ವಿಶ್ವ ಕುಟುಂಬ ದಿನದ (Global Family Day)ಪ್ರಯುಕ್ತ ವಿಶೇಷ ಲೇಖನ

Share

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ.ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನರ್ಮಾಣ ಸಾಧ್ಯ.”ವಸುದೈವ ಕುಟುಂಬಕಂ” ಎಂಬೊಂದು ನುಡಿಯಿದೆ.ಇದರ ರ್ಥ ಇಡೀ ವಿಶ್ವವೇ ನಮ್ಮ ಕುಟುಂಬ ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ-ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡುವ ಕಾರ್ಯವಾಗಬೇಕು. ಪ್ರತಿಯೋರ್ವ ವ್ಯಕ್ತಿ ಮತ್ತು ಸಮಾಜವನ್ನು ಒಂದೆಡೆ ಕೇಂದ್ರಿಕರಿಸುವ ಈ ವ್ಯವಸ್ಥೆ ನಮ್ಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಹುಶಃ ಕುಟುಂಬವೆಂಬ ಪರಿಕಲ್ಪನೆ ಇಲ್ಲದಿದ್ದರೆ. ಇಡೀ ಜಗತ್ತನ್ನು ಊಹಿಸಲು ಅಸಾಧ್ಯವಾಗುತ್ತಿತ್ತು. ಅಷ್ಟರ ಮಟ್ಟಿಗೆ ಕುಟುಂಬದ ಅಗತ್ಯ ನಮ್ಮ ವಿಶ್ವಕ್ಕೆ ಇದೆ.ಮುಂದೆ ಕೂಡಾ ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಬೇಕಿದ್ದರೆ ಅದಕ್ಕೆ ಕುಟುಂಬದ ತಳಪಾಯ ಅತಿ ಅಗತ್ಯ.ಅದು ನಮ್ಮ ದೇಶವಾಗಿರಲಿ ಅಥವಾ ವಿದೇಶವಾಗಿರಲಿ ಎಲ್ಲಾ ಕಡೆಯೂ ಕುಟುಂಬವೆಂಬ ಭದ್ರ ಬುನಾದಿ ಇದ್ದೇ ಇದೆ. ಆದ್ದರಿಂದಲೇ ನಮ್ಮ ವಿಶ್ವ ಇಂದು ಉಳಿದುಕೊಂಡು ಮುಂದಕ್ಕೆ ಬೆಳೆಯುತ್ತಿದೆ.
ಭಾರತದ ಇತಿಹಾಸ ಹಾಗೂ ಸಂಸ್ಕøತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗಿಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೆÇೀಷಕ ಕುಟುಂಬವೊಂದು ನಿರ್ಮಾಣವಾಗಿದೆ ಅದುವೇ ವಿಭಕ್ತ ಕುಟುಂಬ.
ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ ಇದ್ದಾಗ ಮಾತ್ರ ಸಮಾಜದ ನಿರ್ಮಾಣಕ್ಕೆ ನಾಂದಿ ಎನ್ನುವ ಮಾತಿದೆ. ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಅವಿಭಕ್ತ ಕುಟುಂಬಗಳನ್ನು ಹೊಂದಿದ್ದ ಭಾರತೀಯ ಸಂಸ್ಕೃತಿಯೂ ಕೂಡಿ ಬಾಳುವುದನ್ನು ಕಲಿಸಿಕೊಡುತ್ತದೆ. ಇಲ್ಲಿ ಪ್ರೀತಿ, ಒಗ್ಗಟ್ಟುಗಳೇ ಮೂಲಮಂತ್ರ. ಒಂದು ಮಗು ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಂಡರೆ ಅದರಲ್ಲಿ ಆ ಮಗುವಿನ ಶಕ್ತಿಗಿಂತ ಆತನನ್ನು ಆ ರೀತಿ ರೂಪಿಸಿದ ಕುಟುಂಬದ ಸಂಸ್ಕೃತಿಯನ್ನು ಹೊಗಳುವ ಒಂದು ಕಾಲಘಟ್ಟವಿತ್ತು. ಆದರೆ ಇಂದು ಕಾಲ ಬದಲಾಗಿದೆ. ಜತೆಗೆ ಜಗತ್ತಿನಾದ್ಯಂತ ಕುಟುಂಬ ರೂಪೀಕರಣದ ಪದ್ಧತಿಯೂ ಬದಲಾಗಿದೆ. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ,ದೊಡ್ಡಮ್ಮ, ಅಳಿಯ, ಮಾವ, ಅತ್ತೆ, ಸೊಸೆ, ಅಪ್ಪ, ಅಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತುಂಬಿತುಳುಕುತ್ತಿದ್ದ ಮನೆಗಳಲ್ಲಿ ಅಮ್ಮನ ಕೈ ತುತ್ತು, ಅಪ್ಪನ ಕಿವಿ ಮಾತು, ಅಜ್ಜಿಯ ಕಾಗೆ ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುವ ಮನಸ್ಸುಗಳು. ಒಬ್ಬರನ್ನೊಬ್ಬರು ರ್ಥ ಮಾಡಿಕೊಂಡು ಜೀವನ ನಡೆಸುವುದು. ಅಲ್ಲಿ ಹಿರಿಯರ ಮಾತೇ ಅಂತಿಮ ನರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ.ಅಲ್ಲಿ ಚಿಕ್ಕವರು ದೊಡ್ಡವರೆಂಬ ಕೀಳರಿಮೆಯಿಲ್ಲ ಎಲ್ಲರೂ ಒಂದೇ ಎನ್ನುವ ಭಾವನೆ ಅವಿಭಕ್ತ ಕುಟುಂಬದಲ್ಲಿ ಇರುತ್ತದೆ. ಆದರೆ ಈಗ ಕೇವಲ ಗಂಡ, ಹೆಂಡತಿ, ಮಕ್ಕಳು ಮಾತ್ರ ಕಾಣಸಿಗುತ್ತಾರೆ. ಕುಟುಂಬದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಅಲ್ಲಿ ಭಾವನೆಗಳೂ ಬೆಲೆ ಕಳೆದು ಕೊಳ್ಳಲಾರಂಭಿಸುತ್ತವೆ. ಹೆತ್ತವರ, ಮಕ್ಕಳ ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕಬಹುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ವಿಭಕ್ತ ಕುಟುಂಬಗಳಿವೆ. ಅವಿಭಕ್ತ ಕುಟುಂಬಗಳು ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವರ್ಥವೋ? ಏನೆಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಇಂದಿನ ವಿಭಕ್ತ ಕುಟುಂಬಕ್ಕೆ ಕುಟುಂಬದ ಮಹತ್ವವನ್ನು ತಿಳಿಸುವ ಸಲುವಾಗಿ ಅಂತರರಾಷ್ಟ್ರೀಯ ಕುಟುಂಬ ದಿನವನ್ನು ಜನೆವರಿ 01 ರಂದು ಆಚರಿಸಲಾಗುತ್ತದೆ.
ಕಳೆದ ವರ್ಷ ಕೊರೊನಾ ಸಂದಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನತಾರ್ಪ್ಯೂಗೆ ಕರೆ ನೀಡಿದಾಗ ಕೊರೊನಾ ವಾರಿರ್ಸ್ ಗಳಿಗೆ ದೀಪ ಬೆಳಗುವ ಮೂಲಕ ಗೌರವಿಸಿ, ದೇಶದ ಜನರೆಲ್ಲ ಅಭೂತಪರ್ವವಾಗಿ ಸ್ಪಂದಿಸಿದ್ದರು. ಇದು ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯ ಸಂಕೇತವನ್ನು ತಿಳಿಸುತ್ತದೆ. ಕೊರೊನಾ ಸಮಯದಲ್ಲಿ ವಿದೇಶಗಳಲ್ಲಿ ಏನೇ ಕಳವಳವಾದರೂ, ಭಾರತದಲ್ಲಿ ಸಶಕ್ತವಾಗಿ ಎದುರಿಸಿದೆವು. ಇದಕ್ಕೆ ಕೌಟುಂಬಿಕ ವ್ಯವಸ್ಥೆಯೇ ಕಾರಣ ಎಂದು ಹೇಳಲಾಗುತ್ತದೆ. ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ನಾವು ಮುಂದಾಗಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಜೊತೆಗೆ ಕುಳಿತು ಭಜನೆ ಹಾಗೂ ಭೋಜನಗಳಲ್ಲಿ ತೊಡಗುವುದು, ಹಬ್ಬ ಆಚರಣೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಕುಟುಂಬದ ಸದಸ್ಯರ ಒಡನಾಟ ಹೆಚ್ಚಾಗಿ ಕುಟುಂಬ ವ್ಯವಸ್ಥೆ ಇನ್ನೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಾಧ್ಯ ಹಾಗೂ ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪರ್ಣ ಅಲಂಕಾರ. ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್! ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟ ಮಾಡುವುದರಲ್ಲಿ ಇರುವ ಸಂತೋಷವೇ ಬೇರೆ.
ಒಟ್ಟಾರೆಯಾಗಿ ಕುಟುಂಬದಲ್ಲಿನ ಮಕ್ಕಳ ಏಳಿಗೆಗಾಗಿ ಎಲ್ಲವನ್ನೂ ಸಹಿಸಿಕೊಂಡು ಸಂಸಾರ ತೂಗಿಸಿಕೊಂಡು ಹೋಗುವ ನಾರಿಯನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ವಿದೇಶಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ವಿಚ್ಛೇದನಗಳಿಂದಾಗಿ ತಂದೆ ತಾಯಿಯ ಆರೈಕೆಯಿಲ್ಲದೆ ಬೀದಿಗೆ ಬೀಳುವ ಮಕ್ಕಳು ಸಮಾಜ ಕಂಟಕರಾಗುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಹೇಳಲಾಗಿದೆ. ಮಹಿಳೆಯರಿಗೆ ಸಿಕ್ಕಿರುವ ಮೀಸಲಾತಿ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಾಗ ಮಾತ್ರ ನಮ್ಮ ಕುಟುಂಬದಲ್ಲಿನ ನೋವು ನಲಿವುಗಳೆರಡನ್ನೂ ಹಂಚಿಕೊಂಡು ಸೋಲು ಗೆಲುವುಗಳಿಗೆ ಜತೆಯಾಗುವಂತಹ ಕುಟುಂಬ ಇದ್ದಾಗ ಮಾತ್ರ ವ್ಯಕ್ತಿ ಪರಿಪರ್ಣನಾಗುತ್ತಾನೆ. ಇದ್ದ ಕುಟುಂಬವನ್ನು ದೂರ ಮಾಡಿಕೊಳ್ಳದೆ ದೂರ ಇರುವ ಕುಟುಂಬದ ಸದಸ್ಯರನ್ನು ಮತ್ತೆ ಜೋಡಿಸಿಕೊಂಡು, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ನಮ್ಮ ಹಿರಿಯರ ಆಶಯದಂತೆ,ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡುಕೊಳ್ಳುವಿಕೆಯಿಂದ ಈ ರ್ಷದ ಕುಟುಂಬ ದಿನವನ್ನು ರ್ಷ ಸಂಭ್ರಮದಿಂದ ಆಚರಿಸಬೇಕೆಂಬುವುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಾಗಿದೆ.


Share

ಸಂಧಿವಾತಕ್ಕೆ ಒಂದಿಷ್ಟು ಪರಿಹಾರ

Share

ಸಂಧಿವಾತ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಾಡುತ್ತಿರುವ ಸಮಸ್ಯೆ ಆಗಿದೆ. ಸಂಧಿವಾತವು ಎಲ್ಲಾ ವಯಸ್ಸಿನವರಲ್ಲಿ ಕಂಡು ಬರುತ್ತದೆ. ಆದರೂ ಇದು ಮಹಿಳೆಯರಲ್ಲಿ ಹೆಚ್ಚು, ವಯಸ್ಸಿಗೆ ತಕ್ಕಂತೆ ಉಲ್ಬಣವಾಗುತ್ತದೆ. 100 ಕ್ಕೂ ಹೆಚ್ಚು ಬಗೆಯ ಸಂಧಿವಾತಗಳಿವೆ. ಈ ಸಮಸ್ಯೆಯಿಂದ ಮುಕ್ತರಾಗಲು ಚಿಕಿತ್ಸೆ ಜೊತೆ ನಮ್ಮ ಜೀವನ ಶೈಲಿಯು ಬದಲಾಗಬೇಕು ಹಾಗಾದರೇ ಬದಲಾವಣೆ ಏನು ?
ಒತ್ತಡ ಮುಕ್ತ ಜೀವನ: ಸಂಧಿವಾತದಲ್ಲಿ ನೋವನ್ನು ಉಂಟು ಮಾಡುವ ನಿಜವಾದ ಉರಿಯೂತವು ಒತ್ತಡದಿಂದಾಗಿರಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಒತ್ತಡವು ಸೈಟೊಕಿನ್ಗಳನ್ನು ಬಿಡುಗಡೆ ಮಾಡುತ್ತದೆ. ಅದು ಉರಿಯೂತ ಮತ್ತು ನೋವನ್ನು ಉಂಟುಮಾಡುತ್ತದೆ. ವಾಸ್ತವವಾಗಿ ನಿಮ್ಮ ನೋವಿನ ಗ್ರಹಿಕೆ ಒತ್ತಡದೊಂದಿಗೆ ಹೆಚ್ಚಾಗುತ್ತದೆ. ನೀವು ಒತ್ತಡಕ್ಕೆ ಒಳಗಾಗಿದ್ದರೆ ನಿಮ್ಮ ಸಂಧಿವಾತದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಆಹಾರದಲ್ಲಿ ಬದಲಾವಣೆ: ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು ಮತ್ತು ಧಾನ್ಯಗಳನ್ನು ಹೊಂದಿರುವ ಸಸ್ಯ ಆಧಾರಿತ ಆಹಾರವು ನೋವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್ ಸೇವನೆಯನ್ನು ನಿಯಂತ್ರಿಸುವುದರಿಂದ ಸಂಧಿವಾತದ ಲಕ್ಷಣಗಳು ಕಡಿಮೆಯಾಗಬಹುದು.

ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ಸಂಧಿವಾತದ ನೋವು ಕಡಿಮೆ ಆಗುತ್ತದೆ. ತೂಕ ನಿಯಂತ್ರಣದಲ್ಲಿರುತ್ತದೆ. ವ್ಯಾಯಾಮದ ಕೊರತೆ ನಿಮ್ಮ ಕೀಲುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏಕೆಂದರೆ ಅದು ಕೀಲುಗಳ ಸುತ್ತಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.ನೀವು ಕೀಲು ನೋವು ಹೊಂದಿರುವಾಗ ಸಾಮಾನ್ಯ ವ್ಯಾಯಾಮವು ನಿಮ್ಮ ಕೀಲುಗಳ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಮೂಳೆಯ ಬಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶಕ್ತಿಯನ್ನು ನೀಡುತ್ತದೆ. ವ್ಯಾಯಾಮದೊಂದಿಗೆ ನಿದ್ರೆಯ ಮಾದರಿಗಳು ಸಹ ಸುಧಾರಿಸುತ್ತವೆ. ನೀವು ಮಾಡಬೇಕಾದ ವ್ಯಾಯಾಮದ ಪ್ರಕಾರವು ನಿಮ್ಮ ದೇಹ ಮತ್ತು ನೀವು ಹೊಂದಿರುವ ಸಂಧಿವಾತದ ಪ್ರಕಾರ ಮತ್ತು ಪರಿಣಾಮ ಬೀರುವ ಕೀಲುಗಳನ್ನು ಅವಲಂಬಿಸಿರುತ್ತದೆ. ಯೋಗ, ಸ್ಟ್ರೆಚಿಂಗ್, ವಾಕಿಂಗ್, ಸೈಕ್ಲಿಂಗ್ ಮತ್ತು ತೋಟಗಾರಿಕೆ ಕೆಲಸಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬಹುದು.
ತೂಕ ನಿಯಂತ್ರಣ : ತೂಕ ನಷ್ಟವು ನೋವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡುತ್ತದೆ.ತೂಕ ನಷ್ಟವು ದೈಹಿಕ ಕಾರ್ಯಗಳನ್ನು ಸುಧಾರಿಸುತ್ತದೆ.ಕೈ ಅಸ್ಥಿಸಂಧಿ ವಾತವು ಹೃದ್ರೋಗಕ್ಕೂ ಸಂಬಂಧಿಸಿದೆ ಮತ್ತು ತೂಕ ನಿರ್ವಹಣೆ ಸಂಧಿವಾತವನ್ನು ನಿಯಂತ್ರಿಸುವುದಲ್ಲದೆ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುತ್ತದೆ.
ವಿಟಮಿನ್ ಸಿ ಸೇವಿಸಿ: ನಮ್ಮ ಜೀವಕೋಶಗಳನ್ನು ರಕ್ಷಿಸುವ ಮತ್ತು ಕೊಲಾಜೆನ್ ಮತ್ತು ಅಂಗಾಂಶಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಉತ್ಕರ್ಷಣ ನಿರೋಧಕವಾದ ವಿಟಮಿನ್ ಸಿ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಉರಿಯೂತದ ಸಂಧಿವಾತವನ್ನು ತಡೆಗಟ್ಟಲು ವಿಟಮಿನ್ ಸಿ ಅತ್ಯಂತ ಉತ್ತಮ.


Share

ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆಮದ್ದು

Share

ನವೆಂಬರ್ ಮೂರನೇ ವಾರದಿಂದ ಜನವರಿ ಮೂರನೇ ವಾರದವರೆಗೆ ಸುಮಾರು ಎರಡು ತಿಂಗಳು ಹೇಮಂತ ಋತುವಿನ ಸಮಯ. ಅದನ್ನೇ ನಾವು ಚಳಿಗಾಲ ಎನ್ನುತ್ತೇವೆ. ಹೇಮಂತ ಎಂದರೆ ಹಿಮವಂತ ಎಂದರ್ಥ. ಹಿಮ ಪ್ರಧಾನವಾದ ಈ ಋತುವಿನಲ್ಲಿ ಚಳಿ ಜಾಸ್ತಿ. ಚಳಿಯ ಪ್ರಭಾವದಿಂದ ವಾತಾವರಣದಲ್ಲಿ ಶೀತಗುಣ ಅಧಿಕಗೊಳ್ಳುತ್ತದೆ. ಶೀತದಿಂದ ಕಫ ಮತ್ತು ವಾತ ದೋಷಗಳು ಉಲ್ಬಣಗೊಳ್ಳುತ್ತವೆ.
ಚಳಿಗಾಲದಲ್ಲಿ ಕಾಡುವ ಹಾಗೂ ಉಲ್ಬಣಗೊಳ್ಳುವ ಕೆಲವು ಸಮಸ್ಯಗಳು
• ಮಂಡಿನೋವು ಹಾಗೂ ಸೊಂಟನೋವು.
• ಕೆಮ್ಮು ಮತ್ತು ಅಸ್ತಮ
• ಚರ್ಮ ವಿಕಾರಗಳಾದ ಶೀತ ಪಿತ್ತ (ಅರ್ಟಿಕೇರಿಯಾ ) ಮತ್ತು ಕಿಟಿಭ (ಸೋರಿಯಾಸಿಸ್)
• ಕೇಶ ವಿಕಾರಗಳು, ಓಣ ಚರ್ಮ ಇತ್ಯಾದಿ
ಚಳಿಗಾಲವನ್ನು ವಿಸರ್ಗಕಾಲವೆಂದು ಪರಿಗಣಿಸುವ ಕಾರಣ ಈ ಸಮಯದಲ್ಲಿ ಭೂಮಿಯಲ್ಲಿನ ಬಲ ಅಧಿಕಗೊಳ್ಳವುದರಿಂದ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಹಜವಾಗಿ ಬಲ ವೃದ್ಧಿ ಗೊಳ್ಳುವುದು. ಅಂದರೆ ಇತರೆ ಋತುಗಳಿಗೆ ಹೋಲಿಸಿದರೆ ಚಳಿಗಾಲದ ಉತ್ತಮ ವಾತಾವರಣ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಲಾಭದಾಯಕವಾಗಿದೆ. ಆರೋಗ್ಯವಂತರಲ್ಲಿ ಸಹಜವಾಗಿ ಬಲ ಹುಮ್ಮಸ್ಸು ಮೊದಲಾದವುಗಳನ್ನು ಹೇಮಂತ ಋತುವಿನಲ್ಲಿ ನೋಡಗಬಹುದು. ಅದೇ ವಾತ ಹಾಗೂ ಕಫ ರೋಗಗಳಿಂದ ಬಳಲುತ್ತಿರುವ ಜನರಲ್ಲಿ ಸಹಜವಾಗಿ ಅನಾರೋಗ್ಯ ಉಲ್ಬಣಗೊಳ್ಳುವುದು ಸಾಮಾನ್ಯ.
ಸಂಧಿವಾತ, ಅನುವಾತ, ಸೊಂಟನೋವು , ಸಯಾಟಿಕಾ, ಕೆಮ್ಮು, ಅಸ್ತಮಾ (ಉಬ್ಬಸ), ಸೋರಿಯಾಸಿಸ್,ಒಣಚರ್ಮ, ಒರಟು ಕೂದಲು , ತಲೆಹೊಟ್ಟು, ಅರ್ಟಿಕೇರಿಯಾ ಇತ್ಯಾದಿ ಸಮಸ್ಯೆಗಳು ಉಧ್ಬವಗೊಳ್ಳಲು ಮತ್ತು ಉಲ್ಬಣಗೊಳ್‍ಳಲು ಈ ಹವಮನ ಕಾರಣ.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?
• ಕಾಯಿಲೆ ಬರದಂತೆ ನೋಡಿಕೊಳ್ಳವುದು ಬುದ್ದಿವಂತಿಕೆ .ಬಂದಾಗ ಕೂಡಲೇ ಉಪಶಮನ ಮಾಡಿಕೊಳ್‍ಳುವುದರಿಂದ ಆರೋಗ್ಯ ವೃದ್ಧಿಸುತ್ತದೆ . ಚಳಿಗಾಲದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಈ ಸೂತ್ರಗಳನ್ನು ಅನನುಸರಿಸಿದರೆ ಹೆಚ್ಚು ಲಾಭ.
• ಬಿಸಿ ನೀರಿನ ಸೇವನೆ
• ನಿತ್ಯ ಅಭ್ಯಂಗ ಅಥವಾ ವಾರಕ್ಕೆ ಮೂರುಬಾರಿ ಅಭ್ಯಂಗ
• ಈ ಋತುವಿನಲ್ಲಿ ಹಸಿವು ಹೆಚ್ಚಿರುವ ಕಾರಣ ಮಧುರವಾದ ಹಾಗೂ ಸ್ನಿಗ್ಧವಾದ ಬಿಸಿ ಆಹಾರವನ್ನು ಸೇವಿಸಿ.
• ಮೊಸರು, ಮಜ್ಜಿಗೆ, ಹಾಗೂ ಹಣ್ಣುಗಳನ್ನು ಸೇವಿಸುವಾಗ ಕಾಳುಮೆಣಸಿನ ಪುಡಿ ಮತ್ತು ಸೈಂಧವ ಉಪ್ಪನ್ನು ಬಳಸಿ.
• ಉಷ್ಣದಾಯಕ ಉಡುಗೆ ಮತ್ತು ಬಿಸಿಅಡುಗೆ ಅತಿ ಮುಖ್ಯ.
• ಮೆಣಸಿನ ಸಾರು, ಹುರುಳಿ ಕಟ್ಟಿನ ಸಾರು , ಬೇಯಿಸಿದ ತರಕಾರಿಗಳು, ಒಣಹಣ್ಣುಗಳು ಇತ್ಯಾದಿ ಆಹಾರ ಪದಾರ್ಥಗಳ ಸೇವನೆ ಉತ್ತಮ.
• ವ್ಯಾಯಾಮ ಹೆಚ್ಚು ಸೂಕ್ತ.
• ಬಿಸಿಲು ಬಂದಾಗ ವಾಕಿಂಗ್ ಒಳ್ಳೆಯದು.
• ಬಿಸಿನೀರಿನ ಸ್ನಾನ ಹೆಚ್ಚು ಉಪಯುಕ್ತ.

