕ್ರಾಂತ್ ಒ. ಐ. ವರ್ಮಾ ಅವರು ಬರೆದ ಲಲಿತಾ ಕೆ ಅನ್ಸೂ ಎಂಬ ಶೀರ್ಷಿಕೆಯ ಹಿಂದಿಯಲ್ಲಿ ಒಂದು ಮಹಾಕಾವ್ಯ ಪುಸ್ತಕವನ್ನು 1978 ರಲ್ಲಿ ಪ್ರಕಟಿಸಲಾಯಿತು. ಈ ಪುಸ್ತಕದಲ್ಲಿ, ಶಾಸ್ತ್ರಿಯವರ ಸಾವಿನ ದುರಂತ ಕಥೆಯನ್ನು ಅವರ ಪತ್ನಿ ಲಲಿತಾ ಅವರು ವಿವರಿಸಿದ್ದಾರೆ.

ಅವರ ಸಾವಿನ ಬಗ್ಗೆ ಭಾರತ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಲಿಲ್ಲ ಮತ್ತು ಮಾಧ್ಯಮಗಳು ಮೌನವಾಗಿದ್ದವು. ಪಿತೂರಿಯ ಸಂಭವನೀಯ ಅಸ್ತಿತ್ವವನ್ನು ‘ಔಟ್‍ಲುಕ್’ ನಿಯತಕಾಲಿಕೆಯು ಭಾರತದಲ್ಲಿ ಆವರಿಸಿದೆ. ಶಾಸ್ತ್ರಿಯವರ ಸಾವಿಗೆ ಸಂಬಂಧಿಸಿದ ದಾಖಲೆಯನ್ನು ಬಹಿರಂಗಪಡಿಸಲು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಅIಂ’s ಇಥಿe oಟಿ Souಣh ಂsiಚಿ ನ ಲೇಖಕ ಅನುಜ್ ಧರ್ ನಂತರ ಪ್ರಶ್ನೆಯನ್ನು ಕೇಳಿದರು, ಆದರೆ ಇದು ಹಾನಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಿ ಪ್ರಧಾನಿ ಕಾರ್ಯಾಲಯವು ಹೊಣೆಗಾರಿಕೆಯನ್ನು ನಿರಾಕರಿಸಿತು. ವಿದೇಶಿ ಸಂಬಂಧಗಳು, ದೇಶದಲ್ಲಿ ಅಡ್ಡಿ ಉಂಟುಮಾಡುತ್ತವೆ ಮತ್ತು ಸಂಸದೀಯ ಸವಲತ್ತುಗಳ ಉಲ್ಲಂಘನೆಯನ್ನು ಉಂಟುಮಾಡುತ್ತವೆ. ಕುಲದೀಪ್ ನಾಯರ್ ಅವರ ಮತ್ತೊಂದು ಆರ್‍ಟಿಐ ಮನವಿಯನ್ನು ತಿರಸ್ಕರಿಸಲಾಗಿದೆ, ಏಕೆಂದರೆ ಪಿಎಂಒ ಮನವಿಯ ಮೇಲಿನ ಬಹಿರಂಗಪಡಿಸುವಿಕೆಯಿಂದ ವಿನಾಯಿತಿಯನ್ನು ಉಲ್ಲೇಖಿಸಿದೆ. ಭಾರತವು ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಿದೆಯೇ ಮತ್ತು ಸರ್ಕಾರವು ಫೌಲ್ ಪ್ಲೇಯ ಆರೋಪಗಳನ್ನು ತನಿಖೆ ಮಾಡಿದ್ದರೆ ಎಂಬ ಪ್ರಶ್ನೆಗಳಿಗೆ ಗೃಹ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. ದೆಹಲಿ ಪೆÇಲೀಸರು ಆರ್‍ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಶಾಸ್ತ್ರಿ ಸಾವಿನ ಬಗ್ಗೆ ತಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೇ ಹೇಳಿದೆ. ದೆಹಲಿ ಪೆÇಲೀಸ್‍ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ದಿನಾಂಕ 29 ಜುಲೈ 2009 ಅವರ ಉತ್ತರದಲ್ಲಿ, “ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಯಾವುದೇ ದಾಖಲೆಯು ಈ ಜಿಲ್ಲೆಯಲ್ಲಿ ಲಭ್ಯವಿಲ್ಲ. ಆದ್ದರಿಂದ ಅಗತ್ಯವಿರುವ ಮಾಹಿತಿಯು ಸಂಬಂಧಿಸಿದೆ ನವ ದೆಹಲಿ ಜಿಲ್ಲೆಯನ್ನು ದಯವಿಟ್ಟು ಶೂನ್ಯ ಎಂದು ಪರಿಗಣಿಸಬಹುದು.” ಇದು ಹೆಚ್ಚಿನ ಅನುಮಾನಗಳನ್ನು ಸೃಷ್ಟಿಸಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವು ಭಾರತೀಯ ರಾಜಕೀಯದ ಅತ್ಯಂತ ದೊಡ್ಡ ಬಿಡಿಸಲಾಗದ ರಹಸ್ಯಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಆರ್‍ಟಿಐ ಅರ್ಜಿಯ ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ ಪಿಎಂಒ, ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಒಂದೇ ಒಂದು ವರ್ಗೀಕೃತ ದಾಖಲೆಯನ್ನು ಹೊಂದಿದೆ, ಇದನ್ನು ಆರ್‍ಟಿಐ ಕಾಯ್ದೆಯಡಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ. ಇದು ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ಹಿಂದಿನ ಸೋವಿಯತ್ ಸರ್ಕಾರದ ಏಕೈಕ ದಾಖಲೆ ಎಂದರೆ “ಆರ್‍ಎನ್ ಚುಗ್, ಡಾಕ್ಟರ್ ಇನ್-ಪ್ರಧಾನಿ ಮತ್ತು ರμÁ್ಯದ ಕೆಲವು ವೈದ್ಯರನ್ನು ಒಳಗೊಂಡ ತಂಡವು ನಡೆಸಿದ ಜಂಟಿ ವೈದ್ಯಕೀಯ ತನಿಖೆಯ ವರದಿ” ಎಂದು ಎಂಇಎ ಹೇಳಿದೆ ಮತ್ತು ಯಾವುದೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ. ಯುಎಸ್ಎಸ್ಆರ್ ಭಾರತದಲ್ಲಿ ಶಾಸ್ತ್ರಿಯವರ ಮೃತದೇಹದ ಯಾವುದೇ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ಗೃಹ ಸಚಿವಾಲಯವು ದೆಹಲಿ ಪೆÇೀಲೀಸ್ ಮತ್ತು ನ್ಯಾಷನಲ್ ಆರ್ಕೈವ್ಸ್‍ಗೆ ವಿಷಯವನ್ನು ಉಲ್ಲೇಖಿಸಿದೆ.

ನಂತರ, 4 ವರ್ಷಗಳ ಅವಧಿಯಲ್ಲಿ ಮಾಜಿ ಅIಂ ಆಪರೇಟಿವ್ ರಾಬರ್ಟ್ ಕ್ರೌಲಿಯನ್ನು ಸಂದರ್ಶಿಸಿದ ಪತ್ರಕರ್ತ ಗ್ರೆಗೊರಿ ಡೌಗ್ಲಾಸ್ ಅವರ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದರು ಮತ್ತು ಕಾಗೆಯೊಂದಿಗೆ ಸಂವಾದಗಳು ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಪ್ರತಿಲೇಖನವನ್ನು ಪ್ರಕಟಿಸಿದರು. ಪುಸ್ತಕದಲ್ಲಿ, ಕ್ರೌಲಿ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ವಿಯೆನ್ನಾದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಆಲ್ಪ್ಸ್‍ನಲ್ಲಿ ವಿಮಾನ ಪತನಗೊಂಡ ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಭಾಭಾ ಅವರನ್ನು ತೊಡೆದುಹಾಕಲು ಅIಂ ಕಾರಣವಾಗಿದೆ ಎಂದು ಹೇಳಿದ್ದಾರೆ. ಪರಮಾಣು ರೀತಿಯಲ್ಲಿ ಭಾರತದ ಕಟ್ಟುನಿಟ್ಟಿನ ನಿಲುವು ಮತ್ತು ಪರಮಾಣು ಪರೀಕ್ಷೆಗಳೊಂದಿಗೆ ಮುಂದುವರಿಯಲು ಬಯಸಿದ್ದ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಯುಎಸ್‍ಎ ಜಾಗರೂಕವಾಗಿದೆ ಎಂದು ಕ್ರೌಲಿ ಹೇಳಿದರು. ಈ ಪ್ರದೇಶದ ಮೇಲೆ ಭಾರತ ಮತ್ತು ರμÁ್ಯಗಳ ಸಾಮೂಹಿಕ ಪ್ರಾಭಲ್ಯದ ಬಗ್ಗೆ ಏಜೆನ್ಸಿಯು ಚಿಂತಿಸುತ್ತಿದೆ ಎಂದು ಅವರು ಹೇಳಿದರು, ಇದಕ್ಕಾಗಿ ಬಲವಾದ ಪ್ರತಿಬಂಧಕ ಅಗತ್ಯವಿದೆ.


