ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೆಷನ್ ಹಾವಳಿ ತಡೆಯುವಂತೆ ಒತ್ತಾಯಿಸಿ ಎ ಐ ಎಸ್ ಎಫ್ ಪ್ರತಿಭಟನೆ

Share

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಹಡಗಲಿ ತಾಲೂಕ ಸಮಿತಿಯಿಂದ ಇಂದು ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾನುಸಾರ ಶುಲ್ಕ ಪಡೆಯದೆ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು ಈ ಕೂಡಲೇ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಯಾವ ಯಾವ ತರಗತಿಗೆ ಎಷ್ಟೇಷ್ಟು ಶುಲ್ಕ ಪಡೆಯಬೇಕೆಂದು ಪತ್ರಿಕಾ ಪ್ರಕಟಣೆ ಹೊರಡಿಸಬೇಕಂದು ಒತ್ತಾಯಿಸಿ ತಹಸೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಇಲ್ಲದೇ ಹೋದರೆ ಶೀಘ್ರದಲ್ಲೇ ಮತ್ತೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿರೂಪಾಕ್ಷ ಅಂಕ್ಲಿ ಕಾರ್ಯದರ್ಶಿ ವೆಂಕಟೇಶ ನಾಯ್ಕ ಉಪಾಧ್ಯಕ್ಷ ಪ್ರಭು ಹಿರೇಬನ್ನಿಮಟ್ಟಿ, ಸಂತೋಷ, ಪ್ರಶಾಂತ ಸಿಪಿಐ ಮುಖಂಡ ಸುರೇಶ ಹಲಗಿ ಎಐಟಿಯುಸಿ ಶಾಂತರಾಜ ಜೈನ ಎಐವೈಎಫ್ ಸಂಚಾಲಕ ಬಸವರಾಜ ಸಂಶಿ ತೋಂಟದಾರ್ಯ ಹಾಗೂ ವಿದ್ಯಾರ್ಥಿ ಪೋಷಕರು ಇದ್ದರು ವರದಿ : ಟಿ.ಶಿವಕುಮಾರ್ವ


Share

ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ

Share

 

ರಾಷ್ಟ್ರೀಯ ಹೆದ್ದಾರಿ NH 161A ಬೀದರ್ ಜಿಲ್ಲೆಯ ಔರಾದ ತಾಲೂಕಿನ ಮಾರ್ಗವಾಗಿ ಮಹಾರಾಷ್ಟ್ರದ ಲಾತುರ ಹಾಗೂ ತೆಲಂಗಾಣದ ರಾಜ್ಯದ ನಾರಾಯಣಖೈಡ ಈ ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ. ಈ ರಸ್ತೆ ಹದಗೆಡಲು ಕಾರಣ. ತೆಲಂಗಾಣದಿಂದ ಮರಳು ಸಾಗಾಣಿಕೆ ಮಾಡುವಂತಹ ಲಾರಿಗಳು. ಭಾರಿ ಪ್ರಮಾಣದಲಿ ಮರಳು ಸಾಗಾಣಿಕೆಯಿಂದಾಗಿ .15ದಿನಗಳ ಹಿಂದೆ ಎರಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಘಟನೆ-ಈ ರಸ್ತೆಮೇಲೆ ನಡೆದಿದೆ. ಇನ್ನೂ ಇಬ್ಬರು ಯುವಕರು ದವಾಖಾನೆಯಲ್ಲಿ ನರಳುತ್ತಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿ ಕೂಡ ಇದಕ್ಕೆ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಣ್ಣಾರೆ ಕಂಡು ಕೂಡ ಕುರುಡರಂತೆ ಇದ್ದಾರೆ. ಆರ್. ಟಿ. ಒ ಸಹ ನೋಡಿ ಕೂಡ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಾಶಂಪೂರ್, ಯನಗುoದಾ, ಚಿಂತಾಕಿ, ನಾಗಂಪಲ್ಲಿ,ಕರಂಜಿ ಬಿ , ಕರಂಜಿ ಕೆ ರಾಯ ಪಳ್ಳಿ, ನಿಂಗದಳ್ಳಿ, ಎಲ್ಲ ಗ್ರಾಮದ ಜನರಿಗೆ ಈ ಒಂದು ರಸ್ತೆ ಜೀವ ಹಿಂಡುತಿದೆ. ಹೇಳೋಕೆ ಮಾತ್ರ ಬೀದರ್ ಜಿಲ್ಲೆಯಲಿ ಸಚಿವರು, ಕೇಂದ್ರದ ಮಂತ್ರಿಗಳು ಇದ್ದರೂ ಕೂಡ ಈ ಸ್ಥಿತಿ ನಮ್ಮ ಬೀದರ ಜಿಲ್ಲೆಯಲ್ಲಿ ನಾವು ಕಣ್ಣಾರೆ ಕಾಣಬಹುದು.ಮತದಾನದ ವೇಳೆಯಲ್ಲಿ ಎಲ್ಲಾ ಹಳ್ಳಿಹಳ್ಳಿಗೂ ಕೂಡ ಮತದಾನ ಹಾಕಿ ಅಂತ ಬರುತ್ತಾರೆ .ಆದರೆ ಮತದಾನ ಮುಗಿದ ಮೇಲೆ ಯಾರೂ ಕೂಡ ಹಳ್ಳಿಗಳಿಗೆ ಜನರ ಸಂಕಷ್ಟ ಯಾರು ಕೇಳಲ್ಲ? ದಯವಿಟ್ಟು ಈ ಒಂದು ರಸ್ತೆಗೆ ಯಾವುದಾದರೂ ಒಂದು ಕ್ರಮ ಕೈಗೊಳ್ಳಬೇಕು. ಜನರಿಗಾಗಿ ಸುವ್ಯವಸ್ಥಿತ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ವರದಿ : ಸತ್ಯವಾನ ಮುಕ್ತೆದಾರ


Share