ಅಕ್ಷಯ ತೃತೀಯಾ

Share

ವೈಶಾಖ ಮಾಸದಲ್ಲಿ ಬರುವ ಅತಿ ಮುಖ್ಯವಾದ ವ್ರತ, ಪರ್ವಗಳಲ್ಲಿ ಅಕ್ಷಯ ತೃತೀಯಾ ಮುಖ್ಯವಾದದ್ದು. ಗಂಗಾಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ, ದೀಪ ಹೂವು ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ.
‘ಬೆನ್ನು ಗೂನಾಗಿ ಕೋಲೂರಿ ನಡೆಯುತ್ತಾ ಕೆಮ್ಮುತ್ತಿರುವ ಸ್ಥಿತಿಯು ಬರುವುದಕ್ಕೆ ಮೊದಲೇ ಬದರೀ ತೀರ್ಥಯಾತ್ರೆ ಮಾಡು, ಅದು ಮುಕ್ತಿದ್ವಾರ’ ಎಂದು ಭಕ್ತ ಶ್ರೇಷ್ಠರಾದ ತಿರುಮಂಗೈ ಆಳ್ವಾರ್ ಅವರು ಘೋಷಿಸುತ್ತಾರೆ. ಇಂತಹ ಪವಿತ್ರವಾದ ಬದರೀ ನಾರಾಯಣ ಮಂದಿರದ ದ್ವಾರವನ್ನು ತೆರೆಯುವುದು ಅಕ್ಷಯ ತೃತೀಯೆಯಂದು. ಅದು ಮುಕ್ತಿ ದ್ವಾರವನ್ನು ತೆರೆಯುವ ತಿಥಿ ಎಂದು ಪರ್ಯಾಯವಾಗಿ ಹೇಳಬಹುದು.
ಭಗವಂತನ ದಶಾವತಾರಗಳಲ್ಲಿ ಆರನೇಯದಾಗಿ ‘ಬ್ರಹ್ಮ-ಕ್ಷತ್ರ ಅವತಾರ’ ಎನಿಸಿರುವ ಪರಶುರಾಮದೇವರ ಶ್ರೀ ಜಯಂತಿಯೂ ಈ ದಿನದಲ್ಲಿ ಕೂಡಿಬರುತ್ತದೆ.
ದೇವತೆಗಳ ಪೂಜೆಗೆ ಮಾತ್ರವಲ್ಲದೇ ಪಿತ್ರಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ ಪರ್ವ.
ಎಲ್ಲಾ ಯುಗಗಳಿಗೂ ಆಧ್ಯವಾಗಿರುವ ಸತ್ಯಯುಗಕ್ಕೆ ಆದಿ ದಿನವಾದ ‘ಕೃತಯುಗಾದಿ’ ಎಂದೂ ಇದು ಪರಿಗಣಿತವಾಗಿದೆ. ಕ್ಷೇತ್ರಗಳಲ್ಲಿ ಬೀಜವನ್ನು ಬಿತ್ತುವುದಕ್ಕೂ, ಇದನ್ನು ಪ್ರಶಸ್ತ ದಿನವನ್ನಾಗಿ ಲೆಕ್ಕಿಸುತ್ತಾರೆ. ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು, ಅಧ್ಯಯನ, ತರ್ಪಣ, ದಾನಾದಿಗಳೆರಲ್ಲವೂ ಅಕ್ಷಯವಾದ ಫಲವನ್ನು ನೀಡುವ ಉದರಿಂದ ಇದನ್ನು ಅಕ್ಷಯ ತೃತೀಯಾ ( ಅಕ್ಷಯ ಫಲ ತೃತೀಯಾ) ಎಂದು ಕರೆಯಲಾಗಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಆ ಹೆಸರು ಹೊಂದಿಕೆಯಾಗುತ್ತದೆ. ಕನ್ನಡ ಭಾಷೆಯಲ್ಲಿರುವ ‘ಅಕ್ಷಯ ತದಿಗೆ’ ಎಂಬುದು ಈ ಅಕ್ಷಯ ತೃತೀಯೆಯ ದೇಶೀಯರೂಪ. ಈ ದಿವಸದಲ್ಲಿಸೋಮವಾರ ಅಥವಾ ಬುಧವಾರ ಮತ್ತು ರೋಹಿಣಿ ನಕ್ಷತ್ರಗಳು ಕೂಡಿ ಬಂದರೆ ಅದು ಅಕ್ಷಯವಾದ ಸುಕೃತದ ಫಲವಾದ ಯೋಗವೆಂದು ಯೊಗಿಗಳು ಹೇಳುತ್ತಾರೆ. ಏಕೆಂದರೆ ಆ ವಾರ ಮತ್ತು ನಕ್ಷತ್ರಗಳು ಶ್ರೀ ಕೃಷ್ಣನ ಪೂಜೆಗೆ ಅತ್ಯಂತ ಪ್ರಶಸ್ತವಾದವು. ಈ ದಿನ ಬೆಳಗ್ಗೆ ಸಂಕಲ್ಪ ಸಹಿತ ಗಂಗಾನದಿಯಲ್ಲಿ ಸ್ನಾನ ಮಾಡಬೇಕು. ಸಾಕ್ಷಾತ್ ಗಂಗಾನದಿಯಲ್ಲಿ ಸ್ನಾನ ಮಾಡುವ ಅವಕಾಶವಿಲ್ಲದವರು ತಾವು ಸ್ನಾನ ಮಾಡುವ ನೀರಿನಲ್ಲಿಯೇ ಗಂಗೆಯನ್ನು ಆವಾಹನೆ ಮಾಡಿ, ಆರಾಧಿಸಿ, ಅದರಲ್ಲಿ ಅವಗಾಹನೆ ಮಾಡಬೇಕು. ಗಂಗಾ ಶಬ್ದಕ್ಕೆ ಸದ್ಗತಿಯನ್ನು ಹೊಂದಿಸುವುದು. (‘ಸದ್ಗತಿಂ ಗಮಯತೀತಿ ಗಂಗಾ’) ಎಂದು ಅರ್ಥ. ಈ ಶಬ್ದವು ಒಂದು ದೇವತೆಗೂ ಮತ್ತು ಅದರಿಂದ ಅಧಿಷ್ಠಿತವಾಗಿರುವ ಒಂದು ನದಿಗೂ ಅನ್ವಯಿಸುತ್ತದೆ. ಗಂಗೆಯೂ ಭಗವಂತನ ಜಲರೂಪವಾದ ‘ಮೂರ್ತಿ’ಯೇ ಆಗಿದೆ. ಆಕೆಯನ್ನು ಪೂಜಿಸಿದರೆ ಎಲ್ಲಾ ದೇವತೆಗಳನ್ನೂ ಪೂಜಿಸಿದಂತೆ. ಪರಮಾತ್ಮ ದರ್ಶನದಿಂದ ಯಾವ ಫಲವೋ ಅದೇ ಫಲವು ಅದರ ದರ್ಶನದಿಂದ ಉಂಟಾಗುತ್ತದೆ. ಗಂಗಾನದಿಯ ಆರೋಗ್ಯಕರ ಗುಣಗಳಿಗೆ ಸನಾತನ ಧರ್ಮಿಯರು ಮಾತ್ರವಲ್ಲ, ಇತರ ಮತದವರೂ ಕುಡ ಆಕರ್ಷಿತರಾದರು. ಉದಾಹರಣೆಗೆ ಸುಲ್ತಾನ್ ತುಘಲಕ್‍ನು ದೌಲತಾಬಾದನಿಂದ ನಿರಂತರವಾಗಿ ಗಂಗಾ ಜಲವನ್ನು ತರಿಸಿಕೊಳ್ಳುತ್ತಿದ್ದನು. ಇದು ಅವನ ಬಳೀಗೆ ತಲುಪಲು ನಲವತ್ತು ದಿನಗಳು ಹಿಡಿಸುತ್ತಿದ್ದವೆಂದು ಇಬ್ನಾ ಬೂತಾತ್ ಎಂಬ ಆ ಕಾಲದ ಯಾತ್ರಿಕ ಲೇಖಕ ಹೇಳುತ್ತಾನೆ. ಅಡುಗೆ ಮಾಡಲು ಮಳೆಯನೀರನ್ನು ಅಥವಾ ಯಮುನಾಜಲವನ್ನು ಉಪಯೋಗಿಸಿದರೂ ಅದಕ್ಕೆ ಸ್ವಲ್ಪ ಗಂಗಾಜಲವನ್ನೂ ಸೇರಿಸಲಾಗುತ್ತದೆ.’ ಇದು ಅಕ್ಬರನ ವಿಷಯದಲ್ಲಿ ‘ಆಯಿನೇ ಅಕ್ಬರಿ’ ಎಂಬ ಗ್ರಂಥವಿ ತಿಳಿಸುತ್ತದೆ. ಇಂತಹ ಇನ್ನೂ ಅನೇಕ ಉದಾಹರಣೆಗಳ ದಾಖಲೆಗಳು ಇವೆ. ‘ತೃತೀಯೆಯಂದು ಶ್ರೀ ಕ್ರಷ್ಣನನ್ನು ಗಂಧದಿಂದ ಅಲಂಕರಿಸಿ ಅವನಿಗೆ ಧಾನ್ಯರಾಜನಾದ ಯವೆ(ಜವೆಗೋಧಿ)ಯನ್ನು ಸಮರ್ಪಿಸುವವನು ವೈಕುಂಠವನ್ನು ಹೊದುತ್ತಾನೆ’, ಎಂಬುದು ಈ ಹಬ್ಬದ ಮಹತ್ವ.
ಜೈನಧರ್ಮೀಯರೂ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಆದಿ ತೀರ್ಥಕರನಾದ ವೃಷಭನಾಥ ತಪಸ್ವಿಯಾಗಿದ್ದ ಸಮಯದಲ್ಲಿ ಮೊದಲನೆಯ ಆಹಾರದಾನ ಪಡೆದ ನಿಮಿತ್ತದ ಪರ್ವದಿನ. ಮಹಾರಾಜ ಶ್ರೇಯಾಂಸ ತನ್ನ ಅಣ್ಣನೊಡನೆ ಬಂದು ವೃಷಭನಿಗೆ ಕಬ್ಬಿನ ಹಾಲಿ ರೂಪದಲ್ಲಿ ಆಹಾರವನ್ನು ಕೊಟ್ಟನೆಂದು ಅದರಿಂದ ಅವನ ದೇಶದಲ್ಲಿ ಆಹಾರ ಅಕ್ಷಯವಾಯಿತೆಂದೂ ಪ್ರತೀತಿ. ವೃಷಭ ತೀರ್ಥಂಕರನಿಗೆ ಅಂದು ನಡೆದ ಅಭಿಷೇಕದಲ್ಲಿ ಕಬ್ಬಿನ ಹಾಲು ವಿಶೇಷ ವಸ್ತು. ಮಿಕ್ಕಂತೆ ಗೃಹಸ್ಥರ ಮನೆಗಳಲ್ಲಿ ದಾನ ಧರ್ಮ ವೃಷಭ ಚರಿತ್ರೆಯ ಪಠಣ , ಉತ್ಸವ ನಡೆಯುತ್ತವೆ. ವೈಶಾಖ ಶುಕ್ಲ ತೃತೀಯಾ ಕೃತಯುಗದ ಪ್ರಾರಂಭದ ದಿನ. ಈ ದಿನದಿಂದ ಜಗತ್ತಿನಲ್ಲಿ ಸೃಷ್ಟಿ ಆರಂಭವಾಯಿತು ಎಂಬುದು ನಂಬಿಕೆ. ವರ್ಷದ ಅತ್ಯಂತ ಪವಿತ್ರವಾದ ಮೂರುವರೆ ದಿಗಳಲ್ಲಿ ಇದನ್ನು ಅರ್ಧದಿನ ಎಂದು ಕರೆಯುತ್ತಾರೆ.


