ಮೈಸೂರು ಹಾಡುಹಗಲೇ ಯುವಕರ ತಂಡವೊಂದು ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಹತ್ಯೆಗೈದ ಘಟನೆ ಮೈಸೂರಿನ ದಸರಾ ವಸ್ತುಪ್ರದರ್ಶನ ಬಳಿ ನಡೆದಿದೆ.ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್@ಮುಖಾಮುಚ್ಚಿ@ಗಿಲಿಗಿಲಿ ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ವ್ಯಕ್ತಿಯ ಮೇಲೆ ಲಾಂಗ್ ಗಳಿಂದ ದಾಳಿ ನಡೆಸಿದ ಯುವಕರ ಗುಂಪು ಕಾರಿನಿಂದ ಹೊರಗೆ ಎಳೆದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿ ಪರಾರಿಯಾಗಿದೆ.ತಲೆ ಕೈ ಕಾಲು ಹಾಗೂ ದೇಹದ ಭಾಗಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆ ಆಗಿತ್ತು. ಕಾರ್ತಿಕ್ ಗೂ ಹಾಗೂ ಇಂದು ಕೊಲೆಯಾದ ವೆಂಕಟೇಶ್ ಗೂ ನಿಕಟ ಸಂಪರ್ಕವಿತ್ತು ಎನ್ನಲಾಗಿದೆ.ಒಂದು ಮೂಲದ ಪ್ರಕಾರ ಕಾರ್ತಿಕ್ ಕೊಲೆಗೆ ವೆಂಕಟೇಶ್ ಸಹಕಾರವಿತ್ತು ಎನ್ನಲಾಗಿದೆ.ಕಾರ್ತಿಕ್ ಕಡೆಯ ಗುಂಪು ದಾಳಿ ನಡೆಸಿ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ.ಕಾರ್ತಿಕ್ ಕೊಲೆಗೆ ಈ ಹತ್ಯೆ ರಿವೆಂಜ್ ಎಂದು ಹೇಳಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿದ್ದಾರೆ.ಸ್ಥಳಕ್ಕೆ ನಜರಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ…
Category: ಅಪರಾಧ ಸುದ್ದಿ
ಡೆತ್ ನೋಟ್ ಬರೆದಿಟ್ಟು ಯುವತಿ ಸಾವು
ಹುಣಸೂರು, ತಾಲೂಕಿನ ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ರವರ ಪುತ್ರಿ ದೀಪಿಕಾ
ಹುಣಸೂರು ನಗರದ ತೂಗು ಸೇತುವೆಯ ಬಳಿ ಲಕ್ಷ್ಮಣ್ ತೀರ್ಥ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಈಕೆ ಜಯಲಕ್ಷ್ಮಿಪುರಂ ನಲ್ಲಿರುವ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದು ನನ್ನ ಆತ್ಮಹತ್ಯೆಗೆ ನಾನೆ ಕಾರಣ ಎಂದು ಬರೆದಿರುವ ಡೆತ್ ನೋಟ್ ಜಾಲತಾಣದಲ್ಲಿ ಹರಿದಾಡುತ್ತಿದೆ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಲೆ ಕೈಕಾಲುಗಳಿಲ್ಲದ ಅಪರಿಚಿತ ವ್ಯಕ್ತಿಯ ಮುಂಡ ಪತ್ತೆ…
ಹುಣಸೂರು ತಾಲೂಕು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಯರಹಳ್ಳಿ ಗ್ರಾಮದ ಏತನೀರಾವರಿ ಹೊಳೆಯಲ್ಲಿ ತಲೆ ಕೈಕಾಲುಗಳಿಲ್ಲದ ಅಪರಿಚಿತ ವ್ಯಕ್ತಿಯ ಮುಂಡ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಸಾರ್ವಜನಿಕರು ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ ಪಿ. ವಿಷ್ಣುವರ್ಧನ್. ಡಿವೈಎಸ್ಪಿ. ಗೋಪಾಲಕೃಷ್ಣ. ಸಂತೋಷ್ ಕಷ್ಯಪ್. ಸಬ್ ಇನ್ಸ್ಪೆಕ್ಟರ್ ಪೂಜಾ. ಭೇಟಿ ನೀಡಿದ್ದಾರೆ. ಮೃತರ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.
