ಯೋಗ ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಮದ್ದು : ಶ್ರೀನಿವಾಸ ಕಲ್ಯಾಣ  

Share

ಗಂಗಾವತಿ : ಎಸ್.ಕೆ.ಆರ್ ಗ್ರೂಪ್  ಶ್ರೀ ಕೆಂಧೋಳೆ ರಾಮಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್ ಕೆ ಆರ್ ಪಿಯು ಕಾಲೇಜಿನಲ್ಲಿ  ವಿಶ್ವ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಕಲ್ಯಾಣಿ  ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಶಿವಾನಂದ ಮೇಟಿ  ಯೋಗ ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕ ಮಾತನಾಡಿ ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಮದ್ದು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರ ಮೂಲಕವೂ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ಕೋಪ, ಏಕಾಗ್ರತೆಯ ಕೊರತೆ, ಒತ್ತಡ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ದಿನನಿತ್ಯ ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಿದ್ಯಾರ್ಥಿ ಜೀವನದಂದಲೇ ನಿತ್ಯ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ, ದೇಹ ಹಾಗೂ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ಯೋಗ ಹಾಗೂ ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದರು.

ನಂತರ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ  ದೈಹಿಕ ಶಿಕ್ಷಕ ಶಂಕರ್, ಶಿಕ್ಷಕಿಯರಾದ ಸಂಗೀತಾ ,ಪ್ರೇಮಾ  ಯೋಗಭ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.ಶಿಕ್ಷಕಿ ಸಾಯೆರಾ ಬಾನು ನಿರೂಪಿಸಿದರು.

ಈ ಸಂದರ್ಭದಲ್ಲಿ  ಸಂಸ್ಥೆಯ ಸದಸ್ಯ ಯಶವಂತಕುಮಾರ, ಟ್ರಸ್ಟಿನ ಕಾರ್ಯದರ್ಶಿ ರಾಮಮೋಹನ್,  ಮುಖ್ಯೋಪಾಧ್ಯಾಯರಾದ ವೆಂಕಟೇಶ ದೇಸಾಯಿ, ಮದ್ದಾನೆಪ್ಪ, ಶಿಕ್ಷಕಿಯರಾದ ಯಶೋದಾ, ಕವಿತಾ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕವೃಂದ ಉಪಸ್ಥಿತರಿದ್ದರು.


Share

ರೆಡ್ಡಿ ವೀರಣ್ಣ ಶಾಲೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಶಿಬಿರ!

Share

ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಯೋಗ ದಿನಾಚರಣೆ ನಿಮಿತ್ಯ ಮೂರು ದಿನ ಕಾಲ ವಿಶೇಷ ಯೋಗ ತರಬೇತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಯೋಗ ತರಬೇತುದಾರ ಪ್ರಸಾದ್ ಚಿಟ್ಟೂರಿ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಅವರು, ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ಮದ್ದು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವುದರ ಮೂಲಕವೂ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ಕೋಪ, ಏಕಾಗ್ರತೆಯ ಕೊರತೆ, ಒತ್ತಡ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ದಿನನಿತ್ಯ ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಿದ್ಯಾರ್ಥಿ ಜೀವನದಂದಲೇ ನಿತ್ಯ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ, ದೇಹ ಹಾಗೂ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿತ್ಯ ಯೋಗ ಹಾಗೂ ಪ್ರಾಣಾಯಾಮ ಅಭ್ಯಾಸ ಮಾಡಬೇಕು. ಪೋಷಕರು ಕೂಡಾ ಇದನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದರು.ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಮ್ಮ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ಆಚರಿಸುತ್ತೇವೆ ಎಂದು ಸಂಸ್ಥೆಯ ಕಾಡ ಮಾಜಿ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ತಿಳಿಸಿದರು.ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಗೋಪಿ, ತಿಪ್ಪಣ್ಣ, ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Share

ಪಟ್ಟಣದಲ್ಲಿ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಆಲಮೇಲದ ಯೋಗೋತ್ಸವ ಸಮಿತಿ ಸಹಯೋಗದೊಂದಿಗೆ ೨೧ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

Share

ಆಲಮೇಲ:ಅದರ ಜಾಗೃತಿಗಾಗಿ ಶುಕ್ರವಾರ ಬೆಳಗೆ ಪಟ್ಟಣದೆಲ್ಲೆಡೆ ಪಾದಯಾತ್ರೆ ಮೂಲಕ ಪ್ರಭಾತ ಪೇರಿ ಹಮ್ಮಿಕೊಂಡು ಮನೆ ಮನೆಗೆ ತರಳಿ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.ಆಲಮೇಲ ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪಿನಲ್ಲಿ ಜೂನ್ ೨ ರಂದು ಬಾನುವಾರ ಬೆಳಗ್ಗೆ ೫:೩೦ ಗಟೆಗೆ ಯೋಗೋತ್ಸವ ಪ್ರಾರಂಬಗೊಳ್ಳಲಿದೆ ನಿರಂತರವಾಗಿ ೨೧ ದಿನಗಳ ಕಾಲ ನಡೆಯಲಿದೆ. ಮತ್ತು ಸಾಯಂಕಾಲ ೭ ಗಂಟೆಯಿAದ ೮ ಗಟೆವರೆಗೆ ಭಜನೆ ಮತ್ತು ಆದ್ಯತ್ಮಿಕ ಪ್ರಚನ ಜನಡೆಯಲಿದೆ. ಈ ಕಾರ್ಯಕ್ರಮವನ್ನು ಹಿಮಾಲಯದ ಯೋಗ ಸಾಧನೆ ಮಾಡಿರುವ ಯೋಗ ಗುರು ಪರಮ ಪೂಜ್ಯ ನಿರಂಜನ ಶ್ರೀಗಳು ನಡೆಸಿಕುಡಲಿದ್ದಾರೆ.ಅಳ್ಳೊಳಿಮಠದ ಶ್ರೀಶೈಲಯ್ಯಮಹಾಸ್ವಾಮಿ, ನಿತ್ಯಾನಂದ ಆರೂಢ ಮಠದ ಬಸವಲಿಂಗ ಶರಣರು, ಯೋಗೋತ್ಸವ ಸಮಿತಿಯ ಮುಖಂಡರಾದ ಡಾ| ಶ್ರೀಶೈಲ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ನಿವೃತ ಪ್ರಾಚಾಯ್ ಎನ್.ಎ. ಬಿರಾದಾರ. ಡಾ| ರಾಜೇಶ ಪಾಟೀಲ, ಡಾ| ಸಂಜೆಯ ಪಾಟೀಲ, ಡಾ| ಪವನ ಜ್ಯೋಶಿ, ಡಾ| ಚನ್ನಬಸು ನಿಂಬಾಳ, ಶೇಷಾದ್ರಿ ಜೋಶಿ, ಅಶೋಕ ಸದ್ಲಾಪೂರ, ಭಾಗಣ್ಣ ಗುರಕಾರ, ಸಂತೋಷ ಅಮರಗೊಂಡ, ಸುನಿಲ ನಾರಯಣಕರ, ದೇವಪ್ಪ ಗುಣಾರಿ, ಶಂಕರ ಹಳೆಮನಿ, ರವಿ ವಾರದ, ಜಿ.ಸಿ. ಪಶುಪತಿಮಠ, ಬಾಬು ಕೆಳಗಿನಮನಿ, ಗುಂಡು ಮೇಲಿಮನಿ, ಚಂದ್ರಶೇಕರ ಕೆಳಗಿನಮನಿ, ರಾಜೇಂದ್ರ ರಾಠೋಡ ಮುಂತಾದವರು ಇದ್ದರು.
೩೧ಎಎಲ್‌ಎಮ್-೧ ಆಲಮೇಲ: ಪಟ್ಟಣದಲ್ಲಿ ಹಮ್ಮಿಕೊಂಡಿದ ಉಚಿತ ಯೋಗ ಶಿಬಿರದ ನಿಮಿತ್ಯ ಯೋಗೋತ್ಸವ ಸಮಿತಿ ಪಾದಯಾತ್ರೆಯ ಮೂಲಕ ಜಾಗೃತಿ ಜಾತ ಹಮ್ಮಿಕೊಂಡು ಶಿಬಿರಿದಲ್ಲಿ ಪಾಲ್ಗೊಳ್ಳುವಂತೆ ಕರೆನೀಡಿದರು.


Share

Ajwain Benefits: ಆ್ಯಸಿಡಿಟಿ, ಮಲಬದ್ಧತೆ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೆ ಓಂಕಾಳು

Share

ಓಂ ಕಾಳನ್ನು ಅಡುಗೆಗೆ ಸಾಮಾನ್ಯವಾಗಿ ಉಪಯೋಗಿಸುತ್ತಲೇ ಇರುತ್ತೇವೆ. ಆದರೆ, ಈ ಓಂ ಕಾಳನ್ನು ಸೇವಿಸುವುದರಿಂದ ಹತ್ತು ಹಲವು ಆರೋಗ್ಯಕಾರಿ ಲಾಭಗಳಿದೆ. ಸಾಕಷ್ಟು ಮಂದಿ ಹೊಟ್ಟೆ, ಕರುಳು ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಅಂಗಾಂಗಗಳಲ್ಲಿ ಹುಣ್ಣುಗಳಿಂದ ಬಳಲುತ್ತಿರುತ್ತಾರೆ, ಈ ಹುಣ್ಣುಗಳಿಂದ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ, ಇದಕ್ಕಾಗಿ ಹಲವು ಔಷಧಗಳ ಮೊರೆ ಹೋಗಿರುತ್ತಾರೆ. ಆದರೆ, ಓಂ ಕಾಳುಗಳು ಇಂತಹ ಹುಣ್ಣುಗಳನ್ನು ವಾಸಿಮಾಡಲು ಪರಿಣಾಮಕಾರಿಯಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಓಂ ಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆಯ ವಿಳಂಬವಾಗುವ ತೊಂದರೆಗಳನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯ ತೊಂದರೆಗಳನ್ನು ಸರಿಮಾಡಿಕೊಳ್ಳಲು ಅರ್ಧ ಚಮಚದಷ್ಟು ಓಂಕಾಳು ಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

ಕಾಳುಗಳು ತೈವನ್ ಎಂಬ ಅಂಶವನ್ನು ಒಳಗೊಂಡಿದೆ. ಈ ಅಂಶವು ಕೀಟಾಣುಗಳ ಹಾಗೂ ಶಿಲಿಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಲವಾರು ಚರ್ಮ ಸಮಸ್ಯೆಗಳು ಶಿಲಿಂಧ್ರದ ಮುಖಾಂತರ ನಿಮಗೆ ಬರಬಹುದು. ಇಂತಹ ಸಮಸ್ಯೆಗಳಿಗೆ ಕೇವಲ ನಿಮಿಷಗಳಲ್ಲಿ ಓಂಕಾಳು ಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಕೆಲವು ಓಂ ಕಾಳುಗಳನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ಅವುಗಳನ್ನು ನಿಮ್ಮ ಚರ್ಮ ಸಮಸ್ಯೆ ಇರುವ ಜಾಗಕ್ಕೆ ನೇರವಾಗಿ ಹಚ್ಚಬಹುದು. ನಿಮ್ಮ ಮೊಡವೆ ಅಥವಾ ಕಲೆಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳಬೇಕು ಎಂದಿದ್ದರೆ ಓಂ ಕಾಳುಗಳ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ನಂತೆ ತಯಾರಿಸಿ. ಇದನ್ನು ಮೊಡವೆಗಳು ಇರುವ ಜಾಗಕ್ಕೆ ಹಚ್ಚಿ 15 ನಿಮಿಷದ ವರೆಗೆ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಿ.

