ಹೊನ್ನಾವರ: ತಾಲೂಕಿನ ಕರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ (66) ಮೇಲೆ, ವಂದೂರು ಕ್ರಾಸ್ ನಲ್ಲಿ ಟಿಟಿ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗ್ರಾಮದ ದುಗ್ಗೂರಿನ ಜಟ್ಟು ಗೌಡನ ತಲೆಗೆ ತೀವ್ರ ಪೆಟ್ಟಾಗಿದ್ದು, ಆತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿತ್ರದುರ್ಗ ಮೂಲದ 16 ಮಂದಿ ಟಿಟಿ ವಾಹನವೇರಿ ಮುರುಡೇಶ್ವರ, ಹೊನ್ನಾವರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಕುಮಟಾ, ಗೋಕರ್ಣ ನೋಡಿ ವಾಪಾಸ್ ಊರಿನತ್ತ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ, ಎದುರಿನ ರಾಂಗ್ ರೂಟ್ ಮೂಲಕ ಬಂದ ಬೈಕ್ ಸವಾರ, ತನ್ನ ಮನೆಗೆ ತೆರಳಲು ಒಮ್ಮೆಂದೊಮ್ಮೆ ರಸ್ತೆ ಕ್ರಾಸ್ ಮಾಡಿದ್ದಾನೆ, ಬೈಕ್ ಸವಾರನ ಅಜಾಗ್ರುಕತೆ ಚಾಲನೆ ಈ ಅಪಘಾತ ಸಂಭವಿಸಲು ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈತನನ್ನು ತಪ್ಪಿಸಲು ಟಿಟಿ ವಾಹನದ ಚಾಲಕ ಸಾಕಷ್ಟು ಪ್ರಯತ್ನ ಪಟ್ಟರೂ ಬೈಕ್ ಟಿಟಿ ವಾಹನದ ಮುಂಭಾಗದ ಎಡಬದಿಯಲ್ಲಿ ರಭಸದಿಂದ ಗುದ್ದಿದ್ದು ಕಂಡುಬರುತ್ತಿದೆ. ಟಿಟಿ ಚಾಲಕ ಅಪಘಾತ ತಪ್ಪಿಸಲು ಬಲಕ್ಕೆ ತಿರುಗಿಸಿರುವುದರಿಂದ ಟಿಟಿ ವಾಹನ ರಸ್ತೆ ನಡುವಿನ ವಿಭಾಜಕಕ್ಕೆ, ಸುಮಾರು ದೂರದ ತನಕವೂ ಸವರಿಕೊಂಡು ಬಂದಿದ್ದು ಕಂಡುಬರುತ್ತಿದೆ. ಪ್ರವಾಸಕ್ಕೆ ಬಂದ ಈ ಟಿಟಿ ವಾಹನದಲ್ಲಿ 8 ಜನ ಮಹಿಳೆಯರು, ತಾವು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದೆವು ಎಂದು ಅವರಲ್ಲಿ ಒಬ್ಬರು ಬೆಳಕು ಗೆ ಮಾಹಿತಿ ನೀಡಿದ್ದಾರೆ. ಅಪಘಾತ ನಡೆದು ಒಂದು ಗಂಟೆ ಕಳೆದರೂ ಸ್ಥಳಕ್ಕೆ ಪೋಲಿಸರು ಬರದೆ ಇರುವುದರಿಂದ ಒಂದು ಬದಿಯ ಹೆದ್ದಾರಿ ಗಂಟೆಗಳ ತನಕ ಬಂದ್ ಆಗಿದ್ದು ಕಂಡು ಬಂದಿದೆ. ಆಂಬ್ಯುಲೆನ್ಸ್ ಸಹ ಬರದೇ ಗಾಯಗೊಂಡ ವ್ಯಕ್ತಿಯನ್ನು ಬೇರೆ ವಾಹನದ ಮೇಲೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Category: BREAKING NEWS
ಅಮೃತ ಜಯರಾಮ್ ರವರು ನೀಡಿದ ದೂರಿನ ಮೇರೆಗೆ ರಿಯಾಬ್ ಕ್ಲೋಸ್
