ಎಕ್ಸಲೆ0ಟ್ ಲಿಟಲ್ ಚಾಂಪ್ಸ್ ಶಾಲಾ ಆವರಣ ಬಸವೇಶ್ವರನಗರ ನಲ್ಲೂರಿನಲ್ಲಿ 2024-25 ನೇ ಸಾಲಿನ ಎರಡನೇ ವರ್ಷದ ಶಾಲಾ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಿನಾಂಕ09-02-25ನೇ ಭಾನುವಾರ 10:00 ಗಂಟೆಗೆ ಏರ್ಪಡಿಸಿದ್ದು ಈ ಚಿಣ್ಣರ ಕಲರವ ಕಾರ್ಯಕ್ರಮಕ್ಕೆ ಪೋಷಕ ವೃಂದ, ವಿದ್ಯಾರ್ಥಿಗಳು ಹಾಗೂ ಮಕ್ಕಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಶಾಲೆಯ ಕಾರ್ಯದರ್ಶಿಗಳಾದ ಖಲೀಲ್ ಅಹ್ಮದ್ ಹಾಗೂ ಶಿಕ್ಷಕ ವರ್ಗದವರು ಹಾಗೂ ಸಹಾಯಕರು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ
Category: ಪ್ರಮುಖ ಸುದ್ದಿಗಳು
ಡಾ:ಬಿ ಆರ್.ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ.
ಕೆ ಐ ಎ ಡಿ ಬಿ ಯ ವಿದ್ಯುತ್ ನ ಸತತ ಟೆಂಡರ್ ಗಳನ್ನು 3 ಕಂಪೆನಿಗಳಿಗೇ 2018 ರಿಂದ ಕೊಟ್ಟು; ಕಾಮಗಾರಿಗಳಲ್ಲಿ ನಡೆದ ಅಕ್ರಮ, ಭ್ರಷ್ಟಾಚಾರ ವಿರೋಧಿಸಿ; ಡಾ:ಬಿ ಆರ್.ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ. ಸುದ್ದಿ ಗೋಷ್ಠಿಯಲ್ಲಿ ಕೆ.ಅರುಣ್ ಕು ಮಾರ್ ಮಾಧ್ಯಮದವರೊಂದಿಗೆ ಮಾತ ನಾಡಿ; ಈ ಕುಮಾರ್,ಅರವಿಂದ್ ಮತ್ತು ಗೀತಾ ಎಲೆಕ್ತ್ರಾನಿಕ್ಸ್ ಕಂಪೆನಿಗಳಿಗೇ, ನೆಲ ಮಂಗಲ, ದಾಬಸ್ಪೇಟ್, ತುಮಕೂರುಗಳ ವಿದ್ಯುತ್ ಕಾಮಗಾರಿಗಳನ್ನು ನಿರಂತರವಾ ಗಿ ಟೆಂಡರ್ ಕೊಟ್ಟು ಬಿಲ್ ಪಾವತಿಯಾಗಿರುವುದು; ಅಧಿಕಾರಿಗಳ ಮೇಲೆ ಅಕ್ರಮ, ಭ್ರಷ್ಟಾಚಾರದ ಅನುಮಾನ ಮೂಡಿಸಿದೆ. ಆದ್ದರಿಂದ ಭ್ರಷ್ಟ ಅಧಿಕಾರಿಗಳ ಮೇಲೆ ಇಡಿ, ಲೋಕಾಯುಕ್ತ ತನಿಖೆ ಮಾಡಿಸಿ ಕ್ರಿಮಿನಲ್ ಕೇಸನ್ನು ದಾಖಲಿಸಿ; ಸಿ ಐ ಡಿ ತನಿಖೆಗೂ ಆದೇಶಿಸಬೇಕೆಂದು ಕೈಗಾರಿಕೆ ಸಚಿವರಿಗೆ, ಮುಖ್ಯಮಂತ್ರಿಗಳಿಗೆ, ಮಾನ್ಯರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಜನರಿಂದ ಬೃಹತ್ ಪ್ರತಿಭಟನೆ ಮಾಡಿಸುತ್ತೇವೆ”ಎಂದು ದಲಿತ ಚಳುವಳಿ ಅರುಣ್.ಕೆ ರಾಜ್ಯಾಧ್ಯಕ್ಷರು, ಶ್ರೀಮತಿ ಸರಸ್ವತಿ ನಂಜಪ್ಪ, ವಿಜಯ, ಶಶಿ ಕಲಾ ಡಾ: ಬಿಆರ್ ಅಂಬೇಡ್ಕರ್ ಪ್ರಚಾರ ಸಮಿತಿ(ರಿ.)ಯ ಪದಾಧಿಕಾರಿಗಳು ‘ಪತ್ರಿಕಾ ಹೇಳಿಕೆ’ ಯಲ್ಲಿ ಆಗ್ರಹಿಸಿದ್ದಾರೆ.