Share

ಹೆಣ್ಣು” ಎಂಬ ಎರಡಕ್ಷರದ ಪದಕ್ಕೆ ಈ ಜಗತ್ತಿನಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯಲ್ಲವೆ.

Share

ಈ ಭೂಮಿಯನ್ನು ನಾವು ತಾಯಿಯೆಂದು ಕರೆಯುತ್ತೇವೆ. ಪ್ರಕೃತಿಯನ್ನು ಮಾತೆಯೆಂದು ಗುಣಗಾನ ಮಾಡುತ್ತೇವೆ ಅಂದರೆ ಯಾವುದು ಒಂದು ಜೀವಿಯ ಬದುಕಿಗೆ ಬೇಕಾಗುವ ಆಸರೆ, ಅಕ್ಕರೆ, ನೆರಳು ಮತ್ತು ಹಸಿವನ್ನು ನೀಗಿಸುತ್ತವೆಯೊ ಅವೆಲ್ಲವನ್ನು ಹೆಣ್ಣಿನ ರೂಪಕ್ಕೆ ಹೋಲಿಸುವುದು ಈ ಸಮಾಜದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ ಅಂದರೆ ಹೆಣ್ಣು ಯಾವತ್ತೂ ಸ್ವಾರ್ಥಿಯಲ್ಲ ಅವಳ ಬದುಕು ಪೂರ್ತಿ ತ್ಯಾಗದಿಂದ ಕೂಡಿರುವುದು. ಒಂದು ಜೀವಿಯು ಭೂಮಿಗೆ ಬರುವ ಮುನ್ನ ತಾಯಿಯ ರೂಪದಲ್ಲಿ ಒಂದು ಹೆಣ್ಣು ನವಮಾಸ ಹೊತ್ತು ಮಾಂಸದ ಮುದ್ದೆಯಾಗಿರುವ ನಮಗೆ ಆಶ್ರಯ ಕೊಟ್ಟು ಸಹಿಸಲಾಗದ ನೋವಿನಲ್ಲೂ ಖುಷಿಯ ಕಂಬನಿ ಹರಿಸಿ ಈ ಜಗಕ್ಕೆ ನಮ್ಮನ್ನು ಪರಿಚಯಿಸುವಳು. ನಂತರ ಒಬ್ಬಳು ಅಕ್ಕನಾಗಿ, ತಂಗಿಯಾಗಿ, ಸ್ನೇಹಿತೆಯಾಗಿ ಬಾಳಿನ ಪ್ರತಿ ಹಂತದಲ್ಲೂ ಗಂಡು ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತಾಳೆ. ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಎನ್ನುವ ಸುಂದರ ಮಾತಿದೆ. ಮಾತು ನೂರಕ್ಕೆ ನೂರು ಪ್ರತಿಶತ ಸತ್ಯ ಏಕೆಂದರೆ ಒಂದು ಮಗು ಹುಟ್ಟಿದಾಗ ಪ್ರಪಂಚ ಎಂದರೆ ಏನು ಎಂದು ಅರಿಯಲು ಸಾಧ್ಯವಿರುವುದಿಲ್ಲ. ಅಂತಹ ಪರಿಸ್ಥಿತಿಯಿಂದ ಸಮಾಜದಲ್ಲಿ ಒಬ್ಬ ಸಜ್ಜನ ವ್ಯಕ್ತಿಯಾಗಿ ರೂಪುಗೊಳ್ಳಲು ತಾಯಿ ನೀಡುವ ಕೊಡುಗೆ ಅಸಾಮಾನ್ಯವಾದದ್ದು.
ಅಕ್ಕ-ತಂಗಿಯರು ಸಂಬಂಧಗಳ ಮೌಲ್ಯವನ್ನು ತಿಳಿಸಿದರೆ ಸ್ನೇಹಿತೆಯಾಗಿ ರಕ್ತ ಸಂಬಂಧಕ್ಕು ಮೀರಿದ ಭಾಂದವ್ಯಗಳನ್ನು ಧಾರೆ ಎರೆಯುತ್ತಾಳೆ. ಹೆಂಡತಿಯ ರೂಪದಲ್ಲಿ ಎರಡನೇಯ ತಾಯಿಯಾಗುತ್ತಾಳೆ. ಮಗಳ ರೂಪದಲ್ಲಿ ಹೃದಯಕ್ಕೆ ಮುದ್ದು ಮಾಡುತ್ತಾಳೆ. ಹೀಗೆ ಒಂದಲ್ಲ, ಎರಡಲ್ಲ ಒಂದು ಹೆಣ್ಣು ನೂರಾರು ಮುಖಗಳಲ್ಲಿ ಗಂಡಿನ ಬದುಕಿನ ಹಾದಿಯಲ್ಲಿ ಬಂದು ಹೋಗುತ್ತಾಳೆ. ತಾಯಿಯಾಗಿ ಅವಳು ಮಾಡುವ ನಿಸ್ವಾರ್ಥ ಸೇವೆ ಹಾಗೂ ಪ್ರೀತಿಯ ಋಣ ತೀರಿಸಲು ನಾವು ಎಷ್ಟು ಜನ್ಮ ಎತ್ತಿ ಬಂದರು ಕಷ್ಟವೇ ಹೆಂಡತಿಯ ರೂಪದಲ್ಲಿ ಅವಳ ಜೀವನದ ಅರ್ಧ ಆಯುಷ್ಯವನ್ನು ಗುರುತು ಪರಿಚಯವಿರದ ವ್ಯಕ್ತಿಗೆ ನೀಡುವ ಅವಳ ಕೊಡುಗೆ ಕಡಿಮೆಯೇ…? ಒಂದು ಹೆಣ್ಣು ಮನೆಯಲ್ಲಿ ದೃಢವಾಗಿ ಬೆಳೆಯಲು ಅವಕಾಶ ಕೊಟ್ಟರೆ ಅಂತಹ ಹೆಣ್ಣು ತನ್ನ ಮನೆ ಮತ್ತು ಇಡೀ ಸಮಾಜವನ್ನೇ ಶಾಂತಿಯಿಂದ ಬದುಕುವಂತೆ ಮಾಡುವ ಸಾಮಥ್ರ್ಯ ಹೊಂದಿರುತ್ತಾಳೆ.
ಇಂತಹ ಹೆಣ್ಣಿನ ಬಗೆಗೆ ಬರೆಯಲು ಪದಪುಂಜಗಳು ಸಿಗದು ಬದುಕುವ ಪ್ರತಿ ಘಳಿಗೆಯು ಒಂದಲ್ಲ ಒಂದು ರೂಪದಲ್ಲಿ ನಮ್ಮೊಳಗೆ ಭರವಸೆ ತುಂಬುವ, ಪ್ರೀತಿ ನೀಡುವ, ಅಕ್ಕರೆ ಕೊಡುವ, ಗೆದ್ದಾಗ ಖುಷಿ ಪಡುವ ಸೋತಾಗ ಕೈ ಹಿಡಿದು ನಡೆಸುವ ಆ ದೈವರೂಪಕ್ಕೆ ನಾವು ಧನ್ಯತಾ ಭಾವದಿಂದ ಋಣಿಯಾಗಿದ್ದರೆ ಅದೇ ಹೆಣ್ಣಿಗೆ ನಾವು ನೀಡುವ ಅತಿ ದೊಡ್ಡ ಗೌರವ…