ಒರಿಸ್ಸಾ ಮೂಲದ ಕಾರ್ಮಿಕ ಅನುಮಾನಾಸ್ಪದ ಸಾವು
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗಂಗೆ ಕೊಳ್ಳದಲ್ಲಿ, ಮೀನುಗಾರಿಕೆಗೆ ಬಂದಿದ್ದ ಒರಿಸ್ಸಾ ರಾಜ್ಯದ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.ರಾಜಸ್ಥಾನದ ಸಂಬಲಪುರದ ನಿವಾಸಿ ನಿರಂಜನ ಎಂಬಾತ ಮೃತಪಟ್ಟ ಕಾರ್ಮಿಕ ಎನ್ನಲಾಗಿದ್ದು ಮೀನುಗಾರಿಕೆಗಾಗಿ ಒರಿಸ್ಸಾದಿಂದ ಗೋಕರ್ಣಕ್ಕೆ ಬಂದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ದಾವಿಸಿದ್ದು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ಶವ ರವಾನಿಸಲಾಗಿದೆ.
ಈ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪತ್ನಿ ಮಗನಿಂದ ತಂದೆ ಹತ್ಯೆ.ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ.
ಮೈಸೂರು ಎರಡನೇ ಪತ್ನಿ ಮಗನಿಂದಲೇ ತಂದೆ ಭೀಕರವಾಗಿ ಕೊಲೆಯಾದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿಕಾಲೋನಿಯಲ್ಲಿ ನಡೆದಿದೆ.ಮುತೀಬ್(36) ಕೊಲೆಯಾದ ವ್ಯಕ್ತಿ.ಎರಡನೇ ಪತ್ನಿ ಮಗ ಮಾತೀನ್ ತಂದೆಯನ್ನೇ ಕೊಂದ ಮಗ.ತನ್ನ ತಾಯಿಯನ್ನ ಎರಡನೇ ಮದುವೆ ಆಗಿದ್ದ ಮುತೀಬ್ ಜೊತೆ ಆಗಾಗ ಮತೀನ್ ಗಲಾಟೆ ಮಾಡುತ್ತಿದ್ದ.ತಾಯಿಯನ್ನ ಮದುವೆ ಆಗಿದ್ದು ಮತೀನ್ ಇಷ್ಟ ಇರಲಿಲ್ಲವೆಂದು ಹೇಳಲಾಗಿದೆ.ಈ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಮುತೀಬ್ ಜೊತೆ ಮತೀನ್ ಗಲಾಟೆ ಮಾಡಿದ್ದ.ನಂತರ ಇಬ್ಬರ ನಡುವೆ ರಾಜಿ ಆಗಿತ್ತು.ನಿನ್ನೆ ತಡರಾತ್ರಿ ಮುತೀಬ್ ಹೋಟೆಲ್ ನಿಂದ ತೆರಳಿದ್ದಾರೆ.ಮುತೀಬ್ ನ ಮತೀನ್ ಹಿಂಬಾಲಿಸಿ ಹೋಗಿ ಸಾತಗಳ್ಳಿಯಲ್ಲಿರುವ VTO ಕಾಲೇಜ್ ಬಳಿ ಇರುವ ಬಾರ್ ಬಳಿ ನಿಂತಿದ್ದಾಗ ಅಟ್ಯಾಕ್ ಮಾಡಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದಾನೆ.ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಮತೀನ್ ಬಂಧನಕ್ಕೆ ಜಾಲ ಬೀಸಿದ್ದಾರೆ.
ಅಪಾಯಕಾರಿ ಸ್ಟಂಟ್ಸ್. ಯುವಕ ಬಂಧನ. ಹೋಂಡಾ ಡಿಯೋ ಸೀಜ್.