ಎನ್ ಪಿಎಸ್ ಯೋಜನೆಯಿಂದ ಹಳೇ ಪಿಂಚಣಿ ಯೋಜನೆಗೆ ಒಪಿಎಸ್ ಗೇ ಸೇರಿಸಿ
೫ಲಕ್ಷ ರಾಜ್ಯ ಸರ್ಕಾರೀ ನೌಕರರನ್ನು ಈಗಿನ ಎನ್ ಪಿಎಸ್ ಯೋಜನೆಯಿಂದ ಹಳೇ ಪಿಂಚಣಿ ಯೋಜನೆಗೆ ಒಪಿಎಸ್ ಗೇ ಸೇರಿಸಿ ಈಗಿನ ಕಾಂಗ್ರೆಸ್ ಸರ್ಕಾರದ ವಾಗ್ದಾನದಂ ತೆ ಮರು ಜಾರಿಗೊಳಿಸಲು ಸುದ್ದಿಗೋಷ್ಠಿ ಯಲ್ಲಿ ಆಗ್ರಹ, ಧರಣಿಗೆ ಸಿದ್ಧತೆ.”ಕರ್ನಾಟಕ ರಾಜ್ಯಸರ್ಕಾರಿ NPSಎನ್ಪಿಎಸ್ ನೌಕರರ ಸಂಘದ ವತಿಯಿಂದ ಎನ್ಪಿ ಎಸ್ ಯೋಜನೆಯ ರದ್ದತಿಗೆ ನಾಳೆ ಬೆಂ.ನ ಫ್ರೀ ಡಂ ಪಾರ್ಕಿನಲ್ಲಿ ಓಪಿಎಸ್ ಜಾರಿಗೆ ಹಕ್ಕೊತ್ತಾಯದ ಬೃಹತ್ ಧರಣಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ 2022 ಅಕ್ಟೋಬರ್ ನಿಂದ ಒಂದು ತಿಂಗಳು ಹಳೆಯ ಪಿಂಚಣಿ ಯೋಜನಾ ಜಾರಿ ಸಂಕಲ್ಪ ಯಾತ್ರೆ ಹಾಗೂ ಫೆಬ್ರವರಿಯಲ್ಲಿ14 ದಿನಗಳ ಕಾಲಒಪಿಎಸ್ ಜಾರಿಗಾಗಿ ಪ್ರೀಡಂ ಪಾರ್ಕ್ಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು. ಜನವರಿ ತಿಂಗಳಿಂದ ಮೂರು ತಿಂಗಳ ಕಾಲ “Vote for OPS” ಅಭಿಯಾನವನ್ನು ನಡೆಸಲಾಗಿತ್ತು. ಈ ಹಿನ್ನೆ ಲೆಯಲ್ಲಿ ಕಾಂಗ್ರೆಸ್ ಪಕ್ಷವು NPS ಯೋಜ ನೆ ಯನ್ನು ರದ್ದುಗೊಳಿಸುವ ಭರವಸೆಯ ನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು,ಅದರಂತೆ ನಡೆಯಲಿ” ಎಂದರು.”ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರ ವಹಿಸಿಕೊಂಡ ತಕ್ಷಣ ಎನ್ ಪಿ ಎಸ್ ಪದಾ ಧಿಕಾರಿಗಳೊಂದಿಗೆ 2023 ಜೂನ್ 13ರಂ ದು ಸಭೆ ನಡೆಸಿ ‘ಗೃಹ ಕಛೇರಿ ಕೃಷ್ಣಾ’ದಲ್ಲಿ ಮುಖ್ಯಮಂತ್ರಿಯವರು ಸಭೆ ನಡೆಸಿ ಎನ್ ಪಿಎಸ್ ರದ್ದು ಪಡಿಸುವ ಬಗ್ಗೆ ಭರವಸೆ ನೀಡಿದ್ದರೂ, ಈವರೆಗೂ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.ಜನವರಿ 19,2025 ರಂದು ಬೆಂಗಳೂರಿನ ಲ್ಲಿ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ “ಕಾಂಗ್ರೆಸ್ ಪಕ್ಷದಪ್ರಣಾಳಿಕೆಯ ಲ್ಲಿ ನೀಡಿರುವ ಭರವಸೆಯಂತೆ ಎನ್ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಪ್ರಕಾರ 7-2-25 ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ‘OPS ಹಕ್ಕೊತ್ತಾಯ’ ಧರಣಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ”ಎಂದು ಹೇಳಿದರು. ತಾ:7-2-25 ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಸಾವಿರಾರು ಎನ್ಪಿಎಸ್ ನೌಕರರು ಧರಣಿಯಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಐಸ್ ಕ್ರೀಂ ಮಾರಾಟ ನೆಪದಲ್ಲಿ ಮಹಿಳೆ ಚಿನ್ನದ ಸರ ಕಸಿದು ಸಿಕ್ಕಿಬಿದ್ದ ಕಳ್ಳ.ಆರೋಪಿ ಪೊಲೀಸರ ವಶಕ್ಕೆ.
ಹುಣಸೂರು: ಜಮೀನು ಕೆಲಸ ಮಾಡಲು ತೆರಳುತ್ತಿದ್ದ ಮಹಿಳೆಯನ್ನ ಐಸ್ ಮಾರಾಟ ಮಾಡುವ ನೆಪದಲ್ಲಿ ಹಿಂಬಾಲಿಸಿ ನಂತರ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಪರಾರಿಯಾದ ಖದೀಮ ಪೊಲೀಸರ ಅತಿಥಿಯಾದ ಘಟನೆ ಹುಣಸೂರಿನಲ್ಲಿ ನಡೆದಿದೆ.ಕೆಂಪರಾಜು ಸಿಕ್ಕಿಬಿದ್ದ ಆರೋಪಿ.ಹುಣಸೂರು ತಾಲೂಕು ಹೊಸವಾರಂಚಿ ಗ್ರಾಮದಲ್ಲಿ ಘಟನೆ ನಡೆದಿದೆ.ಗ್ರಾಮದ ಜ್ಯೋತಿ ಎಂಬುವರು ಅವರೆಕಾಯಿ ಕೊಯ್ಯಲು ಜಮೀನಿಗೆ ತೆರಳುತ್ತಿದ್ದರು.ಈ ವೇಳೆ ಕೆಂಪರಾಜು ಐಸ್ ಕ್ರೀಂ ಮಾರಾಟ ಮಾಡುತ್ತಿರುವಂತೆ ಹಿಂಬಾಲಿಸಿದ್ದಾನೆ.ಜ್ಯೋತಿ ರವರು ಜಮೀನಿಗೆ ಪ್ರವೇಶಿಸಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕೆಂಪರಾಜು ಕಲ್ಲನ್ನ ಎತ್ತಿ ತಲೆಮೇಲೆ ಹಾಕಿ ಕೊಲ್ಲುವ ಬೆದರಿಕೆ ಒಡ್ಡಿ 35 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ.ಕೂಡಲೇ ಕೆಂಪರಾಜು ನಿಂದ ಬಚಾವ್ ಆಗಿ ಬಂದ ಜ್ಯೋತಿ ಸನಿಹದಲ್ಲೇ ಕೆಲಸ ಮಾಡುತ್ತಿದ್ದ ಗ್ರಾಮಸ್ಥರಿಗೆ ತಿಳಿಸಿದ್ದಾರೆ.ಕೆಂಪರಾಜು ನ ಪತ್ತೆ ಹಚ್ಚಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ.ಚಿನ್ನದ ಸರ ವಶಪಡಿಸಿಕೊಂಡ ಹುಣಸೂರು ಪೊಲೀಸರು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ…
ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು ಪುಸ್ತಕ ಲೋಕರ್ಪಣೆ
*ಜನಪರ ಆಡಳತ, ತೆರಿಗೆ ಹಣ ಸಮರ್ಪಕ ಬಳಕೆ,ಸಮ ಸಮಾಜ ನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ದೇಶಕ್ಕೆ ಮಾದರಿಯಾದರು-ಸಚಿವ ಹೆಚ್.ಸಿ.ಮಹದೇವಪ್ಪ
ಬೆಂಗಳೂರು:ಸರ್ಕಾರಿ ಕಲಾ ಕಾಲೇಜು, ಬಾಪೂಜಿ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಸಿದ್ದ ಇತಿಹಾಸಕಾರರಾದ ಪ್ರೊ. ಎಸ್.ಚಂದ್ರಶೇಖರ್ ರವರ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು ಪುಸ್ತಕ ಬಿಡುಗಡೆ ಕಾರ್ಯಕ್ರಮ.
ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪರವರು, ಬೆಂಗಳೂರುನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಪ್ರಕಾಶಮೂರ್ತಿ, ಚಿಂತಕರು, ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ, ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಎಸ್.ಚಂದ್ರಶೇಖರ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ಪಿ.ಟಿ.ಶ್ರೀನಿವಾಸ್ ನಾಯಕ್, ಬಿಬಿಎಂಪಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚ.ನಾಗರಾಜ್ ರವರು ಪುಸ್ತಕ ಬಿಡುಗಡೆಗೊಳಿಸಿದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ ರವರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು ಪುಸ್ತಕ ಬರೆದ ಪ್ರೊ.ಚಂದ್ರಶೇಖರ್ ರವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ.
ಪ್ರೊ.ಚಂದ್ರಶೇಖರ್ ರವರು 45ವರ್ಷಗಳ ಕಾಲ ಶಿಕ್ಷಕರಾಗಿ ವೃತ್ತಿಯಲ್ಲಿ ಸೇವೆ ಸಲ್ಲಿಸಿ, 72ವರ್ಷವಾದರು ಉತ್ಸಾಹದಿಂದ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.
ಪುಸ್ತಕದ ಕೇಂದ್ರ ಬಿಂದು ನಾಲ್ವಡಿ ಕೃಷ್ಣರಾಜ ಒಡೆಯರು, ರಾಜರ ಆಳ್ವಿಕೆಯಲ್ಲಿ ಜನಪರ ಆಡಳಿತ, ತೆರಿಗೆ ಹಣ ಸಮರ್ಪಕ ಬಳಕೆ, ಸಮ ಸಮಾಜ ನಿರ್ಮಾಣಕ್ಕೆ ಬೇಕಾದದನ್ನು ಇಡಿ ದೇಶಕ್ಕೆ ತೋರಿಸಿ ಕೊಟ್ಟರು, ಸಾಹು ಮಹಾರಾಜ್ ಅವರನ್ನ ಬಿಟ್ಟರೆ ನಾಲ್ವಡಿ ಕೃಷ್ಣರಾಜ ಒಡೆಯರು.
ಶೂದ್ರರಿಗೆ ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣ ಕೊಡುತ್ತಿರಲ್ಲಿಲ.
65ಶಾಲೆಗಳನ್ನು 1890ರಲ್ಲಿ ಸ್ಥಾಪನೆ ಮಾಡಿದ್ದರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರು.
ಹಿಂಸೆ, ಸವಾಲುಗಳನ್ನು ಮೆಟ್ಟಿ ನಿಂತರು. ದಿವಾನರ ಮಾತನ್ನು ಲೆಕ್ಕಿಸದೇ ಪ್ರಜಾಪ್ರತಿನಿಧಿಯಲ್ಲಿ ಮೀಸಲಾತಿ ಕೊಟ್ಟರು. ಕೆ.ಆರ್.ಎಸ್.ಅಣೆಕಟ್ಟು ಕಟ್ಟಿದ್ದರು.
ಶಿಕ್ಷಣ, ನೀರಾವರಿ, ಕೈಗಾರಿಕೆ ಮತ್ತು ವಿದ್ಯುತ್ ಎಲ್ಲ ಕ್ಷೇತ್ರಗಳಲ್ಲಿ ಅವರ ಆಡಳಿತದಲ್ಲಿ ಹೆಚ್ಚಿನ ಅಭಿವೃದ್ದಿಯಾಯಿತು.
ಚರಿತ್ರೆ ಗೊತ್ತಿದ್ದರೆ ಮಾತ್ರ ಚರಿತ್ರೆ ಬರೆಯಲು ಸಾಧ್ಯ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಹೇಳಿದ್ದರು.
ಮುಂದಿನ ದಿನಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಪುಸ್ತಕ ಮಕ್ಕಳ ಪಠ್ಯಪುಸ್ತಕದಲ್ಲಿ ಆಳವಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
ನಾಲ್ವಡಿ ಕೃಷ್ಣರಾಜ ಒಡೆಯರ ಆದರ್ಶ, ಮಾರ್ಗದರ್ಶನದಲ್ಲಿ ಎಲ್ಲರು ಸಾಗಿದರೆ ಉತ್ತಮ ಜೀವನ, ಸಮಾನತೆ ತರಲು ಸಾಧ್ಯ ಎಂದು ಹೇಳಿದರು.
