ಏನಿದು ಎಣ್ಣೆಹೊಳೆ…?

Share

ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿ. ಈ ನದಿಯನ್ನು ಶಾಸನವು ‘ಚಂಡಿಹೊಳೆ’ ಎಂದು ಹೆಸರಿಸುತ್ತದೆ. ಪ್ರಾದೇಶಿಕವಾಗಿ ಈ ನದಿಯನ್ನು ‘ಎಣ್ಣೆಹೊಳೆ’ ಎಂದು ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದ ಶ್ರೇಣಿಯ ಮೇಲಬಂಗಾಡಿಯ ಜಾವಳಿಯಲ್ಲಿ ಉಗಮಿಸುವ ಈ ನದಿ, ಮಂಡ್ಯ ಜಿಲ್ಲೆಯ ಪಶ್ಚಿಮದ ಅಂಚಿನಲ್ಲಿ ಸ್ವಲ್ಪದೂರ ಹಾಸನ ಮಂಡ್ಯ ಜಿಲ್ಲೆಗಳ ಗಡಿಯಾಗಿ ದಕ್ಷಿಣಾಭಿಮುಖವಾಗಿ ಹರಿಯುತ್ತದೆ. ಅನಂತರ ಕೃಷ್ಣರಾಜಪೇಟೆ ತಾಲ್ಲೂಕಿನ ಗುಡ್ಡೇಹೊಸಹಳ್ಳಿ ಬಳಿ ಮಂಡ್ಯಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರದ ಹಿಂದಿನ ನೀರಿನಲ್ಲಿಕಾವೇರಿ ನದಿಯನ್ನು ಸೇರುತ್ತದೆ. ಹಿನ್ನೀರಿನ ಪ್ರದೇಶಕುಗ್ಗಿದಂತೆ ಬೇಸಿಗೆಯ ಕಾಲದಲ್ಲಿಕೃಷ್ಣರಾಜಪೇಟೆತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿಕಾವೇರಿ ನದಿಗೆ ಹೇಮಾವತಿ ನದಿಯು ಸೇರುವುದನ್ನು ಇಂದಿಗೂ ಕಾಣಬಹುದು. ಹಾಸನ ಜಿಲ್ಲೆಯಗೊರೊರಿನಲ್ಲಿ ಹೇಮಾವತಿ ನದಿಯಅಡ್ಡವಾಗಿಅಣೆಕಟ್ಟೆಯನ್ನುಕಟ್ಟಲಾಗಿದೆ. ಈ ನದಿಯು ಸುಮಾರು 245 ಕಿಲೋ ಮೀಟರ್‍ಉದ್ದ ಹಾಗೂ 5410 ಕಿಲೋ ಮೀಟರ್ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಇದು ಸುಮಾರು 5410 ಚದರ ಕಿಲೋ ಮೀಟರ್‍ಜಲಾ ಪ್ರದೇಶವನ್ನು ಹೊಂದಿದೆ.

ಹೇಮಾವತಿ ನದಿ ಜಾಬಾಲಿ ಸತ್ಯಕಾಮರ ವರಪ್ರಸಾದ
ಹೇಮಾವತಿ ನದಿಯ ಉಗಮ ಸ್ಥಳದಲ್ಲಿರುವ ಗಣೇಶನದೇವಾಲಯದಲ್ಲಿ ಹೇಮಾವತಿ ನದಿಯಉಗಮದ ಪುರಾಣಕಥೆ ಪ್ರಚಲಿತದಲ್ಲಿದೆ. ಬಹಳ ಹಿಂದೆಗೌತಮ ಮಹರ್ಷಿಗಳು ದಂಡಕಾರಣ್ಯ ಪ್ರದೇಶದಲ್ಲಿಆಶ್ರಮ ಮಾಡಿಕೊಂಡು ಸಂಚಾರ ಮಾಡುತ್ತಿದ್ದಕಾಲದಲ್ಲಿ ಸತ್ಯಕಾಮನೆಂಬ ಬಾಲಕನು ಗೌತಮರನ್ನುಕಂಡುತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಶಿಕ್ಷಣ ನೀಡುವಂತೆ ವಿನಂತಿಸಿದನು. ಆಗ ಗೌತಮರು ನಾನು ಬ್ರಾಹ್ಮಣ ವಟುಗಳಿಗೆ ಮಾತ್ರ ಶಿಕ್ಷಣ ನ ಡುವ ಸಂಕಲ್ಪದವನಾಗಿದ್ದೇನೆ, ನಿನ್ನಗೋತ್ರ ಪ್ರವರಗಳನ್ನು ತಿಳಿಸು ಎಂದು ಸತ್ಯಕಾಮನನ್ನು ಕೇಳಿದರು. ಅದಕ್ಕೆಉತ್ತರವಾಗಿ ಸತ್ಯಕಾಮನು ನನಗೆ ನನ್ನತಾಯಿಗೊತ್ತೇ ವಿನಾ ಗೋತ್ರ, ಸೂತ್ರ, ಪ್ರವರಾದಿಗಳು ತಿಳಿದಿಲ್ಲ, ನಾನು ನನ್ನತಾಯಿಯನ್ನು ಕೇಳಿ ಆಕೆಯಿಂದು ತಿಳಿದು ನಿಮಗೆ ನನ್ನಗೋತ್ರ ಪ್ರವರಗಳನ್ನು ತಿಳಿಸುತ್ತೇನೆಂದು ಹೇಳಿ ಮನೆಗೆ ಬಂದನು. ಮನೆಗೆ ಬಂದ ಸತ್ಯಕಾಮನುತಾಯಿಯಲ್ಲಿತನ್ನಗೋತ್ರ, ಸೂತ್ರ, ಪ್ರವರಾದಿಗಳ ಬಗ್ಗೆ ಗೌತಮರು ಪ್ರಶ್ನಿಸಿದ್ದನ್ನು ತಿಳಿಸಿ, ನನ್ನಜನ್ಮಕಾರಣವನ್ನು ತಿಳಿಸುವಂತೆ ಕೇಳಿಕೊಂಡನು. ಅದಕ್ಕೆ ಸತ್ಯಕಾಮನತಾಯಿಜಾಬಾಲಿಯು, ‘ಮಗನೇ ನಾನು ಬ್ರಾಹ್ಮಣನೋರ್ವನ ಮನೆಯಲ್ಲಿ ದಸಿಯಾಗಿ ಸೇವೆಸಲ್ಲಿಸುತ್ತಿದ್ದ ವೇಳೆಯಲ್ಲಿ ನಾನು ಹಲವಾರು ಅತಿಥಿಗಳನ್ನು ಸತ್ಕರಿಸಿದ ಸಮಯದಲ್ಲಿ ನಿನ್ನಜನನವಾಗಿದೆ. ಹಾಗಾಗಿ ನಿನಗೆ ಪಿತೃಸ್ಥಾನವನ್ನು ನೀಡಿದ ವ್ಯಕ್ತಿಯನ್ನು ನಾನು ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ನನ್ನ ಹೆಸರನ್ನೇ ನಿನ್ನ ಹೆಸರಿನೊಂದಿಗೆ ಬಳಸಿ ಇನ್ನು ಮುಂದೆಜಾಬಾಲಿ ಸತ್ಯಕಾಮನೆಂದು ನಿನ್ನ ನಾಮಾಂಕಿತವನ್ನು ಹೇಳು’ ಎಂದು ತಿಳಿಸಿದಳು. ಸತ್ಯಕಾಮನುತಾಯಿಯಿಂದ ವಿಷಯವರಿತುಗೌತಮರಲ್ಲಿ ಮತ್ತೆ ಬಂದುತಾಯಿ ಹೇಳಿದ ಎಲ್ಲವನ್ನೂಅವರಿಗೆ ಹೇಳಿ ತನ್ನನ್ನು ಶಿಷ್ಯನಾಗುವಂತೆ ಕೇಳಿಕೊಂಡನು. ತ್ರಿಲೋಕ ಜ್ಞಾನಿಗಳಾದ ಗೌತಮ ಮಹರ್ಷಿಗಳು ಜಾಬಾಲಿಯಜನನದ ಮರ್ಮವನ್ನರಿತು ಅವನ ಸತ್ಯವಾಕ್ಯಕ್ಕೆ ಮೆಚ್ಚಿಆತನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವನಿಗೆ ಉಪನಯನವನ್ನು ನೆರವೇರಿಸಿದರು. ಕೆಲವು ಕಾಲಾನಂತರಆತನಿಗೆ ನಾಲ್ಕು ನೂರು ಗೋವುಗಳನ್ನು ಕೊಟ್ಟು, ಅವುಗಳನ್ನು ಸಾವಿರವಾಗಿ ಪರಿವರ್ತಿಸಿಕೊಂಡು ಬರುವಂತೆ ತಿಳಿಸಿದರು.
ಸತ್ಯಕಾಮನುತನಗೆಗೌತಮ ಮಹರ್ಷಿಗಳು ನೀಡಿದ ಹಸುಗಳ ಸಹಿತಕಾಡಿಗೆ ಬಂದು ನೆಲೆ ನಿಂತನು. ಕಾಡಿನಲ್ಲಿ ಪಂಚಭೂತಗಳು ಜಾಬಾಲಿ ಸತ್ಯಕಾಮನಿಗೆ ಬ್ರಹ್ಮಜ್ಞಾನದ ಮತ್ತು ಆದಿಶಕ್ತಿಯ ಪರಿಚಯ ಮಾಡಿಕೊಟ್ಟವು, ಸತ್ಯಕಾಮನುತಪಸ್ಸಗೆ ಕುಳಿತುಕೊಳ್ಳಲು ನಿರ್ಧರಿಸಿದ ಸ್ಥಳದಲ್ಲಿ ನೀರಿನಆಸರೆಇರಲಿಲ್ಲ. ಅದನ್ನು ಮನಗಂಡ ಸತ್ಯಕಾಮನು ಆದಿಶಕ್ತಿಯನ್ನು ಕುರಿತು ಅತಿಶಯ ಭಕ್ತಯಿಂದ ತಪಸ್ಸನ್ನಾಚರಿಸಿ ಶಿವನ ಜಟೆಯಿ/ ಮದ ಧುಮುಕುವ ಗಂಗೆಯನ್ನು ಕರುಣಿಸಲು ಉಧ್ಯುಕ್ತ ನಾಮನು ತಪಸ್ಸಿಗೆ ಕುಳಿತ ಸ್ಥಳವೇ ಜಾವಳಿಯ ಸಮೀಪವಿರುವ ಹೇಮಾವತಿ ಗುಡ್ಡವೆಂದು ಇಲ್ಲಿನ ಸ್ಥಳೀಯರು ನಂಬಿದ್ದಾರೆ. ಆತನು ನಿರ್ಮಿಸಿದ ಆಶ್ರಮದ ಬಳಿ ಇಂದು ಹೇಮಾವತಿ ನದಿಯ ಮೂಲಸ್ಥಾನವಿದೆ. ಸತ್ಯಕಾಮನ ತಪಸ್ಸಿಗೆ ಪಾರ್ವತಿದೇವಿಯು ಪ್ರತ್ಯಕ್ಷಳಾಗಿ ಸತ್ಯಕಾಮನಿಗೆ ವರವಿತ್ತಳು. ಹಿಮಾಲಯದ ಹಿಮ ಕರಗಿದಂಡಕಾರಣ್ಯದ ಈ ಪ್ರದೇಶದಲ್ಲಿ ನದಿಯಾಗಿ ಪ್ರವಹಿಸುವಂತೆ ವರ ನೀಡಿದಳು. ದಂಡಕಾರಣ್ಯದಲ್ಲಿ ಗುಪ್ತವಾಗಿ ಹರಿದುಕೊಟ್ಟಿಗೆ ಹಾರದಿಂದ ಹೊರನಾಡಿಗೆ ಹೋಗುವ ಮಧ್ಯೆ ಬರುವ ಜಾವಳಿಯ ಸಮೀಪವಿರುವ ಹೇಮಾವತಿಗುಡ್ಡವೇ ಈ ಹೇಮಾವತಿ ನದಿಯ ಉಗಮಸ್ಥಾನ. ಇದರಿಂದ ಹಾಸನ ಜಿಲ್ಲೆ ಸಮೃದ್ಧವಾಯಿತು. ಆ ನದಿಯನ್ನು ಹಿಂದೆ ಹೇಮವಾಹಿನಿ ಎಂದೂ ಅನಂತರ ಹೇಮಾವತಿಯೆಂದೂ ಕರೆಯಲಾಯಿತು. ಇಂದು ಹೇಮಾವತಿ ನದಿ ಹಾಸನ, ಮಂಡ್ಯಜಿಲ್ಲೆಗೆ ವರಪ್ರಸಾದವಾಗಿ ಜನರ ಜೀವನಾಡಿಯಾಗಿ ಪರಿವರ್ತಿತವಾಗಿದೆ.

ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ


Share

ಪಂಚ ಚುನಾವಣೆ ಲೋಕ ಸಭೆಯ ಮುನ್ಸೂಚನೆಯೇ?