ಇತ್ತೀಚೆಗೆ ಕುಡಿತ ಬಿಡಿಸುತ್ತೇವೆ ಎಂದು ಹೇಳಿಕೊಂಡು ಅಕ್ರಮ ಪುನರ್ವಸತಿ ಕೇಂದ್ರ ಗಳು ತಲೆ ಎತ್ತಿವೆ ಇಂತಹ ಆಕ್ರಮ ಪುನರ್ವಸತಿ ಕೇಂದ್ರಗಳು ಸರ್ಕಾರದ ಸುತ್ತೋಲೆ ಆದೇಶವನ್ನು ಗಾಳಿಗೆ ತೂರಿ ಮದ್ಯ ವ್ಯಸನಿಗಳ ಆರೋಗ್ಯ ಮತ್ತು ಜೀವದ ಜೊತೆ ಆಟವಾಡುತ್ತಿದ್ದಾರೆ ಮಧ್ಯ ವ್ಯಸನಿಗಳು ಕೂಡ ಮನುಷ್ಯರೇ ತಾನೆ ಅವರ ಜೀವಕ್ಕೂ ಬೆಲೆ ಇದೆ ಅಲ್ವಾ ..ಎಸ್ ಅಂತಹದೇ ಒಂದು ರಿಯಬ್ ಸೆಂಟರ್ ಯಾವುದೇ ಸರ್ಕಾರದ ಪರವಾನಿಗೆ ಪಡೆಯದೆ ಅಕ್ರಮವಾಗಿ ನಡೆಯುತ್ತಿದ್ದ ಮಧ್ಯವಸನ ನಿರ್ಮೂಲನ ಕೇಂದ್ರ ನವೋದಯ ರಿಯಾಬ್ ಸೆಂಟರ್ ಈಗ ಕ್ಲೋಸ್ ಆಗಿದೆ ಹೌದು ಯಾವುದೇ ಸರ್ಕಾರಿ ಆದೇಶಗಳನ್ನು ಪಾಲಿಸದೆ ಸರ್ಕಾರದ ಅನುಮತಿಯನ್ನು ಪಡೆಯದೆ ಅಕ್ರಮವಾಗಿ ಸ್ಥಾಪಿತಗೊಂಡಿದ್ದ ನವೋದಯ ರಿಯಬ್ ಸೆಂಟರ್ ಕುಡಿಯುವ ಚಟ ಬಿಡಿಸುತ್ತೇವೆ ಎಂದು ಸ್ಥಾಪಿತವಾಗಿದ್ದ ಅಕ್ರಮ ಪುನರ್ವಸತಿ ಕೇಂದ್ರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಮಾಹಿತಿ ಹಕ್ಕು ಬಳಕೆದಾರರು ಹಾಗೂ ಏಕೆ ನ್ಯೂಸ್ ಡಿಜಿಟಲ್ ವಾಹಿನಿಯ ಮುಖ್ಯಸ್ಥರು ಆಗಿರುವ. ಅಮೃತ ಜಯರಾಮ್ ರವರು ಈ ನವೋದಯ ಇದು ಅಕ್ರಮವಾಗಿ ಯಾವುದೇ ಪರವಾನಿಗೆ ಪಡೆಯದೆ ನಡೆಯುತ್ತಿರುವುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಅಕ್ರಮ ಜರುಗಿಸಿ ರಿಯಾಬ್ ಸೆಂಟರ್ ಅನ್ನು ತೆರವುಗೊಳಿಸಿದ್ದಾರೆ ಅಲ್ಲಿದ್ದ ಮಧ್ಯ ವ್ಯಾಸನ್ನಿಗಳನ್ನು ಬೇರೆಡೆಗೆ ಹಸ್ತಾಂತರಿಸಲಾಗಿದೆ ಅಕ್ರಮವಾಗಿ ರಿಯಾಬ್ ಸೆಂಟರ್ ನಡೆಸುತ್ತಿದ್ದ ಮಾಲೀಕರ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ

HMTಗೆ ಭೂಮಿ ಮಂಜೂರು: ಹಿರಿಯ ಅಧಿಕಾರಿಗಳಿಗೂ ಸರ್ಕಾರ ನೋಟಿಸ್
ಬೆಂಗಳೂರು: ಎಚ್ಎಂಟಿಗೆ ಅರಣ್ಯ ಭೂಮಿ ಅಕ್ರಮ ಪರಭಾರೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 7 ದಿನಗಳೊಳಗೆ ವಿವರ ನೀಡುವಂತೆ ಎಪಿಸಿಸಿಎಫ್ ವೆಂಕಟಸುಬ್ಬಯ್ಯ ಮತ್ತು ಇತರ ವಿಭಾಗೀಯ ಅರಣ್ಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಬುಧವಾರ ಹೇಳಿದರು.