Share

ಶಾಂತಿ ಕದಲಿದ ಹಿಂದೂ ಮುಸ್ಲಿಂ ಬುದ್ಧಿವಂತರು

Share


ಕರ್ನಾಟಕದಲ್ಲಿ ಇತ್ತೀಚೆಗೆ ಧರ್ಮಗಳ ಸಂಘರ್ಷದಲ್ಲಿ ಶಾಂತಿಯನ್ನು ಕೆಲವರು ಕದಲುತ್ತಿದ್ದಾರೆ. ರನ್ನ ಪಂಪನಿಂದ ಹಿಡಿದು ಆಧುನಿಕತೆಯ ಕವಿಗಳಾದ ಕುವೆಂಪುವರೆಗೂ ಅಂದರೆ ಕವಿರಾಜ ಮಾರ್ಗದಿಂದ ಹಿಡಿದು ಇಂದಿನ ಚಂದ್ರಶೇಖರ ಕಂಬಾರ ಅವರ ಸಾಹಿತ್ಯದವರೆಗೂ ಕನ್ನಡ ನಾಡನ್ನು ಶಾಂತಿಯ ತವರು, ಬನವಾಸಿಯ ಬೀಡು, ಶ್ರೀ ಗಂಧದ ನಾಡು, ಸರ್ವಜನರ ಶಾಂತಿಯ ತೋಟ ಎಂದೆಲ್ಲ ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು. ಎಂಬ ಗೀತೆಯೊಂದಿಗೆ ನಾಡಿನ ಮಹತ್ವವನ್ನು ಡಾ|| ರಾಜ್‍ಕುಮಾರ್ ರವರ ಕಂಠ ಸಿರಿಯಲ್ಲಿ ಹೇಳಿದ ಈ ಕನ್ನಡ ನಾಡು ಇಂದು ಧರ್ಮ ಸಂಘರ್ಷದ ಮೂಲ ಸ್ಥಾನವಾಗಿ ಬಿಂಬಿತವಾಗುತ್ತಿದೆ. ಉಡುಪಿಯ ಕಾಲೇಜ್ ಒಂದರಲ್ಲಿ ಪ್ರಾರಂಭವಾದ ಹಿಜಾಬ್ ಕೇಸರಿ ಕದನವು ರಾಜ್ಯ ವ್ಯಾಪ್ತಿ ವ್ಯಾಪಿಸಿ ನ್ಯಾಯಾಲಯದ ಮುಂದೆ ನಿಂತಾಗ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಹಿಜಾಬ್‍ಗೆ ಅನುಮತಿಯನ್ನು ನಿರಾಕರಿಸಿತು. ಈ ವಿಚಾರದಲ್ಲಿ ಹೊತ್ತಿಕೊಂಡ ಬೆಂಕಿಯು ಮುಸ್ಲಿಂ ಸಮುದಾಯದಲ್ಲಿ ಮಾರ್ಚ್ 17ರಂದು ಹಿಜಾಬ್ ತೀರ್ಪನ್ನು ವಿರೋಧಿಸಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಕರ್ನಾಟಕ ಬಂದ್ ಮಾಡಿದರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿಂದೂ ಸಂಘಟನೆಗಳು ಹಿಂದೂ ಯುವ ಜನತೆ ಹಿಜಾಬ್‍ಗೋಸ್ಕರ ಒಂದು ದಿನ ನೀವು ಅಂಗಡಿ ಮುಚ್ಚುವುದಾದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಜಾಗೃತಿ ಮೂಡಿಸಲು ಪ್ರಾರಂಭ ಮಾಡಿದರು. ಈ ಜಾಗೃತಿ ಮುಂದುವರೆದು ಕರಾವಳಿ ಕರ್ನಾಟಕದ ಕೆಲವು ಗ್ರಾಮಗಳ ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ಅನುಮತಿ ಬೇಡ ಎಂಬ ಹೋರಾಟ ಪ್ರಾರಂಭವಾಯಿತು ಈ ಹೋರಾಟವು ಮೊದಮೊದಲು ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ನಂತರದ ದಿನಗಳಲ್ಲಿ ಕಲ್ಬುರ್ಗಿ, ಬೆಂಗಳೂರಿಗೂ ವ್ಯಾಪಿಸಿ ಇಂದು ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರದ ವಿರುದ್ದ ಹಿಂದೂತ್ವದ ಹೆಸರಿನಲ್ಲಿ ಧ್ವನಿಯೆತ್ತಲಾಗುತ್ತಿದೆ. ಈ ಸಂಘರ್ಷದ ಮಧ್ಯೆ ಹಲಾಲ ಮಾಂಸದ ವ್ಯಾಪಾರವು ಉತ್ತುಂಗಕ್ಕೇರಿದೆ. ಹಿಂದೂ ಬುದ್ದಿ ಜೀವಿಗಳು, ಮಠಾಧೀಶರು ಸೇರಿದಂತೆ ರಾಜಕಾರಣಿಗಳು ಹಿಂದೂ ಪರ ಸಂಘಟನೆಗಳು ಈ ಸಂಘರ್ಷಕ್ಕೆ ಬೆಂಕಿಯಿಡುತ್ತಿದ್ದಾರೆ. ಇತ್ತೀಚೆಗೆ ಈ ಒಂದು ಸಮಸ್ಯೆಯನ್ನು ರಾಜಕೀಯ ಮಾಡಿಕೊಂಡು ಕೆಲವು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಆಸೆಯಂತೆ ದೇಶವು ಜಾತ್ಯಾತೀತ ಆಗಬೇಕಿತ್ತು. 75 ವರ್ಷಗಳಿಗಿಂತ ಹೆಚ್ಚು ಕಳೆದರೂ ಜಾತಿ – ಧರ್ಮದ ವಿಷಯದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದಾದರೆ ಅಂಬೇಡ್ಕರ್ ಸೇರಿದಂತೆ ಹಲವಾರು ಮಹಾನಿಯರಿಗೆ ನಾವು ಮಾಡುತ್ತಿರುವ ಅವಮಾನವಲ್ಲವೇ? ಅನಾದಿಕಾಲದಿಂದಲೂ ಹಿಂದೂ ಮುಸ್ಲಿಂ ಸೇರಿದಂತೆ ಹಲವಾರು ಧರ್ಮಿಯರು, ಜಾತಿಯವರು ಒಂದಾಗಿ ಬದುಕುತ್ತಿದ್ದಾರೆ. ಅಧಿಕಾರಕ್ಕಾಗಿ, ಹೆಸರಿಗಾಗಿ ಮತ್ತು ಬಾಯಿ ಚಪಲಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವು ನಡೆಯುತ್ತಿವೆ. ಇದರ ಮಧ್ಯೆ ಕಾಳಿ ಸ್ವಾಮಿಯಂತಹ ಕೆಲವು ವಿಕೃತ ಮನಸ್ಸಿನ ಹೋರಾಟಗಾರರು ಮುಸ್ಲಿಂರನ್ನು ವಿರೋಧಿಸುವ ಧಾವಂತದಲ್ಲಿ ನಮ್ಮ ಧರ್ಮದ ತನ್ನ ಸ್ಥಾನದ ಸಾಮಾನ್ಯ ಪ್ರಜ್ಞೆಯನ್ನು ಕಳೆದುಕೊಂಡಂತೆÉ ವರ್ತಿಸುತ್ತಿದ್ದಾರೆ. ಹಿಂದೂ ಮತ್ತು ಹಿಂದೂತ್ವದ ಪರಿಕಲ್ಪನೆಯಲ್ಲಿ ಮತ್ತು ಇಸ್ಲಾಂ ಮತ್ತು ಭಾರತೀಯ ಮುಸ್ಲಿಂ ಎಂಬ ವಿಚಾರಗಳಲ್ಲಿ ಪರಿಪೂರ್ಣ ವ್ಯಾಖ್ಯಾನಗಳಿಲ್ಲದಿದ್ದರೂ ಕೂಡ ಅರೆಬೆಂದ ಅಜ್ಞಾನಿಗಳು ಹುಚ್ಚು ನಾಯಿಯಂತೆ ಕಿರುಚುವುದನ್ನೆ ಉದ್ಯೋಗ ಮಾಡಿಕೊಂಡಿದ್ದಾರೆ. ಬಿ.ಜೆ.