Share


ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಮಣಿಪುರ ಮತ್ತು ಪಂಜಾಬ್ ದಲ್ಲಿ ನಡೆದ ಚುನಾವಣೆಯು ಜಾಗತೀಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಚುನಾವಣೆಯಿಂದ ಮುಂದೆ ಬರುವ ಲೋಕಸಭೆಯ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹೇಗೆಂದರೆ ದೇಶದಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಲೋಕಸಭಾ ಚುನಾವಣೆಯನ್ನು ಹೊಂದಿದ ರಾಜ್ಯವಾಗಿದೆ. ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯನ್ನು ದೇಶದ ಮಿನಿ ಮಹಾ ಚುನಾವಣೆಯೆಂದೆ ಪರಿಗಣಿಸುವುದು ವಾಡಿಕೆ. 2024 ರಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಒಂದರಿಂದಲೇ ಬಿಜೆಪಿ 50 ರಿಂದ 60 ಸೀಟುಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಪಂಚ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮತ್ತು ಉತ್ತರಖಂಡಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿ.ಜೆ.ಪಿ ಅಧಿಕಾರ ಹಿಡಿಯುತ್ತದೆ. ಗೋವಾ ಮತ್ತು ಮಣಿಪುರದಲ್ಲಿ ಒಂದಿಬ್ಬರ ಸಹಾಯದೊಂದಿಗೆ ಅಧಿಕಾರ ಹಿಡಿಯುವ ಬಲ ಬಿಜೆಪಿಗಿದೆ. ಇನ್ನು ಈ ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖ ಭಂಗವಾಗಿದ್ದು ಬಿ.ಜೆ.ಪಿಯ ರೈತ ವಿರೋಧಿ ನೀತಿಯನ್ನು ಅರವಿಂದ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವು ಸರಳವಾಗಿ ಬಹುಮತ ಪಡೆದು ಪಂಜಾಬಿನಲ್ಲಿ ಅಧಿಕಾರವನ್ನು ಹಿಡಿದಿದೆ ಇದರ ಮಧ್ಯೆ ಕಾಂಗ್ರೆಸ್ ಇನ್ನೋಂದು ರಾಜ್ಯವನ್ನು ಕಳೆದುಕೊಂಡು ಮೌನವಾಗಿದೆ. 2023 ರಲ್ಲಿ ಕರ್ನಾಟಕ ಸೇರಿದಂತೆ ಹಲವಾರು ವಿಧಾನ ಸಭೆಗಳ ಚುನಾವಣೆಗಳಿದ್ದು ಈ ಪಂಚ ರಾಜ್ಯಗಳ ಚುನಾವಣೆಯು ಪ್ರಭಾವ ಬೀರುತ್ತದೆ. ಇತ್ತ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಲಿನ ಭೀತಿ ಕಾಡುತ್ತಿದೆ. ರಾಹುಲ್ ಗಾಂಧಿ ಈ ಚುನಾವಣೆಯ ಸೋಲನ್ನು ಒಪ್ಪಿಕೊಂಡಿದ್ದು ಸೋನಿಯಾ ಗಾಂಧಿ ಪರಾಮರ್ಶೆ ಮಾಡಿ ಕೊಳ್ಳುತ್ತಿದ್ದಾರೆ. ಬಿಜೆಪಿ ಪಾಳೆಯದಲ್ಲಿ ಮೋದಿ ಯೋಗಿ, ಅಮಿತ್‍ಶಾ ನಡ್ಡ ಮುಂತಾದವರು ಗೆಲುವನ್ನು ಕಾರ್ಯಕರ್ತರ ಜೊತೆ ಹಂಚಿಕೊಳ್ಳುವುದರ ಜೊತೆಗೆ ಗೆಲುವಿಗಾಗಿ ಶ್ರಮಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಲವಾರು ವಿಸ್ಮಯಗಳು ನಡೆದಿದ್ದು ಅದರಲ್ಲಿಯೂ ಉತ್ರರ ಪ್ರದೇಶದಲ್ಲಿ ಬಿಜೆಪಿಗೆ ಶೇ42% ರಷ್ಟು ಮತ ಪಡೆಯುವುದರೊಂದಿಗೆ ದಾಖಲೆ ಸೃಷ್ಟಿಯಾಗಿದೆ. ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯೆಂದರೆ ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಕೂಡ ಸೋತಿದ್ದಾರೆ. ಪಂಜಾಬಿನ Pಅಅ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಕೂಡ ಸೋತಿದ್ದಾರೆ. ಉತ್ತರಖಂಡಾದ ಅಒ ಪುಷ್ಕಾರ್ ಸಿಂಗ್ ಧಾಮಿ ಕೂಡ ಸೋತು ಭಾರತ ಇತಿಹಾಸದಲ್ಲಿ ಚುನಾವಣಾ ವಿಷಯದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಬಿಜೆಪಿಯನ್ನು ಎಲ್ಲಾ ರೀತಿಯ ಜನ ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಬಿಜೆಪಿಯ ಧರ್ಮ ನೀತಿಗಳು ವಿದೇಶಾಂಗ ನೀತಿಗಳು ಮತ್ತು ರೈತ ವಿರೋಧಿ ಕಾನೂನುಗಳ ಮಧ್ಯೆಯೂ ದೇಶದ ಯುವ ಜನತೆ ಸೇರಿದಂತೆ ಪ್ರಬುದ್ದ ಮತದಾರ ಕೂಡ ಬಿಜೆಪಿ ಯತ್ತ ಒಲವು ತೋರಿಸುತ್ತಿರುವುದನ್ನು ನೋಡಿದರೆ ಬಿಜೆಪಿ ಲೋಕಸಭೆಯಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತವಾಗಿದೆ ಎನ್ನಬಹುದು. ಈ ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯು ಶೇ%ವಾರು ಮತಗಳಿಕೆ ಯಲ್ಲಿಯೂ ಹೆಚ್ಚಾಗಿರುವುದನ್ನು ನೋಡಿದರೆ ಬಿಜೆಪಿಗೆ ಮತ್ತೊಂದು ಅವಕಾಶ ಇರುವುದು ಖಚಿತವಾಗಿರುತ್ತದೆ.


Share

ಶಾಂತಿ ಕದಲಿದ ಹಿಂದೂ ಮುಸ್ಲಿಂ ಬುದ್ಧಿವಂತರು

Share


ಕರ್ನಾಟಕದಲ್ಲಿ ಇತ್ತೀಚೆಗೆ ಧರ್ಮಗಳ ಸಂಘರ್ಷದಲ್ಲಿ ಶಾಂತಿಯನ್ನು ಕೆಲವರು ಕದಲುತ್ತಿದ್ದಾರೆ. ರನ್ನ ಪಂಪನಿಂದ ಹಿಡಿದು ಆಧುನಿಕತೆಯ ಕವಿಗಳಾದ ಕುವೆಂಪುವರೆಗೂ ಅಂದರೆ ಕವಿರಾಜ ಮಾರ್ಗದಿಂದ ಹಿಡಿದು ಇಂದಿನ ಚಂದ್ರಶೇಖರ ಕಂಬಾರ ಅವರ ಸಾಹಿತ್ಯದವರೆಗೂ ಕನ್ನಡ ನಾಡನ್ನು ಶಾಂತಿಯ ತವರು, ಬನವಾಸಿಯ ಬೀಡು, ಶ್ರೀ ಗಂಧದ ನಾಡು, ಸರ್ವಜನರ ಶಾಂತಿಯ ತೋಟ ಎಂದೆಲ್ಲ ಕನ್ನಡ ನಾಡನ್ನು ಹಾಡಿ ಹೊಗಳಿದ್ದಾರೆ. ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು. ಎಂಬ ಗೀತೆಯೊಂದಿಗೆ ನಾಡಿನ ಮಹತ್ವವನ್ನು ಡಾ|| ರಾಜ್‍ಕುಮಾರ್ ರವರ ಕಂಠ ಸಿರಿಯಲ್ಲಿ ಹೇಳಿದ ಈ ಕನ್ನಡ ನಾಡು ಇಂದು ಧರ್ಮ ಸಂಘರ್ಷದ ಮೂಲ ಸ್ಥಾನವಾಗಿ ಬಿಂಬಿತವಾಗುತ್ತಿದೆ. ಉಡುಪಿಯ ಕಾಲೇಜ್ ಒಂದರಲ್ಲಿ ಪ್ರಾರಂಭವಾದ ಹಿಜಾಬ್ ಕೇಸರಿ ಕದನವು ರಾಜ್ಯ ವ್ಯಾಪ್ತಿ ವ್ಯಾಪಿಸಿ ನ್ಯಾಯಾಲಯದ ಮುಂದೆ ನಿಂತಾಗ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಸೇರಿದಂತೆ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಹಿಜಾಬ್‍ಗೆ ಅನುಮತಿಯನ್ನು ನಿರಾಕರಿಸಿತು. ಈ ವಿಚಾರದಲ್ಲಿ ಹೊತ್ತಿಕೊಂಡ ಬೆಂಕಿಯು ಮುಸ್ಲಿಂ ಸಮುದಾಯದಲ್ಲಿ ಮಾರ್ಚ್ 17ರಂದು ಹಿಜಾಬ್ ತೀರ್ಪನ್ನು ವಿರೋಧಿಸಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಕರ್ನಾಟಕ ಬಂದ್ ಮಾಡಿದರು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹಿಂದೂ ಸಂಘಟನೆಗಳು ಹಿಂದೂ ಯುವ ಜನತೆ ಹಿಜಾಬ್‍ಗೋಸ್ಕರ ಒಂದು ದಿನ ನೀವು ಅಂಗಡಿ ಮುಚ್ಚುವುದಾದರೆ ಮುಂದಿನ ದಿನಗಳಲ್ಲಿ ಹಿಂದೂಗಳು ಮುಸ್ಲಿಂ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಜಾಗೃತಿ ಮೂಡಿಸಲು ಪ್ರಾರಂಭ ಮಾಡಿದರು. ಈ ಜಾಗೃತಿ ಮುಂದುವರೆದು ಕರಾವಳಿ ಕರ್ನಾಟಕದ ಕೆಲವು ಗ್ರಾಮಗಳ ಜಾತ್ರೆಗಳಲ್ಲಿ ಮುಸ್ಲಿಂ ಅಂಗಡಿಗಳಿಗೆ ಅನುಮತಿ ಬೇಡ ಎಂಬ ಹೋರಾಟ ಪ್ರಾರಂಭವಾಯಿತು ಈ ಹೋರಾಟವು ಮೊದಮೊದಲು ಶಿವಮೊಗ್ಗ, ಉಡುಪಿ, ಚಿಕ್ಕಮಂಗಳೂರು ನಂತರದ ದಿನಗಳಲ್ಲಿ ಕಲ್ಬುರ್ಗಿ, ಬೆಂಗಳೂರಿಗೂ ವ್ಯಾಪಿಸಿ ಇಂದು ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರದ ವಿರುದ್ದ ಹಿಂದೂತ್ವದ ಹೆಸರಿನಲ್ಲಿ ಧ್ವನಿಯೆತ್ತಲಾಗುತ್ತಿದೆ. ಈ ಸಂಘರ್ಷದ ಮಧ್ಯೆ ಹಲಾಲ ಮಾಂಸದ ವ್ಯಾಪಾರವು ಉತ್ತುಂಗಕ್ಕೇರಿದೆ. ಹಿಂದೂ ಬುದ್ದಿ ಜೀವಿಗಳು, ಮಠಾಧೀಶರು ಸೇರಿದಂತೆ ರಾಜಕಾರಣಿಗಳು ಹಿಂದೂ ಪರ ಸಂಘಟನೆಗಳು ಈ ಸಂಘರ್ಷಕ್ಕೆ ಬೆಂಕಿಯಿಡುತ್ತಿದ್ದಾರೆ. ಇತ್ತೀಚೆಗೆ ಈ ಒಂದು ಸಮಸ್ಯೆಯನ್ನು ರಾಜಕೀಯ ಮಾಡಿಕೊಂಡು ಕೆಲವು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ. ಭಾರತ ಸಂವಿಧಾನದ ಮೂಲ ಆಸೆಯಂತೆ ದೇಶವು ಜಾತ್ಯಾತೀತ ಆಗಬೇಕಿತ್ತು. 75 ವರ್ಷಗಳಿಗಿಂತ ಹೆಚ್ಚು ಕಳೆದರೂ ಜಾತಿ – ಧರ್ಮದ ವಿಷಯದಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವುದಾದರೆ ಅಂಬೇಡ್ಕರ್ ಸೇರಿದಂತೆ ಹಲವಾರು ಮಹಾನಿಯರಿಗೆ ನಾವು ಮಾಡುತ್ತಿರುವ ಅವಮಾನವಲ್ಲವೇ? ಅನಾದಿಕಾಲದಿಂದಲೂ ಹಿಂದೂ ಮುಸ್ಲಿಂ ಸೇರಿದಂತೆ ಹಲವಾರು ಧರ್ಮಿಯರು, ಜಾತಿಯವರು ಒಂದಾಗಿ ಬದುಕುತ್ತಿದ್ದಾರೆ. ಅಧಿಕಾರಕ್ಕಾಗಿ, ಹೆಸರಿಗಾಗಿ ಮತ್ತು ಬಾಯಿ ಚಪಲಕ್ಕಾಗಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕಾರ್ಯವು ನಡೆಯುತ್ತಿವೆ. ಇದರ ಮಧ್ಯೆ ಕಾಳಿ ಸ್ವಾಮಿಯಂತಹ ಕೆಲವು ವಿಕೃತ ಮನಸ್ಸಿನ ಹೋರಾಟಗಾರರು ಮುಸ್ಲಿಂರನ್ನು ವಿರೋಧಿಸುವ ಧಾವಂತದಲ್ಲಿ ನಮ್ಮ ಧರ್ಮದ ತನ್ನ ಸ್ಥಾನದ ಸಾಮಾನ್ಯ ಪ್ರಜ್ಞೆಯನ್ನು ಕಳೆದುಕೊಂಡಂತೆÉ ವರ್ತಿಸುತ್ತಿದ್ದಾರೆ. ಹಿಂದೂ ಮತ್ತು ಹಿಂದೂತ್ವದ ಪರಿಕಲ್ಪನೆಯಲ್ಲಿ ಮತ್ತು ಇಸ್ಲಾಂ ಮತ್ತು ಭಾರತೀಯ ಮುಸ್ಲಿಂ ಎಂಬ ವಿಚಾರಗಳಲ್ಲಿ ಪರಿಪೂರ್ಣ ವ್ಯಾಖ್ಯಾನಗಳಿಲ್ಲದಿದ್ದರೂ ಕೂಡ ಅರೆಬೆಂದ ಅಜ್ಞಾನಿಗಳು ಹುಚ್ಚು ನಾಯಿಯಂತೆ ಕಿರುಚುವುದನ್ನೆ ಉದ್ಯೋಗ ಮಾಡಿಕೊಂಡಿದ್ದಾರೆ. ಬಿ.ಜೆ.ಪಿ ಯವರು ತಮ್ಮ ಓಟ್ ಬ್ಯಾಂಕಿಗಾಗಿ ಹಿಂದೂತ್ವದ ಅಜಾಂಡದಲ್ಲಿ ಕಾಂಗ್ರೆಸ್‍ನವರು ಅಲ್ಪಸಂಖ್ಯಾತರು ಮತ್ತು ಮುಸ್ಲಿಂರನ್ನು ತಮ್ಮ ಓಟ್ ಬ್ಯಾಂಕಿಗಾಗಿ ಬೆಂಕಿ ಹಚ್ಚಿ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ಈ ವಿಕೃತ ಮನಸ್ಸಿನ ರಾಜಕೀಯ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ, ಕಾರ್ಮಿಕ ವರ್ಗಕ್ಕೆ, ಸಣ್ಣ ಪುಟ್ಟ ವ್ಯಾಪರಸ್ಥರಿಗೆ ತೊಂದರೆಯಾಗುತ್ತದೆಯೇ ಹೊರೆತು ಹುಚ್ಚು ನಾಯಿಯಂತೆ ಬೊಗಳುವ ಹೋರಾಟಗಾರರಿಗಾಗಲೀ, ಸಮಾಜದಲ್ಲಿ ಬೆಂಕಿ ಹಚ್ಚಿ ತಮ್ಮ ರಾಜಕೀಯ ಜೀವನವನ್ನು ಉಜ್ವಲ ಮಾಡಿಕೊಳ್ಳುವ ನಾಮರದ ರಾಜಕಾರಣಿಗಳಿಗಾಗಲಿ ಆಗುವುದಿಲ್ಲ ರಾಜಕಾರಣಿಗಳು ಕಾರ್ಪೊರೆಟ್ ಬಿಸನೆಸ್ ಮ್ಯಾನತರ ಸಮಾಜದ ನೆಮ್ಮದಿಯನ್ನು ಹಾಳುಮಾಡಿ ತಮ್ಮ ರಾಜಕೀಯ ಬಿಸ್‍ನೆಸ್ ಅನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದ್ದಾರೆ. ರಾಮ, ರಹೀಮ್, ಅಲ್ಲಾ, ಯೇಸು ಧರ್ಮ ಸಂಕಟದ ಮಧ್ಯೆ ರಕ್ತ ಹರಿದರೆ ಬಂದು ಕಾಪಾಡುವುದಿಲ್ಲ.
ಕರ್ನಾಟಕವನ್ನು ಶಾಂತಿ ಸೌಹರ್ದತೆಯ ತೋಟ ಎನ್ನುತ್ತಾರೆ ಇಂತಹ ತೋಟದಲ್ಲಿ ಓದುವ ಮಕ್ಕಳ ತಲೆಯಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ಪರೀಕ್ಷೆಗಳನ್ನು ಆತಂಕದಲ್ಲಿ ಬರೆಯುವಂತೆ ಸ್ವಯಂಘೋಷಿತ ಬುದ್ದಿ ಜೀವಿಗಳು, ಧರ್ಮ ಪಾಲಕರು, ಧರ್ಮ ಅನುಯಾಯಿಗಳು ಮತ್ತು ಹೋರಾಟಗಾರರು ತಮ್ಮ ತಮ್ಮ ಉಳಿವಿಗಾಗಿ ಇಂತಹ ಬೆಂಕಿ ಹಚ್ಚುತ್ತಿದ್ದಾರೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಒಬ್ಬ ನಿಜವಾದ ಮುಸ್ಲಿಂನಿಗೆ ಹಲಾಲ್, ಬುರ್ಕಾ, ಹಿಜಾಬ್, ತಲಾಖ್ ಮುಖ್ಯ ಅನ್ನುವುದಾದರೆ ಅದೇ ಖುರಾನಿನಲ್ಲಿ ಪ್ರತಿಯೊಬ್ಬರನ್ನು ಗೌರವಿಸಬೇಕು ಬೇರೆಯವರನ್ನು ಪ್ರೀತಿಸಬೇಕು, ದಾನಧರ್ಮ (ಜಕಾತ್) ಮಾಡಬೇಕು ಅಂತಹ ಅದೆಷ್ಟೋ ಒಳ್ಳೆಯ ವಿಚಾರಗಳು ಅರ್ಥವಾಗಿಲ್ಲವೇ? ಹಿಂದೂ ಧರ್ಮವು ಮೂಢನಂಬಿಕೆಯಿಂದ ಕೂಡಿದೆ ಎನ್ನುವ ನೀವು ನಿಮ್ಮ ಧರ್ಮದ ಮೂಢನಂಬಿಕೆಗಳು, ಕೆಟ್ಟ ಪದ್ದತಿಗಳು ಮತ್ತು ಮಹಿಳಾ ಶೋಷಣೆಯ ವಿರುದ್ಧ ಏಕೆ ಧ್ವನಿಯೆತ್ತುವಿದಿಲ್ಲ? ಹಾಗೆಯೇ ಹಿಂದೂ ಧರ್ಮದ “ವಸುದೈವ ಕುಟುಂಬಕಂ” ಮತ್ತು ಸ್ವಾಮಿ ವಿವೇಕಾನಂದರು ಹೇಳುವಂತೆ “ಬೇರೆ ಧರ್ಮದ ಬಗ್ಗೆ ತಪ್ಪು ಸಂದೇಶ ಸಾರುವ ಮುನ್ನ ಹಿಂದೂ ಧರ್ಮದ ಒಳ್ಳೆಯ ವಿಚಾರಗಳನ್ನು ಹೇಳು” ಸೇರಿದಂತೆ ಹಲವಾರು ಹಿಂದೂ ತಪ್ಪುಗಳನ್ನು ಸ್ವಯಂ ಘೋಷಿತ ಹಿಂದೂ ರಾಜಕಾರಣಿಗಳು ಖಾವಿ ತೊಟ್ಟ ಸ್ವಾಮಿಗಳು ಅರಿತಿದ್ದಾರ ಸತ್ಯಗಳೇ ಗೊತ್ತಿಲ್ಲದ ಅರೆಜ್ಞಾನಿಗಳಿಂದ ಆಧುನಿಕ ತಂತ್ರಜ್ಞಾನದ ಜಗತ್ತು ತಲೆಯಲ್ಲಿ ಇರಬೇಕಾದದ್ದು ಗೂಗಲ್‍ನಲ್ಲಿದೆ. ಗೂಗಲ್‍ನಲ್ಲಿ ಇರಬೇಕಾಗಿದ್ದು ತಲೆಯಲ್ಲಿದೆ. ಮನುಷ್ಯನ ವಿಕೃತ ವಾದಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ನಾಡಿನ ಶಾಂತಿಯನ್ನು ಕದಲುವ ಜೊತೆಗೆ ಕರ್ನಾಟಕದ ಗೌರವವನ್ನು ಅಂತರ್ ರಾಷ್ರ್ಟೀಯ ಮಟ್ಟದಲ್ಲಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಭಾರತ ಅಂದರೆ ಹಿಂದೂ ಹಿಂದೂನೇ ಇಲ್ಲಿ ಸಾರ್ವಭೌಮ ಆದರೆ ಮುಸ್ಲಿಂ ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ವಾಹನಗಳ ರಿಪೇರಿ, ಹಳೇ ವಸ್ತುಗಳ ಮರುಬಳಕೆ ಮತ್ತು ಬಿರಿಯಾನಿಯಂತಹ ಅಡುಗೆಗೆ ನಮ್ಮ ಮುಸ್ಲಿಂನೇ ಬೇಕು. ಪಾಯಸ, ಹೋಳಿಗೆ ಹಿಂದೂ ಮನೆಯಲ್ಲಿ ತಿಂದರೆ ಬಿರಿಯಾನಿ ಮುಸ್ಲಿಂ ಮನೆಯಲ್ಲಿ ತಿನ್ನಬೇಕು. ಅದೇ ಚೆಂದ ಮನುಷ್ಯ ಬದುಕುವುದೇ 60 ರಿಂದ 70 ವರ್ಷ ಇದರ ಮಧ್ಯೆ ಹಲಾಲ್, ಜಟಕಾ ಬೇಕಾ? ನಾ ಅಳಿದರೂ, ಉಳಿದರೂ ನಾನು, ನನ್ನವರು ಸತ್ತರು ನನ್ನ ತನವು ನಶಿಸಿ ಹೋದರೂ ಕನ್ನಡ ನಾಡಿಗೆ ಒಂದು ಇತಿಹಾಸವಿದೆ. ಕನ್ನಡ ಮಣ್ಣಿಗೆ ಒಂದು ಧರ್ಮವಿದೆ. ಪಾಲಿಸಲು ಕಲಿಯಿರಿ ಈ ಮೂರು ದಿನದ ಸಂತೆಯಲಿ. ಸಂತೆ ಮುಗಿದ ಮೇಲೆ ಚಟ್ಟಕ್ಕೆ ಹೆಗಲು ಕೊಡುವವರು ಯಾರೋ ಗೊತ್ತಿಲ್ಲ. ಮಸಣದ ಮಣ್ಣು ಅಗೆಯುವವರು ಯಾರೊ ಗೊತ್ತಿಲ್ಲ. ಧರ್ಮವನ್ನು ಪಾಲಿಸಿ ಅಂಧರಾಗಿ ಅಲ್ಲ ಬೆಳಕಿನಿಂದ ಕನ್ನಡ ನಾಡಿನ ಶಾಂತಿಯನ್ನು ಕಾಪಾಡಲು ನಿಮ್ಮ ಸಂಯಮವು ಅತ್ಯಂತ ಮುಖ್ಯವಾಗಿದೆ.


