ಸಿದ್ದಸಿರಿ ಕಾರ್ಖಾನೆ ಪ್ರಾರಂಭಿಸುವಂತೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟನೆ

Share

ಚಿಂಚೋಳಿ:- ಚಿಂಚೋಳಿಯ ಹೊರವಲಯದಲ್ಲಿರುವ ಸಿದ್ದಸಿರಿ ಎಥೆನಾಲ್ ಕಾರ್ಖಾನೆಯನ್ನು ಪ್ರಾರಂಭಿಸುವಂತೆ ಕುರಿತು ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆಯನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.
ಚಿಂಚೋಳಿಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ನೂರಾರು ಜನ ರೈತರು ಸೇರಿಕೊಂಡು ತಮ್ಮ ತೋಳುಗಳಿಗೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು ರೈತಪರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.
ಪ್ರತಿಭಟನೆಯ ಕುರಿತು ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಶಿವಶರಣಪ್ಪ ಜಾಪಟ್ಟಿ ಮಾತನಾಡಿ, ಸಿದ್ದಸಿರಿ ಕಾರ್ಖಾನೆ ಪ್ರಾರಂಭಿಸಿದ್ದು ಈ ಭಾಗದ ರೈತಾಪಿ ವರ್ಗಕ್ಕೆ ಅನುಕೂಲಕರವಾಗಲೆಂದು ಆದರೇ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ದುರುದ್ದೇಶದಿಂದ ಕಾರ್ಖಾನೆಯನ್ನು ಬಂದ್ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ರೈತರ ಹಿತ ಕಾಪಾಡುವಂತಹ ಮನೋಭಾವವಿದ್ದರೆ ಕೂಡಲೇ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ವಾಪಸ್ಸು ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಐನಾಪುರದ ಸಿದ್ದೇಶ್ವರ ಹಿರೇಮಠದ ಪೂಜ್ಯ ಪಂಚಾಕ್ಷರಿ ದೇವರು ಮಾತನಾಡಿ, ಎಲ್ಲ ರಾಜಕೀಯ ಪಕ್ಷದ ರಾಜಕೀಯ ನಾಯಕರುಗಳು ತಾವು ಅಧಿಕಾರಕ್ಕೆ ಬರಬೇಕಾದರೆ ರೈತರ ಒಳಿತಿಗಾಗಿ ನಾವು ಕೆಲಸ ಮಾಡುತ್ತೇವೆ ನಾವು ಕೂಡ ರೈತರ ಮಕ್ಕಳೇ ಎನ್ನುವಂತಹ ಆಣೆ ಪ್ರಮಾಣಗಳನ್ನು ಮಾಡಿಕೊಂಡು ಅಧಿಕಾರಕ್ಕೆ ಬಂದು ಅಧಿಕಾರದ ಗದ್ದುಗೆಯ ಮೇಲೆ ಕುಳಿತ ನಂತರ ರೈತರ ಬೆನ್ನು ಮೂಳೆ ಮುರಿಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಟಕಲ್ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು,ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು, ಚಿಮ್ಮಾಈದ್ಲಾಯಿನ ವಿಜಯ ಮಹಾಂತೇಶ್ವರ ಶಿವಾಚಾರ್ಯರು, ನೀಡಗುಂದಾದ ಕಂಚಾಳಕುಂಠಿ ಮಠದ ಕರುಣೆಶ್ವರ ಶಿವಾಚಾರ್ಯರು, ಸುಲೇಪೇಟದ ಪೂಜ್ಯ ಪಂಪಾಪತಿ ಮರಿದೇವರು ಸೇರಿದಂತೆ ಇನ್ನಿತರ ಶಿವಾಚಾರ್ಯರು ರೈತರು ಅನುಭವಿಸುವ ಕಷ್ಟಕಾರ್ಪಣ್ಯದ ಬಗೆಗೆ ಮಾತನಾಡಿದರು. ನಂದಿಕುಮಾರ ಪಾಟೀಲ್, ಜಗದೀಶ ಪಾಟೀಲ್, ಆರ್.ಆರ್.ಪಾಟೀಲ್, ವೀರಣ್ಣ ಗಂಗಾಣಿ, ಚಿತ್ರಶೇಖರ ಪಾಟೀಲ್, ಕೆ.ಎಂ.ಬಾರಿ, ಗೌತಮ ಪಾಟೀಲ್, ಗೌರಿಶಂಕರ ಉಪ್ಪಿನ್, ವಿಜಯಕುಮಾರ ಚೆಂಗಟಿ ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ನಂತರ ರೈತರ ಹಿತಾಸಕ್ತಿ ಸಮಿತಿಯು ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಸವೇಶ್ವರ ವೃತ್ತದಲ್ಲಿನ ರಸ್ತೆಯನ್ನು ಬಂದ್ ಮಾಡಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ವಾಹನಗಳು ಸ್ಥಗಿತಗೊಂಡು ಪ್ರಯಾಣಿಕರಿಗೆ ಕೆಲಕಾಲ ತೊಂದರೆಯುಂಟಾಯಿತು. ಪರಿಸ್ಥಿತಿ ಕೈ ಮೀರಿ ಹೋಗಿ ಅಹಿತಕರ ಘಟನೆಗಳು ಜರುಗಬಾರದೆಂದು ಡಿ.ವೈ.ಎಸ್ಪಿ. ಸಂಗಮನಾಥ ಹಿರೇಮಠ,ಸಿಪಿಐ ಕಪಿಲ್ ದೇವ, ಪಿ ಎಸ್.ಐ ಗಂಗಮ್ಮಾ ಸೇರಿದಂತೆ ರಸ್ತೆ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿ ಹೇಳಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡಿ ಎಂದು ಮನವರಿಕೆ ಮಾಡುವ ಸಂದರ್ಭದಲ್ಲಿ ಪ್ರತಿಭಟನೆಕಾರರ ಮತ್ತು ಪೆÇಲೀಸ್ ಅಧಿಕಾರಿಗಳ ಮಧ್ಯೆ ಸ್ವಲ್ಪ ವಾಗ್ವಾದ ನಡೆಯಿತು. ಆದರೂ ಪ್ರತಿಭಟನೆಯಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಜರುಗದಂತೆ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಚ್ಚರ ವಹಿಸಿ ಬಿಗಿ ಭದ್ರತೆ ನೀಡುವಲ್ಲಿ ಯಶಸ್ವಿಯಾದರು. ‌ ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.