ಮೈಸೂರು ಹುಣಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ಭೀತಿ ಸೃಷ್ಟಿಸುವಂತೆ ಸ್ಕೂಟರ್ ನಲ್ಲಿ ಅಪಾಯಕಾರಿ ಸ್ಟಂಟ್ಸ್ ಮಾಡಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದ ಯುವಕನನ್ನ ಇಲವಾಲ ಪೊಲೀಸರು ಭಂಧಿಸಿದ್ದಾರೆ.ಮೈಸೂರಿನ ಮೇಟಗಳ್ಳಿ ಬಡಾವಣೆ ಏಕಲವ್ಯನಗರದ ನಿವಾಸಿ ಪ್ರಜ್ವಲ್ (22) ಬಂಧಿತ ಯುವಕ.ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳನ್ನ ಅಪ್ ಲೋಡ್ ಮಾಡುವ ಖಾತೆಗಳ ಮೇಲೆ ನಿಗಾ ಇಡುವ ಜವಾಬ್ದಾರಿ ಹೊತ್ತ ಪೊಲೀಸ್ ಸಿಬ್ಬಂದಿ ಅಭಿಷೇಕ್ ರವರು ಪ್ರಜ್ವಲ್ ಅಪ್ ಲೋಡ್ ಮಾಡಿರುವ ಫೋಟೋಗಳನ್ನ ಪತ್ತೆಹಚ್ಚಿದ್ದಾರೆ.

ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ ಹಿನ್ನಲೆ ಇನ್ಸ್ಪೆಕ್ಟರ್ ಗಮನಕ್ಕೆ ತಂದಿದ್ದಾರೆ.ಕೂಡಲೇ ಎಚ್ಚೆತ್ತ ಪೊಲೀಸರು ಹೋಂಡಾ ಡಿಯೋ ವಾಹನ ನೊಂದಣಿ ಸಂಖ್ಯೆ KA-12 S 5574 ಯಲ್ಲಿ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಪ್ರಜ್ವಲ್ ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.ಸ್ಟಂಟ್ಸ್ ಗೆ ಬಳಸಿದ ಹೋಂಡಾ ಡಿಯೋ ವಶಕ್ಕೆ ಪಡೆದು ಪ್ರಜ್ವಲ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 3.43 ಲಕ್ಷ ಕೋಟಿ ರೂ. ಹೂಡಿಕೆ
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 13 ಕಂಪನಿಗಳ ಜತೆ ಕ್ರೆಡಲ್ ನಿಂದ ಒಪ್ಪಂದಕ್ಕೆ ಸಹಿ 78,253 ಉದ್ಯೋಗ ಸೃಷ್ಟಿಬೆಂಗಳೂರು, ಫೆ. 11, 2025: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿದೆ.ಮಂಗಳವಾರ ಸಮಾವೇಶದ ಉದ್ಘಾಟನೆ ಬಳಿಕ ನವೀರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿದ ಸಂಸ್ಥೆಗಳ ಮುಖ್ಯಸ್ಥರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಒಪ್ಪಂದ ಪತ್ರ ಸ್ವೀಕರಿಸಿದರು. ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು ಉಪಸ್ಥಿತರಿದ್ದರು. ನವೀಕರಿಸಹುದಾದ ಇಂಧನ ಕ್ಷೇತ್ರದಲ್ಲಿ ಒಟ್ಟು 13 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು, ಒಟ್ಟು 3,42,925 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.ಪ್ರಮುಖ ಹೂಡಿಕೆಗಳು:ಜೆಎಸ್ ಡಬ್ಲ್ಯು ನಿಯೋ ಎನರ್ಜಿ ಲಿಮಿಟೆಡ್- 56 ಸಾವಿರ ಕೋಟಿ ರೂ, ರಿನ್ಯೂ ಪ್ರೈ. ಲಿ. ಮತ್ತು ಟಾಟಾ ಪವರ್ ರಿನಿವೇಬಲ್ ಎನರ್ಜಿ ಲಿಮಿಟೆಡ್ ಗಳು ತಲಾ 50 ಸಾವಿರ ಕೋಟಿ ರೂ, ಸೆರೆಂಟಿಕಾ ರಿನಿವೇಬಲ್ ಇಂಡಿಯಾ ಪ್ರೈ. ಲಿ.- 43,975 ಕೋಟಿ ರೂ., ಮಹೀಂದ್ರ ಸಸ್ಟೆನ್ ಪ್ರೈ.ಲಿ.- 35,000 ಕೋಟಿ ರೂ. ಸೇರಿದಂತೆ ವಿವಿಧ ಕಂಪನಿಗಳು ಒಟ್ಟಾರೆ 3,42,925 ಕೋಟಿ ರೂ. ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.
