ಪೆಟ್ರೋಲ್ ಬಂಕ್ ಗೆ ನುಗ್ಗಿದ 6 ಮಂದಿ ಗ್ಯಾಂಗ್ ಸಿಬ್ಬಂದಿಗೆ ಬೆದರಿಕೆ ಹಾಕಿ ಹಣ ಕಸಿದು ಪರಾರಿಯಾದ ಘಟನೆ ಹುಣಸೂರು ತಾಲೂಕು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕರಿಮುದ್ದನಹಳ್ಳಿ ಗ್ರಾಮದ ಸ್ವಾಮಿ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಕೃತ್ಯ ನಡೆದಿದೆ.ಸಿಬ್ಬಂದಿಗಳಾದ ಅಜಯ್ ಕುಮಾರ್ ಹಾಗೂ ದಿನೇಶ್ ಎಂಬುವರಿಗೆ ಮೊಚ್ಚು,ಡ್ರಾಗರ್ ತೋರಿಸಿ ಬೆದರಿಕೆ ಹಾಕಿ 15,300/- ಕಸಿದು ಪರಾರಿಯಾಗಿದ್ದಾರೆ.ಈ ಸಂಬಂಧ ಅಜಯ್ ಕುಮಾರ್ ಹಾಗೂ ದಿನೇಶ್ ಎಂಬುವರು ಬಿಳಿಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿ ನೀರು ತುಂಬಿಸುಕೊಳ್ಳುವ ನೆಪದಲ್ಲಿ ಪೆಟ್ರೋಲ್ ಬಂಕ್ ಕಚೇರಿಗೆ ಪ್ರವೇಶಿಸಿ ಕೃತ್ವೆಸಗಲು ಸಂಚು ರೂಪಿಸಿದ್ದಾನೆ.ನಂತರ ತನ್ನ ಸಹಚರರ ಜೊತೆ ಕಾರ್ ನಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಬೆದರಿಕೆ ಹಾಕಿ ಹಣ ಕಸಿದಿದ್ದಾನೆ.ಖದೀಮರ ಕಪಿಮುಷ್ಠಿಯಿಂದ ಬಿಡಿಸಿಕೊಂಡ ಅಜಯ್ ಕುಮಾರ್ ಕೂಗಾಡುತ್ತಾ ಅಕ್ಕಪಕ್ಕದವರ ನೆರವು ಕೋರಿದ್ದಾರೆ.ಜನ ಬರುತ್ತಿದ್ದಂತೆಯೇ ಗ್ಯಾಂಗ್ ಮಾಯವಾಗಿದೆ.ತಪ್ಪಿಸಿಕೊಳ್ಳುವ ಆತುರದಲ್ಲಿ ಗ್ಯಾಂಗ್ ಒಂದು ಮೊಚ್ಚನ್ನ ಬಿಟ್ಟು ಹೋಗಿದ್ದಾರೆ.ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ದರೋಡೆಕೋರರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ…
ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ನ್ಯಾಯಾಲಯದ ಇತಿಹಾಸದಲ್ಲಿ ಸುಮಾರು 200 ಕ್ಕೂ ಅಧಿಕ ವಕೀಲರಿಂದ ಒಂದೇ ಪ್ರಕರಣಗಳಲ್ಲಿ ಕೋರ್ಟ ಕಲಾಪದಲ್ಲಿ ಹಾಜರಾಗಿ ವಕಾಲತ್ತು ವಹಿಸಿದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ.
ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಹಾಗೂ ಅವರ ಪತ್ನಿ ವಕೀಲೆಯಾದ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆ ಸ್ಪರ್ಧೆಸಿದ್ದ ಶ್ರೀಮತಿ ಶಿಲ್ಪಾ ಗೋಡಿಗೌಡರ ಇಬ್ಬರ ನಡುವೆ ನಡೆದ ಪಾಲು ಕೇಳಿ ದಿವಾಣಿ ವ್ಯಾಜ್ಯವೋಂದರಲ್ಲಿಸುಧೀರ ಗೋಡಿಗೌಡರ ಪರವಾಗಿ ಗೋಕಾಕ ಮತ್ತು ಮೂಡಲಗಿ ನ್ಯಾಯವಾದಿಗಳು ಸಿವಿಲ್ ಕೆಸ್ ಗೆ 200 ಕ್ಕೂ ಅಧಿಕ ವಕೀಲರು ವಕಾಲತ್ತು ವಹಿಸಿದ್ದರು. ಇದು ಮೂಡಲಗಿ ನ್ಯಾಯಾಲಯದಲ್ಲಿ ವಿಶೇಷ ಕಲಾಪದ ದಿನವಾಗಿತ್ತು.