ಕನಸಿನ ಭಾರತ ಪತ್ರಿಕೆಯ ಪತ್ರಕರ್ತರು
ಜ್ಯೋತಿ ಬೆಟಗೇರಿ
ಬಾಗಲಕೋಟೆ


Share

ಹಿಜಾಬ್ ಕೇಸರಿ ಕದನ : ಶಿಕ್ಷಣ ಪಥನ

Share

ಉಡುಪಿಯ ಕಾಲೇಜ್ ಒಂದರಲ್ಲಿ ನಡೆದ ಘಟನೆಯಿಂದ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕದ ತುಂಬಾ ವ್ಯಾಪಿಸಿದೆ. 9 ಮತ್ತು 10ನೇ ತರಗತಿಯವರೆಗೆ ಫೆಬ್ರವರಿ 14 ರವರೆಗೆ ಮತ್ತು ಪಿಯು, ಡಿಗ್ರಿ ಸೇರಿದಂತೆ ಕಾಲೇಜ್‍ಗಳ ಶಿಕ್ಷಣವನ್ನು ಅನಿರ್ಧಿಷ್ಟ ಅವಧಿಗೆ ನಿಲ್ಲಿಸಲಾಗಿದೆ. ಹಿಜಾಬ್ ಮತ್ತು ಕೇಸರಿ ಶಾಲಿನ ಪ್ರಕರಣವು ರಾಜಕೀಯ ಬಣ್ಣವನ್ನು ತಳಿಯುತ್ತಾ ಜಾತಿ ಮತ್ತು ಧರ್ಮಗಳ ಭಾವನೆಗಳೊಂದಿಗೆ ಆಟವಾಡುತ್ತಾ ಈಗ ಶಾಲಾ ಕಾಲೇಜುಗಳ ಆವರಣದಿಂದ ಹೊರ ಬಂದಿದೆ . ಈ ಹಿಜಾಬ್ ಕೇಸರಿ ಕದನವು ವೈಯಕ್ತಿಕ ಮತ್ತು ರಾಜಕೀಯ ಪ್ರೇರಣೆಯಿಂದ ಕೂಡಿದ್ದು ಕಾಣದ ಕೈಗಳ ಮತ್ತು ದುಷ್ಟ ಮನಸ್ಥಿತಿಯ ರಾಜಕಾರಣಿಗಳಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಒಂದು ಸಾರಿ ಹಿಜಾಬ್‍ನ ಹಿನ್ನಲೆಯನ್ನು ತಿಳಿಯುತ್ತಾ ಹೋದರೆ ಈ ಆಧುನಿಕತೆಯ ದೇಶದಲ್ಲಿ ಬಳಸುವುದು ಅಪ್ರಸ್ತುತ ಅನಿಸುತ್ತದೆ. ಇಸ್ಲಾಂ ಧರ್ಮದ ಹುಟ್ಟು ಖುರಾನ್ ಬರೆದ ಸಂಧರ್ಭದಲ್ಲಿ ಮೆಕ್ಕಾ ಮದೀನಾ ಸೇರಿದಂತೆ ಗುಡ್ಡ ಗಾಡು ಪ್ರದೇಶಗಳ ಮೇಲೆ ಯಹೂದಿ , ಹಳೆಯ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಅನ್ಯ ಧರ್ಮಿಯರ ಆಕ್ರಮಣವನ್ನು ಅರೇಬಿಯನ್ ಪ್ರದೇಶಗಳು ಎದುರಿಸ ಬೇಕಾಯಿತು. ಈ ಹೋರಾಟದಲ್ಲಿ ಮಾನವನ ಕ್ರೂರತೆ ಬೇರೆ ಧರ್ಮಗಳ ಮೇಲಿದ್ದ ಆಕ್ರೋಶ ಮತ್ತು ಹಿಂಸೆಗಳಿಂದ ಇಸ್ಲಾಂ ಧರ್ಮವು ತನ್ನ ಹೆಣ್ಣುಮಕÀ್ಕಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಖುರಾನ್‍ನ ಪ್ರಕಾರ ಮಕ್ಕಳು, ವೃದ್ಧರು ಮತ್ತು ಹೆಣ್ಣು ಮಕ್ಕಳನ್ನು ಮುಸ್ಲಿಂ ಓರ್ವ ವ್ಯಕ್ತಿ ರಕ್ಷಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಆ ಸಂಧರ್ಭದಲ್ಲಿ ಆಗಾಗ ನಡೆಯುತ್ತಿರುವ ದಾಳಿಗಳು ಯುದ್ಧ ನೀತಿಯನ್ನೇ ಅನುಸರಿಸದ ಅನಾಗರೀಕ ದಾಳಿ ಕೋರರಿಂದ ರಕ್ಷಣೆ ಮಾಡಲು ಈ ಹಿಜಾಬ್ ಅಥವಾ ಬುರ್ಕಾವನ್ನು ಧರಿಸುತ್ತಿದ್ದರು. ಇದೇ ರೀತಿಯ ಪದ್ಧತಿಗಳು ಭಾರತೀಯ ರಜಪೂತ್ ಮನೆತನದಲ್ಲಿ ಸೇರಿದಂತೆ ಹಲವಾರು ರಾಜಮನೆತನದಲ್ಲಿ ಪರದಾ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಈ ಪರದಾ ಪದ್ದತಿ ಅಥವಾ ಹಿಜಾಬ್ ಒಂದು ರೀತಿ ಕಾಲಕ್ಕೆ ತಕ್ಕ ಪದ್ದತಿಗಳೇ ಆಗಿದ್ದವೇ ಹೊರತು ಧಾರ್ಮಿಕ ಆಚರಣೆಗೆ ಹೋಲಿಸುವಷ್ಟು ಶ್ರೇಷ್ಠವಾಗಿಲ್ಲ. ಅಕ್ರಮಣಕಾರಿ ಜನರಿಂದ ಹೆಣ್ಣು ಮಕ್ಕಳ ರಕ್ಷಣೆ ಮಾನ ಮತ್ತು ಪ್ರಾಣ ರಕ್ಷಣೆಗಾಗಿ ಇಂತಹ ಪದ್ದತಿಗಳು ಜಾರಿಯಲ್ಲಿದ್ದವು. ಇಂದು ಆಧುನಿಕತೆಯ ಮತ್ತು ಪ್ರಜಾಪ್ರಭುತ್ವವು ಬಲಿಷ್ಠವಾಗಿರುವ ಸಂಧರ್ಭದಲ್ಲಿ ಇಂತಹ ಪದ್ದತಿಗಳನ್ನು ಆಚರಿಸುವುದು ಎಷ್ಟು ಸೂಕ್ತ ? ಹಿಜಾಬ್ ಪದ್ದತಿಯಿಂದ ಮುಸ್ಲಿಂ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ. ಜೊತೆಗೆ ಭಾರತೀಯ ಮೂಲ ಸ್ವಾತಂತ್ರ್ಯಗಳ ಜಾರಿಗೆ ಅಡ್ಡಿಯಾಗುತ್ತದೆ. ವೈಜ್ಞಾನಿಕ ನೆಲೆಘಟ್ಟಿನಲ್ಲಿ ಹೇಳುವುದಾದರೆ ಮಾನವರಿಗೆ ವಿಟಮಿನ್ ಡಿ, ವಿಟಮಿನ್ ಬಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಹೊರ ಸುತ್ತುವುದರಿಂದ ವಿಟಮಿನ್ ಡಿ ದೊರೆಯುವುದಿಲ್ಲ. ಇದೇ ರೀತಿ ಇಡೀ ದೇಹವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬದುಕುವುದರಿಂದ ಮಾನಸಿಕ, ದೈಹಿಕ ಸ್ವಾತಂತ್ರ್ಯ ಕಳೆದುಕೊಂಡಂತೆ ಭಾಸವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೈಹಿಕ ನ್ಯೂನ್ಯತೆಗಳು ಮತ್ತು ಕೆಲವು ಕಾಯಿಲೆಗಳು ಕಾಣಿಸಿಕೊಳ್ಳಬಹುದು ಮಾನಸಿಕವಾಗಿ ಹೆಣ್ಣು ಮಕ್ಕಳು ಕುಗ್ಗಿ ಹೋಗುವುದರ ಜೊತೆಗೆ ಬುದ್ದಿವಂತಿಕೆ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸರಿಯಾಗಿ ಭಾಗವಹಿಸದೇ ಭವಿಷ್ಯದ ಕನಸುಗಳನ್ನು ಕಾಣದೇ ಹತಾಶೆ ಮತ್ತು ಜಿಗುಪ್ಸೆಯಲ್ಲಿ ಬದುಕ ಬೇಕಾಗುತ್ತದೆ. ಕುಟುಂಬ ವ್ಯವಸ್ಥೆಯನ್ನು ಸೇರಿದಂತೆ ಸಮಾಜವನ್ನು ಅನುಮಾನಿಸುವ ಜೊತೆಗೆ ದ್ವೇಷದ ಭಾವನೆಯೊಂದಿಗೆ ಬದುಕಬೇಕಾಗುತ್ತದೆ. ಈ ರೀತಿಯ ಮಾನಸಿಕ ಅಲ್ಲೋಲ ಕಲ್ಲೋಲ ಹೊಂದಿರುವ ತಾಯಿಯಿಂದ ಹುಟ್ಟುವ ಮಗು ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಹಲವಾರು ಧರ್ಮದಲ್ಲಿ ಆ ಧರ್ಮಗಳು ಹುಟ್ಟಿದ ಕಾಲಘಟ್ಟಕ್ಕೆ ಹೊಂದಿದಂತೆ ರೀತಿ ನೀತಿ ನಿಯಮ ಆಚರಣೆಗಳನ್ನು ಜಾರಿಗೆ ತಂದಿವೆ. ಆದರೆ ಕೆಲವು ಮತಾಂದರರು ಮೂಢ ನಂಬಿಕೆಗಳನ್ನು ಬಲವಂತವಾಗಿ ಜನರ ಮೇಲೆ ಹಾಕುತ್ತಿದ್ದಾರೆ. ಧರ್ಮಗಳ ಉಳಿವಿಗಾಗಿ ಒತ್ತಾಯ ಪೂರ್ವಕವಾಗಿ ವಿಧಿಸುವ ಆಚರಣೆಗಳಿಂದ ಮಾನವ ಧರ್ಮದ ನಾಶ ಮತ್ತು ಮನುಷ್ಯನ ವಿಕಾಸದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಭಾರತೀಯ ಸಂವಿಧಾನದ ಪ್ರಕಾರ ಸಮಾನತೆ ಅತ್ಯಂತ ಮಹತ್ವ ಪೂರ್ಣವಾಗಿದೆ. ಕಲಿಯುವ ಹಂತದಲ್ಲೇ ಸಮಾನತೆಯನ್ನು ತರಬೇಕಾದರೆ ಬಟ್ಟೆ ಮತ್ತು ಓದುವ ಪಾಠಗಳಲ್ಲಿ ಸಾಮರಸ್ಯ ಕೂಡಿದ ಸಮಾನತೆ ಇರಬೇಕು. ಕರೋನದಿಂದ 2 ವಷರ್ದದಿಂದ ಸತತವಾಗಿ ಶಿಕ್ಷಣ ವಂಚಿತ ವಿದ್ಯಾರ್ಥಿಗಳಲ್ಲಿ ಕೇಸರಿ ಮತ್ತು ಹಿಜಾಬ್‍ನ ಬೆಂಕಿ ಹಚ್ಚಿದರು ರಾಜಕಾರಣಿಗಳು ಅಂಧ ಮತಾಂದರರು ಆಗಿದ್ದಾರೆ. ಹಲವಾರು ವರ್ಷಗಳಿಂದ ಶಿಕ್ಷಣ ಪದ್ಧತಿಯಲ್ಲಿ ಹಿಜಾಬ್ ಹಾಕಿ ಬರುವವರು ಇದ್ದರೂ ಕೂಡ ಈಗಿನ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನಾರ್ಟಕ ಮತ್ತು ಭಾರತವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ. ಕರ್ನಾಟಕ ಹೈ ಕೋರ್ಟಿನ ಮಧ್ಯಂತರ ಆದೇಶದ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೇಸರಿ ಶಾಲು ಮತ್ತು ಸ್ಕಾರ್ಪ್ ಹಿಜಾಬ್ ಧಾರ್ಮಿಕ ಧ್ವಜಗಳು ಅಥವಾ ಸಂಕೇತಗಳನ್ನು ಧರಿಸಿ ಶಾಲಾ ಕಾಲೇಜಿಗೆ ಬರುವುದನ್ನು ಮುಂದಿನ ಆದೇಶದವರೆಗೂ ನಿರ್ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂ ಕೋರ್ಟಿಗೆ ಹೋದಾಗಲೂ ಕೂಡ ಪ್ರಯೋಜನವಾಗಿಲ್ಲ. ಈ ಕರ್ನಾಟಕದ ಹಿಜಾಬ್ ಪ್ರಕರಣವು ಮಹಾರಾಷ್ಟ್ರ, ಪಶ್ಚಿಮಬಂಗಾಳ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಿಗೆ ವ್ಯಾಪಿಸಿದೆ. ಇನ್ನೂ ಕೆಲವು ದಲಿತಪರ ಸಂಘಟನೆಗಳು ಹಿಜಾಬ್ ಅನ್ನು ಬೆಂಬಲಿಸಿ ಹೋರಾಟ ನಡೆಸುತ್ತಿವೆ. ಸಂವಿಧಾನದ ಮೂಲ ಆಸೆಯ ಪ್ರಕಾರ ಮತ್ತು ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಆಧಾರದ ಮೇಲೆ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಮತ್ತು ಯಾವುದೇ ಧಾರ್ಮಿದ ಬಟ್ಟೆ ಅಥವಾ ಪದ್ಧತಿ ಅಂದರೆ ಹಿಜಾಬ್ ಧರಿಸುವುದು, ಪರದಾ ಹಾಕಿಕೊಳ್ಳುವುದು ಮತ್ತು ಕೇಸರಿ ಶಾಲುಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವುದು ಉತ್ತಮ. ಇದರಿಂದ ಮಕ್ಕಳಲ್ಲಿ ಸಮಾನತೆ ಬೆಳೆಯುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಕೆಟ್ಟ ಘಟನೆಗಳು ನಡೆಯುವುದಿಲ್ಲ ಹೇಗೆಂದರೆ ಹಿಜಾಬ್ ಹಾಕಿಕೊಂಡು ಓರ್ವ ಹುಡುಗಿಯ ಹೆಸರಿನಲ್ಲಿ ಉಗ್ರಗಾಮಿಯೋ, ಡ್ರಕ್ಸ್ ಮಾರುವವನೋ ಅಥವಾ ಇನ್ಯಾರೋ ಬರುವುದನ್ನು ತಪ್ಪಿಸಬಹುದು. ಮಾನವ ಧರ್ಮ, ಭಾರತೀಯ ಸಂವಿಧಾನ ಮತ್ತು ಮಕ್ಕಳಿಗೆ ಸಮಾನತೆಯ ಪಾಠ, ಭವಿಷ್ಯದ ದೃಷ್ಠಿಯಿಂದ ಶಿಕ್ಷಣದಲ್ಲಿ ಜಾತಿ ಧರ್ಮ ಆಚರಣೆಗಳನ್ನು ತರುವುದು ಬೇಡ.