ರೇವಗ್ಗಿ ಗುಡ್ಡದಲ್ಲಿ ಗೋವು ರಕ್ಷಕರಿಂದ ಗೋವುಗಳ ಮಾರಣಹೋಮ
ಕಾಳಗಿ:ಧಾರ್ಮಿಕ ದತ್ತಿ ಇಲಾಖೆವ್ಯಾಪ್ತಿಗೆ ಬರುವ ತಾಲೂಕಿನ ಸುಕ್ಷೇತ್ರ ರೇವಗ್ಗಿ(ರಟಕಲ್) ಶ್ರೀರೇವಣಸಿದ್ದೇಶ್ವರ ದೇವಸ್ಥಾನದ ಗೋ..ಶಾಲೆಯಲ್ಲಿರುವ ನೂರಾರು ಗೋವುಗಳು ತಿನ್ನಲು ಮೇವು, ಕುಡಿಯಲು ನೀರು ಹಾಗೂ ಸೂಕ್ತವಾದ ಉಪಚಾರವಿಲ್ಲದೆ ನರಳಿ-ನರಳಿ ಸಾವನ್ನಪ್ಪುತ್ತಿದ್ದರೂ ಕೂಡಾ ಸಂಬಂಧಪಟ್ಟ ಯಾವ ಅಧೀಕಾರಿಗಳು ಸಹ ಇತ್ತಕಡೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಈ ಭಾಗದ ಬಹು ದೋಡ್ಡ ಧಾರ್ಮಿಕ ಕ್ಷೇತ್ರವಾಗಿರುವ ಗುಡ್ಡದ ಗುರುವಿನ ಆಶ್ರಯ ತಾಣದಲ್ಲಿ ಅಪಾರ ಭಕ್ತರ ಶಕ್ತಿಯ ಪ್ರತೀಕವಾಗಿ ಅನ್ನ ದಾಸೋಹ, ಕುಡಿಯುವ ನೀರು, ಮದುವೆ-ಮುಂಜಿಗಳಿಗಾಗಿ ಸುಂದರವಾದ ಕಲ್ಯಾಣ ಮಂಟಪಗಳು ಸೇರಿ ಅಪಾರವಾದ ನೈಸರ್ಗಿಕ ಸಂಪತ್ತುಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸೂಕ್ತವಾದ ಆಡಳಿತ ವರ್ಗದ ಕೊರತೆಯಿಂದಾಗಿ ಇರುವ ಸಂಪತ್ತನ್ನು ಆದಷ್ಟು ಕೊಳ್ಳೆ ಹೊಡೆಯುವ ವೇದಿಕೆಯಾಗಿದೆ ಎಂದು ಇಲ್ಲಿಯ ಸಾರ್ವಜನಿಕರು ಆರೋಪಿಸಿದ್ದಾರೆ. ಜಮೀನಿದ್ದರೂ ಜಾನುವಾರಗಳ ರಕ್ಷಣೆಯಿಲ್ಲ: ದೇವಸ್ಥಾನಕ್ಕೆ ಸಂಬಂಧಿಸಿದ 28ಎಕರೆ ಜಮೀನಿದ್ದರೂ ಕೂಡಾ ಇಲ್ಲಿಯ ಜಾನುವಾರುಗಳಿಗೆ ರಕ್ಷಣೆ ಇಲ್ಲದಾಗಿದೆ.