ಹೊಟ್ಟೆಯ ತಳಮಳ ಅಥವಾ ಹೊಟ್ಟೆಯ ನೋವುಗಳು ನಮ್ಮ ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ಸಂಭವಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಓಂ ಕಾಳುಗಳು ಸಹಾಯ ಮಾಡುತ್ತದೆ. ಜೀರ್ಣವಾಗದ ಆಹಾರವು ಮಲವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗದಿದ್ದಾಗ ಕೂಡ ಹೊಟ್ಟೆಯ ಸಮಸ್ಯೆಗಳು ಬರಬಹುದು. ಓಂ ಕಾಳುಗಳನ್ನು ಜಗಿದು ತಿನ್ನುವುದರ ಮುಖಾಂತರ ಈ ತೊಂದರೆಯಿಂದ ನೀವು ಹೊರಬರಬಹುದು. ಓಂ ಕಾಳುಗಳನ್ನು ಕುಟ್ಟಿ ಪುಡಿಮಾಡಿ ನೀರಿನೊಂದಿಗೆ ಬೆರೆಸಿ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಹಾಗೂ ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿ ಮಾಡಿಕೊಳ್ಳಬಹುದು. ಓಂ ಕಾಳುಗಳನ್ನು ಸ್ವಲ್ಪ ಹುರಿದು ನಂತರ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಸೋಸಿ ಕುಡಿಯಬಹುದು.
ಓಂಕಾಳು ಗಳಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ಕೂಡ ತೆಗೆಯಲು ಸಹಾಯ ಮಾಡುತ್ತದೆ. ಆರ್ಥ್ರೈಟಿಸ್ ನಿಂದ ಉಂಟಾದ ಮೂಳೆಗಳ ಬಳಿ ಇರುವ ಕೆಂಪು ಕಲೆಗಳು ಹಾಗೂ ನೋವನ್ನು ಇದು ಹೋಗಲಾಡಿಸುತ್ತದೆ. ಓಂ ಕಾಳುಗಳಲ್ಲಿ ಉರಿಯೂತ ಗಳನ್ನು ಶಮನ ಮಾಡುವ ಗುಣಗಳಿವೆ. ಆರ್ಥ್ರೈಟಿಸ್ ನಿಂದ ಉಂಟಾಗಿರುವ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಓಂ ಕಾಳುಗಳನ್ನು ನಿಂಬೆಯ ರಸದಲ್ಲಿ ನೆನೆಸಿ ಇದಕ್ಕೆ ಕಪ್ಪು ಉಪ್ಪನ್ನು ಬೆರೆಸಿ ಸೂರ್ಯನ ಕಿರಣಗಳ ಕೆಳಗೆ ಒಣಗಿಸಿದಾಗ ನಂತರದ ದಿನಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಇವುಗಳನ್ನು ಬಳಸಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಕಾಳುಗಳನ್ನು ಉಪಯೋಗಿಸುವ ವಿಧವೆಂದರೆ ನಿಮ್ಮ ಟೀ ಜೊತೆಗೆ ಓಂ ಕಾಳುಗಳನ್ನು ಬೇಯಿಸಿ ಕುಡಿಯಬಹುದು.

ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.

ಓಂ ಕಾಳು ನಮ್ಮ ದೇಹದ ಜೀರ್ಣಕಾರಿ ಅಂಗಗಳಾದ ಹೊಟ್ಟೆ, ಕರುಳು ಮತ್ತು ಹುಣ್ಣಿನಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಓಂ ಕಾಳು ಹೆಚ್ಚಾಗಿ ಆಮ್ಲೀಯತೆ, ಗ್ಯಾಸ್ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನೀವು ಅರ್ಧ ಟೀ ಚಮಚ ಓಂ ಕಾಳು ಜಗಿದು ರಸ ನುಂಗಬೇಕು ಅಥವಾ ನೀರಿನೊಂದಿಗೆ ಈ ಕಾಳನ್ನು ಕುದಿಸಿ ಕೂಡ ಕುಡಿಯಬಹುದು.ಇಂದಿನ ಒತ್ತಡ ಹಾಗೂ ಆಹಾರ ಕ್ರಮಗಳಿಂದ ಬಹಳ ಚಿಕ್ಕ ವಯಸ್ಸಿಗೆ ಬಿಳಿಕೂದಲು ಆರಂಭವಾಗುತ್ತದೆ. ಇಂತಹ ಸಮಸ್ಯೆಗೆ ಹಾಗೂ ಕೂದಲು ಉದುರುವ ಸಮಸ್ಯೆಗೆ ಓಂ ಕಾಳುಗಳನ್ನು ಬಳಸಿಕೊಳ್ಳಬಹುದು.

ಬಿಳಿ ಕೂದಲನ್ನು ಹೋಗಲಾಡಿಸಬೇಕು ಎಂದುಕೊಂಡಿದ್ದರೆ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಓಂ ಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ನೀವು ಓಂ ಕಾಳನ್ನು ಹಲವು ವಿಧಗಳಲ್ಲಿ ಬಳಸಬಹುದು. ದಾಲ್, ಕರಿ ಅಥವಾ ಸಾಂಬಾರು ಮಾಡುವಾಗ ನೀವು ಓಂ ಕಾಳಿನ ಪುಡಿಯನ್ನು ಬಳಸಬಹುದು. ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಜೀರಿಗೆ ಬದಲು ಓಂ ಕಾಳು ಬಳಸಬಹುದು. ಇದನ್ನು ಮೌತ್ ಫ್ರೆಶ್ನರ್ ಆಗಿ ಕೂಡ ಬಳಸಬಹುದಾಗಿದೆ. ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.


Share

ಮಾರಿಯಮ್ಮ ದೇವಸ್ಥಾನ ದ ಜಾತ್ರಾ ಮಹೋತ್ಸವ

Share

ಕಾರ್ಕಳ, ಇತಿಹಾಸ ಪ್ರಸಿದ್ಧ ಮಾರಿಯಮ್ಮ ದೇವಸ್ಥಾನ ದ ಜಾತ್ರಾ ಮಹೋತ್ಸವ ವು ಎರಡು ದಿನ ನಡೆಯಲಿದ್ದು ಇಂದು ಬೆಳಗಿನಿಂದ ಭಕ್ತಾದಿಗಳು ಸಹಸ್ರಾರು ಸಂಖ್ಯೆ ಯಲ್ಲಿ ಸೇರಿದ್ದು, ಹೂವಿನ ಪೂಜೆ, ಹಣ್ಣು ಕಾಯಿ, ಕರ್ಪೂರ ಆರತಿ ಸೇವೆ, ಕುಂಕುಮಾರ್ಚನೆ ಹಾಗೂ ಇನ್ನಿತರ ಸೇವೆಗಳು ನಿರಂತರವಾಗಿ ನಡೆಯುತ್ತಿದೆ.


Share

ಸ್ವಾಮಿ ವಿವೇಕಾನಂದ

Share

ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ 12, 1863 – ಜುಲೈ 4, 1902) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.
ಜನನ
ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿμï ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ರಾಮಕೃಷ್ಣರ ಒಡನಾಟ :
ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವಡ್ಸ್ರ್ವವರ್ತ್ ಅವರ “ದ ಎಕ್ಸ್ಸಕರ್ಶನ್” ಎಂಬ ಕವಿತೆಯಲ್ಲಿನ “ಸಮಾಧಿ” ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
1881ನೇ ಇಸವಿ ನವೆಂಬರದಲ್ಲಿ ಎಫ್.ಎ (ಲಲಿತಕಲೆ) ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
1882 ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.
ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. 1884 ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.
ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.
ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲμÉ್ಟೀ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. 1885 ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.
ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು 1886, ಆಗಸ್ಟ 16 ರಂದು ನಿಧನ ಹೊಂದಿದರು.
ರಾಮಕೃಷ್ಣ ಮಠದ ಸ್ಥಾಪನೆ
ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು.
ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ “ಪ್ರತಿದಿನ ಬೆಳಿಗ್ಗೆ 3 ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು” 1881 ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾμÉಯ ಕವಿತೆಗಳನ್ನೊಳಗೊಂಡ “ಸಂಗೀತ ಕಲ್ಪತರು “ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..
ವಿವೇಕಾನಂದರ ಭಾರತ ಪರ್ಯಟನೆ
1888 ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ “ದಿ ಇಮಿಟೆಶ್ನ್ ಆಫ್ ಕ್ರೈಸ್ತ್” ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
ಉತ್ತರ ಭಾರತ
1888 ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು “ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ” ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.
ಅದ್ವೈತ ಸಿದ್ಧಾಂತದ ಉಪಯುಕ್ತತೆ
ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
ಇದೇ ಅವರ ಮಂತ್ರವಾಯಿತು ಮತ್ತು ಅವರ “ದರಿದ್ರ ನಾರಾಯಣ ಸೇವೆ’ ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.
ವಿವೇಕಾನಂದರ ವಿಶ್ವಪರ್ಯಟನೆ
ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. 1893ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕøತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.
ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ
ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು1893 ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.
‘ವಿಶ್ವದ ಧರ್ಮಗಳ ಸಂಸತ್ತು’ ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, “ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ” ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು”ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ”) ನಂತರ “ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!” ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ ‘ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ’ ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!” (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)
ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ‘ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ‘ನ್ಯೂಯಾರ್ಕ್’ ಮತ್ತು ‘ಲಂಡನ್’ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ “ಆತ್ಮನೋ ಮೋಕ್ಷಾಥರ್ಂ ಜಗದ್ ಹಿತಾಯ ಚ” (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
‘ಸ್ವಾಮಿ ವಿವೇಕಾನಂದ’ರು ದಿವಂಗತರಾದಾಗ ಕೇವಲ 39 ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-“ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು”.
ಸ್ವದೇಶ ಮಂತ್ರ
ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!
ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು – ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‍ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ “ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ”. ಸಹೋದರರೆ, ಹೀಗೆ ಸಾರಿ “ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ.” ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, “ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು ತಮ್ಮಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು.