Share

ಕರ್ನಾಟಕದ ಅಮ್ಮ-ಸುಧಾಮೂರ್ತಿ

Share

ಸುಧಾಮೂರ್ತಿಯವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ರಾಮಚಂದ್ರ ಕುಲಕರ್ಣಿ ಹಾಗೂ ವಿಮಲಾ ಕುಲಕರ್ಣಿ ಯವರ ಪುತ್ರಿಯಾಗಿ ಆಗಸ್ಟ್ 19 1950 ಅಲ್ಲಿ ಕುಲಕರ್ಣಿ ಮನೆತನದಲ್ಲಿ ಜನಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದಲ್ಲಿ ಇವರ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನಡೆಯಿತು. ನಂತರ 1966ರಲ್ಲಿ ಹುಬ್ಬಳ್ಳಿಯ ಎಜುಕೇಶನ್ ಸೊಸೈಟಿ ಗಲ್ರ್ಸ್ ಇಂಗ್ಲೀμï ಸ್ಕೂಲ್ ನಿಂದ ಎಸೆಸೆಲ್ಸಿ ಎಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದರು. 1972 ರಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. 1974 ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಇವರು ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ನಲ್ಲಿ ಎಂ.ಇ. ಕಂಪ್ಯೂಟರ್ ಸೈನ್ಸನಲ್ಲಿ ಪದವಿಗಳಿಸಿದರು. ಚಿನ್ನದ ಪದಕಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾಮೂರ್ತಿಯವರು ಟೆಲ್ಕೋದ ಪುಣೆ ಮುಂಬೈ ಜಮ್‍ಶೆಡ್ ಪುರ ಶಾಲೆಗಳಲ್ಲಿ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೋ ಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಎಂಜಿನಿಯರ್ ಎನ್ನುವ ಹೆಗ್ಗಳಿಕೆಗೆ ಇವರದು. 1996 ರಲ್ಲಿ ತಮ್ಮ ಪತಿ ಶ್ರೀ ನಾರಾಯಣ ಮೂರ್ತಿ ಅವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿದರು. ಸುಧಾಮೂರ್ತಿಯವರು ಹಲವು ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ. ಅವುಗಳೆಂದರೆ “ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿದಿ, ಮನದಮಾತು, ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ದಿ ಸಪೆರ್ಂಟ್ಸ್ ರಿವೆಂಜ್, ತುಮುಲ ಋಣ, ಯಶಸ್ವಿ ಸಾಫ್ಟ್ ಮ್ಯಾನ್, ಏರಿಳಿತದ ದಾರಿಯಲಿ,್ಲ ನೊನಿಯ ಸಾಹಸಗಳು ಮುಂತಾದವು. ಇವರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿμï ನಲ್ಲಿ ಸುಮಾರು 17 ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇವರಿಗೆ ಸಂದ ಪುರಸ್ಕಾರಗಳು ಹಲವಾರು ಅವುಗಳೆಂದರೆ

