ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಶಿಕ್ಷಕ ಯಡ್ರಾಮಿಯಲ್ಲಿ ಪ್ರತಿಭಟನೆ

Share


11 ವರ್ಷದ ಚಿಕ್ಕ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಗೈದ ಘಟನೆ ಯಡ್ರಾಮಿ ತಾಲೂಕಿನ ಖಾಸಗಿ ಶಾಲೆಯಲ್ಲಿ ನಡೆದಿದೆ ಎಂದು ತಿಳಿದಿದೆ ಯಡ್ರಾಮಿ ತಾಲೂಕಿನ. ನವೋದಯ ಖಾಸಗಿ ಶಾಲಾ ಮುಖ್ಯಸ್ಥನಾದ ಹಾಜಿ ಮಲಂಗ್ ಗಣಿಯರ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಘಟನೆ ಖಂಡಿಸಿ ಆರೋಪಿಗೆ ಉಗ್ರ ಶಿಕ್ಷೆಗೆ ಆಗ್ರಹಿಸಿ ತಾಲೂಕಿನ ಕರವೇ ರೈತ ಹಾಗೂ ವಿವಿಧ ಸಂಘಟನೆಗಳು ಯಡ್ರಾಮಿ ತಾಲೂಕ ಶಾಲಾ ಕಾಲೇಜುಗಳು ಅಂಗಡಿಗಳು ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಿದ್ದಾರೆ ಇಂದು ಮಂಗಳವಾರ ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದರು. ನವೋದಯ ಕೋಚಿಂಗ್ ಶಾಲೆಯೊಂದರಲ್ಲಿ ಸಂತ್ರಸ್ತ ಮಗು ಕಳೆದ ಎರಡು ಮೂರು ವರ್ಷಗಳಿಂದ ಓದುತ್ತಿದ್ದಾಳೆ. ಸದ್ಯ ಮಗು 5ನೇ ತರಗತಿ ಓದುತ್ತಿದ್ದು ಶಾಲೆಯ ಮುಖ್ಯಸ್ಥ ಹಾಜಿ ಮಲಂಗ್ ಗಣಿಯರ್ ಕಳೆದ ಎರಡು ದಿನದ ಹಿಂದೆ ಶಾಲೆಯಲ್ಲಿ ಅತ್ಯಾಚಾರ ಗೈದ್ದಿದ್ದಾನೆ ಇದಲ್ಲದೆ ಅತ್ಯಾಚಾರದ ವಿಷಯವನ್ನು ಮನೆಯಲ್ಲಿ ಯಾರಿಗಾದರೂ ತಿಳಿಸದಂತೆ ಮಗುವಿಗೆ ಹೆದರಿಕೆ ಹಾಕಿದ್ದಾನೆ ಹೀಗಾಗಿ ಮಗು ಮನೆಯಲ್ಲಿ ತಿಳಿಸಲು ಹಿಂಜರದಿದೆ. ನಂತರ ಪಕ್ಕದ ಮನೆಯವರ ಮುಂದೆ ವಿಷಯ ತಿಳಿಸಿದ್ದು ಅವರು ಮಗುವಿನ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ ನಂತರ ಸಂತ್ರಸ್ತ ಮಗುವಿನ ಪಾಲಕರು ತಮ್ಮ ಸಮುದಾಯದ ಎಲ್ಲ ಹಿರಿಯರು ಚರ್ಚಿಸಿ ಸೋಮವಾರ ಸಾಯಂಕಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಆರಕ್ಷಕ ಅಧಿಕಾರಿ ವಿಶ್ವನಾಥ್ ಮುದರೆಡ್ಡಿ ಹಾಗೂ ಆರಕ್ಷಕ ಇಲಾಖೆ ಅವರು ಕಾರ್ಯಪ್ರವೃತ್ತರಾಗಿ ಆರೋಪಿ ಕಾಮುಕ ಶಿಕ್ಷಕ ಹಾಜಿ ಮಲಂಗ್ ಗಣಿಯಾರ್ ನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ


Share

ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಬಂಧನ

Share

ದಿನಾಂಕ 15.09.2024 ರಂದು ಹುಣಸೂರು ತಾಲ್ಲೂಕಿನ ಬೆಂಕಿಪುರ ಗ್ರಾಮದಲ್ಲಿ ಹಾಡಹಗಲೇ ನಡೆದಿದ್ದ ರೋಜಾ ಕೋಂ ಸ್ವಾಮಿನಾಯಕ ರವರ ಕೊಲೆ ಪ್ರಕರಣದ ಸಂಬಂಧ ಎರಡನೇ ಆರೋಪಿತಳಾದ ಬೆಂಕಿಪುರ ಗ್ರಾಮದ ವಾಸಿ ಸಣ್ಣಮಲ್ಲಿಗೆ ಕೋಂ ಲೇಟ್ ಪುಟ್ಟಮಂಚನಾಯಕ (37 ವರ್ಷ) ಎಂಬುವಳನ್ನು ಬಿಳಿಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಈ ದಿನ ದಿನಾಂಕ 01.12.2024 ರ ಮುಂಜಾನೆ ಹುಣಸೂರು ತಾಲ್ಲೂಕಿನ ನಲ್ಲೂರು ಪಾಲ ಗ್ರಾಮದ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ದಸ್ತಗಿರಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಮೊದಲನೇ ಆರೋಪಿತನಾದ ಬೆಂಕಿಪುರ ಗ್ರಾಮದ ಸ್ವಾಮಿ ನಾಯಕ ಬಿನ್ ಪೀರನಾಯಕ @ ಚನ್ನನಾಯಕ ಎಂಬುವನನ್ನ ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ಸ್ಮರಿಸಬಹುದಾಗಿದೆ.
ಈ ಕಾರ್ಯಾಚರಣೆಯಲ್ಲಿ ಬಿಳಿಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಶ್ರೀಮತಿ ಲೋಲಾಕ್ಷಿ ರವರು, ಸಿಬ್ಬಂದಿಗಳಾದ ಪ್ರಸಾದ್ ಧರ್ಮಾಪುರ, ಶಿವಕುಮಾರ, ಹರೀಶ ಹಾಗೂ ಅಶೋಕ ಕಗ್ಗೆರೆ ರವರುಗಳು ಭಾಗವಹಿಸಿದ್ದರು.


Share

ಸುರಪುರ ತಾಲೂಕಿನಲ್ಲಿ ಮೀಟರ್ ಬಡ್ಡಿ ಮಟ್ಕಾ ದಂಧೆ ಹಾವಳಿ

Share


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಾರ್ಡ್ ನಂಬರ್ 18ರಲ್ಲಿ ಬರುವ ಬುಡೊ ಬೋವಿಗಲ್ಲಿ ಯಲ್ಲಿ ಮೀಟರ್ ಬಡ್ಡಿ ದಂಧೆಯು ಯಾವುದೇ ಇಲಾಖೆಯ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಮೀಟರ್ ಬಡ್ಡಿದಂದೆಯೂ ರಾಜ ರೋಷವಾಗಿ ನಡೆಯುತ್ತಿದೆ ಅದೇ ರೀತಿಯಾಗಿ ಬಡವರನ್ನು ಟಾರ್ಗೆಟ್ ಮಾಡಿ ದಿನದ ಬಡ್ಡಿಯಂತೆ ಅಥವಾ ವಾರದ ಬಡ್ಡಿಯಂತೆ 10 ರಿಂದ ಇಪ್ಪತ್ತು ಸಾವಿರ ರೂಪಾಯಿ ನಗದು ಕೊಟ್ಟು ಅನಧಿಕೃತವಾಗಿ ವಾರದ ಬಡ್ಡಿಯಂತೆ ಎರಡರಿಂದ ಮೂರು ಸಾವಿರ ರೂಪಾಯಿ ಬಡ್ಡಿ ವಸೂಲು ಮಾಡುತ್ತಿದ್ದಾರೆಂದು ಇದರಿಂದ ಕೆಲವು ಕುಟುಂಬಗಳು ಬೀದಿ ಪಾಲಾಗಿವೆ ಎಂದು ಸ್ಥಳೀಯರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಇದರಿಂದ ಕೆಲ ಬಡವರು ಮೀಟರ್ ಬಡ್ಡಿದಂದೆ ಕೊರರಿಂದ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಹೋಗಿದ್ದಾರೆ ಅದೇ ರೀತಿಯಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸುರಪುರ ತಾಲೂಕಿನಲ್ಲಿ ನಡೆಯುವ ಮಟ್ಕಾ ದಂಧೆಯ ಹಾವಳಿಗೆ ಹಾಗೂ ಮೀಟರ್ ಬಡ್ಡಿದಂದೆ ಮಾಡುವ ಕದಿಮರಿಗೆ ತಾಲೂಕಿನ ಪೊಲೀಸ್ ಇಲಾಖೆಯ ಅಧಿಕಾರಿಗಳು ಎಡೆಮುರಿ ಕಟ್ಟಬೇಕೆಂದು ತಾಲೂಕಿನ ಸ್ಥಳೀಯರು ಆಗ್ರಹಿಸಿದ್ದಾರೆ