ಪಿ ಯವರು ತಮ್ಮ ಓಟ್ ಬ್ಯಾಂಕಿಗಾಗಿ ಹಿಂದೂತ್ವದ ಅಜಾಂಡದಲ್ಲಿ ಕಾಂಗ್ರೆಸ್‍ನವರು ಅಲ್ಪಸಂಖ್ಯಾತರು ಮತ್ತು ಮುಸ್ಲಿಂರನ್ನು ತಮ್ಮ ಓಟ್ ಬ್ಯಾಂಕಿಗಾಗಿ ಬೆಂಕಿ ಹಚ್ಚಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ಈ ವಿಕೃತ ಮನಸ್ಸಿನ ರಾಜಕೀಯ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ, ಕಾರ್ಮಿಕ ವರ್ಗಕ್ಕೆ, ಸಣ್ಣ ಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತದೆಯೇ ಹೊರೆತು ಹುಚ್ಚು ನಾಯಿಯಂತೆ ಬೊಗಳುವ ಹೋರಾಟಗಾರರಿಗಾಗಲೀ, ಸಮಾಜದಲ್ಲಿ ಬೆಂಕಿ ಹಚ್ಚಿ ತಮ್ಮ ರಾಜಕೀಯ ಜೀವನವನ್ನು ಉಜ್ವಲ ಮಾಡಿಕೊಳ್ಳುವ ನಾಮರದ ರಾಜಕಾರಣಿಗಳಿಗಾಗಲಿ ಆಗುವುದಿಲ್ಲ ರಾಜಕಾರಣಿಗಳು ಕಾರ್ಪೊರೆಟ್ ಬಿಸನೆಸ್ ಮ್ಯಾನತರ ಸಮಾಜದ ನೆಮ್ಮದಿಯನ್ನು ಹಾಳುಮಾಡಿ ತಮ್ಮ ರಾಜಕೀಯ ಬಿಸ್‍ನೆಸ್ ಅನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ರಾಮ, ರಹೀಮ್, ಅಲ್ಲಾ, ಯೇಸು ಧರ್ಮ ಸಂಕಟದ ಮಧ್ಯೆ ರಕ್ತ ಹರಿದರೆ ಬಂದು ಕಾಪಾಡುವುದಿಲ್ಲ.
ಕರ್ನಾಟಕವನ್ನು ಶಾಂತಿ ಸೌಹರ್ದತೆಯ ತೋಟ ಎನ್ನುತ್ತಾರೆ ಇಂತಹ ತೋಟದಲ್ಲಿ ಓದುವ ಮಕ್ಕಳ ತಲೆಯಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಪರೀಕ್ಷೆಗಳನ್ನು ಆತಂಕದಲ್ಲಿ ಬರೆಯುವಂತೆ ಸ್ವಯಂಘೋಷಿತ ಬುದ್ದಿ ಜೀವಿಗಳು, ಧರ್ಮ ಪಾಲಕರು, ಧರ್ಮ ಅನುಯಾಯಿಗಳು ಮತ್ತು ಹೋರಾಟಗಾರರು ತಮ್ಮ ತಮ್ಮ ಉಳಿವಿಗಾಗಿ ಇಂತಹ ಬೆಂಕಿ ಹಚ್ಚುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಒಬ್ಬ ನಿಜವಾದ ಮುಸ್ಲಿಂನಿಗೆ ಹಲಾಲ್, ಬುರ್ಕಾ, ಹಿಜಾಬ್, ತಲಾಖ್ ಮುಖ್ಯ ಅನ್ನುವುದಾದರೆ ಅದೇ ಖುರಾನಿನಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು ಬೇರೆಯವರನ್ನು ಪ್ರೀತಿಸಬೇಕು, ದಾನಧರ್ಮ (ಜಕಾತ್) ಮಾಡಬೇಕು ಅಂತಹ ಅದೆಷ್ಟೋ ಒಳ್ಳೆಯ ವಿಚಾರಗಳು ಅರ್ಥವಾಗಿಲ್ಲವೇ? ಹಿಂದೂ ಧರ್ಮವು ಮೂಢನಂಬಿಕೆಯಿಂದ ಕೂಡಿದೆ ಎನ್ನುವ ನೀವು ನಿಮ್ಮ ಧರ್ಮದ ಮೂಢನಂಬಿಕೆಗಳು, ಕೆಟ್ಟ ಪದ್ದತಿಗಳು ಮತ್ತು ಮಹಿಳಾ ಶೋಷಣೆಯ ವಿರುದ್ಧ ಏಕೆ ಧ್ವನಿಯೆತ್ತುವಿದಿಲ್ಲ? ಹಾಗೆಯೇ ಹಿಂದೂ ಧರ್ಮದ “ವಸುದೈವ ಕುಟುಂಬಕಂ” ಮತ್ತು ಸ್ವಾಮಿ ವಿವೇಕಾನಂದರು ಹೇಳುವಂತೆ “ಬೇರೆ ಧರ್ಮದ ಬಗ್ಗೆ ತಪ್ಪು ಸಂದೇಶ ಸಾರುವ ಮುನ್ನ ಹಿಂದೂ ಧರ್ಮದ ಒಳ್ಳೆಯ ವಿಚಾರಗಳನ್ನು ಹೇಳು” ಸೇರಿದಂತೆ ಹಲವಾರು ಹಿಂದೂ ತಪ್ಪುಗಳನ್ನು ಸ್ವಯಂ ಘೋಷಿತ ಹಿಂದೂ ರಾಜಕಾರಣಿಗಳು ಖಾವಿ ತೊಟ್ಟ ಸ್ವಾಮಿಗಳು ಅರಿತಿದ್ದಾರ ಸತ್ಯಗಳೇ ಗೊತ್ತಿಲ್ಲದ ಅರೆಜ್ಞಾನಿಗಳಿಂದ ಆಧುನಿಕ ತಂತ್ರಜ್ಞಾನದ ಜಗತ್ತು ತಲೆಯಲ್ಲಿ ಇರಬೇಕಾದದ್ದು ಗೂಗಲ್‍ನಲ್ಲಿದೆ. ಗೂಗಲ್‍ನಲ್ಲಿ ಇರಬೇಕಾಗಿದ್ದು ತಲೆಯಲ್ಲಿದೆ. ಮನುಷ್ಯನ ವಿಕೃತ ವಾದಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ನಾಡಿನ ಶಾಂತಿಯನ್ನು ಕದಲುವ ಜೊತೆಗೆ ಕರ್ನಾಟಕದ ಗೌರವವನ್ನು ಅಂತರ್ ರಾಷ್ರ್ಟೀಯ ಮಟ್ಟದಲ್ಲಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತ ಅಂದರೆ ಹಿಂದೂ ಹಿಂದೂನೇ ಇಲ್ಲಿ ಸಾರ್ವಭೌಮ ಆದರೆ ಮುಸ್ಲಿಂ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ವಾಹನಗಳ ರಿಪೇರಿ, ಹಳೇ ವಸ್ತುಗಳ ಮರುಬಳಕೆ ಮತ್ತು ಬಿರಿಯಾನಿಯಂತಹ ಅಡುಗೆಗೆ ನಮ್ಮ ಮುಸ್ಲಿಂನೇ ಬೇಕು. ಪಾಯಸ, ಹೋಳಿಗೆ ಹಿಂದೂ ಮನೆಯಲ್ಲಿ ತಿಂದರೆ ಬಿರಿಯಾನಿ ಮುಸ್ಲಿಂ ಮನೆಯಲ್ಲಿ ತಿನ್ನಬೇಕು. ಅದೇ ಚೆಂದ ಮನುಷ್ಯ ಬದುಕುವುದೇ 60 ರಿಂದ 70 ವರ್ಷ ಇದರ ಮಧ್ಯೆ ಹಲಾಲ್, ಜಟಕಾ ಬೇಕಾ? ನಾ ಅಳಿದರೂ, ಉಳಿದರೂ ನಾನು, ನನ್ನವರು ಸತ್ತರು ನನ್ನ ತನವು ನಶಿಸಿ ಹೋದರೂ ಕನ್ನಡ ನಾಡಿಗೆ ಒಂದು ಇತಿಹಾಸವಿದೆ. ಕನ್ನಡ ಮಣ್ಣಿಗೆ ಒಂದು ಧರ್ಮವಿದೆ. ಪಾಲಿಸಲು ಕಲಿಯಿರಿ ಈ ಮೂರು ದಿನದ ಸಂತೆಯಲಿ. ಸಂತೆ ಮುಗಿದ ಮೇಲೆ ಚಟ್ಟಕ್ಕೆ ಹೆಗಲು ಕೊಡುವವರು ಯಾರೋ ಗೊತ್ತಿಲ್ಲ. ಮಸಣದ ಮಣ್ಣು ಅಗೆಯುವವರು ಯಾರೊ ಗೊತ್ತಿಲ್ಲ. ಧರ್ಮವನ್ನು ಪಾಲಿಸಿ ಅಂಧರಾಗಿ ಅಲ್ಲ ಬೆಳಕಿನಿಂದ ಕನ್ನಡ ನಾಡಿನ ಶಾಂತಿಯನ್ನು ಕಾಪಾಡಲು ನಿಮ್ಮ ಸಂಯಮವು ಅತ್ಯಂತ ಮುಖ್ಯವಾಗಿದೆ.