Share

ಈಶ್ವರಪ್ಪನ ದೇಶ ದ್ರೋಹಕ್ಕೆ : ಕಾಂಗ್ರೆಸ್ ತೆರಿಗೆ ಗುಳುಂ

Share

ವಿಧಾನ ಸಭೆ ಮತ್ತು ವಿಧಾನ ಪರಿಷತ್ 2022ರ ಮೊದಲ ಅಧಿವೇಶನವು ಪ್ರಾರಂಭವಾಗುತ್ತಲೇ ಈಶ್ವರಪ್ಪನ ದೇಶ ದ್ರೋಹದ ಹೇಳಿಕೆಗಳು ತೀವ್ರ ಚರ್ಚೆಗೀಡಾದವು. “ಇನ್ನು ಕೆಲವೇ ದಿನಗಳಲ್ಲಿ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಲಾಗುತ್ತದೆ” ಎಂದು ಈಶ್ವರಪ್ಪ ಹೇಳಿರುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರತಿಭಟನೆಯಿಂದ ಕರ್ನಾಟಕ ವಿಧಾನ ಸಭೆಯ ಕಲಾಪಗಳಿಗೆ ಅಡ್ಡಿಯಾಗಿ ಯಾವುದೇ ರೀತಿಯ ಮಹತ್ವದ ಚರ್ಚೆಗಳಿಗೆ ವಿರೋಧ ಪಕ್ಷ ಕಾಂಗ್ರೆಸ್ ಬಿಡದೇ ರಾಜ್ಯದ ತೆರಿಗೆ ಹಣವನ್ನು ಪೋಲುಮಾಡಿತ್ತಿದೆ. ಒಂದು ದಿನದ ಕಲಾಪಗಳು ನಡೆಯಲು ಶಾಸಕರ ಭತ್ಯೆ ಸೇರಿದಂತೆ ಊಟ-ತಿಂಡಿ, ವಸತಿಗೆ ಒಟ್ಟಾರೆಯಾಗಿ ಸರಿಸುಮಾರು 80 ಲಕ್ಷ ಖರ್ಚಾಗುತ್ತದೆ. ಈ 80 ಲಕ್ಷವು ಯಾವುದೇ ಪಕ್ಷಕ್ಕೆ ಸೇರಿದ ಹಣವಲ್ಲ. ಅದು ಸಾಮಾನ್ಯ ವ್ಯಕ್ತಿಯ ತೆರಿಗೆ ಹಣವಾಗಿರುತ್ತದೆ. ಬಿ.ಜೆ.ಪಿ ಪಕ್ಷದ ಪರವಾಗಿ ಹೇಳುವುದಾದರೆ ಬಸವರಾಜ್ ಯತ್ನಾಳ್ , ಈಶ್ವರಪ್ಪ ಆಗಾಗ ನಾಲಿಗೆಯನ್ನು ಹರಿಬಿಡುತ್ತಾರೆ. ಆದರೆ ಈ ಹಿಂದಿನ ಹೇಳಿಕೆಯನ್ನು ಮುಖ್ಯಮಂತ್ರಿ ಸೇರಿದಂತೆ ಬಿ.ಜೆ.ಪಿಯ ಎಲ್ಲಾ ಶಾಸಕರು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕಾನೂನಿನ ವ್ಯಾಖ್ಯಾನಗಳನ್ನು ಮಾಡುವಾಗ ಈ ಹೇಳಿಕೆಯು ಅತ್ಯಂತ ಸೂಕ್ಷ್ಮವಾಗಿದ್ದು ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ಗೌರವಗಳೊಂದಿಗೆ ಸಂವಿಧಾನದಲ್ಲಿ ಸಾಕಷ್ಟು ಉಲ್ಲೇಖಗಳಿದ್ದರೂ ಕೂಡ ರಾಷ್ಟ್ರಧ್ವಜದ ಜೊತೆಗೆ ಇನ್ನೊಂದು ಧ್ವಜವನ್ನು ಏರಿಸುತ್ತೇನೆ ಎಂಬುದಕ್ಕೆ ಸ್ಪಷ್ಟ ನಿರ್ದೇಶನಗಳಿಲ್ಲ. ಆದರೂ ಕೂಡ ತ್ರಿವರ್ಣ ಧ್ವಜದ ಜೊತೆಗೆ ಅದರ ಪಕ್ಕದಲ್ಲಿಯೇ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇನ್ನೊಂದು ಧ್ವಜವನ್ನು ಏರಿಸುವುದು ದೇಶ ದ್ರೋಹದ ಕೆಲಸವಾಗುತ್ತದೆ. ಅದಕ್ಕೆ ಕಾನೂನಿನಲ್ಲಿ ತಕ್ಕ ಶಿಕ್ಷೆಯುಂಟು. ಆದರೆ ಈಶ್ವರಪ್ಪನ ಹೇಳಿಕೆಯಲ್ಲಿ ಈ ಸ್ಪಷ್ಟತೆಯಿಲ್ಲದಿರುವುದರಿಂದ ದೇಶ ದ್ರೋಹದ ಕಾನೂನಿನಡಿ ಶಿಕ್ಷೇ ನೀಡಲು ಸಾಧ್ಯವೇ? ಈ ಹೇಳಿಕೆಯನ್ನು ವಿಧಾನ ಸಭೆಯ ಹೊರಗಡೆ ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಪ್ರಬುದ್ಧತೆಯನ್ನು ಮೆರೆಯಬೇಕಾಗಿತ್ತು ಆದರೂ ಕೂಡ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಈಶ್ವರಪ್ಪ ಒಬ್ಬನನ್ನು ಹಿಡಿದುಕೊಂಡು ಪ್ರತಿಭಟನೆಯ ಹೆಸರಿನಲ್ಲಿ ಕಲಾಪಗಳಲ್ಲಿ ನಡೆಯ ಬೇಕಾದ ಚರ್ಚೆಗಳು ಮತ್ತು ನಿಡುವಳಿಗಳು ಮತ್ತು ಅಂಗೀಕಾರಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್‍ನ ಶಾಸಕರು ಮೊದಲು ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಹಿಜಾಬ್ ಕೇಸರಿ ಕದನವು ಶಾಂತಿಯನ್ನು ಕದಲುತ್ತಿದೆ. ರಾಜ್ಯ ವ್ಯಾಪ್ತಿ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರವು ಸೋತಿದೆ. ಕೋವಿಡ್ ಸಮಸ್ಯೆ, ನಿರುದ್ಯೋಗ, ಶಾಲಾ-ಕಾಲೇಜುಗಳ ಸಮಸ್ಯೆಗಳು ಹೀಗೆ ಹತ್ತಾರು ಸಮಸ್ಯೆಗಳಿರುವಾಗ ಈಶ್ವರಪ್ಪನ ಒಂದು ಹೇಳಿಕೆಯನ್ನು ದೊಡ್ಡದು ಮಾಡಿಕೊಂಡು ನಾಲ್ಕೈದು ದಿನ ಕಲಾಪಗಳನ್ನು ಅಡ್ಡಿಪಡಿಸುವುದು ಯಾವ ನ್ಯಾಯ? ಒಂದು ದಿನಕ್ಕೆ 80 ಲಕ್ಷ ಖರ್ಚಾಗುತ್ತದೆ ಎಂದರೆ 5 ದಿನಕ್ಕೆ 4 ಕೋಟಿ ಆಗುತ್ತದೆ. ಇದು ಯಾರಪ್ಪನ ದುಡ್ಡು? ಕಾನೂನಿನ ಪದವಿ ಓದಿದ ಸಿದ್ದರಾಮಯ್ಯಗೆ ಇಷ್ಟು ಜ್ಞಾನವಿಲ್ಲವೇ? ಡಿ.ಕೆ.ಶಿಯ ಮಾತಿಗೆ ನಿಂತು ಸಿದ್ದರಾಮಯ್ಯ ರಾಜಕೀಯ ನೈತಿಕತೆಯನ್ನು ಕಳೆದುಕೊಂಡರೆ ಈಶ್ವರಪ್ಪನ ಹೇಳಿಕೆಯನ್ನು ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್‍ವು ಪ್ರತಿಭಟನೆ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ಸ್ಪೀಕರ್ ಆದ ಖಾಗೇರಿಯವರಿಗೆ ಕಲಾಪಗಳನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲು ಸೂಚಿಸಿದ್ದಾರೆ. ಕಾಂಗ್ರೆಸ್‍ನ ಹೋರಾಟವನ್ನು ಚಿಕ್ಕ ಮಕ್ಕಳು ಮತ್ತು ಬುದ್ಧಿ ಹೇಡಿಗಳು ಮಾಡುವ ಹೋರಾಟ ಎನ್ನಬಹುದು. ಭವಿಷ್ಯದಲ್ಲಿ ಇದರಿಂದ ಕಾಂಗ್ರೆಸ್‍ಗೆ ಏನು ದೊಡ್ಡ ಪ್ರಯೋಜನವಾಗುವುದಿಲ್ಲ. ಇಂತಹ ಸಿಲ್ಲಿ ಹೋರಾಟಗಳನ್ನು ಬಿಟ್ಟು ಪ್ರಭುತ್ವ ಪಕ್ಷದಂತೆ ಮತ್ತು ಪ್ರಬುದ್ಧ ವಿಚಾರಗಳತ್ತ ಕಾಂಗ್ರೆಸ್ ಪಕ್ಷವು ಪ್ರಯತ್ನಿಸಬೇಕು. ಕಾಂಗ್ರೆಸ್ ನಡೆಯನ್ನು ರಾಜ್ಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಹತ್ತಾರು ಪ್ರಮುಖ ಸಮಸ್ಯೆಗಳಿದ್ದರು ಒಂದು ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡುತ್ತಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಹೋರಾಟದ ಕುರಿತು ಕರ್ನಾಟಕ ಜನತೆಗೆ ಸರಿಯಾದ ಉತ್ತರ ಕೊಡುವುದರ ಜೊತೆಗೆ ತಕ್ಷಣ ಕಲಾಪದಲ್ಲಿ ಹೋರಾಟ ಮಾಡುವುದನ್ನು ಬಿಟ್ಟು ಬೇರೆ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಜನರಿಗೆ ಸರ್ಕಾರದತ್ತ ಇನ್ನಷ್ಟು ಉತ್ತಮವಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು.


