ಯಾವುದೇ ಅಭಿವೃದ್ಧಿ ನಿಲ್ಲಿಸುವುದಿಲ್ಲ: ಜಿ.ಪರಮೇಶ್ವರ್

Share

ಅರಸೀಕೆರೆ: ನಾವು ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿದ್ದು ಯಾವುದೇ ಅಭಿವೃದ್ಧಿಯನ್ನು ನಿಲ್ಲಿಸುವುದಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು. ಭಾನುವಾರ ಪತ್ನಿ ಸಮೇತ ಅರಸೀಕೆರೆ ತಾಲೂಕಿನ, ಹಾರನಹಳ್ಳಿಯಲ್ಲಿರುವ ಕೋಡಿಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಯನ್ನು ಚುನಾವಣೆಗೆ ಮೊದಲೆ ಹೇಳಿದ್ದು ಅದನ್ನು ಈಗ ಅನುಷ್ಠಾನ ಮಾಡ್ತಾ ಇದ್ದೇವೆ. ನಾವು ಜನರ ಮೇಲೆ ಹಾಗೂ ರಾಜ್ಯದ ಅಭಿವೃದ್ಧಿ ಮೇಲೆ ಸಾಮಾಜಿಕ ನ್ಯಾಯದ ಮೇಲೆ ಮಾತನಾಡಿದ್ದು, ಇದೇ ತಿಂಗಳ 30 ರಂದು ಗೃಹಲಕ್ಷಿ÷್ಮ ಯೋಜನೆಗೆ ರಾಹುಲ್‌ಗಾಂಧಿ ಚಾಲನೆ ಕೊಡಲಿದ್ದು, ಅಂದೇ ಜನರ ಖಾತೆಗೆ ಹಣ ಹೋಗಲಿದೆ. ಇನ್ನು ಮುಂದೆ ಪ್ರತಿ ತಿಂಗಳು ಹಣ ಹೋಗುತ್ತೆ ಎಂದರು. ಸ್ವಾಮೀಜಿ ನಮ್ಮ ತಂದೆಯವರ ಕಾಲದಿಂದ ಪರಿಚಯ ಹಾಗಾಗಿ ಅವರನ್ನು ನೋಡಬೇಕು ಅನ್ನಿಸಿತು ಬಂದಿದ್ದೀನಿ ಇದರಲ್ಲಿ ವಿಶೇಷತೆ ಏನಿದೆ, ಏನಾದ್ರು ವಿಶೇಷತೆ ನಿಮಗೆ ಅನ್ಸಿದೆಯಾ ಎಲ್ಲಾ ಬರ್ತಾ ಇರ್ತಾರೆ, ಶ್ರೀಮಠ ಅಂದರೆ ಭಕ್ತಾಧಿಗಳು ಬರಬೇಕಲ್ವಾ ಹಾಗೇ ನಾನು ಬಂದಿದ್ದೀನಿ ಅಷ್ಟೇ, ಬೇರೆ ಅರ್ಥೈಸುವುದು ಅಗತ್ಯವಿಲ್ಲ ಎಂದು ತಿಳಿಸಿದರು. ಮೊದಲು ಬೊಮ್ಮಾಯಿ ಬಜೆಟ್ ಕೊಟ್ಟಿದ್ದರು ಅದರಲ್ಲಿ ನಮ್ಮ ಗ್ಯಾರೆಂಟಿಗೆ ಅನುದಾನ ಇರಲಿಲ್ಲ, ಹಾಗಾಗಿ ಈಗ ಮತ್ತೊಮ್ಮೆಬಜೆಟ್ ನೀಡಿದ್ದು ಬೇರೆ ಬಜೆಟ್ ಆಗಿದೆ. ಒಂದಿಷ್ಟು ಹಣಕಾಸು ವ್ಯವಸ್ಥೆ ಮಾಡಲು ಕಠಿಣ ಆಗಬಹುದು. ಅದಕ್ಕೆ ಅನಗತ್ಯ ಖರ್ಚು ನಿಲ್ಲಿಸುತ್ತೇವೆ. ಜನರಿಗೆ ಅನುಕೂಲವಿರುವ ಯಾವುದೇ ಯೋಜನೆಗಳು ನಿಲ್ಲಲ್ಲ ಎಂದು ಹೇಳಿದರು. ಗೃಹಜ್ಯೋತಿ ಹೆಸರಿನಲ್ಲಿ ಸರ್ಕಾರ ಜನರಿಗೆ ಟೋಪಿ ಹಾಕ್ತಿದೆ ಎಂದಿದ್ದ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಪ್ರಕೃತಿ ನಮ್ಮನ್ನು ಹೇಳಿ ಕೇಳಿ ಮಾಡೋದಿಲ್ಲ, ಈ ಬಾರಿ ಒಂಭತ್ತು ಜಿಲ್ಲೆಗಳಲ್ಲಿ ಮಳೆ ಇಲ್ಲ. ನಮಗೆ ಇದುವರೆಗೆ ಮುಂಗಾರು ಕೊರತೆ ಇದೆ, ಬಹುತೇಕ ಕಡೆ 40 ರಷ್ಟು ಮಳೆ ಕೊರತೆ ಇದ್ದು, ನಮಗೆ ಹೈಡ್ರೋ ಪವರ್ ಉತ್ಪಾದನೆ ಕಡಿಮೆ ಆಗಿದೆ. ಹಾಗಾಗಿ ಸ್ವಲ್ಪ ದಿನ ಹಾಗೇ ಆಗುತ್ತೆ ಅದು ಪ್ರಕೃತಿಯಿಂದ ಆಗುವುದೇ ಹೊರತು ನಾವೇನು ಅದನ್ನು ಮಾಡಿರುವುದಲ್ಲ, ಆದರೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಸಮರ್ಥನೆ ಮಾಡಿಕೊಂಡರು.


Share

ಕುಮಟಾದಲ್ಲಿ 2 ನೇ ಭಾರಿ ಬಿಳಿ ಹೆಬ್ಬಾವು ಪ್ರತ್ಯಕ್ಷ ಉರಗ ತಜ್ಞ ಸ್ನೇಕ್ ಪವನ್ ರಿಂದ ರಕ್ಷಣೆ

Share

ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು. ನಿನ್ನೆ ರಾತ್ರಿ ಕಾಣಿಸಿದ್ದು, ಸಮೀಪದ ಮನೆಯ ಆರ್ ಟಿ ಓ ಒಫಿಸ್ ಹೋಮ್ ಗಾರ್ಡ್ ಗಣೇಶ್ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. ಕಳೆದ ವರ್ಷವಷ್ಟೇ ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು ಜನರು ಭಯಬೀತರಾಗಿದ್ದು ನೂರಾರು ಜನ ನೆರೆದಿದ್ದರು. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿದ್ದು . ಹಾಗೂ ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಸ್ನೇಕ್ ಪವನ್ ನಾಯ್ಕ ಅವರಿಗೆ ಸಿಕ್ಕಿದ್ದು ನಂತರ ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಯ ಒಪ್ಪಿಸಲಾಗಿದ್ದು. ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಜೂ ಕಳಿಸಲಾಗಿದೆ. ಡಿ ಎಫ್ ಓ ಶ್ರೀ ರವಿಶಂಕರ್, ಏಸಿಎಫ್ ಶ್ರೀ ಜಿ ಲೋಹಿತ್, ಆರ್ ಎಪ್ ಓ ಶ್ರೀ ಎಸ್ ಟಿ ಪಟಗಾರ್, ಡಿ ಆರ್ ಎಫ್ ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು. ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕರಾದ ಗೋಪಿ ಜೊಲಿಯವರು ತಮ್ಮ ಕ್ಯಾಮೆರಾ ದಲ್ಲಿ ಸೆರೆಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ


Share

ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ 23 ಸ್ತಬ್ಧ ಚಿತ್ರಗಳ ಪ್ರದರ್ಶನ- ರಕ್ಷಣಾ ಸಚಿವಾಲಯ

Share

ನವದೆಹಲಿಯ ಕರ್ತವ್ಯ ಪಥದಲ್ಲಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರ, ಕಲೆ, ಸಾಹಿತ್ಯ ಬಿಂಬಿಸುವ 23 ಸ್ತಬ್ಧ ಚಿತ್ರಗಳ ಪ್ರದರ್ಶನ ಇರಲಿದೆ.

17 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿವಿಧ ಸಚಿವಾಲಯಗಳು, ಇಲಾಖೆಗಳ ಒಟ್ಟಾರೇ 23 ಸ್ತಬ್ಧ ಚಿತ್ರಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ. 

ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರಾಖಂಡ್,. ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಅಸ್ಸಾಂ, ಅರುಣಾಚಲ ಪ್ರದೇಶ ,ತ್ರಿಪುರಾ, ಪಶ್ಚಿಮ ಬಂಗಾಳ ರಾಜ್ಯದಿಂದ  ಮತ್ತು ಜಮ್ಮು-ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ ಮತ್ತು ದಾಮನ್, ಡಿಯೂ ನಿಂದ ಒಟ್ಟಾರೇ 17 ಸ್ತಬ್ಧ ಚಿತ್ರಗಳು ಸಾಗುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಲಿವೆ.


Share

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಕೆಸಿಆರ್ 500 ಕೋಟಿ ಡೀಲ್: ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?

Share

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ರಾಜ್ಯ ಕಾಂಗ್ರೆಸ್ ನಾಯಕನಿಗೆ 500 ಕೋಟಿ ರೂಪಾಯಿ ಸುಪಾರಿ ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸುದ್ದಿಗೋಷ್ಠಿ ಇದೀಗ ದೇಶದಲ್ಲೇ ಭಾರಿ ತಲ್ಲಣ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಕರ್ನಾಟಕದ ಕಾಂಗ್ರೆಸ್ ನಾಯಕನೊಬ್ಬನ ಕರೆಸಿ ಮೂರು ಮೂರು ಬಾರಿ ಮೀಟಿಂಗ್ ನಡೆಸಿದ್ದಾರೆ. ಇಷ್ಟೇ ಅಲ್ಲ 500 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸೋಲಿಸಲು ಕೆಸಿಆರ್ ಸುಪಾರಿ ನೀಡಿದ್ದಾರೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ. ಯಾರು ಯಾರನ್ನೂ ಬೇಕಾದರೂ ಭೇಟಿ ಮಾಡುತ್ತಾರೆ. ಕಾಂಗ್ರೆಸ್ ಸೋಲಿಸಿದರೆ ಕೆ ಚಂದ್ರಶೇಖರ್ ರಾವ್‌ಗೆ ಲಾಭ ಏನು? ಕೆಸಿಆರ್ ಅವರ ಹೋರಾಟ ಬಿಜೆಪಿ ವಿರುದ್ಧ. ಕಾಂಗ್ರೆಸ್ ವಿರುದ್ಧ ಅಲ್ಲ ಎಂದಿದ್ದಾರೆ.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಯಾವ ಹಿನ್ನಲೆಯಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ನನಗೆ ಜನತೆಯ ಆಶೀರ್ವಾದ, ನನಗೆ ಜನತೆಯ ಬೆಂಬಲ ಇದೆ. ಹೀಗಾಗಿ ಈ ವಿಚಾರಗಳ ಕುರಿತು ನಾನು ಗಮನ ಹರಿಸುವುದಿಲ್ಲ. ನನಗೆ ಹಣದ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಯಾತ್ರೆ ಮೂಲಕ ಸಂಚರಿಸುತ್ತಿದ್ದೇನೆ. ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.   