Share

2022ರ ಬಜೆಟ್

Share


ವಿತ್ತ ಸಚಿವೆ ನಿರ್ಮಲಾ ಸೀತರಾಮ್‍ನ್ ರವರು ಈ ಬಾರಿ ಮಂಡಿಸುವ ಬಜೆಟ್ ಪ್ರಗತಿಯ ವೇಗವನ್ನು ಹೆಚ್ಚಿಸುವ ಭವಿಷ್ಯದ ಗುರಿಯೊಂದಿಗಿನ ಈ ಬಜೆಟ್ ನೇರವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಹಿಂದುಳಿದವರಿಗೆ ಅನುಕೂಲ ಒದಗಿಸಲಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ 25000 ಕಿ.ಮೀ ಹೆದ್ದಾರಿ ಅಭಿವೃದ್ಧಿಗಾಗಿ 3.8 ಕೋಟಿ ರೂ, 80 ಲಕ್ಷ ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ 48000 ಕೋಟಿ ರೂ, ನರೇಗಾ ಯೋಜನೆಗೆ 73,000 ಕೋಟಿ ರೂ, ಎಂ ಎಸ್ ಪಿ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ 2.37 ಲಕ್ಷ ಕೋಟಿ ರೂ, ಷೇರು ವಿಕ್ರಯಗುರಿಗೆ 65,000 ಕೋಟಿ ರೂ, ಮೆಟ್ರೋ ಯೋಜನೆಗಳಿಗೆ 19,130 ಕೋಟಿ ರೂ, ಬಿಟ್ ಕಾಯಿನ್ ನಂತಹ ಡಿಜಿಟಲ್ ಆಸ್ತಿಗಳ ಮೇಲಿನ ಆದಾಯಕ್ಕೆ 30% ರಷ್ಟು ತೆರಿಗೆ ವರ್ಗಾವಣೆ ಮೊತ್ತದ ಮೇಲೆ 1% ಟಿಡಿಎಸ್, ಷೇರು ಈಕ್ವೀಟಿಯಂತಹ ದೀರ್ಘಕಾಲೀನ ಹೂಡಿಕೆಗಳಿಂದ ಆದಾಯದ ಮೇಲಿನ ಸರ್ಚಾಜ್ ಗೆ ಗರಿಷ್ಠ 15% ರಷ್ಟು ಮಿತಿ, ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಡಿಜಿಟಲ್ ಕರೆನ್ಸಿಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ ಸೀತಾರಾಮನ್ ರವರು 30% ರಷ್ಟು ತೆರಿಗೆಯನ್ನು ಕ್ರಿಪ್ಟೋ ಕರೆನ್ಸಿಗಳ ಮೇಲೆ ವಿಧಿಸಲಾಗುವುದು ಎಂದು ಹೇಳಿದ್ದಾರೆ. 400 “ವಂದೇ ಭಾರತ್ ರೈಲು” ಘೋಷಣೆ. ಇಂಧನ ದಕ್ಷÀತೆ ಮತ್ತು ಪ್ರಯಾಣಿಕ ಸ್ನೇಹಿ ತಂತ್ರಜ್ಞಾನದ ರೈಲು, ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯಡಿ 100 ಸರಕು ಟರ್ಮಿನಲ್ ನಿರ್ಮಾಣ ಗುರಿ, ಸ್ಟಾರ್ಟ್ ಅಫ್ ಕಂಪನಿಗಳಿಗೆ ತೆರಿಗೆ ರಿಯಾಯಿತಿ, ಒನ್ ಕ್ಲಾಸ್ ಮತ್ತು ಒನ್ ಚಾನಲ್, ಕೃಷಿಗೆ ಉತ್ತೇಜನ, ರಫ್ತು ಉತ್ತೇಜನಕ್ಕೆ ಕ್ರಮ, ಕಿಸಾನ್ ಡ್ರೋನ್ ಯೋಜನೆಯಡಿ ಕೃಷಿ ಭೂಮಿ ಸಮೀಕ್ಷೆ, ದಾಖಲೆಗಳ ಡಿಜಿಟಲೀಕರಣ, ಕೃಷಿ ಆಧಾರಿತ ಸ್ಟಾರ್ಟ್ ಅಫ್‍ಗಳ ನೆರವಿಗೆ ನಬಾರ್ಡ ಸಾಲ, ಗ್ರಾಮೀಣರ ಮನೆಗೆ ನಲ್ಲಿ ನೀರಿನ ಸಂಪರ್ಕ ಯೋಜನೆ “ಹರ್ ಘರ್ ನಲ್ ಸೇ ಜಲ್” ಗೆ 60,000 ಕೋಟಿ ರೂ, ಕ್ರೀಡೆಗೆ 3.062 ಕೋಟಿ ರೂ ಮಂಡಿಸಿದ್ದಲ್ಲದೇ, ಇ-ಪಾಸ್ ಪೋರ್ಟ್ ಜಾರಿ, ತೆರಿಗೆದಾರರು 2 ವರ್ಷಗಳ ಅವಧಿಯಲ್ಲಿ ಪರಿಷ್ಕøತ ರಿಟನ್ರ್À ಸಲ್ಲಿಸಲು ಅವಕಾಶ, ನದಿ ಜೋಡಣೆಗೆ ಸಮ್ಮತಿ, ಜಲಶಕ್ತಿಗೆ ಅನುದಾನ ಹೆಚ್ಚಳ, ಗ್ರಾಮ ರಸ್ತೆ ನಿರ್ಮಾಣಕ್ಕೆ ಒತ್ತು, ಪಂಚ ನದಿ ಜೋಡಣೆ ಗುರಿ, ಪರಿಸರ ಅರಣ್ಯ ಇಲಾಖೆಗೆ 3,030ಕೋಟಿ ರೂ ಅನುದಾನ, ಭೂ ವಿಜ್ಞಾನಕ್ಕೆ 1,897 ಕೋಟಿ ರೂ ಅನುದಾನ ನೀಡಿದೆ. ಅಲ್ಲದೇ ಸಿರಿಧಾನ್ಯಗಳ ಮಾರುಕಟ್ಟೆ ವಿಸ್ತರಣೆ ಮಾಡುವುದರ ಜೊತೆಗೆ 2023 ಅನ್ನು “ಅಂತರ್ ರಾಷ್ಟ್ರೀಯ ಸಿರಿಧಾನ್ಯಗಳ” ವರ್ಷವೆಂದು ಘೋಷಣೆ ಮಾಡಿದೆ.
ಈ ಬಾರಿಯ ಬಜೆಟ್ ಅನ್ನು ಹಣಕಾಸು ಸಚಿವರು ಮುಂದಿನ 2 ವರ್ಷಗಳಲ್ಲಿ ಬರುವ ಲೋಕಸಭಾ ಚುನಾವಣೆ ಮತ್ತು ಭಾರತದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಕೊರೋನಾದ 3 ಅಲೆಗಳ ಮಧ್ಯೆ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದು ಇದು “ವರ್ಚುವಲ್ ಬಜೆಟ್” ಆಗಿ ಗಮನಸೆಳೆದಿದೆ.
ಏರಿಕೆ
ವಿಮಾನಯಾನ, ಛತ್ರಿಗಳು
ಇಮಿಟೇಶನ್ ಜ್ಯುವೆಲರಿ,
ಸ್ಮಾರ್ಟ್ ಮೀಟರ್, ಸ್ಪೀಕರ್
ಸೋಲಾರ್ ಸೆಲ್, ಮಾಡ್ಯೂಲ್
ಎಕ್ಸರೇ ಮೆಷಿನ್
ಹೆಡ್ ಫೋನ್ ಮತ್ತು ಇಯರ್ ಫೋನ್
ಎಲ್ಲಾ ಆದಾಯದ ಉತ್ಪನ್ನಗಳು
ಇಳಿಕೆ
ಎಲೆಕ್ಡ್ರಾನಿಕ್ ಬಿಡಿ ಭಾಗಗಳು
ಮುತ್ತುಗಳು, ಪಾಲೀಷ್ ಮಾಡಿದ ವಜ್ರ
ಮೊಬೈಲ್, ಮೊಬೈಲ್ ಕ್ಯಾಮೆರಾ ಲೆನ್ಸ್,
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು
ಮೀಥೈಲ್, ಆಲ್ಕೋಹಾಲ್, ಮೆಂಥಾಲ್,
ಅಟಿಟಿಕ್ ಆಸಿಡ್, ಕೋಕಾ ಬೀನ್ಸ್,
ಪೆಟ್ರೋಲಿಯಂ ಉತ್ಪನ್ನಗಳಿಗೆ ಬಳಸುವ ರಾಸಾಯನಿಕ
ಶೀತಲೀಕರಿಸಿದ ಚಿಪ್ಪು ಜೀವಿಗಳು, ಸ್ಕ್ವೀಡ್
ಕೃಷಿ ಸಲಕರಣೆಗಳು, ಇಂಗು