Share

ಕ್ಷಮಿಸು ಬಿಡು ನವೀನಾ ! ನಿನ್ನ ಸಾವಿಗೆ ನಾವೇ ಕಾರಣ !

Share

ಕರ್ನಾಟಕ ಮೂಲದ ನವೀನ ಶೇಖರಪ್ಪ ಗ್ಯಾನಗೌಡರ ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಿಗೇರಿಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ರಷ್ಯಾ ಉಕ್ರೇನ್ ಯುದ್ದದ ಸಂಧÀರ್ಭದಲ್ಲಿ ಹತ್ಯೆಯಾಗಿರುವ ಈತ ಅತ್ಯಂತ ಬುದ್ದಿವಂತ 10ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ. ನವೀನನ ತಂದೆ ಶೇಕರಪ್ಪ ಸೌತ್ ಇಂಡಿಯಾ ಪೇಪರ್ ಮಿಲ್‍ನ ವೆಹಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಣ ಮತ್ತು ಮಗನ ಬುದ್ದಿವಂತಿಕೆಯಿಂದ ನಂಜನಗೂಡಿನ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ವ್ಯಾಸಂಗ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕಗಳಿಗೆ 604 ಅಂಕಗಳನ್ನು ಪಡೆದು ಆದರ್ಶ ಶಾಲೆಗೆ ಮೊದಲಿಗರಾಗಿ ಉತ್ತೀರ್ಣರಾಗಿದ್ದಾರೆ. ನಂತರ ಮೈಸೂರಿನ ಯೂನಿಟಿ ಕಾಲೇಜಿಗೆ ಸೇರಿ ಪಿ.ಯು.ಸಿ ವಿಜಾÐನ ವಿಭಾಗದಲ್ಲಿ ಶೇ.92.2% ರಷ್ಟು ಪ್ರತಿಶತ ಪಡೆದರೂ ಸಹ ಕರ್ನಾಟಕ ಸೇರಿದಂತೆ ಭಾರತದಲ್ಲಿ ಮೆಡಿಕಲ್ ಸೀಟ್ ಸಿಗಲಿಲ್ಲ ಬುದ್ದಿವಂತ ಮಗನ ಕನಸು ನನಸಾಗಿಸುವ ಪ್ರಯತ್ನದಲ್ಲಿ ತಂದೆ ಕಷ್ಟಪಟ್ಟು ಉಕ್ರೆನ್ ದೇಶದಲ್ಲಿ ವೈದ್ಯಕೀಯ ಕೋರ್ಸನ್ನು ಓದಿಸುತ್ತಿದ್ದರು. ಉಕ್ರೆನ್ ಮೆಡಿಕಲ್ ಕಾಲೇಜಿನಲ್ಲೂ ನವೀನ ತುಂಬಾ ಕ್ರಿಯಾಶೀಲವಾಗಿ ಓದುತ್ತಿದ್ದು ಕನ್ನಡದ ಅಭಿಮಾನವನ್ನು ಮೆರೆದಿದ್ದ. ಆದರೆ ಮೊನ್ನೆ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದಾನೆ. ತನಗೆ ಮತ್ತು ತನ್ನ ಗೆಳೆಯರಿಗಾಗಿ ಊಟ ಮತ್ತು ದಿನಸಿ ತರಲು ಹೋಗಿ ರಷ್ಯಾದ ಸೈನ್ಯಕ್ಕೆ ಬಲಿಯಾಗಿದ್ದಾನೆ. ನವೀನ್ ಮತ್ತು ಚಂದನ್ ಜಿಂದಾಲ್ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಸಾವು ನೋವುಗಳ ಮಧ್ಯೆ ಆ ಎಲ್ಲಾ ಸಾವುಗಳಿಗೆ ಯಾರು ಹೊಣೆಯೆಂದು ಕೇಳಿದರೆ ತಕ್ಷಣ ಉತ್ತರಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್ ಎಂದು ಇಂದಿನ ಭಾರತ ವಿದೇಶಾಂಗ ನೀತಿಗಳ ಮತ್ತು ಭಾರತವು ಈಗ ವಿಶ್ವದ ಗುರು ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಧ್ವಜ ಒಂದು ಉಕ್ರೆನ್‍ನಲ್ಲಿ ವಾಸವಿರುವ ಭಾರತೀಯರ ಜೀವ ಉಳಿಸುವುದರ ಜೊತೆಗೆ ವಿದೇಶಿಯರ ಜೀವ ಉಳಿಸಿರುವ ಹೆಮ್ಮೆ ನಮಗಿದೆ. ಉಕ್ರೆನ್‍ನಿಂದ ಮರುಳುತ್ತಿರುವ ಹಲವಾರು ವಿದ್ಯಾರ್ಥಿಗಳು ಮತ್ತು ನಾಗರೀಕರು ಆಫ್ರೆಷನ್ ಗಂಗಾ ಕಾರ್ಯಕ್ರಮವನ್ನು ಹಾಡಿ ಹೊಗಳುತ್ತಿದ್ದಾರೆ. ಏರ್ ಇಂಡಿಯಾ ವಿಮಾನಗಳ ಜೊತೆಗೆ ಸ್ಪೈಸ್ ಜೆಟ್ ಕೂಡ ಕೈ ಜೋಡಿಸಿ ನಮ್ಮ ವಾಯು ಸೇನೆಯ ಬಲವನ್ನು ಹೆಚ್ಚಿಸಿವೆ. ಹಲವಾರು ಪ್ರಯತ್ನಗಳಿಂದ ಭಾರತೀಯರನ್ನು ರಕ್ಷಿಸುವ ಪ್ರಯತ್ನವನ್ನು ಭಾರತ ಸರ್ಕಾರವು ಪ್ರಮಾಣಿಕವಾಗಿ ಮಾಡುತ್ತಿವೆ. ಆದರೆ ಕೆಲವು ವಿರೋದಿಗಳು ಜ್ಞಾನವಿಲ್ಲದೆ ಉಕ್ರೆನಿಗೆ ಹೋದ ವಿದ್ಯಾರ್ಥಿಗಳು ಬಾಯಿಗೆ ಬಂದಂತೆ ದೇಶದ ವ್ಯವಸ್ಥೆಯನ್ನು ಬೈಯುತ್ತಿದ್ದಾರೆ. ಹಣದ ಮದದಿಂದ ಮತ್ತು ಎನ್.ಇ.ಇ.ಟಿ ಪರೀಕ್ಷೆಯನ್ನು ಪಾಸಾಗದ ಅಯೋಗ್ಯರಿಂದ ಅಂತಹ ಮಾತುಗಳು ಕೇಳಿ ಬರುವುದು ಸಾಮಾನ್ಯ ಯುದ್ಧದ ಸಂಧರ್ಭದಲ್ಲಿ ವಿದೇಶಾಂಗ ನೀತಿಗಳು 2 ಬೇರೆ ಬೇರೆ ದೇಶಗಳ ನಡುವೆ ನಡೆಯುವ ಯುದ್ಧದ ಸಂಧರ್ಭದಲ್ಲಿ ಇನ್ನೊಂದು ದೇಶದ ನಾಗರೀಕರ ರಕ್ಷಣೆಯ ಹೊಣೆ ಮತ್ತು ಅಂತರ ರಾಷ್ರ್ಟೀಯ ನಿಯಮ ನಿಭಂದನೆಗಳು ಗೊತ್ತಿಲ್ಲದ ಶಿಕ್ಷಣ ಪಡೆದ ಅಜ್ಞಾನಿಗಳಿಂದ ಇಂತಹ ಕೀಳು ಮಟ್ಟದ ಮಾತುಗಳು ಕೇಳಿ ಬರುವುದು ಸಾಮಾನ್ಯ ಅದರಲ್ಲಿ ಒಬ್ಬ ವಿದ್ಯಾರ್ಥಿ ಹೇಳುತ್ತಾನೆ ತಿನ್ನಲು ಅನ್ನ, ನೀರು ಸಿಗಲಿಲ್ಲ ಎಂದು ಯುದ್ಧದ ಸಂಧರ್ಭದಲ್ಲಿ ಸೈನಿಕರು ಸೇರಿದಂತೆ ನಾಗರೀಕರಿಗೆ ಅದೆಷ್ಟೋ ತೊಂದರೆಗಳಾಗಿರುತ್ತವೆ. ಆತ ಮುಂದುವರೆದು ಹೇಳುತ್ತಾನೆ ಭಾರತೀಯ ಸೈನ್ಯವು ನಮ್ಮನ್ನು ರಕ್ಷಿಸಲು ದೇಶದ ಒಳಗಡೆ ಬರಲಿಲ್ಲ ನಾವೇ ಗಡಿವರೆಗೆ ಬರಬೇಕಾಯಿತು ಎರಡು ದೇಶಗಳ ಯುದ್ಧದ ಮಧ್ಯೆ ಇನ್ನೊಂದು ದೇಶದ ಸೈನಿಕರು ಬರುವುದು ಅತಿಕ್ರಮಣವಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ ಇಂತಹ ಹಲವಾರು ದೇಶ ಬಿಟ್ಟು ಓದಲು ಹೋದ ವಿದ್ಯಾರ್ಥಿಗಳ ಮಧ್ಯೆಯೇ ಕನ್ನಡ ಮತ್ತು ದೇಶದ ಅಭಿಮಾನ ಹೊಂದಿದ ನವೀನನ ವಿಚಾರವೇ ಬೇರೆ ನವೀನನ ತಂದೆಗೆ ಪ್ರಧಾನಿ ಮೋದಿಯವರೇ ಕರೆ ಮಾಡಿ ಸಾಂತ್ವಾನ ಹೇಳಿದರೂ ಕೂಡ ನವೀನನ ಆತ್ಮಕ್ಕೆ ಮುಕ್ತಿ ಸಿಗುವುದೇ ಡೌಟ್ ! ಏಕೆಂದರೆ ನವೀನನ ತಂದೆಯ ಒಂದು ಹೇಳಿಕೆಯು ದೇಶದ ವ್ಯವಸ್ಥೆಯನ್ನು ಮುಟ್ಟಿ ನೋಡಿಕೊಳ್ಳುವಂತಿದೆ “ಮಗ ನವೀನ್‍ಗೆ ಮೀಸಲಾತಿಯಿಂದ ಇಲ್ಲಿ ಸೀಟ್ ಸಿಗಲಿಲ್ಲ. ಇದು ಅತ್ಯಂತ ಬೇಸರದ ವಿಷಯ ಪ್ರತಿಭೆಯಿರುವ ಬಡ ವಿದ್ಯಾರ್ಥಿಗಳಿಗೆ ದೇಶದ ಅವಕಾಶಗಳಲ್ಲಿ ಅಷ್ಟು ಅಂಕ ಪಡೆದರು ಸರ್ಕಾರದ ಮೀಸಲಾತಿ ಮತ್ತು ನಿಯಮಗಳಿಂದ ನನ್ನ ಮಗನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಮತ್ತು ದೇಶದಲ್ಲಿ ಖಾಸಗಿಯಾಗಿ ಮೆಡಿಕಲ್ ಓದ ಬೇಕಾದರೆ 1.5 ಕೋಟಿ ಯಿಂದ 2 ಕೋಟಿ ಹಣ ಬೇಕಾಗುತ್ತದೆ. ಅಭಿವೃದ್ಧಿ ಶೀ¯ ದೇಶದಲ್ಲಿ ಇಷ್ಟು ಖರ್ಚಾದರೆ ನಮ್ಮಂತಹ ಬಡವರು ಓದಿಸುವುದು ಹೇಗೆ? ಉಕ್ರೆನ್ ನಂತಹ ಸಣ್ಣ ರಾಷ್ರ್ಟಗಳಲ್ಲಿ 25ರಿಂದ 30 ಲಕ್ಷಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಬಹುದು. ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು.” ಎಂಬ ಹೇಳಿಕೆಯು ಭಾರತದ ವ್ಯವಸ್ಥೆಯನ್ನು ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳಬೇಕಾದ ಹಂತಕ್ಕೆ ಬಂದು ನಿಂತಿದೆ. ನವೀನನ ಸಾವಿನಲ್ಲಿಯೂ ರಾಜಕೀಯ ಮಾಡುತ್ತಿರುವ ದೇಶದ ರಾಜಕೀಯ ವ್ಯವಸ್ಥೆಯು ಒಂದು ಸಾರಿ ತಲೆ ತಗ್ಗಿಸಿ ನಿಲ್ಲಬೇಕು. ಸಿದ್ದರಾಮಯ್ಯ ಹೇಳುವಂತೆ ನವೀನನ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ. ಇತ್ತ ಯು.ಟಿ ಖಾದರ ಹೇಳುತ್ತಾರೆ ನವೀನ ಶಿಕ್ಷಣದ ಖರ್ಚನ್ನು ಮರಳಿ ಕೊಡಬೇಕು. ಡಿ.ಕೆ.ಶಿವಕುಮಾರ ಹೇಳುತ್ತಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷದಿಂದ ನೂರಾರು ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಬಿ.ಜೆ.ಪಿ ಯ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಪ್ರಕಾರ ಭಾರತೀಯರನ್ನು ಉಕ್ರೆನ್‍ನಿಂದ ಕರೆತರುವಲ್ಲಿ ಮೋದಿ ಸರ್ಕಾರವು ಯಶಸ್ವಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಬನವರಾಜ್ ಬೊಮ್ಮಾಯಿಯವರು ಹೇಳುತ್ತಾರೆ ಮೃತ ದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ. ಇತ್ತ ಹೆಚ್.ಡಿ.ಕುಮಾರಸ್ವಾಮಿಯವರ ಒಂದು ವಿಚಾರವು ಗಮನಾರ್ಹ ಚರ್ಚೆಗೆ ಒಳಗಾಗಿದೆ. ಕೇಂದ್ರ ಸರ್ಕಾರವನ್ನು ಆಪಾಧನೆ ಮಾಡುತ್ತಾ ಉಕ್ರೆನ್ ಭಾರತೀಯ ರಾಯಭಾರಿ ಕಛೇರಿ ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂಬ ಆಪಾಧನೆಯನ್ನು ಕೂಡ ಮಾಡುತ್ತಾರೆ. ಜೊತೆಗೆ ಹೆಚ್.ಡಿ.ಕುಮಾರಸ್ವಾಮಿಯವರು ಎನ್.ಇ.ಇ.ಟಿ ಪರೀಕ್ಷೆಯಿಂದ ನವೀನ್‍ಗೆ ರಾಜ್ಯದಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗದೆ ಪ್ರತಿಭಾವಂತನನ್ನು ಕಳೆದು ಕೊಂಡಿದ್ದೇವೆ.
“ಅಭ್ಯರ್ಥಿಯು ಜಿ.ಎಮ್.ಎ.ಟಿ ಅಥವಾ ಜಿ.ಆರ್.ಇ ನಲ್ಲಿ 97% ಸ್ಕೋರ್ ಮಾಡಬೇಕಾದರೆ ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾವರ್ಡ್ ಅಥವಾ ಸ್ಕ್ಯಾನ್ ಪೋರ್ಡ್‍ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿ ವೇತನದಲ್ಲಿ ಓದಬಹುದು ಆದರೆ ದುಃಖದ ಸಂಗತಿಯೆಂದರೆ ನವೀನ್ ಮೆರಿಟ್‍ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ” ಐ.ಪಿ.ಎಸ್ ಅಧಿಕಾರಿ ಕಾರ್ತೀಕೇಯ.ಜಿ. ಟ್ವಿಟ್ ಮಾಡುವ ಮೂಲಕ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇನ್ನು ಉಕ್ರೆನ್‍ನಿಂದ ಜೀವಂತ ಇರುವವರನ್ನೆ ಕರೆತರುವುದು ಕಷ್ಟ ಇಂತಹದರಲ್ಲಿ ಮೃತ ದೇಹವನ್ನು ತರುವುದು ಇನ್ನೂ ಕಷ್ಟ ನವೀನ್ ಮೃತ ದೇಹ ತರುವ ಜಾಗದಲ್ಲಿ 10 ಮಂದಿಯನ್ನು ಕರೆತರಬಹುದು ಎಂದು ಶಾಸಕ ಅರವಿಂದ್ ಬೆಲ್ಲದ್ ಬೇಜಾವಾಬ್ದಾರಿ ಹೇಳಿಕೆಯಿಂದ ರಾಜಕಾರಣಿಗಳ ಬುದ್ದಿ ಪ್ರಬುದ್ದತೆ ಪಡೆದಿಲ್ಲ ಎಂಬ ವಿಚಾರವಾದವನ್ನು ಮತ್ತೊಮ್ಮೆ ಸಾಬೀತು ಪಡೆಸಿದ್ದಾರೆ. ಬೇರೆಯವರಿಗಿಂತ ನವೀನನ ವಿಚಾರವನ್ನಿಟ್ಟುಕೊಂಡು ಇಷ್ಟೊಂದು ವಿಶ್ಲೇಷಣೆ ಮಾಡಲು ಕಾರಣ ನವೀನನ ದೇಹವನ್ನು ರಷ್ಯಾ ಸೈನಿಕರು ಉಕ್ರೆನ್‍ನಲ್ಲಿ ಹತ್ಯೆ ಮಾಡಿರಬಹುದು ಆದರೆ ನವೀನ ನಂತಹ ಮೆಲ್ವರ್ಗದ ಪ್ರತಿಭಾವಂತನ ಕನಸುಗಳನ್ನು ಈ ದೇಶದ ವ್ಯವಸ್ಥೆ ಹತ್ಯೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಾಗಲೂ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಮೀಸಲಾತಿ ನೀಡುವುದು ಎಷ್ಟು ಸರಿ? ಈ ದೇಶದ ಪಾರ್ಲಿಮೆಂಟ್ ಇತಿಹಾಸದಲ್ಲಿ ಜನ ಪ್ರತಿನಿಧಿಯ ಕಾಯ್ದೆಗಳು ಸಂಬಳ ಹೆಚ್ಚಳ ಮತ್ತು ಜಾತಿ ಮೀಸಲಾತಿಯ ಕಾಯ್ದೆಗಳು ಯಾವುದೇ ವಿರೋಧವಿಲ್ಲದೆ ಅಂಗೀಕಾರ ಗೊಳ್ಳುತ್ತಿರುವುದೇ ದುರಂತ ಒಂದು ದೇಶದ ಸ್ವಾತಂತ್ರ್ಯ ಅಥವಾ ಹುಟ್ಟು ಅಥವಾ ಸ್ವಂತ ವ್ಯವಸ್ಥೆಯಲ್ಲಿ ಆಡಳಿತ ಮಾಡಿ 75 ವರ್ಷಗಳು ಕಳೆದರೂ ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದ ಜಾತಿಯನ್ನು ಸುಧಾರಿಸಲು ಆಗಿಲ್ಲ ಅಂದರೆ ನಾಚಿಕೆಯಾಗಬೇಕು. ಒಬ್ಬ ಮನುಷ್ಯನ ಸಾಮಾನ್ಯ ಆಯುಷ್ಯವೇ 60 ವರ್ಷ ಆಗಿರುವುದರಿಂದ ಆದರೆ 75 ವರ್ಷ ಕಳೆದ ಬಾರತದಲ್ಲಿ ಮೀಸಲಾತಿ ಪದ್ದತಿಗಳು ಇನ್ನೂ ಜೀವಂತವಾಗಿಟ್ಟಿದ್ದೇವೆ ಎಂದರೆ 5-6 ದಶಕಗಳ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಆತ್ಮ ಸಾಕ್ಷಿ ಅನ್ನುವುದೇ ಇಲ್ಲವೇ. ಕಾಂಗ್ರೆಸ್ ಮತ್ತು ಬಿ.ಜೆ.ಪಿ ಸೇರಿದಂತೆ ಈ ದೇಶವನ್ನಾಳುತ್ತಿರುವ ಪಕ್ಷಗಳು ಮತ್ತು ರಾಜಕಾರಣೀಗಳು ಆತ್ಮ ಸಾಕ್ಷಿಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಹಿಂದುಳಿದವರ ಮತ್ತು ಅಲ್ಪ ಸಂಖ್ಯಾತರ ಹೆಸರಿನಲ್ಲಿ ಪ್ರತಿಭಾವಂತರಿಗೆ ಮೋಸ ಮಾಡುತ್ತಿದ್ದೀರಿ ಜೊತೆಗೆ ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೂ ಮೋಸ ಮಾಡುತ್ತಿದ್ದೀರಿ ಏಕೆಂದರೆ ಸ್ಪರ್ಧೆಯಿದ್ದರೆ ಮಾತ್ರ ಗೆಲುವು ಮತ್ತು ಸಂತೋಷ ಸಾಧ್ಯ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರನ್ನು ಮಾನಸಿಕವಾಗಿ ತುಳಿಯುತ್ತಿದ್ದೀರಿ. ಮತ್ತು ಪ್ರತಿಭಾವಂತರನ್ನ ಹತ್ಯೆ ಮಾಡುತ್ತಿದ್ದೀರಿ. ಹಾಗಾದರೇ ಇದೇ ಸತ್ಯವಲ್ಲವೇ ನವೀನನ ಸಾವಿಗೆ ನಾವೇ ಅಂದರೆ ನಮ್ಮ ವ್ಯವಸ್ಥೆಯೇ ಕಾರಣ ಆತನನ್ನು ರಷ್ಯಾ ಸೈನಿಕರು ದೈಹಿಕವಾಗಿ ಕೊಂದರೆ ನಾವು ಮಾನಸಿಕವಾಗಿ ಕನಸುಗಳನ್ನು ಕೊಂದಿಲ್ಲವೇ ಇಂತಹ ಅನಿಷ್ಟ ಪದ್ಧತಿಗಳನ್ನು ನೀರು ಗೊಬ್ಬರ ಹಾಕಿ ಬೆಳೆಸುತ್ತಿರುವ ರಾಜಕಾರಣಿಗಳನ್ನು ಮತ್ತು ರಾಜಕೀಯ ವ್ಯವಸ್ತೆಯನ್ನು ಬೆಂಬಲಿಸಿವುದೂ ಕೂಡ ಅಪರಾಧವಲ್ಲವೇ? ನವೀನನ ಕನಸುಗಳ ಹತ್ಯೆಯೊಂದಿಗೆ ನಮ್ಮ ವ್ಯವಸ್ಥೆಯ ದುರಂತವು ಕಣ್ಣು ಮುಂದೆ ಬರುತ್ತದೆ. ಇನ್ನು ಎಷ್ಟು ದಿನ ಸಹಿಸಿಕೊಳ್ಳುತ್ತೀರಿ?