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ರೇವಂತ್ ರೆಡ್ಡಿ ಅವರ ಆರೋಪದ ಬಗ್ಗೆ ವರದಿಗಳನ್ನು ಓದಿದ್ದೇನೆ ಮತ್ತು ಈ ವಿಷಯದ ಬಗ್ಗೆ ಸತ್ಯವನ್ನು ಖಚಿತಪಡಿಸಿಕೊಂಡ ನಂತರವೇ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು


Share

ಬಸವಣ್ಣ ಮತ್ತು ಪ್ರಸ್ತುತತೆ

Share

ದೃಷ್ಠಿಯಿಂದ ಸಮಷ್ಠಿಯವರೆಗೆ, ರಾಜ್ಯದಿಂದ ದೇಶದವರೆಗೆ, ರಾಷ್ಟ್ರದಿಂದ ಅಂತರ್ ರಾಷ್ಟ್ರದವರೆಗೆ, ಅಂತಿಮವಾಗಿ ಜಗತ್ತಿನ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಕೆಲವೊಂದು ನೀತಿ, ನಿಯಮ, ತತ್ವ ಸಿದ್ಧಾಂತಗಳು ಅನಿವಾರ್ಯವಾಗುತ್ತವೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸರ್ವ ಸಮನಾನತೆಯ ಸಂದೇಶವನ್ನು ಸಾರುವ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ತತ್ವ ಸಿದ್ಧಾಂತಗಳನ್ನು ಪರಿ ಪಾಲಿಸಿದ್ದೆಯಾದರೆ ಇವುಗಳೆಲ್ಲವುಗಳಲ್ಲಿ ಸ್ಥಿರತೆಯನ್ನು ತರಬಹುದು. ಪ್ರಜಾಪ್ರಭುತ್ವ ಸರ್ಕಾರಗಳಾಗಲಿ, ರಾಜ ತಾಂತ್ರಿಕ ಸರ್ಕಾರಗಳಾಗಲಿ ಅಥವಾ ನೌಕರಶಾಹಿ ವ್ಯವಸ್ಥೆಗಳಾಗಲಿ, ಮೂಲಭೂತವಾಗಿ ಕೆಲವು ಧ್ಯೇಯೋದ್ಧೇಶ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಜನತೆ ಶಾಂತಿ, ಸೌಖ್ಯ, ಸಾಮರಸ್ಯ, ಸೌಹಾರ್ದತೆಗಳಿಂದ ಬಾಳಲು ಸಾಧ್ಯವಾಗುತ್ತದೆ. ಇದನ್ನೇ ಕೆಲವು ಇತಿಹಾಸಕಾರರು, ಚಿಂತಕರು, ಮೇಧಾವಿಗಳು ಹೇಳುತ್ತಲೇ ಬಂದಿದ್ದಾರೆ. ಇದಕ್ಕಾಗಿ ಕೆಲವು ಉದ್ ಗ್ರಂಥಗಳು ರಚನೆಯಾಗಿವೆ. ಅವುಗಳ ಆಧಾರದಿಂದ ಜನ ಜೀವನ ಸುಖಮಯವಾಗಿಸಲು ಪ್ರಯತ್ನಗಳು ನಡೆದಿವೆ. ಅನೇಕ ದಾರ್ಶನಿಕರು , ಮಹಾತ್ಮರು ಇದಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ.
ಭಾರತೀಯ ನೆಲೆಯಲ್ಲಿ ಅನೇಕ ಸಾಧು ಸಂತರು , ಧಾರ್ಮಿಕ ವ್ಯಕ್ತಿಗಳು, ರಾಜಕೀಯ ವ್ಯವಸ್ಥೆ, ಮುತ್ಸದಿಗಳು ಆಗಿ ಹೋಗಿದ್ದಾರೆ. ಕ್ರಿಸ್ತ ಪೂರ್ವದಲ್ಲೇ ಬುದ್ಧ ದೇವ ಸರ್ವಸಮಾನತೆಯನ್ನು ಶಾಂತಿ ಸೌಹಾರ್ದತೆಯನ್ನು ಭೋಧಿಸಿದರು. ಅವರ ನಂತರ ಹನ್ನೇರಡನೇ ಶತಮಾನದಲ್ಲಿ ಬಸವಾದಿ ಶರಣರು ಕರ್ನಾಟಕದಲ್ಲಿ ಉದಯಿಸಿ ಸಾಮಾಜಿಕ ಕ್ರಾಂತಿಯನ್ನೇ ಉಂಟುಮಾಡಿದರು. ಅವರ ಬಗ್ಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರು ಹೇಳುತ್ತಾರೆ ಬಸವಣ್ಣನವರು 800 ವರ್ಷಗಳ ಹಿಂದೆ ಮಾಡಿದಂತ ಸಾಮಾಜಿಕ ಸುಧಾರಣೆಯನ್ನು ಇನ್ನಾರು ಮಾಡಲು ಸಾಧ್ಯವಿಲ್ಲ. ಅವರು ನೀಡಿದ ತತ್ವಗಳನ್ನು ಸಿದ್ಧಾಂತಗಳನ್ನು ಪರಿಪೂರ್ಣವಾಗಿ ಕಾರ್ಯ ರೂಪಕ್ಕೆ ತಂದಿದ್ದೇಯಾದರೇ ಭಾರತವಷ್ಟೇ ಅಲ್ಲ ಇಡೀ ಜಗತ್ತನ್ನೇ ಸಂವೃದ್ಧಿ ಪಥದಲ್ಲಿ ಕೊಂಡೋಯ್ಯಬಹುದೆಂದು ಈ ವಿಚಾರಗಳನ್ನೇಲ್ಲಾ ಪರಿಭಾವಿಸಿ ವಿಶ್ವ ಸಂಸ್ಥೆಯು ಭಾರತೀಯ ಮೂಲದ ಸಾಮಾಜಿಕ ಸಾಂಸ್ಕøತಿಕ ಸಂದೇಶಗಳನ್ನು ಪರಿಪಾಲಿಸಿದ್ದೆ ಆದರೆ ಲೋಕ ಕಲ್ಯಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಸಾಮಾಜಿಕ ಸಂಧರ್ಭ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗಿದೆ. ಜಾತಿಜಗಳ, ಅಸಮಾನತೆ, ಪ್ರತ್ಯೆಕತೆ, ಶೋಷಣೆಯಂತಹ ಜ್ವಲಂತ ಸಮಸ್ಯೆಗಳು ಈಗ ಮತ್ತಷ್ಟು ಉರಿಯುತ್ತದೆ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ಅನೇಕರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಪರಿಸರ ದಿನಿತ್ಯ ಮಲೀನವಾಗುತ್ತಿದೆ. ನಿಸರ್ಗ ಸಮತೋಲನವನ್ನು ಕಳೆದುಕೊಂಡು ಜಾಗತೀಕರಣವು ತುಚ್ಚೀಕರಿಸುತ್ತಾ ಸಾಗುತ್ತಿದೆ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಅನೇಕ ಚಿಂತಕರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಬಲ್ಲವು. ಬುದ್ಧನ ಜೀವನ ಪ್ರೀತಿ, ಬಸವಣ್ಣನ ದಯೆ, ಅಂಬೇಡ್ಕರರ ಹೋರಾಟ, ಗಾಂಧೀಜಿಯ ಸರಳತೆ, ಮತ್ತೆಮತ್ತೆ ನಮ್ಮ ಚಿಂತನೆಯ ಮೊರೆಯಲ್ಲಿ ಮೂಡಿಬಂದಾಗ ಹೊಸ ಬೆಳಕನ್ನು ಕಾಣಬಹುದಾಗಿದೆ.
ಈಗಿನ ಜಗತ್ತು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಹೊರಗಿನ ಶೃಂಗಾರ ಒಳಗಣ ರಣರಂಗದಂತಾಗಿ ಮಾನಸೀಕ ಸ್ಥಿರತೆಯನ್ನು ಕಳೆದುಕೊಂಡಿದೆ. ವಿಜ್ಞಾನ ತಂತ್ರಜಾÐನದ ಕಾರಣದಿಂದಾಗಿ ವಿವೇಕವನ್ನು ಕಳೆದುಕೊಂಡು ಅಮಾನುಷವಾಗಿ ವರ್ತಿಸುತ್ತಾ ಕಡಿವಾಣವಿಲ್ಲದ ಕುದುರೆಯಂತೆ ಎತ್ತೆತ್ತಲೋ ಓಡುತ್ತಿದೆ. ಅದನ್ನು ತಹಬದಿಗೆ ತರಬೇಕಾದರೆ, ಸಮಾಜಿಕ ಪರಿವರ್ತನೆಯಾಗಬೇಕಾದರೆ ಒಂದು ರೂಢಿ ಮೂಲವಾದ ಪರಂಪರೆ ಬೇಕಾಗುತ್ತದೆ. ನೀತಿ ನಿಯಮ ಸ್ಥಿರತೆಯ ಪ್ರಜ್ಞೆ ಆಳುವವರಲ್ಲಿ ಮೂಢ ಬೇಕಾಗುತ್ತದೆ.
ಪ್ರಸ್ತುತ ಸಮಾಜಿಕ ಸಂಧರ್ಭದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವಣ್ಣನವರು , ಶರಣರ ವಚನಗಳಲ್ಲಿ ಉತ್ತರವಿದೆ. ಹನ್ನೇರಡನೆ ಶತಮಾನದಲ್ಲಿ ವಚನ ಚಳುವಳಿಯನ್ನು ಹುಟ್ಟುಹಾಕಿ ಸಹಸ್ರಾರು ನೊಂದ ಜೀವಿಗಳ ಧನಿಯಾಗಿ ನಿಂತ ಬಸವಾದಿ ಪ್ರಮಥರು ಅನೇಕ ನಿಷ್ಟುರತೆ ಪರಿಹಾರಗಳನ್ನು ಸೂಚಿಸಿದ್ದಾರೆ. ಅಲ್ಲಿಯ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿವೆ. ಶರಣರ ಆದರ್ಶ ಜೀವನ ಮಾರ್ಗಗಳು ಅಂತರಂಗ ಬಹಿರಂಗ ಶುದ್ಧತೆಗೆ ಅಣಿ ಮಾಡಿದವುಗಳಾಗಿವೆ. ದಯೆ, ಕರುಣೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಅಹಿಂಸೆಗಳನ್ನು ರೂಪಿಸಿ ವಚನಗಳಲ್ಲಿ ಬರೆದಂತೆ ಬದುಕಿ ತೋರಿಸಿದ್ದಾರೆ. ವೈಯಕ್ತಿಕ ವಿಕಾಸದೊಂದಿಗೆ ಸಾಮಾಜಿಕ ವಿಕಾಸವಾದವು ಹೇಗೆ ಪ್ರತಿಫಲಿತವಾಗಬಹುದೆಂಬುದನ್ನು ಸಾಕ್ಷ ಭೂತವಾಗಿ ತೋರಿಸಿಕೊಟ್ಟಿದ್ದಾರೆ.
ಶುದ್ಧ ಮನಸ್ಸಿನವರಾಗಿ ಕಾಯಕ ಜೀವಿಯಾಗಿ ಮಾನವೀಯ ಗುಣಗಳಿಂದ ಹೇಗೆ ಜೀವನ ನಡೆಸ ಬಹುದೆಂಬುದನ್ನು ಶರಣ ನುಲಿಯ ಚಂದಯ್ಯ ಈ ವಚನದಲ್ಲಿ ಹೇಳಿದ್ದಾರೆ.
ನೇಮದ ಕೂಲಿ ಅಂದಿನ ನಿತ್ಯ ನೇಮದಲ್ಲಿ ಸಂದಿರಬೇಕು
ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗುವೆ
ಚಂದೇಶ್ವರ ಲಿಂಗಕ್ಕೆ ದೂರಾಗುವೆ.
ಪ್ರತಿಯೊಬ್ಬನು ಆಸೆ ಆಮಿಷಕ್ಕೆ ಬಲಿಬೀಳದೆ ಸತ್ಯ ಪ್ರಮಾಣಿಕವಾಗಿ ಸ್ವ ದುಡಿಮೆ ಮಾಡಿದರೆ ಅವನ ಬದುಕಿನಲ್ಲಿ ಶ್ರೇಷ್ಟತೆ ಇರುತ್ತದೆ. ಅವನನ್ನು ದೇವರು ಮೆಚ್ಚುವನು. ಆಗಿಲ್ಲದಿದ್ದರೆ ವೇಷದ ಪಾಶಕ್ಕೆ ಹೋಗುವೆ ಎಂದು ಎಚ್ಚರಿಸುತ್ತಾರೆ. ವಚನಕಾರರು ಭ್ರಷ್ಟರನ್ನು ಅನಾಚಾರಿಗಳನ್ನು ಮತ್ತು ವೇಷಾಧಾರಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಶಿವಶರಣೆ ಅಕ್ಕಮ್ಮ ವಚನವೊಂದರಲ್ಲಿ ಹೀಗೆ ಹೇಳುತ್ತಾಳೆ.
ಗುರುವಾದಡೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು
ಜಂಗಮವಾದಡೂ ಆಚಾರ ದೋಷವಾದಲ್ಲಿ ಪೂಜಿಸಲಾಗದು.
ಲಿಂಗವಾದಡೂ ಆಚಾರ ಅನುಸರಣೆಯಾಗದಿದ್ದರೆ ಕೂಡಲಾಗದು
ಆಚಾರವೇ ವ್ರತ, ಪ್ರಾಣ ಕ್ರಿಯೆ, ಜ್ಞಾನ ಆಚಾರವೇ ಪ್ರಾಣವಾಗಿಪ್ಪ
ರಾಮೇಶ್ವರ ಲಿಂಗವು
ಇಂತಹ ಮೌಲ್ಯಯುತವಾದ ಸಾಮಾಜಿಕ ಅನಿವಾರ್ಯತೆಗಳಾದ ತತ್ವ ಸಿದ್ಧಾಂತಗಳನ್ನು ಬೆಳೆಸುವುದರ ಮೂಲಕ ಅಧಿಕಾರ ಅಂತಸ್ತು ಸಾಂಸ್ಕøತಿಕ ಸಮಾನತೆಯ ಅರಿವನ್ನುಂಟುಮಾಡಿ ಅದನ್ನು ಪಾಲಿಸುವುದರ ಮೂಲಕ ಏಕತೆಯಲ್ಲಿ ಐಕ್ಯತೆಯನ್ನು ಕಾಣಬಹುದಾಗಿದೆ. ಭಯೋತ್ಪಾದನೆ, ಕೋಮುಗಲಭೆ, ಜಾತಿ ವೈಷಮ್ಯ, ಲಿಂಗಭೇದಗಳಿಗೆ ಸಿದ್ಧೌಷಧವನ್ನು ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಸಿದ್ದಾರೆ. ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕುವುದು, ರಾಜಕೀಯ ವೈಷಮ್ಯಗಳನ್ನು ನಿಲ್ಲಿಸಿ ಏಕೋಭಾವನೆಯಿಂದ ರಾಷ್ಟ್ರಾಭಿವೃದ್ಧಿಗೆ ಶ್ರಮಿಸುವುದು, ಅಹಂಕಾರ ಮಮಕಾರಗಳನ್ನು ತೊರೆದು ಸಮಷ್ಠಿ ಪ್ರಜ್ಞೆಯನ್ನು ತಾಳುವುದು ಈಗಿನ ಸಂಧರ್ಭದಲ್ಲಿ ಪ್ರಸ್ತುತವೆನಿಸಿದೆ. ಇದಲ್ಲದೆ ಈ ಕೆಳಕಂಡ ಕೆಲವಂಶಗಳನ್ನು ತಮ್ಮ ವಚನಗಳಲ್ಲಿ ಪ್ರತಿಬಿಂಬಿಸಿದ್ದಾರೆ.ಅವುಗಳೆಂದರೆ