ಯಾವುದು ಬೇಡ

• ತಂಗಳು ಆಹಾರ ಹಾಗೂ ಥಂಡಿ ಪದಾರ್ಥಗಳ ಸೇವನೆ
• ಬೇಕರಿ ಮತ್ತು ಜಂಕ್ ಪದಾರ್ಥಗಳ ಸೇವನೆ
• ಶೀತ ಹಾಗೂ ವಾತ ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆ
• ಆಲೂಗಡ್ಡೆ, ಹಲಸಿನಹಣ್ಣು, ಮೊಸರು, ಅಡಿಕೆ ಸೇವನೆ, ಕಹಿ ಮತ್ತು ಒಗರು ಪದಾರ್ಥಗಳು ಐಸ್ ಕ್ರೀಂ, ತಣ್ಣೀರು ಸೇವನೆ ಇತ್ಯಾದಿ
• ಹಗಲು ನಿದ್ದೆ, ಅಧಿಕ ನಿದ್ದೆ, ಜಾಗರಣೆ ಇತ್ಯಾದಿ.
• ತಣ್ಣೀರಿನ ಸ್ನಾನ, ಅಲಸ್ಯ ಬೇಡ
ಬಿಸಿ ನೀರಿನ ಮಹತ್ವ
ಸಾಮಾನ್ಯವಾಗಿ ಜನರಲ್ಲಿ ಒಂದು ತಪ್ಪು ಕಲ್ಪನೆ ಇದೆ. ನೀರನ್ನು ಶುದ್ಧೀಕರಿಸುವ ಯಂತ್ರಗಳಲ್ಲಿನ ನೀರನ್ನನು ಬಳಸಿದರೆ ಹೆಚ್ಚು ಸೂಕ್ತ ಹಾಗೂ ಅದು ಬಿಸಿನೀರಿಗೆ ಸಮ ಎಂದು ಭಾವಿಸುತ್ತಾರೆ. ಸಂಸ್ಕರಿಸಿದ ತಣ್ಣೀರು ಎಷ್ಟೇ ಶಿದ್ಧವಾಗಿದ್ದರೂ ಅದು ಬಿಸಿನೀರಿಗೆ ಸಮನಾಗಲು ಸಾಧ್ಯವಿಲ್ಲ. ತಣ್ಣೀರಿನಲ್ಲಿ ಶೀತಗುಣ ಪ್ರಧಾನವಾಗಿರುತ್ತದೆ. ಅಂತೆಯೇ ನೀರಿನ ಸಾಂಧ್ರತೆ ಬಿಸಿನೀರಿಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ. ತಣ್ಣೀರಿನಲ್ಲಿ ಸಾಂಧ್ರತೆ ಹಾಗೂ ಶೀತಗುಣ ಹೆಚ್ಚಿರುವ ಕಾರಣ ಅದು ಕಫದೋಷವನ್ನು ವೃದ್ಧಿಸುತ್ತದೆ. ಹಾಗೂ ಉಲ್ಬನಗೊಳಿಸುತ್ತದೆ. ಆದ್ದರಿಂದ ಮೇಲೆ ತಿಳಿಸಿದ ಸಮಸ್ಯಗಳಲ್ಲಿ ತಣ್ಣೀರಿನ ಸೇವನೆ ಸಹಜವಾಗಿ ಅಪಥ್ಯವಾಗಿರುತ್ತದೆ.
ಜನಸಾಮಾನ್ಯರಲ್ಲಿ ಮತ್ತೊಂದು ತಪ್ಪುಗ್ರಹಿಕೆಯೆಂದರೆ ಬಿಸಿನೀರಿನ ಸೇವನೆಯಿಂದ ದೆಹಕ್ಕೆ ಬಲ ಸಿಗುವುದಿಲ್ಲ ಎಂದು, ಇದು ತಪ್ಪು ,ಬಿಸಿನೀರಿನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಅನೇಕ ರೋಗಗಳನ್ನು ಮಣಿಸಬಲ್ಲ ದಿವ್ಯ ಅಸ್ತ್ರ.
ಬಿಸಿನೀರಿನ ಬಳಕೆಯಲ್ಲಿ ಕಂಡು ಬರುವ ಮತ್ತೊಂದು ವ್ಯತ್ಯಯ ಎಂದರೆ ಬಿಸಿ ನೀರಿಗೆ ತಣ್ಣೀರು ಬೆರೆಸಿ ಕುಡಿಯುವುದು ಇಲ್ಲವೇ ಸ್ವಲ್ಪ ಬಿಸಿ ಮಾಡಿದ ನೀರನ್ನು ಬಿಸಿ ನೀರೆಂದು ಕುಡಿಯುವುದು ಹೀಗೆ ಮಾಡುವುದರದಿಂದ ಯಾವುದೇ ಪ್ರಯೋಜನವಿಲ್ಲ. ನೀರನ್ನು ಚೆನ್ನಾಗಿ ಕುದಿಸಿ (100 ಡಿ.ಸೆ.ವರೆಗೆ) ನೋತರ ಕುಡಿಯಲು ಹಿತಕರವಾಗುವಂತೆ ಆರಿಸಿ ಸೇವಿಸುವುದು ಹೆಚ್ಚು ಪರಿಣಾಮಕಾರಿ.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಉಪಯುಕ್ತವಾದದ್ದು ಅಭ್ಯಂಗ. ಬಿಸಿನೀರಿನ ಸೇವನೆ ಮತ್ತು ಮಧುರ, ಸ್ನಿಗ್ದ ಆಹಾರದ ಬಳಕೆ ಈ ಸಮಯದಲ್ಲಿ ಆರೋಗ್ಯವನ್ನು ರಕ್ಷಿಸುವಲ್ಲಿ ಹೆಚ್ಚು ಲಾಭದಾಯಕ.
ಬಿಸಿನೀರಿನ ಗುಣಗಳು
• ಕಫ, ವಾತ ರೋಗಗಳಲ್ಲಿ ಹಿತಕಾರಿ
• ನೆಗಡಿ, ಜ್ವರ ಅಸ್ತಮ, ಕೆಮ್ಮುಇತ್ಯಾದಿಗಳಲ್ಲಿ ಬಿಸಿ ನೀರಿನ ಸೇವನೆ ಕಡ್ಡಾಯ
• ಮೂತ್ರ ವಿಕಾರಗಳಲ್ಲಿ ಮೂತ್ರಕೋಶ ಹಾಗೂ ಕಿಡ್ನಿಗಳ ಶುದ್ಧಿಗಾಗಿ ಬಿಸಿನೀರು ಬಳಕೆ ಫಲಪ್ರದ
• ಅಗ್ನಿಮಂದ್ಯ, ಅಜೀರ್ಣ, ಹೊಟ್ಟೆಯುಬ್ಬರ ಇವುಗಳಿU ಬಿಸಿ ನೀರು ಸೇವಿಸಿ
• ಮಂಡಿನೋವು, ಸೊಂಟನೋವು, ಸರ್ವಾಂಗ ಸಂಧಿವಾತ, ಅಮವಾತ ಇತ್ಯಾದಿಗಳಲ್ಲಿ ಹೆಚ್ಚು ಲಾಭದಾಯಕ.
• ಕಿಟಿಭ, ಅರ್ಟಿಕೇರಿಯಾ ಇತ್ಯಾದಿಗಳಲ್ಲಿ ಬಿಸಿನೀರು ಸ್ನಾನಕ್ಕೂ, ಪಾನಕ್ಕೂ ಹಿತಕರ
• ನವ ಜ್ವರದಲ್ಲಿ, ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ನೀರಿನ ಸೇವನೆ ಅಮೃತಕ್ಕೆ ಸಮ


Share

“ಧೂಮಪಾನದ ಅಭ್ಯಾಸವಿದ್ದರೆ ಕೋವಿಡ್-19 ಎದುರಿಸುವುದು ಮತ್ತಷ್ಟು ಕಷ್ಟ

Share

ಬೆಂಗಳೂರು: ತಂಬಾಕು ಶ್ವಾಸಕೋಶಕ್ಕೆ ಹಾನಿಯುಂಟುಮಾಡಬಲ್ಲ ಅಪಾಯಕಾರಿ ಪದಾರ್ಥ ಎಂದೇ ಕುಖ್ಯಾತಿ ಪಡೆದಿದ್ದು, ಇದರ ಬಳಕೆಯಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳಲಿದ್ದು ಕೋವಿಡ್-19 ಎದುರಿಸುವುದು ತಂಬಾಕು ಅಭ್ಯಾಸವುಳ್ಳವರಿಗೆ ಕಷ್ಟ ಎಂದು ಡಾ. ರಾಮಚಂದ್ರ ಹೇಳಿದ್ದಾರೆ.

ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆನ್ಕೋಲಜಿಯ ನಿರ್ದೇಶಕರಾಗಿರುವ ಡಾ. ಸಿ ರಾಮಚಂದ್ರ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹೇಳಿಕೆ ನೀಡಿದ್ದು, ಕೋವಿಡ್-19 ವೈರಾಣು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತವೆ ಹಾಗೂ ಧೂಮಪಾನದ ಅಭ್ಯಾಸವುಳ್ಳವರ ಶ್ವಾಸಕೋಶ ದುರ್ಬಲವಾಗಿದ್ದು, ಇವರಿಗೆ ಕೋವಿಡ್-19 ಎದುರುವುದು ಕಷ್ಟವಾಗಲಿದೆ ಎನ್ನುತ್ತಾರೆ.

2020 ರ ಏ.29 ರಂದು ಸಾರ್ವಜನಿಕ ಆರೋಗ್ಯ ತಜ್ಞರ ಅಧ್ಯಯನಗಳ ವಿಮರ್ಶೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದು ಧೂಮಪಾನ ಮಾಡದವರಿಗೆ ಹೋಲಿಕೆ ಮಾಡಿದಲ್ಲಿ ಧೂಮಪಾನ ಮಾಡುವವರಿಗೇ ಕೋವಿಡ್-19 ಹೆಚ್ಚು ಬಾಧಿಸುತ್ತದೆ ಎಂದು ಎಚ್ಚರಿಸಿದೆ.

ತಂಬಾಕು ಸಾಂಕ್ರಾಮಿಕವಲ್ಲದ ರೋಗಗಳಾದ ಹೃದಯರಕ್ತನಾಳದ ಕಾಯಿಲೆ, ಕ್ಯಾನ್ಸರ್, ಉಸಿರಾಟದ ಕಾಯಿಲೆ ಮತ್ತು ಮಧುಮೇಹಕ್ಕೂ ಕಾರಣವಾಗುತ್ತದೆ. ಇವೆಲ್ಲವೂ ಕೋವಿಡ್-19 ಬಂದಲ್ಲಿ ಆರೋಗ್ಯದ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದ್ದು ಸಾವಿಗೂ ಕಾರಣವಾಗಬಹುದು ಎಂದು ಡಾ.ರಾಮಚಂದ್ರ ಹೇಳಿದ್ದಾರೆ.