ಸೂಕ್ತ ಉಪಚಾರವಿಲ್ಲದ ಜಾನುವಾರುಗಳು ಪ್ರತಿನಿತ್ಯ ನರಳಿ-ನರಳಿ ಪ್ರಾಣ ಬಿಡುತ್ತಿವೆ.
ಗೋವುಗಳ ಜೀವಕ್ಕೆ ಬೆಲೆಯಿಲ್ಲದಾಗಿದೆ.
ಗೋವುಗಳ ಪಾಲನೆ-ಪೋಷಣೆ ಇಲ್ಲದೆ ಜೀವಂತವಾಗಿರುವ ಗೋವುಗಳನ್ನು ನಾಯಿ-ನರಿಗಳು ಹರಿದು ತಿನ್ನುತ್ತಿರುವುದನ್ನು ನೋಡಿದರೆ ನೋಡುಗರ ಕರುಳು ಹಿಂಡುವಂತಹ ಘೋರ ದೃಶ್ಯ ನಿರ್ಮಾಣವಾಗಿದೆ. ಗೋವುಗಳ ಮರಣ ಹೋಮಕ್ಕಾಗಿ ಗುಂಡಿಗಳ ನಿರ್ಮಾಣ:ಪ್ರತಿನಿತ್ಯ ಸಾವನ್ನಪ್ಪುತ್ತಿರುವ ಗೋವುಗಳಿಗಾಗಿ ಮುಂಚಿತವಾಗಿಯೇ ತಗ್ಗು-ಗುಂಡಿಗಳನ್ನು ಹೊಡೆಯಿಸುತ್ತಿರುವುದು ಬಹುವಿಚಿತ್ರವಾಗಿದೆ.
ಕ್ಷಿಣಿಸುತ್ತಿರುವ ಗೋವುಗಳ ಸಂಖ್ಯೆ:ಕಳೆದೆರಡು ವರ್ಷಗಳ ಹಿಂದೆ 350ಗೋವುಗಳಿದ್ದವು. ದೇವಸ್ಥಾನಕ್ಕೆ ಪ್ರತಿನಿತ್ಯ 2ರಿಂದ 3 ಗೋವುಗಳು ಬಿಟ್ಟು ಹೋಗುತ್ತಾರೆ.
ವಿಶೇಷವಾಗಿ ಪ್ರತಿವರ್ಷ ಮಾರ್ಚ್ ತಿಂಗಳಿಂದ ಜೂನ್ ತಿಂಗಳವರೆಗೆ ಪ್ರತಿನಿತ್ಯ 15 ರಿಂದ 20 ಗೋವುಗಳನ್ನು ಬಿಡುವ ಭಕ್ತರು ಈ ದೇವಸ್ಥಾನಕ್ಕೆ ಇದ್ದಾರೆ.
ಇಷ್ಠಿದ್ದು, ಗೋವುಗಳ ಸಂಖ್ಯೆ ಯಥಾಸ್ಥಿತಿ ಕಾಣುತ್ತರುವುದು ಭಕ್ತರಲ್ಲಿ ಸಂಶಯವನ್ನುಂಟುಮಾಡಿದೆ.ದೇವಸ್ಥಾನದ ವಾರ್ಷಿಕ ಆದಾಯ ಎರಡು ಕೋಟಿ: ಈ ದೇವಸ್ಥಾನದ ವಾರ್ಷಿಕ ಆದಾಯ ಎರಡು ಕೋಟಿಯಷ್ಠಿದ್ದರೂ ಕೂಡ ಅಭಿವೃದ್ಧಿಯಾಗದಿರುವುದು ಏಕೆ ಎನ್ನುವ ಪ್ರಶ್ನೆ ಸದ್ಭಕ್ತರದ್ದಾಗಿದೆ. 3000ಟ್ರೀಪ್ ಗೊಬ್ಬರ ಮಾರಾಟ: ದೇವಸ್ಥಾನದ 28ಎಕರೆ ಜಮೀನಿಗೆ ಗೋವುಗಳ ಗೊಬ್ಬರ ಹಾಕದೆ ಬೆರೆಯವರಿಗೆ ಮಾರಾಟ ಮಾಡುತ್ತಿರುವುದರಿಂದ ದೇವಸ್ಥಾನದ ಭೂಮಿ ಬರಡಾಗಿ ಗೂವುಗಳಿಗೆ ಮೇವು ಇಲ್ಲದ ಪರಿಸ್ಥಿತಿಯುಂಟಾಗಿದೆ.