Share

ಪಾಂಡವಪುರ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಹಿನ್ನೆಲೆ ಬಿಜೆಪಿ ಮುಖಂಡ ಎಸ್‌ಎನ್‌ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

Share

ಪಾಂಡವಪುರ : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಕೊಟ್ಟಿಗೆ ಸೇರಿದಂತೆ ಮನೆಯ ಒಂದು ಭಾಗ ಸಂಪೂರ್ಣ ನೆಲ ಕಚ್ಚಿದ್ದು, ಹಸು ಮತ್ತು ಕರು ಗಂಭೀರವಾಗಿ ಗಾಯಗೊಂಡಿವೆ. ಹತ್ತು ಕೋಳಿಗಳು ಘಟನೆಯಲ್ಲಿ ಮೃತಪಟ್ಟಿದ್ದು, ಮನೆ ಕುಸಿದ ಸಂದರ್ಭದಲ್ಲಿ ಒಳಗೆ ಮಲಗಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಮನೆ ಕುಸಿತಕ್ಕೆ ಸಮೀಪದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣವಾಗಿದ್ದು, ನಿರಂತರ ಗಣಿ ಸ್ಪೋಟದಿಂದಾಗಿ ಇಲ್ಲಿನ ಹಲವಾರು ಮನೆಗಳು ಬಿರುಕು ಬಿಟ್ಟಿವೆ. ಮಳೆಯ ಸಂದರ್ಭದಲ್ಲಿ ಇವು ಕುಸಿಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದರು.
`ಗುರುವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಮಳೆ ಪ್ರಾರಂಭವಾಯಿತು. ಊಟ ಮುಗಿಸಿ ನಾವು ಮಲಗಿದ್ದೇವು. ಸುಮಾರು ೧೧ ಗಂಟೆಗೆ ಇದ್ದಕ್ಕಿದ್ದಂತೆ ಮನೆಯ ಜಂತಿಗಳು ಮುರಿಯುವ ಸದ್ದು ಕೇಳಿ ಎಚ್ಚರವಾಗಿ ಮನೆಯವರನ್ನು ಎಬ್ಬಿಸುವಷ್ಟರಲ್ಲಿ ಮನೆ ಕುಸಿದು ಬಿತ್ತು. ಕಗ್ಗತ್ತಲು, ಹಸು ಕರು ಛಾವಣಿಯ ಕೆಳಗೆ ಸಿಲುಕಿ ಕಿರುಚಾಡುತ್ತಿದ್ದವು. ಈ ವೇಳೆ ಗ್ರಾಮಸ್ಥರು ಬಂದು ಹಸು ಕರುವನ್ನು ಎಳೆದು ತಂದರು’ ಎಂದು ಜವರೇಗೌಡರ ಪತ್ನಿ ನರಸಮ್ಮ ತಿಳಿಸಿದರು.
ಯಜಮಾನನ ಪ್ರಾಣ ಉಳಿಸಿದ ಸೊಳ್ಳೆ ಪರದೆ : ಮನೆಯ ಒಳಗೆ ಗೋಡೆ ಮಗ್ಗುಲಲ್ಲಿ ಮಲಗಿದ್ದ ಮನೆ ಯಜಮಾನ ಜವರೇಗೌಡರ ಮೇಲೆ ಹೆಂಚು ಮತ್ತು ಇಟ್ಟಿಗೆ ಉರುಳಿ ಬಿದ್ದಿದೆ. ಆದರೆ, ಅವರು ಸೊಳ್ಳೆ ಪರದೆ ಕಟ್ಟಿಕೊಂಡಿದ್ದ ಕಾರಣ ಮೇಲಿನಿಂದ ಬಿದ್ದ ಹೆಂಚು ಮತ್ತು ಇಟ್ಟಿಗೆಯನ್ನು ಸೊಳ್ಳೆ ಪರದೆ ತಡೆದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಜೆಪಿ ಮುಖಂಡ ಎಸ್.ಎನ್.ಟಿ.ಸೋಮಶೇಖರ್ ಭೇಟಿ : ಘಟನಾ ಸ್ಥಳಕ್ಕೆ ಜಕ್ಕನಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಎನ್.ಟಿ.ಸೋಮಶೇಖರ್ ಭೇಟಿ ನೀಡಿ ಜವರೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ಬಳಿಕ ಅವರು ಮಾತನಾಡಿ, ಸ್ಥಳೀಯ ಕಲ್ಲು ಗಣಿಗಾರಿಕೆಯಿಂದ ಇಲ್ಲಿನ ಮನೆಗಳು ಬಿರುಕು ಬಿಟ್ಟು ಮಳೆಯ ಸಂದರ್ಭದಲ್ಲಿ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ ಮನೆ ಬಿರುಕು ಬಿಟ್ಟಿರುವುದನ್ನು ನೋಡಿ ಪರಿಶೀಲಿಸಿದ್ದರು. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ ಅವರು, ಶೀಘ್ರದಲ್ಲೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಸಿ.ನಾರಾಯಣಗೌಡ ಅವರನ್ನು ಕರೆಸುವುದಾಗಿಯೂ, ಜತೆಗೆ ಸರ್ಕಾರದಿಂದ ಸಿಗುವ ನೆರವನ್ನೂ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಈ ವೇಳೆ ಮನೆಯ ಮಾಲಿಕರಾದ ಟೀಪು ಜವರೇಗೌಡ, ನರಸಮ್ಮ, ಗ್ರಾ.ಪಂ ಸದಸ್ಯ ಕೆಂಪೇಗೌಡ, ಮಾಜಿ ಸದಸ್ಯ ಸ್ವಾಮಿಶೆಟ್ಟಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ಪುರುಷೋತ್ತಮ, ಮುಖಂಡರಾದ ಕರೀಗೌಡ, ಕಾರ್ತಿಕ್, ಸಂಜಯ್, ಸಂತೋಷ್, ಪ್ರಕಾಶ್, ಶಶಿಧರ್, ವಿನೋದ್, ಮಹದೇವು, ಅನಿಲ್, ಲೋಕೇಶ್, ಶಂಭೂನಹಳ್ಳಿ ರವಿ ಇತರರು ಇದ್ದರು.
ಗ್ರಾಮಕ್ಕೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಭೇಟಿ ನೀಡಿದ್ದರು. ಇದೇ ವೇಳೆ ತಾಲೂಕಿನ ಕಾಮನಾಯಕನಹಳ್ಳಿಯಲ್ಲಿ ಬೋರಮ್ಮ ಎಂಬುವರ ಮನೆ ಕುಸಿದು ಬಿದ್ದಿದೆ.