ಈ ಕುರಿತು ಅರಣ್ಯಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿರುವ ಸಚಿವರು, ಕರ್ನಾಟಕ ಅರಣ್ಯ ಕೈಪಿಡಿಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರಡಿಯಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾದ ಬಳಿಕ, ಆ ಅರಣ್ಯವನ್ನು ‘ಯಾವತ್ತೂ ಅರಣ್ಯವಲ್ಲ’ ಎಂದು ಘೋಷಿಸಬೇಕಾದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಆಗಬೇಕು ಎಂದು ಸ್ಪಷ್ಟವಾಗಿದೆ.
ಅಲ್ಲದೆ, ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರಲ್ಲಿ ಕೂಡಾ ಯಾವುದೇ ಇತರ ಸರ್ಕಾರಿ ಇಲಾಖೆಗೆ ಸರ್ಕಾರಿ ಭೂಮಿ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದರ ಮೌಲ್ಯ ರೂ.5ಕೋಟಿಗಿಂತ ಹೆಚ್ಚಾಗಿದ್ದಲ್ಲಿ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಆದರೆ, ಕೆಲವು ಅಧಿಕಾರಿಗಳು ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಅನುಮತಿಯೂ ಇಲ್ಲದೆ ತಮ್ಮ ಮಟ್ಟದಲ್ಲೇ ಸರ್ಕಾರದ ಆದೇಶ ಮಾಡಿ ಸುಪ್ರೀಂಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವುದು ಅನುಮಾನ ಹುಟ್ಟಿಸುತ್ತಿದೆ.ಎಚ್ಎಂಟಿ ಸಂಸ್ಥೆಯು ಈ ಅರಣ್ಯ ಭೂಮಿಯನ್ನು ಸರ್ಕಾರಿ ಮತ್ತು ಖಾಸಗಿಯವರಿಗೆ ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರವನ್ನೂ ಇಲಾಖೆ ನೀಡಿದೆ. ಇದರಿಂದಾಗಿ ಎಚ್ಎಂಟಿ ಸಂಸ್ಥೆ ಈವರೆಗೆ 165 ಎಕರೆ ಜಮೀನನ್ನು, ರೂ.313.65 ಕೋಟಿಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ.
