ಡೆಂಗ್ಯೂ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಡ್ವೊಕೇಸಿ ಸಭೆಯನ್ನು ಬ್ಯಾಡಗೊಟ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು..
ಡೆಂಗ್ಯೂ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಹೆಬ್ಬಾಲೆಯ ವೈದ್ಯಾಧಿಕಾರಿಯಾದ ಡಾ ಸಾನಿಯಾ ರವರು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಶ್ರೀಮತಿ ಶಾಂತಿಯವರು ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕೂಡಿಗೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಮಂಜುಳಾರವರು ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಹಾಗೂ ಚರಂಡಿಗಳ ಸ್ವಚ್ಚತೆ ಬಗ್ಗೆ ಮಾಹಿತಿಯನ್ನು ನೀಡಿದರು..
ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಶ್ರೀ ಪುನಿತ್, ಸಿಬ್ಬಂದಿಗಳು, ಆರೋಗ್ಯ ನಿರೀಕ್ಷಕರಾದ ಶ್ರೀ ಸಂಜಯ್, ಸಮುದಾಯ ಆರೋಗ್ಯ ಅಧಿಕಾರಿ ದೀಪು, ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಹಾಡಿಯ ಮುಖಂಡರು ಹಾಜರಿದ್ದರು..
Category: ಆರೋಗ್ಯ
ಸ್ತನ ಕ್ಯಾನ್ಸರ್ ಬಗ್ಗೆ ತಿಳುವಳಿಕೆ” ನೀಡಿದ ಡಾ:ಜಯಂತಿತುಂಸಿ
ಸ್ತನ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ” ಟೈಲೂಪ್ ಬ್ರೆಸ್ಟ್ ಇಂಪ್ಲಾಂಟ್ ರೀಕನ್ ಸ್ಟ್ರಕ್ಷನ್ ರೊಬೋಟಿಕ್ ತಂತ್ರಜ್ಞಾನದ ಎನ್ಎಸಿ ಆರ್ ಎನ್ ಎಸ್ ಎಂ ವಿಧಾನದ ನಿಖರತೆ, ದಕ್ಷತೆ, ಸುರಕ್ಷತೆ, ಸಂರಕ್ಷಣೆಗೆ ಮುಂಚೂಣಿಯಲ್ಲಿ”ಅಪೊಲೋ ಕ್ಯಾನ್ಸರ್ ಕೇಂದ್ರ” ಬನ್ನೇರುಘಟ್ಟ ರಸ್ತೆ ಬೆಂಗಳೂರು -76, ಪೋ:18002031066..
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸರ್ಜ್ ನ್ ಡಾ:ಜಯಂತಿತುಂಸಿ, ಸಿಈಓಡಾ:ಮನೀ ಷ್ ಮ್ಯಾಥ್ಯೂ, ಅಧ್ಯಕ್ಷ ಶ್ರೀ ದಿನೇಶ್ ಮಾಧ ವನ್ ರವರು”ಟೈಲೂಪ್ ಸ್ತನ ಇಂಪ್ಲಾಂಟ್ ನಿಖರ, ನವೀನ ರೊಬೋಟಿಕ್ ತಂತ್ರಜ್ಞಾನ ವು ಸರ್ವ ಸುರಕ್ಷಿತ, ಜೈವಿಕ ಹೊಂದಾಣಿಕೆ, ಕಡಿಮೆ ಅಪಾಯ,ನೋವು,ರಕ್ತನಷ್ಟ ಮತ್ತು ಶೀಘ್ರ ಚೇತರಿಕೆ, ಮೊದಲಿನ ಆರೋಗ್ಯ ಜೀ ವನ ನಡೆಸಲು ಈ ರೊಬೋಟಿಕ್ ನಿಪ್ಪಲ್ ಸ್ಪೇರಿಂಗ್ ಮಾಸ್ಟೆಕ್ಟಮಿ ತುಂಬಾ ಸಹಕಾರಿ” ಇತ್ತೀಚೆಗೆ ಯುವತಿಯರಲ್ಲಿ ಹೆಚ್ಚುತ್ತಿರುವ ಈ ಸ್ತನ ಕ್ಯಾನ್ಸರ್ ಬಗ್ಗೆ ತಿಳುವಳಿಕೆ” ನೀಡಿದ ರು. ಈ ಹೊಸ ತಂತ್ರದಿಂದ 16ಜನರಿಗೆ ಯ ಶಸ್ವೀ ಶಸ್ತ್ರಚಿಕಿತ್ಸೆ ಮಾಡಲಾಗಿದೆ” ಎಂದರು.