ಎಂ.ಪ್ರಕಾಶಮೂರ್ತಿ ರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು 109ವರ್ಷವಾಗಿದೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಪುಸ್ತಕ ಬರೆದುಕೊಡಿ ಎಂದು ಚಂದ್ರಶೇಖರ್ ರವರಿಗೆ ಹಿಂದಿನ ಅಧ್ಯಕ್ಷರಾದ ಪುಂಡಲಿಕ ಹಾಲಂಬಿರವರು ವಿನಂತಿ ಮಾಡಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರು ಜನಪರ ಕಾಳಜಿ ಇರುವ ಮಹಾನ್ ವ್ಯಕ್ತಿಯಾಗಿದ್ದರು. 56ವರ್ಷ ಜೀವನದಲ್ಲಿ 36ವರ್ಷ ಕಾಲ ಜನಸೇವೆ ಇತಿಹಾಸದಲ್ಲಿ ಉತ್ತಮ ಆಡಳಿತವೆಂದು ಜನಪ್ರಿಯವಾಗಿದೆ.
ಕನ್ನಡ ನಾಡು ಎಂದು ಮರೆಯದಂತಹ ವ್ಯಕ್ತಿತ್ವ ನಾಲ್ವಡಿ ಕೃಷ್ಣರಾಜ ಒಡೆಯರ್ ರವರದ್ದು.
ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳು ಜೀವನ ಚರಿತ್ರೆ ನಾಡಿನ ಜನತೆಗೆ ತಿಳಿಯಬೇಕು ಎಂದು ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ಹೇಳಿದರು.
ಸ್ವಾಗತ ಡಾ.ಹಂಗು ರಾಜೇಶ್,ನಿರೂಪಣೆ ಇಂದಿರಾಶರಣ್, ವಂದನಾರ್ಪಣೆ ಹೆಚ್.ಎಸ್.ಸುಧೀಂದ್ರಕುಮಾರ್ ಮತ್ತು ಶೋಭಾ ರುದ್ರಮುನಿ ಇಂಚಗೇರಿಮಠ, ಟಿ.ಎಸ್.ಶೇಖರ್ ತಿಪಟೂರು, ಭಾನಕುಮಾರಿ ನಂಜನಗೂಡು ಇವರಿಂದ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಆನೇಕಲ್ ತಾಲ್ಲೂಕಿನ ಗ್ರಾ.ಪಂ.ಗಳನ್ನು ಮೇಲ್ದರ್ಜೆಗೆ ಏರಿಸುವುದು ಅವೈಜ್ಞಾನಿಕ: ಆರೋಪ
ಆನೇಕಲ್ : ಆನೇಕಲ್ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ಜೈ ಭೀಮ್ ಜನಜಾಗೃತಿ ವೇದಿಕೆ ರಾಜ್ಯಾದ್ಯಕ್ಷ ವೈ ಚಿನ್ನಪ್ಪ ಚಿಕ್ಕಹಾಗಡೆ ಆರೋಪಿಸಿದ್ದಾರೆ.
ಬುಧವಾರ ಆನೇಕಲ್ ಪಟ್ಟಣದ ರಾಘವೇಂದ್ರ ಭವನದಲ್ಲಿ ನಡೆದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿ ಆನೇಕಲ್ ವಿಧಾನಸಭಾ ಕ್ಷೇತ್ರದ (1)ದೊಮ್ಮಸಂದ್ರ-ಯಮರೆ- ಸರ್ಜಾಪುರ (ಮೂರು)ಗ್ರಾಮ ಪಂಚಾಯಿತಿಗಳು (2)ಅತ್ತಿಬೆಲೆ ಪುರಸಭೆ-ನೆರಳೂರು-ಬಿದರಗುಪ್ಪೆ (ಎರಡು) ಗ್ರಾಮ ಪಂಚಾಯಿತಿಗಳು ಹಾಗು (3)ಆನೇಕಲ್ ಪುರಸಭೆ- ವಣಕನಹಳ್ಳಿ-ಸಮಂದೂರು(ಎರಡು)ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಒಟ್ಟು 03 ನಗರಸಭೆಗಳನ್ನಾಗಿ ಹಾಗೂ (1)ಕರ್ಪೂರು-ಬ್ಯಾಗಡದೇನಹಳ್ಳಿ-ಗ್ರಾಮ ಪಂಚಾಯಿತಿ (2)ಮುಗಳೂರು-ನೆರಿಗಾ ಗ್ರಾಮ ಪಂಚಾಯಿತಿ(3) ಬಳ್ಳೂರು-ಮಾಯಸಂದ್ರ-ಮರಸೂರು(ಮೂರು)ಗ್ರಾಮ ಪಂಚಾಯಿತಿ(4)ಹಂದೇನಹಳ್ಳಿ-ಬಿಲ್ಲಾಪುರ-ಮುತ್ತಾನಲ್ಲೂರು (ಮೂರು)ಗ್ರಾಮ ಪಂಚಾಯಿತಿ (5)ಇಂಡ್ಲವಾಡಿ-ಹಾರಗದ್ದೆ (ಎರಡು)ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಒಟ್ಟು 05 ಪುರಸಭೆಗಳನ್ನಾಗಿ ವಿಂಗಡಿಸಲು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮತ್ತು ನಗರ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾ.ಪಂ ಗಳಿಗೆ ವರದಿ ಕೇಳಿರುವುದು ಗಮನಕ್ಕೆ ಬಂದಿದೆ.
ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾ ಪಂ ಗಳಾಗಿದ್ದ ಚಂದಾಪುರ,ಬೊಮ್ಮಸಂದ್ರ,ಅತ್ತಿಬೆಲೆ ಪುರಸಭೆಗಳನ್ನಾಗಿ ಹೆಬ್ಬಗೋಡಿ ಗ್ರಾ ಪಂ ಯನ್ನು ನಗರಸಭೆಯನ್ನಾಗಿ 2015 ರಲ್ಲಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಕ್ಷೇತ್ರದ ಎಲ್ಲಾ 20 ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ 515 ಗ್ರಾ.ಪಂ,20 ತಾ.ಪಂ,09 ಜಿ.ಪಂ ಕ್ಷೇತ್ರಗಳು ರದ್ದಾಗಲಿವೆ,ಅಲ್ಲದೇ ಮೀಸಲಾತಿಯಲ್ಲಿ ಗೆದ್ದ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ, ಹಿಂದುಳಿದ ಜಾತಿ, ಮಹಿಳೆಯರು ಸೇರಿದಂತೆ ಶೇ.60 ರಷ್ಟು ಮಂದಿಗೆ ಭಾರಿ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಗ್ರಾ ಪಂ ಗಳ ಅಸ್ತಿತ್ವವೇ ಇರುವುದಿಲ್ಲ: ಕ್ಷೇತ್ರದ 20 ಗ್ರಾ ಪಂ ಗಳ ಪೈಕಿ 09 ಗ್ರಾಮ ಪಂಚಾಯಿತಿ,02 ಪುರಸಭೆಗಳನ್ನು ಸೇರಿಸಿ 03 ನಗರಸಭೆಗಳನ್ನಾಗಿ,11 ಗ್ರಾ ಪಂ ಗಳನ್ನು ಸೇರಿಸಿ 05 ಪುರಸಭೆಗಳನ್ನಾಗಿ ವಿಂಗಡಿಸುವುದರಿಂದ ಗ್ರಾ ಪಂ ಗಳ ಅಸ್ತಿತ್ವವೇ ಇಲ್ಲದಂತಾಗುತ್ತದೆ.
ಕರ್ನಾಟಕ ಸರ್ಕಾರವು 74ನೇ ಸಂವಿಧಾನಾತ್ಮಕ ತಿದ್ದುಪಡಿಯ ಅಧಿನಿಯಮದ ಪ್ರಕಾರ ಸ್ಠಳೀಯ ಸಂಸ್ಥೆಗಳನ್ನು ಜನಸಂಖ್ಯೆ ಮತ್ತು ಇತರ ಮಾನದಂಡಗಳ ಮೇಲೆ ಪಟ್ಟಣ ಪಂಚಾಯಿತಿ ರಚಿಸಲು 10,000 ದಿಂದ 20,000 ಜನಸಂಖ್ಯೆ, ಪುರಸಭೆಗೆ 20,000 ದಿಂದ 50,000 ಜನಸಂಖ್ಯೆ, ನಗರಸಭೆಗೆ 50,000 ದಿಂದ 05 ಲಕ್ಷ ಜನಸಂಖ್ಯೆ ಇರಬೇಕು ಅಲ್ಲದೇ ಒಂದು ಚದರ ಕಿ.ಮೀ ಪ್ರದೇಶದಲ್ಲಿ ಕನಿಷ್ಟ1500 ಜನರು ವಾಸವಾಗಿರಬೇಕು, ಶೇ.50 ರಷ್ಟು ಕೃಷಿಯೇತರ ಚಟುವಟಿಕೆಗಳು ಮತ್ತು ಶೇ.50 ರಷ್ಟು ಉದ್ಯೋಗದಾತರು ಇರಬೇಕು ಎಂದು ಕಾಯ್ದೆಯಲ್ಲಿ ತಿಳಿಸಿದ್ದರೂ ಸಹ ಈಗ ಪ್ರಸ್ತಾಪಿತ ಆನೇಕಲ್ ಕ್ಷೇತ್ರದ 03ನಗರಸಭೆ ಮತ್ತು 05ಪುರಸಭೆಗಳ ರಚನೆಯೂ 10 ರಿಂದ 12 ಕಿ.ಮಿ ವ್ಯಾಪ್ತಿಯನ್ನು ಹೊಂದಿರುತ್ತವೆ, 2-3 ಗ್ರಾಮಗಳನ್ನು ಸೇರಿಸಿ ಪುರಸಭೆ, ನಗರಸಭೆಯ ವಾರ್ಡು ರಚನೆ ಮಾಡಬೇಕಾಗುತ್ತೆ ಇದರಿಂದ ಆಡಳಿತ ನಡೆಸಲು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗು ಜನಸಾಮಾನ್ಯರಿಗೆ ಬಹಳ ತೊಂದರೆಯಾಗಲಿದೆ ಎಂದು ತಿಳಿಸಿದರು.
ಹಣವಂತರಿಗೆ,ಬಲಾಡ್ಯರಿಗೆ ಅಧಿಕಾರ:
ಗ್ರಾ ಪಂ ಗಳಲ್ಲಿ ಇದುವರೆವಿಗೂ ಪಕ್ಷಗಳ ಚಿಹ್ನೆ ಇಲ್ಲದೇ ಪಕ್ಷಾತ್ತೀತವಾಗಿ ಚುನಾವಣೆಗಳು ನಡೆಯುತ್ತಿತ್ತು, ಈಗ ನಗರಸಭೆ,ಪುರಸಭೆಗಳು ಅಸ್ತಿತ್ವಕ್ಕೆ ಬಂದರೆ ಪಕ್ಷಗಳ ಚಿಹ್ನೆ ಮೇಲೆ ಚುನಾವಣೆಗಳು ನಡೆಯುವುದರಿಂದ ರಾಜಕೀಯ ಶಕ್ತಿಗಳು ತಲೆಎತ್ತಲಿವೆ, ಇದರಿಂದ ಸಾಕಷ್ಟು ಮಂದಿ ಬಡವರು, ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ, ಹಿಂದುಳಿದ ಜಾತಿ ಮತ್ತು ಮಹಿಳೆಯರು ಚುನಾಯಿತ ಸದಸ್ಯರಾಗುವುದು ತಪ್ಪಿ ಹೋಗಿ ಹಣವಂತರಿಗೆ,ಬಲಾಡ್ಯರಿಗೆ ಅಧಿಕಾರ ಸಿಕ್ಕಂತಾಗುತ್ತದೆ.ಇದರಿಂದ ಶೇ.60 ಮಂದಿಗೆ ಭಾರಿ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತರಾದ ಚಂದಾಪುರ ಸಿ.ಆರ್.ವಿಜಯಕುಮಾರ್ ಮಾತನಾಡಿ ಕ್ಷೇತ್ರದಲ್ಲಿರುವ 20 ಗ್ರಾ.