ಸಧ್ಯದ ಪರಿಸ್ಥಿತಿಯಲ್ಲಿ 28ಎಕರೆ ಜಮೀನು ಗೋವುಗಳಿಗೆ ಹೂತುಹಾಕಲು ಮಾತ್ರ ಸೀಮಿತವಾಗಿದೆ.
ಜಮೀನಿನ ಎಲ್ಲಂದರಲ್ಲಿ ಗೋವುಗಳ ಎಲುವಿನ ಹಂದರವಾಗಿದೆ.
14 ಜನರ ಹಾಜರಿ 4 ಜನರ ಸೇವೆ: ಹೆಸರಿಗೆ ಮಾತ್ರ 14ಜನ ಗೋಪಾಲಕರು ಹಾಜರಿ ಮಾತ್ರ 4ಜನರಿದ್ದು,ಮುಂಜಾನೆ 8ರಿಂದ 10ರ ವರೆಗೆ ಅರ್ಚಕರು, ಮಧ್ಯಾಹ್ನ 3 ರಿಂದ 5ರ ವತರಗೆ ಗೋಪಾಕರು ಮೇಯಿಸುತ್ತಾರೆ.
ರಾತ್ರಿವೇಳೆ ಯಾವ ಸಿಬ್ಬಂದಿ ಗಳೂ ಇರುವುದಿಲ್ಲ. ಶಡ್ಡಿದ್ದರೂ ಕೂಡ ಬಿಸಿಲಿನಲ್ಲಿರುವ ಗೋವುಗಳಿಗೆ ದಿಕ್ಕಿಲ್ಲದವರಂತಾಗಿದೆ.
ನೋಡುಗರಿಗಾಗಿ ಕಾದಿಟ್ಟ ಕಣಕಿ: ಸುಮಾರು ನಾಲ್ಕು ವರ್ಷಗಳಿಂದಿಟ್ಟಿರುವ ಹಳೆಯ ಕಣಕಿಯನ್ನೆ ಗೋ..ಶಾಲೆಗೆ ಭೇಟಿ ನೀಡುವ ಅಧೀಕಾರಿಗಳಿಗೆ ತೋರಿಸುವ ರೂಢಿಮಾಡಿಕೊಂಡಿರುವ ಇಲ್ಲಿಯ ಆಡಳಿತ ವ್ಯವಸ್ಥೆ ಯನ್ನು ನೋಡಿ ಸಾರ್ವಜನಿಕರಿಗೆ ತಲೆ ನೋವಾಗಿದೆ.
ದನಗಳು ತಿನ್ನದ ಹೊಟ್ಟು ಸಂಗ್ರಹ: ದನಗಳು ಮುಟ್ಟದೆ ಇರುವ ಸೋಯಾ ಹಾಗೂ ತೊಗರಿಯ ಹೊಟ್ಟನ್ನು ಭಕ್ತರಿಂದ ಸಂಗ್ರಹಿಸಿ ಮೇವು ಖರಿದಿ ಮಾಡಿರುವ ಲೆಕ್ಕ ತೋರಿಸಿತ್ತಿರುವುದೊಂದು ಹಗರಣವೇ ಸರಿ ಎಂದು ಭಕ್ತರು ವಿಷಾಧ ವ್ಯಕ್ತಪಡಿಸಿದ್ದಾರೆ.