Share

ಸಿಂದಗಿಯ ಅಂಜುಮನ್ ಶಾಲಾ ಆವರಣದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ.

Share

ಸಿಂದಗಿ : ನಗರದ ಅಂಜುಮನ್ ಶಾಲೆ ಆವರಣದಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆಯಾದ ದುರ್ದೈವಿ ಶರಣಗೌಡ ಕಕ್ಕಳಮೇಲಿ ವಯಸ್ಸು 38 ಎಂದು ಗುರುತಿಸಲಾಗಿದೆ. ಈತನು ಆಲಮೇಲ ತಾಲೂಕು ಮಲಘಾಣ ಗ್ರಾಮದ ನಿವಾಸಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಅಪರಿಚಿತರಿಂದ ಕೊಲೆ ನಡೆದಿದ್ದು ಕೊಲೆಗೆ ಮೂಲ ಕಾರಣಗಳು ತಿಳಿದುಬಂದಿಲ್ಲ. ಈ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ : ಯಮನಪ್ಪ ಚೌಧರಿ


Share

ನರೇಗಾ ಯೋಜನೆ ಅಕ್ರಮ ಬಿಲ್ ಕಬಳಿಕೆ. ವಿಚಾರಣೆ ಮಾಡಿದ ಟಿವಿ 23 ವರದಿಗಾರನ ಮೇಲೆ ಫೋನಿನ ಮುಖಾಂತರ ದಮ್ಕಿ ಕರೆ

Share

ನರೇಗಾ ಯೋಜನೆ ಅಕ್ರಮ ಬಿಲ್ ಕಬಳಿಕೆ. ವಿಚಾರಣೆ ಮಾಡಿದ ಟಿವಿ 23 ವರದಿಗಾರನ ಮೇಲೆ ಫೋನಿನ ಮುಖಾಂತರ ದಮ್ಕಿ ಕರೆ

ನರೇಗಾ ಅಂದ ತಕ್ಷಣ ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಹಣ ನೀಡಬೇಕಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ನಡೆಯಬೇಕಾದ ಕಾಮಗಾರಿ ಸರಿಯಾಗಿ ನಡೆಸದೆ ಅಕ್ರಮ ವ್ಯಸಗಿದ್ದಾರೆ.. ನೀರು ತುಂಬುತ್ತಿರುವ ಕೆರೆಯನ್ನು ಕಾಮಗಾರಿ ಮಾಡಿರುವುದಾಗಿ ಅಕ್ರಮವಾಗಿ NMR ಪಡೆಯುತ್ತಿದ್ದಾರೆ ಆತ್ಮೀಯ ಬಂಧುಗಳೇ ಇದೆಲ್ಲ ನಡೆಯುತ್ತಿರುವುದು ಅತ್ತಿರದ ಸಾಲಿಗ್ರಾಮದ ತಾಲೂಕಿನ ಕರ್ಪುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದ ಹಳ್ಳಿ ಗ್ರಾಮದ. ಹೊಸ ಕಟ್ಟೆ ಅಭಿವೃದ್ಧಿಪಡಿಸುವುದಕ್ಕಾಗಿ ಕಾಮಗಾರಿಯನ್ನು ನಡೆಸಬೇಕಾಗಿತ್ತು ಆದರೆ ಇವರು ಯಾವುದೇ ಕಾಮಗಾರಿಗಳನ್ನು ನಡೆಸದೆ ಅಕ್ರಮವಾಗಿ ತುಂಬಿ ತುಳುಕುತ್ತಿರುವ ಕೆರೆಯ ಮೇಲೆ NMR ತೆಗೆದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ

ಈ ವಿಚಾರ ನಮಗೆ ಗಮನಕ್ಕೆ ಬಂದ ಕಾರಣ ಸ್ಥಳಕ್ಕೆ ಹೋಗಿ ಭೇಟಿ ನೀಡಿ ಪರಿಶೀಲನೆ ಮಾಡಿದಾಗ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ.ಪ್ರೇಮ ರವರ ಗಂಡ ಸ್ವಾಮಿ. ರವರು ನಾನೆ ಕಾಮಗಾರಿ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದರೆ. ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಪ್ರತಾಪ್. ಹಾಗೂ ನರೇಗಾ ಇಂಜಿನಿಯರ್ ರವರು ಬಾಗಿ ಆಗಿದ್ದರೆ ಈ ಅಕ್ರಮವನ್ನು ವಿಚಾರಣೆ ನಡೆಸಿದ್ದಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರಮವನ್ನು ಮತ್ತಷ್ಟು ಮಾಡುತ್ತೇನೆ ಎಂದು ನಿನಗೆ ತಾಕತ್ತಿದ್ದರೆ ಬಾ ನೀನು ವಿಚಾರಣೆ ಮಾಡಿದರೆ ನಿನ್ನ ಬಿಡುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಂಡ ಸ್ವಾಮಿರವರು ವರದಿಗಾರನಿಗೆ ಧಮ್ಕಿ ಹಾಕಿದ್ದಾರೆ ಈ ವಿಚಾರದ ಬಗ್ಗೆ ಮಾನ್ಯ ಕಾರ್ಯ ನಿರ್ವಹಾಕ ಅಧಿಕಾರಿಗಳು ಹಾಗೂ ಒಂಬಡ್ಸ್ ಮನ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟುತರ ಕಾದು ನೋಡಬೇಕಿದೆ


Share

ಹುಣಸೂರು ಟೌನ್ ಪೊಲೀಸರ ಕಾರ್ಯಾಚರಣೆ.ಮನೆಗಳವು ಆರೋಪಿ ಬಂಧನ.18 ಕಳವು ಪ್ರಕರಣ ಪತ್ತೆ.ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳು ವಶ.