ಇದೇ ವೇಳೆ ತಂಬಾಕು ಕೋವಿಡ್-19 ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಆಧಾರವಿಲ್ಲದ ಉಲ್ಲೇಖಗಳಿಂದ ಮಾಧ್ಯಮಗಳು, ಸಂಶೋಧಕರು, ವಿಜ್ಞಾನಿಗಳಿಗೆ ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದೆ.


Share

ಬಾಯಿಯ ವಸಡಿನ ಮೇಲೆ ಬ್ಲ್ಯಾಕ್ ಫಂಗಸ್ ಗಂಭೀರ ಪರಿಣಾಮ: ಮುಂಜಾಗ್ರತೆ ಹೇಗೆ? ಇಲ್ಲಿದೆ ಮಾಹಿತಿ

Share

ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ವೈದ್ಯಕೀಯ ಲೋಕಕ್ಕೆ ಪ್ರತಿನಿತ್ಯ ಒಂದಲ್ಲ ಒಂದು ಸವಾಲುಗಳನ್ನು ಎಸೆಯುತ್ತಲೇ ಇದೆ. ಸಾಂಕ್ರಾಮಿಕ ರೋಗದಿಂದ ಪಾರಾಗಲು ಹೋರಾಡುತ್ತಿರುವ ಭಾರತಕ್ಕೆ ಇದೀಗ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕರ್ಮೈಕೋಸಿಸ್ ತಲೆನೋವು ಶುರುವಾಗಿದೆ.

ಈ ಬ್ಲ್ಯಾಕ್ ಫಂಗಸ್ ಕೊರೋನಾ ವೈರಸ್ ಗಿಂತಲೂ ಅಪಾಯಕಾರಿ ಹಾಗೂ ಮಾರಣಾಂತಿಕವಾಗಿದೆ. ಈ ರೋಗ ಹೆಚ್ಚಾಗಿ ಬಾಯಿಯ ವಸಡಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಮಧುಮೇಹ ಅಧಿಕ ಇದ್ದವರಿಗೆ  ಬ್ಲ್ಯಾಕ್‌ ಫ‌ಂಗಸ್‌ ಹೆಚ್ಚಾಗಿದೆ (ಮ್ಯೂಕರ್ಮೈಕೋಸಿಸ್) ಬರುತ್ತಿದೆ. ಸ್ಟಿರಾಯ್ಡಾ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೋನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತಿದೆ. ಮಧುಮೇಹ ನಿಯಂತ್ರಣದಲ್ಲಿದ್ದವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕವಾಗುತ್ತಿದೆ. ಕೊರೋನಾ ನಿಯಂತ್ರಿಸಲು ಸ್ಟಿರಾಯ್ಡ್ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್ಮೈಕೋಸಿಸ್ ಫ‌ಂಗಸ್‌ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫ‌ಂಗಸ್‌ ಆಶ್ರಯಿಸುತ್ತಿದೆ.

ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್‌ ಅಗತ್ಯವಾಗುತ್ತದೆ. ಆಕ್ಸಿಜನ್‌ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್‌ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್‌ ಕೂಡ ಬಳಕೆ ಮಾಡಲಾಗುತ್ತಿದೆ

ಕೈಗಾರಿಕಾ ಆಕ್ಸಿಜನ್‌ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪವಾದರೂ ಮಿಶ್ರಣ ಇರುತ್ತದೆ. ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್‌ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು. ಈ ಎಲ್ಲಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗ ಹೆಚ್ಚಾಗುತ್ತಿದೆ.

ಮ್ಯೂಕರ್ಮೈಕೋಸಿಸ್ ತೆಲಂಗಾಣ ರಾಜ್ಯವನ್ನು ಹೆಚ್ಚು ಬಾಧಿಸುತ್ತಿದೆ. ಅಲ್ಲಿನ ಆರೋಗ್ಯ ಇಲಾಖೆ ಇದನ್ನು ಸಾಂಕ್ರಾಮಿಕ ಎಂದು ಅಧಿಕೃತವಾಗಿ ಘೋಷಿಸಿದೆ.

ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ನೀಡಿದ ಅಧಿಸೂಚನೆಯ ಪ್ರಕಾರ, ಇದು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸೂಚಿಸಬಹುದಾದ ಕಾಯಿಲೆಯಾಗಿದೆ ಎನ್ನಲಾಗಿದೆ. ಈ ಕಪ್ಪು ಶಿಲೀಂಧ್ರವು ಮುಖ್ಯವಾಗಿ ಕಣ್ಣು, ಕಿವಿ ಮತ್ತು ಬಾಯಿಯ ಕುಹರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

ಬಾಯಿಯ ಮೇಲಿನ ಪರಿಣಾಮ ಕುರಿತು ಪ್ರತಿಕ್ರಿಯೆ ನೀಡಿರುವ, ಮಹೇಂದ್ರ ದಂತ ಆಸ್ಪತ್ರೆಯ ಮುಖ್ಯ ಸಲಹೆಗಾರ ಡಾ. ಸಮೀರ್ ಆಜಾದ್ ಮಹೇಂದ್ರ ಅವರು, ಮ್ಯೂಕರ್ಮೈಕೋಸಿಸ್ ಬಾಯಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಕೋವಿಡ್-19 ರಿಂದ ಚೇತರಿಸಿಕೊಂಡ ರೋಗಿಗಳಿಗೆ ಕನಿಷ್ಠ ಒಂದು ತಿಂಗಳಾದರೂ ನಿಯಮಿತವಾಗಿ ಮೌಖಿಕ ತಪಾಸಣೆಗೆ ನಡೆಸಬೇಕು ವೈದ್ಯರು ಸಲಹೆ ನೀಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ. ಪ್ರಮುಖವಾಗಿ ಮಧುಮೇಹ ಇರುವವರಿಗೆ ಸಲಹೆ ನೀಡಲೇಬೇಕಿದೆ. ಬಾಯಿಯಲ್ಲಿ ಶುರುವಾಗುವ ಈ ಸೋಂಕು ರೋಗವನ್ನು ಉಲ್ಭಣಿಸುತ್ತದೆ ಎಂದು ತಿಳಿಸಿದ್ದಾರೆ.

ನಮ್ಮ ಸುತ್ತಲಿನ ಗಾಳಿಯಲ್ಲಿ ಬ್ಲ್ಯಾಕ್ ಫಂಗಸ್ ಇದೆ ಎಂಬುದನ್ನು ಜನರು ಅರಿಯಬೇಕಿದೆ. ನಾವು ಅದನ್ನು ಉಸಿರಾಡುತ್ತಿದ್ದೇವೆ. ಆದರೆ, ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡುತ್ತಿದೆ. ಸೋಂಕಿಗೊಳಗಾಗಿರುವ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಅವರಿಗೆ ಬ್ಲ್ಯಾಕ್ ಫಂಗಸ್ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಹಾಗಾದರೆ ಸೋಂಕಿನಿಂದ ಚೇತರಿಸಿಕೊಂಡವರು ಬ್ಲ್ಯಾಕ್ ಫಂಗಸ್ ರೋಗದಿಂದ ದೂರ ಉಳಿಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಾದರೂ ಯಾವುವು? 

  • ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಲವಯುಕ್ತ ಬಿಸಿ ನೀರಿನಿಂದ ಗಾರ್ಗಿಲ್ ಮಾಡಬೇಕು. ಉಪ್ಪು ನೀರಿನಲ್ಲಿ ಗಂಟಲು ಶುದ್ಧ ಮಾಡುವ ಪ್ರಕ್ರಿಯೆ ಎಲ್ಲರಿಗೂ ಗೊತ್ತಿದೆ. ಕ್ಲೊರೆಕ್ಸಿಡಿನ್‌ ಮೌತ್‌ ವಾಶ್‌ ಸಿಗುತ್ತದೆ. ಇದರಿಂದ ಗಂಟಲು ಶುದ್ಧ ಮಾಡಿದರೆ ಫ‌ಂಗಸ್‌ ಸಾಯುತ್ತದೆ.
  • ಬಿಸಿ ನೀರಿನ ಆವಿಯನ್ನು ತೆಗೆದುಕೊಳ್ಳುವಾಗ ಒಂದೆರಡು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ತೆಗೆದುಕೊಳ್ಳಿ. ಇದಕ್ಕೆ ಫ‌ಂಗಸ್‌ ಅನ್ನು ಕೊಲ್ಲುವ ಶಕ್ತಿ ಇರುತ್ತದೆ.
  • ಕೊರೋನಾ ಬಂದ ಬಳಿಕ ಆಕ್ಸಿಜನ್‌ ಕಾನ್ಸಂಟ್ರೇಟರ್‌ ನ ಯಂತ್ರವನ್ನು ಮನೆಯಲ್ಲಿರಿಸಿಕೊಂಡು ಬಳಸುತ್ತಿದ್ದಾರೆ. ಇದಕ್ಕೆ ನೀರು ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ನಳ್ಳಿ ನೀರನ್ನು ಹಾಕುತ್ತಾರೆ. ಇದು ಸರಿಯಲ್ಲ. ನಳ್ಳಿ ನೀರಿನಲ್ಲಿಯೂ ಫ‌ಂಗಸ್‌ ಬರುವ ಸಾಧ್ಯತೆ ಇದೆ. ಆದ್ದರಿಂದ ಡಿಸ್ಟಿಲ್‌ ವಾಟರ್‌ (ಪ್ಯೂರಿಫೈಡ್‌ ವಾಟರ್‌) ಅಥವಾ ಬಿಸಿ ಮಾಡಿ ಆರಿದ ನೀರನ್ನು ಹಾಕಬೇಕು.
  • ಸೋಂಕಿನಿಂದ ಗುಣಮುಖರಾದವರು ಸಾಧ್ಯವಾದಷ್ಟು ಹೆಚ್ಚೆಚ್ಚು ಪ್ರೋಟೀನ್ ಇರುವ ಆಹಾರ, ಸಕ್ಕರೆ ಅಂಶ ಕಡಿಮೆ ಇರುವ ಆಹಾರ, ವಿಟಮಿನ್ ಎ.ಇ ಮತ್ತು ಬಿ ಸತ್ವಗಳಿರುವ ಆಹಾರ ಸೇವನೆ ಮಾಡುವುದು ಉತ್ತಮ.

Share

ಭಾರತದ 62,100 ಸೇರಿ, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣ: ಸಂಶೋಧನಾ ವರದಿ

Share

ವಾಷಿಂಗ್ಟನ್: ಕಳೆದ ವರ್ಷ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧನಾ ವರದಿಯೊಂದು ಹೊರಹಾಕಿದೆ.

ದಿ ಲ್ಯಾನ್ಸೆಟ್ ಆಂಕಾಲಜಿ ವರದಿಯಲ್ಲಿ ಈ ಕುರಿತಂತೆ ಮಹತ್ವದ ಮಾಹಿತಿ ನೀಡಿದ್ದು, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ. ಆಲ್ಕೊಹಾಲ್ ಅಥವಾ ಮದ್ಯಪಾನ ಸೇವನೆಯು ಸ್ತನ, ಪಿತ್ತಜನಕಾಂಗ, ಕೊಲೊನ್, ಗುದನಾಳ, ಒರೊಫಾರ್ನೆಕ್ಸ್,  ಧ್ವನಿಪೆಟ್ಟಿಗೆಯನ್ನು ಮತ್ತು ಅನ್ನನಾಳವನ್ನು ಒಳಗೊಂಡಂತೆ ವಿವಿಧ ಕ್ಯಾನ್ಸರ್ಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಬಲವಾದ ಪುರಾವೆಗಳಿವೆ. ಕಡಿಮೆ ಮಟ್ಟದ ಕುಡಿಯುವಿಕೆಯೂ ಕೂಡ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದಾಗ್ಯೂ, ಸಾರ್ವಜನಿಕರಲ್ಲಿ ಜಾಗೃತಿ ಕಡಿಮೆ ಇದೆ:  ಬ್ರಿಟನ್ ಸಮೀಕ್ಷೆಯೊಂದರಲ್ಲಿ, 2018 ರಲ್ಲಿ, 10 ಜನರಲ್ಲಿ ಒಬ್ಬರಿಗೆ ಮಾತ್ರ ಆಲ್ಕೊಹಾಲ್ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿದಿತ್ತು.

2020 ರಲ್ಲಿ ಜಾಗತಿಕವಾಗಿ 741,300 ಕ್ಯಾನ್ಸರ್ ಪ್ರಕರಣಗಳು ಆಲ್ಕೋಹಾಲ್ ನಿಂದ ಉಂಟಾಗಿವೆ. ಆಲ್ಕೋಹಾಲ್ ಲೇಬಲ್‌ಗಳಿಗೆ ಕ್ಯಾನ್ಸರ್ ಎಚ್ಚರಿಕೆ ಇರಬೇಕು, ಆಲ್ಕೋಹಾಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು ಮತ್ತು ಪಾನೀಯಗಳ ಮಾರಾಟವನ್ನು ಕಡಿಮೆ ಮಾಡಬಹುದು ಎಂದು ಈ ಅಧ್ಯಯನದ  ಸಹ-ಲೇಖಕರೂ ಕೂಡ ಆಗಿರುವ ಫ್ರಾನ್ಸ್ ನ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನ ಹ್ಯಾರಿಯೆಟ್ ರುಮ್ಗೇ ಅವರು ಹೇಳಿದ್ದಾರೆ.