ಸಂಚಲನ ಮೂಡಿಸಿರುವ ಮೂಡಲಗಿ ಕೋರ್ಟ ಪ್ರಕರಣ: ಒಂದು ಪ್ರಕರಣಗಳಲ್ಲಿ ಒಬ್ಬರು,ಇಬ್ಬರು ವಕೀಲರು ಹಾಜರಾಗುವುದನ್ನು ನೋಡಿದೆವೆ. ಆದರೇ ಮೂಡಲಗಿ ನ್ಯಾಯಾಲಯದಲ್ಲಿ 200 ಕ್ಕೂ ಅಧಿಕ ವಕೀಲರು ಒಂದೇ ಕೇಸ್ ಗೆ ಹಾಜರಾಗಿ ವಕಾಲತ್ತು ನೋಡಿ ಇತರೇ ಪಕ್ಷಗಾರರು ಹೌಹಾರಿ ಕೇಲ ಕಾಲ ಗೊಂದಲಕಿಡಾದರು.
ಈ ಸಮಯದಲ್ಲಿ ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟ್ಟಗಿ, ಆರ್.ಎಚ್ ಇಟ್ನಾಳ , ಹಾಗೂ ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ ಹುಕ್ಕೇರಿ, ಬಿ.ಎಲ್ ಮಾಳೇದ, ಜಿ.ಎಂ.ಭಟ್ಟಿ , ಎಸ್ ಡಿ, ಪತ್ತಾರ, ಬಿ.ಬಿ ಖಾನಾಪೂರ. ಜೋಕಿ, ಎಸ್.ಎಲ್ ಪಾಟೀಲ ಮುಂತಾದ ವಕೀಲರು ಹಾಜರಿದ್ದರು.
ಹುಣಸೂರು ನಗರಕ್ಕೆ ಸಮೀಪದ ಕಿರಿಜಾಜಿ ಗ್ರಾಮದ ರೈತ ಮುಖಂಡ ಧನಂಜಯ, ಶಿವಶಂಕರ್ ಮತ್ತಿತರರು ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ-೨೭೫ರ ಕಾಮಗಾರಿ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ, ಹೆದ್ದಾರಿ ನಿಮಾಣದ ವೇಳೆಯೇ ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕು. ಅಂಡರ್ ಪಾಸ್ನಿಂದ ೫-೬ ಕಿಮೀ ದೂರ ಬಳಸು ದಾರಿಯಲ್ಲಿ ಬಂದರೂ ಜಮೀನಿಗೆ ತೆರಳಲಾಗುವುದಿಲ್ಲಾ, ಇನ್ನು ಕೆಲವರ ಜಮೀನಿನ ಮದ್ಯದಲ್ಲೇ ಹೆದ್ದಾರಿ ಹಾದು ಹೋಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಂಪ್ ಸೆಟ್ ನೀರು ಹಾಯಿಸಲು ಆಗದಂತಾಗಿದೆ. ಭೂಸ್ವಾಧಿನದ ವೇಳೆ ಈ ಎಲ್ಲಾ ಮಾಹಿತಿ ನೀಡಿರಲಿಲ್ಲಾ ಹೀಗಾಗಿ ಅವರು ಕೊಟ್ಟ ಪರಿಹಾರ ಪಡೆದು ಮೋಸ ಹೋಗಿದ್ದೇವೆ. ಹೆದ್ದಾರಿ ನಿರ್ಮಾಣದ ವೇಳೆಯೇ ಸರ್ವಿಸ್ ರಸ್ತೆ ಮತ್ತು ಪಂಪ್ಸೆಟ್ ನೀರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟ ನಂತರವೇ ರಸ್ತೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಅನಿವಾರ್ಯವಾಗಿ ರಸ್ತೆ ಮಾಡುವ ಕಾರ್ಮಿಕರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಪ್ರತಿಭಟನೆಯಲ್ಲಿ ಪುಟ್ಟಯ್ಯ, ವಾಸು, ಯೋಗೇಂದ್ರ, ಲೋಕೇಶ್, ಪುಟ್ಟಸ್ವಾಮಿ, ಕರುಣ, ಹರೀಶ, ಮಂಜು, ಅಪ್ಪು, ರವಿ ಸೇರಿದಂತೆ ಹಲವರು ಇದ್ದರು.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್ ಸಿಗ್ನಲ್ ದೊರೆತಿದೆ.ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿಟ್ಟ 20 ಎಕ್ರೆ ಜಮೀನು ಒತ್ತುವರಿದಾರರಿಂದ ವಶಕ್ಕೆ ಪಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದ್ದು ಮೈಸೂರು ಮೆಡಿಕಲ್ ಕಾಲೇಜು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಸಾಕಷ್ಟು ವಿರೋಧ ಎದುರಿಸಿದರೂ ಪಟ್ಟು ಬಿಡದ ತಹಸೀಲ್ದಾರ್ ಮಹೇಶ್ ಕುಮಾರ್ ಒತ್ತುವರಿದಾರರಿಂದ ಮೀಸಲಿಟ್ಟ 20 ಎಕ್ರೆ ಜಮೀನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲದೆ ವಶಕ್ಕೆ ಪಡೆದ ಜಮೀನನ್ನ ಮೈಸೂರು ಮೆಡಿಕಲ್ ಕಾಲೇಜು ಡೀನ್ ರವರಿಗೆ ಹಸ್ತಾಂತರಿಸಿದ್ದಾರೆ.
ಮೈಸೂರು ತಾಲೂಕು ವರುಣಾ ಹೋಬಳಿ ಗುಡಮಾದನಹಳ್ಳಿ ಸರ್ವೆ ನಂ.8 ರಲ್ಲಿ 5.05 ಎಕ್ರೆ,ಸರ್ವೆ ನಂ.60 ರಲ್ಲಿ 6.10 ಎಕ್ರೆ ಹಾಗೂ ಸರ್ವೆ ನಂ.68 ರಲ್ಲಿ 8.25 ಎಕ್ರೆ ಗೋಮಾಳ ಜಮೀನು ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿ ಮೀಸಲಿಡಲಾಗಿತ್ತು.ಸದರಿ ಜಮೀನಿನಲ್ಲಿ ಕೆಲವು ಸ್ಥಳೀಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು.ಒತ್ತುವರಿ ತೆರವಿಗಾಗಿ ಮುಂದಾದಾಗ ತಾಲೂಕು ಆಡಳಿತಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.ಒತ್ತುವರಿದಾರರ ಪರ ರೈತ ಸಂಘದ ವತಿಯಿಂದ ಪ್ರತಿಭಟನೆ ಎದುರಿಸಬೇಕಾಯಿತು.ಮಹಿಳಾ ಅಧಿಕಾರಿ ಭವ್ಯ ಎಂಬುವರ ಮೇಲೆ ಹಲ್ಲೆ ನಡೆಸಲೂ ಮುಂದಾಗಿದ್ದ ವಿಡಿಯೋ ಸಹ ವೈರಲ್ ಆಗಿತ್ತು.ಒತ್ತುವರಿದಾರರ ವಿರೋಧ ಲೆಕ್ಕಿಸದ ತಹಸೀಲ್ದಾರ್ ಮಹೇಶ್ ಕುಮಾರ್ ಸದರಿ ಜಮೀನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದಲ್ಲದೆ ಮೈಸೂರು ಮೆಡಿಕಲ್ ಕಾಲೇಜಿಗೂ ಸಹ ಹಸ್ತಾಂತರಿಸಿದ್ದಾರೆ.ಇದೀಗ ಸಿಎಂ ಕನಸಿನ ಯೋಜನೆ ಸಾಕಾರಗೊಳ್ಳಲು ಇದ್ದ ಎಲ್ಲಾ ಅಡೆತಡೆಗಳೂ ನಿವಾರಣೆಯಾದಂತಾಗಿದೆ.ನಿಮ್ಹಾನ್ಸ್ ಮಾದರಿಯ ಸಂಸ್ಥೆ ಮೈಸೂರಿನಲ್ಲಿ ತಲೆ ಎತ್ತಲಿದೆ…
ಹುಣಸೂರು ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡಿದ ಆರೋಪದ ಹಿನ್ನಲೆ ಹುಣಸೂರು ತಾಲೂಕು ಹನಗೂಡು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೇಮಂತ್ ಕುಮಾರ್ ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ನೋಟೀಸ್ ಜಾರಿಯಾಗಿದೆ.2 ದಿನಗಳ ಕಾಲಾವಕಾಶ ನೀಡಿದ್ದು ಸೂಕ್ತ ಸಮಜಾಯಿಷಿ ನೀಡುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.