Share

ಔಷಧ ಸಿಂಪಡಣೆಗೆ ಚಾಲನೆ

Share

ವಿಜಯಪುರ:-ಕರೋನ ಹಿನ್ನಲೆ ಬಬಲೇಶ್ವರ್ ಮತಕ್ಷೇತ್ರ ಬಬಲೇಶ್ವರ್ ಪಟ್ಟಣ್ಣದಲ್ಲಿ ಇವತ್ತು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ್ ಸಂಸ್ಥೆ ಅಧ್ಯಕ್ಷರು ಆದ ಶ್ರೀ ವಿಜುಗೌಡ ಎಸ್ ಪಾಟೀಲ್ ಹಾಗೂ ಸಂಸದರು ಆದ ಶ್ರೀ ರಮೇಶ ಜಿಗಜಿಣಗಿ ಇವರ ನೇತೃತ್ವದಲ್ಲಿ ಕರ್ನಾಟಕ ಸರಕಾರ ಸಚಿವರು ಆದ ಶ್ರೀ ಮುರಗೇಶ್ ನಿರಾಣಿ ಅವರ ಸಹಾಯದಿಂದ ಇವತ್ತು ಬಬಲೇಶ್ವರ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸುಮಾರು 40 ಟ್ರಾಕ್ಟರ್ ಮುಂಖಾತರ ಶ್ಯಾನಿಟೈಜರ ಮಾಡಲು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Share

ಕೂರಿಗೆ ಭತ್ತ ಬಿತ್ತನೆಗೆ ಮುಂದಾದ ರೈತರು

Share

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಬಂಡ್ರಾಳ್ ಹತ್ತಿರದ ನೆಹರು ಕ್ಯಾoಪಿನಲ್ಲಿ ನಾಗಭೂಷಣಂ ಅವರ ಜಮೀನಿನಲ್ಲಿ ಕೂರಿಗೆ ಬಿತ್ತನೆ ಮಾಡುತ್ತಿರುವುದನ್ನು ಕೃಷಿ ಅಧಿಕಾರಿಗಳು ವೀಕ್ಷಿಸಿದರು.