Share

ಪ್ರಾರಂಭಿಕ ಸ್ಥಿತಿ

Share

ಅಭ್ಯಾಸ ೪ : ಗೂಲ್ಫ್ ಘೂರ್ಣನ್ (ಕಾಲಿನ ಹರಡನ್ನು ವಕ್ರವಾಗಿ ತಿರುಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ.
ಬಲಗಾಲನ್ನು ಮಡಿಸಿ, ಪಾದವನ್ನು ಎಡಪೃಷ್ಠದತ್ತ ತನ್ನಿ.
ಬಲ ಮೊಣಕಾಲನ್ನು ಹೊರಗಿಡಿಸಿ ಮತ್ತು ಬಲಪಾದವನ್ನು ಎಡತೊಡೆಯ ಮೇಲೆ ಇಡಿ.
ತೊಡೆಯ ಮೇಲೆ ಪಾದದ ಸ್ಥಾನವು ಪಾದದ ಕೀಲನ್ನು ತಿರುಗಿಸಲು ಅನುಕೂಲವಾಗುವಂತೆ ಇರಲಿ.
ಬಲಗೈಯಿಂದ ಬಲಪಾದದ ಹರಡನ್ನು, ಹರಡಿಗೆ ಆಧಾರವಾಗಿರುವಂತೆ ಹಿಡಿದುಕೊಳ್ಳಿ.
ಎಡಗೈಯಿಂದ ಬಲಪಾದದ ಬೆರಳುಗಳನ್ನು ಹಿಡಿದುಕೊಳ್ಳಿ.
ಎಡಗೈ ಸಹಾಯದಿಂದ ಬಲಪಾದವನ್ನು ಪ್ರದಕ್ಷಿಣಕ್ರಮದಲ್ಲಿ ೧೦ ಬಾರಿ ತಿರುಗಿಸಿ. ಆನಂತರ ಅಪ್ರದಕ್ಷಿಣ ದಿಕ್ಕಿಗೆ ೧೦ ಬಾರಿ ತಿರುಗಿಸಿ.
ಇದೇ ರೀತಿಯಲ್ಲಿ ಎಡಪಾದವನ್ನು ಬಲ ತೊಡೆಯ ಮೇಲಿಟ್ಟು ಮಾಡಿ.
ಉಸಿರಾಟ : ಪಾದವು ಮೇಲ್ಮುಖವಾಗಿ ಬರುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಪಾದ ಕೆಳಮುಖವಾದಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ತಿರುಗಿಸುವಿಕೆ ಮತ್ತು ಮನಸ್ಸಿನಲ್ಲಿ ಎಣಿಕೆಯ ಕಡೆಗೆ
ಪ್ರಯೋಜನಗಳು : ಪಾದಗಳು ಮತ್ತು ಕಣಕಾಲಿನ ಹಿಂಭಾಗದ ಆಸನಗಳಿಂದಾಗಿ ಸ್ಥಗಿತವಾಗಿರುವ ದುಗ್ಧರಸ ಮತ್ತು ಮಲಿನ ರಕ್ತನಾಳಗಳಲ್ಲಿ ಸ್ಥಗಿತಗೊಂಡ ರಕ್ತವು ಸರಾಗವಾಗಿ ಹರಿಯುವಂತಾಗುತ್ತದೆ. ಕಾಲುಗಳ ನಿಶ್ಯಕ್ತಿ ಮತ್ತು ಸ್ನಾಯು ಸಂಕೋಚನಗಳು ನಿವಾರಣೆಯಾಗುತ್ತವೆ. ಖಾಯಿಲೆಯಿಂದ ಹಾಸಿಗೆಹಿಡಿದವರ, ಶಸ್ತçಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವವರ ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಸಹ ತಡೆಯುತ್ತದೆ.
ಅಭ್ಯಾಸ ೫ : ಜಾನುಫಲಕ ಆಕರ್ಷಣ್ (ಮೊಣಕಾಲು ಚಿಪ್ಪಿನ ಸಂಕುಚನ)
ಪ್ರಾರAಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ.
ಬಲಮೊಣಕಾಲಿನ ಚಿಪ್ಪನ್ನು ತೊಡೆಯ ಕಡೆಗಳೆದುಕೊಂಡು ಮೊಣಕಾಲಿನ ಸುತ್ತ ಇರುವ ಸ್ನಾಯುಗಳನ್ನು ಸಂಕುಚಿಸಿ.
ಮನಸ್ಸಿನಲ್ಲೇ ಎಣಿಸುತ್ತಾ ೩ ರಿಂದ ೫ ಸೆಕೆಂಡುಗಳವರೆಗೆ ಹಾಗೇ ಇರಿ.
ಮೊಣಕಾಲು ಚಿಪ್ಪನ್ನು ನಿಧಾನವಾಗಿ ಸಡಿಲಗೊಳಿಸಿ ಮೊದಲ ಸ್ಥಾನಕ್ಕೆ ತನ್ನಿ. ಹೀಗೆ ೫ ಬಾರಿ ಅಭ್ಯಾಸ ಮಾಡಿ. ಇದೇ ರೀತಿ ಎಡ ಮೊಣಕಾಲಿನ ಚಿಪ್ಪಿಗೂ ೫ ಬಾರಿ ಮಾಡಿ. ಅನಂತರ ಎರಡೂ ಮೊಣಕಾಲಿನ ಚಿಪ್ಪುಗಳಿಗೆ ಒಟ್ಟಿಗೆ ಈ ರೀತಿಯ ವ್ಯಾಯಾಮ ಮಾಡಿಸಿ.
ಉಸಿರಾಟ : ಸಂಕುಚಿಸುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ.
ಮೊಣಕಾಲು ಚಿಪ್ಪನ್ನು ಸಂಕುಚಿಸಿರುವಷ್ಟು ಸಮಯ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಮೊಣಕಾಲು ಸ್ನಾಯುಗಳನ್ನು ಸಡಿಲಗೊಳಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಹಾಗೂ ಸಂಕುಚಿಸುವುದರ ಕಡೆಗೆ.
ಜಾನು ನಮನ್