ಹೊಟ್ಟಿನಲ್ಲಿ ಹೂತಿಟ್ಟ ಗೋವಿನ ಗಬ್ಬು: ನಾಯಿ-ನರಿಗಳು ತಿಂದಿರುವ ಗೋವುಗಳನ್ನು ಗಬ್ಬುವಾಸನೆ ಬರುತ್ತಿರುವುದನ್ನು ನೋಡಿದ ಇಲ್ಲಿಯ ಭಕ್ತರು ದೇವಸ್ಥಾನದ ಆಡಳಿತ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಗೋವುಗಳಿಗೆ ಸಂರಕ್ಷಣೆ ಇಲ್ಲದೆ ಸಾವನ್ನಪ್ಪುತ್ತಿರುವ ವಿಚಾರ ಪಶುಪಾಲನಾ ಮತ್ತು ಪಶುವೈಧ್ಯಕೀಯ ಸೇವಾ ಇಲಾಖೆ ಕಲಬುರಗಿಯ ಉಪನಿರ್ದೇಶಕರಿಗೆ ಪರಿ-ಪರಿಯಾಗಿ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.
ಮುಂದೆ ಇದೇ ಪ್ರಕಾರ ಗೋವುಗಳ ಮರಣಹೋಮ ನಡೆದರೆ ಉಗ್ರಹೋರಾಟಕ್ಕಿಳಿಯಬೇಕಾಗುತ್ತದೆ.
-ರಾಜಕುಮಾರ ಚೌವ್ಹಾಣ ಕಲಬುರಗಿ ಜಿಲ್ಲಾಧ್ಯಕ್ಷರು, ಭೀಮಪುತ್ರಿ ಬ್ರಿಗೇಡ್
ದೇವಸ್ಥಾನದ ಗೋಶಾಲೆಯಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ.
ಗೋವುಗಳ ರಕ್ಷಕರೇ ಭಕ್ಷಕರಾಗಿದ್ದಾರೆ.
ದೇವಸ್ಥಾನದ ಆಡಳಿತಕ್ಕೆ ಗೋವುಗಳ ಶಾಪ ತಟ್ಟದೇ ಇರದು.
ಪ್ರತಿ ವರ್ಷ ಭಕ್ತರು ಬಿಡುವ ಗೋವುಗಳು ಕಾಣೆಯಾಗುತ್ತಿರುವುದನ್ನು ನೋಡಿದರೆ ತುಂಬಾ ಆಶ್ಚರ್ಯ ವಾಗುತ್ತದೆ.
-ಸಿದ್ದು ಗೊಣಗಿ ಸಮಾಜ ಸೇವಕ
ಗೋವುಗಳಿಗೆ ಸೂಕ್ತ ರಕ್ಷಣೆ ನೀಡಿ ಅವುಗಳ ಪಾಲನೆ-ಪೋಷಣೆ ಕ್ರಮಬದ್ಧವಾಗಿ ನಡೆಯಬೇಕು.