  1. ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಪ್ಪಿಸಿ ಸಾಮಾಜಿಕ ಭಯ ಭೀತಿಗಳನ್ನು ದೂರಿಕರಿಸುವುದು.
  2. ಜಾತಿ ವ್ಯವಸ್ಥೆಯನ್ನು ತಡೆದು ಎಲ್ಲರೂ ನಮ್ಮವರೆಂದು ಅಪ್ಪಿಕೊಳ್ಳುವುದು. ಅದನ್ನೇ ಬಸವಣ್ಣ “ಇವನಾರವ ಎನಿಸದಿರಯ್ಯ ಇವ ನಮ್ಮವನೆನಿಸಯ್ಯ” ಎಂದು ಹಾಡಿದ್ದಾರೆ.
  3. ಮೂಢನಂಬಿಕೆಗಳನ್ನು , ಅಂಧಸಂಪ್ರಾದಾಯಗಳನ್ನು ತಡೆದು ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದು.
  4. ಕಾಯಕ-ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು. ಯಾವ ಕಾಯಕವಾದರೂ ಶ್ರೇಷ್ಠವೇ ಅದರಿಂದ ಪ್ರಮಾಣಿಕವಾದ ಆರ್ಥಿಕ ಸಮಾನತೆಯನ್ನು ತರುವುದು.
  5. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಅವರು ಸಾಂಸ್ಕøತಿಕವಾಗಿ ಸಾಮಾಜಿಕವಾಗಿ ಬೆಳೆಯಲು ಕಾರಣವಾಗುವುದು.
  6. ಅಹಿಂಸೆಯನ್ನು ಪ್ರತಿಪಾದಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯುಸುವುದು ಅದನ್ನೇ ಬಸÀವಣ್ಣನವರು “ಕಳಬೇಡ ಕೊಲಬೇಡ ಹುಸಿಯನುಡಿಯಲು ಬೆಡ ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ” ಎಂಬ ಸಪ್ತ ಸೂತ್ರಗಳಲ್ಲಿ ಹೇಳಿದ್ದಾರೆ.
  7. ಅಸ್ಪøಶ್ಯತೆಯನ್ನು ಹೋಗಲಾಡಿಸಿ ಗುರು ಹಿರಿಯರಲ್ಲಿ ಭಕ್ತಿಭಾವದಿಂದ ವರ್ತಿಸುವುದು.
  8. ಸಾಂಘೀಕ ಜೀವನಕ್ಕೆ ಮಹತ್ವ ನೀಡುವುದು. ಅನುಭವ ಮಂಟಪವನ್ನು ಸ್ಥಾಪಿಸಿ, ನಿರಕ್ಷರ ಕುಕ್ಷಿಗಳಿಗೆ ಶಿಕ್ಷಣ ನೀಡಿದ್ದು ಮತ್ತು ವಚನ ಸಾಹಿತ್ಯವನ್ನು ರಚಿಸಿ ಜ್ಞಾನ ಪ್ರಸಾರ ಮಾಡಿದ್ದು ಶರಣರ ಹೆಗ್ಗಳಿಕೆ.
  9. ಧಾರ್ಮಿಕ ಕ್ಷೇತ್ರಗಳಲ್ಲಿ ಸರಳತೆ ನೈಜತೆಯಿಂದ ಏಕೋದೇವೋಪಾಸನೆಯನ್ನು ತರುವುದು.
  10. ಪರಿಸರ ಸಂರಕ್ಷಣೆ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಫಲ್ಲವಿಸಿತ್ತು ನೋಡಾ”
  11. ಆತ್ಮ ನಿರೀಕ್ಷಣೆ ಪ್ರತಿಯೊಬ್ಬನು ತನ್ನನ್ನು ತಾನು ಪ್ರಶ್ನಸಿಕೊಳ್ಳುವುದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು.
  12. ಅಪರಿಗ್ರಹ “ಬಯಸಿ ಬಂದುದು ಲಿಂಗಭೋಗ, ಬಯಸದೇ ಬಂದುದು ಅಂಗ ಭೋಗ” ಆಸೆ ಅಮಿಷಗಳನ್ನು ತೊರೆದು ಸಹಜವಾಗಿ ಬದುಕುವುದು.
  13. ಸ್ವಾಭಿಮಾನದಿಂದ ಬದುಕುವುದು, ಅರಸೊತ್ತಿಗೆಯ ಪರಿಸರದಲ್ಲಿದ್ದರೂ “ಆಸು ಓಲಿದಂತೆ ಹಾಡುವೆ ಎನ್ನುವಂತೆ’ “ಶರಣರಿಗೂ ಅಂಜುವವನಲ್ಲ” ಎಂಬ ಸ್ವಾಭಿಮಾನಿಯಾಗುವುದು.
  14. ಮಾನವೀಯತೆಯನ್ನು ಬೆಳೆಸಿಕೊಳ್ಳುವುದು, ಇಂತಹ ಅನೇಕ ಸಂಗತಿಗಳನ್ನು ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಅದರಂತೆ ಅನುಸರಿಸಿದರೆ ಮಾನವನ ಬಾಳು ಬಂಗಾರವಾಗದಿರದು.
    ಇಂತಹ ವಿಷಯಗಳನ್ನು ಅನೇಕ ವಚನಗಳಲ್ಲಿ ಹೇಳಿರುವ ಸಂಗತಿಗಳು ಇಂದಿನ ಸಾಮಾಜಿಕ ಸಂದರ್ಭಕ್ಕೆ ತೀರಾ ಅಗತ್ಯವಗಿದೆ. ಬದುಕಿನ ಅದಮ್ಯತೆಯನ್ನು ಹೇಳಿದ ಬಸವಾದಿ ಪ್ರಮಾಥರು ಜೀವನೋತ್ಸವದ ಜತೆಗೆ ಜೀವದ ಪ್ರೀತಿಯನ್ನು ಕಲಿಸಿದವರು ಮಾನವೀಯ ಮೌಲ್ಯಗಳು ಬೆಳೆದಾಗ ಮನುಷ್ಯ ಬೆಳೆಯಬಲ್ಲನು. ಕೇವಲ ಆರ್ಥಿಕ , ಸಾಮಾಜಿಕ, ಸಮಾನತೆ ಬಂದಾಕ್ಷಣ ಮನುಷ್ಯ ಎತ್ತರಕ್ಕೆ ಹೇರಲಾರ ಮಾನವೀಯತೆ ಬೆಳೆದಾಗ ಮಾತ್ರ ಇದು ಸಾಧ್ಯ. ಇಂತಹ ಮಾನವೀಯ ಮೌಲ್ಯಗಳನ್ನು ಕೊಟ್ಟ ಬಸವಾದಿ ಪ್ರಮಥರ ವಿಚಾರಗಳು ಇಂದಿಗೂ ಸ್ವಾಗತಾರ್ಹವಾಗಿವೆ. ಎಂಟುನೂರು ವರ್ಷಗಳ ಹಿಂದೆ ಆಲೋಚಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ.
    ಕೆ.ಎಂ ರೇವಣ್ಣ
    ನಿವೃತ್ತ ತಹಸೀಲ್ದಾರರು
    ಬೆಂಗಳೂರು

Share

ಲಾಲ್ ಬಹಾದುರ್ ಶಾಸ್ತ್ರಿ

Share

ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ 02, 1904 – ಜನವರಿ 11, 1966) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.
ಜೀವನ
ಲಾಲ್ ಬಹಾದುರ್ ಮೊಘಲ್ ಸಾರಾಯ್‍ನಲ್ಲಿ ಜನಿಸಿದ್ದು. 1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. 1926 ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಗಾಂಧೀಜಿಯವರ ಜನ್ಮದಿನದಂದೇ ಜನ್ಮದಿನ
ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ
ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ0ದ ವಲ್ಲಭ ಪ0ತ್ ಅವರ ಸರಕಾರದಲ್ಲಿ ಪೆÇೀಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. 1951ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು.
ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‍ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ 1961ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ 27, 1964ರಂದು ಜವಾಹರ್‍ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು.
ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‍ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ 9 ರಂದು ಭಾರತದ ಪ್ರಧಾನಿಯಾದರು.
ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು
ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-bಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
ಜನವರಿ 1966ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾμÉ್ಕಂಟ್‍ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ 10 ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು; ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು ಎಂಬ ಊಹೆ ಇದೆ. ಆದರೆ ಅದನ್ನು ಅಲ್ಲಿಯ ವೈದ್ಯರು ದೃಡಪಡಿಸಿಲ್ಲ.
ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.

ಪ್ರಾಮಾಣಿಕ, ಸ್ವಾಭಿಮಾನಿ
ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.

ಶಾಸ್ತ್ರಿ ಸೋಮವಾರ
ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.
ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಪ್ರಶಸ್ತಿಗಳು
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ.