2015ರಲ್ಲಿ ಅಂದಿನ ಎಪಿಸಿಸಿಎಫ್ ವೆಂಕಟಸುಬ್ಬಯ್ಯ ಅವರು ಎಚ್ಎಂಟಿ ಪ್ರದೇಶದ ಅರಣ್ಯ ಭೂಮಿ ತೆರವಿಗೆ 64 ಎ ಪ್ರಕ್ರಿಯೆ ನಡೆಸಿ ಆದೇಶ ನೀಡಿರುತ್ತಾರೆ. ಈ ಆದೇಶದ ವಿರುದ್ಧ ಎಚ್ಎಂಟಿ. ನಿಗದಿತ ಕಾಲಮಿತಿಯಲ್ಲಿ ಮೇಲ್ಮನವಿಯನ್ನೂ ಸಲ್ಲಿಸಿಲ್ಲ. ಹೀಗಾಗಿ ಇದು ಅರಣ್ಯ ಇಲಾಖೆಯ ಸ್ವತ್ತಾಗಿರುತ್ತದೆ. ವಸ್ತುಸ್ಥಿತಿ ಹೀಗಿರುವಾಗ, ಕೆಲವು ಹಿರಿಯ ಅರಣ್ಯಾಧಿಕಾರಿಗಳು, ಅಂದಿನ ಅರಣ್ಯ ಸಚಿವರಿಂದ ಲಿಖಿತ ಅನುಮತಿ ಪಡೆಯದೆ, ಸಚಿವ ಸಂಪುಟದ ಅನುಮೋದನೆ ಪಡೆಯದೆ ಎಚ್ಎಂಟಿ ಪ್ರದೇಶದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ತರಾತುರಿಯಲ್ಲಿ ಸರ್ಕಾರಿ ಆದೇಶ ಮಾಡಿಸಿ, ಸುಪ್ರೀಂಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಖಂಡ್ರೆ ಸೂಚನೆ ನೀಡಿದ್ದಾರೆ. ಅಲ್ಲದೆ, 7 ದಿನಗಳ ಒಳಗಾಗಿ ಉತ್ತರ ಪಡೆದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ರೈಲಿಗೂ ತಟ್ಟಿದ ‘ಬೆಂಗಳೂರು ಟ್ರಾಫಿಕ್’ ಬಿಸಿ: ವಿಡಿಯೋ ವೈರಲ್, ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರು: ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿರುವ ರೈಲಿನ ವಿಡಿಯೋ ಮತ್ತು ವಾಹನ ದಟ್ಟಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್ ಬಳಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ಸಾಲಾಗಿ ನಿಂತ ಪರಿಣಾಮ ರೈಲು ಕೂಡ ಟ್ರಾಫಿಕ್ ಜಾಮ್ ನಲ್ಲಿಯೇ ಸಿಲುಕಿಕೊಂಡಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಕುರಿತ ವಿಡಿಯೋವೊಂದನ್ನು ಸುಧೀರ್ ಚಕ್ರವರ್ತಿ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಅಥವಾ ನೀವು ಮಾತ್ರವಲ್ಲ ರೈಲಿಗೂ ಕೂಡಾ ಬೆಂಗಳೂರು ಟ್ರಾಫಿಕ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್ ಬಳಿ ವಾಹನ ದಟ್ಟಣೆಯಿಂದದ ಟ್ರಾಫಿಕ್ ಜಾಮ್ ಆಗಿ, ಈ ಟ್ರಾಫಿಕ್ ಜಾಮ್ನಲ್ಲಿ ಕ್ರಾಸಿಂಗ್ ದಾಟಲಾಗದೆ ರೈಲು ಕೂಡಾ ಸಿಕ್ಕಿ ಹಾಕಿಕೊಂಡಿರುವುದು ಕಂಡು ಬಂದಿದೆ.
ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಹಿರಿಯ ರೈಲ್ವೇ ಅಧಿಕಾರಿಯೊಬ್ಬರು, ಬೈಯಪ್ಪನಹಳ್ಳಿ ಮತ್ತು ಕಾರ್ಮೆಲಾರಂ ನಡುವೆ ರೇಕ್ ಚೆಕ್ ಮಾಡಲಾಗುತ್ತಿದ್ದು. ಇದರಿಂದಾಗಿ ರೈಲು ನಂ. 12257ನ್ನು ಲೋಕೊ-ಪೈಲಟ್ ನಿಲ್ಲಿಸಿದ್ದರು. ರೇಕ್ ತಪಾಸಣೆ ಬಳಿಕ ಗೇಟ್ ಬಂದ್ ಮಾಡಿ, ರೈಲು ಸಂಚರಿಸಲು ಅನುವು ಮಾಡಿಕೊಡಲಾಯಿತು ಎಂದು ಹೇಳಿದ್ದಾರೆ.
“ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಇನ್ನೊಂದು ಗರಿ”
ಕುಮಟಾ :-ಯು ಜಿ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ದಿಶಾ ಮಾಸ್ತಿ ಕಟ್ಟ720ಕ್ಕೆ 626 ಅಂಕ ಗಳಿಸಿದರೆ ಕುಮಾರ್, ಚಿನ್ಮಯ್ ವಿಷ್ಣು ಭಟ್ಟ 720ಕ್ಕೆ 622 ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಇವರ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ. ಜಿ ಹೆಗಡೆ, ಪ್ರಾಚಾರ್ಯರಾದ ಶ್ರೀ ಡಿ .ಎನ್ ಭಟ್ಟ , ಉಪನ್ಯಾಸಕವೃಂದದವರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ

ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳು ಪೆನ್ಡ್ರೈವ್ ಮೂಲಕ ವೈರಲ್ ಆಗಿದ್ದು, ಮಹಿಳೆಯರ ಮೇಲೆ
ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈಗ ಪ್ರಜ್ವಲ್ ವಿರುದ್ಧ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.
ಇದರ ಬೆನ್ನಲ್ಲಿಯೇ 34 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲಿಯೇ ಐವರು ಮಹಿಳಾ ಪೊಲೀಸ್ ಅಧಿಕಾರಿಗಳು ಹೆಡೆಮುರಿಕಟ್ಟಿ ಎಸ್ಐಟಿ ಕಚೇರಿಗೆ ಕರೆದು ತಂದಿದ್ದಾರೆ.
ಜಲಜೀವನ್ ಮಿಷನ್ ಪೈಪ್ಗಳಿಗೆ ಆಕಸ್ಮಿಕ ಬೆಂಕಿ.
ಲಕ್ಷಾಂತರ ರೂ ಮೌಲ್ಯದ ಪೈಪ್ಗಳು ಬೆಂಕಿಗಾಹುತಿ,ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಘಟನೆ
ಮನೆಮನೆಗೆ ನೀರು ಪೂರೈಸುವ ಸಲುವಾಗಿ ತಂದಿಡಲಾಗಿದ್ದ ಜಲಜೀವನ್ ಮಿಷನ್ ಯೋಜನೆಯ ಪೈಪುಗಳು ಭಸ್ಮ.ಹುಲ್ಲಹಳ್ಳಿಯ ಟೀಚರ್ ಕಾಲೋನಿಯ ಖಾಲಿ ಜಾಗವೊಂದರಲ್ಲಿದ್ದ ಪೈಪ್ಗಳು.ಯಾವುದೇ ರಕ್ಷಣೆ ಇಲ್ಲದೆ ಇಡಲಾಗಿದ್ದ ಪ್ಲಾಸ್ಟಿಕ್ ಪೈಪ್ಗಳು.ಮನೆಮನೆಗೆ ಗಂಗೆ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಬೆಳೆ ಬಾಳುವ ಪೈಪುಗಳು ಮತ್ತು ಸಾಮಗ್ರಿಗಳನ್ನು ಇಡಲಾಗಿತ್ತು.ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ಮೌಲ್ಯದ ಪೈಪುಗಳು ಸುಟ್ಟು ಕರಕಲು.ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ.ಸ್ಥಳಕ್ಕೆ ಡಿವೈಎಸ್ಪಿ ರಘು, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಪಿಎಸ್ಐ ಚೇತನ್ ಕುಮಾರ್, ದೊಡ್ಡಯ್ಯ ಭೇಟಿ, ಪರಿಶೀಲನೆ.
ಕರು ಬಿಟ್ಟು ಹಸುವನ್ನು ಕಳ್ಳತನಮಾಡಿರು ಖದಿಮರು.
