ಮೈಸೂರು ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಕನ್ನಕಳುವು ಮಾಡುವ ಆರೋಪಿಯನ್ನ ಬಂಧಿಸಲಾಗಿದೆ.ಆರೋಪಿಯಿಂದ 2,60,000/- ಮೌಲ್ಯದ ಚಿನ್ನಾ ಹಾಗೂ ಬೆಳ್ಳಿ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಪಾಲಂ ಗ್ರಾಮ ಮೂಲದ ನಿವಾಸಿಯಾಗಿದ್ದಾನೆ. ಕುವೆಂಪುನಗರ ಠಾಣಾ ವ್ಯಾಪ್ತಿಯ 03 ಕನ್ನ ಕಳುವು ಪ್ರಕರಣಗಳು ಪತ್ತೆಯಾಗಿದೆ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ದ ಹುಬ್ಬಳ್ಳಿ, ಮಂಗಳೂರು ಪೊಲೀಸ್ ಠಾಣೆಗಳು ಹಾಗೂ ಆಂಧ್ರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸ್ವತ್ತು ಕಳುವು ಪ್ರಕರಣಗಳು ದಾಖಲಾಗಿವೆ.
Category: ಅಪರಾಧ ಸುದ್ದಿ
ರೋಗಿಗಳಿಂದ ಹಣ ಪಡೆದ ಸರ್ಕಾರಿ ವೈದ್ಯ ಪ್ರಕರಣ…ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟೀಸ್…
ಹುಣಸೂರು ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡಿದ ಆರೋಪದ ಹಿನ್ನಲೆ ಹುಣಸೂರು ತಾಲೂಕು ಹನಗೂಡು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೇಮಂತ್ ಕುಮಾರ್ ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ನೋಟೀಸ್ ಜಾರಿಯಾಗಿದೆ.2 ದಿನಗಳ ಕಾಲಾವಕಾಶ ನೀಡಿದ್ದು ಸೂಕ್ತ ಸಮಜಾಯಿಷಿ ನೀಡುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.

ಡಾ.ಹೇಮಂತ್ ಕುಮಾರ್ ರವರು ರೋಗಿಗಳಿಂದ ಹಣ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಪ್ರಸಾರವಾಗಿತ್ತು.ಈ ಹಿನ್ನಲೆ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ವರದಕ್ಷಣೆಗಾಗಿ ಬ್ಯಾಂಕ್ ನೌಕರನಿಂದ ಹೆಂಡತಿಗೆ ದೈಹಿಕ ವಾಗಿ ಮಾನಸಿಕವಾಗಿ ಕಿರುಕುಳ
ಚಿಕ್ಕೋಡಿ ತಾಲ್ಲೂಕಿನ ಹಾಲಟ್ಟಿ ವಿದ್ಯಾನಗರದಲ್ಲಿ ನಡೆದ ಘಟನೆ
ಈ ಘಟನೆ ಕಳೆದ ಎರಡು ವರ್ಷಗಳಿಂದ ಈ ಹೆಣ್ಣು ಮಗಳಿಗೆ ವರದಕ್ಷಿಣೆ ಕಿರುಕುಳ ನಿಡುತ್ತಿದ್ದರೆ.