Share

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಸಾರ್ವಜನಿಕರಿಂದ ಅವಹಾಲುಗಳ ಸುರಿಮಳೆ

Share

ಹೊಳಲು: ಸರ್, ನಮ್ಮೂರಿಗೆ ಬರೋದು ಒಂದೆ ಒಂದು ಬಸ್ಸು ಸರ್, ಅದು ಕೂಡಾ ಸರಿಯಾಗಿ ಬಾರದ ಕಾರಣ ಮಕ್ಕಳಿಗೆ ಶಾಲೆಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಸರ್, ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಿ ಹಾಗಾದರೆ ರೈತರು ಸರಿಯಾಗಿ ಬೆಳೆ ತೆಗೆಯಲು ಸಾಧ್ಯವಾಗುತ್ತದೆ. ಸರ್, ಈ ಸ್ವತ್ತು ಎನ್ನುವುದು ಸಾರ್ವಜನಿಕರಿಗೆ ಕುತ್ತಾಗಿ ಪರಿಣಮಿಸಿದೆ. ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯಬೇಕಾಗಿದೆ ಬಹಳಷ್ಟು ವಿಳಂಬವಾಗುತ್ತಿರುವ ಈಸ್ವತ್ತು ಪ್ರಕ್ರಿಯೆಯನ್ನು ಆದಷ್ಟು ಕಡಿಮೆ ಕಾಲಮಿತಿಯಲ್ಲಿ ಕಾರ್ಯನಿರ್ವಹಿಸಿಕೊಡಿ. ಇಂತಹ ನೂರಾರು ಅವಹಾಲುಗಳು ಕಂಡುಬAದದ್ದು ಸಮೀಪದ ದಾಸನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದಲ್ಲಿ.
ಹೌದು ಶನಿವಾರ ಹೂವಿನಹಡಗಲಿ ತಾಲೂಕು ದಾಸನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ತಹಶೀಲ್ದಾರ ಮಹೇಂದ್ರ ಮಾತನಾಡಿ ಸ್ಥಳೀಯ ಸಮಸ್ಯೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಸರಕಾರ ಪ್ರತಿ ತಿಂಗಳ ಮೂರನೇ ಶನಿವಾರ ಒಂದೊAದು ಗ್ರಾಮ ಪಂಚಾಯತಿಯಲ್ಲಿ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಇಂತಹ ಒಂದು ಮಹತ್ವಪೂರ್ಣ ಕಾರ್ಯಕ್ರಮವನ್ನು ಕೈಗೊಂಡಿದ್ದು ಅರ್ಥಪೂರ್ಣವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ನAತರ ನರೇಗಾ ಇಒ ಯು.ಹೆಚ್ ಸೋಮಶೇಖರ ಮಾತನಾಡಿ ಆರೋಗ್ಯ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ಪರಿಶ್ರಮದಿಂದ ದಾಸನಹಳ್ಳಿ ಗ್ರಾಮ ತಾಲೂಕಿನಲ್ಲಿಯೇ ಶೇ ೧೦೦ರಷ್ಟು ಕೊರೋನಾ ಲಸಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಹಾಗೂ ರೈತ ಬಂಧು ಯೋಜನೆ ಅತಿಹೆಚ್ಚು ಫಲಾನುಭವಿಗಳಿಗೆ ತಲುಪಿರುವುದು ಅಧಿಕಾರಿಗಳ ಕಾರ್ಯ ದಕ್ಷತೆಗೆ ಹಿಡಿದ ಕಯಗನ್ನಡಿಯಾಗಿದೆ ಎಂದು ತಿಳಿಸಿದ ಅವರು ಗ್ರಾಮ ನೈರ್ಮಲ್ಯ, ಬದು ನಿರ್ಮಾಣ ಸೇರಿದಂತೆ ನರೇಗಾ ಯೋಜನೆ ಅಡಿಯಲ್ಲಿ ಬರುವ ಉದ್ಯೋಗಾವಕಾಶಗಳಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ, ಎ.ಡಿ ಜಯಪ್ರಕಾಶ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂದ್ಯಾ ಸುರಕ್ಷಾ ಯೋಜನೆ, ವಿದವಾ ವೇತನಾ ಸೇರಿದಂತೆ ಕೆಲ ಫಲಾನುಬವಿಗಳಿಗೆ ಸ್ಥಳದಲ್ಲಿ ಆದೇಶ ಪ್ರತಿ ನೀಡಲಾಯಿತು.
ಈವೇಳೆ ಕಂದಾಯ ೬೯, ತಾ.ಪಂ ೧೮೦, ಕೃಷಿ, ಭೂಮಾನ, ಸಾರಿಗೆ ಸೇರಿದಂತೆ ಒಟ್ಟು ೨೮೭ ಅರ್ಜಿಗಳು ಸ್ವೀಕೃತಿಯಾಗಿದ್ದವು. ಅದರಲ್ಲಿ ಮಾತ್ರ ಬಗೆಹಿದಿದ್ದು, ಉಳಿದ ಅರ್ಜಿದಾರರ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕೆಲವೇ ದಿನಗಳಲ್ಲಿ ಬಗೆಹರಿಸುಉದಾಗಿ ತಹಶೀಲ್ದಾರ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಹೆಚ್.ಮಂಜವ್ವ ಅಧ್ಯಕ್ಷತೆ ವಹಿಸಿದ್ದರು, ತಾ.ಪಂ ಇಒ ಪ್ರಭುರೆಡ್ಡಿ, ಗ್ರಾ.ಪಂ ಉಪಾಧ್ಯಕ್ಷೆ ಬೂದನೂರು ಹುಲಿಗೆಮ್ಮ ಹಾಗೂ ಪಿಡಿಒ ರವೀಂದ್ರ ಸೇರಿದಂತೆ ಸರ್ವ ಸದಸ್ಯರು ಹಾಗೂ ತಾಲೂಕಿನ ವಿವಿಧ ಇಲಾಖೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಉಪ ತಹಶೀಲ್ದಾರ ಮಲ್ಲಿಕಾರ್ಜುನ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕ ಪ್ರಕಾಶ ವಂದಿಸಿದರು.


Share

ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತಾಯ -ಬಸವರಾಜ ಮ್ಯಾಗಳಮನಿ

Share

ಗಂಗಾವತಿ: ಗಂಗಾವತಿ ನಗರಸಭೆ ವ್ಯಾಪ್ತಿಯ ಹೊಸಳ್ಳಿ ರಸ್ತೆಯಲ್ಲಿ ಸುಮಾರು ೧೬ ಎಕರೆ ಭೂಮಿಯಲ್ಲಿ ೫೧೪ ನಿವೇಶನಗಳನ್ನು ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಲು ಅರ್ಜಿ ಕರೆದಿದ್ದು, ಅರ್ಜಿ ಸಲ್ಲಿಸಲು ಇದೇ ತಿಂಗಳ ೩೦ನೇ ತಾರೀಖು ಕೊನೆಯದಿನವೆಂದು ನಿಗದಿಪಡಿಸಿರುತ್ತೀರಿ. ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಪಡೆಯಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಇಂದು ನಗರಸಭೆಯ ಪೌರಾಯುಕ್ತರಾದ ಅರವಿಂದ ಜಮಖಂಡಿಯವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಮಾತನಾಡಿದರು, ಅಲ್ಲದೇ ವಾರ್ಡ್ ನಂ: ೨೭ (ಹೊಸದು) ರ ಸಮದ್ ಸಾಬ್ ಲೇಔಟ್ ನ ಪಾರ್ಕ್ನ ಜಾಗೆಯಲ್ಲಿ ಅನೇಕ ವರ್ಷಗಳಿಂದ ವಾಸವಿದ್ದ ಬಡ ಕುಟುಂಬಗಳಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿ ನಗರಸಭೆಯವರು ತೆರವುಗೊಳಿಸಿರುತ್ತಾರೆ. ಆ ಬಡ ಕುಟುಂಬಗಳು ಬೀದಿಪಾಲಾಗಿದ್ದು, ಸಂಕಷ್ಟದಲ್ಲಿರುತ್ತಾರೆ. ಆದ್ದರಿಂದ ಆ ನಿವೇಶನ ರಹಿತ ಕುಟುಂಬಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಸದರಿ ನಿವೇಶನಗಳನ್ನು ಯಾವುದೇ ಒತ್ತಡ, ಆಮೀಷಗಳಿಗೆ ಮಣಿಯದೇ ನಿಯಮದ ಪ್ರಕಾರ ಅರ್ಹ ಬಡ ನಿವೇಶನರಹಿತ ಕುಟುಂಬಗಳಿಗೆ ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಅನ್ಯಾಯವಾದಲ್ಲಿ ಕೋರ್ಟ್ ಮೊರೆ ಹೋಗಲಾಗುವುದು. ಇದಕ್ಕೆ ಅವಕಾಶ ಮಾಡಿಕೊಡದೇ ಪಾರದರ್ಶಕವಾಗಿ ನಿವೇಶಹ ಹಂಚಿಕೆ ಮಾಡಬೇಕೆಂದು ನಗರಸಭೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್.ಎನ್. ಹಂಚಿನಾಳ, ರಗಡಪ್ಪ ಹೊಸಳ್ಳಿ, ದುರುಗಪ್ಪ ಹೊಸಳ್ಳಿ, ಜಡೆಪ್ಪ ಹಂಚಿನಾಳ, ಮಲ್ಲು ಪಾರಿವಾಳ, ಕನಕಪ್ಪ, ಹನುಮೇಶ ಹೊಸಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Share

ನನ್ನ ದೇಶ ನನ್ನ ಹೆಮ್ಮೆ

Share

ಭಾರತವು ವಿಶ್ವದ ಒಂದು ಭಾಗದಲ್ಲಿ ವಿಶ್ವವೇ ಭಾರತ. ಉಳಿದ ದೇಶಗಳು ಇದರ ಅಂಗಗಳು ಅನ್ನಬಹುದು. ಮಾನವ ಜನಾಂಗದ ಉಗಮವು ಆಫ್ರಿಕಾದ ಭಾಗದಲ್ಲಿ ಆಗಿರಬಹುದು ಎಂಬ ನಂಬಿಕೆ ಇದೆ. ಈ ಆಫ್ರಿಕಾದ ನಾಗರೀಕತೆಯ ಕವಲುದಾರಿಯಲ್ಲಿ ಈಜಿಪ್ಟ್ ಬ್ಯಾಬಿಲೋನಿಯಾ, ರಷ್ಯಾ, ಮಂಗೋಲಿಯನ್ , ಇಂಡೋ ಜನಾಂಗ ಸೇರಿದಂತೆ ಹಲವಾರು ಜನಾಂಗಗಳು ಪ್ರವರ್ಥ ಮಾನಕ್ಕೆ ಬಂದಾಗ ನಮ್ಮ ಸಿಂಧೂ ಬಯಲಿನ ನಾಗರೀಕತೆಯು ವಿಜ್ಞಾನ, ಆಧ್ಯಾತ್ಮ, ತತ್ವ, ಸಿದ್ದಾಂತಗಳ ಮೇಲೆ ಅಗಾದ ಪ್ರಮಾಣದಲ್ಲಿ ಬೆಳೆದಿತ್ತು. ಮೂಲ ನಿವಾಸಿಗಳಾದ ದ್ರಾವಿಡರ ಮೇಲೆ ಆರ್ಯರ ಆಕ್ರಮಣವು ಪ್ರಭಾವ ಬೀರಿದರೂ ಕೂಡ ಮೂಲ ದ್ರಾವಿಡ ಸಂಸ್ಕøತಿಯು ಉಳಿಯಿತು. ಮುಂದೆ ಹಲವಾರು ಕಾಲ ಘಟ್ಟದಲ್ಲಿ ದಾಳಿಯಿಂದಲೂ ಭಾರತದ ಸಂಸ್ಕøತಿಗೆ ಧÀಕ್ಕೆ ಆಯಿತೆ ಹೊರತು ಅಳಿಸಲು ಆಗಲಿಲ್ಲ. ಇಂತಹ ಹಲವಾರು ವಿಚಾರಗಳನ್ನು ನಾವು ನೋಡಿದಾಗ ನಮಗೆ ಹೆಮ್ಮೆ ಅನಿಸುತ್ತದೆ.