Share

ಹುಣಸೂರು ಟೌನ್ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮನೆಗಳವು ಆರೋಪಿ ಬಂಧನವಾಗಿದೆ.ಬಂಧಿತನಿಂದ 1.72 ಲಕ್ಷ ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.ಮೈಸೂರಿನ ಬೆಲವತ್ತ ಗ್ರಾಮದ ಸೈಯದ್ ಉಸ್ಮಾನ್(35) ಬಂಧಿತ ಆರೋಪಿ.ಹುಣಸೂರಿನ ಬಜಾರ್ ರಸ್ತೆ,ಜೆ.ಎಲ್.ಬಿ.ರಸ್ತೆ,ಹಳೇ ಸೇತುವೆ ರಸ್ತೆಯ ಮೆಡಿಕಲ್ ಶಾಪ್ ಗಳಲ್ಲಿ ಕನ್ನ ಕಳುವು ಪ್ರಕರಣಗಳು ನಡೆದಿತ್ತು.ಈ ಸಂಭಂಧ ಖದೀಮನ ಬಂಧನಕ್ಕೆ ಹುಣಸೂರು ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಜಾಲ ಬೀಸಿದ್ದರು.ಖತರ್ನಾಕ್ ಕಳ್ಳ ಪೊಲೀಸರು ಹಣೆದ ಜಾಲಕ್ಕೆ ಸಿಕ್ಕಿಬಿದ್ದಿದ್ದಾನೆ.ಹುಣಸೂರು,ಮೈಸೂರು,ಬೆಂಗಳೂರು,ರಾಮನಗರ,ಮಂಡ್ಯ,ನಂಜನಗೂಡು ಸೇರಿದಂತೆ ಇತರೆಡೆ ನಡೆದ 18 ಕನ್ನಕಳುವು ಪ್ರಕರಣಗಳು ಪತ್ತೆಯಾಗಿದೆ.ಬಂಧಿತನಿಂದ 1.72 ಲಕ್ಷ ನಗದು,10 ಗ್ರಾಂ ಚಿನ್ನಾಭರಣ,3 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಉಸ್ತುವಾರಿಯಲ್ಲಿ ಹುಣಸೂರು ಟೌನ್ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರಾದ ಸಂತೋಷ್ ಕಶ್ಯಪ್,ಪಿಎಸ್ಸೈ ಗಳಾದ ನಾಗಯ್ಯ ಹಾಗೂ ಜಮೀರ್ ಅಹ್ಮದ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಯೋಗೇಶ್,ಅರುಣ್,ರವೀಶ್,ಮಹೇಂದ್ತ,ದಿಲೀಪ್,ರವಿಕುಮಾರ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…