ಡಾ.ಹೇಮಂತ್ ಕುಮಾರ್ ರವರು ರೋಗಿಗಳಿಂದ ಹಣ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಪ್ರಸಾರವಾಗಿತ್ತು.ಈ ಹಿನ್ನಲೆ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರ ರಸ್ತೆಯ ಮೇಲೆ ಚರಂಡಿ ನೀರು ಚರಂಡಿ ಹರಿದು ಹೋಗುತ್ತಿದೆ ಇದರಿಂದ ಗಬ್ಬುನಾಥ ಬಂದು ಚಿಕ್ಕ ಮಕ್ಕಳು ಹಿರಿಯರು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿಯಾಗಿ ಕ್ರಿಮಿಕೀಟಗಳ ಬಾದೆಯಿಂದ ರೋಗ ಬರುವ ಬಿತಿಯಿಂದ ಇಲ್ಲಿನ ವಾರ್ಡ್ ನಂಬರ್ ಒಂದರ ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಇಲ್ಲಿನ ವಾರ್ಡ್ ನಂಬರ್ ಒಂದರ ರಸ್ತೆಯನ್ನು ಮುರುಮ್ಮ ಹಾಕಿ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನವು ಮಾಡಿಕೊಡಬೇಕು ಹಾಗು ಸರ್ಕಾರದಿಂದ ಗ್ರಾಮಗಳ ಸಬಲೀಕರಣಕ್ಕಾಗಿ ಬಿಡುಗಡೆಯಾದ ಕೋಟ್ಯಾಂತರ ರೂಪಾಯಿ ಅನುದಾನವು ಗ್ರಾಮಗಳ ಅಭಿವೃದ್ಧಿಗೆ ಸದ್ಬಳಿಕೆಯಾಗಬೇಕು. ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆಗುವುದನ್ನು ಪ್ರತಿಯೊಬ್ಬ ಯುವಕರು ಪ್ರಶ್ನಿಸಿ ತಡೆಗಟ್ಟಬೇಕು ಎಂದು ಬಿಳವಾರ್ ಗ್ರಾಮ ಪಂಚಾಯತ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದೆವೆಂದು ಗ್ರಾಮಸ್ಥರಾದ ಮೆಹಬೂಬ್ ಕೆ ಚೌದರಿ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಒಂದು ವೇಳೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರಿದರೆ ಗ್ರಾಮ ಪಂಚಾಯಿತಿಗೆ ಬೀಗವನ್ನು ಜಡೆದು ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ ವರದಿ ಜೇಟ್ಟೆಪ್ಪ ಎಸ್ ಪೂಜಾರಿ
ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ. ಸಾಕಾನೆಗಳಿಂದ ಕೂಂಬಿಂಗ್. ಹುಣಸೂರಿನ ನಾಗಮಂಗಲ ಗ್ರಾಮ ಹೊರವಲಯದಲ್ಲಿ ಕಾಣಿಸಿಕೊಂಡ ಹುಲಿ. ಭಯಭೀತರಾದ ಗ್ರಾಮಸ್ಥರು. ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದ ಮೇಲೆ ಕುಳಿತ ಹುಲಿ.ನಾಲ್ಕು ಹುಲಿಗಳು ಓಡಾಡುತ್ತಿರುವ ಬಗ್ಗೆ ಮಾಹಿತಿ.ಕೂಂಬಿಂಗ್ ಆಪರೇಷನ್ ಗರ ಸಾಕಾನೆಗಳಾದ ಭೀಮ, ಏಕಲವ್ಯ, ವರಲಕ್ಷ್ಮಿ ಆನೆಗಳ ಬಳಕೆ. ಎರಡು ಥರ್ಮಲ್ ಡ್ರೋಣ್ ಮುಖಾಂತರ ಕಾರ್ಯಾಚರಣೆ.