ಮಳೆಗಾಲದ ಈ ಸಮಯದಲ್ಲಿ ಕಾಲುವೆ ನೀರನ್ನು ನಂಬಿ ಕೂರದೆ ಅಲ್ಪ ನೀರಿನಲ್ಲಿ ಭತ್ತ ಬೆಳೆಯುವ ಕೂರಿಗೆ ಬಿತ್ತನೆಗೆ ರೈತರು ಮುಂದಾಗಿದ್ದಾರೆ, ತಾಲೂಕಿನ ತುಂಗಭದ್ರಾ ಮತ್ತು ವೇದಾವತಿ ಹಗರಿ ಅಚ್ಚು ಕಟ್ಟು ಭಾಗದಲ್ಲಿ ನೇರ ಕೂರಿಗೆ ಭತ್ತದ ಬಿತ್ತನೆ ಪದ್ಧತಿ ಅಳವಡಿಸಿ ಕೊoಡಿರುವುದು ರೈತರಿಗೆ ವರದಾನವಾಗಿದೆ.
ಕಡಿಮೆ ಹೀರೋ ಸಮಯ ಕ್ಕೆ ಸರಿಯಾಗಿ ಬೆಳೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವಲ್ಲಿ ಈ ಪದ್ಧತಿ ಹೆಚ್ಚು ರೈತರಿಗೆ ಅನುಕೂಲ ಈಗಾಗಲೇ ತಾಲೂಕಿನಲ್ಲಿ ಸಾಕಷ್ಟು ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಬೆಳೆಯಲು ಮುಂದಾಗಿರುವುದಲ್ಲದೆ ಜೊತೆಗೆ ಪರ್ಯಾಯ ಬೆಳೆ ಬೆಳೆದು ಕೂಡ ಸೈ ಎನಿಸಿಕೊಡಿದ್ದಾರೆ.
ತಾಲೂಕಿನ ಹಚ್ಚೋಳ್ಳಿ, ತೆಕ್ಕಲಕೋಟೆ, ಕರೂರು, ಸಿರುಗುಪ್ಪ ಈ ನಾಲ್ಕು ಹೋಬಳಿಯ ಭಾಗಗಳಲ್ಲಿ 1000ಎಕರೆ ಪ್ರದೇಶದಲ್ಲಿ ಈ ಗಾಗಲೇ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಮಾಡಿದ್ದು ಜುಲೈ ಅಂತ್ಯದವರೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಪದ್ಧತಿ ಬಿತ್ತನೆ ಮಾಡಲಿದ್ದಾರೆ.

ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿಯ ಪ್ರತಿ ಎಕರೆಗೆ 25 ಸಾವಿರ ಖರ್ಚು ಮಾತ್ರ ಬರುತ್ತದೆ.
ಈ ಕೂರಿಗೆ ಭತ್ತ ಬಿತ್ತನೆಯಿಂದ ನಮಗೆ ಸಾಕಷ್ಟು ಲಾಭ, ಅನುಕೂಲ ಆಗಿದೆ. ನಾವು ಬೆಳೆದದ್ದನ್ನು ಕಂಡು ಸುತ್ತಮುತ್ತಲಿನ ಗ್ರಾಮದ ಕೆಲ ರೈತರು ಇದೇ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಈ ಪದ್ಧತಿಯನ್ನು ಎಲ್ಲಾರು ಅಳವಡಿಸಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ.ಈ ಕೃಷಿಯಿಂದ ಮಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಭವಿಷ್ಯದ ಪೀಳಿಗೆಗೂ ನೆಮ್ಮದಿಯ ವಾತಾವರಣ ನಿರ್ಮಿಸಿ ಕೊಳ್ಳಬಹುದಾಗಿದೆ ಎನ್ನುತ್ತಾರೆ ನಾಗಭೂಷಣo ಸಾಂಪ್ರದಾಯಕ ನಾಟಿ ಪದ್ಧತಿಗೆ ಅಧಿಕ ನೀರು, ಹೆಚ್ಚು ಕೂಲಿಕಾರರು, ವ್ಯಾಪಕ ರಸಗೊಬ್ಬರ, ಕೀಟನಾಶಕ ಬಳಕೆ ಮಾಡಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಬೀರುವ ಜೊತೆಗೆ ಮಣ್ಣಿನ ಮಾಲಿನ್ಯ ಫಲವತ್ತತೆ ಹಾಳಾಗುತ್ತದೆ.
ಆದರೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೂರಿಗೆ ಭತ್ತದ ಬಿತ್ತನೆ ರೈತರಿಗೆ ಹೆಚ್ಚು ವರದಾನ ಆಗಲಿದೆ, ತಾಲೂಕಿನ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಎಲ್ಲಾ ಕೊನೆಭಾಗದ ರೈತರು ನೀರಿನ ಸಮಸ್ಯೆಗೆ ಕೂರಿಗೆ ಭತ್ತದ ಬಿತ್ತನೆ ಪರಿಹಾರ ಮಾರ್ಗವಾಗಿದೆ. ಯಾವ ಪ್ರದೇಶದ ಭೂಮಿಗಳಲ್ಲಿ ಕೂರಿಗೆ ಬಿತ್ತನೆ ಮಾಡಲು ಸಾಧ್ಯವಿದೆಯೋ ಅಲ್ಲೆಲ್ಲಾ ಈ ಪದ್ದತಿಯನ್ನು ಅಳವಡಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಲಾಗುತ್ತದೆ, ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಶೇ, 50 ರಿಂದ 60 ರಷ್ಟು ನೀರಿನ ಸಮಸ್ಯೆ ನಿಯಂತ್ರಿಸಬಹುದು ನಮ್ಮ ತಾಲೂಕಿನಲ್ಲಿ 5 ಸಾವಿರ ಎಕರೆ ಬಿತ್ತನೆ ಗುರಿ ಹೊಂದಿದ್ದು. ಈ ಗಾಗಲೇ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಇದೆ.

ನಜೀರ್ ಅಹಮ್ಮದ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಸಿರುಗುಪ್ಪ

ನೀರಾವರಿ ಅಚ್ಚು ಕಟ್ಟು ಭಾಗದ ರೈತರು ಹಾಗೂ ಕೊನೆ ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು, ದೊರೆಯುವ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಅಳವಡಿಸಿಕೊಂಡರೆ ಹೆಚ್ಚು ಅನುಕೂಲ. ಈ ರೀತಿಯ ಬೆಳೆ ಪದ್ದತಿಯಿಂದ ಖರ್ಚು ವೆಚ್ಚು ಕಡಿಮೆ ಆಗುವ ಜೊತೆಗೆ ಅಧಿಕ ಲಾಭ ಪಡಿಯಬಹುದಾಗಿದೆ, ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದಾಗಿದೆ. ಸಂಪ್ರದಾಯಿಕ ಪದ್ದತಿಯಲ್ಲಿ ರೈತರಿಗೆ ಲಾಭಾಂಶ ದೊರೆಯುವುದು ಅಷ್ಟ ಕಸ್ಟೇ ಆದರೆ ಕೂರಿಗೆ ಭತ್ತ ಬಿತ್ತನೆಯಿಂದ ರೈತರ ಆದಾಯ ದ್ವಿಗುಣ ಆಗುವ ಜೊತೆಗೆ ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟು ಬಹುದಾಗಿದೆ. ಕೂರಿಗೆ ಬಿತ್ತನೆ ಮಾಡಿದ ಮರುದಿನ ಒಂದು ಎಕರೆಗೆ 700 ಎಂ ಎಲ್ ಪೆಂಡಿಮೈಥಿಲಿನ್ ಕಳೆ ನಾಶಕವನ್ನು 200 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.
ಡಾ ಎಂ ಬಸವಣ್ಣೆಪ್ಪ. ಮುಖ್ಯಸ್ಥರು, ಕೃಷಿ ಸಂಶೋಧನೆ ಕೇಂದ್ರ, ಸಿರುಗುಪ್ಪ.

ವರದಿ :ಶೇಖರ ಹೆಚ್ ರಾರಾವಿ


Share