ಸಾವು
1965 ರ ಇಂಡೋ-ಪಾಕಿಸ್ತಾನ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ 11 ಜನವರಿ 1966 ರಂದು ಶಾಸ್ತ್ರಿ ತಾμÉ್ಕಂಟ್, ಉಜ್ಬೇಕಿಸ್ತಾನ್ (ಆಗಿನ ಸೋವಿಯತ್ ಒಕ್ಕೂಟ) ನಲ್ಲಿ ನಿಧನರಾದರು. ಶಾಸ್ತ್ರಿಯವರ ಬೆಂಬಲಿಗರು ಮತ್ತು ನಿಕಟ ಸಂಬಂಧಿಗಳಲ್ಲಿ ಅನೇಕರು, ಆ ಸಮಯದಲ್ಲಿ ನಿರಾಕರಿಸಿದರು ಮತ್ತು ಅವರ ಸಾವಿನ ಸಂದರ್ಭಗಳನ್ನು ನಂಬಲು ನಿರಾಕರಿಸಿದ್ದಾರೆ ಮತ್ತು ನಿಷ್ಪ್ರಯೋಜಕತೆಯನ್ನು ಆರೋಪಿಸಿದ್ದಾರೆ. ಅವರ ಸಾವಿನ ಕೆಲವೇ ಗಂಟೆಗಳಲ್ಲಿ ಪಿತೂರಿ ಸಿದ್ಧಾಂತಗಳು ಕಾಣಿಸಿಕೊಂಡವು ಮತ್ತು ನಂತರವೂ ಮುಂದುವರೆದಿದೆ. ಅವರನ್ನು ರಾಷ್ಟ್ರೀಯ ನಾಯಕ ಎಂದು ಸ್ತುತಿಸಲಾಯಿತು ಮತ್ತು ಅವರ ನೆನಪಿಗಾಗಿ ವಿಜಯ್ ಘಾಟ್ ಸ್ಮಾರಕವನ್ನು ಸ್ಥಾಪಿಸಲಾಯಿತು. ಅವರ ಮರಣದ ನಂತರ, ಗುಲ್ಜಾರಿಲಾಲ್ ನಂದಾ ಮತ್ತೊಮ್ಮೆ ಹಂಗಾಮಿ ಪ್ರಧಾನ ಮಂತ್ರಿಯ ಪಾತ್ರವನ್ನು ವಹಿಸಿಕೊಂಡರು, ಅಲ್ಲಿಯವರೆಗೆ ಕಾಂಗ್ರೆಸ್ ಸಂಸದೀಯ ಪಕ್ಷವು ಮೊರಾರ್ಜಿ ದೇಸಾಯಿಯವರ ಬದಲಿಗೆ ಇಂದಿರಾ ಗಾಂಧಿಯನ್ನು ಅಧಿಕೃತವಾಗಿ ಶಾಸ್ತ್ರಿಯ ಉತ್ತರಾಧಿಕಾರಿಯಾಗಿ ಆಯ್ಕೆಮಾಡುತ್ತದೆ.

ಶಾಸ್ತ್ರಿ ಅವರ ಸಾವಿನ ನಂತರ, ಅವರ ಪತ್ನಿ ಲಲಿತಾ ಶಾಸ್ತ್ರಿ ಅವರು ವಿಷ ಸೇವಿಸಿದ್ದಾರೆ ಎಂದು ಆರೋಪಿಸಿದರು. ಕ್ರಾಂತ್ ಒ. ಐ. ವರ್ಮಾ ಅವರು ಬರೆದ ಲಲಿತಾ ಕೆ ಅನ್ಸೂ ಎಂಬ ಶೀರ್ಷಿಕೆಯ ಹಿಂದಿಯಲ್ಲಿ ಒಂದು ಮಹಾಕಾವ್ಯ ಪುಸ್ತಕವನ್ನು 1978 ರಲ್ಲಿ ಪ್ರಕಟಿಸಲಾಯಿತು. ಈ ಪುಸ್ತಕದಲ್ಲಿ, ಶಾಸ್ತ್ರಿಯವರ ಸಾವಿನ ದುರಂತ ಕಥೆಯನ್ನು ಅವರ ಪತ್ನಿ ಲಲಿತಾ ಅವರು ವಿವರಿಸಿದ್ದಾರೆ.

ಅವರ ಸಾವಿನ ಬಗ್ಗೆ ಭಾರತ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಲಿಲ್ಲ ಮತ್ತು ಮಾಧ್ಯಮಗಳು ಮೌನವಾಗಿದ್ದವು. ಪಿತೂರಿಯ ಸಂಭವನೀಯ ಅಸ್ತಿತ್ವವನ್ನು ‘ಔಟ್‍ಲುಕ್’ ನಿಯತಕಾಲಿಕೆಯು ಭಾರತದಲ್ಲಿ ಆವರಿಸಿದೆ. ಶಾಸ್ತ್ರಿಯವರ ಸಾವಿಗೆ ಸಂಬಂಧಿಸಿದ ದಾಖಲೆಯನ್ನು ಬಹಿರಂಗಪಡಿಸಲು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಅIಂ’s ಇಥಿe oಟಿ Souಣh ಂsiಚಿ ನ ಲೇಖಕ ಅನುಜ್ ಧರ್ ನಂತರ ಪ್ರಶ್ನೆಯನ್ನು ಕೇಳಿದರು, ಆದರೆ ಇದು ಹಾನಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಿ ಪ್ರಧಾನಿ ಕಾರ್ಯಾಲಯವು ಹೊಣೆಗಾರಿಕೆಯನ್ನು ನಿರಾಕರಿಸಿತು. ವಿದೇಶಿ ಸಂಬಂಧಗಳು, ದೇಶದಲ್ಲಿ ಅಡ್ಡಿ ಉಂಟುಮಾಡುತ್ತವೆ ಮತ್ತು ಸಂಸದೀಯ ಸವಲತ್ತುಗಳ ಉಲ್ಲಂಘನೆಯನ್ನು ಉಂಟುಮಾಡುತ್ತವೆ. ಕುಲದೀಪ್ ನಾಯರ್ ಅವರ ಮತ್ತೊಂದು ಆರ್‍ಟಿಐ ಮನವಿಯನ್ನು ತಿರಸ್ಕರಿಸಲಾಗಿದೆ, ಏಕೆಂದರೆ ಪಿಎಂಒ ಮನವಿಯ ಮೇಲಿನ ಬಹಿರಂಗಪಡಿಸುವಿಕೆಯಿಂದ ವಿನಾಯಿತಿಯನ್ನು ಉಲ್ಲೇಖಿಸಿದೆ. ಭಾರತವು ಶಾಸ್ತ್ರಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಿದೆಯೇ ಮತ್ತು ಸರ್ಕಾರವು ಫೌಲ್ ಪ್ಲೇಯ ಆರೋಪಗಳನ್ನು ತನಿಖೆ ಮಾಡಿದ್ದರೆ ಎಂಬ ಪ್ರಶ್ನೆಗಳಿಗೆ ಗೃಹ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. ದೆಹಲಿ ಪೆÇಲೀಸರು ಆರ್‍ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಶಾಸ್ತ್ರಿ ಸಾವಿನ ಬಗ್ಗೆ ತಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದಾರೆ. ಯಾವುದೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈಗಾಗಲೇ ಹೇಳಿದೆ. ದೆಹಲಿ ಪೆÇಲೀಸ್‍ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ದಿನಾಂಕ 29 ಜುಲೈ 2009 ಅವರ ಉತ್ತರದಲ್ಲಿ, “ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಯಾವುದೇ ದಾಖಲೆಯು ಈ ಜಿಲ್ಲೆಯಲ್ಲಿ ಲಭ್ಯವಿಲ್ಲ. ಆದ್ದರಿಂದ ಅಗತ್ಯವಿರುವ ಮಾಹಿತಿಯು ಸಂಬಂಧಿಸಿದೆ ನವ ದೆಹಲಿ ಜಿಲ್ಲೆಯನ್ನು ದಯವಿಟ್ಟು ಶೂನ್ಯ ಎಂದು ಪರಿಗಣಿಸಬಹುದು.” ಇದು ಹೆಚ್ಚಿನ ಅನುಮಾನಗಳನ್ನು ಸೃಷ್ಟಿಸಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವು ಭಾರತೀಯ ರಾಜಕೀಯದ ಅತ್ಯಂತ ದೊಡ್ಡ ಬಿಡಿಸಲಾಗದ ರಹಸ್ಯಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಆರ್‍ಟಿಐ ಅರ್ಜಿಯ ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ ಪಿಎಂಒ, ಶಾಸ್ತ್ರಿ ಅವರ ಸಾವಿಗೆ ಸಂಬಂಧಿಸಿದ ಒಂದೇ ಒಂದು ವರ್ಗೀಕೃತ ದಾಖಲೆಯನ್ನು ಹೊಂದಿದೆ, ಇದನ್ನು ಆರ್‍ಟಿಐ ಕಾಯ್ದೆಯಡಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ. ಇದು ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ಹಿಂದಿನ ಸೋವಿಯತ್ ಸರ್ಕಾರದ ಏಕೈಕ ದಾಖಲೆ ಎಂದರೆ “ಆರ್‍ಎನ್ ಚುಗ್, ಡಾಕ್ಟರ್ ಇನ್-ಪ್ರಧಾನಿ ಮತ್ತು ರμÁ್ಯದ ಕೆಲವು ವೈದ್ಯರನ್ನು ಒಳಗೊಂಡ ತಂಡವು ನಡೆಸಿದ ಜಂಟಿ ವೈದ್ಯಕೀಯ ತನಿಖೆಯ ವರದಿ” ಎಂದು ಎಂಇಎ ಹೇಳಿದೆ ಮತ್ತು ಯಾವುದೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ. ಯುಎಸ್ಎಸ್ಆರ್ ಭಾರತದಲ್ಲಿ ಶಾಸ್ತ್ರಿಯವರ ಮೃತದೇಹದ ಯಾವುದೇ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ಗೃಹ ಸಚಿವಾಲಯವು ದೆಹಲಿ ಪೆÇೀಲೀಸ್ ಮತ್ತು ನ್ಯಾಷನಲ್ ಆರ್ಕೈವ್ಸ್‍ಗೆ ವಿಷಯವನ್ನು ಉಲ್ಲೇಖಿಸಿದೆ.

ನಂತರ, 4 ವರ್ಷಗಳ ಅವಧಿಯಲ್ಲಿ ಮಾಜಿ ಅIಂ ಆಪರೇಟಿವ್ ರಾಬರ್ಟ್ ಕ್ರೌಲಿಯನ್ನು ಸಂದರ್ಶಿಸಿದ ಪತ್ರಕರ್ತ ಗ್ರೆಗೊರಿ ಡೌಗ್ಲಾಸ್ ಅವರ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದರು ಮತ್ತು ಕಾಗೆಯೊಂದಿಗೆ ಸಂವಾದಗಳು ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಪ್ರತಿಲೇಖನವನ್ನು ಪ್ರಕಟಿಸಿದರು. ಪುಸ್ತಕದಲ್ಲಿ, ಕ್ರೌಲಿ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ವಿಯೆನ್ನಾದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಆಲ್ಪ್ಸ್‍ನಲ್ಲಿ ವಿಮಾನ ಪತನಗೊಂಡ ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಭಾಭಾ ಅವರನ್ನು ತೊಡೆದುಹಾಕಲು ಅIಂ ಕಾರಣವಾಗಿದೆ ಎಂದು ಹೇಳಿದ್ದಾರೆ. ಪರಮಾಣು ರೀತಿಯಲ್ಲಿ ಭಾರತದ ಕಟ್ಟುನಿಟ್ಟಿನ ನಿಲುವು ಮತ್ತು ಪರಮಾಣು ಪರೀಕ್ಷೆಗಳೊಂದಿಗೆ ಮುಂದುವರಿಯಲು ಬಯಸಿದ್ದ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಯುಎಸ್‍ಎ ಜಾಗರೂಕವಾಗಿದೆ ಎಂದು ಕ್ರೌಲಿ ಹೇಳಿದರು. ಈ ಪ್ರದೇಶದ ಮೇಲೆ ಭಾರತ ಮತ್ತು ರμÁ್ಯಗಳ ಸಾಮೂಹಿಕ ಪ್ರಾಭಲ್ಯದ ಬಗ್ಗೆ ಏಜೆನ್ಸಿಯು ಚಿಂತಿಸುತ್ತಿದೆ ಎಂದು ಅವರು ಹೇಳಿದರು, ಇದಕ್ಕಾಗಿ ಬಲವಾದ ಪ್ರತಿಬಂಧಕ ಅಗತ್ಯವಿದೆ.