ಗುಡ್ ನ್ಯೂಸ್ ಸಂಸ್ಥಾಪಕ ರಾಘವೇಂದ್ರ ಜೈಲುಪಾಲಾಗಿದ್ದಾನೆ. 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ. ಜಾತಿನಿಂದನೆ ಪ್ರಕರಣದಲ್ಲಿ ಯುಟ್ಯೂಬರ್ ರಾಘವೇಂದ್ರ ಅರೆಸ್ಟ್ ಆಗಿದ್ದಾನೆ.ಎಸ್ಸಿ ಗಳನ್ನ ಚಪ್ಪಲಿ ಬಿಡುವ ಜಾಗದಲ್ಲಿ ಬಿಡಬೇಕು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎರಡು ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ರಾಘವೇಂದ್ರ ತಲೆ ಮರೆಸಿಕೊಂಡಿದ್ದ.ರಾಘವೇಂದ್ರನ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಹೇರಲಾಗಿತ್ತು.ರಾಘವೇಂದ್ರನ ಬಂಧನಕ್ಕೆ ತಂಡ ರಚಿಸಲಾಗಿತ್ತು. ಕುವೆಂಪುನಗರ ಠಾಣೆ ಪೊಲೀಸರು ಹೊರರಾಜ್ಯದಲ್ಲಿ ಅರೆಸ್ಟ್ ಮಾಡಿದ್ದಾರೆಂಬ ಮಾಹಿತಿ ಇದೆ.ತಾನು ಮಾತನಾಡಿದ್ದು ತಪ್ಪಾಗಿದೆ ಎಂದು ತನ್ನ ಚಾನೆಲ್ ನಲ್ಲೇ ಹೇಳಿಕೆ ನೀಡಿ ಸಮುದಾಯದ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ರಾಘವೇಂದ್ರ ಪುರಾವೆ ನೀಡಿದ್ದ. ರಾಘವೇಂದ್ರ ವಿರುದ್ದ 15 ಲಕ್ಷ ಬ್ಲಾಕ್ ಮೇಲ್ ಮಾಡಿದ ಆರೋಪವೂ ಇದೆ.ಇದೀಗ ಅಟ್ರಾಸಿಟಿ ಪ್ರಕರಣದಲ್ಲಿ ತಗಲಾಕಿಕೊಂಡ ಯುಟ್ಯೂಬರ್ ರಾಘವೇಂದ್ರ ಜೈಲು ಪಾಲಾಗಿದ್ದಾನೆ.
ಅತ್ತಿಬೆಲೆ :- ಕರ್ನಾಟಕದಲ್ಲಿ ಕನ್ನಡಿಗರು ಎದುರಿಸುತ್ತಿರುವ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಕನ್ನಡಿಗರ ಐಕ್ಯತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಸಾರಲು ಕನ್ನಡ ಜಾಗೃತಿ ವೇದಿಕೆಯು ಬೃಹತ್ ‘ಸ್ವಾಭಿಮಾನಿ ಕನ್ನಡಿಗರ ಮಹಾ ಪಥಸಂಚಲನ’ಕ್ಕೆ ಕರೆ ನೀಡಿದೆ.
ಕನ್ನಡ ಜಾಗೃತಿ ವೇದಿಕೆಯ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಕೆ. ಮಂಜುನಾಥ ದೇವಣ್ಣನವರ ನೇತೃತ್ವದಲ್ಲಿ, ಈ ಬೃಹತ್ ಕಾರ್ಯಕ್ರಮವು ಡಿಸೆಂಬರ್ 7, 2025 ರ ಭಾನುವಾರದಂದು ಬೆಳಗ್ಗೆ 11:30 ಕ್ಕೆ ಅತ್ತಿಬೆಲೆಯಲ್ಲಿ ನಡೆಯಲಿದೆ.