1. ಬಿ.ಇ ಯಲ್ಲಿ ಪ್ರಥಮ ಸ್ಥಾನಗಳಿಸಿದಾಗ ಕರ್ನಾಟಕದ ಮುಖ್ಯಮಂತ್ರಿಗಳಿಂದ ಬೆಳ್ಳಿಯಪದಕ ಲಭಿಸಿತು.
2. ಎಂ.ಟೆಕ್. ಪರೀಕ್ಷಯಲ್ಲಿ ಪ್ರಥಮಸ್ಥಾನ ಗಳಿಸಿದಾಗ ಇಂಡಿಯನ್ ಇನ್ಸ್ಟುಟ್ಯೂಟ್ ಆಫ್ ಇಂಜಿನಿಯರ್ಸ್ ದಿಂದ ಬಂಗಾರದ ಪದಕ ದೊರಕಿತು.
3. 1995 ರಲ್ಲಿ ಬೆಂಗೂಳಿರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
4. ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾದವರಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
5. ಸಮಾಜ ಸೇವೆಗಾಗಿ ಹುಬ್ಬಳ್ಳಿ ದಕ್ಷಿಣ ಭಾಗದ ರೋಟರಿ ಕ್ಲಬ್ ನಿಂದ ಪುರಸ್ಕಾರ ದೊರೆತಿದೆ.
6. 2000ದ ಸಾಲಿನ ಕರ್ನಾಟಕದ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
7. ಸಮಾಜಸೇವೆಗಾಗಿ 2000ದ ಸಾಲಿನ ಓಜಸ್ವಿನಿ ಪ್ರಶಸ್ತಿ ಲಭಿಸಿದೆ.
8. ಮಿಲೇನಿಯಮ್ ಮಹಿಳಾ ಶಿರೋಮಣಿ ಪ್ರಶಸ್ತಿ ಲಭಿಸಿದೆ.
9.ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ
10. ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್ ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಮತಿ ಸುಧಾಮೂರ್ತಿಯವರು ಇನ್ ಫೋಸಿಸ್ ಫೌಂಡೇಶನ್ ಮೂಲಕ ದೇವದಾಸಿಯರಿಗೆ, ಪುರ್ನವಸತಿ, ಬಡಮಕ್ಕಳಿಗೆ ಶಿಕ್ಷಣ, ಇತ್ತಿಚಿನ ಉತ್ತರ ಕರ್ನಾಟಕದ ನೆರೆಯಲ್ಲಿ ಸಿಲುಕಿದವರಿಗೆ ಹಲವಾರು ರೀತಿಯ ಸಹಕಾರ ಮಾಡಿರುತ್ತಾರೆ. ಈಗ ಸದ್ಯ ಕೊರೋನ ಪೀಡಿತರಿಗಾಗಿ ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದು ಹೀಗೆ ಕಷ್ಟದ ಸಮಯದಲ್ಲಿ ಜನತೆಗೆ ಸಹಾಯ ಮಾಡುವ ಕರ್ನಾಟಕದ ಅಮ್ಮನಾಗಿದ್ದಾರೆ.


Share

ಆಗಾಗ ಮುಖ ತೊಳೆಯಿರಿ

Share

ಬೇಸಿಗೆ ಕಾಲದಲ್ಲಿ ನಿಮ್ಮ ತ್ವಚೆಯ ತೈಲ ಗ್ರಂಥಿಗಳು ಹೆಚ್ಚು ಕೆಲಸ ಮಾಡುವ ಪರಿಣಾಮ ನಿಮ್ಮ ಮುಖದಲ್ಲಿ ಎಣ್ಣೆಯಾಂಶ ಕಂಡುಬರಬಹುದು. ಇದು ನಿಮ್ಮ ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳಲು ಮೊದಲ ಕಾರಣ. ಯಾವುದಾದರೂ ಒಳ್ಳೆಯ ಕ್ಲೀನ್ಸರ್ ನಿಂದ ಮುಖವನ್ನು ದಿನದಲ್ಲಿ ಎರಡು ಸಲವಾದರೂ ತೊಳೆಯಿರಿ. ಒಮ್ಮೆ ತೊಳೆದರೂ ಇದು ಕೆಲಸ ಮಾಡಬಹುದು. ದಿನದಲ್ಲಿ ಎಷ್ಟು ಸಲ ಮುಖ ತೊಳೆಯಬೇಕೆಂದು ನೀವು ನೋಡಲು ಪ್ರಯತ್ನಿಸಿ.
ಮೇಕಪ್ ತೆಗೆಯಿರಿ:
ಸುಂದರವಾಗಿ ಕಾಣಿಸಿಕೊಳ್ಳಲು ಮಹಿಳೆಯರು ಮೇಕಪ್ ಮೊರೆ ಹೋಗುವುದು ಹೊಸತೇನಲ್ಲ. ಇದನ್ನು ಸರಿಯಾದ ರೀತಿ ನಿಭಾಯಿಸದಿದ್ದರೆ ಆಗ ಮೊಡವೆ ಉಂಟಾಗಬಹುದು. ಮಲಗುವ ಮೊದಲು ನೀವು ಮೇಕಪ್ ತೆಗೆಯಿರಿ. ಹೀಗೆ ಮಾಡದಿದ್ದರೆ ನೀವು ಉದ್ದೇಶಪೂರ್ವಕವಾಗಿ ಮುಖದಲ್ಲಿ ಮೊಡವೆಗಳನ್ನು ಆಹ್ವಾನಿಸುತ್ತಿದ್ದೀರಿ.
ದಯವಿಟ್ಟು ಧೂಮಪಾನ ನಿಲ್ಲಿಸಿ:
ಹೌದು. ನಿಮಗೆ ನಾನು ಹೇಳುವುದು ಕೇಳಿದೆ. ಮೊಡವೆಯಿಂದ ಮುಕ್ತರಾಗಬೇಕಾದರೆ ನೀವು ಧೂಮಪಾನ ತ್ಯಜಿಸಲೇಬೇಕು. ಧೂಮಪಾನವು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವುದು ಮಾತ್ರವಲ್ಲದೆ ಮೊಡವೆಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹಾಲನ್ನು ಕುಡಿಯಿರಿ:
ಒಂದು ಲೋಟ ಹಾಲನ್ನು ಕುಡಿಸಿ ಗಟ್ಟಿಯಾದ ನಂತರ ಅದಕ್ಕೆ ಒಂದು ಹನಿ ನಿಂಬೆ ರಸ ಹಿಂಡಿ ಮತ್ತು ಒಲೆಯಿಂದ ಇಳಿಸಿ, ಕದಡುತ್ತಿರಿ. ಬಿಸಿ ತಣಿದ ನಂತರ ಮಲಗುವ ಸಮಯದಲ್ಲಿ ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮತ್ತು ಮರುದಿನ ಬೆಳಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.ಇದು ಮೊಡವೆ ನಿವಾರಿಸಿ ಮೃದು ಕಾಂತಿ ನೀಡುತ್ತದೆ.
ಎಣ್ಣೆ ಅಂಶಗಳಿರುವ ಆಹಾರವನ್ನು ದೂರವಿರಿಸಿ:
ಎಣ್ಣೆ ಅಂಶಗಳಿರುವ ಆಹಾರವನ್ನು ನಿಮ್ಮಿಂದ ದೂರವಿರಿಸುವುದು ಮೊಡವೆ ತ್ವಚೆಯಿಂದ ನಿಮಗೆ ಮುಕ್ತಿ ನೀಡುತ್ತದೆ. ತ್ವಚೆಯಲ್ಲಿ ಮೊಡವೆಗಳಿಲ್ಲದೆ ನೀವು ಜನರ ಮಧ್ಯೆ ತುಂಬಾ ಆತ್ಮವಿಶ್ವಾಸದಿಂದ ತಿರುಗಾಡಲು ಇದು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಸಲಹೆಗಳು. ಇಲ್ಲಿ ನೀಡಲಾಗಿರುವ ಕೆಲವೊಂದು ಸಲಹೆಗಳನ್ನು ಹೆಚ್ಚಿನ ಮಹಿಳೆಯರು ಕಡೆಗಣಿಸುತ್ತಾರೆ.
ಯಾಕೆಂದರೆ ಅವರಿಗೆ ಇದರಿಂದ ಹೆಚ್ಚು ಪರಿಣಾಮವಾಗುವುದಿಲ್ಲವೆಂದು ಭಾವಿಸುತ್ತಾರೆ. ಹೀಗಿದ್ದರೆ ಅದು ತಪ್ಪು. ಈ ಸಲಹೆಗಳನ್ನು ಪಾಲಿಸಿದರೆ ಬೇಸಿಗೆ ಕಾಲದಲ್ಲಿ ನೀವು ಮೊಡವೆ ಮುಕ್ತ ತ್ವಚೆ ಪಡೆಯಬಹುದು.

 