1. ಶ್ರೀ ರಾಮನಿಂದ ನಿರ್ಮಿತ ಭಾರತದಿಂದ ಶ್ರೀಲಂಕಾಗೆ ಇರುವ “ರಾಮ ಸೇತುವೆ” ಪ್ರಪಂಚದ ಮೊದಲನೇ ಸೇತುವೆ. ಇದನ್ನು ನಾಸಾ ತನ್ನ ಉಪಗ್ರಹ ಚಿತ್ರದ ಮೂಲಕ ಒಪ್ಪಿಕೊಂಡಿದೆ.
2. ವಿಶ್ವದ ಅತ್ಯಂತ ಹಳೆಯ ಸಂಸ್ಕøತಿ ಅದರಲ್ಲೂ ಉಳಿದಿರುವ ಸಂಸ್ಕøತಿ ಎಂದರೆ “ಭಾರತೀಯ ಸಂಸ್ಕøತಿ” ಆಗಿದೆ. ಗ್ರೀಕ್ ಸಂಸ್ಕøತಿಗಿಂತ ಶ್ರೇಷ್ಠ ಸಂಸ್ಕøತಿ “ಭಾರತೀಯ ಸಂಸ್ಕøತಿ” ಆಗಿದೆ.
3. ವಿಶ್ವಕ್ಕೆ ಧರ್ಮದ ತಿರುಳನ್ನು ಬೀರಿದ್ದು ಭಾರತ.
4. ಭಾರತವನ್ನು “ವಿಶ್ವದ ಧರ್ಮಗಳ ತೊಟ್ಟಿಲು” ಎನ್ನಬಹುದು.
5. ವಿಶ್ವಕ್ಕೆ ವಿಮಾನದ ಪರಿಕಲ್ಪನೆ ನೀಡಿದ್ದು “ಪುಷ್ಪಕ ವಿಮಾನ” ಮೂಲಕ.
6. “testtube baby” ಪರಿಕಲ್ಪನೆಯನ್ನು ಗಾಂಧಾರಿಯ ಮೂಲಕ ಋಷಿ ಮುನಿಯವರು ಜಗತ್ತಿಗೆ ಪರಿಚಯಿಸಿದ್ದು ಪ್ರಪಂಚದಲ್ಲಿ ಕೌರವ-101 ಮಕ್ಕಳನ್ನು “test tubebaby” ಎನ್ನಬಹುದು.
7. ಪ್ಲಾಸ್ಟಿಕ್ ಸರ್ಜರಿ ಪಿತಾಮಹಾ ಎಂದು ಭಾರತದ ‘ಸುಶೃತ’ ನನ್ನು ಕರೆಯಬಹುದು.
8. ವಿಶ್ವದಲ್ಲೆ ಪ್ರಕೃತಿಯನ್ನು ದೇವರೆಂದು ಪೂಜಿಸಿದ್ದು ಭಾರತೀಯ ಸಂಸ್ಕøತಿ.
9. ‘ಭಾರತ’ ಎಂಬ ಹೆಸರು ‘ಭರತ ವರ್ಷ’ ಎಂಬ ಹೆಸರಿನಿಂದ ಉಗಮವಾಗಿದೆ.’ಇಂಡಿಯಾ’ ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ “ಇಂಡೀಸ್” ಎಂಬುದರಿಂದ ಬಂದಿದೆ. ಹಿಂದೂಗಳ ವಾಸ ಹೆಚ್ಚಾಗಿರುವುದರಿಂದ “ಹಿಂದೂಸ್ಥಾನ” ಎಂದು ಕರೆಯುತ್ತಾರೆ.
10. ವಿಶ್ವದ ಮೊದಲ ಅರ್ಥತಜ್ಞನೆಂದು –“ಚಾಣಾಕ್ಯ”ನನ್ನು ಕರೆಯಬಹುದು.
11. ಬೌದ್ಧ ಧರ್ಮವು ಭಾರತದಲ್ಲಿ ಜನ್ಮತಾಳಿ ಚೀನಾ ಸೇರಿದಂತೆ ಮಧ್ಯ ಪ್ರಾಚ್ಯದಲ್ಲಿ ಇಂದಿಗೂ ಸಕ್ರಿಂiÀiವಾಗಿದೆ.
12. ಆರ್ಯುವೇದವನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ನಮ್ಮ ಭಾರತ.
13. ಭಾರತವು ವಿಶ್ವ ಗುರು.
14. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆ ನಮ್ಮ ಪೂರ್ವಜರದ್ದು.
15. ವಿಶ್ವದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲೆಯಲ್ಲಿತ್ತು.
16. 1498 ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಮಾರ್ಗ ಕಂಡುಹಿಡಿದಿದ್ದಕ್ಕೆ ಇಲ್ಲಿನ ಮಸಾಲೆ ಪದಾರ್ಥಗಳು ವಿಶ್ವದ ಆಹಾರಕ್ಕೆ ರುಚಿ ಕೊಟ್ಟವರು ಭಾರತೀಯರು.
17. ಕೃಷ್ಣದೇವರಾಯನ ಕಾಲದಲ್ಲಿ ಬಂಗಾರವನ್ನು ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು.
18. ವಿಶ್ವದ ಅತ್ಯಂತ ಬೆಲೆಬಾಳುವ ‘ಕೊಹಿನೂರ ವಜ್ರ’ ಭಾರತದ ಆಸ್ತಿ.
19. ಅಂಬಿ ಮತ್ತು ಪೊರಸ್‍ನ ಆಡಳಿತದಿಂದ 1947 ರ ಸ್ವಾತಂತ್ರ್ಯದವರೆಗೂ ಹಲವು ರಾಜರ ಕಥೆಗಳು ರೋಚಕವಾಗಿದೆ.
20. ಗ್ರೀಕ್ ನ ಅಟ್ಲಾಸ್ ಹೀರೊಡೆಟಾಸ್‍ಕ್ಕಿಂತ ನಮ್ಮ ‘ರಾಮಾಯಣ’ ಮತ್ತು ‘ಮಹಾಭಾರತ’ ಶ್ರೇಷ್ಠವಾಗಿದೆ.
21. ಅಲೆಗ್ಸಾಂಡರ್ ಭಾರತದ ಮೇಲೆ ದಾಳಿ ಮಾಡಿದರೂ ಸಂಪೂರ್ಣ ಭಾರತವನ್ನು ಗೆಲ್ಲಲು ಆಗದೇ ಸತ್ತು ಹೋದ ವಿಶ್ವ ಗೆಲ್ಲುವ ಆಸೆಯು ಭಾರತದಿಂದ ಮಣ್ಣಾಯಿತು.
22. ಭಾರತವನ್ನು ‘ದ್ವೀಪ’ ತ್ರಿಕೋನ ದ್ವೀಪ ರಾಷ್ಟ್ರ ಎನ್ನಬಹುದು.
23. ಗ್ರೀಕರು ಪರ್ಷಿಯನ್ನರು, ಹೂಣರು, ಇಸ್ಲಾಮಿನ ಬ್ರಿಟೀಷ್ ದಾಳಿ ಮಾಧ್ಯಮವು ಭಾರತವು ಏಕತೆಯ ಜೊತೆಗೆ ಮೂಲ ಸಂಸ್ಕøತಿಯನ್ನು ಉಳಿಸಿಕೊಂಡು ಬಂದಿದೆ.
24. ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ಭಾರತ ಖಂಡದ ಭೂ ಬಾಗ ಏಷ್ಯಾದ ಭೂ ಭಾಗಕ್ಕೂ ಡಿಕ್ಕಿ ಹೊಡೆದು ಹಿಮಾಲಯವನ್ನು ಹುಟ್ಟು ಹಾಕಿತು. ಆಗ ಭಾರತ ಏಷ್ಯಾದ ಭಾಗವಾಯಿತು. ಈಗ ಕೂಡ ಈ ಪ್ಲೇಟ್ ಉತ್ತರ ದಿಕ್ಕಿನತ್ತ ಚಲಿಸುತ್ತಿದ್ದು ಮೌಂಟ್ ಎವರೆಸ್ಟ ಪ್ರತಿ ವರ್ಷ ಬೆಳೆಯುತ್ತಿರಲು ಇದೇ ಕಾರಣ.
25. ಭಾರತ ಭೂಭಾಗವು 3 ಕಡೆ ಸಮುದ್ರದಿಂದ ಒಂದು ಕಡೆ ಹಿಮಾಲಯ ಪರ್ವತ ಶ್ರೇಣಿಯಿಂದ ರಕ್ಷಣೆ ಪಡೆದಿದೆ.
26. ವಿಶ್ವದ ಅತ್ಯಂತ ಎತ್ತರವಾದ ಮೌಂಟ್ ಎವರೆಸ್ಟ್ ಭಾರತ ದೇಶದ ಪರ್ವತ ಶ್ರೇಣಿಯಾಗಿದೆ.
27. ಜಗತ್ತಿನ ಎರಡನೇಯ ಅತಿದೊಡ್ಡ ಮೆಗಾಸಿಟಿ ದೆಹಲಿ. ಭಾರತದಲ್ಲಿ ಮೂರು ಮೆಗಾಸಿಟಿಗಳಿವೆ ಚೀನಾಗಿಂತ ಹೆಚ್ಚು ಮೆಗಾಸಿಟಿಗಳು ಇರುವುದು ಭಾರತದಲ್ಲಿ ಇದು ನಮ್ಮೆಲ್ಲರ ಹೆಮ್ಮೆ.
28. ಜಗತ್ತಿನಲ್ಲಿರುವ ಒಟ್ಟು ಮಸಾಲೆಯ ಶೇ 70 ರಷ್ಟು ಭಾಗ ಭಾರತದಲ್ಲೇ ಉತ್ಪಾದನೆ ಆಗುತ್ತದೆ. ಮಸಾಲೆ ಸಲುವಾಗಿ ಬ್ರಿಟಿಷರು ನಮ್ಮ ದೇಶಕ್ಕೆ ಬಂದಿದ್ದು.
29. ಜಗತ್ತಿನಲ್ಲಿ ಉದ್ಯೋಗ ನೀಡಿದ ದೊಡ್ಡ ಸರಕಾರಿ ಸ್ವಾಮ್ಯದ ಸಂಸ್ಥೆ ಅಂದರೆ – ಭಾರತೀಯ ರೈಲ್ವೆ
30. ವಿಶ್ವದ ಅತ್ಯಂತ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ವಿಶ್ವದ ಎಲ್ಲಾ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ.
31) ದೇಶದ ಅಭಿವೃದ್ದಿ ಮತ್ತು ಶಕ್ತಿಯಲ್ಲಿ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.
32) ಜಗತ್ತಿನ ದೊಡ್ಡ ದೇಶಗಳ ವಿಸ್ತೀರ್ಣದ ಆಧಾರದ ಮೇಲೆ 7ನೇ ಸ್ಥಾನ ಪಡೆದಿದೆ.
33) ವಿಶ್ವಬ್ಯಾಂಕ್ ಸೂಚ್ಯಾಂಕದ ಆಧಾರದ ಮೇಲೆ 179 ದೇಶಗಳಲ್ಲಿ 37ನೇ ಸ್ಥಾನವನ್ನು ಜಿಡಿಪಿ ವಿಷಯದಲ್ಲಿ ಪಡೆದಿದೆ.
34) ವಿಶ್ವದ 71 ಬಿಲೆನಿಯರ್‍ಗಳಲ್ಲಿ 3 ಜನ ಭಾರತೀಯರು ಇರುತ್ತಾರೆ.
35) ವಿಶ್ವದ ಅತ್ಯಂತ ಹಳೆಯ ಮತ್ತು ಮಾನವ ಅಂಗಶಾಸ್ತ್ರಕ್ಕೆ ಹೊಂದಿಕೆ ಆಗುವ ಭಾಷೆಗಳಲ್ಲಿ ‘ಸಂಸ್ಕøತ’ವು ಮೊದಲ ಸ್ಥಾನದಲ್ಲಿ ಇದೆ.
36) ಕಬ್ಬಿಣ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿ ಇದೆ.
37) ವಿಶ್ವದ ಮೊಬೈಲ್ ಬಳಕೆದಾರರ ಸೂಚ್ಯಾಂಕದಲ್ಲಿ 2ನೇ ಸ್ಥಾನದಲ್ಲಿದೆ.
38) ‘ಹಾಕಿ’ ರಾಷ್ಟ್ರೀಯ ಆಟ ವಿಶ್ವದ 4ನೇ ಸ್ಥಾನದಲ್ಲಿದೆ. ಕ್ರಿಕೇಟ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಕ್ರಿಕೆಟ್‍ನಲ್ಲಿ ಮೊದಲ ಸ್ಥಾನದಲ್ಲಿದೆ.
39) ಜಗತ್ತಿನಲ್ಲಿ ಅತೀ ಹೆಚ್ಚು ಚಲನಚಿತ್ರಗಳು ಸಿದ್ದವಾಗುವುದು ಭಾರತದಲ್ಲೇ ಕಲೆಗೆ ಇಲ್ಲಿ ಅತ್ಯಂತ ಪ್ರೋತ್ಸಾಹ ಇದೆ.
40) ಜಗತ್ತಿನಲ್ಲೇ ಸೈನ್ಯಕ್ಕಾಗಿ ಖರ್ಚು ಮಾಡುವ ದೇಶಗಳ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದು ಸೈನ್ಯ ಶಕ್ತಿಯಲ್ಲಿ 4ನೇ ಸ್ಥಾನದಲ್ಲಿ ಸಕ್ರಿಯ ಟ್ರೂಪ್ಸ್‍ಗಳಲ್ಲಿ ಮೊದಲ ಸ್ಥಾನದಲ್ಲಿದೆ.
41) ಭಾರತದ 100000 ವರ್ಷಗಳ ಇತಿಹಾಸದಲ್ಲಿ ಅದು ಒಮ್ಮೆಯೂ ಬೇರೆ ದೇಶವನ್ನು ಆಕ್ರಮಿಸಿಕೊಂಡ ಉದಾಹರಣೆಯಿಲ್ಲ. ಜಗತ್ತಿನ ಅತಿ ಶಾಂತಿಯುತ ದೇಶ.
42) ಜಗತ್ತಿನ ಅತಿ ದೊಡ್ಡ ಸಸ್ಯಹಾರಿ ದೇಶ ಭಾರತವಾಗಿದೆ. ಇಲ್ಲಿದೆ 20 ರಿಂದ 40 ರಷ್ಟು ಸಂಪೂರ್ಣ ಸಸ್ಯಾಹಾರಿಗಳಾಗಿದ್ದಾರೆ.
43) ಭಾರತದ ಪ್ರತಿ ಹಳ್ಳಿ ಪಟ್ಟಣ ನಗರಗಳಲ್ಲೂ ಪೋಸ್ಟ್ ಆಫೀಸ್ ಇವೆ. ಒಟ್ಟು 1.55.015 ಅಂಚೆ ಕಛೇರಿಗಳು ಇವೆ. ಕಾಶ್ಮೀರದ ದಾಲ್ ಲೆಕ್ಕದಲ್ಲಿ ತೇಲುವ ಅಂಚೆ ಕಛೇರಿ ಕೂಡ ಇದೆ. ಈ ಮೂಲಕ ಜಗತ್ತಿನ ಅತ್ಯಂತ ದೊಡ್ಡ ಅಂಚೆ ವ್ಯವಸ್ಥೆ ಹೊಂದಿದೆ.
44) 12 ವರ್ಷಗಳಿಗೊಮ್ಮೆ ನಾಲ್ಕು ಪವಿತ್ರ ನದಿಗಳ ದಡದಲ್ಲಿ ನಡೆಯುವ ಕುಂಭ ಮೇಳಕ್ಕೆ ಭಾರತವಷ್ಟೇ ಅಲ್ಲದೆ ವಿಶ್ವದ ಎಲ್ಲಾ ಕಡೆಯಿಂದಲೂ ಜನಸಾಗರವೇ ಹರಿದು ಬರುತ್ತಿದೆ. ಇಲ್ಲಿ ಸುಮಾರು 100 ದಶಲಕ್ಷ ಜನರು ಸೇರಿರುತ್ತಾರೆ. ಇದನ್ನು ಅಂತರಿಕ್ಷದಿಂದ ಕೂಡ ನೋಡಬಹುದು. ಜಗತ್ತಿನಲ್ಲೇ ಅತೀ ಹೆಚ್ಚು ಜನ ಸೇರುವ ಮೇಳವಾಗಿದೆ.
45) ವಿಶ್ವದ ಆಮದು ಸೂಚ್ಯಾಂಕದಲ್ಲಿ 11ನೇ ಸ್ಥಾನ ಮತ್ತು ರಫ್ತು ಸೂಚ್ಯಾಂಕದಲ್ಲಿ 18ನೇ ಸ್ಥಾನದಲ್ಲಿ ಇದ್ದೇವೆ.
46) ಭಾರತದಲ್ಲಿ ಸಂಸ್ಕøತ, ಕನ್ನಡ, ತಮಿಳು, ತೆಲುಗು, ಗುಜರಾತಿ, ಕೊಂಕಣಿ ಸೇರಿದಂತೆ 600 ಭಾಷೆಗಳು ಇದ್ದಾಗಲೂ ವಿಶ್ವದೆಲ್ಲೆಡೆ ಇಂಗ್ಲೀಷ್ ಮಾತನಾಡುವವರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿ ಇದ್ದೇವೆ.
47) ವಿಶ್ವದ ತಂತ್ರಜ್ಞಾನದಕ್ಕೆ ಹೊಂದಾಣಿಕೆ ಆಗುವ ಭಾಷೆಗಳ ಸಂಖ್ಯೆಯಲ್ಲೂ 2ನೇ ಸ್ಥಾನದಲ್ಲಿ ಇದ್ದೇವೆ.
48) ಜಗತ್ತಿನಲ್ಲೇ ಉಕ್ಕು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ಉಕ್ಕಿನ ಮಹತ್ವ ಹೇಳಿದೆ ಭಾರತ.
49) ಬಾಳೆಹಣ್ಣು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.
50) ಜಗತ್ತಿನಲ್ಲೆ ಅತೀಹೆಚ್ಚು ಬೀನ್ಸ್ ಉತ್ಪಾದನೆಯ ದೇಶ ಭಾರತ ಮೊದಲ ಸ್ಥಾನದಲ್ಲಿದೆ.
51) ವಿಶ್ವದಲ್ಲಿ ಅತಿ ಹೆಚ್ಚು ಎಮ್ಮೆಗಳು ಇರುವ ದೇಶ ನಮ್ಮದು.
52) ಜಗತ್ತಿನಲ್ಲಿ ಅತೀ ಹೆಚ್ಚು ಹಸುಗಳು ಇರುವ ದೇಶ ಭಾರತ.
53) ವಿಶ್ವದಲ್ಲಿ ಅತ್ಯಂತ ಧಾರ್ಮಿಕ ಭಾವನೆ ಇರುವ ದೇಶ ಭಾರತ.
54) “ವಸುದೈವ ಕುಟುಂಬ” ವಿಶ್ವಕ್ಕೆ ಬಳುವಳಿಯಾಗಿ ಕೊಟ್ಟಿರುವುದು ಭಾರತ.
55) ಜಗತ್ತಿಗೆ ಜ್ಯೋತಿಷ್ಯ ವಿಜ್ಞಾನವನ್ನು ಉಡುಗೊರೆಯಾಗಿ ನೀಡಿದ್ದು ನಮ್ಮ ದೇಶ.
56) ಜಗತ್ತಿನಲ್ಲೇ ‘ಅಬ್ರಕ’ ಉತ್ಪಾದನೆ ಏಕೈಕ ದೇಶ.
57) ಅಣುಬಾಂಬಿನ ಪರಿಕಲ್ಪನೆಯು ಭಾರತ ಇತಿಹಾಸದ ‘ಬ್ರಹ್ಮಾಸ್ತ್ರ’ ಅವಲಂಬಿತವಾಗಿದೆ.
58) ಶ್ರೀಕೃಷ್ಣ ಈ ಭೂಮಿಯ ಮೊದಲ ರಾಜಕಾರಣಿ ಅನ್ನಬಹುದು.
59) ಮಾನವನ ಕಾಮಕ್ಕೂ ರೀತಿ ನೀತಿಗಳ ಕ್ರಮಗಳಿವೆ ಎಂದು ತಿಳಿಸಿದ್ದು ವಾತ್ಸಾಯನ ‘ಕಾಮಸೂತ್ರ’
60) 11ರ ವಯಸ್ಸಿನಲ್ಲೇ ವಿಮಾನ ಚಾಲನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಶ್ರೇಯಾ ದಿನಕರ್ ಅಪ್ರತಿಮ
ಸಾಧಕಿ ನಮ್ಮ ಕನ್ನಡತಿ.
61) ಚಂದ್ರನಲ್ಲಿ ನೀರನ್ನು ಕಂಡುಹಿಡಿದದ್ದು ಭಾರತ-2009 ಸೆಪ್ಟೆಂಬರ್‍ನಲ್ಲಿ ಭಾರತವು ಇಸ್ರೋ ಚಂದ್ರಯಾನ-1 ಎಂಬ ಉಪಗ್ರಹದಲ್ಲಿ ಕಳುಹಿಸಲಾದ ಚಂದ್ರ ಗಣಿಗಾರಿಕೆ ಬಳಸಿಕೊಂಡು ಚಂದ್ರನ ಮೇಲೆ ನೀರು ಇರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತು.
62) ಸ್ವಿಟ್ಜಲ್ರ್ಯಾಂಡ್‍ನಲ್ಲಿ ವಿಜ್ಞಾನ ದಿನಾಚರಣೆಯನ್ನು ಭಾರತದ ಮಾಜಿ ರಾಷ್ಟ್ರಪತಿ ಕ್ಷಿಪಣಿ ತಜ್ಞ ಎ.ಪಿ.ಜೆ. ಅಬ್ದುಲ್ ಕಲಾಂರವರ ನೆನಪಿನಲ್ಲಿ ಆಚರಿಸುತ್ತಾರೆ. ಇವರು 2006 ಮೇ 6 ರಂದು ಸ್ವಿಟ್ಜಲ್ರ್ಯಾಂಡಿಗೆ ಭೇಟಿ ನೀಡಿದ್ದರು. ಈ ನೆನಪಿಗಾಗಿ ಪ್ರತಿ ವರ್ಷ ಮೇ 6 ವಿಜ್ಞಾನ ದಿನವಾಗಿ ಆಚರಿಸುತ್ತಾರೆ.
63) ಜಗತ್ತಿನಲ್ಲೆ ‘ಮೌಸಿನ್‍ರಾಂ’ ಅತೀ ಹೆಚ್ಚು ಮಳೆ ಬೀಳುವ ಜನವಸತಿ ಪ್ರದೇಶ 1861 ರಲ್ಲಿ ಚಿರಾಪುಂಜಿಯಲ್ಲಿ ಅತೀ ಹೆಚ್ಚು ಮಳೆಯಾಗಿ ದಾಖಲೆ ಸೃಷ್ಟಿ ಆಗಿತ್ತು.
64) ಭರತನಾಟ್ಯ ಯಕ್ಷಗಾನ ಮತ್ತು ನಾಟಕಗಳ ಪರಿಚಯಿಸಿದ ಹೆಮ್ಮೆ ನಮ್ಮ ದೇಶವಾಗಿದೆ.
65) ಲಿಂಬೆಹಣ್ಣು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿ ನಮ್ಮ ದೇಶವಿದೆ.
66) ಮಾವಿನಹಣ್ಣು ಮತ್ತು ಹಲಸಿನ ಹಣ್ಣು ಉತ್ಪಾದನೆಯಲ್ಲಿ ವಿಶ್ವದ ಮೊದಲ ಸ್ಥಾನದಲ್ಲಿದೆ.
67) ತೆಂಗಿನ ಕಾಯಿ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಪ್ರಥಮ ಸ್ಥಾನದಲ್ಲಿದೆ.
68) ಆಡುಗಳ ಹಾಲುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.
69) ಪ್ರಪಂಚದ ಏಳು ಅದ್ಭುತಗಳಲ್ಲಿ ‘ತಾಜ್ ಮಹಲ್’ ಕೂಡ ಒಂದು.
70) ಪ್ರಪಂಚದ ಅತ್ಯಂತ ದೊಡ್ಡ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇರುವ ದೇಸ.
71) ವಿಶ್ವದ ಶೇ. 70ರಷ್ಟು ಹುಲಿಗಳನ್ನು ಹೊಂದಿರುವ ದೇಶ ನಮ್ಮದು.
72) ಭಾರತವು ವಿಶ್ವದ ಸೊನ್ನೆಯನ್ನು ಕೊಡುಗೆ ನೀಡಿದೆ. ಈ ಸೊನ್ನೆ ಇಲ್ಲದಿದ್ದರೆ ವಿಶ್ವವೇ ಸೊನ್ನೆ ಆಗುತ್ತಿತ್ತು. ಬ್ರಹ್ಮಗುಪ್ತ ಸೊನ್ನೆಯ ಕಲ್ಪನೆಯನ್ನು ಪರಿಚಯಿಸಿದ ಗಣಿತ ತಜ್ಞ.
73) ಅತೀ ಹೆಚ್ಚು ಇಂಜಿನೀಯರ್ಸ್ ಡಾಕ್ಟರ್ ತಯಾರಿಸುವ ದೇಶವಾಗಿದೆ. ನಾಸಾದಲ್ಲಿ ಶೇ. 30% ರಷ್ಟು ಭಾರತೀಯರೇ ಇದ್ದಾರೆ.
74) ಕಾಮನ್‍ವೆಲ್ತ್ ಗೇಮ್ಸ್ ಏಷ್ಯನ್ ಗೇಮ್ಸ್ ಓಲಂಪಿಕ್ಸ್ ಸೇರಿದಂತೆ ವಿಶ್ವದ ಎಲ್ಲಾ ರೀತಿಯ ಆಟಗಳಲ್ಲಿ ಭಾಗವಹಿಸುವುದು. ಜೊತೆಗೆ ಪದಕಗಳನ್ನು ಗೆದ್ದಿರುವುದು ಭಾರತ.
75) ವಿಶ್ವದ ಸಿಲಿಕಾನ್ ಸಿಟಿ ಸಿಲಿಕಾನ್ ವ್ಯಾಲಿ ನಮ್ಮ ಬೆಂಗಳೂರು ಕಂಪ್ಯೂಟರ್ ಮುಖ್ಯ ಭಾಗ ಮದರ್ ಬೋರ್ಡ್ ಸಿಲಿಕಾನ್ ಉತ್ಪಾದಿಸುವ ಏಕೈಕ ದೇಶ.