Share

ವಿಶ್ವ ಕುಟುಂಬ ದಿನದ (Global Family Day)ಪ್ರಯುಕ್ತ ವಿಶೇಷ ಲೇಖನ

Share

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ.ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನರ್ಮಾಣ ಸಾಧ್ಯ.”ವಸುದೈವ ಕುಟುಂಬಕಂ” ಎಂಬೊಂದು ನುಡಿಯಿದೆ.ಇದರ ರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರಿಕರಿಸುವ ಈ ವ್ಯವಸ್ಥೆ ನಮ್ಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ. ಇಡೀ ಜಗತ್ತನ್ನು ಊಹಿಸಲು ಅಸಾಧ್ಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ.ಮುಂದೆ ಕೂಡಾ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ.ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ ಎಲ್ಲಾ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೇ ಇದೆ. ಆದ್ದರಿಂದಲೇ ನಮ್ಮ ವಿಶ್ವ ಇಂದು ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ.
ಭಾರತದ ಇತಿಹಾಸ ಹಾಗೂ ಸಂಸ್ಕøತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗಿಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೆÇೀಷಕ ಕುಟುಂಬವೊಂದು ನಿರ್ಮಾಣವಾಗಿದೆ ಅದುವೇ ವಿಭಕ್ತ ಕುಟುಂಬ.
ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ ಇದ್ದಾಗ ಮಾತ್ರ ಸಮಾಜದ ನಿರ್ಮಾಣಕ್ಕೆ ನಾಂದಿ ಎನ್ನುವ ಮಾತಿದೆ. ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ. ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ,ದೊಡ್ಡಮ್ಮ, ಅಳಿಯ, ಮಾವ, ಅತ್ತೆ, ಸೊಸೆ, ಅಪ್ಪ, ಅಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತುಂಬಿತುಳುಕುತ್ತಿದ್ದ ಮನೆಗಳಲ್ಲಿ ಅಮ್ಮನ ಕೈ ತುತ್ತು, ಅಪ್ಪನ ಕಿವಿ ಮಾತು, ಅಜ್ಜಿಯ ಕಾಗೆ ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುವ ಮನಸ್ಸುಗಳು. ಒಬ್ಬರನ್ನೊಬ್ಬರು ರ್ಥ ಮಾಡಿಕೊಂಡು ಜೀವನ ನಡೆಸುವುದು. ಅಲ್ಲಿ ಹಿರಿಯರ ಮಾತೇ ಅಂತಿಮ ನರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ.ಅಲ್ಲಿ ಚಿಕ್ಕವರು ದೊಡ್ಡವರೆಂಬ ಕೀಳರಿಮೆಯಿಲ್ಲ ಎಲ್ಲರೂ ಒಂದೇ ಎನ್ನುವ ಭಾವನೆ ಅವಿಭಕ್ತ ಕುಟುಂಬದಲ್ಲಿ ಇರುತ್ತದೆ. ಆದರೆ ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದು ಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕಬಹುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿವೆ. ಅವಿಭಕ್ತ ಕುಟುಂಬಗಳು ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವರ್ಥವೋ? ಏನೆಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲುವಾಗಿ ಅಂತರರಾಷ್ಟ್ರೀಯ ಕುಟುಂಬ ದಿನವನ್ನು ಜನೆವರಿ 01 ರಂದು ಆಚರಿಸಲಾಗುತ್ತದೆ.
ಕಳೆದ ವರ್ಷ ಕೊರೊನಾ ಸಂದಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತಾರ್ಪ್ಯೂಗೆ ಕರೆ ನೀಡಿದಾಗ ಕೊರೊನಾ ವಾರಿರ್ಸ್ ಗಳಿಗೆ ದೀಪ ಬೆಳಗುವ ಮೂಲಕ ಗೌರವಿಸಿ, ದೇಶದ ಜನರೆಲ್ಲ ಅಭೂತಪರ್ವವಾಗಿ ಸ್ಪಂದಿಸಿದ್ದರು. ಇದು ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯ ಸಂಕೇತವನ್ನು ತಿಳಿಸುತ್ತದೆ. ಕೊರೊನಾ ಸಮಯದಲ್ಲಿ ವಿದೇಶಗಳಲ್ಲಿ ಏನೇ ಕಳವಳವಾದರೂ, ಭಾರತದಲ್ಲಿ ಸಶಕ್ತವಾಗಿ ಎದುರಿಸಿದೆವು. ಇದಕ್ಕೆ ಕೌಟುಂಬಿಕ ವ್ಯವಸ್ಥೆಯೇ ಕಾರಣ ಎಂದು ಹೇಳಲಾಗುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮುಂದಾಗಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಜೊತೆಗೆ ಕುಳಿತು ಭಜನೆ ಹಾಗೂ ಭೋಜನಗಳಲ್ಲಿ ತೊಡಗುವುದು, ಹಬ್ಬ ಆಚರಣೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಕುಟುಂಬದ ಸದಸ್ಯರ ಒಡನಾಟ ಹೆಚ್ಚಾಗಿ ಕುಟುಂಬ ವ್ಯವಸ್ಥೆ ಇನ್ನೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ ಹಾಗೂ ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪರ್ಣ ಅಲಂಕಾರ. ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್! ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟ ಮಾಡುವುದರಲ್ಲಿ ಇರುವ ಸಂತೋಷವೇ ಬೇರೆ.
ಒಟ್ಟಾರೆಯಾಗಿ ಕುಟುಂಬದಲ್ಲಿನ ಮಕ್ಕಳ ಏಳಿಗೆಗಾಗಿ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ತೂಗಿಸಿಕೊಂಡು ಹೋಗುವ ನಾರಿಯನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ವಿದೇಶಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ವಿಚ್ಛೇದನಗಳಿಂದಾಗಿ ತಂದೆ ತಾಯಿಯ ಆರೈಕೆಯಿಲ್ಲದೆ ಬೀದಿಗೆ ಬೀಳುವ ಮಕ್ಕಳು ಸಮಾಜ ಕಂಟಕರಾಗುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಹೇಳಲಾಗಿದೆ. ಮಹಿಳೆಯರಿಗೆ ಸಿಕ್ಕಿರುವ ಮೀಸಲಾತಿ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಕುಟುಂಬದಲ್ಲಿನ ನೋವು ನಲಿವುಗಳೆರಡನ್ನೂ ಹಂಚಿಕೊಂಡು ಸೋಲು ಗೆಲುವುಗಳಿಗೆ ಜತೆಯಾಗುವಂತಹ ಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪರ್ಣನಾಗುತ್ತಾನೆ. ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬದ ಸದಸ್ಯರನ್ನು ಮತ್ತೆ ಜೋಡಿಸಿಕೊಂಡು, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ನಮ್ಮ ಹಿರಿಯರ ಆಶಯದಂತೆ,ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡುಕೊಳ್ಳುವಿಕೆಯಿಂದ ಈ ರ್ಷದ ಕುಟುಂಬ ದಿನವನ್ನು ರ್ಷ ಸಂಭ್ರಮದಿಂದ ಆಚರಿಸಬೇಕೆಂಬುವುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಾಗಿದೆ.


Share

ತಪ್ಪು ಸಂದೇಶಕ್ಕೆ ದೇಶ ಹೊತ್ತಿ ಉರಿದಿದ್ದು ಎಷ್ಟು ಸರಿ ?