ಅಭ್ಯಾಸ ೬ : ಜಾನುನಮನ್ (ಮೊಣಕಾಲನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಬಲಮೊಣಕಾಲನ್ನು ಮಡಿಸುತ್ತಾ ಬಲತೊಡೆಯ ಒಳಭಾಗವನ್ನು ಕೈಗಳಿಂದ ಬಿಗಿಯಾಗಿ ಹಿಡಿದುಕೊಳ್ಳಿ. ಮೊಣಕಾಲ ಚಿಪ್ಪನ್ನು ಎಳೆದುಕೊಳ್ಳುತ್ತಾ ಬಲಗಾಲನ್ನು ನೇರವಾಗಿ ಮಾಡಿ. ಅಂಗೈಗಳು ತೊಡೆಯ ಕೆಳಗಿರಲಿ ಆದರೆ ಕೈಗಳು ನೇರವಾಗಿರಲಿ. ಹಿಮ್ಮಡಿ ಮತ್ತು ಕಾಲಿನ ಬೆರಳು ನೆಲಕ್ಕೆ ತಾಗದಿರಲಿ. ತೊಡೆಯು ಎದೆಯ ಸಮೀಪಕ್ಕೆ ಬರುವಂತೆ ಮತ್ತು ಹಿಮ್ಮಡಿಯು ಪೃಷ್ಠದ ಬಳಿ ಬರುವ ಹಾಗೆ ಬಲಗಾಲನ್ನು ಮಡಿಸಿ. ತಲೆ ಮತ್ತು ಬೆನ್ನು ನೇರವಾಗಿರಲಿ.
ಇದು ೧ ಸುತ್ತು.
ಹೀಗೆ ಬಲಗಾಲಿಗೆ ೧೦ ಸುತ್ತು, ಎಡಗಾಲಿಗೆ ೧೦ ಸುತ್ತು ಅಭ್ಯಾಸ ಮಾಡಿ.
ಉಸಿರಾಟ : ಕಾಲನ್ನು ನೇರವಾಗಿಸಿದಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಕಾಲನ್ನು ಬಾಗಿಸುವಾಗ ಉಸಿರನ್ನು ಹೊರಕ್ಕೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ, ತೊಡೆಯ ಸ್ನಾಯುಗಳಲ್ಲಿ ಚಾಚಿಕೊಂಡ ಅನುಭವ ಹಾಗೂ ಚಲನೆಯ ಮೇಳವಿಸುವಿಕೆಯ ಕಡೆಗೆ.
ಅಭ್ಯಾಸ ಸೂಚನೆ : ಮೊಣಕಾಲನ್ನು ಮಡಿಸುವಾಗ, ಮೊಣಕಾಲ ಕೆಳಭಾಗವನ್ನು ಸಹ ಕೈಗಳಿಂದ ಹಿಡಿದಿರಬಹುದು. ಹೀಗೆ ಮಾಡಿದಾಗ ತೊಡೆಯು ಕೆಳಹೊಟ್ಟೆಗೆ ಒತ್ತಿಕೊಂಡು ಅಲ್ಲಿನ ವಾಯುವು ಹೊರಬರಲು ಸಹಾಯವಾಗುತ್ತದೆ.
ಅಭ್ಯಾಸ ೭ : ದ್ವಿಜಾನು ನಮನ್ (ಎರಡೂ ಮೊಣಕಾಲನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಪೃಷ್ಠದ ಸ್ವಲ್ಪ ಮುಂಭಾಗದಲ್ಲಿ ಅಕ್ಕ ಪಕ್ಕಕ್ಕೆ ಎರಡೂ ಅಂಗೈಗಳನ್ನು ಊರಿ.
ಪಾದಗಳು ಪೃಷ್ಠದ ಮುಂಭಾಗದಲ್ಲಿ ನೆಲಕ್ಕೆ ತಾಗುವ ಹಾಗೆ ಎರಡೂ ಮೊಣಕಾಲನ್ನು ಒಟ್ಟಿಗೇ ಬಾಗಿಸಿ.
ಕಾಲುಗಳನ್ನು ನೇರವಾಗಿ ಮಾಡಿ ಮತ್ತು ಪಾದಗಳನ್ನು ನೆಲದಿಂದ ೮ ಸೆಂ.ಮೀ. ನಷ್ಟು ಮೇಲಕ್ಕೆತ್ತಿ. ಇದು ಅಂತಿಮ ಸ್ಥಿತಿ.
ಕಾಲಿನ ಬೆರಳು ಮುಂದಕ್ಕೆ ಚಾಚಿರಲಿ. ಹಸ್ತಗಳ ಮತ್ತು ತೋಳುಗಳ ಆಧಾರದಿಂದ ದೇಹವನ್ನು ಸಮತೋಲನ ಸ್ಥಿತಿಯಲ್ಲಿ ಇಡಿ.
ತಲೆ ಮತ್ತು ಬೆನ್ನು ನೇರವಾಗಿರಲಿ.
ಈ ಸ್ಥಿತಿಯಲ್ಲಿ ೧ ಸೆಕೆಂಡ್ ಕಾಲ ಇರಿ. ಕಾಲುಗಳನ್ನು ಮಡಿಚಿ ಪ್ರಾರಂಭಿಕ ಸ್ಥಿತಿಗೆ ತನ್ನಿ. ಆದರೆ ಹಿಮ್ಮಡಿಗಳು ನೆಲಕ್ಕೆ ತಾಗದೆ ಸ್ವಲ್ಪ ಮೇಲಕ್ಕಿರಲಿ.
ಕಾಲಿನ ಬೆರಳು ಕಣಕಾಲಕಡೆಗೆ ಬಾಗಿರಲಿ. ಇದು ೧ ಸುತ್ತು. ಹೀಗೆ ೫ ರಿಂದ ೧೦ ಬಾರಿ ಅಭ್ಯಾಸ ಮಾಡಿ. ಇಡೀ ಅಭ್ಯಾಸಕಾಲದಲ್ಲಿ ಹಿಮ್ಮಡಿಗಳು ನೆಲಕ್ಕೆ ತಾಗದಂತೆ ನೋಡಿಕೊಳ್ಳಿ.
ಉಸಿರಾಟ : ಕಾಲುಗಳನ್ನು ಚಾಚುವಾಗ ಉಸಿರನ್ನು ಒಳಗೆಳೆದುಕೊಳ್ಳಿ. ಕಾಲುಗಳನ್ನು ಬಾಗಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಮತ್ತು ಚಲನೆ ಹಾಗೂ ಸಮತೋಲನದ ಕಡೆಗೆ.
ವಿಧಿ ನಿಷೇಧಗಳು : ಇದು ಪ್ರಯಾಸದಾಯಕ ಅಭ್ಯಾಸ. ಹೊಟ್ಟೆಯ ಸ್ನಾಯುಗಳು ದುರ್ಬಲವಾಗಿದ್ದವರು, ಬೆನ್ನಿಗೆ ಸಂಬAಧಿಸಿದ ತೊಂದರೆಗಳಿರುವವರು, ರಕ್ತದ ಒತ್ತಡ ಹಾಗೂ ಹೃದಯದ ಸಮಸ್ಯೆ ಇದ್ದವರು ಈ ಅಭ್ಯಾಸವನ್ನು ಮಾಡಕೂಡದು.
ಅಭ್ಯಾಸ ಸೂಚನೆ : ಈ ಅಭ್ಯಾಸ ಮಾಡುವಾಗ ಜಾನು ನಮನ್ ಅಭ್ಯಾಸದಲ್ಲಿ ಮಾಡಿದಂತೆ ತೊಡೆಯ ಕೆಳಭಾಗವನ್ನು ಕೈಗಳಿಂದ ಹಿಡಿದುಕೊಳ್ಳಬಹುದು. ಈ ಆಸನವು ಬ್ರಹ್ಮಚರ್ಯಾಸನಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಒದಗಿಸುತ್ತದೆ.
ಜಾನು ಚಕ್ರ

 

ಅಭ್ಯಾಸ ೮ : ಜಾನು ಚಕ್ರ (ಮೊಣಕಾಲನ್ನು ವಕ್ರವಾಗಿ ತಿರುಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಅಭ್ಯಾಸ ೬ ರಲ್ಲಿ ಹೇಳಿರುವ ರೀತಿಯಲ್ಲಿ ಬಲ ಮೊಣಕಾಲನ್ನು ಮಡಿಸಿ ಬಲತೊಡೆಯ ಕೆಳಗೆ ಕೈಗಳಿಂದ ಅದುಮಿಹಿಡಿದುಕೊಳ್ಳಿ.
ಕೈಬೆರಳುಗಳು ಪರಸ್ಪರ ಹೆಣೆದಿರಲಿ. ಅಥವಾ ಎರಡೂ ಮೊಣಕೈ ಹಿಡಿದುಕೊಂಡು ತೋಳುಗಳಿಂದ ಅದುಮಿ.
ಬಲಪಾದವನ್ನು ನೆಲದಿಂದ ಮೇಲಕ್ಕೆತ್ತಿ.
ಮೊಣಕಾಲಿನಿಂದ ಕೆಳಭಾಗವನ್ನು ದೊಡ್ಡ ವರ್ತುಲಾಕಾರವಾಗಿ ತಿರುಗಿಸಿ. ಹೀಗೆ ಚಲಿಸುತ್ತ ಮೇಲಕ್ಕೆ ಬಂದಾಗ ಕಾಲನ್ನು ನೇರವಾಗಿ ಚಾಚಲು ಪ್ರಯತ್ನಿಸಿ. ಈ ಅಭ್ಯಾಸದಲ್ಲಿ ಮೊಣಕಾಲಿನಿಂದ ಮೇಲಿನ ಭಾಗ ಮತ್ತು ಮೈಭಾಗ ನಿಶ್ಚಲವಾಗಿರಲಿ.
ಪ್ರದಕ್ಷಿಣ ಕ್ರಮದಲ್ಲಿ ೧೦ ಬಾರಿ ಮತ್ತು ವಿರುದ್ಧ ದಿಕ್ಕಿನಲ್ಲಿ ೧೦ ಬಾರಿ ಈ ಅಭ್ಯಾಸವನ್ನು ಮಾಡಿ. ಎಡಗಾಲಿಗೂ ಇದೇ ಕ್ರಮ ಅನುಸರಿಸಿ.
ಉಸಿರಾಟ : ಕಾಲು ಮೇಲಕ್ಕೆ ಚಲಿಸಿದಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಕಾಲು ಕೆಳಕ್ಕೆ ಬರುವಾಗ ಉಸಿರನ್ನು ಹೊರಹಾಕಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಮತ್ತು ನಿಖರವಾಗಿ ವೃತ್ತಾಕಾರವಾಗಿ ತಿರುಗುವುದರ ಕಡೆಗೆ.
ಪ್ರಯೋಜನಗಳು : ಮೊಣಕಾಲಿನ ಕೀಲು ಇಡೀ ಶರೀರದ ಭಾಗವನ್ನು ಹೊರುವುದರಿಂದ ಮತ್ತು ಅದಕ್ಕೆ ಬಲಿಷ್ಠ ಸ್ನಾಯುಗಳ ಬೆಂಬಲ ಇಲ್ಲದಿರುವುದರಿಂದ ಅದು ಗಾಯಗಳಿಗೆ, ಉಳುಕಿಗೆ ಮತ್ತು ಎಲುಬಿನ ಸಂಧಿವಾತಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಎಲ್ಲ ರೀತಿಯ ಮೊಣಕಾಲಿನ ಆಸನಗಳು ಮೊಣಕಾಲು ಕೀಲಿನ ಚತುರಸ್ರ ಸ್ನಾಯುಗಳನ್ನು ಹಾಗೂ ಅಸ್ಥಿರಜ್ಜುಗಳನ್ನು ಬಲಪಡಿಸುತ್ತವೆ. ಈ ಆಸನಗಳು ಮೊಣಕಾಲಿನ ಕೀಲನ್ನು ಪುನರುಜ್ಜೀವಿಸಿ ಗುಣಕಾರಿ ಅಂಶಗಳನ್ನು ಕ್ರಿಯಾಶೀಲವಾಗಿಸುತ್ತವೆ.
ಅರ್ಧ ತಿತಲಿ ಆಸನ

 