Share

ಕೆಆರ್‌ಎಸ್‌ ಸೈನಿಕರ ಮೇಲೆ ದಮ್ಮು ತಾಕತ್ತು ತೋರಿಸಿದ ಬಸವರಾಜ್ ಬೊಮ್ಮಾಯಿ ಆಪ್ತರು

Share

ಸವಣೂರು ಪಟ್ಟಣದಲ್ಲಿ ಚುನಾವಣಾ ಪ್ರಚಾರ ವೇಳೆ ಹಣ ಹಂಚುವಾಗ ಕೆ ಆರ್ ಎಸ್ ಸೈನಿಕರ ಕಣ್ಣಿಗೆ ಬಿದ್ದ ಬಿಜೆಪಿ ಬಸವರಾಜ್ ಬೊಮ್ಮಾಯಿ ಪರಮಾಪ್ತ ಸುಭಾಷ್ ಗಡ್ಡಪ್ಪನವರ್ ಇವರ ಮನೆಯ ಹತ್ತಿರ ವಾಹನದಲ್ಲಿ ಹಾಗೂ ಮನೆಯಲ್ಲಿ ಕಂತೆ ಕಂತೆ ಹಣ ಹಣಹಂಚುವಾಗ ಪ್ರಚಾರ ಮಾಡುತ್ತಿದ್ದ ಕೆಆರ್‌ಎಸ್‌ ಪಕ್ಷದ ಸೈನಿಕರ ಕಣ್ಣಿಗೆ ಬಿದ್ದು ಹಣದ ಮೂಲ ಪ್ರಶ್ನಿಸಿದಾಗ ಕೆ ಆರ್ ಸೈನಿಕರ ಮೇಲೆ ಹಲ್ಲಿ ಮಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರಮಾಪ್ತರು ಕೆ ಆರ್ ಎಸ್ ಪಕ್ಷದ ಸೈನಿಕರ ಹಣದ ಮೂಲವನ್ನು ಕೇಳ ತೊಡಗಿದರು ಅಗ ಬಿಜೆಪಿಯ ಪರಮಾಪ್ತರು ಕೆಆರ್‌ಎಸ್‌ ಸೈನಿಕರ ಮೇಲೆ ಹಲ್ಲೆ ನಡೆಸಿದರು ಪೊಲೀಸರು ಕೆಆರ್‌ಎಸ್ ಪಕ್ಷದ ಸೈನಿಕರ ಮೇಲೆ ಲಾಠಿಚಾರ್ಜ್ ಮಾಡಿದರು ನಾಲ್ಕೈದು ಜನರಿಗೆ ಗಾಯಗಳಾಗಿದ್ದು ಅದರಲ್ಲಿ 65 ವರ್ಷದ ನಾಗನಗೌಡರ ನೀಲಪ್ಪ ಕಟ್ಟಿಗಿ ಮೈಸೂರಿನ ಮಂಜಮ್ಮ ಅವರಿಗೆ ತುಂಬಾ ಗಾಯಗಳಾಗಿವೆ ಇನ್ನೊಬ್ಬ ಸದಸ್ಯರಿಗೆ ಕಾಲು ಮುರಿದಿದೆ ಪೊಲೀಸರ ಎದುರಿಗೆ ಆದರೂ ಪೊಲೀಸರು ಏನು ತಿಳಿಯದ ಹಾಗೆ ಕಂಡರೂ ಕಾಣದ ರೀತಿಯಲ್ಲಿ ಸುಮ್ಮನೆ ಇದ್ದರು ಪೊಲೀಸ್ ಇಲಾಖೆ ಓರ್ವ ಹವಾಲ್ದಾರ್ ಬಿಜೆಪಿ ಆಪ್ತರೊಂದಿಗೆ ಖುಷಿಯಿಂದ ಮಾತನಾಡುತ್ತಾ ಅವರಿಗೆ ಪ್ರಚೋದಿಸುವುದು ಮುಂದೆ ಹೋಗಿ ನಿಲ್ಲುವುದನ್ನು ಮಾಡುತ್ತಿದ್ದರು ಚುನಾವಣೆ ಆಯೋಗ ಎಸ್ ಎಫ್ ಎಲ್ ತಂಡ ಬೇಗ ಬಂದಿದ್ದರೆ ಈ ಘಟನೆಯನ್ನು ನಿಲ್ಲಿಸಬಹುದಿತ್ತು ಆದರೆ ಚುನಾವಣೆ ಆಯೋಗ ತಡವಾಗಿ ಬಂದಿದ್ದರಿಂದ ಇದೆಲ್ಲ ಘಟನೆಗಳಿಗೆ ಕಾರಣವಾಯಿತು ನಂತರ ತಪಾಸಣೆ ನಡೆಸಿದ ಚುನಾವಣೆ ಆಯೋಗ ಹೊರಗಡೆ ಬೆಂಗಾಲಾಗಿನಿಂದ ಪೊಲೀಸರು ಕೆಆರ್‌ಎಸ್‌ ಸೈನಿಕರಿಗೆ ಇಲ್ಲಿಂದ ಹೊರಡಿ ಎಂದು ಹೇಳುತ್ತಿದ್ದರೆ ವಿನ : ಬಿಜೆಪಿಯ ಕಾರ್ಯಕರ್ತರಿಗೆ ಏನು ಹೇಳದೆ ಸುಮ್ಮನೆ ಇದ್ದದ್ದೇ ವಿಚಿತ್ರ ಗಾಯಗೊಂಡ ಕೆಆರ್‌ಎಸ್‌ ಸೈನಿಕರನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆಯನ್ನು ಮಾಡದೆ ಸುಮ್ಮನೆ ನಿಂತಿದ್ದ ಪೊಲೀಸರು ಸೌಜನ್ಯ ಕೂಡ ತೋರಿಸಿದ ಪೊಲೀಸರು ಸರ್ಕಾರಿ ನೌಕರರು ಅಥವಾ ಬೊಮ್ಮಯ್ಯ ನೌಕರ ಅನ್ನೋದೇ ಒಂದು ಯಕ್ಷಪ್ರಶ್ನೆಯಾಗಿತ್ತು.


Share

ಹಣಕಾಸು ವಿಚಾರ.ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ.ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ.