Share

ಹಿಜಾಬ್ ಕೇಸರಿ ಕದನ : ಶಿಕ್ಷಣ ಪಥನ

Share

ಉಡುಪಿಯ ಕಾಲೇಜ್ ಒಂದರಲ್ಲಿ ನಡೆದ ಘಟನೆಯಿಂದ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕದ ತುಂಬಾ ವ್ಯಾಪಿಸಿದೆ. 9 ಮತ್ತು 10ನೇ ತರಗತಿಯವರೆಗೆ ಫೆಬ್ರವರಿ 14 ರವರೆಗೆ ಮತ್ತು ಪಿಯು, ಡಿಗ್ರಿ ಸೇರಿದಂತೆ ಕಾಲೇಜ್‍ಗಳ ಶಿಕ್ಷಣವನ್ನು ಅನಿರ್ಧಿಷ್ಟ ಅವಧಿಗೆ ನಿಲ್ಲಿಸಲಾಗಿದೆ. ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣವು ರಾಜಕೀಯ ಬಣ್ಣವನ್ನು ತಳಿಯುತ್ತಾ ಜಾತಿ ಮತ್ತು ಧರ್ಮಗಳ ಭಾವನೆಗಳೊಂದಿಗೆ ಆಟವಾಡುತ್ತಾ ಈಗ ಶಾಲಾ ಕಾಲೇಜುಗಳ ಆವರಣದಿಂದ ಹೊರ ಬಂದಿದೆ . ಈ ಹಿಜಾಬ್ ಕೇಸರಿ ಕದನವು ವೈಯಕ್ತಿಕ ಮತ್ತು ರಾಜಕೀಯ ಪ್ರೇರಣೆಯಿಂದ ಕೂಡಿದ್ದು ಕಾಣದ ಕೈಗಳ ಮತ್ತು ದುಷ್ಟ ಮನಸ್ಥಿತಿಯ ರಾಜಕಾರಣಿಗಳಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಒಂದು ಸಾರಿ ಹಿಜಾಬ್‍ನ ಹಿನ್ನಲೆಯನ್ನು ತಿಳಿಯುತ್ತಾ ಹೋದರೆ ಈ ಆಧುನಿಕತೆಯ ದೇಶದಲ್ಲಿ ಬಳಸುವುದು ಅಪ್ರಸ್ತುತ ಅನಿಸುತ್ತದೆ. ಇಸ್ಲಾಂ ಧರ್ಮದ ಹುಟ್ಟು ಖುರಾನ್ ಬರೆದ ಸಂಧರ್ಭದಲ್ಲಿ ಮೆಕ್ಕಾ ಮದೀನಾ ಸೇರಿದಂತೆ ಗುಡ್ಡ ಗಾಡು ಪ್ರದೇಶಗಳ ಮೇಲೆ ಯಹೂದಿ , ಹಳೆಯ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಅನ್ಯ ಧರ್ಮಿಯರ ಆಕ್ರಮಣವನ್ನು ಅರೇಬಿಯನ್ ಪ್ರದೇಶಗಳು ಎದುರಿಸ ಬೇಕಾಯಿತು. ಈ ಹೋರಾಟದಲ್ಲಿ ಮಾನವನ ಕ್ರೂರತೆ ಬೇರೆ ಧರ್ಮಗಳ ಮೇಲಿದ್ದ ಆಕ್ರೋಶ ಮತ್ತು ಹಿಂಸೆಗಳಿಂದ ಇಸ್ಲಾಂ ಧರ್ಮವು ತನ್ನ ಹೆಣ್ಣುಮಕÀ್ಕಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಖುರಾನ್‍ನ ಪ್ರಕಾರ ಮಕ್ಕಳು, ವೃದ್ಧರು ಮತ್ತು ಹೆಣ್ಣು ಮಕ್ಕಳನ್ನು ಮುಸ್ಲಿಂ ಓರ್ವ ವ್ಯಕ್ತಿ ರಕ್ಷಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಆ ಸಂಧರ್ಭದಲ್ಲಿ ಆಗಾಗ ನಡೆಯುತ್ತಿರುವ ದಾಳಿಗಳು ಯುದ್ಧ ನೀತಿಯನ್ನೇ ಅನುಸರಿಸದ ಅನಾಗರೀಕ ದಾಳಿ ಕೋರರಿಂದ ರಕ್ಷಣೆ ಮಾಡಲು ಈ ಹಿಜಾಬ್ ಅಥವಾ ಬುರ್ಕಾವನ್ನು ಧರಿಸುತ್ತಿದ್ದರು. ಇದೇ ರೀತಿಯ ಪದ್ಧತಿಗಳು ಭಾರತೀಯ ರಜಪೂತ್ ಮನೆತನದಲ್ಲಿ ಸೇರಿದಂತೆ ಹಲವಾರು ರಾಜಮನೆತನದಲ್ಲಿ ಪರದಾ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಈ ಪರದಾ ಪದ್ದತಿ ಅಥವಾ ಹಿಜಾಬ್ ಒಂದು ರೀತಿ ಕಾಲಕ್ಕೆ ತಕ್ಕ ಪದ್ದತಿಗಳೇ ಆಗಿದ್ದವೇ ಹೊರತು ಧಾರ್ಮಿಕ ಆಚರಣೆಗೆ ಹೋಲಿಸುವಷ್ಟು ಶ್ರೇಷ್ಠವಾಗಿಲ್ಲ. ಅಕ್ರಮಣಕಾರಿ ಜನರಿಂದ ಹೆಣ್ಣು ಮಕ್ಕಳ ರಕ್ಷಣೆ ಮಾನ ಮತ್ತು ಪ್ರಾಣ ರಕ್ಷಣೆಗಾಗಿ ಇಂತಹ ಪದ್ದತಿಗಳು ಜಾರಿಯಲ್ಲಿದ್ದವು. ಇಂದು ಆಧುನಿಕತೆಯ ಮತ್ತು ಪ್ರಜಾಪ್ರಭುತ್ವವು ಬಲಿಷ್ಠವಾಗಿರುವ ಸಂಧರ್ಭದಲ್ಲಿ ಇಂತಹ ಪದ್ದತಿಗಳನ್ನು ಆಚರಿಸುವುದು ಎಷ್ಟು ಸೂಕ್ತ ? ಹಿಜಾಬ್ ಪದ್ದತಿಯಿಂದ ಮುಸ್ಲಿಂ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಜೊತೆಗೆ ಭಾರತೀಯ ಮೂಲ ಸ್ವಾತಂತ್ರ್ಯಗಳ ಜಾರಿಗೆ ಅಡ್ಡಿಯಾಗುತ್ತದೆ. ವೈಜ್ಞಾನಿಕ ನೆಲೆಘಟ್ಟಿನಲ್ಲಿ ಹೇಳುವುದಾದರೆ ಮಾನವರಿಗೆ ವಿಟಮಿನ್ ಡಿ, ವಿಟಮಿನ್ ಬಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಹೊರ ಸುತ್ತುವುದರಿಂದ ವಿಟಮಿನ್ ಡಿ ದೊರೆಯುವುದಿಲ್ಲ. ಇದೇ ರೀತಿ ಇಡೀ ದೇಹವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬದುಕುವುದರಿಂದ ಮಾನಸಿಕ, ದೈಹಿಕ ಸ್ವಾತಂತ್ರ್ಯ ಕಳೆದುಕೊಂಡಂತೆ ಭಾಸವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೈಹಿಕ ನ್ಯೂನ್ಯತೆಗಳು ಮತ್ತು ಕೆಲವು ಕಾಯಿಲೆಗಳು ಕಾಣಿಸಿಕೊಳ್ಳಬಹುದು ಮಾನಸಿಕವಾಗಿ ಹೆಣ್ಣು ಮಕ್ಕಳು ಕುಗ್ಗಿ ಹೋಗುವುದರ ಜೊತೆಗೆ ಬುದ್ದಿವಂತಿಕೆ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸರಿಯಾಗಿ ಭಾಗವಹಿಸದೇ ಭವಿಷ್ಯದ ಕನಸುಗಳನ್ನು ಕಾಣದೇ ಹತಾಶೆ ಮತ್ತು ಜಿಗುಪ್ಸೆಯಲ್ಲಿ ಬದುಕ ಬೇಕಾಗುತ್ತದೆ. ಕುಟುಂಬ ವ್ಯವಸ್ಥೆಯನ್ನು ಸೇರಿದಂತೆ ಸಮಾಜವನ್ನು ಅನುಮಾನಿಸುವ ಜೊತೆಗೆ ದ್ವೇಷದ ಭಾವನೆಯೊಂದಿಗೆ ಬದುಕಬೇಕಾಗುತ್ತದೆ. ಈ ರೀತಿಯ ಮಾನಸಿಕ ಅಲ್ಲೋಲ ಕಲ್ಲೋಲ ಹೊಂದಿರುವ ತಾಯಿಯಿಂದ ಹುಟ್ಟುವ ಮಗು ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಧರ್ಮದಲ್ಲಿ ಆ ಧರ್ಮಗಳು ಹುಟ್ಟಿದ ಕಾಲಘಟ್ಟಕ್ಕೆ ಹೊಂದಿದಂತೆ ರೀತಿ ನೀತಿ ನಿಯಮ ಆಚರಣೆಗಳನ್ನು ಜಾರಿಗೆ ತಂದಿವೆ. ಆದರೆ ಕೆಲವು ಮತಾಂದರರು ಮೂಢ ನಂಬಿಕೆಗಳನ್ನು ಬಲವಂತವಾಗಿ ಜನರ ಮೇಲೆ ಹಾಕುತ್ತಿದ್ದಾರೆ. ಧರ್ಮಗಳ ಉಳಿವಿಗಾಗಿ ಒತ್ತಾಯ ಪೂರ್ವಕವಾಗಿ ವಿಧಿಸುವ ಆಚರಣೆಗಳಿಂದ ಮಾನವ ಧರ್ಮದ ನಾಶ ಮತ್ತು ಮನುಷ್ಯನ ವಿಕಾಸದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಭಾರತೀಯ ಸಂವಿಧಾನದ ಪ್ರಕಾರ ಸಮಾನತೆ ಅತ್ಯಂತ ಮಹತ್ವ ಪೂರ್ಣವಾಗಿದೆ. ಕಲಿಯುವ ಹಂತದಲ್ಲೇ ಸಮಾನತೆಯನ್ನು ತರಬೇಕಾದರೆ ಬಟ್ಟೆ ಮತ್ತು ಓದುವ ಪಾಠಗಳಲ್ಲಿ ಸಾಮರಸ್ಯ ಕೂಡಿದ ಸಮಾನತೆ ಇರಬೇಕು. ಕರೋನದಿಂದ 2 ವಷರ್ದದಿಂದ ಸತತವಾಗಿ ಶಿಕ್ಷಣ ವಂಚಿತ ವಿದ್ಯಾರ್ಥಿಗಳಲ್ಲಿ ಕೇಸರಿ ಮತ್ತು ಹಿಜಾಬ್‍ನ ಬೆಂಕಿ ಹಚ್ಚಿದರು ರಾಜಕಾರಣಿಗಳು ಅಂಧ ಮತಾಂದರರು ಆಗಿದ್ದಾರೆ. ಹಲವಾರು ವರ್ಷಗಳಿಂದ ಶಿಕ್ಷಣ ಪದ್ಧತಿಯಲ್ಲಿ ಹಿಜಾಬ್ ಹಾಕಿ ಬರುವವರು ಇದ್ದರೂ ಕೂಡ ಈಗಿನ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನಾರ್ಟಕ ಮತ್ತು ಭಾರತವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ. ಕರ್ನಾಟಕ ಹೈ ಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೇಸರಿ ಶಾಲು ಮತ್ತು ಸ್ಕಾರ್ಪ್ ಹಿಜಾಬ್ ಧಾರ್ಮಿಕ ಧ್ವಜಗಳು ಅಥವಾ ಸಂಕೇತಗಳನ್ನು ಧರಿಸಿ ಶಾಲಾ ಕಾಲೇಜಿಗೆ ಬರುವುದನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂ ಕೋರ್ಟಿಗೆ ಹೋದಾಗಲೂ ಕೂಡ ಪ್ರಯೋಜನವಾಗಿಲ್ಲ. ಈ ಕರ್ನಾಟಕದ ಹಿಜಾಬ್ ಪ್ರಕರಣವು ಮಹಾರಾಷ್ಟ್ರ, ಪಶ್ಚಿಮಬಂಗಾಳ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಿಗೆ ವ್ಯಾಪಿಸಿದೆ. ಇನ್ನೂ ಕೆಲವು ದಲಿತಪರ ಸಂಘಟನೆಗಳು ಹಿಜಾಬ್ ಅನ್ನು ಬೆಂಬಲಿಸಿ ಹೋರಾಟ ನಡೆಸುತ್ತಿವೆ. ಸಂವಿಧಾನದ ಮೂಲ ಆಸೆಯ ಪ್ರಕಾರ ಮತ್ತು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಆಧಾರದ ಮೇಲೆ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಮತ್ತು ಯಾವುದೇ ಧಾರ್ಮಿದ ಬಟ್ಟೆ ಅಥವಾ ಪದ್ಧತಿ ಅಂದರೆ ಹಿಜಾಬ್ ಧರಿಸುವುದು, ಪರದಾ ಹಾಕಿಕೊಳ್ಳುವುದು ಮತ್ತು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದು ಉತ್ತಮ. ಇದರಿಂದ ಮಕ್ಕಳಲ್ಲಿ ಸಮಾನತೆ ಬೆಳೆಯುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕೆಟ್ಟ ಘಟನೆಗಳು ನಡೆಯುವುದಿಲ್ಲ ಹೇಗೆಂದರೆ ಹಿಜಾಬ್ ಹಾಕಿಕೊಂಡು ಓರ್ವ ಹುಡುಗಿಯ ಹೆಸರಿನಲ್ಲಿ ಉಗ್ರಗಾಮಿಯೋ, ಡ್ರಕ್ಸ್ ಮಾರುವವನೋ ಅಥವಾ ಇನ್ಯಾರೋ ಬರುವುದನ್ನು ತಪ್ಪಿಸಬಹುದು. ಮಾನವ ಧರ್ಮ, ಭಾರತೀಯ ಸಂವಿಧಾನ ಮತ್ತು ಮಕ್ಕಳಿಗೆ ಸಮಾನತೆಯ ಪಾಠ, ಭವಿಷ್ಯದ ದೃಷ್ಠಿಯಿಂದ ಶಿಕ್ಷಣದಲ್ಲಿ ಜಾತಿ ಧರ್ಮ ಆಚರಣೆಗಳನ್ನು ತರುವುದು ಬೇಡ.