ಗಂಡ ಬಸವರಾಜ್ ಕೊಲ್ಕಾರ ಮತ್ತು ಮಾವ ಸದಾಶಿವ ಕೊಲ್ಕಾರ ಅತ್ತೆ ಕಮಲಾ ನಾದನಿ ಸೂಜಾತಾ ನಿಂದ ಹಲ್ಲೆಗೋಳಗಾದ ಪೂಜಾ ಕೊಲ್ಕಾರ
ಹೆಂಡತಿಮೇಲೆ ಮಧ್ಯರಾತ್ರಿ ಹಲ್ಲೆ ಮಾಡಿ ಹೊರಹಾಕಿದ ಗಂಡ ಬಸವರಾಜ್ ಮತ್ತು ಮಾವ ಅತ್ತೆ
ಬಸವರಾಜ್ ಕೊಲ್ಕಾರ ಎಂಬುವವನು ಡಿಸಿಸಿ ಬ್ಯಾಂಕ್ ನಿಪ್ಪಾಣಿಯಲ್ಲಿ ಕ್ಲರ್ಕ್ ಆಗಿರುತ್ತಾನೆ
ಬಸವರಾಜ್ ಗಂಡ ಮತ್ತು ಮಾವ ಸದಾಶಿವ ಅತ್ತೆ ಕಮಲಾ ಪೂಜಾಳನ್ನ ಅವಾಚ್ಚ ಶಬ್ದಗಳಿಂದ ಬೈಯುವುದು ಮತ್ತು ಕೊಲ್ಲುವ ಬೆದರಿಕೆ ಹಾಕುವುದು ಮತ್ತು ಹೊಡೆಯುವುದು ಮಾಡುತ್ತಾರೆ.
ಈಗ ಹೇಗೋ ನೆನ್ನೆ ಒಂದು ರಾತ್ರಿಯನ್ನು ಕಳೆದು ಈಗ ತಂದೆ ತಾಯಿಯರ ಜೊತೆ ಪೊಲೀಸರ ಮೊರೆ ಹೋಗಿರುತ್ತಾರೆ ಪೂಜಾ .
ಹೀಗಾಗಿ ಹಲ್ಲೆ ಗೋಳಗಾದ ಪೂಜಾ ಆಸ್ಪತ್ರೆಗೆ ದಾಖಲಾಗಿದ್ದು . ಚಿಕಿತ್ಸೆ ಪಡೆಯುತ್ತಿದ್ದಾಳೆ
ಮದುವೆ ಆಗಿ -6 ವರುಷ ಆಯ್ತು ಮದುವೆ ಯಾದ ನಂರತ ಕೇವಲ 9 ತಿಂಗಳು ಚನ್ನಾಗಿ ಇದ್ದರು ನಂತರ ಒಂದು ಹೆಣ್ಣು ಮಗು ಆದ ನಂತರ ಈಗ ಹೆಂಡತಿಗೆ ಗಂಡ ಮತ್ತು ಗಂಡನ ಮನೆಯವರಿಂದ ವರದಕ್ಷಣೆಗಾಗಿ ಕಿರುಕುಳ ಕೊಡುತ್ತಾಬಂದ್ದಿದಾರೆ …
ಆಗ ಪದೆ ಪದೆ ಹಿಗೇ ಆಗುತ್ತಿರುವದರಿಂದ
ಹಿಗಿರುವಾಗ ಒಂದು ಬಾರಿ ಪೋಲಿಸ್ complete ಮಾಡಿದ್ದು ನ್ಯಾಯ ಸಿಗದೆ ಇದ್ದಾಗ ಕೋರ್ಟ ಮಟ್ಟಲೆರಿದಳು ಬಳಿಕ ಒಂದು ವರ್ಷತನಕ ತನ್ನ ತಂದೆ ತಾಯಿ ಮನೆಯಲ್ಲಿ ವಾಸಿಸಿ ನಂತರ ನ್ಯಾಯಲದ ಆದೇಶದಂತೆ ನ್ಯಾಯಧಿಶರು ನಾನು ಇದ್ದೆನೆ ನೀನಗೆ ಏನು ಆಗುವುದಿಲ್ಲ ನೀನು ನಿನ್ನ ಗಂಡನ ಮನೆಗೆ ಎಲ್ಲವನ್ನು ಮರೆತು ಜಿವನವನ್ನು ಮಾಡಲು ಹೋಗು ಮತ್ತೆ ಇದೆ ರೀತಿ ಏನಾದರು ಕೀರುಕುಳ ಕೋಲೆ ಮಾಡಲು ಏನಾದರು ಪ್ರಯತ್ನಿಸಿದರೆ .ಮತ್ತೆ ಕೋರ್ಟ ಮೋರೆ ಬಾ ಎಂದು ಹೇಳಿ ಕಳಿಸಿದರು .. ತದ ನಂತ್ತರ ನ್ಯಾಯಾಲಯಕ್ಕೆ ಗೌರವ್ ಸಲ್ಲಿಸಿ ಜಡ್ಜ ಹೇಳಿದಂತೆ ಪೂಜಾ ಬಸವರಾಜ ಕೋಲ್ಕಾರ ತನ್ನ ಗಂಡನ ಮನೆಗೆ ಸಂಸಾರ ಮಾಡಲು ಹೋಗಿರುತ್ತಾಳೆ….