ಇಂಡಿ
ತಾಲೂಕಿನ ಆಳೂರ ಗ್ರಾಮದಲ್ಲಿ ದಿನಾಂಕ 25 ರಂದು ರಾತ್ರಿ 12 ಘಂಟೆ ಸಮಯದಲ್ಲಿ ಗ್ರಾಮದ ಹರೀಶ ಸುಭಾಷ್ ಆಳೂರ ಇವರ ತೋಟದ ವಸತ್ತಿಯಲ್ಲಿ ಈ ಘಟನೆ ನಡೆದಿದೆ ಖದಿಮರು 3 ತಿಂಗಳು ಕರುವನ್ನು ಸ್ಥಳದಲ್ಲಿಯೇ ಬಿಟ್ಟು ತಾಯಿ ಹಸುವನ್ನು ಕಳ್ಳತನಮಾಡಿಕೊಂಡು ಹೊಗಿರುತ್ತಾರೆ ಈ ಪ್ರಕರಣವು ಇಂಡಿ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುತ್ತದೆ ಬಡ ರೈತ ಹರೀಶ ಇವರು ಹಸುವನ್ನು ಕಳೆದು ಕೊಂಡು ಕಂಗಾಲಾಗಿದ್ದಾರೆ ಈ ಘಟನೆಗೆ ಸಂಬಂಧಿಸಿ ಪೋಲಿಸ್ ಅಧಿಕಾರಿಗಳು ಸೂಕ್ತ ನ್ಯಾಯ ಒದಿಸಬೇಕಾಗಿ ನಮ್ಮ ಪತ್ರಿಕೆಯು ಆಗ್ರಿಹಿಸುತ್ತದೆ
ಪಿಎಸ್ಸೈ ಕು.ರಾಧ ಲೋಕಾಯುಕ್ತ ಬಲೆಗೆ…50 ಸಾವಿರ ಲಂಚ ಸ್ವೀಕರಿಸುವಾಗ ಲಾಕ್
ಮೈಸೂರು ಕುವೆಂಪುನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಕು.ರಾಧ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.
50 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ಗಿ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ಒಂದರಲ್ಲಿ ಜಪ್ತಿಯಾಗಿದ್ದ ಲಾಕರ್ ಕೀ ನೀಡಲು
1 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ರಾಧ ರವರು
ಪೊಲೀಸ್ ಠಾಣೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ ಪಿ ಸಜಿತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಡಿವೈಎಸ್ಪಿ ಮಾಲ್ತೇಶ್, ಕೃಷ್ಣಯ್ಯ ಸೇರಿ ಹಲವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ
ಆಕ್ಸ್ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್ ಆಯೋಜಿಸುತ್ತಿದೆ
ಆಕ್ಸ್ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್ ಆಯೋಜಿಸುತ್ತಿದೆ
ಬೃಹತ್ ಉದ್ಯೋಗ ಮೇಳ
50 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ.
ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮೋ, ಎಲ್ಲಾ ಪದವೀಧರರು ಹಾಗು ಸ್ನಾತಕೋತ್ತರ ಪದವೀಧರರು ಭಾಗವಹಿಸಬಹುದು.
ದಿನಾಂಕ: 01-06-2024, ಶನಿವಾರ
ಬೆಳಗ್ಗೆ 8:30 ಯಿಂದ ಸಂಜೆ 4:30 ಘಂಟೆಯವರೆಗೆ
ಸ್ಥಳ: ಆಕ್ಸ್ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್
ಮಹದೇಶ್ವರನಗರ, ಹೆರೋಹಳ್ಳಿ ಕ್ರಾಸ್, ಮಗಡಿ ಮುಖ್ಯ ರಸ್ತೆ, ಬೆಂಗಳೂರು 560091
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರವಿ ಸಿ
+91-9035700486
Placement officer
ಆಕ್ಸ್ಬ್ರಿಡ್ಜ್ ಗ್ರೂಫ್ ಆಪ್ ಇನ್ಸ್ಟಿಟೂಷನ್