Share

ಕ್ಷಮಿಸು ಬಿಡು ನವೀನಾ ! ನಿನ್ನ ಸಾವಿಗೆ ನಾವೇ ಕಾರಣ !

Share

ಕರ್ನಾಟಕ ಮೂಲದ ನವೀನ ಶೇಖರಪ್ಪ ಗ್ಯಾನಗೌಡರ ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಿಗೇರಿಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ರಷ್ಯಾ ಉಕ್ರೇನ್ ಯುದ್ದದ ಸಂಧÀರ್ಭದಲ್ಲಿ ಹತ್ಯೆಯಾಗಿರುವ ಈತ ಅತ್ಯಂತ ಬುದ್ದಿವಂತ 10ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ. ನವೀನನ ತಂದೆ ಶೇಕರಪ್ಪ ಸೌತ್ ಇಂಡಿಯಾ ಪೇಪರ್ ಮಿಲ್‍ನ ವೆಹಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಣ ಮತ್ತು ಮಗನ ಬುದ್ದಿವಂತಿಕೆಯಿಂದ ನಂಜನಗೂಡಿನ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕಗಳಿಗೆ 604 ಅಂಕಗಳನ್ನು ಪಡೆದು ಆದರ್ಶ ಶಾಲೆಗೆ ಮೊದಲಿಗರಾಗಿ ಉತ್ತೀರ್ಣರಾಗಿದ್ದಾರೆ. ನಂತರ ಮೈಸೂರಿನ ಯೂನಿಟಿ ಕಾಲೇಜಿಗೆ ಸೇರಿ ಪಿ.ಯು.ಸಿ ವಿಜಾÐನ ವಿಭಾಗದಲ್ಲಿ ಶೇ.92.2% ರಷ್ಟು ಪ್ರತಿಶತ ಪಡೆದರೂ ಸಹ ಕರ್ನಾಟಕ ಸೇರಿದಂತೆ ಭಾರತದಲ್ಲಿ ಮೆಡಿಕಲ್ ಸೀಟ್ ಸಿಗಲಿಲ್ಲ ಬುದ್ದಿವಂತ ಮಗನ ಕನಸು ನನಸಾಗಿಸುವ ಪ್ರಯತ್ನದಲ್ಲಿ ತಂದೆ ಕಷ್ಟಪಟ್ಟು ಉಕ್ರೆನ್ ದೇಶದಲ್ಲಿ ವೈದ್ಯಕೀಯ ಕೋರ್ಸನ್ನು ಓದಿಸುತ್ತಿದ್ದರು. ಉಕ್ರೆನ್ ಮೆಡಿಕಲ್ ಕಾಲೇಜಿನಲ್ಲೂ ನವೀನ ತುಂಬಾ ಕ್ರಿಯಾಶೀಲವಾಗಿ ಓದುತ್ತಿದ್ದು ಕನ್ನಡದ ಅಭಿಮಾನವನ್ನು ಮೆರೆದಿದ್ದ. ಆದರೆ ಮೊನ್ನೆ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ತನಗೆ ಮತ್ತು ತನ್ನ ಗೆಳೆಯರಿಗಾಗಿ ಊಟ ಮತ್ತು ದಿನಸಿ ತರಲು ಹೋಗಿ ರಷ್ಯಾದ ಸೈನ್ಯಕ್ಕೆ ಬಲಿಯಾಗಿದ್ದಾನೆ. ನವೀನ್ ಮತ್ತು ಚಂದನ್ ಜಿಂದಾಲ್ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಸಾವು ನೋವುಗಳ ಮಧ್ಯೆ ಆ ಎಲ್ಲಾ ಸಾವುಗಳಿಗೆ ಯಾರು ಹೊಣೆಯೆಂದು ಕೇಳಿದರೆ ತಕ್ಷಣ ಉತ್ತರಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ಎಂದು ಇಂದಿನ ಭಾರತ ವಿದೇಶಾಂಗ ನೀತಿಗಳ ಮತ್ತು ಭಾರತವು ಈಗ ವಿಶ್ವದ ಗುರು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಧ್ವಜ ಒಂದು ಉಕ್ರೆನ್‍ನಲ್ಲಿ ವಾಸವಿರುವ ಭಾರತೀಯರ ಜೀವ ಉಳಿಸುವುದರ ಜೊತೆಗೆ ವಿದೇಶಿಯರ ಜೀವ ಉಳಿಸಿರುವ ಹೆಮ್ಮೆ ನಮಗಿದೆ. ಉಕ್ರೆನ್‍ನಿಂದ ಮರುಳುತ್ತಿರುವ ಹಲವಾರು ವಿದ್ಯಾರ್ಥಿಗಳು ಮತ್ತು ನಾಗರೀಕರು ಆಫ್ರೆಷನ್ ಗಂಗಾ ಕಾರ್ಯಕ್ರಮವನ್ನು ಹಾಡಿ ಹೊಗಳುತ್ತಿದ್ದಾರೆ. ಏರ್ ಇಂಡಿಯಾ ವಿಮಾನಗಳ ಜೊತೆಗೆ ಸ್ಪೈಸ್ ಜೆಟ್ ಕೂಡ ಕೈ ಜೋಡಿಸಿ ನಮ್ಮ ವಾಯು ಸೇನೆಯ ಬಲವನ್ನು ಹೆಚ್ಚಿಸಿವೆ. ಹಲವಾರು ಪ್ರಯತ್ನಗಳಿಂದ ಭಾರತೀಯರನ್ನು ರಕ್ಷಿಸುವ ಪ್ರಯತ್ನವನ್ನು ಭಾರತ ಸರ್ಕಾರವು ಪ್ರಮಾಣಿಕವಾಗಿ ಮಾಡುತ್ತಿವೆ. ಆದರೆ ಕೆಲವು ವಿರೋದಿಗಳು ಜ್ಞಾನವಿಲ್ಲದೆ ಉಕ್ರೆನಿಗೆ ಹೋದ ವಿದ್ಯಾರ್ಥಿಗಳು ಬಾಯಿಗೆ ಬಂದಂತೆ ದೇಶದ ವ್ಯವಸ್ಥೆಯನ್ನು ಬೈಯುತ್ತಿದ್ದಾರೆ. ಹಣದ ಮದದಿಂದ ಮತ್ತು ಎನ್.ಇ.ಇ.ಟಿ ಪರೀಕ್ಷೆಯನ್ನು ಪಾಸಾಗದ ಅಯೋಗ್ಯರಿಂದ ಅಂತಹ ಮಾತುಗಳು ಕೇಳಿ ಬರುವುದು ಸಾಮಾನ್ಯ ಯುದ್ಧದ ಸಂಧರ್ಭದಲ್ಲಿ ವಿದೇಶಾಂಗ ನೀತಿಗಳು 2 ಬೇರೆ ಬೇರೆ ದೇಶಗಳ ನಡುವೆ ನಡೆಯುವ ಯುದ್ಧದ ಸಂಧರ್ಭದಲ್ಲಿ ಇನ್ನೊಂದು ದೇಶದ ನಾಗರೀಕರ ರಕ್ಷಣೆಯ ಹೊಣೆ ಮತ್ತು ಅಂತರ ರಾಷ್ರ್ಟೀಯ ನಿಯಮ ನಿಭಂದನೆಗಳು ಗೊತ್ತಿಲ್ಲದ ಶಿಕ್ಷಣ ಪಡೆದ ಅಜ್ಞಾನಿಗಳಿಂದ ಇಂತಹ ಕೀಳು ಮಟ್ಟದ ಮಾತುಗಳು ಕೇಳಿ ಬರುವುದು ಸಾಮಾನ್ಯ ಅದರಲ್ಲಿ ಒಬ್ಬ ವಿದ್ಯಾರ್ಥಿ ಹೇಳುತ್ತಾನೆ ತಿನ್ನಲು ಅನ್ನ, ನೀರು ಸಿಗಲಿಲ್ಲ ಎಂದು ಯುದ್ಧದ ಸಂಧರ್ಭದಲ್ಲಿ ಸೈನಿಕರು ಸೇರಿದಂತೆ ನಾಗರೀಕರಿಗೆ ಅದೆಷ್ಟೋ ತೊಂದರೆಗಳಾಗಿರುತ್ತವೆ. ಆತ ಮುಂದುವರೆದು ಹೇಳುತ್ತಾನೆ ಭಾರತೀಯ ಸೈನ್ಯವು ನಮ್ಮನ್ನು ರಕ್ಷಿಸಲು ದೇಶದ ಒಳಗಡೆ ಬರಲಿಲ್ಲ ನಾವೇ ಗಡಿವರೆಗೆ ಬರಬೇಕಾಯಿತು ಎರಡು ದೇಶಗಳ ಯುದ್ಧದ ಮಧ್ಯೆ ಇನ್ನೊಂದು ದೇಶದ ಸೈನಿಕರು ಬರುವುದು ಅತಿಕ್ರಮಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಇಂತಹ ಹಲವಾರು ದೇಶ ಬಿಟ್ಟು ಓದಲು ಹೋದ ವಿದ್ಯಾರ್ಥಿಗಳ ಮಧ್ಯೆಯೇ ಕನ್ನಡ ಮತ್ತು ದೇಶದ ಅಭಿಮಾನ ಹೊಂದಿದ ನವೀನನ ವಿಚಾರವೇ ಬೇರೆ ನವೀನನ ತಂದೆಗೆ ಪ್ರಧಾನಿ ಮೋದಿಯವರೇ ಕರೆ ಮಾಡಿ ಸಾಂತ್ವಾನ ಹೇಳಿದರೂ ಕೂಡ ನವೀನನ ಆತ್ಮಕ್ಕೆ ಮುಕ್ತಿ ಸಿಗುವುದೇ ಡೌಟ್ ! ಏಕೆಂದರೆ ನವೀನನ ತಂದೆಯ ಒಂದು ಹೇಳಿಕೆಯು ದೇಶದ ವ್ಯವಸ್ಥೆಯನ್ನು ಮುಟ್ಟಿ ನೋಡಿಕೊಳ್ಳುವಂತಿದೆ “ಮಗ ನವೀನ್‍ಗೆ ಮೀಸಲಾತಿಯಿಂದ ಇಲ್ಲಿ ಸೀಟ್ ಸಿಗಲಿಲ್ಲ. ಇದು ಅತ್ಯಂತ ಬೇಸರದ ವಿಷಯ ಪ್ರತಿಭೆಯಿರುವ ಬಡ ವಿದ್ಯಾರ್ಥಿಗಳಿಗೆ ದೇಶದ ಅವಕಾಶಗಳಲ್ಲಿ ಅಷ್ಟು ಅಂಕ ಪಡೆದರು ಸರ್ಕಾರದ ಮೀಸಲಾತಿ ಮತ್ತು ನಿಯಮಗಳಿಂದ ನನ್ನ ಮಗನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಮತ್ತು ದೇಶದಲ್ಲಿ ಖಾಸಗಿಯಾಗಿ ಮೆಡಿಕಲ್ ಓದ ಬೇಕಾದರೆ 1.5 ಕೋಟಿ ಯಿಂದ 2 ಕೋಟಿ ಹಣ ಬೇಕಾಗುತ್ತದೆ. ಅಭಿವೃದ್ಧಿ ಶೀ¯ ದೇಶದಲ್ಲಿ ಇಷ್ಟು ಖರ್ಚಾದರೆ ನಮ್ಮಂತಹ ಬಡವರು ಓದಿಸುವುದು ಹೇಗೆ? ಉಕ್ರೆನ್ ನಂತಹ ಸಣ್ಣ ರಾಷ್ರ್ಟಗಳಲ್ಲಿ 25ರಿಂದ 30 ಲಕ್ಷಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಬಹುದು. ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು.” ಎಂಬ ಹೇಳಿಕೆಯು ಭಾರತದ ವ್ಯವಸ್ಥೆಯನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳಬೇಕಾದ ಹಂತಕ್ಕೆ ಬಂದು ನಿಂತಿದೆ. ನವೀನನ ಸಾವಿನಲ್ಲಿಯೂ ರಾಜಕೀಯ ಮಾಡುತ್ತಿರುವ ದೇಶದ ರಾಜಕೀಯ ವ್ಯವಸ್ಥೆಯು ಒಂದು ಸಾರಿ ತಲೆ ತಗ್ಗಿಸಿ ನಿಲ್ಲಬೇಕು. ಸಿದ್ದರಾಮಯ್ಯ ಹೇಳುವಂತೆ ನವೀನನ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ಇತ್ತ ಯು.ಟಿ ಖಾದರ ಹೇಳುತ್ತಾರೆ ನವೀನ ಶಿಕ್ಷಣದ ಖರ್ಚನ್ನು ಮರಳಿ ಕೊಡಬೇಕು. ಡಿ.ಕೆ.ಶಿವಕುಮಾರ ಹೇಳುತ್ತಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದ ನೂರಾರು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಬಿ.ಜೆ.ಪಿ ಯ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಪ್ರಕಾರ ಭಾರತೀಯರನ್ನು ಉಕ್ರೆನ್‍ನಿಂದ ಕರೆತರುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬನವರಾಜ್ ಬೊಮ್ಮಾಯಿಯವರು ಹೇಳುತ್ತಾರೆ ಮೃತ ದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಇತ್ತ ಹೆಚ್.ಡಿ.ಕುಮಾರಸ್ವಾಮಿಯವರ ಒಂದು ವಿಚಾರವು ಗಮನಾರ್ಹ ಚರ್ಚೆಗೆ ಒಳಗಾಗಿದೆ. ಕೇಂದ್ರ ಸರ್ಕಾರವನ್ನು ಆಪಾಧನೆ ಮಾಡುತ್ತಾ ಉಕ್ರೆನ್ ಭಾರತೀಯ ರಾಯಭಾರಿ ಕಛೇರಿ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂಬ ಆಪಾಧನೆಯನ್ನು ಕೂಡ ಮಾಡುತ್ತಾರೆ. ಜೊತೆಗೆ ಹೆಚ್.ಡಿ.ಕುಮಾರಸ್ವಾಮಿಯವರು ಎನ್.ಇ.ಇ.ಟಿ ಪರೀಕ್ಷೆಯಿಂದ ನವೀನ್‍ಗೆ ರಾಜ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗದೆ ಪ್ರತಿಭಾವಂತನನ್ನು ಕಳೆದು ಕೊಂಡಿದ್ದೇವೆ.
“ಅಭ್ಯರ್ಥಿಯು ಜಿ.ಎಮ್.ಎ.ಟಿ ಅಥವಾ ಜಿ.ಆರ್.ಇ ನಲ್ಲಿ 97% ಸ್ಕೋರ್ ಮಾಡಬೇಕಾದರೆ ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾವರ್ಡ್ ಅಥವಾ ಸ್ಕ್ಯಾನ್ ಪೋರ್ಡ್‍ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವೇತನದಲ್ಲಿ ಓದಬಹುದು ಆದರೆ ದುಃಖದ ಸಂಗತಿಯೆಂದರೆ ನವೀನ್ ಮೆರಿಟ್‍ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ” ಐ.ಪಿ.ಎಸ್ ಅಧಿಕಾರಿ ಕಾರ್ತೀಕೇಯ.ಜಿ. ಟ್ವಿಟ್ ಮಾಡುವ ಮೂಲಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನು ಉಕ್ರೆನ್‍ನಿಂದ ಜೀವಂತ ಇರುವವರನ್ನೆ ಕರೆತರುವುದು ಕಷ್ಟ ಇಂತಹದರಲ್ಲಿ ಮೃತ ದೇಹವನ್ನು ತರುವುದು ಇನ್ನೂ ಕಷ್ಟ ನವೀನ್ ಮೃತ ದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆತರಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಬೇಜಾವಾಬ್ದಾರಿ ಹೇಳಿಕೆಯಿಂದ ರಾಜಕಾರಣಿಗಳ ಬುದ್ದಿ ಪ್ರಬುದ್ದತೆ ಪಡೆದಿಲ್ಲ ಎಂಬ ವಿಚಾರವಾದವನ್ನು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಬೇರೆಯವರಿಗಿಂತ ನವೀನನ ವಿಚಾರವನ್ನಿಟ್ಟುಕೊಂಡು ಇಷ್ಟೊಂದು ವಿಶ್ಲೇಷಣೆ ಮಾಡಲು ಕಾರಣ ನವೀನನ ದೇಹವನ್ನು ರಷ್ಯಾ ಸೈನಿಕರು ಉಕ್ರೆನ್‍ನಲ್ಲಿ ಹತ್ಯೆ ಮಾಡಿರಬಹುದು ಆದರೆ ನವೀನ ನಂತಹ ಮೆಲ್ವರ್ಗದ ಪ್ರತಿಭಾವಂತನ ಕನಸುಗಳನ್ನು ಈ ದೇಶದ ವ್ಯವಸ್ಥೆ ಹತ್ಯೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಾಗಲೂ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಮೀಸಲಾತಿ ನೀಡುವುದು ಎಷ್ಟು ಸರಿ? ಈ ದೇಶದ ಪಾರ್ಲಿಮೆಂಟ್ ಇತಿಹಾಸದಲ್ಲಿ ಜನ ಪ್ರತಿನಿಧಿಯ ಕಾಯ್ದೆಗಳು ಸಂಬಳ ಹೆಚ್ಚಳ ಮತ್ತು ಜಾತಿ ಮೀಸಲಾತಿಯ ಕಾಯ್ದೆಗಳು ಯಾವುದೇ ವಿರೋಧವಿಲ್ಲದೆ ಅಂಗೀಕಾರ ಗೊಳ್ಳುತ್ತಿರುವುದೇ ದುರಂತ ಒಂದು ದೇಶದ ಸ್ವಾತಂತ್ರ್ಯ ಅಥವಾ ಹುಟ್ಟು ಅಥವಾ ಸ್ವಂತ ವ್ಯವಸ್ಥೆಯಲ್ಲಿ ಆಡಳಿತ ಮಾಡಿ 75 ವರ್ಷಗಳು ಕಳೆದರೂ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದ ಜಾತಿಯನ್ನು ಸುಧಾರಿಸಲು ಆಗಿಲ್ಲ ಅಂದರೆ ನಾಚಿಕೆಯಾಗಬೇಕು. ಒಬ್ಬ ಮನುಷ್ಯನ ಸಾಮಾನ್ಯ ಆಯುಷ್ಯವೇ 60 ವರ್ಷ ಆಗಿರುವುದರಿಂದ ಆದರೆ 75 ವರ್ಷ ಕಳೆದ ಬಾರತದಲ್ಲಿ ಮೀಸಲಾತಿ ಪದ್ದತಿಗಳು ಇನ್ನೂ ಜೀವಂತವಾಗಿಟ್ಟಿದ್ದೇವೆ ಎಂದರೆ 5-6 ದಶಕಗಳ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಆತ್ಮ ಸಾಕ್ಷಿ ಅನ್ನುವುದೇ ಇಲ್ಲವೇ. ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸೇರಿದಂತೆ ಈ ದೇಶವನ್ನಾಳುತ್ತಿರುವ ಪಕ್ಷಗಳು ಮತ್ತು ರಾಜಕಾರಣೀಗಳು ಆತ್ಮ ಸಾಕ್ಷಿಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಹೆಸರಿನಲ್ಲಿ ಪ್ರತಿಭಾವಂತರಿಗೆ ಮೋಸ ಮಾಡುತ್ತಿದ್ದೀರಿ ಜೊತೆಗೆ ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೂ ಮೋಸ ಮಾಡುತ್ತಿದ್ದೀರಿ ಏಕೆಂದರೆ ಸ್ಪರ್ಧೆಯಿದ್ದರೆ ಮಾತ್ರ ಗೆಲುವು ಮತ್ತು ಸಂತೋಷ ಸಾಧ್ಯ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರನ್ನು ಮಾನಸಿಕವಾಗಿ ತುಳಿಯುತ್ತಿದ್ದೀರಿ. ಮತ್ತು ಪ್ರತಿಭಾವಂತರನ್ನ ಹತ್ಯೆ ಮಾಡುತ್ತಿದ್ದೀರಿ. ಹಾಗಾದರೇ ಇದೇ ಸತ್ಯವಲ್ಲವೇ ನವೀನನ ಸಾವಿಗೆ ನಾವೇ ಅಂದರೆ ನಮ್ಮ ವ್ಯವಸ್ಥೆಯೇ ಕಾರಣ ಆತನನ್ನು ರಷ್ಯಾ ಸೈನಿಕರು ದೈಹಿಕವಾಗಿ ಕೊಂದರೆ ನಾವು ಮಾನಸಿಕವಾಗಿ ಕನಸುಗಳನ್ನು ಕೊಂದಿಲ್ಲವೇ ಇಂತಹ ಅನಿಷ್ಟ ಪದ್ಧತಿಗಳನ್ನು ನೀರು ಗೊಬ್ಬರ ಹಾಕಿ ಬೆಳೆಸುತ್ತಿರುವ ರಾಜಕಾರಣಿಗಳನ್ನು ಮತ್ತು ರಾಜಕೀಯ ವ್ಯವಸ್ತೆಯನ್ನು ಬೆಂಬಲಿಸಿವುದೂ ಕೂಡ ಅಪರಾಧವಲ್ಲವೇ? ನವೀನನ ಕನಸುಗಳ ಹತ್ಯೆಯೊಂದಿಗೆ ನಮ್ಮ ವ್ಯವಸ್ಥೆಯ ದುರಂತವು ಕಣ್ಣು ಮುಂದೆ ಬರುತ್ತದೆ. ಇನ್ನು ಎಷ್ಟು ದಿನ ಸಹಿಸಿಕೊಳ್ಳುತ್ತೀರಿ?