Share

ಮೈಸೂರು ಹಣ ಕಾಸು ವಿಚಾರಕ್ಕೆ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.
ಮೈಸೂರಿನ ಬೋಗಾದಿ ರಿಂಗ್ ರಸ್ತೆ ಯಲ್ಲಿರುವ ಟಿವಿಎಸ್ ಶೋರೂಮ್ ನಲ್ಲಿ ಘಟನೆ ನಡೆದಿದೆ.
ಮರಟಿಕ್ಯಾತನಲ್ಲಿ ನಿವಾಸಿ ಹೊನ್ನೇಗಡ ಮೇಲೆ ಅದೇ ಗ್ರಾಮದ ಸಂದೀಪ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಸಹದ್ಯೋಗಿಗಳು ಮೊಬೈಲ್ ನಲ್ಲಿ ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದಾರೆ.
ಸರಸ್ವತಿಪುರಂ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು
ಕೂಡಲೇ ಹಲ್ಲೆ ನಡೆಸಿದ ಸಂದೀಪ್ ನನ್ನು ಬಂದಿಸಿದ್ದಾರೆ.ಹಲ್ಲೆಗೊಳಗಾದ ಹೊನ್ನೇಗೌಡ
ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Share

ಕಾರ್,ಬೈಕ್,ಸೈಕಲ್ ಗೆ ಬೆಂಕಿ ಹಚ್ಚಿದ ಪ್ರಕರಣ…ಮೂವರು ಕಿಡಿಗೇಡಿಗಳು ಅಂದರ್.

Share

ಹುಣಸೂರು, ಮನೆ ಮುಂದೆ ನಿಲ್ಲಿಸಿದ್ದ ಕಾರ್,ಬೈಕ್ ಹಾಗೂ ಸೈಕಲ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಭಂಧಪಟ್ಟಂತೆ

ಚಂದ್ರೇಗೌಡ,ಕುಮಾರ ಹಾಗೂ ಮಂಜು ಎಂಬುವರನ್ನ ಬಂಧಿಸಲಾಗಿದೆ.ಹಳೇ ಧ್ವೇಷದಿಂದ ಆರೋಪಿಗಳು ಕೃತ್ಯವೆಸಗಿದ್ದಾರೆಂದು ತೆನಿಖೆಯಲ್ಲಿ ತಿಳಿದು ಬಂದಿದೆ.

ಅಕ್ಟೋಬರ್ 16 ರಂದು ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿ ಗ್ರಾಮದ ಮನುಕುಮಾರ್ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಾರ್,ಸ್ಕೂಟರ್ ಹಾಗೂ ಸೈಕಲ್ ಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ರು.ಘಟನೆಯಲ್ಲಿ ಸುಮಾರು 3.15 ಲಕ್ಷ ಮೌಲ್ಯದ ಪದಾರ್ಥಗಳು ಸುಟ್ಟು ನಾಶವಾಗಿತ್ತು.ಈ ಸಂಭಂಧ ಮನುಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು.

ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್,ಡಿವೈಎಸ್ಪಿ ಗೋಪಾಲ ಕೃಷ್ಣ ಮಾರ್ಗದರ್ಶನದಲ್ಲಿ ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ನೇತೃತ್ವದಲ್ಲಿ ತಂಡ ರಚಿಸಿ ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಲಾಗಿತ್ತು.ಸಿಸಿ ಕ್ಯಾಮರಾ ಚಲನವಲನಗಳನ್ನ ಪರಿಶೀಲಿಸಿದ ಪೊಲೀಸರು

ಡಿವೈಎಸ್ಪಿ ಗೋಪಾಲ ಕೃಷ್ಣ ರವರ ನೇತೃತ್ವದಲ್ಲಿ. ಇನ್ಸ್ಪೆಕ್ಟರ್ ಮುನಿಯಪ್ಪ ರವರ ಮುಂದಳಿಕೆ ಯಲ್ಲಿ. ಸಬ್ ಇನ್ಸ್ಪೆಕ್ಟರ್ ರಾಧಾ ರವರ ಟೀಮ್ ಪೊಲೀಸರು ಮಂಜು. ಹರೀಶ್.ಪ್ರಕಾಶ್. ಪಾಂಡು PSI. ಮಹಾದೇವಮ್ಮ. ಸೇರಿದಂತೆ. ಕಳ್ಳರನ್ನು ಪೊಲೀಸ್ ಅಧಿಕಾರಿಗಳು

ಆರೋಪಿಗಳನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ…


Share

ರಿಕ್ಷಾ ಡಿಕ್ಕಿ: ವಿದ್ಯಾರ್ಥಿಗೆ ಗಂಭೀರ ಗಾಯ ಚಾಲಕ, ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲು

Share

ಪಡುಬಿದ್ರಿ: ಅಟೋ ರಿಕ್ಷಾ ಚಾಲಕನ ನಿರ್ಲಕ್ಷದ ಚಾಲನೆಯಿಂದ ಅದಮಾರು ಪೂರ್ಣಪ್ರಜ್ಞಾ ಶಾಲೆಯ ಆಂಗ್ಲ ಮಾದ್ಯಮ ವಿಭಾಗದ ಒಂದನೇ ವಿದ್ಯಾರ್ಥಿಗೆ ರಿಕ್ಷಾ ಡಿಕ್ಕಿ ಹೊಡೆದಿದೆ. ಆವರಣದಲ್ಲಿ ನಡೆದ ಈ ಅಪಘಾತದಲ್ಲಿ ವಿದ್ಯಾರ್ಥಿಯ ಎರಡೂ ಕಾಲಿಗೂ ಗಂಭೀರ ಗಾಯಗಳಾಗಿವೆ.

ಗಾಯಗೊಂಡ ಬಾಲಕ ಎರ್ಮಾಳು ಬರ್ಪಣಿ ಸಂತೋಷ್ ಶೆಟ್ಟಿಯವರ ಪುತ್ರ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಭವಿನ್ ಶೆಟ್ಟಿ ಎಂದು ಗುರುತಿಸಲಾಗಿದೆ. ಸಂಜೆ ಶಾಲೆಯ ಅವಧಿ ಮುಗಿಯುತ್ತಿದ್ದಂತೆ ಮನೆಗೆ ಹೋಗಲು ಶಾಲೆಯ ಆವರಣದ ಒಳಗೆ ತಂದೆಯನ್ನು ಕಾಯುತ್ತಿರುವ ವೇಳೆ, ಚಾಲಕನೊಬ್ಬ ಅತೀ ವೇಗ ಹಾಗೂ
ಅಜಾಗರೂಕತೆಯಿಂದ ತನ್ನ ಅಟೋ ರಿಕ್ಷಾವನ್ನು ಮಕ್ಕಳು ಅಡ್ಡಾಡುತ್ತಿದ್ದಲ್ಲಿಗೆ, ಏಕಾಏಕಿ ನುಗ್ಗಿಸಿದ ಪರಿಣಾಮದಿಂದ, ತಂದೆಯನ್ನು ಕಾಯುತ್ತಿದ್ದ ಪುಟಾಣಿ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕನ ಎರಡೂ ಶಾಲೆಯ ಕಾಲುಗಳಿಗೂ ಗಂಭೀರ ಗಾಯಗಳಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಪಡೆಯುತಿದ್ದಾನೆ
ಈ ಅಪಘಾತಕ್ಕೆ ರಿಕ್ಷಾ ಚಾಲಕ ಸದಾನಂದ ದೇವಾಡಿಗ ಹಾಗೂ ಶಾಲೆಯ ಅವಧಿಯಲ್ಲಿ ಖಾಸಗಿ ವಾಹನಗಳನ್ನು ಆವರಣದೊಳಗೆ ಪ್ರವೇಶಿಸಲು ಅನುಮತಿಸಿದ ಆಡಳಿತ ಮಂಡಳಿಯ ವಿರುದ್ದ ಬಾಲಕನ ತಂದೆ ಸಂತೋಷ್ ಶೆಟ್ಟಿ ಬರ್ಪಾಣಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share