ಅಭ್ಯಾಸ ೯ : ಅರ್ಧ ತಿತಲಿ ಆಸನ (ಅರ್ಧ ಚಿಟ್ಟೆಯಾಸನ)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಬಲಗಾಲನ್ನು ಮಡಿಸಿ ಬಲಪಾದವನ್ನು ಎಡತೊಡೆಯ ಮೇಲೆ ಸಾಧ್ಯವಿದ್ದಷ್ಟೂ ಮೇಲಕ್ಕೆ ತಂದಿಡಿ. ಬಲಗೈಯನ್ನು ಬಾಗಿಸಿದ ಬಲಮೊಣಚಿಪ್ಪಿನ ಮೇಲಿಡಿ. ಬಲಗಾಲಿನ ಬೆರಳುಗಳನ್ನು ಎಡಗೈನಿಂದ ಹಿಡಿದುಕೊಳ್ಳಿ. ಇದು ಆಸನದ ಪ್ರಾರಂಭದ ಭಂಗಿ.
ಹAತ ೧ : ಉಸಿರಾಟದೊಂದಿಗೆ ಮೇಳವಿಸುವುದು
ಉಸಿರನ್ನು ತೆಗೆದುಕೊಳ್ಳುತ್ತಾ ಬಲಮೊಣಕಾಲನ್ನು ನಿಧಾನವಾಗಿ ಎದೆಯ ಕಡೆಗೆ ತನ್ನಿ. ಉಸಿರನ್ನು ಹೊರಹಾಕುತ್ತಾ ಮೊಣಕಾಲನ್ನು ಕೆಳಮುಖವಾಗಿ ತರುತ್ತಾ ಅದನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ.
ಮೈಭಾಗವು ನಿಶ್ಚಲವಾಗಿರಲಿ. ಈ ಅಭ್ಯಾಸದಲ್ಲಿ ಯಾವುದೇ ಬಲಪ್ರಯೋಗ ಬೇಡ. ಕಾಲಿನ ಸ್ನಾಯುಗಳು ತಟಸ್ಥವಾಗಿರಲಿ ಮತ್ತು ಮೊಣಕಾಲಿನ ಚಲನೆಯನ್ನು ಬಲಗೈನ ಪ್ರಯತ್ನದಿಂದ ಮಾತ್ರವೇ ಸಾಧಿಸಿ.
ಈ ಅಭ್ಯಾಸವನ್ನು ನಿಧಾನವಾಗಿ ಮೇಲ್ಮುಖವಾಗಿ ೧೦ ಬಾರಿ ಕೆಳಮುಖವಾಗಿ ೧೦ ಬಾರಿ ಮಾಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ, ತೊಡೆಯ ಕೀಲು ಹಾಗೂ ತೊಡೆಯ ಒಳ ಸ್ನಾಯುಗಳ ಚಲನೆಯ ಕಡೆಗೆ.
ಹಂತ ೨ : ಉಸಿರಿನೊಂದಿಗೆ ಸಮನ್ವಯಗೊಳಿಸದೆ
ಬಲಗಾಲು, ಎಡತೊಡೆಯಮೇಲೆ ಇರುವ ಸ್ಥಿತಿಯಲ್ಲೇ ಇರಲಿ. ಬಲಗಾಲಿನ ಸ್ನಾಯುಗಳನ್ನು ಸಾಧ್ಯವಿರುವಷ್ಟೂ ಸಡಿಲ ಬಿಡಿ.
ಬಲಗೈಯಿಂದ ಬಲಮೊಣಕಾಲನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ. ಪ್ರಯಾಸ ಬೇಡ.
ಮೊಣಕಾಲು ತನ್ನಷ್ಟಕ್ಕೆ ತಾನೇ ಮೇಲೆ ಬರಲು ಬಿಡಿ. ಬಲತೋಳಿನ ಸಹಾಯದಿಂದಲೇ ಈ ಚಲನೆ ಸಾಧ್ಯವಾಗಬೇಕು. ಮೊಣಕಾಲು ವೇಗವಾಗಿ ಮೇಲಕ್ಕೂ ಕೆಳಕ್ಕೂ ಚಲಿಸಲಿ. ೩೦ ಸಲ ಹೀಗೆ ಮಾಡಿ. ಅಭ್ಯಾಸಕ್ಕೆ ಸಂಬAಧಪಡದAತೆ ಉಸಿರಾಟ ಸಹಜವಾಗಿರಲಿ. ಹಂತ ೧ ಮತ್ತು ೨ ಹಾಗೂ ಕಾಲನ್ನು ಬಿಡಿಸಿಕೊಳ್ಳುವ ಕ್ರಮ (ಕೆಳಗಿನ ಅಭ್ಯಾಸ ಸೂಚನೆ ನೋಡಿ) ವನ್ನು ಎಡಗಾಲಿನಿಂದ ಪುನರಾವರ್ತಿಸಿ.
ಗಮನ : ಮನಸ್ಸಿನಲ್ಲಿ ಎಣಿಕೆ, ತೊಡೆಯ ಕೀಲು ಹಾಗೂ ತೊಡೆಯ ಒಳಸ್ನಾಯುಗಳ ಸಡಿಲುವಿಕೆಯ ಕಡೆಗೆ.
ಪ್ರಯೋಜನಗಳು : ಈ ಆಸನವು ಮೊಣಕಾಲು ಮತ್ತು ತೊಡೆಯ ಸಂದುಗಳನ್ನು ಸಡಿಲಗೊಳಿಸಿ ಧ್ಯಾನಕ್ಕೆ ಸಂಬAಧಿಸಿದ ಭಂಗಿಗಳಿಗೆ ಪೂರ್ವಭಾವಿ ಆಸನವಾಗಿ ಬಹಳ ಸಹಕಾರಿಯಾಗಿದೆ. ಚಕ್ಕಂಬಕ್ಕಳ ಸ್ಥಿತಿಯಲ್ಲಿ ನಿರಾಯಾಸವಾಗಿ ಕೂರಲು ಸಾಧ್ಯವಿಲ್ಲದವರು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಅರ್ಧ ತಿತಲಿ ಆಸನವನ್ನು ಮಾಡುವುದು ಬಹು ಉತ್ತಮ.
ಅಭ್ಯಾಸ ಸೂಚನೆ : ಮಡಿಸಿದ ಕಾಲನ್ನು ಬಿಡಿಸುವುದಕ್ಕಾಗಿ ಅಭ್ಯಾಸದ ಎರಡನೇ ಹಂತ ಮುಗಿದನಂತರ ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ಕಾಲನ್ನು ನೇರವಾಗಿ ಚಾಚಿ.
ಅದನ್ನು ಒಂದು ಸಲ ಬಾಗಿಸಿ, ಹಿಮ್ಮಡಿಯನ್ನು ಪೃಷ್ಠದ ಬಳಿ ತನ್ನಿ. ಕಾಲನ್ನು ನೇರ ಮಾಡಿ. ಹೀಗೆ ಮಾಡುವುದರಿಂದ ಮೊಣಕಾಲಿನ ಕೀಲು ಸ್ವಸ್ಥಾನದಲ್ಲಿ ಸರಿಯಾಗಿ ಕೂರುತ್ತದೆ.


Share

ಪ್ರಾರಂಭಿಕ ಸ್ಥಿತಿ (ಮೂಲ ಸ್ಥಿತಿ)

Share

ಪವನಮುಕ್ತಾಸನ ಭಾಗ ೧ ರ ಎಲ್ಲ ಅಭ್ಯಾಸಗಳನ್ನು ನೆಲದ ಮೇಲೆ ಮೂಲ ಸ್ಥಿತಿಯಲ್ಲಿ ಕುಳಿತುಕೊಂಡೇ ಮಾಡಲಾಗುತ್ತದೆ. (ಚಿತ್ರವನ್ನು ನೋಡಿ) ಈ ಸರಣಿಯ ಆಸನಗಳನ್ನು ಮಾಡುವಾಗ ದೇಹವನ್ನು ಸಡಿಲಿಸಬೇಕು. ಯಾವ ಆಸನ ಮಾಡಲಾಗುತ್ತಿದೆಯೋ ಅದಕ್ಕೆ ಸಂಬAಧಪಟ್ಟ ಸ್ನಾಯುಗಳನ್ನು ಮಾತ್ರ ಉಪಯೋಗಿಸಬೇಕು. ಮೇಲೆ ತಿಳಿಸಿರುವ ಹಾಗೆ ಆಸನ ಮಾಡುತ್ತಿರುವಾಗ ಅದರ ಮೇಲೇ ಸಂಪೂರ್ಣ ಅರಿವು ಹೊಂದಿರಬೇಕು. ಕಣ್ಣುಗಳನ್ನು ಮುಚ್ಚಿಕೊಂಡರೆ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಯಾಂತ್ರಿಕವಾಗಿ ಮಾಡಬೇಡಿ. ಅಭ್ಯಾಸದಾದ್ಯಂತವೂ ಜಾಗೃತವಾಗಿರಿ.
ಪ್ರಾರಂಭಿಕ ಸ್ಥಿತಿ (ಮೂಲ ಸ್ಥಿತಿ)
ಎರಡೂ ಕಾಲುಗಳನ್ನು ನೀಳವಾಗಿ ಚಾಚಿ ಕುಳಿತುಕೊಳ್ಳಿ.
ಪೃಷ್ಠಕ್ಕೆ ಸ್ವಲ್ಪ ಹಿಂಭಾಗದಲ್ಲಿ ಎರಡೂ ಅಂಗೈಗಳನ್ನು ನೆಲಕ್ಕೆ ಊರಿ.
ಬೆನ್ನು, ಕುತ್ತಿಗೆ ಮತ್ತು ತಲೆ ನೇರವಾಗಿರಲಿ.
ಮೊಣಕೈಗಳು ನೇರವಾಗಿರಲಿ.
ಕೈಗಳ ಮೇಲೆ ಭಾರಬಿಟ್ಟು ಸ್ವಲ್ಪ ಹಿಂದಕ್ಕೆ ಬಾಗಿ.
ಕಣ್ಣುಗಳನ್ನು ಮುಚ್ಚಿ. ಈ ಸ್ಥಿತಿಯಲ್ಲಿ ಇಡೀ ದೇಹವನ್ನು ಸಡಿಲಬಿಟ್ಟು ಹಾಯಾಗಿರಿ.
ಪಾದಾಂಗುಲಿ ನಮನ್ ಮತ್ತು ಗೂಲ್ಫ್ ನಮನ್