ಪಥಸಂಚಲನದ ಮುಖ್ಯ ಉದ್ದೇಶಗಳು ಮತ್ತು ವೇದಿಕೆಯ ಕಳಕಳಿ
ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷರ ಹೇಳಿಕೆ
“ಕರ್ನಾಟಕ ಏಕೀಕರಣಗೊಂಡು 70 ವರ್ಷಗಳಾಗಿವೆ. ಕನ್ನಡಿಗರೇ ನಮ್ಮ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ಜವಾಬ್ದಾರಿ ಹೊರಬೇಕಿದೆ. ಆದರೆ ಇಂದು, ಅನ್ಯಭಾಷಿಕರ ಹೆಚ್ಚಿದ ವಲಸೆಯಿಂದಾಗಿ ನಮ್ಮ ರಾಜ್ಯದ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರ-ವ್ಯವಹಾರಗಳ ಮೇಲೆ ತೀವ್ರ ದಾಳಿ ನಡೆಯುತ್ತಿದೆ. ರಾಜ್ಯದ ಯುವಕರ ಮೇಲೆ ಹೊರ ರಾಜ್ಯದವರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆ ಮಿತಿ ಮೀರಿದೆ.”
ಅಭಿವೃದ್ಧಿ ಮತ್ತು ಅಸ್ಮಿತೆಯ ಮೇಲಿನ ದಾಳಿ
ಸಣ್ಣ ವ್ಯಾಪಾರದಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ಹೊರರಾಜ್ಯದವರು ಹಿಡಿತ ಸಾಧಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಪರಿಣಾಮವಾಗಿ, ಕನ್ನಡಿಗರು ಕರ್ನಾಟಕದಲ್ಲಿಯೇ ಬಡತನ, ನಿರುದ್ಯೋಗ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ, ನಾಡಗೀತೆಯನ್ನು ಹಾಡುತ್ತಿಲ್ಲ. ಕನ್ನಡ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಹಂತಕ್ಕೆ ಖಾಸಗಿ ಆಡಳಿತ ಮಂಡಳಿಗಳು ತಲುಪಿವೆ. ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಲಾಗಿದ್ದು, ಕನ್ನಡ ರಾಜ್ಯೋತ್ಸವವನ್ನು ಸಹ ಆಚರಿಸಲಾಗುತ್ತಿಲ್ಲ.
ಸಾರ್ವಭೌಮತ್ವ ಸಾರಲು ಕರೆ
ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು, ಕನ್ನಡ, ಕನ್ನಡಿಗ, ಕರ್ನಾಟಕದ ವೈಭವದ ದಿನಗಳನ್ನು ಮರುಸ್ಥಾಪಿಸಲು, ಕನ್ನಡಿಗರ ಒಗ್ಗಟ್ಟು, ಏಕತೆ, ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಸಾರಲು ಈ ಬೃಹತ್ ಪಥಸಂಚಲನವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರಲ್ಲಿ ಮನವಿ
ಕನ್ನಡ ಜಾಗೃತಿ ವೇದಿಕೆಯ ರಾಜ್ಯಧ್ಯಕ್ಷ ಕೆ. ಮಂಜುನಾಥ ದೇವ ಅವರು, “ಈ ಸ್ವಾಭಿಮಾನಿ ಕನ್ನಡಿಗರ ಮಹಾ ಪಥಸಂಚಲನದಲ್ಲಿ ಕನ್ನಡದ ಅಭಿಮಾನಿಗಳು, ಯುವಕ-ಯುವತಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳೆಯರು, ಕಾರ್ಮಿಕರು, ಆಟೋ, ಟೆಂಪೋ, ಲಾರಿ ಚಾಲಕರು, ಕವಿಗಳು, ಸಾಹಿತಿಗಳು, ಬರಹಗಾರರು, ರೈತರು ಮತ್ತು ಎಲ್ಲಾ ಕ್ಷೇತ್ರದ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಭರ್ಜರಿಯಾಗಿ ಯಶಸ್ವಿಗೊಳಿಸಬೇಕೆಂದು” ಕಳಕಳಿಯ ಮನವಿ ಮಾಡಿದ್ದಾರೆ.
ಸಂಜೆ ಮನೋರಂಜನೆ ಹಾಗೂ ಸನ್ಮಾನ ಕಾರ್ಯಕ್ರಮ
ಪಥಸಂಚಲನದ ನಂತರ ಸಂಜೆ 7.00 ಗಂಟೆಗೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.