ಹೇಳಿದ್ದು ಅಲ್ಲ, ಇರುವುದು ಲಕ್ಷ ಲಕ್ಷ ಬರೆದರೆ ಪುಟಗಳೇ ಸಾಲದಷ್ಟು ಭಾರತದ ಸಾಧನೆ. ಗತವೈಭವ ಸಂಸ್ಕøತಿ, ಆಚಾರ
ವಿಚಾರಗಳನ್ನು ಹೊಂದಿದೆ. 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ನೆನಪಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ.
ಸಂಮೋಹನ ವಿದ್ಯೆಯನ್ನು ಭಾರತವು ವಿಶ್ವಕ್ಕೆ ಕೊಟ್ಟಿದೆ. ಏಕಾಗ್ರತೆ ಮನಸ್ಸಿನ ನಿಯಂತ್ರಣ ಹೋಮಿಯೋಪತಿ ಕೊಡುಗೆಗಳು
ಅಪಾರ. ವಿಶ್ವದ ಶ್ರೇಷ್ಠ ಪ್ರಶಸ್ತಿಯಾದ ನೋಬೆಲ್ ಅನ್ನು 12 ಪಡೆಯುವ ಮೂಲಕ ಭಾರತವು ಯಾರಿಗೂ ಕಮ್ಮಿ ಇಲ್ಲ
ಎಂದು ತೋರಿಸಿದೆ. ಈಗ ನಡೆಯುತ್ತಿರುವ ಒಲಂಪಿಕ್ಸ್‍ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ನಮ್ಮ ಶಕ್ತಿಯನ್ನು ವಿಶ್ವದ
ಮುಂದೆ ಇಟ್ಟಿದ್ದೇವೆ. ಅಲಿಪ್ತ ನೀತಿಯ ಹರಿಕಾರರು ಶಾಂತಿಪ್ರಿಯ ದೇಶ. ಬಹು ಸಂಸ್ಕøತಿಯಲ್ಲಿ ಏಕತೆ ಮೆರೆದ ನನ್ನ
ಭಾರತ ನನ್ನ ಹೆಮ್ಮೆ ಅಲ್ಲವೆ !


Share

ಸಿಎಂ ಬಸವರಾಜ ಬೊಮ್ಮಾಯಿ ಬದುಕಿನ ಪಯಣ

Share

ಬಸವರಾಜ ಬೊಮ್ಮಾಯಿ ಕರ್ನಾಟಕದ ಒಬ್ಬರು ರಾಜಕಾರಣಿ. ಭಾರತೀಯ ಜನತಾ ಪಕ್ಷದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಜುಲೈ 28, 2021 ರಂದು ಬಿ.ಎಸ್. ಯಡಿಯೂರಪ್ಪರವರ ನಂತರ ಬೊಮ್ಮಾಯಿ ಕರ್ನಾಟಕದ ೨೩ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್. ಆರ್. ಬೊಮ್ಮಾಯಿ-ಗಂಗಮ್ಮ ಅವರ ಪುತ್ರ. 1960 ರ ಜ.28 ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.100 ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಯಕೀಯ ಜೀವನ

ಅವರು ಜನತಾದಳದಿಂದ ತಮ್ಮ ರಾಜಕೀಯವನ್ನು ಪ್ರಾರಂಭಿಸಿದರು.
1998 ಹಾಗೂ 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.
2008 ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು.
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ ಆರ್ ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ.


Share