ಅಭ್ಯಾಸ ೧ : ಪಾದಾಂಗುಲಿ ನಮನ್ (ಕಾಲ್ಬೆರಳನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿದ್ದುಕೊಂಡೇ ಎರಡೂ ಕಾಲುಗಳನ್ನು ನೇರವಾಗಿ ಚಾಚಿ. ಮತ್ತು ಪಾದಗಳ ಮಧ್ಯೆ ಸ್ವಲ್ಪ ಅಂತರವಿರಲಿ. ಹಿಮ್ಮಡಿಯ ಕೀಲಿನಿಂದ ಪ್ರಾರಂಭಿಸಿ ಎರಡೂ ಪಾದಗಳನ್ನು ಹಿಂದಕ್ಕೂ ಮುಂದಕ್ಕೂ ಬಾಗಿಸಿ. ಮುಂದಕ್ಕೆ ಬಾಗಿಸಿದಾಗ ಪಾದಗಳನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ. ಅದೇ ರೀತಿ ಪಾದಗಳನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಮೊಣಕಾಲುಗಳ ಕಡೆಗೆ ಬಾಗಿಸಿ. ಪ್ರತಿ ಅವಸ್ಥೆಯೂ ಕೆಲವು ಸೆಕೆಂಡುಗಳ ಕಾಲ ಇರಲಿ. ಹೀಗೆ ೧೦ ಸಲ ಮಾಡಿ.
ಉಸಿರಾಟ : ಕಾಲ್ಬೆರಳನ್ನು ಹಿಂದಕ್ಕೆ ಬಾಗಿಸುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಮುಂದಕ್ಕೆ ಬಾಗಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಹಾಗೂ ಚಲನೆಯಿಂದುAಟಾದ ಚಾಚುವಿಕೆಯ ಅನುಭವದ ಕಡೆಗೆ.
ಅಭ್ಯಾಸ ೨ : ಗೂಲ್ಫ್ ನಮನ್ (ಕಾಲಿನ ಹರಡನ್ನು ಬಾಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿರಿ. ಪಾದಗಳ ಮಧ್ಯೆ ಸ್ವಲ್ಪ ಅಂತರವಿರಲಿ. ಹಿಮ್ಮಡಿಯ ಕೀಲಿನಿಂದ ಪ್ರಾರಂಭಿಸಿ ಎರಡೂ ಪಾದಗಳನ್ನು ಹಿಂದಕ್ಕೂ ಮುಂದಕ್ಕೂ ಬಾಗಿಸಿ. ಮುಂದಕ್ಕೆ ಬಾಗಿಸಿದಾಗ ಪಾದಗಳನ್ನು ನೆಲಕ್ಕೆ ತಾಗಿಸಲು ಪ್ರಯತ್ನಿಸಿ. ಅದೇ ರೀತಿ ಪಾದಗಳನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಮೊಣಕಾಲುಗಳ ಕಡೆಗೆ ಬಾಗಿಸಿ. ಪ್ರತಿ ಅವಸ್ಥೆಯೂ ಕೆಲವು ಸೆಕೆಂಡುಗಳ ಕಾಲ ಇರಲಿ. ಹೀಗೆ ೧೦ ಸಲ ಮಾಡಿ.
ಉಸಿರಾಟ : ಪಾದಗಳನ್ನು ಹಿಂದಕ್ಕೆ ಬಾಗಿಸುವಾಗ ಉಸಿರನ್ನು ಒಳಗೆ ತೆಗೆದುಕೊಳ್ಳಿ. ಮುಂದಕ್ಕೆ ಬಾಗುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ ಹಾಗೂ ಕಾಲಿನ ಹರಡನ್ನು ಎಷ್ಟು ಸಲ ಬಾಗಿಸಿದೆವು ಎಂಬುದರ ಕಡೆಗೆ. ಮತ್ತು ಪಾದಗಳು, ಕೀಲುಗಳು, ಮೀನಖಂಡ ಹಾಗೂ ಕಾಲಿನ ಸ್ನಾಯುಗಳ ಚಾಚುವಿಕೆಯತ್ತ ಗಮನವಿರಲಿ.

 

ಅಭ್ಯಾಸ ೩ : ಗೂಲ್ಫ್ ಚಕ್ರ (ಕಾಲಿನ ಹರಡನ್ನು ತಿರುಗಿಸುವುದು)
ಪ್ರಾರಂಭಿಕ ಸ್ಥಿತಿಯಲ್ಲಿ ಕುಳಿತಿರಿ. ಕಾಲುಗಳನ್ನು ಸ್ಥಿತಿಯಲ್ಲಿ ಕುಳಿತಿರಿ. ಕಾಲುಗಳನ್ನು ನೇರವಾಗಿಟ್ಟುಕೊಂಡು ಸ್ವಲ್ಪ ಅಗಲಿಸಿ.
ಹಂತ ೧ : ಬಲ ಪಾದದ ಹರಡಿನಿಂದ ಆರಂಭಿಸಿ ಪಾದವನ್ನು ಪ್ರದಕ್ಷಿಣ ಕ್ರಮದಲ್ಲಿ ೧೦ ಬಾರಿ ವೃತ್ತಾಕಾರವಾಗಿ ತಿರುಗಿಸಿ. ಮತ್ತು ಅಪ್ರದಕ್ಷಿಣ ದಿಕ್ಕಿನಲ್ಲಿ ೧೦ ಬಾರಿ ತಿರುಗಿಸಿ.
ಎಡ ಪಾದಕ್ಕೂ ಇದೇ ಕ್ರಮವನ್ನು ಅನುಸರಿಸಿ.
ಹಂತ ೨ : ಈಗ ಪಾದಗಳು ಒಂದಕ್ಕೊAದು ಕೂಡಿರಲಿ.
ಎರಡೂ ಪಾದಗಳನ್ನು ನಿಧಾನವಾಗಿ ಪ್ರದಕ್ಷಿಣ ಕ್ರಮದಲ್ಲಿ ೧೦ ಬಾರಿ ತಿರುಗಿಸಿ. ಹೀಗೆ ಮಾಡುವಾಗ ಮೊಣಕಾಲುಗಳು ಚಲಿಸದಂತೆ ನೋಡಿಕೊಳ್ಳಿ. ಇದೇ ರೀತಿ ಅಪ್ರದಕ್ಷಿಣವಾಗಿಯೂ ೧೦ ಬಾರಿ ಮಾಡಿ.
ಹಂತ ೩ : ಪಾದಗಳ ಮಧ್ಯೆ ಅಂತರವಿರಲಿ.
ನಿಧಾನವಾಗಿ ಎರಡೂ ಪಾದಗಳನ್ನು ವೃತ್ತಾಕಾರವಾಗಿ ತಿರುಗಿಸಿ. ಆದರೆ ಪ್ರತಿ ಪಾದವೂ ವಿರುದ್ಧ ದಿಕ್ಕಿನಲ್ಲಿ ತಿರುಗಲಿ. ಎರಡೂ ಪಾದಗಳು ಒಳಮುಖವಾಗಿ ತಿರುಗಿದಾಗ ಕಾಲಿನ ಹೆಬ್ಬೆರಳುಗಳು ಪರಸ್ಪರ ಸ್ಪರ್ಶಿಸುತ್ತಿರಲಿ.
ಹೀಗೆ ಒಂದೊAದು ದಿಕ್ಕಿಗೆ ೧೦ ಬಾರಿಯಂತೆ ತಿರುಗಿಸಿ.
ಉಸಿರಾಟ : ಪಾದಗಳು ಮೇಲ್ಮುಖವಾಗಿ ಚಲಿಸುವಾಗ ಉಸಿರನ್ನು ಒಳಗೆಳೆದುಕೊಳ್ಳಿ. ಕೆಳಮುಖವಾಗಿ ಚಲಿಸುವಾಗ ಉಸಿರನ್ನು ಹೊರಗೆ ಬಿಡಿ.
ಗಮನ : ಉಸಿರಾಟ, ಮನಸ್ಸಿನಲ್ಲಿ ಎಣಿಕೆ, ಪಾದವನ್ನು ತಿರುಗಿಸುವುದರ ಕಡೆಗೆ.
ಗೂಲ್ಫ್ ಘೂರ್ಣನ್