ದೇವಸ್ಥಾನದ ಹಣ ದುರ್ಬಳಕೆ ಯಾಗದೆ ಸದ್ಬಳಕೆಯಾಗಲಿ
-ಸತೀಷ ಹೋಸ್ಸಳ್ಳಿ ದೇವಸ್ಥಾನ ಭಕ್ತ
ನರಸಿಂಹರಾಜಪುರ ತಾಲೂಕು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳ ತಂಡದಿಂದ ಕಬ್ಬೆಕ್ಕು ಬೇಟೆಯಾಡಿದ ಆರೋಪಿ ಬಂಧನ
ನರಸಿಂಹರಾಜಪುರRFO ಪ್ರವೀಣ್ ರವರಿಗೆ ಬಂದ ಖಚಿತ ಮಾಹಿತಿಯನ್ನು ಅನುಸರಿಸಿ ಡಿ ಆರ್ ಎಫ್ ಓ. ರಘು ಎಸ್. ಸತೀಶ್. ರಾಘವೇಂದ್ರ. ತಂಡದಿಂದ ಖಚಿತ ಮಾಹಿತಿ ಮೇರೆಗೆ ಕೆ ಕಣಬೂರು ಭಾಗ ಎರಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಬ್ಬೆಕ್ಕು ಬೇಟೆ ಆಡಿದ ಸತೀಶ್ ಕೊರಾಳಕೊಪ್ಪ. ಉಮೇಶ್ ತಂದೆ ಸುಬ್ಬಪ್ಪ ಕೈದೊಟ್ಲು ಗ್ರಾಮ. ವಾಸು ಸನ್ ಆಫ್ ಗೋವಿಂದ ಸ್ವಾಮಿ ಕೊರಳ ಕೊಪ್ಪ ಗ್ರಾಮ ಮೂರು ಜನ ಆಳಪಿಗಳನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗು ವದು ಎಂದು RFO ಪ್ರವೀಣ್ ತಿಳಿಸಿರುತ್ತಾರೆ
ಐಸ್ ಕ್ರೀಂ ಮಾರಾಟ ನೆಪದಲ್ಲಿ ಮಹಿಳೆ ಚಿನ್ನದ ಸರ ಕಸಿದು ಸಿಕ್ಕಿಬಿದ್ದ ಕಳ್ಳ.ಆರೋಪಿ ಪೊಲೀಸರ ವಶಕ್ಕೆ.
ಹುಣಸೂರು: ಜಮೀನು ಕೆಲಸ ಮಾಡಲು ತೆರಳುತ್ತಿದ್ದ ಮಹಿಳೆಯನ್ನ ಐಸ್ ಮಾರಾಟ ಮಾಡುವ ನೆಪದಲ್ಲಿ ಹಿಂಬಾಲಿಸಿ ನಂತರ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಪರಾರಿಯಾದ ಖದೀಮ ಪೊಲೀಸರ ಅತಿಥಿಯಾದ ಘಟನೆ ಹುಣಸೂರಿನಲ್ಲಿ ನಡೆದಿದೆ.ಕೆಂಪರಾಜು ಸಿಕ್ಕಿಬಿದ್ದ ಆರೋಪಿ.ಹುಣಸೂರು ತಾಲೂಕು ಹೊಸವಾರಂಚಿ ಗ್ರಾಮದಲ್ಲಿ ಘಟನೆ ನಡೆದಿದೆ.ಗ್ರಾಮದ ಜ್ಯೋತಿ ಎಂಬುವರು ಅವರೆಕಾಯಿ ಕೊಯ್ಯಲು ಜಮೀನಿಗೆ ತೆರಳುತ್ತಿದ್ದರು.ಈ ವೇಳೆ ಕೆಂಪರಾಜು ಐಸ್ ಕ್ರೀಂ ಮಾರಾಟ ಮಾಡುತ್ತಿರುವಂತೆ ಹಿಂಬಾಲಿಸಿದ್ದಾನೆ.ಜ್ಯೋತಿ ರವರು ಜಮೀನಿಗೆ ಪ್ರವೇಶಿಸಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕೆಂಪರಾಜು ಕಲ್ಲನ್ನ ಎತ್ತಿ ತಲೆಮೇಲೆ ಹಾಕಿ ಕೊಲ್ಲುವ ಬೆದರಿಕೆ ಒಡ್ಡಿ 35 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ.ಕೂಡಲೇ ಕೆಂಪರಾಜು ನಿಂದ ಬಚಾವ್ ಆಗಿ ಬಂದ ಜ್ಯೋತಿ ಸನಿಹದಲ್ಲೇ ಕೆಲಸ ಮಾಡುತ್ತಿದ್ದ ಗ್ರಾಮಸ್ಥರಿಗೆ ತಿಳಿಸಿದ್ದಾರೆ.ಕೆಂಪರಾಜು ನ ಪತ್ತೆ ಹಚ್ಚಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ.ಚಿನ್ನದ ಸರ ವಶಪಡಿಸಿಕೊಂಡ ಹುಣಸೂರು ಪೊಲೀಸರು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ…