Share

ಪೌರತ್ವ ಕಾಯ್ದೆ-2019 ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಆಗುತ್ತಲ್ಲೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿದ ಹಲವು ಸುಳ್ಳು ಸುದ್ದಿಗಳಿಗೆ ದೇಶವೆ ಹೊತ್ತಿ ಉರಿಯುತ್ತಿದೆ ಏಕೆಂದರೆ ಈ ಮುಂಚೆ ಬಿಲ್ ಆಗಿದ್ದು ಈಗ ಕಾಯ್ದೆ ಆಗಿ ಬದಲಾಗಿದ್ದು ಹಳೆಯ ಬಿಲ್‍ನ ಕೇಲವು ಅಂಶಗಳನ್ನು ಇಲ್ಲಿ ಬದಲಾಗಿದೆ.ಈ ಕಾಯ್ದೆಯಿಂದ ಭಾರತ ಮೂಲ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯು ಇಲ್ಲ ಏಕೆಂದರೆ ಈ ಕಾಯ್ದೆಯ ಮೂಲ ಉದ್ದೇಶವು ಬೇರೆ ದೇಶದ ಅಲ್ಪಸಂಖ್ಯಾತರ ರಕ್ಷಣೆ ಅಂದರೆ ಅಂತರಾಷ್ಟ್ರೀಯ ನಿಯಮಗಳ ಪ್ರಕಾರ ಆಶ್ರಯ ನೀಡುವುದು ಮತ್ತು ನುಸುಳುಕೋರರನ್ನು ತಡೆಯುವುದು ಮತ್ತು ಬೇರೆ ದೇಶಗಳಿಂದ ಬಂದು ದೇಶದ ಭದ್ರತೆಯನ್ನು ಹಾಳು ಮಾಡುವುದು ಮೂಲನಿವಾಸಿಗಳ ಬದುಕಿಗೆ ತೊಂದರೆ ನೀಡುವುದು ತಡೆಯುವುದೇ ಆಗಿದೆ ಹೊರತು ಇಲ್ಲಿಯ ಮುಸ್ಲಿಂರನ್ನು ಹೊರಹಾಕುವ ಯಾವ ಉದ್ದೇಶವು ಇಲ್ಲ ಅದು ಅಲ್ಲದೇ ಸಿ.ಎ.ಎ ಸಂಪೂರ್ಣ ಓದಿ ಅಥೈಸಿಕೊಂಡು ಹೋರಾಟ ಮಾಡುವುದು ಒಳ್ಳೆಯದೇ ಹೊರತು ರಾಜಕೀಯ ಮತ್ತು ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಬೆಂಕಿ ಹಚ್ಚಿ ಮೈಕಾಸಿಕೊಳ್ಳುವುದು ನ್ಯಾಯವಲ್ಲ. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ,ಬಾಂಗ್ಲಾ ಮತ್ತು ಅಪ್ಘನಿಸ್ತಾನ ದೇಶಗಳ ಮುಸ್ಲಿಂ ಧರ್ಮದವರನ್ನು ಹೊರತು ಪಡಿಸಿ ಸಿಕ್ಕ್,ಜೈನ್,ಬೌದ್ಧ ಪಾರಸಿ ಮತ್ತು ಹಿಂದೂ ಧರ್ಮದವರು ಬರುವ ನಿರಾಸಿತರು ಮತ್ತು ಅಳಿ ತುಳಿತ ಒಳಗಾದವರು ಬಂದರೆ ತಕ್ಷಣ ಅವರಿಗೆ ದೇಶದ ಆಶ್ರಯ ಮತ್ತು ಪೌರತ್ವ ದೊರೆಯುತ್ತದೆ, ಇದು ಮುಸ್ಲಿಂ ಧರ್ಮದವರಿಗೆ ಅನ್ವಯಿಸುವುದಿಲ್ಲ. ಬೇರೆ ಕಾಯ್ದೆ ಮತ್ತು ಅಂತರಾಷ್ಟ್ರೀಯ ನಿಯಮದ ಪ್ರಕಾರ ಈ ದೇಶಗಳ ಮುಸ್ಲಿಂ ಧರ್ಮದವರು ಭಾರತೀಯ ಪೌರತ್ವ ಪಡೆಯಬೇಕಾದರೆ 11 ವರ್ಷ ಕಾಯಬೇಕು ಏಕೆಂದರೆ ಈ ಮೂರು ದೇಶಗಳು ಮುಸ್ಲಿಂ ಧರ್ಮದವರೆ ಹೆಚ್ಚಿರುವ ದೇಶಗಳು ಅದರಲ್ಲೂ ಪಾಕಿಸ್ಥಾನ ಮತ್ತು ಅಪ್ಘನಿಸ್ತಾನ ದೇಶಗಳು ತಮ್ಮ ಸಂವಿಧಾನದಲ್ಲೆ ಇಸ್ಲಾಮಿಕ ದೇಶಗಳು ಅಂತ ಹೇಳಿಕೊಂಡಿವೆ ಮತ್ತು ಬಾಂಗ್ಲಾ ದೇಶವು ತಾನು ಇಸ್ಲಾಂ ದೇಶ ಅಂತ ಹೇಳಿಕೊಳ್ಳದಿದ್ದರೂ ಕೂಡ ಅಲ್ಲಿ ಆಡಳಿತ ಮತ್ತು ಕಾನೂನುಗಳು ಮುಸ್ಲಿಂ ಪರವಾಗಿದ್ದು ಈ ಗಡಿ ದೇಶಗಳಲ್ಲಿ ಮುಸ್ಲಿಂ ಧರ್ಮದವರು ಬಹುಸಂಖ್ಯಾತರಾಗಿದ್ದು, ಈ ದೇಶಗಳಲ್ಲಿ ಮುಸ್ಲಿಂ ಧರ್ಮದವರಿಗೆ ಯಾವುದೇ ರೀತಿಯ ತೊಂದರೆಯೂ ಇಲ್ಲ. ಮಯನ್ಮಾರ ಹಿಂದೂಗಳಿಗೆ ಮತ್ತು ಶ್ರೀಲಂಕಾದ ತಮಿಳಿನ್ನರಿಗೂ ಸಿ.ಎ.ಎ ಮೂಲಕ ತಕ್ಷಣ ಪೌರತ್ವ ದೊರೆಯುವುದಿಲ್ಲ ಏಕೆಂದರೆ ಮಯನ್ಮಾರದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು, ಶ್ರೀಲಂಕಾದಲ್ಲಿ ತಮಿಳರ ಸಮಸ್ಯೆಗಳು ಪರಿಹಾರವಾಗಿದ್ದು ಮತ್ತು ಬಹುಸಂಖ್ಯಾತ ತಮಿಳರು ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮ ವಲಸಿಗರ ಅಕ್ರಮ ಚಟುವಟಿಕೆಗಳನ್ನು ತಡೆಯಲು ದೇಶದ ಸುಕ್ಷರತೆ ಭದ್ರತೆ ಮತ್ತು ದೇಶದ ನಾಗರೀಕರ ಅಭಿವೃದ್ಧಿಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರಿಂದ ದೇಶವಾಸಿಗಳಿಗೆ ಅನುಕೂಲವಾಗಲಿದ್ದು ಆದರೆ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚದುರಂಗ ಆಟಕ್ಕೆ ಅಮಾಯಕರ ಬಲಿಕೊಡುತ್ತಿವೆ. ದೇಶದಲ್ಲಿ ವಾಸ ಮಾಡುತ್ತಿರುವ ಯಾವುದೇ ಧರ್ಮದವರಿಗೂ ಇದರಿಂದ ತೊಂದರೆ ಆಗುವುದಿಲ್ಲ ಅಕ್ರಮವಾಗಿ ದೇಶದಲ್ಲಿ ಇರುವವರಿಗೆ ಮಾತ್ರ ತೊಂದರೆ ಕುಂಬಳ ಕಾಯಿ ಕಳ್ಳ ಅಂದರೆ ಏಕೆ ಕೇಲವರು ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಅನ್ನುದು ಯಕ್ಷ ಪ್ರಶ್ನೆಯಾಗಿದೆ.
ದೇಶದ ಬಡವರು ಮತ್ತು ಅಲ್ಪಸಂಖ್ಯಾತರು ಈಗ ಸರ್ಕಾರದ ಯೋಜನೆಗಳನ್ನು ಪಡೆಯಲು ಹಲವಾರು ಬಾರಿ ಹಲವಾರು ದಾಖಲೆಗಳನ್ನು ವಿವಿಧ ಸರ್ಕಾರಿ/ಅರೆ ಸರ್ಕಾರಿ ಕಛೇರಿಗಳಿಗೆ ಅಲೆದು ಸರ್ಕಾರಿ ಯೋಜನೆಗಳನ್ನು ಪಡೆಯುವಾಗ ಇರುವ ಆಸಕ್ತಿ ಮನೆ ಬಾಗಲಿಗೆ ಬಂದಾಗ ಕೇವಲ ಯಾವುದಾದರೂ ಎರಡು ದಾಖಲೆಗಳನ್ನು ತೋರಿಸಲು ಏನು ಸಮಸ್ಯೆ ? ದೇಶದ ಅಭಿವೃದ್ಧಿಗಾಗಿ ಅಕ್ರಮ ನುಸುಳುಕೋರರ ತೊಂದರೆಯನ್ನು ತಪ್ಪಿಸಲು ಮತ್ತು ದೇಶದ ಭದ್ರತೆಗಾಗಿ ಇಷ್ಟು ಮಾಡದಿದ್ದರೆ ಹೇಗೆ ? ಅಕ್ರಮವಾಗಿ ದೇಶದಲ್ಲಿ ವಾಸಿಸುವವರಿಂದ ಸ್ಥಳೀಯರಿಗೆ ಉದ್ಯೋಗದ ಕೊರತೆ, ದೇಶದಲ್ಲಿ ವಿನಾಕಾರಣ ಗಲಭೆ ಮತ್ತು ಡೊಂಬಿಗಳು ನಡೆಯುವುದು, ಇಂತಹ ಅಕ್ರಮ ವಲಸಿಗರು ತಮ್ಮ ದೇಶದ ಮೇಲಿನ ಅಭಿಮಾನಕ್ಕೆ ಇಲ್ಲಿ ಕೇಟ್ಟ ಕೆಲಸ ಮಾಡಿ ದೇಶದ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಹಾಳು ಮಾಡುವುದು ಮತ್ತು ಎಲ್ಲಕ್ಕಿಂತಲ್ಲೂ ಮುಖ್ಯವಾಗಿ ಭಯೋತ್ಪಾದನೆ.
ಸಂವಿಧಾನ ಮೂಲ ಆಶೆಯನ್ನು ಈ ಕಾಯ್ದೆ ಹಾಳು ಮಾಡುತ್ತದೆ ಅಂತ ಕೇಲವರು ವಾದಿಸುತ್ತಾರೆ. ಸಂವಿಧಾನದಲ್ಲಿ ಹಲವಾರು ಬದಲಾವಣೆಗಳು ಆಗಿದ್ದು ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ಕೂಡ. ಬದಲಾವಣೆ ಜಗದ ನಿಯಮ ಅಲ್ಲವೇ? ಗಾಂಧಿ ಅಂಬೇಡ್ಕರ್ ಯಾರೂ ಮನೆಯವರನ್ನು ಉಪವಾಸ ಬಿಟ್ಟು ಕಂಡವರಿಗೆ ಮ್ರಷ್ಠಾನ್ನ ಭೋಜನೆ ನೀಡಿ ಅಂತ ಎಲ್ಲೂ ಹೇಳಿಲ್ಲ. ಈ ದೇಶದ ಅಲ್ಲ ವಿಶ್ವದ ಯಾವುದೇ ತತ್ವಜ್ಞಾನಿ ಕೂಡ ತಮ್ಮವರನ್ನು ಬೀದಿಯಲ್ಲಿ ಬಿಟ್ಟು ಬೇರೆಯವರನ್ನು ಉಪಚರಿಸಿ ಅಂತ ಹೇಳಿಲ್ಲ. ಈ ದೇಶದ ಅಲ್ಪಸಂಖ್ಯಾತರು ಮತ್ತು ಎಲ್ಲ ಧರ್ಮದ ಬಡವರನ್ನು ಮೊದಲು ಒಂದು ಹಂತಕ್ಕೆ ತರಬೇಕಾದ ಅತ್ಯಂತ ಮಹತ್ವದ ಜವಾಬ್ದಾರಿ ಆಡಳಿತ ಸರ್ಕಾರ ಮತ್ತು ಆಡಳಿತ ವಿಭಾಗದ ಮೇಲೆ ಇದ್ದು, ಕಾಟಾಚಾರಕ್ಕೆ ವಿಶ್ವಸಂಸ್ಥೆಯ ನಿಯಮಗಳನ್ನು ಪಾಲಿಸುತ್ತೇವೆ ಅಂತ ತೋರಿಸಲು ನಮ್ಮವರನ್ನು ನಿರ್ಗತಿಕರಾಗಿಸುವುದು ಯಾವ ನ್ಯಾಯ ? ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕಾಯ್ದೆಯ ಅವಶ್ಯಕತೆ ಇದ್ದು ದೇಶದ ಮೂಲ ನಿವಾಸಿಗಳು ಯಾವುದೇ ಗಾಳಿ ಸುದ್ದಿ ಅಥವಾ ದ್ರಶ್ಯ ಮಾಧ್ಯಮಗಳು ಟಿ. ಆರ್. ಪಿ ಗಾಗಿ ಕೇಲ ಬುದ್ಧಿ(ಲದ್ದಿ) ಜೀವಿಗಳ ಪಾನೇಲ್ ಚರ್ಚೆಯನ್ನು ನೋಡಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಬರುವ ಪೋಸ್ಟಗಲನ್ನು ನೋಡಿ ಭಾವೋದ್ರಕ್ಕೆ ಒಳಗಾಗಿ ಗಲಾಟೆ, ಬಂಧ ಮಾಡಬಾರದು ಇದರಿಂದ ಆಗುವ ಹಾನಿಗಳನ್ನು ಯಾವ ಧರ್ಮದ ದೇವರಾಗಲಿ, ಬುದ್ದಿಜೀವಿಯಾಗಲಿ ಮರಳಿ ಕೊಡಲಾರರು, ಮಂಗಳೂರಿನಲ್ಲಿ ಜೀವ ಬಲಿಗೆ ಈ ದೇಶದ ಬುದ್ದಿಜೀವಿಗಳು ಮತ್ತು ಹೋರಾಟ ಮಾಡಬೇಕು ಎಂಬ ಹುಚ್ಚು ಮನಸ್ಸುಗಳೆ ಕಾರಣ ಆದರೆ ಆ ಜೀವಗಳನ್ನು ಮರಳಿ ತರುವ ಶಕ್ತ ಈ ಲದ್ದಿಗಳಿಗೆ ಮತ್ತು ಯಾವುದೋ ನೆಲಕಚ್ಚುತ್ತಿರುವ ರಾಜಕೀಯ ಪಕ್ಷಗಳ ಮುಂಖಡರಿಗೆ ಅಥವಾ ಹೋರಾಟ ಆಯೋಜಿಸಿದವರಿಗೆ ಇದ್ದೇಯಾ ?

ಹೋರಾಟದ ಹೊರತಾಗಿಯೂ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಲು ಸಾಕಷ್ಟು ಮಾರ್ಗಗಳು ಇವೆ. ಒಂದು ವೇಳೆ ಈ ಕಾಯ್ದೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಅದರ ನಂತರವು ಈ ಕಾಯ್ದೆಯಲ್ಲಿ ಲೋಪ-ದೋಷಗಳು ಕಂಡು ಬಂದರೆ ಶಾಂತಿಯುತ ಮೆರವಣೆಗೆಯ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು, ಗಾಂಧಿ ಬಗ್ಗೆ ಮಾತನಾಡುವವರೇ ಬೆಂಕಿ ಹಚ್ಚುತ್ತಿರುವುದು ನೋಡಿದ್ದಾಗ ಗಾಂಧಿ ತತ್ವಗಳನ್ನು ಪಾಲಿಸುವವಲ್ಲಿ ಎಲ್ಲರೂ ಎಡವಿದ್ದಾರೆ ಅಂತ ಅನ್ನಿಸುತ್ತದೆ. ಗಾಂಧಿಯವರು ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದರು ಸತ್ಯಾಗ್ರಹದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಗಾಂಧಿಯವರ ಭಾವಚಿತ್ರ ಬಳಸುವವರು ದೇಶದಲ್ಲಿ ಹೆಚ್ಚಾಗಿದ್ದಾರೇ ಹೊರತು ಅವರ ಆದರ್ಶ ಮತ್ತು ತತ್ವಗಳನ್ನು ಪಾಲಿಸುವವರ ಸಂಖ್ಯೆ ಅತ್ಯಂತ ಕಡಿಮೆ ಆಗಿದೆ.
ಅಂತೆ-ಕಂತೆ ಸುದ್ದಿಗಳಿಗೆ ದ್ವನಿಯಾಗಿ ದೇಶದ ಐಕ್ಯತೆ ದಕ್ಕೆ ತರುವ ಕೆಲಸ ಯಾರು ಮಾಡಬೇಡಿ ಏಕೆಂದರೆ ಭಾರತವು ಸ್ವಾತಂತ್ರ್ಯ ನಂತರದಲ್ಲಿ ಜಾತ್ಯಾತೀತವಾಗಿ ನೆಮ್ಮದಿಯಿಂದ ಬದುಕುತ್ತಿದೆ. ಈ ದೇಶದ ಅನ್ನ ತಿಂದು ದೇಶದ ವಿರುದ್ದ ಭಾಷಣ ಮಾಡುವವರನ್ನು ಬುದ್ದಿಜೀವಿಗಳು ಅನ್ನುವ ಈ ಕಾಲದಲ್ಲಿ ಇಂತಹ ಮನೆ ಹಾಳು ಮಾಡುವವರ ಮಾತು ಕಟ್ಟಿಕೊಂಡು ನಿಮ್ಮ ಅಮೂಲ್ಯ ಜೀವ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಶಾಂತಿ-ನೆಮ್ಮದಿಯಿಂದ ಬದುಕಿ, ನಾವೇಲ್ಲರೂ ಒಂದು ಭಾರತಾಂಭೆಯ ಮಕ್ಕಳು ಇಲ್ಲಿಯ ಮೂಲ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ ಒಂದು ವೇಳೆ ಮುಂದೆ ತೊಂದರೆ ಬಂದರೆ ನಾವು ನಿಮ್ಮೊಂದಿಗೆ ಇದ್ದೇವೆ. ಹಿಂದೂ-ಮುಸ್ಲಿಂ ಅಣ್ಣ-ತಮ್ಮರಂತೆ ಬದುಕಿ ದೇಶವನ್ನು ಕಟ್ಟೋಣ. ಶಾಂತಿ ಹೆಸರಾದ ದೇಶದಲ್ಲಿ ಶಾಂತಿ ಕಾಪಾಡಿ. ಸಿ.ಎ.ಎ ಬಗ್ಗೆ ಸರಿಯಾಗಿ ತಿಳಿದು ಅಥೈಸಿಕೊಂಡು ಮಾತನಾಡಿ.