ಪಂ ಗಳ ಪೈಕಿ 15 ಗ್ರಾ ಪಂ ಗಳ ವ್ಯಾಪ್ತಿಯಲ್ಲಿ ಗ್ರಾಮಗಳು ಶೇ.60-70 ರಷ್ಟು ಜನರು ಇನ್ನೂ ಗ್ರಾಮೀಣ ಭಾಗದ ಗ್ರಾಮಗಳಲ್ಲಿ ವಾಸಮಾಡುತ್ತಿದ್ದಾರೆ. ಇನ್ನೂ ಶೇ.60-65 ರಷ್ಟು ಇನ್ನೂ ಕೃಷಿ ಭೂಮಿಗಳನ್ನು ಹೊಂದಿದ್ದಾರೆ. ಸುರಗಜಕ್ಕನಹಳ್ಳಿ,ಇಂಡ್ಲವಾಡಿ, ಬ್ಯಾಗಡದೇನಹಳ್ಳಿ, ವಣಕನಹಳ್ಳಿ,ಸಮಂದೂರು,ಕರ್ಪೂರು, ಮಾಯಸಂದ್ರ, ಮರಸೂರು, ಮುತ್ತಾನಲ್ಲೂರು,ಹಂದೇನಹಳ್ಳಿ ಗ್ರಾ ಪಂ ವ್ಯಾಪಿಯ ಹಳ್ಳಿಗಳಲ್ಲಿ ಇನ್ನೂ ಕೃಷಿ,ರೇಷ್ಮೆ,ತೋಟಗಾರಿಕಾ,ಉಪಕಸುಬುಗಳ ಮೂಲಕ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ರೈತರು ಕೃಷಿ ಭೂಮಿಗಳಲ್ಲಿ ಸಣ್ಣ ಪುಟ್ಟ ಬೆಳೆ ಬೆಳೆದರೆ,ಕೆಲವು ಕಡೆ ಬೀಡು ಬಿಟ್ಟಿದ್ದಾರೆ.ಕೃಷಿ ಭೂಮಿಗಳಲ್ಲಿ ಸ್ವಂತಕ್ಕೆ ಮನೆ, ರಸ್ತೆ ಬದಿಯಲ್ಲಿ ಬಾಡಿಗೆ ಕಟ್ಟಡ, ವಾಣಿಜ್ಯ ಮಳಿಗೆ, ಅಂಗಡಿ-ಮುಂಗಟ್ಟುಗಳನ್ನು ನಿರ್ಮಿಸಿರುವುದರಿಂದ ಯಾವುದೇ ತೆರಿಗೆಯನ್ನು ವಿಧಿಸಲು ಸಾಧ್ಯವಾಗುವುದಿಲ್ಲ,ಅಲ್ಲದೇ ಯಾರೂ ಕೂಡ ಕಂದಾಯ ಕಟ್ಟುವುದಿಲ್ಲ ಕೃಷಿ ಭೂಮಿಗಳಿಂದ ಸ್ಧಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದಾಯ ಇಲ್ಲದಂತಾಗಿ ಹೋಗುತ್ತದೆ.
2011 ಜನಸಂಖ್ಯೆ ಪ್ರಕಾರ ಗ್ರಾಮ ಪಂಚಾಯಿತಿಗಳು 15 ರಿಂದ 20 ಸದಸ್ಯರನ್ನು ಮಾತ್ರ ಹೊಂದಿದ್ದು 2011 ಜನಸಂಖ್ಯೆ ಪ್ರಕಾರ ಪ್ರತಿ ಗ್ರಾ.ಪಂ ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುತ್ತವೆ. ಆದರೂ ಅಧಿಕಾರಿಗಳು 2-3 ಪಂಚಾಯಿತಿಗಳನ್ನು ಸೇರಿಸಿ ನಗರಸಭೆ, ಪುರಸಭೆಗಳನ್ನಾಗಿ ಮಾಡಿಹೊರಟಿರುವುದು ಅವೈಜ್ಞಾನಿಕ ಎಂದರು. ಕ್ಷೇತ್ರದಲ್ಲಿ ಹಲವಾರು ಗ್ರಾಮಗಳಿಗೆ ಇನ್ನೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ವಿಫಲವಾಗಿದೆ ಎಂದರು
ಸಿಬ್ಬಂದಿಗಳ ಕೊರತೆ ಕಾಡುತ್ತೆ::
ಗ್ರಾ ಪಂ ಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು,ಕಾರ್ಯದರ್ಶಿಗಳು ಸ್ಥಳೀಯವಾಗಿ ನೇಮಕವಾದ ಬಿಲ್ಕಲೆಕ್ಟರ್ ಗಳು, ವಾಟರ್ಮೆನ್ಗಳು, ಪೌರಕಾರ್ಮಿಕರು ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು,ಆದರೆ ಪುರಸಭೆಗೆ ಸುಮಾರು 100 ಮಂದಿ, ನಗರಸಭೆಗೆ 200ಜನ ಅಧಿಕಾರಿ,ಸಿಬ್ಬಂದಿ ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುವವರು, ಪೌರಕಾರ್ಮಿಕರು ವಾಟರ್ ಮೇನ್ ಗಳು ಬೇಕಾಗಿದ್ದಾರೆ ಸರ್ಕಾರ ಎಲ್ಲರನ್ನು ನೇಮಕ ಮಾಡುವುದಿಲ್ಲ ಇದರಿಂದ ಕೆಲಸಕಾರ್ಯಗಳಿಗೆ ತೊಂದರೆಯಾಗುತ್ತದೆ. ಗ್ರಾ ಪಂ ಯ ಸಾಕಷ್ಟು ಮಂದಿ ನೌಕರರಿಗೆ ನೇಮಕಾತಿ ಪತ್ರ ನೀಡಿಲ್ಲ ಅವರಿಗೆ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಗ್ರಾಮ ಸಭೆಗಳ ಇರೋದಿಲ್ಲ:: ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕ ಕುಂದುಕೊರತೆ ಮತ್ತು ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಗಳ ಮೂಲಕ ನಡೆಯುತ್ತಿತ್ತು ಆದರೆ ಈಗ ಗ್ರಾಮ ಸಭೆಗಳೇ ನಡೆಯುವುದಿಲ್ಲ. ಅಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ, ಉನ್ನತ ಶಿಕ್ಷಣ ಪಡೆಯಲು ಹಾಗು ಉನ್ನತ ಮಟ್ಟದ ಪರೀಕ್ಷೆಗಳನ್ನು ಎದುರಿಸಲು ಗ್ರಾಮೀಣ ಕೋಟಾದಡಿಯಲ್ಲಿ ಅವಕಾಶ ಸಿಗುವುದಿಲ್ಲವೆಂದು ತಿಳಿಸಿದರು.