‘ಆಲ್ಕೋಹಾಲ್ ಜಾಗತಿಕವಾಗಿ ಕ್ಯಾನ್ಸರ್ ನ ಗಣನೀಯ ಹೊರೆಯನ್ನು ಉಂಟುಮಾಡುತ್ತದೆ ಮತ್ತು ಇದೇ ರೀತಿಯ ದುಷ್ಪರಿಣಾಮ ಕಡಿಮೆ ಮಟ್ಟದ ಕುಡಿತದಲ್ಲೂ ಕಂಡುಬರುತ್ತದೆ. ಕ್ಯಾನ್ಸರ್ ಮೇಲೆ ಆಲ್ಕೋಹಾಲ್ ನ ಪರಿಣಾಮವು ಹೆಚ್ಚಾಗಿ ತಿಳಿದಿಲ್ಲ ಅಥವಾ ಕಡೆಗಣಿಸಲಾಗುತ್ತದೆ, ಆದ್ದರಿಂದ ಆಲ್ಕೋಹಾಲ್ ಮತ್ತು  ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ನಮಗೆ ಹೆಚ್ಚಿನ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ, ಮತ್ತು ಆಲ್ಕೋಹಾಲ್ ನಿಂದ ಉಂಟಾಗುವ ಕ್ಯಾನ್ಸರ್ ಗಳು ಮತ್ತು ಇತರ ರೋಗಗಳ ಹೊರೆಯನ್ನು ತಡೆಗಟ್ಟಲು ಒಟ್ಟಾರೆ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವ ನೀತಿಗಳ ಅಗತ್ಯವಿದೆ ಎಂದು ರುಮ್ಗೇ  ಹೇಳಿದ್ದಾರೆ

2020 ರಲ್ಲಿ ಪುರುಷರಲ್ಲಿ ಅಂದಾಜು 568,700 ಕ್ಯಾನ್ಸರ್ ಪ್ರಕರಣಗಳು ಮತ್ತು ಮಹಿಳೆಯರಲ್ಲಿ 172,600 ಪ್ರಕರಣಗಳ ಹಿಂದೆ ಆಲ್ಕೋಹಾಲ್ ಸೇವನೆ ಇದೆ ಎಂದು ಫಲಿತಾಂಶಗಳು ಸೂಚಿಸಿವೆ, ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಅನ್ನನಾಳ, ಯಕೃತ್ತು ಮತ್ತು ಸ್ತನಗಳ ಕ್ಯಾನ್ಸರ್ ಗಳನ್ನು ಒಳಗೊಂಡಿವೆ. ಆದಾಗ್ಯೂ, ಪ್ರತಿ  ಕ್ಯಾನ್ಸರ್ ಪ್ರಕಾರದ ಕಾರಣಗಳನ್ನು ಪ್ರತ್ಯೇಕವಾಗಿ ನೋಡಿದಾಗ, ಆಲ್ಕೋಹಾಲ್ ನಿಂದ ಉಂಟಾಗುವ ಪ್ರಕರಣಗಳ ಪ್ರಮಾಣವು ಅನ್ನನಾಳ, ಗಂಟಲು ಮತ್ತು ತುಟಿ ಮತ್ತು ಬಾಯಿ ಕ್ಯಾನ್ಸರ್ ಗಳಿಗೆ ಅತ್ಯಧಿಕವಾಗಿತ್ತು.

‘ಆಲ್ಕೋಹಾಲ್ ಸೇವನೆ ಮತ್ತು ಸಂಭಾವ್ಯ ಕ್ಯಾನ್ಸರ್ ಬೆಳವಣಿಗೆಯ ನಡುವೆ ವಿಳಂಬವಾಗಿದೆ, ಆದ್ದರಿಂದ ಆಲ್ಕೋಹಾಲ್ ಒಡ್ಡುವಿಕೆ ದತ್ತಾಂಶದ ವರ್ಷ ಮತ್ತು ಕ್ಯಾನ್ಸರ್ ರೋಗನಿರ್ಣಯದ ವರ್ಷದ ನಡುವಿನ ವಿಳಂಬದ ಅವಧಿಯ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಈ ಬಗ್ಗೆ ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ  ಎಂದು ಹೇಳಿದ್ದಾರೆ.

ಭಾರತದಲ್ಲಿ 62,100 ಪ್ರಕರಣಗಳು
ಇನ್ನು 2020 ರಲ್ಲಿ ವಿಶ್ವಾದ್ಯಂತ ದಾಖಲಾದ  740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ, ಈ ಪೈಕಿ ಭಾರತದಲ್ಲೇ ಶೇ.5ರಷ್ಟು ಅಂದರೆ 62,100 ಪ್ರಕರಣಗಳಿವೆ ಎಂದು ವರದಿಯಿಂದ ತಿಳಿದುಬಂದಿದೆ.  ಜಾಗತಿಕವಾಗಿ 2020ರಲ್ಲಿ ಹೊಸದಾಗಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ  ಶೇ.4ರಷ್ಟು ಮದ್ಯಪಾನಕ್ಕೆ ಸಂಬಂಧಿಸಿರಬಹುದು ಎಂದು ಈ ಅಧ್ಯಯನವು ಅಂದಾಜಿಸಿದೆ. ಮಹಿಳೆಯರೊಂದಿಗೆ ಹೋಲಿಸಿದರೆ ಪುರುಷರು ಶೇ.77 (568,700 ಪ್ರಕರಣಗಳು) ಆಲ್ಕೊಹಾಲ್-ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗಿದ್ದಾರೆ ಎಂದು ಅಧ್ಯಯನವು ಅಂದಾಜಿಸಿದೆ.

172,600 ಪ್ರಕರಣಗಳು ಅನ್ನನಾಳ, ಯಕೃತ್ತು ಮತ್ತು ಸ್ತನದ ಕ್ಯಾನ್ಸರ್ ಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳಿಗೆ ಕಾರಣವಾಗಿವೆ. ಇದಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಆರೋಗ್ಯ ಸೇವೆ ಮತ್ತು ಕ್ಯಾನ್ಸರ್ ಸೇವೆಗಳಿಗೆ ಉಂಟಾಗುವ ಅಡೆತಡೆಗಳು ಆ ವರ್ಷದ ರೋಗನಿರ್ಣಯದ  ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ದಾಖಲಾದ ದತ್ತಾಂಶಗಳಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಅಂದಾಜು ಮಾಡಲು ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.


Share

ಉಚಿತವಾಗಿ ವ್ಯಾಕ್ಸಿನೇಷನ್ ಅಭಿಯಾನ

Share

 

ಸೇಡಂ ಪಟ್ಟಣದಲ್ಲಿ ಇಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಶಾರದಾ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲರಾಜ್ ಗುತ್ತೇದಾರ್ ಬ್ರಿಗೇಡ್ ವತಿಯಿಂದ ಉಚಿತವಾಗಿ ವ್ಯಾಕ್ಸಿನೇಷನ್ ಅಭಿಯಾನ ಹಾಗೂ ಬಾಲರಾಜ್ ಗುತ್ತೇದಾರ್ ಬ್ರಿಗೇಡ್ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಲಪ್ಪಯ್ಯ ವಿರಕ್ತಮಠದ ಪರಮಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ಚಾಲನೆ ನೀಡಿದರು.


Share