ಆದರೆ ಮತ್ತೆ ಹೋಗಿ ಏಳು ಎಂಟು ತಿಂಗಳು ಚನ್ನಾಗಿ ಸಂಸಾರ ನಡೆಸಿದ ಪೂಜಾ ಬಸವರಾಜ ಕೋಲ್ಕಾರ ಹೆಣ್ಣುಮಗಳಿಗೆ ದಿನಾಂಕ 23/12/2025 ರಂದು ಮತ್ತೆ ರಾತ್ರಿ 9:30 ,10 ಗಂಟೆಗೆ ಆ ಹೆಣ್ಣು ಮಗಳಿಗೆ ವಿನಾಕಾರಣ ವರದಕ್ಷಿಣೆ ಕೀರುಕಳು, ಹಾಗೂ ಮಾನಸಿಕ ವಾಗಿ ದೈಹಿಕ ವಾಗಿ ಹೋಡೆ ,ಬಡಿ ಮಾಡಿ ಪೂಜಾಳಗೆ ಚಿತ್ರ ಹಿಂಸೆಯನ್ನ ಕೊಟ್ಟಿದ್ದಾರೆ . ಇಷ್ಟೆ ಅಲ್ಲದೆ ಮಾವನಾದ ಸದಾಶಿವ ಕೊಲ್ಕಾರ ಮತ್ತು ಅತ್ತೆ ಪೂಜಾಳಿಗೆ ನಮ್ನ ಮನೆ ಬಿಟ್ಟು ಹೋಗ ಇಲ್ಲಿಂದ ನಡೆ ಇಲ್ಲಿಂದ ಎಂದು ಗಟಾರದಲ್ಲಿ ನೂಗಿಸಿ ಹೋಗಿ ಅವಾಚ್ಯ್ಚ ಶಬ್ದ ಗಳಿಂದ ನಿಂದಮಾಡಿದ್ದರೆ … ಹೀಗಾಗಿ ಮನನೋಂದು ಪೂಜಾ ಹೋರಗಡೆ 1ಗಂಟೆವರೆಗು ಹೋರಗಡೆ ಇದ್ದು ಬಾಗಿಲನ್ನು ತೆರೆಯರಿ ಎಂದು ಎಷ್ಟೋ ಬಾರಿ ಕಾಲು ಬಿದ್ದು ಬಾಗಿಲನ್ನು ತೆಗೆಯಿರಿ ನನಗೆ ಬಯವಾಗಿತ್ತಿದೆ ಎಂದು ಎಷ್ಷೋ ಬಾರಿ ಗೋಳಾಡಿ ಕೊಂಡು ಆದ ಬಳಿಕ ಮಧ್ಯರಾತ್ರಿ ,2 ಗಂಟೆ ಸುಮಾರಿಗೆ ಬಾಗಿಲವನ್ನು ತೆರೆದ್ದಾರೆ…
ಮತ್ತೆ ಬೇಳಕು ಹರಿಯುತ್ತಿದ್ದಂತೆ ಯಾವುದೋ ಒಂದು ನೇವ ಇಟ್ಟುಕೋಂಡು ರಾತ್ರಿ ಎಲ್ಲಿ ಹೋಗಿದ್ದಿ ಯಾರ ಜೋತೆ ಹೋಗಿದ್ದಿ ಯಾವನ್ ಜೋತೆ ಓಡಿ ಹೋಗಿದ್ದಿ ಎಂದು ಸುಳ್ಳುಗಳ್ಳನ್ನ ಸೃಷ್ಟಿ ಮಾಡಿ ಪೂಜಾಳನ್ನ ಬಡಿ ಹೋಡಿ ಬಡಿ ಮಾಡಿ ಕೊಲ್ಲುವ ಪ್ರಯತ್ನ ಮಾಡಿದ್ದಾರೆ ಆಗ ಪೂಜಾ ತಕ್ಷಣವೇ ತನ್ನ ತಂದೆಗೆ ಪೋನು ಮಾಡಿದ್ದಾಳೆ . ಇದನ್ನ ಕೇಳಿ ತಂದೆ ಗಾಬೆರಿ ಗೊಂಡು ಮಗಳ ಮನೆಗೆ ತಕ್ಷಣವೆ ದಾವಿಸಿ ಮಗಳನ್ನು ಉಳಿಸಿಕೋಳಳ್ಳು ಪ್ರಯತ್ನಿಸಿದಾಗ ಪೂಜಾಳ ತಂದೆ ಮೇಲೆ ಕೂಡ ಮಾವನಾದ ಶದಾಸಿವ, ಬಸವರಾಜ್ ಮಾರಣಾಂತಿಕ ವಾಗಿ ಮಾರಕ ಅಸ್ತ್ರ ಕಲ್ಲುಗಳಿಂದ ಹೋಡೆ ಬಡಿ ಮಾಡಿಮಾಡಿದ್ದರೆ…..
ತದನಂತರ ಇದಾದ ಭಳಿಕ ತಕ್ಷಣವೇ ಸ್ಥಳೀಯ ಪೋಲಿಸ್ ಠಾಣೆಯ ಮೋರೆ ಹೋಗಿದ್ದಾರೆ….
ಹೆಂಡತಿಮೇಲೆ ಮಧ್ಯರಾತ್ರಿ ಹಲ್ಲೆ ಮಾಡಿ ಹೊರಹಾಕಿದ ಗಂಡ ಬಸವರಾಜ್ ಮತ್ತು ಮಾವ ಅತ್ತೆ
ಬಸವರಾಜ್ ಕೊಲ್ಕಾರ ಎಂಬುವವನು ಡಿಸಿಸಿ ಬ್ಯಾಂಕ್ ನಿಪ್ಪಾಣಿಯಲ್ಲಿ ಕ್ಲರ್ಕ್ ಆಗಿರುತ್ತಾನೆ
ಬಸವರಾಜ್ ಮತ್ತು ಮಾವ ಸದಾಶಿವ ಪೂಜಾಳನ್ನ ಅವಾಚ್ಚ ಶಬ್ದಗಳಿಂದ ಬೇಯುವುದು ಮತ್ತು ಕೊಲ್ಲುವ ಬೆದರಿಕೆ ಹಾಕುವುದು ಮತ್ತು ಹೊಡೆಯುವುದು ಮಾಡುತ್ತಾರೆ.
ಈಗ ಹೇಗೋ ನೆನ್ನೆಯ ರಾತ್ರಿಯನ್ನು ಕಳೆದು ಈಗ ತಂದೆ ತಾಯಿಯರ ಜೊತೆ ಪೊಲೀಸರ ಮೊರೆ ಹೋಗಿರುತ್ತಾರೆ ಪೂಜಾ
ಹಾಡುಹಗಲೇ ರೌಡಿಶೀಟರ್ ಭೀಕರ ಕೊ…ದಸರಾ ವಸ್ತು ಪ್ರದರ್ಶನ ಬಳಿ ಘಟನೆ…ಯುವಕರ ತಂಡದಿಂದ ಕೃತ್ಯ…ಕಾರ್ತಿಕ್ ಕೊ ಗೂ ಈ ಘಟನೆಗೂ ಸಂಭಂಧವಿದೆಯೇ…?