Share

ಪವನಮುಕ್ತಾಸನ ಭಾಗ ೧ ಸಂಧಿವಾತ ನಿರೋಧ ಗುಂಪು

Share

ಈ ಗುಂಪಿನ ಆಸನಗಳು ದೇಹದ ಸಂದು ಅಥವಾ ಕೀಲುಗಳನ್ನು ಸಡಿಲಗೊಳಿಸುವುದಕ್ಕೆ ಸಂಬAಧಿಸಿವೆ. ಸಂಧಿವಾತ, ವಾತರೋಗ, ರಕ್ತದ ಒತ್ತಡ, ಹೃದ್ರೋಗಗಳು ಮತ್ತು ಇತರೆ ಖಾಯಿಲೆಯವರಿಗೆ ಹಾಗೂ ಹೆಚ್ಚಿನ ದೈಹಿಕ ಶ್ರಮ ಕೂಡದೆಂದು ಹೇಳಲಾಗಿರುವ ವ್ಯಕ್ತಿಗಳಿಗೆ ಅತ್ಯುತ್ತಮವಾಗಿವೆ. ಈ ಆಸನಗಳು ಕೀಲುಗಳಲ್ಲಿ ಮತ್ತು ದೇಹದ ಬಾಹ್ಯ ಅಂಗಗಳಲ್ಲಿ ಚೈತನ್ಯದ ಪ್ರವಾಹಕ್ಕೆ ಇರುವ ಅಡೆತಡೆಗಳನ್ನು ಕಿತ್ತೆಸೆಯುವುದರ ಜೊತೆಗೆ ಪ್ರಾಣಮಯ ಹಾಗೂ ಮನೋಮಯ ಶರೀರಗಳ ಮೇಲೂ ಪರಿಣಾಮ ಬೀರುತ್ತವೆ.
ಗಮನ : ಈ ಅಭ್ಯಾಸಗಳನ್ನು ಮೂರು ವಿಧಾನಗಳಲ್ಲಿ ಮಾಡಬಹುದು :
೧. ವಾಸ್ತವಿಕ ದೇಹ ಚಲನೆಯ ಮೇಲೆ ಗಮನವಿಟ್ಟು ಮಾಡಬಹುದು. ದೇಹದ ವಿವಿಧ ಅಂಗಾAಗಳ ಪರಸ್ಪರಕ್ರಿಯೆ ಅಂದರೆಸ ಎಲುಬು, ಕೀಲು, ಅಸ್ತಿರಜ್ಜು, ಸ್ನಾಯು ಇತ್ಯಾದಿಗಳ ಮೇಲೆ ಗಮನವಿರಿಸಬಹುದು. ದೇಹದ ಇತರ ಅಂಗಾAಗಗಳಿಗೆ ಸಂಬAಧಿಸಿದAತೆ ಗಮನವಿರಿಸಬಹುದು; ಪ್ರತಿಯೊಂದೂ ಪೂರ್ಣಸುತ್ತು ಮುಗಿಯುವ ತನಕ ಮನಸ್ಸಿನಲ್ಲಿ ಎಣಿಕೆ ಮಾಡಬೇಕು. ಜೊತೆಗೆ ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳ ಮೇಲೆ ಗಮನವಿರಿಸಬೇಕು. ಈ ರೀತಿಯ ಅಭ್ಯಾಸವು ಶಾಂತಿ, ಸಮಸ್ಥಿತಿ ಹಾಗೂ ಏಕಾಗ್ರತೆಯನ್ನುಂಟುಮಾಡಿ ದೈಹಿಕ ಶರೀರವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ.
೨. ಉಸಿರಾಟದ ಬಗ್ಗೆ ಗಮನ ಹಾಗೂ ಅದನ್ನು ಮೇಳೈಸಿಕೊಳ್ಳುವ ವಿಧಾನ. ಮೇಲೆ ತಿಳಿದಂತೆ ದೈಹಿಕ ಚಲನೆಯ ಮೇಲೆ ಗಮನವಿರಿಸುವ ಜೊತೆಗೆ, ಒಂದೊAದು ಚಲನೆಯೊಂದಿಗೂ ಉಸಿರಾಟವನ್ನು ಮೇಳೈಸಬೇಕು. ಚಲನೆಗಳು ನಿಧಾನವಾಗುತ್ತಾ ಆ ಮೂಲಕ ಮಿದುಳಿನ ತರಂಗಗಳನ್ನು ನಿಧಾನಗೊಳಿಸುತ್ತವೆ. ಇದು ವಿಶ್ರಾಮಸ್ಥಿತಿ ಹಾಗೂ ಗಮನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಅಭ್ಯಾಸ ವಿಧಾನವು ದೈಹಿಕ ಹಾಗೂ ಪ್ರಾಣಮಯ ನೆಲೆಗಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ ಮತ್ತು ದೇಹವನ್ನು ಸಾಮರಸ್ಯಗೊಳಿಸಿ ಪುನಶ್ಚೇತನಗೊಳಿಸುವುದಕ್ಕೆ ಮತ್ತು ಆಂತರಿಕ ಅವಯವಗಳ ಕಾರ್ಯವನ್ನು ಸುಧಾರಿಸುವುದಕ್ಕೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಪ್ರತಿಯೊಂದು ಆಸನದ ಸಂದರ್ಭದಲ್ಲಿ ವಿವರಿಸಿರುವ ಪ್ರಕಾರ ಉಸಿರಾಟವನ್ನು ಅಭ್ಯಾಸ ಮಾಡಬೇಕು. ಇದಲ್ಲದೆ ಉಜ್ಜಾಯೀ ಪ್ರಾಣಾಯಾಮ (ಪ್ರಾಣಾಯಾಮ ಅಭ್ಯಾಸದ ಭಾಗವನ್ನು ನೋಡಿ)ವನ್ನು ಉಸಿರಾಟದ ವಿಧಾನವಾಗಿ ಅಭ್ಯಾಸಮಾಡಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಇದು, ನಾಡಿಗಳಲ್ಲಿ ಪ್ರವಹಿಸುತ್ತಿರುವ ಪ್ರಾಣಮಯ ಚೈತನ್ಯದ ಮೇಲೆ ಪರಿಣಾಮಕಾರಿಯಾದ ಪ್ರಚೋದನೆ ಉಂಟುಮಾಡುತ್ತದೆ ಹಾಗೂ ಸಮತೋಲನವನ್ನು ಸಾಧಿಸುತ್ತದೆ.
೩. ದೇಹದಲ್ಲಿ ಪ್ರಾಣವು ಚಲಿಸುತ್ತಿರುವುದರ ಮೇಲೆ ಗಮನವಿರಿಸುವುದು ಇನ್ನೊಂದು ವಿಧಾನ. ದೇಹದಲ್ಲಿ ಉಂಟಾಗುವ ಕ್ಷಣ ಕ್ಷಣ ಶಬ್ಧದ (ಣiಟಿgಟiಟಿg) ಸಂವೇದನೆಯ ಮೂಲಕ ಪ್ರಾಣದ ಸಂಚಲನೆಯನ್ನು ಅನುಭವಕ್ಕೆ ತಂದುಕೊಳ್ಳಬಹುದು. ಅಭ್ಯಾಸದಲ್ಲಿ ಪಳಗಿದ ಹಾಗೆ ಇದರ ಅರಿವು ಬೆಳೆಯುತ್ತದೆ.
ನಿಯತಕಾಲಿಕ ವಿಶ್ರಾಂತಿ : ಪ್ರತಿ ಎರಡು ಮೂರು ಚಲನೆಗಳ ನಂತರ ಪ್ರಾರಂಭಿಕ ಸ್ಥಿತಿಯಲ್ಲಿ ಅಲುಗಾಡದೆ ಕುಳಿತುಕೊಳ್ಳಿ. ಕಣ್ಣನ್ನು ಮುಚ್ಚಿ. ಸಹಜ ಉಸಿರಾಟದ ಮೇಲೆ, ಆಗಷ್ಟೇ ಚಲಿಸಿದ ದೇಹ ಭಾಗ ಅಥವಾ ಭಾಗಗಳ ಮೇಲೆ ಮತ್ತು ಮನಸ್ಸಿನಲ್ಲಿ ಉಂಟಾದ ಚಿಂತನೆ ಅಥವಾ ಭಾವನೆಗಳ ಮೇಲೆ ಗಮನವಿರಿಸಿ. ಸುಮಾರು ಒಂದು ನಿಮಿಷ ಬಿಟ್ಟು ಪುನಃ ಅಭ್ಯಾಸವನ್ನು ಮುಂದುವರೆಸಿ. ಹೀಗೆ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುವುದರ ಜೊತೆಗೆ ಆಂತರಿಕ ಚೈತನ್ಯ ವಿನ್ಯಾಸಗಳ ಅರಿವು ಮತ್ತು ಮಾನಸಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಗಳ ಅರಿವು ಬೆಳೆಯುತ್ತದೆ. ಈ ವಿಶ್ರಾಂತಿಯ ಭಾಗವೂ ಆಸನಗಳಷ್ಟೇ ಮುಖ್ಯ. ಆದ್ದರಿಂದ ಇದನ್ನು ಕಡೆಗಣಿಸಬಾರದು.
ಆಸನಾಭ್ಯಾಸ ಮಾಡುತ್ತಿರುವ ಯಾವುದೇ ಸಂದರ್ಭದಲ್ಲಿ ಆಯಾಸವೆನ್ನಿಸಿದರೆ ಶವಾಸನದಲ್ಲಿ ವಿಶ್ರಮಿಸಿ. ಆಸನಾಭ್ಯಾಸ ಮುಗಿದ ನಂತರ ಮೂರರಿಂದ ಐದು ನಿಮಿಷಗಳವರೆಗೆ ಶವಾಸನವನ್ನು ಮಾಡಬೇಕು.

 