ಪತ್ತಿಕಾ ಗೋಷ್ಟಿಯಲ್ಲಿ ಹಿರಿಯ ಪತ್ರಕರ್ತರಾದ ಸಿ.ಆರ್.ವಿಜಯಕುಮಾರ್ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್ ಕುಮಾರಾಚಾರಿ, ರಾಜ್ಯ ಉಪಾಧ್ಯಕ್ಷ ಅತ್ತಿಬೆಲೆ ರವಿಕುಮಾರ್,ರಾಜ್ಯ ಖಜಾಂಚಿ ಚಂದಾಪುರ ಕೆ.ಮಹೇಶ್ ಉಪಸ್ಢಿತರಿದ್ದರು.
ವರದಿ :- ನಾಗರಾಜ್ ಪದ್ಮಶಾಲಿ
ವಿಜೃಂಭಣೆಯಿಂದ ನಡೆದ ವೆಂಕಟರಮಣ ದೇವರ ರಥೋತ್ಸವ
ಕುಮಟಾ :-ಪಟ್ಟಣದ ರಥ ಬೀದಿಯಲ್ಲಿ ನೆಲೆಸಿರುವ ವೆಂಕಟರಮಣ ದೇವರ ರಥೋತ್ಸವವು ರಥ ಸಪ್ತಮಿ ದಿನವಾದ ಮಂಗಳವಾರದಂದು ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ನಡೆಯಿತು.ವೆಂಕಟರಮಣ ದೇವರ ಜಾತ್ರೆಯ ಪ್ರಯುಕ್ತ ದೇವರಿಗೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ವೆಂಕಟರಮಣ ದೇವಸ್ಥಾನಕ್ಕೆ ಬೆಳೆಗ್ಗೆಯಿಂದ ಭಕ್ತರು ಆಗಮಿಸಿ ಹಣ್ಣು ಕಾಯಿ ಮಾಡಿ ಪೂಜೆ ಸಲ್ಲಿಸಿದರು.ದೇವರ ಮೂರ್ತಿ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿ ರಥಾರೋಹಣ ನೆರೆವೇರಿಸಲಾಯಿತು. ಭಕ್ತರು ರಥಾರೋಹಣದಲ್ಲಿ ಪಾಲ್ಗೊಂಡು ರಥಕ್ಕೆ ಬಾಳೆಹಣ್ಣು ಕಡಲೆ ಎಸೆದು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಬೇಡಿಕೊಂಡರು .ಜಾತ್ರೆಯ ಪ್ರಯುಕ್ತ ಅಂಗಡಿ ಹಾಗೂ ತಿನಿಸುಗಳ ಮಳಿಗೆಗಳು ಜನರನ್ನು ಕೈಬಿಸಿ ಕರೆಯುತ್ತಿದ್ದು. ಜನರು ತಮಗೆ ಇಷ್ಟವಾದ ಸಾಮಗ್ರಿಗಳನ್ನು ಖರೀದಿ ಮಾಡಿ ಖುಷಿ ಪಟ್ಟರು.
ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ
ಶಿರಸಿ: ೧೫ ನೇ ಹಣಕಾಸು ಆಯೋಗದ ಕ್ರೋಡಿಕೃತವಾದ ಬಡ್ಡಿ ಹಣವನ್ನು ತಾಲೂಕಿನ ಆಯಾ ೩೨ ಗ್ರಾಪಂಗಳಿಗೆ ಕ್ರಿಯಾ ಯೋಜನೆ ಮಾಡಲು ಅನುಮತಿ ನೀಡುವಂತೆ ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಾ ಪಂಚಾಯತ ಕಚೇರಿಯಿಂದ ೧೫ ನೇ ಹಣಕಾಸು ಆಯೋಗದ ಅಡಿಯಲ್ಲಿ (೨೦೨೦-೨೧ ರಿಂದ ೨೦೨೪-೨೫ ) ಕ್ರೋಡಿಕೃತವಾದ ಬಡ್ಡಿ ಹಣವನ್ನು ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ನಿರ್ದೇಶಿಸಲಾಗಿದೆ. ೧೫ ನೇ ಹಣಕಾಸು ಆಯೋಗದ (೨೦೧೫-೨೦೨೦) ಸಮಯದಲ್ಲಿ ಗ್ರಾಮ ಪಂಚಾಯತಗಳು ಬಡ್ಡಿ ಹಣವನ್ನು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಯಶಸ್ವಿಯಾಗಿ ಬಳಸಲಾಗಿದ್ದು, ೧೫ ನೇ ಹಣಕಾಸು ಆಯೋಗದ ಕ್ರೋಡಿಕರಣದ ಬಡ್ಡಿ ಹಣವನ್ನು ಗ್ರಾಮ ಪಂಚಾಯತಗಳಿಗೆ ಇ ಸ್ವರಾಜ್ ತಂತ್ರಾಂಶದಲ್ಲಿ ಅಳವಡಿಸಿ, ಸಪ್ಲಿಮೆಂಟರಿ ಆಕ್ಷನ್ ಪ್ಲಾನ್ ಮಾಡಲು ಅವಕಾಶ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮನವಿ ಸ್ವೀಕರಿಸಿ, ಸರ್ಕಾರದಿಂದ ಆದೇಶ ಬಂದಿದ್ದು, ಅದನ್ನು ಯಥಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ರವಾನಿಸಲಾಗಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು.
ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ, ಉಪಾಧ್ಯಕ್ಷ ನಾರಾಯಣ ಹೆಗಡೆ,ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ, ರಾಜ್ಯ ಸಮಿತಿ ಸದಸ್ಯ ಸಂದೇಶ ಭಟ್ಟ ಬೆಳಖಂಡ, ಸಂಘದ ಪ್ರಮುಖರಾದ ಗಜಾನನ ನಾಯ್ಕ, ಮಂಜುನಾಥ ಪೂಜಾರಿ, ದತ್ತಾತ್ರೇಯ ಮಡಿವಾಳ, ಬಿ.ಎಸ್.ಪಟಗಾರ ಮತ್ತಿತರರು ಇದ್ದರು.
18 ಲಕ್ಷ ರೂ.ಮೊತ್ತದ ವಿವಿಧ ಕಾಮಾಗಾರಿಗಳಿಗೆ ಚಾಲನೆ ನೀಡಿದ :ಜಗದೇವ ಗುತ್ತೆದಾರ
ಕಾಳಗಿ :ಸಮೀಪದ ಭರತನೂರ ಗ್ರಾಮದಲ್ಲಿ ಸೋಮವಾರ 2024-25ರ ಅನುದಾನಲ್ಲಿ 18 ಲಕ್ಷ ರೂಪಾಯಿಗಳ ವಿವಿಧ ಕಾಮಾಗಾರಿಗಳಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಧಾನ ಪರಿಷತನ ಮೊದಲ ಅನುದಾನವನ್ನು ಪೂಜ್ಯ ಗುರುನಂಜೇಶ್ವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತಿದ್ದು ನನ್ನಗೆ ಸಂತಸ ತಂದಿದೆ. ಈ ಕಾಮಗಾರಿ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಮತಷ್ಟು ಅನುದಾನ ತಂದು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೆನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಭರತನೂರ ಚಿಕ್ಕ ಗುರುನಂಜೇಶ್ವರ ಶ್ರೀಗಳು,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರಾಮಲಿಂಗ ರೆಡ್ಡಿ ದೇಶಮುಖ ,ಕೆಆರ್ ಐ ಡಿ ಎಲ್ ಎಇಇ ಅರುಣಕುಮಾರ ಬಿರಾದಾರ,ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೊಟಗಿ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘವೇಂದ್ರ ಗುತ್ತೆದಾರ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ,ಸಂತೋಷ ನರನಾಳ,ಸಂತೋಷ ಪತಂಗೆ ಅವಿನಾಶ್ ಗುತ್ತೆದಾರ ಇತರರು ಇದ್ದರೂ
ಆದರ್ಶ ವಿಚಾರಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಸಮಾಜಕ್ಕೆ ನಿಮ್ಮದೆಯಾದ ಒಂದು ಕೊಡುಗೆ ನೀಡಿ : ಪಿ ಎಸ್ ಐ ತಿಮ್ಮಯ್ಯ ಬಿ ಕೆ
ಕಾಳಗಿ:ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸ ಮೂಲಕ ತಮ್ಮ ಗುರಿಗಳನ್ನು ಈಡೆರಿಸಿಕೊಳ್ಳಲು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ನಡೆದುಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ನಿಮ್ಮದೆ ಆದ ಕೊಡುಗೆ ನೀಡಿ ಎಂದು ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿ ಕೆ ತಿಳಿಸಿದರು
ಕಾಳಗಿ ಪಟ್ಟಣದ ಮಾಳಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.ಕಾಲೇಜಿನಲ್ಲಿ ಒಳ್ಳೆಯ ಗುರುಗಳು ಇದ್ದು ತಮ್ಮ ಜೀವನದ ಭದ್ರ ಬುನಾದಿಗೆ ಗುರುಗಳ ಮಾರ್ಗದರ್ಶನದಲ್ಲಿ ನೆಡೆದು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಎಂದು ಹೇಳಿದರು. ಮಂಗಲಗಿ ಮತ್ತು ಟೆಂಗಳಿ ಶ್ರೀಗಳು ಆರ್ಶಿವಚನ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಭೀಮರಾಯ ಟಿ ಟಿ,ಸಿದ್ದಾರ್ಥ ಪದವಿ ಪೂರ್ವ ಮಹಾ ವಿದ್ಯಾಲಯ ಕಾರ್ಯದರ್ಶಿ ಅವಿನಾಶ್ ಮೂಲಿಮನಿ,ರೇಣುಕಾ ಕಾಬಾ,ಅನೀಲಕುಮಾರ ಡಾಂಗೆ,ಉಪನ್ಯಾಸಕ ಶೌಕತ್ ಅಲಿ,ಮುಖ್ಯ ಗುರುಗಳು ಭೀಮರೆಡ್ಡಿ,ಧರ್ಮಸ್ಥಳ ಸಂಘದ ಮುಖ್ಯಸ್ಥ ಗುರುರಾಜ, ಡಾ ಶಂಕರ್ ಮೂಲಿಮನಿ,ಪ್ರಾಂಶುಪಾಲ ಶಾಂತಕುಮಾರ ಸಾಲಹಳ್ಳಿ, ಕಾಲೇಜು ಉಪನ್ಯಾಸಕರು ಸಿದ್ದಣ್ಣ ಶೆಟ್ಟಿ. ಲಷ್ಮಿಕಾಂತ ಗಂಗಾ. ಪ್ರಕಾಶ್ ಮಠಪತಿ. ಅರ್ಚನಾ ಕೊರವಾರ್. ಸಚಿನ್. ಆನಂದ್ ಹಾಗೂ ಅನೇಕ ವಿದ್ಯಾರ್ಥಿಗಳು ಇದ್ದರು ಇತರರು ಇದ್ದರೂ.