Share

ಪಂಚ ಚುನಾವಣೆ ಲೋಕ ಸಭೆಯ ಮುನ್ಸೂಚನೆಯೇ?

Share


ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಮಣಿಪುರ ಮತ್ತು ಪಂಜಾಬ್ ದಲ್ಲಿ ನಡೆದ ಚುನಾವಣೆಯು ಜಾಗತೀಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಚುನಾವಣೆಯಿಂದ ಮುಂದೆ ಬರುವ ಲೋಕಸಭೆಯ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹೇಗೆಂದರೆ ದೇಶದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭಾ ಚುನಾವಣೆಯನ್ನು ಹೊಂದಿದ ರಾಜ್ಯವಾಗಿದೆ. ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯನ್ನು ದೇಶದ ಮಿನಿ ಮಹಾ ಚುನಾವಣೆಯೆಂದೆ ಪರಿಗಣಿಸುವುದು ವಾಡಿಕೆ. 2024 ರಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಒಂದರಿಂದಲೇ ಬಿಜೆಪಿ 50 ರಿಂದ 60 ಸೀಟುಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಪಂಚ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮತ್ತು ಉತ್ತರಖಂಡಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿ.ಜೆ.ಪಿ ಅಧಿಕಾರ ಹಿಡಿಯುತ್ತದೆ. ಗೋವಾ ಮತ್ತು ಮಣಿಪುರದಲ್ಲಿ ಒಂದಿಬ್ಬರ ಸಹಾಯದೊಂದಿಗೆ ಅಧಿಕಾರ ಹಿಡಿಯುವ ಬಲ ಬಿಜೆಪಿಗಿದೆ. ಇನ್ನು ಈ ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖ ಭಂಗವಾಗಿದ್ದು ಬಿ.ಜೆ.ಪಿಯ ರೈತ ವಿರೋಧಿ ನೀತಿಯನ್ನು ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವು ಸರಳವಾಗಿ ಬಹುಮತ ಪಡೆದು ಪಂಜಾಬಿನಲ್ಲಿ ಅಧಿಕಾರವನ್ನು ಹಿಡಿದಿದೆ ಇದರ ಮಧ್ಯೆ ಕಾಂಗ್ರೆಸ್ ಇನ್ನೋಂದು ರಾಜ್ಯವನ್ನು ಕಳೆದುಕೊಂಡು ಮೌನವಾಗಿದೆ. 2023 ರಲ್ಲಿ ಕರ್ನಾಟಕ ಸೇರಿದಂತೆ ಹಲವಾರು ವಿಧಾನ ಸಭೆಗಳ ಚುನಾವಣೆಗಳಿದ್ದು ಈ ಪಂಚ ರಾಜ್ಯಗಳ ಚುನಾವಣೆಯು ಪ್ರಭಾವ ಬೀರುತ್ತದೆ. ಇತ್ತ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಲಿನ ಭೀತಿ ಕಾಡುತ್ತಿದೆ. ರಾಹುಲ್ ಗಾಂಧಿ ಈ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದು ಸೋನಿಯಾ ಗಾಂಧಿ ಪರಾಮರ್ಶೆ ಮಾಡಿ ಕೊಳ್ಳುತ್ತಿದ್ದಾರೆ. ಬಿಜೆಪಿ ಪಾಳೆಯದಲ್ಲಿ ಮೋದಿ ಯೋಗಿ, ಅಮಿತ್‍ಶಾ ನಡ್ಡ ಮುಂತಾದವರು ಗೆಲುವನ್ನು ಕಾರ್ಯಕರ್ತರ ಜೊತೆ ಹಂಚಿಕೊಳ್ಳುವುದರ ಜೊತೆಗೆ ಗೆಲುವಿಗಾಗಿ ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಲವಾರು ವಿಸ್ಮಯಗಳು ನಡೆದಿದ್ದು ಅದರಲ್ಲಿಯೂ ಉತ್ರರ ಪ್ರದೇಶದಲ್ಲಿ ಬಿಜೆಪಿಗೆ ಶೇ42% ರಷ್ಟು ಮತ ಪಡೆಯುವುದರೊಂದಿಗೆ ದಾಖಲೆ ಸೃಷ್ಟಿಯಾಗಿದೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯೆಂದರೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಕೂಡ ಸೋತಿದ್ದಾರೆ. ಪಂಜಾಬಿನ Pಅಅ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಕೂಡ ಸೋತಿದ್ದಾರೆ. ಉತ್ತರಖಂಡಾದ ಅಒ ಪುಷ್ಕಾರ್ ಸಿಂಗ್ ಧಾಮಿ ಕೂಡ ಸೋತು ಭಾರತ ಇತಿಹಾಸದಲ್ಲಿ ಚುನಾವಣಾ ವಿಷಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಯನ್ನು ಎಲ್ಲಾ ರೀತಿಯ ಜನ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಬಿಜೆಪಿಯ ಧರ್ಮ ನೀತಿಗಳು ವಿದೇಶಾಂಗ ನೀತಿಗಳು ಮತ್ತು ರೈತ ವಿರೋಧಿ ಕಾನೂನುಗಳ ಮಧ್ಯೆಯೂ ದೇಶದ ಯುವ ಜನತೆ ಸೇರಿದಂತೆ ಪ್ರಬುದ್ದ ಮತದಾರ ಕೂಡ ಬಿಜೆಪಿ ಯತ್ತ ಒಲವು ತೋರಿಸುತ್ತಿರುವುದನ್ನು ನೋಡಿದರೆ ಬಿಜೆಪಿ ಲೋಕಸಭೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತವಾಗಿದೆ ಎನ್ನಬಹುದು. ಈ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯು ಶೇ%ವಾರು ಮತಗಳಿಕೆ ಯಲ್ಲಿಯೂ ಹೆಚ್ಚಾಗಿರುವುದನ್ನು ನೋಡಿದರೆ ಬಿಜೆಪಿಗೆ ಮತ್ತೊಂದು ಅವಕಾಶ ಇರುವುದು ಖಚಿತವಾಗಿರುತ್ತದೆ.