Share

ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ

Share

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪ್ರವಾಹ ಮಟ್ಟವೂ ಇಳಿಕೆಯಾಗುತ್ತಿದೆ. ಹೀಗಾಗಿ ನದಿ ತೀರದ ಜನರು ನಿಟ್ಟುಸಿರು ಬಿಡುವಂತಾಗಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಮಳೆ ಸುರಿಯಲಿದೆ. ಜೊತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ರಾಜ್ಯದ ಮಲೆನಾಡು ಭಾಗದಲ್ಲಿ ಇಂದು ಕೊಂಚ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉಡುಪಿ ಜಿಲ್ಲೆಯಾದ್ಯಂತ ಅಧಿಕ ಮಳೆಯಾದರೆ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ.

ಇನ್ನು, ಉತ್ತರ ಒಳನಾಡಿನಲ್ಲೂ ಸಹ ಸಾಧಾರಣ ಮಳೆಯಾಗಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ ಕೆಲ ದಿನಗಳ ಕಾಲ ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಯಥೇಚ್ಛ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ದಕ್ಷಿಣ ಗುಜರಾತ್​ ಕರಾವಳಿ ಮತ್ತು ಉತ್ತರ ಕೇರಳ ಕರಾವಳಿಯಲ್ಲಿ ಅಧಿಕ ಮಳೆಯಾಗಲಿದೆ. ಈ ಚಂಡಮಾರುತದ ಪ್ರಭಾವ ಉತ್ತರ ಪಾಕಿಸ್ತಾನ ಮತ್ತು ಪಂಜಾಬ್​ಗೂ ತಟ್ಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜುಲೈ 30 ರವರೆಗೆ ಭಾರೀ ಮಳೆ ಮುಂದುವರೆಯಲಿದೆ.ಇನ್ನು, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲೂ ಜುಲೈ 30ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಜುಲೈ 31ರವರೆಗೆ ವರುಣನ ಆರ್ಭಟ ಇರಲಿದೆ. ಪಶ್ಚಿಮ ಬಂಗಾಳದಲ್ಲಿ ಜುಲೈ 29ರಂದು, ಜಾರ್ಖಂಡ್​​ನಲ್ಲಿ ಜುಲೈ 30ರಂದು, ಛತ್ತೀಸ್​ಗಢದಲ್ಲಿ ಜುಲೈ 30ರಂದು ಮತ್ತು ಪೂರ್ವ ಮಧ್ಯ ಪ್ರದೇಶದಲ್ಲಿ ಜುಲೈ 31ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ ರಾಜ್ಯಗಳಲ್ಲಿ ಆಗಸ್ಟ್​ 1ರವರೆಗೆ ಯಥೇಚ್ಛವಾಗಿ ಮಳೆ ಸುರಿಯಲಿದೆ. ಜುಲೈ 30ರಿಂದ ಮಳೆಯ ಪ್ರಮಾಣ ಅಧಿಕವಾಗಲಿದೆ. ಪಶ್ಚಿಮ ಮಧ್ಯಪ್ರದೇಶದಲ್ಲಿ ಆಗಸ್ಟ್​ 1ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಆಗಸ್ಟ್​ 1ರವರೆಗೆ ಮಳೆರಾಯನ ಅಬ್ಬರ ಇರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ


Share