ಮೈಸೂರು ಹಾಡುಹಗಲೇ ಯುವಕರ ತಂಡವೊಂದು ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಹತ್ಯೆಗೈದ ಘಟನೆ ಮೈಸೂರಿನ ದಸರಾ ವಸ್ತುಪ್ರದರ್ಶನ ಬಳಿ ನಡೆದಿದೆ.ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್@ಮುಖಾಮುಚ್ಚಿ@ಗಿಲಿಗಿಲಿ ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ವ್ಯಕ್ತಿಯ ಮೇಲೆ ಲಾಂಗ್ ಗಳಿಂದ ದಾಳಿ ನಡೆಸಿದ ಯುವಕರ ಗುಂಪು ಕಾರಿನಿಂದ ಹೊರಗೆ ಎಳೆದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿ ಪರಾರಿಯಾಗಿದೆ.ತಲೆ ಕೈ ಕಾಲು ಹಾಗೂ ದೇಹದ ಭಾಗಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆ ಆಗಿತ್ತು. ಕಾರ್ತಿಕ್ ಗೂ ಹಾಗೂ ಇಂದು ಕೊಲೆಯಾದ ವೆಂಕಟೇಶ್ ಗೂ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ.ಒಂದು ಮೂಲದ ಪ್ರಕಾರ ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರವಿತ್ತು ಎನ್ನಲಾಗಿದೆ.ಕಾರ್ತಿಕ್ ಕಡೆಯ ಗುಂಪು ದಾಳಿ ನಡೆಸಿ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ.ಕಾರ್ತಿಕ್ ಕೊಲೆಗೆ ಈ ಹತ್ಯೆ ರಿವೆಂಜ್ ಎಂದು ಹೇಳಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿದ್ದಾರೆ.ಸ್ಥಳಕ್ಕೆ ನಜರಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ…
ಡೆತ್ ನೋಟ್ ಬರೆದಿಟ್ಟು ಯುವತಿ ಸಾವು
ಹುಣಸೂರು, ತಾಲೂಕಿನ ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ರವರ ಪುತ್ರಿ ದೀಪಿಕಾ
ಹುಣಸೂರು ನಗರದ ತೂಗು ಸೇತುವೆಯ ಬಳಿ ಲಕ್ಷ್ಮಣ್ ತೀರ್ಥ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಈಕೆ ಜಯಲಕ್ಷ್ಮಿಪುರಂ ನಲ್ಲಿರುವ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದು ನನ್ನ ಆತ್ಮಹತ್ಯೆಗೆ ನಾನೆ ಕಾರಣ ಎಂದು ಬರೆದಿರುವ ಡೆತ್ ನೋಟ್ ಜಾಲತಾಣದಲ್ಲಿ ಹರಿದಾಡುತ್ತಿದೆ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಲೆ ಕೈಕಾಲುಗಳಿಲ್ಲದ ಅಪರಿಚಿತ ವ್ಯಕ್ತಿಯ ಮುಂಡ ಪತ್ತೆ…
ಹುಣಸೂರು ತಾಲೂಕು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಯರಹಳ್ಳಿ ಗ್ರಾಮದ ಏತನೀರಾವರಿ ಹೊಳೆಯಲ್ಲಿ ತಲೆ ಕೈಕಾಲುಗಳಿಲ್ಲದ ಅಪರಿಚಿತ ವ್ಯಕ್ತಿಯ ಮುಂಡ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಸಾರ್ವಜನಿಕರು ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ ಪಿ. ವಿಷ್ಣುವರ್ಧನ್. ಡಿವೈಎಸ್ಪಿ. ಗೋಪಾಲಕೃಷ್ಣ. ಸಂತೋಷ್ ಕಷ್ಯಪ್. ಸಬ್ ಇನ್ಸ್ಪೆಕ್ಟರ್ ಪೂಜಾ. ಭೇಟಿ ನೀಡಿದ್ದಾರೆ. ಮೃತರ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.