Share

ಶಾಂತಿ ಕದಲಿದ ಹಿಂದೂ ಮುಸ್ಲಿಂ ಬುದ್ಧಿವಂತರು

Share


ಕರ್ನಾಟಕದಲ್ಲಿ ಇತ್ತೀಚೆಗೆ ಧರ್ಮಗಳ ಸಂಘರ್ಷದಲ್ಲಿ ಶಾಂತಿಯನ್ನು ಕೆಲವರು ಕದಲುತ್ತಿದ್ದಾರೆ. ರನ್ನ ಪಂಪನಿಂದ ಹಿಡಿದು ಆಧುನಿಕತೆಯ ಕವಿಗಳಾದ ಕುವೆಂಪುವರೆಗೂ ಅಂದರೆ ಕವಿರಾಜ ಮಾರ್ಗದಿಂದ ಹಿಡಿದು ಇಂದಿನ ಚಂದ್ರಶೇಖರ ಕಂಬಾರ ಅವರ ಸಾಹಿತ್ಯದವರೆಗೂ ಕನ್ನಡ ನಾಡನ್ನು ಶಾಂತಿಯ ತವರು, ಬನವಾಸಿಯ ಬೀಡು, ಶ್ರೀ ಗಂಧದ ನಾಡು, ಸರ್ವಜನರ ಶಾಂತಿಯ ತೋಟ ಎಂದೆಲ್ಲ ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು. ಎಂಬ ಗೀತೆಯೊಂದಿಗೆ ನಾಡಿನ ಮಹತ್ವವನ್ನು ಡಾ|| ರಾಜ್‍ಕುಮಾರ್ ರವರ ಕಂಠ ಸಿರಿಯಲ್ಲಿ ಹೇಳಿದ ಈ ಕನ್ನಡ ನಾಡು ಇಂದು ಧರ್ಮ ಸಂಘರ್ಷದ ಮೂಲ ಸ್ಥಾನವಾಗಿ ಬಿಂಬಿತವಾಗುತ್ತಿದೆ. ಉಡುಪಿಯ ಕಾಲೇಜ್ ಒಂದರಲ್ಲಿ ಪ್ರಾರಂಭವಾದ ಹಿಜಾಬ್ ಕೇಸರಿ ಕದನವು ರಾಜ್ಯ ವ್ಯಾಪ್ತಿ ವ್ಯಾಪಿಸಿ ನ್ಯಾಯಾಲಯದ ಮುಂದೆ ನಿಂತಾಗ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಹಿಜಾಬ್‍ಗೆ ಅನುಮತಿಯನ್ನು ನಿರಾಕರಿಸಿತು. ಈ ವಿಚಾರದಲ್ಲಿ ಹೊತ್ತಿಕೊಂಡ ಬೆಂಕಿಯು ಮುಸ್ಲಿಂ ಸಮುದಾಯದಲ್ಲಿ ಮಾರ್ಚ್ 17ರಂದು ಹಿಜಾಬ್ ತೀರ್ಪನ್ನು ವಿರೋಧಿಸಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಕರ್ನಾಟಕ ಬಂದ್ ಮಾಡಿದರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿಂದೂ ಸಂಘಟನೆಗಳು ಹಿಂದೂ ಯುವ ಜನತೆ ಹಿಜಾಬ್‍ಗೋಸ್ಕರ ಒಂದು ದಿನ ನೀವು ಅಂಗಡಿ ಮುಚ್ಚುವುದಾದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಜಾಗೃತಿ ಮೂಡಿಸಲು ಪ್ರಾರಂಭ ಮಾಡಿದರು. ಈ ಜಾಗೃತಿ ಮುಂದುವರೆದು ಕರಾವಳಿ ಕರ್ನಾಟಕದ ಕೆಲವು ಗ್ರಾಮಗಳ ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ಅನುಮತಿ ಬೇಡ ಎಂಬ ಹೋರಾಟ ಪ್ರಾರಂಭವಾಯಿತು ಈ ಹೋರಾಟವು ಮೊದಮೊದಲು ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ನಂತರದ ದಿನಗಳಲ್ಲಿ ಕಲ್ಬುರ್ಗಿ, ಬೆಂಗಳೂರಿಗೂ ವ್ಯಾಪಿಸಿ ಇಂದು ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರದ ವಿರುದ್ದ ಹಿಂದೂತ್ವದ ಹೆಸರಿನಲ್ಲಿ ಧ್ವನಿಯೆತ್ತಲಾಗುತ್ತಿದೆ. ಈ ಸಂಘರ್ಷದ ಮಧ್ಯೆ ಹಲಾಲ ಮಾಂಸದ ವ್ಯಾಪಾರವು ಉತ್ತುಂಗಕ್ಕೇರಿದೆ. ಹಿಂದೂ ಬುದ್ದಿ ಜೀವಿಗಳು, ಮಠಾಧೀಶರು ಸೇರಿದಂತೆ ರಾಜಕಾರಣಿಗಳು ಹಿಂದೂ ಪರ ಸಂಘಟನೆಗಳು ಈ ಸಂಘರ್ಷಕ್ಕೆ ಬೆಂಕಿಯಿಡುತ್ತಿದ್ದಾರೆ. ಇತ್ತೀಚೆಗೆ ಈ ಒಂದು ಸಮಸ್ಯೆಯನ್ನು ರಾಜಕೀಯ ಮಾಡಿಕೊಂಡು ಕೆಲವು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಆಸೆಯಂತೆ ದೇಶವು ಜಾತ್ಯಾತೀತ ಆಗಬೇಕಿತ್ತು. 75 ವರ್ಷಗಳಿಗಿಂತ ಹೆಚ್ಚು ಕಳೆದರೂ ಜಾತಿ – ಧರ್ಮದ ವಿಷಯದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದಾದರೆ ಅಂಬೇಡ್ಕರ್ ಸೇರಿದಂತೆ ಹಲವಾರು ಮಹಾನಿಯರಿಗೆ ನಾವು ಮಾಡುತ್ತಿರುವ ಅವಮಾನವಲ್ಲವೇ? ಅನಾದಿಕಾಲದಿಂದಲೂ ಹಿಂದೂ ಮುಸ್ಲಿಂ ಸೇರಿದಂತೆ ಹಲವಾರು ಧರ್ಮಿಯರು, ಜಾತಿಯವರು ಒಂದಾಗಿ ಬದುಕುತ್ತಿದ್ದಾರೆ. ಅಧಿಕಾರಕ್ಕಾಗಿ, ಹೆಸರಿಗಾಗಿ ಮತ್ತು ಬಾಯಿ ಚಪಲಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವು ನಡೆಯುತ್ತಿವೆ. ಇದರ ಮಧ್ಯೆ ಕಾಳಿ ಸ್ವಾಮಿಯಂತಹ ಕೆಲವು ವಿಕೃತ ಮನಸ್ಸಿನ ಹೋರಾಟಗಾರರು ಮುಸ್ಲಿಂರನ್ನು ವಿರೋಧಿಸುವ ಧಾವಂತದಲ್ಲಿ ನಮ್ಮ ಧರ್ಮದ ತನ್ನ ಸ್ಥಾನದ ಸಾಮಾನ್ಯ ಪ್ರಜ್ಞೆಯನ್ನು ಕಳೆದುಕೊಂಡಂತೆÉ ವರ್ತಿಸುತ್ತಿದ್ದಾರೆ. ಹಿಂದೂ ಮತ್ತು ಹಿಂದೂತ್ವದ ಪರಿಕಲ್ಪನೆಯಲ್ಲಿ ಮತ್ತು ಇಸ್ಲಾಂ ಮತ್ತು ಭಾರತೀಯ ಮುಸ್ಲಿಂ ಎಂಬ ವಿಚಾರಗಳಲ್ಲಿ ಪರಿಪೂರ್ಣ ವ್ಯಾಖ್ಯಾನಗಳಿಲ್ಲದಿದ್ದರೂ ಕೂಡ ಅರೆಬೆಂದ ಅಜ್ಞಾನಿಗಳು ಹುಚ್ಚು ನಾಯಿಯಂತೆ ಕಿರುಚುವುದನ್ನೆ ಉದ್ಯೋಗ ಮಾಡಿಕೊಂಡಿದ್ದಾರೆ. ಬಿ.ಜೆ.ಪಿ ಯವರು ತಮ್ಮ ಓಟ್ ಬ್ಯಾಂಕಿಗಾಗಿ ಹಿಂದೂತ್ವದ ಅಜಾಂಡದಲ್ಲಿ ಕಾಂಗ್ರೆಸ್‍ನವರು ಅಲ್ಪಸಂಖ್ಯಾತರು ಮತ್ತು ಮುಸ್ಲಿಂರನ್ನು ತಮ್ಮ ಓಟ್ ಬ್ಯಾಂಕಿಗಾಗಿ ಬೆಂಕಿ ಹಚ್ಚಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ಈ ವಿಕೃತ ಮನಸ್ಸಿನ ರಾಜಕೀಯ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ, ಕಾರ್ಮಿಕ ವರ್ಗಕ್ಕೆ, ಸಣ್ಣ ಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತದೆಯೇ ಹೊರೆತು ಹುಚ್ಚು ನಾಯಿಯಂತೆ ಬೊಗಳುವ ಹೋರಾಟಗಾರರಿಗಾಗಲೀ, ಸಮಾಜದಲ್ಲಿ ಬೆಂಕಿ ಹಚ್ಚಿ ತಮ್ಮ ರಾಜಕೀಯ ಜೀವನವನ್ನು ಉಜ್ವಲ ಮಾಡಿಕೊಳ್ಳುವ ನಾಮರದ ರಾಜಕಾರಣಿಗಳಿಗಾಗಲಿ ಆಗುವುದಿಲ್ಲ ರಾಜಕಾರಣಿಗಳು ಕಾರ್ಪೊರೆಟ್ ಬಿಸನೆಸ್ ಮ್ಯಾನತರ ಸಮಾಜದ ನೆಮ್ಮದಿಯನ್ನು ಹಾಳುಮಾಡಿ ತಮ್ಮ ರಾಜಕೀಯ ಬಿಸ್‍ನೆಸ್ ಅನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ರಾಮ, ರಹೀಮ್, ಅಲ್ಲಾ, ಯೇಸು ಧರ್ಮ ಸಂಕಟದ ಮಧ್ಯೆ ರಕ್ತ ಹರಿದರೆ ಬಂದು ಕಾಪಾಡುವುದಿಲ್ಲ.
ಕರ್ನಾಟಕವನ್ನು ಶಾಂತಿ ಸೌಹರ್ದತೆಯ ತೋಟ ಎನ್ನುತ್ತಾರೆ ಇಂತಹ ತೋಟದಲ್ಲಿ ಓದುವ ಮಕ್ಕಳ ತಲೆಯಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಪರೀಕ್ಷೆಗಳನ್ನು ಆತಂಕದಲ್ಲಿ ಬರೆಯುವಂತೆ ಸ್ವಯಂಘೋಷಿತ ಬುದ್ದಿ ಜೀವಿಗಳು, ಧರ್ಮ ಪಾಲಕರು, ಧರ್ಮ ಅನುಯಾಯಿಗಳು ಮತ್ತು ಹೋರಾಟಗಾರರು ತಮ್ಮ ತಮ್ಮ ಉಳಿವಿಗಾಗಿ ಇಂತಹ ಬೆಂಕಿ ಹಚ್ಚುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಒಬ್ಬ ನಿಜವಾದ ಮುಸ್ಲಿಂನಿಗೆ ಹಲಾಲ್, ಬುರ್ಕಾ, ಹಿಜಾಬ್, ತಲಾಖ್ ಮುಖ್ಯ ಅನ್ನುವುದಾದರೆ ಅದೇ ಖುರಾನಿನಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು ಬೇರೆಯವರನ್ನು ಪ್ರೀತಿಸಬೇಕು, ದಾನಧರ್ಮ (ಜಕಾತ್) ಮಾಡಬೇಕು ಅಂತಹ ಅದೆಷ್ಟೋ ಒಳ್ಳೆಯ ವಿಚಾರಗಳು ಅರ್ಥವಾಗಿಲ್ಲವೇ? ಹಿಂದೂ ಧರ್ಮವು ಮೂಢನಂಬಿಕೆಯಿಂದ ಕೂಡಿದೆ ಎನ್ನುವ ನೀವು ನಿಮ್ಮ ಧರ್ಮದ ಮೂಢನಂಬಿಕೆಗಳು, ಕೆಟ್ಟ ಪದ್ದತಿಗಳು ಮತ್ತು ಮಹಿಳಾ ಶೋಷಣೆಯ ವಿರುದ್ಧ ಏಕೆ ಧ್ವನಿಯೆತ್ತುವಿದಿಲ್ಲ? ಹಾಗೆಯೇ ಹಿಂದೂ ಧರ್ಮದ “ವಸುದೈವ ಕುಟುಂಬಕಂ” ಮತ್ತು ಸ್ವಾಮಿ ವಿವೇಕಾನಂದರು ಹೇಳುವಂತೆ “ಬೇರೆ ಧರ್ಮದ ಬಗ್ಗೆ ತಪ್ಪು ಸಂದೇಶ ಸಾರುವ ಮುನ್ನ ಹಿಂದೂ ಧರ್ಮದ ಒಳ್ಳೆಯ ವಿಚಾರಗಳನ್ನು ಹೇಳು” ಸೇರಿದಂತೆ ಹಲವಾರು ಹಿಂದೂ ತಪ್ಪುಗಳನ್ನು ಸ್ವಯಂ ಘೋಷಿತ ಹಿಂದೂ ರಾಜಕಾರಣಿಗಳು ಖಾವಿ ತೊಟ್ಟ ಸ್ವಾಮಿಗಳು ಅರಿತಿದ್ದಾರ ಸತ್ಯಗಳೇ ಗೊತ್ತಿಲ್ಲದ ಅರೆಜ್ಞಾನಿಗಳಿಂದ ಆಧುನಿಕ ತಂತ್ರಜ್ಞಾನದ ಜಗತ್ತು ತಲೆಯಲ್ಲಿ ಇರಬೇಕಾದದ್ದು ಗೂಗಲ್‍ನಲ್ಲಿದೆ. ಗೂಗಲ್‍ನಲ್ಲಿ ಇರಬೇಕಾಗಿದ್ದು ತಲೆಯಲ್ಲಿದೆ. ಮನುಷ್ಯನ ವಿಕೃತ ವಾದಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ನಾಡಿನ ಶಾಂತಿಯನ್ನು ಕದಲುವ ಜೊತೆಗೆ ಕರ್ನಾಟಕದ ಗೌರವವನ್ನು ಅಂತರ್ ರಾಷ್ರ್ಟೀಯ ಮಟ್ಟದಲ್ಲಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತ ಅಂದರೆ ಹಿಂದೂ ಹಿಂದೂನೇ ಇಲ್ಲಿ ಸಾರ್ವಭೌಮ ಆದರೆ ಮುಸ್ಲಿಂ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ವಾಹನಗಳ ರಿಪೇರಿ, ಹಳೇ ವಸ್ತುಗಳ ಮರುಬಳಕೆ ಮತ್ತು ಬಿರಿಯಾನಿಯಂತಹ ಅಡುಗೆಗೆ ನಮ್ಮ ಮುಸ್ಲಿಂನೇ ಬೇಕು. ಪಾಯಸ, ಹೋಳಿಗೆ ಹಿಂದೂ ಮನೆಯಲ್ಲಿ ತಿಂದರೆ ಬಿರಿಯಾನಿ ಮುಸ್ಲಿಂ ಮನೆಯಲ್ಲಿ ತಿನ್ನಬೇಕು. ಅದೇ ಚೆಂದ ಮನುಷ್ಯ ಬದುಕುವುದೇ 60 ರಿಂದ 70 ವರ್ಷ ಇದರ ಮಧ್ಯೆ ಹಲಾಲ್, ಜಟಕಾ ಬೇಕಾ? ನಾ ಅಳಿದರೂ, ಉಳಿದರೂ ನಾನು, ನನ್ನವರು ಸತ್ತರು ನನ್ನ ತನವು ನಶಿಸಿ ಹೋದರೂ ಕನ್ನಡ ನಾಡಿಗೆ ಒಂದು ಇತಿಹಾಸವಿದೆ. ಕನ್ನಡ ಮಣ್ಣಿಗೆ ಒಂದು ಧರ್ಮವಿದೆ. ಪಾಲಿಸಲು ಕಲಿಯಿರಿ ಈ ಮೂರು ದಿನದ ಸಂತೆಯಲಿ. ಸಂತೆ ಮುಗಿದ ಮೇಲೆ ಚಟ್ಟಕ್ಕೆ ಹೆಗಲು ಕೊಡುವವರು ಯಾರೋ ಗೊತ್ತಿಲ್ಲ. ಮಸಣದ ಮಣ್ಣು ಅಗೆಯುವವರು ಯಾರೊ ಗೊತ್ತಿಲ್ಲ. ಧರ್ಮವನ್ನು ಪಾಲಿಸಿ ಅಂಧರಾಗಿ ಅಲ್ಲ ಬೆಳಕಿನಿಂದ ಕನ್ನಡ ನಾಡಿನ ಶಾಂತಿಯನ್ನು ಕಾಪಾಡಲು ನಿಮ್ಮ ಸಂಯಮವು ಅತ್ಯಂತ ಮುಖ್ಯವಾಗಿದೆ.


Share