“ಅಪೊಲೋ ಕ್ಯಾನ್ಸರ್ ಕೇಂದ್ರ”ದಿಂದ ಸ್ತನ ಕ್ಯಾನ್ಸರ್ ಫಲಕಾರಿ ಶಸ್ತ್ರಚಿಕಿತ್ಸೆಗೊಳಗಾದ ಇಬ್ಬರೂ ಮಹಿಳೆಯರೂ ಮಾತನಾಡಿ; “ಸಾ ರ್ಥಕತೆ,ಆರೋಗ್ಯವಾದ,ನೋವಿಲ್ಲದ ಜೀವ ನಕ್ಕೆ ಸಂತೋಷ”ಎಂದರು.ಮತ್ತು ಅಮೆರಿಕ ಜರ್ಮನಿಯಿಂದ ಮೊದಲು ಭಾರತಕ್ಕೆ ಈ ಹೊಸ ರೋಬೋ ತಂತ್ರಜ್ಞಾನ ತಂದ ಡಾ:ಜ ಯಂತಿ ತುಂಸಿ ಅವರಿಗೆ ರ್ಕೃತಜ್ಞತೆ ವ್ಯಕ್ತಪ ಡಿಸಿ, ಈ ಸುರಕ್ಷಿತ ಶಸ್ತ್ರ ಚಿಕಿತ್ಸೆಯನ್ನು ಸದು ಪಯೋಗಪಡಿಸಿಕೊಳ್ಳಿ” ಎಂದರು.
ಈ ದಿನಗಳಲ್ಲಿ ಸ್ತನ ಕ್ಯಾನ್ಸರ್ನಲ್ಲಿ ಹೆಚ್ಚು ಬಳಲುತ್ತಿರುವವರಿಗೆ ಸರ್ಕಾರ, ಸಂಘ ಸಂ ಸ್ಥೆಗಳು;ಶಸ್ತ್ರಚಿಕಿತ್ಸೆಗೆ, ಆರ್ಥಿಕ ಸಹಾಯಕ್ಕೆ ಧಾವಿಸಬೇಕೆಂದು”ಎಲ್ಲರೂ ಸಹ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ
ಜಂತು ಹುಳು ಮುಕ್ತ ಮಕ್ಕಳು ಆರೋಗ್ಯವಂತ ಮಕ್ಕಳು,
ದೇಶದಾದ್ಯಂತ ದಿನಾಂಕ 9.12.2024 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ ನಡೆಸಲಾಗುವುದು,
ಇಂದು ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು, ಗೋಣಿಕೊಪ್ಪಲ್ಲಿನ ಹರಿಶ್ಚಂದ್ರ ಪುರ ಅಂಗನವಾಡಿ ಕೇಂದ್ರದಲ್ಲಿ ಜಂತುಹುಳು ನಿವಾರಣ ಮಾತ್ರೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು
ಈ ಕಾರ್ಯಕ್ರಮವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮಾನ್ ಕುಲ್ಲಚಂಡ ಪ್ರಮೋದ್ ಗಣಪತಿ ರವರು ಮಕ್ಕಳ ಬಾಯಿಗೆ ಮಾತ್ರೆಯನ್ನು ನೀಡುವುದರ ಮೂಲಕ ಇಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ತಾಲೂಕು ವೈದ್ಯಾಧಿಕಾರಿಯಾದ ಶ್ರೀಮಾನ್ ಡಾಕ್ಟರ್ ಯತಿರಾಜ್ ರವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಾದ ಶ್ರೀಮಾನ್ ಪೂಣಚ್ಚ ಅವರು ಎಸಿಡಿಪಿಯೋ ರವರಾದ ಶ್ರೀಮತಿ ರೀತಾರವರು, ಆರೋಗ್ಯ ಅಧಿಕಾರಿಯವರಾದ ಶ್ರೀಮಾನ್ ಶಿವಯ್ಯ, ಶ್ರೀಮಾನ್ ಶಶಿಕಾಂತ್, ಶ್ರೀಮತಿ ಸಂಗೀತ, ತಾಲೂಕು ಎಲ್ ಹೆಚ್ ವಿ ಶ್ರೀಮತಿ ಕಾವೇರಮ್ಮ ರವರು ಸಂಜೀವಿನಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವರಲಕ್ಷ್ಮಿ ರವರು ಸಿಎಚ್ಒ ಪೃಥ್ವಿ ರವರು ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಶಿವಮ್ಮ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ ಸಹಾಯಕಿ ಶ್ರೀಮತಿ ಯಮುನಾ ಬಿ ಎಸ್ ಆಶಾ ಕಾರ್ಯಕರ್ತೆಯರಾದ ಚಿತ್ರ, ದಮಯಂತಿ ಪುಟಾಣಿ ಮಕ್ಕಳು ಹಾಗೂ ಪೋಷಕವೃಂದದವರು ಹಾಜರಿದ್ದರು, ಇಂದಿನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಪ್ರಾರಂಭಿಸಿ ಮಕ್ಕಳಿಗೆ ಮಾತ್ರೆಗಳನ್ನು ನೀಡಿ ಎಲ್ಲರಿಗೂ ಆರೋಗ್ಯ ಶಿಕ್ಷಣಾ ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಡಣಿಯಲ್ಲಿ ವಿಶ್ವ ಮಧುಮೇಹ ಜನ ಜಾಗೃತಿ ಜಾಥಾ
ಆಲಮೇಲ ತಾಲೂಕಿನ ಕಡಣಿ ಗ್ರಾಮದ ಊರಿನ ಪ್ರಮುಖ ಬೀದಿಗಳ ಮುಖಾಂತರ ವಿಶ್ವ ಮಧುಮೇಹ (ಸಕ್ಕರೆ ) ಕಾಯಿಲೆ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಕರ್ನಾಟಕ ಸರ್ಕಾರ ಮತ್ತು ಜಿಲ್ಲಾ ಆಡಳಿತ ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಸಯುಕ್ತ ಆಶ್ರಯದ ಅಡಿಯಲ್ಲಿ
ಎಲ್ಲರೂ ವೇಗದ ಜೀವನ ಬೆನ್ನು ಹತ್ತಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಮನುಷ್ಯ ಆರೋಗ್ಯವಂತನಾಗಿದ್ದರೆ ಮಾತ್ರ ಬದುಕು ನೆಮ್ಮದಿಯಿಂದ ಇರುತ್ತದೆ. ಜೀವನ ಶೈಲಿ ಬದಲಿಸಿ ಅಸಂಕ್ರಾಮಿಕ ರೋಗದಿಂದ ದೂರವಿರಬಹುದು ಎಂದು ಆರೋಗ್ಯ ದಿಂದಿರಲು ಸಾಧ್ಯ.
ಶ್ರೀ ಪರಮಾನಂದ ಭೋಗಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಜಾಗೃತಿ ಮೂಡಿಸಲಾಯಿತು, ರಾಷ್ಟ್ರೀಯ ಸಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ಕುಟುಂಬದಲ್ಲಿ ಅನೇಕರಿಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ .
ಸರಿಯಾದ ಸಮಯಕ್ಕೆ ಊಟ. ನಿದ್ರೆ. ಆಹಾರದಲ್ಲಿ ಬದಲಾವಣೆ ಇಲ್ಲದೆ ಕಾರಣಕ್ಕೆ ಈ ಮಧುಮೇಹ( ಸಕ್ಕರೆ) ಕಾಯಿಲೆ ಎಂಬ ರೋಗಗಳನ್ನು ಹರಡುತ್ತವೆ.
ಪ್ರಾಚಾರ್ಯರಾದ ರಮೇಶ ಎಸ್ ಗಂಗನಳ್ಳಿ.
ಆಲಮೇಲ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾಕ್ಟರ್ ವರುಣ್ ಪಾಟೀಲ ಬಸಮ್ಮ ಗೌಡರ.ಮಾರ್ತಂಡ ವಗ್ಗೆ. ಮಲ್ಲಿಕಾರ್ಜುನ ಪೂಜಾರಿ.ಶಿವಾನಂದ ಹೊಸಮನಿ.ಸಂದೇಶ ಜೋಗುರ. ಪ್ರಶಾಂತ ಶಹಾಪುರ.
ವರದಿ. ಉಮೇಶ ಕಟಬರ