೫ sಣeಠಿs ಣo smooಣh sಞiಟಿ&soಜಿಣ bueಣಥಿಜಿuಟಟ..
೧.ಕ್ರೀಮ್ ಗಳನ್ನು ರಾತ್ರಿ ಹೊತ್ತು ಹಚ್ಚುವುದು ತುಂಬಾ ಪರಿಣಾಮಕಾರಿ ಅದರಲ್ಲೂ ನೈಸರ್ಗಿಕವಾದ ಕ್ರೀಮ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಗೆ ಸಂರಕ್ಷಣೆಗೆ ಒಳ್ಳೆಯದು. ಏಕೆಂದರೆ ಮಲಗಿದ್ದಾಗ ನಾವು ವಿಶ್ರಾಂತಿ ಅನುಭವಿಸುತ್ತಿರುವಾಗ ತ್ವಚೆ ಕಣಗಳು ಹೆಚ್ಚು ಕೆಲಸ ಮಾಡುತ್ತದೆ, ಆದ್ದರಿಂದ ಕ್ರೀಮ್ ಗಳನ್ನು ರಾತ್ರಿ ಹೊತ್ತಿನಲ್ಲಿ ಹಚ್ಚಿ. ಮುಖ ಕಾಂತಿಯುತವಾಗಿ, ಯೌವನಭರಿತವಾಗಿ ಕಾಣಲು ದೇಹದಲ್ಲಿ ಕೊಲೆಜಿನ್ ಅಂಶ ಅವಶ್ಯಕ. ಕ್ರೀಮ್ ಗಳನ್ನು ರಾತ್ರಿ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚಿಸುವ ಕೊಲೆಜಿನ್ (ಛಿoಟಟಚಿgeಟಿ ) ಮತ್ತು ಇಲಾಸ್ಟಿನ್ (eಟಚಿsಣiಟಿ) ಉತ್ಪತ್ತಿಗೆ ಸಹಕಾರಿಯಾಗಿದೆ.
೨. ಸಿಟ್ರಿಕ್ ಆಸಿಡ್ ಮತ್ತು ಗ್ಲೈಸೋಲಿಕ್ ಆಸಿಡ್ ನಿರ್ಜೀವ ತ್ವಚೆಯನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ವಿಟಮಿನ್ ಸಿ ಕೊಲೆಜಿನ್ ಅಂಶ ಹೆಚ್ಚು ಮಾಡಿ ತ್ವಚೆ ಕಾಂತಿ ಹೆಚ್ಚಿಸುವುದಲ್ಲದೆ ಅಕಾಲಿಕ ಮುಪ್ಪನ್ನು ತಡೆಗಟ್ಟುತ್ತದೆ.
೩. ರೆಟಿನೋಲ್ ಕ್ರೀಮ್ ಬಳಸುವುದು ತ್ವಚೆಗೆ ತುಂಬಾ ಒಳ್ಳೆಯದು. ಇದು ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ ಕೊಲೆಜಿನ್ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಅಕಾಲಿಕ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ.
೪. ಹೊಳೆಯುವ ತ್ವಚೆ ಬೇಕೆಂದು ಬಯಸುವುದಾದರೆ ಚಿಟಿಣioxiಜಚಿಟಿಣs ಅಧಿಕವಿರುವ ಆಹಾರವನ್ನು ಮತ್ತು ಹಣ್ಣುಗಳನ್ನು ತಿನ್ನಬೇಕು. ಬೆರ್ರಿ, ದಾಳಿಂಬೆ, ಗ್ರೀನ್ ಟೀ, ನಟ್ಸ್, ಬೀನ್ಸ್, ದವಸ ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
೫. ಮುಖಕ್ಕೆ ಸ್ಟೀಮ್ ಕೊಡಲು ನೀರನ್ನು ಕುದಿಸಿ ಕೊಡುವ ಬದಲು ಹಾಲನ್ನು ಕುದಿಸಿ ಸ್ಟೀಮ್ ಕೊಟ್ಟರೆ ಹೆಚ್ಚಿನ ಪ್ರಯೋಜನವನ್ನು ಪಡೆಯುಬಹುದು. ಮುಖವನ್ನು ಪ್ರತಿ ದಿನ ಕ್ಲೆನ್ಸ್ ಮಾಡಿ ಮಾಯಿಶ್ಚರೈಸರ್ ಮಾಡಿದರೆ ತ್ವಚೆ ಬೇಗನೆ ಮುಪ್ಪಾಗುವುದಿಲ್ಲ, ಸದಾ ಕಾಂತಿಯಿAದ ಕೂಡಿರುತ್ತದೆ.

ಅರಶಿನವು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವಾದ ಕೊಡುಗೆಯನ್ನು ನೀಡಿದೆ. ಮುಖದಲ್ಲಿ ಮೂಡುವ ಮೊಡವೆಗಳು, ಕಲೆಗಳ ನಿವಾರಣೆಗೆ ಅರಶಿನವು ಉಪಯುಕ್ತವಾಗಿದ್ದು, ಕೆನೆಹಾಲಿನ ಜೊತೆಗೆ ಅರಶಿನವನ್ನು ಹಚ್ಚುವುದರಿಂದ ಮುಖವು ಕಾಂತಿಯುತವಾಗಿ ಕಾಣುತ್ತದೆ. ಅರಶಿನ ಅಥವಾ ಅರಶಿನ ಕೊಂಬನ್ನು ತೇಯ್ದು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ನಂತರ ಇದನ್ನು ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ಅರಶಿನವನ್ನು ಅರೆದು ಹಾಲಿನ ಕೆನೆಯನ್ನು ಮಿಶ್ರ ಮಾಡಿ ಈ ಮಿಶ್ರಣವನ್ನು ಕೂಡ ನೀವು ಮುಖಕ್ಕೆ ಲೇಪಿಸಬಹುದು. ಇದರಿಂದ ನಿಮ್ಮ ಎಣ್ಣೆಯುಕ್ತ ಮುಖವು ಶುಭ್ರಗೊಳ್ಳುತ್ತದೆ.


Share

ಚಳಿಗಾಲ

Share

ಚಳಿಗಾಲದಲ್ಲಿ ಬೆಳೆಯುವ ಶತಾವರಿಯ ಎಲೆ, ಕಾಂಡ ಮತ್ತು ಬೇರುಗಳನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ತರಕಾರಿಯನ್ನು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಬಳಸಬಹುದು. ಶತಾವರಿಯಿಂದ ಹಲವಾರು ಆರೋಗ್ಯ ಮತ್ತು ತ್ವಚೆಯ ಲಾಭಗಳಿವೆ. ಇದರಲ್ಲಿ ತ್ವಚೆಯನ್ನು ಶುಚಿಗೊಳಿಸುವ ಗುಣಗಳಿದೆ ಮತ್ತು ಇದನ್ನು ನೇರವಾಗಿ ತ್ವಚೆಗೆ ಹಚ್ಚಬಹುದು. ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಟ್ಟಂತೆ ಆಗುವುದರಿಂದ ಇದನ್ನು ನಿವಾರಿಸಲು ಶತಾವರಿ ಬಳಸಬಹುದು. ಇದನ್ನು ತ್ವಚೆಯ ಆರೈಕೆಗೆ ಬಳಸುವಾಗ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ. ಇದು ತುಂಬಾ ಕಿರಿಕಿರಿ ಮತ್ತು ನಿಮ್ಮ ತ್ವಚೆಗೆ ಹೊಂದಿಕೊಳ್ಳದೆ ಇರಬಹುದು. ಮೊದಲು ಇದನ್ನು ಕೈಯ ಒಂದು ಭಾಗಕ್ಕೆ ಹಚ್ಚಿ ಯಾವುದೇ ಸಮಸ್ಯೆಯಾಗುತ್ತದೆಯಾ ಎಂದು ಮೊದಲು ತಿಳಿದುಕೊಳ್ಳಿ.

 

ಕಾಯಿಸಿ ಆರಿಸಿದ ಹಾಲಿಗೆ ಲಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ ಬ್ಲ್ಯಾಕ್ ಹೆಡ್ ನಾಶವಾಗಿ ತ್ವಚೆ ಕಾಂತಿಯುಕ್ತವಾಗುತ್ತದೆ.
ದಾಲ್ಚಿನಿ ಚೆಕ್ಕೆಯನ್ನು ತೇಯ್ದು, ಅದಕ್ಕೆ ಜೇನುತುಪ್ಪ ಬೆರೆಸ ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಬೊಟ್ಟು ಇಟ್ಟು ಮಲಗಿ ಬೆಳಗ್ಗೆ ಎದ್ದು ತೊಳೆದರೆ ಮೊಡವೆ ಸಂಪೂರ್ಣ ಮಾಯವಾಗುತ್ತದೆ.
ಕಹಿಬೇವಿನ ಎಲೆ ಅರೆದು ಅದಕ್ಕೆ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ, ಮೊಡವೆಗಳು ನಾಶವಾಗಿ ಬೆಳ್ಳಗಿನ ತ್ವಚೆ ನಿಮ್ಮದಾಗುತ್ತದೆ.
ಮೆಂತೆಸೊಪ್ಪು ಅರೆದು ಮುಖಕ್ಕೆ ಹಚ್ಚಿ ೨೦ ನಿಮಿಷ ಬಿಟ್ಟು ತೊಳೆದರೆ ತ್ವಚೆ ನುಣುಪಾಗಿ ಮೊಡವೆಗಳು ಹಾಗೂ ಸುಕ್ಕು ಕಡಿಮೆಯಾಗುತ್ತದೆ.
ಕಿತ್ತಳೆ ಸಿಪ್ಪೆಯನ್ನು ನೀರಿನೊಂದಿಗೆ ಗಟ್ಟಿಯಾಗಿ ರುಬ್ಬಿ ಕಣ್ಣಿನ ಸುತ್ತ ಹೊರತುಪಡಿಸಿ ಮುಖಕ್ಕೆ ಹಚ್ಚಿದರೆ ಮುಖ ಕಾಂತಿಯುಕ್ತವಾಗಿ ಮೊಡವೆಗಳು ಮಾಯವಾಗುತ್ತದೆ.

ಕಹಿಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ ಆನೀರಿನಿಂದ ಮುಖ ತೊಳೆಯಿರಿ. ಇದು ಮೊಡವೆ, ಕಪ್ಪುಚುಕ್ಕೆಗಳನ್ನು ಹೋಗಲಾಡಿಸುತ್ತದೆ.
ಮೊಡವೆಗಳಿಂದಾಗಿ ಮುಖದಲ್ಲಿ ಕಲೆಗಳಾಗಿದ್ದರೆ ತುಳ
ಸಿಯ ಪೇಸ್ಟ್ ಮಾಡಿ ದಿನವೂ ಮುಖಕ್ಕೆ ಹಚ್ಚಿ. ಕಲೆಗಳು ನಿವಾರಣೆಯಾಗುತ್ತದೆ.
ಮೊಡವೆಗಳಿದ್ದರೆ ದಿನವೂ ಸೌತೆಕಾಯಿ ರಸ, ಲಿಂಬೆ ರಸ, ಹಾಲು ಸಮಪ್ರಮಾಣದಲ್ಲಿ ಸೇರಿಸಿ, ಅದರಲ್ಲಿ ಹತ್ತಿ ತುಂಡು ಮುಳುಗಿಸಿ ಆ ಮೂಲಕ ಮುಖಕ್ಕೆ ಉಜ್ಜಿ.
ಮುಖದಲ್ಲಿ ಬ್ಲ್ಯಾಕ್ ಹೆಡ್‌ಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಲು ಮುಖಕ್ಕೆ ಮೊಸರಿನ ಜೊತೆಗೆ ಅಕ್ಕಿ ಪುಡಿಯನ್ನು ಸೇರಿಸಿ ದಿನವೂ ಹಚ್ಚಬೇಕು. ನಂತರ ಮೃದುವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.
ಮುಖ ತುಂಬ ತೈಲಯುಕ್ತವಾಗಿ ಕಾಣುತ್ತಿದ್ದರೆ, ಮುಲ್ತಾನಿ ಮಿಟ್ಟಿಯನ್ನು ರೋಸ್‌ವಾಟರ್‌ನಲ್ಲಿ ಕಲಸಿ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.

ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ. ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.

ಸೌಂದರ್ಯದ ದೃಷ್ಟಿಯಿಂದಲೂ ಮನುಷ್ಯನಿಗೂ ತಲೆ ಕೂದಲು ಅತಿ ಮುಖ್ಯ. ಮಹಿಳೆಯರಿಗಾಗಲಿ, ಪುರುಷರಿಗಾಗಲಿ ತಮ್ಮ ಕೂದಲು ಕಪ್ಪಾಗಿರಬೇಕು, ಸದೃಢವಾಗಿರಬೇಕು, ದಟ್ಟವಾಗಿರಬೇಕು ಎಂಬ ಮಹದಾಸೆ ಇದ್ದೇ ಇರುತ್ತದೆ. ಅದಕ್ಕಾಗಿ ದುಬಾರಿ ಎಣ್ಣೆ ಹಾಗೂ ಶ್ಯಾಂಪುಗಳಿಗೆ ದುಡ್ಡು ಸುರಿಯುತ್ತಾರೆ, ಹಾಗೆ ಇನ್ನೂ ಮುಂದೆ ದುಡ್ಡು ಸುರಿಯಬಾರದು ಎಂದು ಆಲೋಚಿಸಿದ್ದರೆ ಮುಂದೆ ಓದಿ.
ಕೂದಲ ಹೊಳಪಿಗೆ ದಾಸವಾಳದ ಎಲೆಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಒಳ್ಳೆಯದು. ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಈ ರೀತಿಯ ಸಮಸ್ಯೆಯಿದ್ದರೆ ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಎಣ್ಣೆ ಜೊತೆ ಹಾಕಿ ಕುದಿಸಿ ತಲೆಗೆ ಹಚ್ಚಬಹುದು. ಇಲ್ಲದಿದ್ದರೆ ನೆಲ್ಲಿಕಾಯಿ ಪೇಸ್ಟ್ ಅನ್ನು ಮೊಸರಿನ ಜೊತೆ ಮಿಕ್ಸ್ ಮಾಡಿಯೂ ತಲೆಗೆ ಹಚ್ಚಬಹುದು. ಮೊಸರನ್ನು ಜೇನು ಅಥವಾ ನಿಂಬೆ ರಸ ಹಚ್ಚಿ ತಲೆಗೆ ಹಚ್ಚಿದರೆ ಇದರಷ್ಟು ಉತ್ತಮವಾದ ಕಂಡೀಷನರ್ ಮತ್ತೊಂದಿಲ್ಲ. ಕೂದಲು ಎಣ್ಣೆ-ಎಣ್ಣೆಯಾಗುತ್ತಿದ್ದರೆ ಅದನ್ನು ಹೋಗಲಾಡಿಸಲು ನಿಂಬೆ ರಸ ಬಳಸಬಹುದು. ಶುದ್ಧವಾದ ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿನ ಸೌಂದರ್ಯ ಹೆಚ್ಚುವುದು. ತಿಂಗಳಿಗೊಮ್ಮೆ ಕೂದಲಿಗೆ ಮೆಹಂದಿ ಹಚ್ಚುವುದು ಒಳ್ಳೆಯದು. ಇದು ಕೂದಲನ್ನು ಮೃದುವಾಗಿಸುವುದರ ಜೊತೆಗೆ ಅಕಾಲಿಕ ನೆರಿಗೆಯನ್ನು ತಡೆಯುತ್ತದೆ. ತಲೆ ಸ್ನಾನವಾದ ಬಳಿಕ ಅರ್ಧ ಬಕೆಟ್ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಆ ನೀರನ್ನು ತಲೆಗೆ ಸುರಿದುಕೊಂಡರೆ ಕೂದಲು ಮೃದುವಾಗುವುದು ಕೆಲವೊಮ್ಮೆ ಇನ್ಫೆಕ್ಶನ್ ಆಗಿ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ. ಈ ರೀತಿಯಾದಾಗ ಬೇವಿನ ಎಲೆ ಹಚ್ಚಿದರೆ ಒಳ್ಳೆಯದು. ಯಾವುದೇ ಕೂದಲಿನ ಸಮಸ್ಯೆಯಿಲ್ಲದೆ ಮಂದವಾದ ಕೂದಲು ಬೇಕೆಂದರೆ ವಾರಕ್ಕೊಮ್ಮೆ ಮೆಂತೆ ಪೇಸ್ಟ್ ಅನ್ನು ತಲೆಗೆ ಹಚ್ಚಲು ಮರೆಯದಿರಿ. ಮೊಟ್ಟೆಯ ಬಿಳಿಯನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರು ನಿಮ್ಮ ಕೂದಲಿನ ಗುಣ ಮಟ್ಟ ಹೆಚ್ಚುವುದು. ಹರಳೆಣ್ಣೆ ಹಚ್ಚಿದರೆ ಕೂದಲು ಕಪ್ಪಾಗಿ, ಮಂದವಾಗಿ ಬೆಳೆಯುವುದು, ಆದರೆ ಇದನ್ನು ಹಚ್ಚಿದರೆ ತಲೆ ಜಿಡ್ಡು-ಜಿಡ್ಡಾಗಿರುವುದರಿಂದ ಹೆಚ್ಚಿನವರು ಬಳಸಲು ಇಷ್ಟಪಡುವುದಿಲ್ಲ. ಮಂದವಾದ, ಆರೋಗ್ಯಕರವಾದ ಕೂದಲಿಗಾಗಿ ಈ ಎಣ್ಣೆ ಬಳಸಬಹುದು. ಕೂದಲಿಗೆ ವಿಟಮಿನ್ ಬಿ ಕೊರತೆ ಉಂಟಾದರೆ ಕೂದಲು ಕವಲೊಡೆಯುತ್ತದೆ. ಲೋಳೆಸರ ಹಚ್ಚಿದರೆ ಕೂದಲಿಗೆ ಬೇಕಾದ ವಿಟಮಿನ್ ದೊರೆಯುವುದು ಹಾಗೂ ಕೂದಲು ಕವಲೊಡೆಯುವ ಸಮಸ್ಯೆಯೂ ಕಡಿಮೆಯಾಗುವುದು. ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು. ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ಶೀಯಾ ಬಟರ್ ಹಚ್ಚಿದರೆ ಸಾಕು, ಕೂದಲಿನಲ್ಲಿ ಮಾಯಿಶ್ಚರೈಸರ್ ಕಾಪಾಡಬಹುದು ತೆಂಗಿನ ಹಾಲನ್ನು ತಲೆಗೆ ಹಚ್ಚಿದರೆ ಕೂದಲು ಡ್ರೈಯಾಗುವುದನ್ನು ಣಚಿಜeಥಿbಚಿhuಜu

೧.ಸೌತೆಕಾಯಿ ರಸ ಕತ್ತಿನ ಚರ್ಮದ ಕಪ್ಪು ಬಣ್ಣವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ತ್ವಜೆಯನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಸೌತೆಕಾಯಿ ರಸ ಅಥವಾ ಪೇಸ್ಟ್ನ್ನು ಕುತ್ತಿಗೆಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಬಳಿಕ ಪನ್ನೀರು ಹಚ್ಚಿ ಒರೆಸಿಕೊಳ್ಳಿ. ಇದನ್ನು ವಾರಕ್ಕೊಂದು ಬಾರಿಯಾದರೂ ಮಾಡಿ.
೨. ಒಂದು ತುಂಡು ಆಲೂಗಡ್ಡೆಯನ್ನು ತೆಗೆದುಕೊಂಡು ಕತ್ತಿನ ಸುತ್ತ ಅದನ್ನು ಉಜ್ಜಿ. ಒಂದುವೇಳೆ ಇದು ಕಷ್ಟ ಎಂದಾದರೆ ಆಲೂಗಡ್ಡೆ ಜ್ಯೂಸ್ ಮಾಡಿ ಅದನ್ನು ಕತ್ತಿಗೆ ಹಚ್ಚಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀವು ಕಾಣುವಿರಿ.
೩.ಇನ್ನು ಲಿಂಬೆ ರಸ ಮತ್ತು ಪನ್ನೀರನ್ನು ಸಮಾನವಾಗಿ ತೆಗೆದುಕೊಂಡು ಮಿಶ್ರಣ ಮಾಡಿ. ಇದನ್ನು ರಾತ್ರಿ ಕತ್ತಿಗೆ ಹಚ್ಚಿ ಬೆಳಗ್ಗೆ ತೊಳೆದುಕೊಳ್ಳಿ. ಕೆಲವು ದಿನಗಳ ಕಾಲ ಇದನ್ನು ಮಾಡುತ್ತಾ ಹೋದರೆ ಕತ್ತಿನ ಚರ್ಮದಲ್ಲಿರುವ ಕಪ್ಪು ಕಲೆಗಳು ಹೋಗಿ ನೈಸರ್ಗಿಕ ಬಣ್ಣ ಲಭಿಸುತ್ತದೆ.
೪. ಇನ್ನು ಅಲೋವೆರಾ ಪೇಸ್ಟ್ ಕೂಡ ಕತ್ತಿನ ಕಪ್ಪನ್ನು ನಿವಾರಿಸಲು ನೆರವು ನೀಡುತ್ತದೆ. ಅಲೋವೆರಾದ ತಾಜಾ ಪೇಸ್ಟ್ ಸಿದ್ಧಪಡಿಸಿಕೊಂಡು ಕತ್ತಿಗೆ ಹಚ್ಚಿ. ೧೫ ನಿಮಿಷಗಳ ಬಳಿಕ ತೊಳೆಯಬೇಕು.
೫. ಅಲ್ಮೋಂಡ್ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ. ಬಳಿಕ ಅದನ್ನು ಕತ್ತಿಗೆ ಹಚ್ಚಿ ಮಸಾಜ್ ಮಾಡಬೇಕು. ಇದು ಕತ್ತು ಬಿಳಿಯಾಗುವುದರ ಜೊತೆಗೆ ರಕ್ತ ಸಂಚಾರ ಸುಧಾರಣೆಯಾಗಲು ಇದು ನೆರವು ನೀಡುತ್ತದೆ.
೬.ಹಾಲನ್ನು ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯ ಜೊತೆಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕತ್ತಿಗೆ ಹಚ್ಚಿ ಒಣಗಿದ ಬಳಿಕ ಕತ್ತು ತೊಳೆದುಕೊಳ್ಳಿ. ಇದನ್ನು ಪ್ರತಿ ವಾರ ಮಾಡಿದರೆ ಸುಂದರ, ನೈಸರ್ಗಿಕ ಬಣ್ಣದ ಕತ್ತು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.