Share

ಪ್ರಾರಂಭಿಕರ ಗುಂಪುರ ಪವನಮುಕ್ತಾಸನ ಸರಣಿ

Share

ಪವನಮುಕ್ತಾಸನ ಸರಣಿಯ ಆಸನಗಳು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಕಾರೀ ಪ್ರಭಾವ ಉಂಟುಮಾಡುತ್ತವೆ. ಈ ಸರಣಿಯ ಆಸನಗಳು ಅಭ್ಯಾಸದ ಮೂಲಕ ದೈಹಿಕ ಹಾಗೂ ಮಾನಸಿಕ ಅಸಮತೋಲನಗಳ ನಿವಾರಣೆಗೆ ಮತ್ತು ಆರೋಗ್ಯ ರಕ್ಷಣೆಗೆ ಉಪಯುಕ್ತ ಸಾಧನಗಳಾಗಿವೆ. ಈ ಸರಣಿಯು ಬಿಹಾರ್ ಯೋಗ ವಿದ್ಯಾಲಯ ಮತ್ತು ಪರಮಹಂಸ ಸತ್ಯಾನಂದ ಬೋಧನೆಯ ಅಮೂಲ್ಯ ಕೊಡುಗೆ. ಹಠಯೋಗದಲ್ಲಿ ಬೋಧಿಸಲಾಗುವ ಪ್ರಾಥಮಿಕ ಅನುಷ್ಠಾನ ಯೋಗ್ಯ ಗುಂಪಿಗೆ ಈ ಸರಣಿಯು ಸೇರಿದೆ. ಯೋಗ ಜೀವನಕ್ಕೆ ಬಹು ಭದ್ರ ತಳಹದಿಯನ್ನು ಒದಗಿಸುವ ಸರಣಿಯಾಗಿ ಇದು ಅತ್ಯವಶ್ಯವಾಗಿದೆ. ಆಸನದ ಅರ್ಥ ತಿಳಿಯಲು ಪವನಮುಕ್ತಾಸನವು ಅಮೂಲ್ಯ ಸಾಧನವಾಗಿದ್ದು, ದೇಹದ ಚಲನವಲನದ ಬಗ್ಗೆ ಮತ್ತು ನಮ್ಮ ಅಸ್ತಿತ್ವದ ವಿವಿಧ ಪಾತಳಿಗಳಲ್ಲಿ (ಮಟ್ಟಗಳಲ್ಲಿ) ಉಂಟಾಗುವ ಪರಿಣಾಮಗಳ ಬಗ್ಗೆ ತೀವ್ರಗಮನ ಹರಿಸುವಲ್ಲಿ ಇದು ಸಹಕಾರಿಯಾಗಿದೆ. ಇದು ಎಲ್ಲ ಪ್ರಮುಖಕೀಲುಗಳನ್ನು ಮುಕ್ತಗೊಳಿಸುತ್ತದೆ ಮತ್ತು ದೇಹದ ಸ್ನಾಯುಗಳನ್ನು ಸಡಿಲಿಸುತ್ತದೆಯಾದ್ದರಿಂದ ಒಂದು ಪೂರ್ವ ಸಿದ್ಧತಾ ಆಸನವಾಗಿ ಇದು ಬಹಳ ಉಪಯುಕ್ತ. ಈ ಸರಣಿಯ ಆಸನಗಳನ್ನು ಯಾರು ಬೇಕಾದರೂ ಮಾಡಬಹುದು ಹೊಸಬರಿರಬಹುದು ಇಲ್ಲವೇ ನುರಿತವರಾಗಿರಬಹುದು. ಚಿಕ್ಕವರಿರಬಹುದು ಇಲ್ಲವೇ ವಯಸ್ಸಾದವರಿರಬಹುದು ಮತ್ತು ಖಾಯಿಲೆಯವರು ಅಥವಾ ಖಾಯಿಲೆಯಿಂದ ಚೇತರಿಸಿಕೊಳ್ಳುವವರೂ ಆಗಿರಬಹುದು. ಈ ಆಸನಗಳ ಅಭ್ಯಾಸವು ಸರಳ, ಆರಾಮದಾಯಕ ಮತ್ತು ಸುಲಭ ಎಂಬ ಕಾರಣಕ್ಕಾಗಿ ಇವುಗಳನ್ನು ಉಪೇಕ್ಷೆ ಮಾಡಕೂಡದು ಮತ್ತು ಲಘುವಾಗಿ ಪರಿಗಣಿಸಕೂಡದು.
ಈ ಆಸನಗಳನ್ನು ಸಂಸ್ಕೃತದಲ್ಲಿ ಸೂಕ್ಷö್ಮವ್ಯಾಯಾಮ ಎಂದು ನಿರ್ದೇಶಿಸಲಾಗಿದೆ. ಪವನ ಎಂದರೆ ‘ವಾಯು’ ಅಥವಾ ‘ಪ್ರಾಣ’ ಎಂದರ್ಥ. ಮುಕ್ತ ಎಂದರೆ ಬಿಡುಗಡೆ. ಆಸನ ಎಂದರೆ ಭಂಗಿ. ಆದ್ದರಿಂದ ಪವನಮುಕ್ತಾಸನ ಎಂದರೆ ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯದ ಮುಕ್ತ ಪ್ರವಾಹಕ್ಕೆ ಅಡ್ಡಿ ಉಂಟುಮಾಡುವ ತಡೆಗಳ ನಿವಾರಣೆ ಮಾಡುವಂಥ ಆಸನಗಳ ಗುಂಪು. ಕೆಲವೊಮ್ಮೆ ನಮ್ಮ ದೇಹದ ಅಸಮರ್ಪಕ ಭಂಗಿಯಿAದ, ದೈಹಿಕ ಕ್ರಿಯೆಗಳ ಕ್ಷೆÆÃಭೆಯಿಂದ, ಮಾನಸಿಕ ಇಲ್ಲವೇ ಭಾವನಾತ್ಮಕ ತೊಂದರೆಗಳಿAದ ಅಥವಾ ಅಸಮತೋಲನ ಜೀವನ ಕ್ರಮದಿಂದ ಚೈತನ್ಯವು ಪ್ರವಹಿಸುವುದಕ್ಕೆ ಅಡಚಣೆಯಾಗುತ್ತದೆ. ಪ್ರಾರಂಭಸ್ಥಿತಿಯಲ್ಲಿ ಇದು ಮಾಂಸಖAಡಗಳ ಬಿಗುವು, ಪೆಡಸುತನ, ಅಸಮರ್ಪಕ ರಕ್ತಚಲನೆ ಇತ್ಯಾದಿ ಸಣ್ಣಪುಟ್ಟ ಲೋಪದೋಷಗಳ ಮೂಲಕ ಪ್ರಕಟವಾಗುತ್ತದೆ. ಆದರೆ ಈ ಚೈತನ್ಯ ಪ್ರವಾಹಕ್ಕೆ ಅಡ್ಡಿಯು ತೀವ್ರವಾದಾಗ ಕೈಕಾಲು, ಇಲ್ಲವೆ ಕೀಲು ಅಥವಾ ಅವಯವ ಅಸಮರ್ಪಕವಾಗಿ ಕೆಲಸ ಮಾಡಬಹುದು. ಪೂರ್ತಿ ನಿಷ್ಕಿçಯವೂ ಆಗಬಹುದು. ರೋಗಗ್ರಸ್ತವಾಗಬಹುದು. ಪವನ ಮುಕ್ತಾಸನ ಕ್ರಮಬದ್ಧ ಅಭ್ಯಾಸವು ದೇಹದಲ್ಲಿ ಚೈತನ್ಯದ ಪ್ರವಾಹಕ್ಕೆ ಇರುವ ಅಡ್ಡಿಗಳನ್ನು ನಿವಾರಿಸುವುದಲ್ಲದೆ ಹೊಸ ಅಡಚಣೆ ಉಂಟಾಗದAತೆ ನೋಡಿಕೊಳ್ಳುತ್ತದೆ. ಈ ವಿಧದಿಂದ ಇದು ದೇಹದಲ್ಲಿ ಚೈತನ್ಯ ಪ್ರವಾಹವನ್ನು ನಿಯಂತ್ರಿಸಿ ಸಮಸ್ಥಿತಿಗೆ ತರುವ ಮೂಲಕ ದೇಹಕ್ಕೆ ಪೂರ್ಣ ಆರೋಗ್ಯವನ್ನು ಒದಗಿಸುತ್ತದೆ.
ಮನಸ್ಸು-ದೇಹ
ಬಹುತೇಕ ಆಧುನಿಕ ರೋಗಗಳು ಮನೋದೈಹಿಕ ಸ್ವರೂಪದವು. ಈ ರೋಗಗಳಿಗಾಗಿ ಸೇವಿಸುವ ಔಷಧಗಳು ಕೇವಲ ರೋಗಲಕ್ಷಣಗಳನ್ನು ನಿವಾರಿಸುತ್ತವೆಯೇ ವಿನಹ ರೋಗಗಳನ್ನು ಬೇರು ಸಹಿತ ಕಿತ್ತೊಗೆಯುವುದಿಲ್ಲ. ಈ ಆಸನಗಳನ್ನು ಯಾವ ಸ್ಪರ್ಧಾತ್ಮಕ ಭಾವನೆ ಮೆದುಳನ್ನು ಪ್ರಚೋದಿಸುತ್ತದೆ ; ತನ್ಮೂಲಕ ಮನಸ್ಸನ್ನೂ ವಿಶ್ರಾಮಸ್ಥಿತಿಗೆ ತರುತ್ತದೆ. ಉಸಿರಾಟ ಮತ್ತು ಅದರ ಮೇಲಿನ ನಮ್ಮ ಗಮನವನ್ನು ಮೇಳವಿಸುವುದರಿಂದಾಗಿ ಮನಸ್ಸಿನ ಅವಧಾನಶಕ್ತಿಯು ಜಾಗೃತವಾಗುತ್ತದೆ. ತತ್ಫಲವಾಗಿ ಮನಸ್ಸು ಒತ್ತಡ ಉದ್ವೇಗಗಳಿಗೆ ಒಳಗಾಗುವುದಿಲ್ಲ. ಇದರಿಂದಾಗಿ ಈ ಆಸನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಶವೇ ಪ್ರಧಾನ ಎಂಬುದು ಗೋಚರವಾಗುತ್ತದೆ. ಈ ಆಸನಗಳ ಸಕ್ರಮ ಅಭ್ಯಾಸದಿಂದ ಮನಸ್ಸು ವಿಶ್ರಾಮಸ್ಥಿತಿಗೆ ಬರುತ್ತದೆ. ಕ್ರಿಯಾಶೀಲ (ಚಿuಣoಟಿomiಛಿ) ನರಗಳು ಹಾರ್ಮೋನು (hಚಿಡಿಟಿmoಟಿಚಿಟ) ಕ್ರಿಯೆಗಳು ಮತ್ತು ಶರೀರದ ಆಂತರಿಕ ಅವಯುಗಳು ಸರಿಗೊಳ್ಳುತ್ತವೆ. ಆದುದರಿಂದ ಈ ಆಸನಗಳು ಮಹತ್ತರವಾದ ಪ್ರತಿಬಂಧಕ ಹಾಗೂ ನಿವಾರಣಾತ್ಮಕ ಅಂಶಗಳನ್ನು ಹೊಂದಿವೆ.
ಮೂರು ಗುಂಪುಗಳು
ಪವನ ಮುಕ್ತಾಸನವನ್ನು ಮೂರು ಪ್ರಧಾನ ಗುಂಪುಗಳಾಗಿ ವಿಂಗಡಿಸಲಾಗಿದೆ. ಸಂಧಿವಾತ ನಿರೋಧ ಗುಂಪು, ಪಾಚಕ ಉದರಗುಂಪು ಮತ್ತು ಶಕ್ತಿಬಂಧ ಅಥವಾ ಚೈತ್ನಯರೋಧಕ ಗುಂಪು. ಈ ಗುಂಪುಗಳು ಒಂದಕ್ಕೊAದು ಪೂರಕವಾಗಿವೆ. ದೇಹದಲ್ಲಿ ಚೈತನ್ಯವು ಮುಕ್ತವಾಗಿ ಪ್ರವಹಿಸುವಂತೆ ಪ್ರಚೋದಿಸುತ್ತವೆ. ಹಾಗೂ ಉತ್ತೇಜನ ನೀಡುತ್ತವೆ. ಅಭ್ಯಾಸಿಗಳು ಪ್ರಧಾನ ಆಸನಗಳತ್ತ ಗಮನಹರಿಸುವ ಮುನ್ನ ಮೇಲೆ ಹೇಳಿರುವ ಮೂರೂ ಗುಂಪಿನ ಆಸನಗಳಲ್ಲಿ ಪರಿಣತಿ ಗಳಿಸಿರಬೇಕು. ಪವನಮುಕ್ತಾಸನ ಭಾಗ ೧, ೨ ಮತ್ತು ೩ ಇವುಗಳನ್ನು ಪ್ರತಿದಿನ ತಪ್ಪದೆ ಕೆಲವು ತಿಂಗಳವರೆಗೆ ಮಾಡಿದರೆ ದೇಹ ಮನಸ್ಸುಗಳಲ್ಲಿ ಪರಿಣಾಮಕಾರಿಯಾದ ವಿಶ್ರಾಂತಿ, ಇಡೀ ಮನೋದೇಹ ವ್ಯವಸ್ಥೆಯಲ್ಲಿ ಒಂದು ಹುರುಪು ಕಂಡುಬರುತ್ತದೆ. ಮತ್ತು ಮುಂದುವರೆದ ಆಸನಗಳಿಗೆ ಹೆಚ್ಚಿನ ದೈಹಿಕ ಸಾಮರ್ಥ್ಯದ ಅಗತ್ಯವಿದೆ ಮತ್ತು ಅವುಗಳು ದೇಹ ಹಾಗೂ ಮನಸ್ಸಿನ ಮೇಲೆ ಶಕ್ತಿಶಾಲಿ ಪರಿಣಾಮ ಬೀರುತ್ತವೆ. ಈ ಅಂಶದಿAದಾಗಿ ಆಸನಗಳ ಅಭ್ಯಾಸಕ್ಕೆ ಸರಿಯಾದ ಸಿದ್ಧತೆ ಅಗತ್ಯ.
ಪ್ರತಿಯೊಂದು ಗುಂಪಿನ ಆಸನಗಳನ್ನು ಮುಂದೆ ತಿಳಿಸಿರುವ ಅನುಕ್ರಮದಲ್ಲಿಯೇ ಅಭ್ಯಾಸ ಮಾಡಬೇಕು.


Share