ಒರಿಸ್ಸಾ ಮೂಲದ ಕಾರ್ಮಿಕ ಅನುಮಾನಾಸ್ಪದ ಸಾವು
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗಂಗೆ ಕೊಳ್ಳದಲ್ಲಿ, ಮೀನುಗಾರಿಕೆಗೆ ಬಂದಿದ್ದ ಒರಿಸ್ಸಾ ರಾಜ್ಯದ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.ರಾಜಸ್ಥಾನದ ಸಂಬಲಪುರದ ನಿವಾಸಿ ನಿರಂಜನ ಎಂಬಾತ ಮೃತಪಟ್ಟ ಕಾರ್ಮಿಕ ಎನ್ನಲಾಗಿದ್ದು ಮೀನುಗಾರಿಕೆಗಾಗಿ ಒರಿಸ್ಸಾದಿಂದ ಗೋಕರ್ಣಕ್ಕೆ ಬಂದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ದಾವಿಸಿದ್ದು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಲಾಗಿದೆ.
ಈ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪತ್ನಿ ಮಗನಿಂದ ತಂದೆ ಹತ್ಯೆ.ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ.
ಮೈಸೂರು ಎರಡನೇ ಪತ್ನಿ ಮಗನಿಂದಲೇ ತಂದೆ ಭೀಕರವಾಗಿ ಕೊಲೆಯಾದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿಕಾಲೋನಿಯಲ್ಲಿ ನಡೆದಿದೆ.ಮುತೀಬ್(36) ಕೊಲೆಯಾದ ವ್ಯಕ್ತಿ.ಎರಡನೇ ಪತ್ನಿ ಮಗ ಮಾತೀನ್ ತಂದೆಯನ್ನೇ ಕೊಂದ ಮಗ.ತನ್ನ ತಾಯಿಯನ್ನ ಎರಡನೇ ಮದುವೆ ಆಗಿದ್ದ ಮುತೀಬ್ ಜೊತೆ ಆಗಾಗ ಮತೀನ್ ಗಲಾಟೆ ಮಾಡುತ್ತಿದ್ದ.ತಾಯಿಯನ್ನ ಮದುವೆ ಆಗಿದ್ದು ಮತೀನ್ ಇಷ್ಟ ಇರಲಿಲ್ಲವೆಂದು ಹೇಳಲಾಗಿದೆ.ಈ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಮುತೀಬ್ ಜೊತೆ ಮತೀನ್ ಗಲಾಟೆ ಮಾಡಿದ್ದ.ನಂತರ ಇಬ್ಬರ ನಡುವೆ ರಾಜಿ ಆಗಿತ್ತು.ನಿನ್ನೆ ತಡರಾತ್ರಿ ಮುತೀಬ್ ಹೋಟೆಲ್ ನಿಂದ ತೆರಳಿದ್ದಾರೆ.ಮುತೀಬ್ ನ ಮತೀನ್ ಹಿಂಬಾಲಿಸಿ ಹೋಗಿ ಸಾತಗಳ್ಳಿಯಲ್ಲಿರುವ VTO ಕಾಲೇಜ್ ಬಳಿ ಇರುವ ಬಾರ್ ಬಳಿ ನಿಂತಿದ್ದಾಗ ಅಟ್ಯಾಕ್ ಮಾಡಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದಾನೆ.ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಮತೀನ್ ಬಂಧನಕ್ಕೆ ಜಾಲ ಬೀಸಿದ್ದಾರೆ.
ಅಪಾಯಕಾರಿ ಸ್ಟಂಟ್ಸ್. ಯುವಕ ಬಂಧನ. ಹೋಂಡಾ ಡಿಯೋ ಸೀಜ್.