Share

ಬಾಳೆಹಣ್ಣಿನ ಮಾಸ್ಕ್

Share

ನಿಮ್ಮ ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣ ತ್ವಚೆಯಾಗಿದ್ದರೆ, ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಸ್ವಲ್ಪ ಕೆನೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಸ್ವಚ್ಛ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದಜು ನಿಮ್ಮ ಮುಖವನ್ನು ತುಂಬ ನಯವಾಗಿಸುತ್ತದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದ ಮಾಸ್ಕ್.
ಮೊಟ್ಟೆಯ ಬಿಳಿಲೋಳೆಯ ಮಾಸ್ಕ್
ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ, ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ನಿಮ್ಮ ಚರ್ಮರಂಧ್ರಗಳನ್ನು ಟೈಟ್ ಮಾಡಿಸುತ್ತದೆ. ಇದು ನಿಮ್ಮನ್ನು ಇನ್ನು ಆರೋಗ್ಯಯುತವಾಗಿ ಕಂಗೊಳಿಸುವAತೆ ಮಾಡುತ್ತದೆ.
ಹಾಲಿನ ಮಾಸ್ಕ್
ಹಾಲಿನ ಕೆನೆ, ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಕಚೇರಿ ಕೆಲಸದಿಂದ ಸುಸ್ತಾಗಿರುವ ಮುಖದ ಚರ್ಮಕ್ಕಿದು ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕಿ ನಯವಾದ ಮುಖದ ಚರ್ಮ ನೀಡುತ್ತದೆ. ೧೦. ೧೫ ನಿಮಿಷದ ನಂತರ ಹಚ್ಚಿದ ಪ್ಯಾಕ್ ತೊಳೆಯಬಹುದು.
ಬೆಣ್ಣೆಹಣ್ಣಿನ ಮಾಸ್ಕ್
ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯನ್ನು ತಡೆಯಲು ಇದು ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್, ಪೋಷಣೆಯನ್ನು ನೀಡುವುದರಿಂದ ಇದು ಹೆಚ್ಚು ಒಣಗುವ ಒಡೆಯುವ ಚರ್ಮದವರಿಗೆ ಅತ್ಯುತ್ತಮ.
ಜೇನಿನ ಮಾಸ್ಕ್
ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. (ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳೆಯಿರಿ.
ಟೊಮ್ಯಾಟೋ-ಮೊಸರಿನ ಪ್ಯಾಕ್
ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. ೧೫ ನಿಮಿಷ ಬಿಟ್ಟು ತೊಳೆಯಿರಿ.

ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್
ಬಿಸಿಲಿನ ಝಳಕ್ಕೆ ಮುಖ ಕೆಂಪಗಾಗಿ ಬಿಳಿಚಿಕೊಂಡು ಸನ್‌ಬರ್ನ್ ಆಗುತ್ತದೆ. ಅಲ್ವಿರಾ ಹಾಗೂ ವಿನೆಗರ್ ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಮೇಲಾದ ಸನ್ ಬರ್ನ್ ಹೋಗೋತ್ತದೆ.
ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಅದು ಮುಖದಲ್ಲಿನ ಹೆಚ್ಚಿನ ಉಷ್ಣತೆಯನ್ನು ಹೀರಿ ಸನ್‌ಬರ್ನ್ ಮಾಯವಾಗಿಸುತ್ತದೆ.
ಸೌತೇಕಾಯಿಯ ಹೋಳನ್ನು ಮುಖಕ್ಕೆ ಉಜ್ಜುತ್ತಾ ಇದ್ದರೆ ಸನ್‌ಬರ್ನ್ ಕಡಿಮೆಯಾಗುತ್ತದೆ.
ಆಲೂಗಡ್ಡೆಯನ್ನು ತುರಿದು ಮುಖಕ್ಕೆ ಹಚ್ಚಿದರೂ ಅದು ಮುಖದ ಉಷ್ಣವನ್ನು ತಂಪಾಗಿಸುತ್ತದೆ.


Share

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಯಾನಕ್ಕೆ ಆಂಧ್ರಪ್ರದೇಶ ಮೂಲದ ಮಹಿಳೆ ಸಿರಿಶಾ ಬಾಂಡ್ಲಾ!

Share

ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಆಂಧ್ರಪ್ರದೇಶ ಗುಂಟೂರಿನ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಹಾರಲು ತಯಾರಿ ನಡೆಸಿದ್ದಾರೆ.

ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಯಾನ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದೆ 11ರಂದು ನ್ಯೂ ಮೆಕ್ಸಿಕೋದಿಂದ ವಿಎಸ್ಎಸ್ ಯುನಿಟಿ ಆಫ್ ವರ್ಜಿನ್ ಗೆಲಾಕ್ಟಿಕ್ ಎಂಬ ಹೆಸರಿನ ಬಾಹ್ಯಾಕಾಶ ನೌಕೆ ಪ್ರಯಾಣ ಕೈಗೊಳ್ಳುತ್ತಿದ್ದು, ಒಟ್ಟು ಆರು ಮಂದಿಯನ್ನೊಳಗೊಂಡ ಈ ನೌಕೆಯಲ್ಲಿ ಸಿರಿಶಾ ಅವರೊಂದಿಗೆ ಇನ್ನೋರ್ವ ಮಹಿಳೆ ಬೆತ್ ಮೊಸೆಸ್ ಇರಲಿದ್ದಾರೆ.

ಈ ಬಗ್ಗೆ ಮಾತನಾಡಿರುವ 34 ವರ್ಷದ ಭಾರತ ಮೂಲದ ಸಿರಿಶಾ ಬಾಂಡ್ಲಾ, ತಂಡದ ಯೋಜನೆಯ ಭಾಗವಾಗಿರುವುದು ಬಹಳ ಸಂತೋಷವಾಗಿದೆ . ಯನಿಟಿ22 ಪಯಣದಲ್ಲಿ ಆರು ಜನರೊಟ್ಟಿಗೆ ನಾನೂ ಒಬ್ಬಳಾಗಿರುತ್ತೇನೆ. ಎಲ್ಲ ಜನರಿಗೂ ಬಾಹ್ಯಾಕಾಶ ಕೈಗೆಟಕುವಂತಾಗಬೇಕು ಎನ್ನುವುದೇ ಈ ಯೋಜನೆಯ ಉದ್ದೇಶ ಎಂದು ಸಿರಿಶಾ ಟ್ವೀಟ್ ಮಾಡಿದ್ದಾರೆ.

ಸಿರಿಶಾ ಬಾಂಡ್ಲಾ ಮೂಲತಃ ಆಂಧ್ರಪ್ರದೇಶ ರಾಜ್ಯದ ಗುಂಟೂರಿನವರಾಗಿದ್ದು, ಟೆಕ್ಸಾಸ್ನಲ್ಲಿ ತಮ್ಮ ಬಾಲ್ಯ ಕಳೆದಿದ್ದಾರೆ. ಸಿರಿಶಾಳ ತಂದೆ ಡಾ.ಮುರಳೀಧರ ಬಾಂಡ್ಲಾ ವಿಜ್ಞಾನಿಯಾಗಿದ್ದು ಅಮೆರಿಕಾದಲ್ಲಿ ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆಯ ತಾತ ಬಾಂಡ್ಲಾ ರಾಘಯ್ಯಾ ಕೃಷಿ ವಿಜ್ಞಾನಿಯಾಗಿದ್ದು, ಗುಂಟೂರು ಜಿಲ್ಲೆಯ ಜನಪ್ದು ಹಳ್ಳಿಯಲ್ಲಿ ವಾಸವಿದ್ದಾರೆ. ಮೊಮ್ಮಗಳ ಈ ಸಾಧನೆಯ ಬಗ್ಗೆ ಕೇಳಿ ಪುಳಕಗೊಂಡಿದ್ದಾರೆ.


Share