ಮೈಸೂರು ಹುಣಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಭೀತಿ ಸೃಷ್ಟಿಸುವಂತೆ ಸ್ಕೂಟರ್ ನಲ್ಲಿ ಅಪಾಯಕಾರಿ ಸ್ಟಂಟ್ಸ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ಇಲವಾಲ ಪೊಲೀಸರು ಭಂಧಿಸಿದ್ದಾರೆ.ಮೈಸೂರಿನ ಮೇಟಗಳ್ಳಿ ಬಡಾವಣೆ ಏಕಲವ್ಯನಗರದ ನಿವಾಸಿ ಪ್ರಜ್ವಲ್ (22) ಬಂಧಿತ ಯುವಕ.ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳನ್ನ ಅಪ್ ಲೋಡ್ ಮಾಡುವ ಖಾತೆಗಳ ಮೇಲೆ ನಿಗಾ ಇಡುವ ಜವಾಬ್ದಾರಿ ಹೊತ್ತ ಪೊಲೀಸ್ ಸಿಬ್ಬಂದಿ ಅಭಿಷೇಕ್ ರವರು ಪ್ರಜ್ವಲ್ ಅಪ್ ಲೋಡ್ ಮಾಡಿರುವ ಫೋಟೋಗಳನ್ನ ಪತ್ತೆಹಚ್ಚಿದ್ದಾರೆ.

ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನಲೆ ಇನ್ಸ್ಪೆಕ್ಟರ್ ಗಮನಕ್ಕೆ ತಂದಿದ್ದಾರೆ.ಕೂಡಲೇ ಎಚ್ಚೆತ್ತ ಪೊಲೀಸರು ಹೋಂಡಾ ಡಿಯೋ ವಾಹನ ನೊಂದಣಿ ಸಂಖ್ಯೆ KA-12 S 5574 ಯಲ್ಲಿ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಪ್ರಜ್ವಲ್ ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.ಸ್ಟಂಟ್ಸ್ ಗೆ ಬಳಸಿದ ಹೋಂಡಾ ಡಿಯೋ ವಶಕ್ಕೆ ಪಡೆದು ಪ್ರಜ್ವಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 3.43 ಲಕ್ಷ ಕೋಟಿ ರೂ. ಹೂಡಿಕೆ
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 13 ಕಂಪನಿಗಳ ಜತೆ ಕ್ರೆಡಲ್ ನಿಂದ ಒಪ್ಪಂದಕ್ಕೆ ಸಹಿ 78,253 ಉದ್ಯೋಗ ಸೃಷ್ಟಿಬೆಂಗಳೂರು, ಫೆ. 11, 2025: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿದೆ.ಮಂಗಳವಾರ ಸಮಾವೇಶದ ಉದ್ಘಾಟನೆ ಬಳಿಕ ನವೀರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿದ ಸಂಸ್ಥೆಗಳ ಮುಖ್ಯಸ್ಥರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಒಪ್ಪಂದ ಪತ್ರ ಸ್ವೀಕರಿಸಿದರು. ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು ಉಪಸ್ಥಿತರಿದ್ದರು. ನವೀಕರಿಸಹುದಾದ ಇಂಧನ ಕ್ಷೇತ್ರದಲ್ಲಿ ಒಟ್ಟು 13 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು, ಒಟ್ಟು 3,42,925 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.ಪ್ರಮುಖ ಹೂಡಿಕೆಗಳು:ಜೆಎಸ್ ಡಬ್ಲ್ಯು ನಿಯೋ ಎನರ್ಜಿ ಲಿಮಿಟೆಡ್- 56 ಸಾವಿರ ಕೋಟಿ ರೂ, ರಿನ್ಯೂ ಪ್ರೈ. ಲಿ. ಮತ್ತು ಟಾಟಾ ಪವರ್ ರಿನಿವೇಬಲ್ ಎನರ್ಜಿ ಲಿಮಿಟೆಡ್ ಗಳು ತಲಾ 50 ಸಾವಿರ ಕೋಟಿ ರೂ, ಸೆರೆಂಟಿಕಾ ರಿನಿವೇಬಲ್ ಇಂಡಿಯಾ ಪ್ರೈ. ಲಿ.- 43,975 ಕೋಟಿ ರೂ., ಮಹೀಂದ್ರ ಸಸ್ಟೆನ್ ಪ್ರೈ.ಲಿ.- 35,000 ಕೋಟಿ ರೂ. ಸೇರಿದಂತೆ ವಿವಿಧ ಕಂಪನಿಗಳು ಒಟ್ಟಾರೆ 3,42,925 ಕೋಟಿ ರೂ. ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.
