ತಪ್ಪು ಸಂದೇಶಕ್ಕೆ ದೇಶ ಹೊತ್ತಿ ಉರಿದಿದ್ದು ಎಷ್ಟು ಸರಿ ?

ತಪ್ಪು ಸಂದೇಶಕ್ಕೆ ದೇಶ ಹೊತ್ತಿ ಉರಿದಿದ್ದು ಎಷ್ಟು ಸರಿ ?

Share

ಪೌರತ್ವ ಕಾಯ್ದೆ-2019 ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಆಗುತ್ತಲ್ಲೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬಿದ ಹಲವು ಸುಳ್ಳು ಸುದ್ದಿಗಳಿಗೆ ದೇಶವೆ ಹೊತ್ತಿ ಉರಿಯುತ್ತಿದೆ ಏಕೆಂದರೆ ಈ ಮುಂಚೆ ಬಿಲ್ ಆಗಿದ್ದು ಈಗ ಕಾಯ್ದೆ ಆಗಿ ಬದಲಾಗಿದ್ದು ಹಳೆಯ ಬಿಲ್‍ನ ಕೇಲವು ಅಂಶಗಳನ್ನು ಇಲ್ಲಿ ಬದಲಾಗಿದೆ.ಈ ಕಾಯ್ದೆಯಿಂದ ಭಾರತ ಮೂಲ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯು ಇಲ್ಲ ಏಕೆಂದರೆ ಈ ಕಾಯ್ದೆಯ ಮೂಲ ಉದ್ದೇಶವು ಬೇರೆ ದೇಶದ ಅಲ್ಪಸಂಖ್ಯಾತರ ರಕ್ಷಣೆ ಅಂದರೆ ಅಂತರಾಷ್ಟ್ರೀಯ ನಿಯಮಗಳ ಪ್ರಕಾರ ಆಶ್ರಯ ನೀಡುವುದು ಮತ್ತು ನುಸುಳುಕೋರರನ್ನು ತಡೆಯುವುದು ಮತ್ತು ಬೇರೆ ದೇಶಗಳಿಂದ ಬಂದು ದೇಶದ ಭದ್ರತೆಯನ್ನು ಹಾಳು ಮಾಡುವುದು ಮೂಲನಿವಾಸಿಗಳ ಬದುಕಿಗೆ ತೊಂದರೆ ನೀಡುವುದು ತಡೆಯುವುದೇ ಆಗಿದೆ ಹೊರತು ಇಲ್ಲಿಯ ಮುಸ್ಲಿಂರನ್ನು ಹೊರಹಾಕುವ ಯಾವ ಉದ್ದೇಶವು ಇಲ್ಲ ಅದು ಅಲ್ಲದೇ ಸಿ.ಎ.ಎ ಸಂಪೂರ್ಣ ಓದಿ ಅಥೈಸಿಕೊಂಡು ಹೋರಾಟ ಮಾಡುವುದು ಒಳ್ಳೆಯದೇ ಹೊರತು ರಾಜಕೀಯ ಮತ್ತು ಧರ್ಮ ಹಾಗೂ ಜಾತಿ ಹೆಸರಿನಲ್ಲಿ ಬೆಂಕಿ ಹಚ್ಚಿ ಮೈಕಾಸಿಕೊಳ್ಳುವುದು ನ್ಯಾಯವಲ್ಲ. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ,ಬಾಂಗ್ಲಾ ಮತ್ತು ಅಪ್ಘನಿಸ್ತಾನ ದೇಶಗಳ ಮುಸ್ಲಿಂ ಧರ್ಮದವರನ್ನು ಹೊರತು ಪಡಿಸಿ ಸಿಕ್ಕ್,ಜೈನ್,ಬೌದ್ಧ ಪಾರಸಿ ಮತ್ತು ಹಿಂದೂ ಧರ್ಮದವರು ಬರುವ ನಿರಾಸಿತರು ಮತ್ತು ಅಳಿ ತುಳಿತ ಒಳಗಾದವರು ಬಂದರೆ ತಕ್ಷಣ ಅವರಿಗೆ ದೇಶದ ಆಶ್ರಯ ಮತ್ತು ಪೌರತ್ವ ದೊರೆಯುತ್ತದೆ, ಇದು ಮುಸ್ಲಿಂ ಧರ್ಮದವರಿಗೆ ಅನ್ವಯಿಸುವುದಿಲ್ಲ. ಬೇರೆ ಕಾಯ್ದೆ ಮತ್ತು ಅಂತರಾಷ್ಟ್ರೀಯ ನಿಯಮದ ಪ್ರಕಾರ ಈ ದೇಶಗಳ ಮುಸ್ಲಿಂ ಧರ್ಮದವರು ಭಾರತೀಯ ಪೌರತ್ವ ಪಡೆಯಬೇಕಾದರೆ 11 ವರ್ಷ ಕಾಯಬೇಕು ಏಕೆಂದರೆ ಈ ಮೂರು ದೇಶಗಳು ಮುಸ್ಲಿಂ ಧರ್ಮದವರೆ ಹೆಚ್ಚಿರುವ ದೇಶಗಳು ಅದರಲ್ಲೂ ಪಾಕಿಸ್ಥಾನ ಮತ್ತು ಅಪ್ಘನಿಸ್ತಾನ ದೇಶಗಳು ತಮ್ಮ ಸಂವಿಧಾನದಲ್ಲೆ ಇಸ್ಲಾಮಿಕ ದೇಶಗಳು ಅಂತ ಹೇಳಿಕೊಂಡಿವೆ ಮತ್ತು ಬಾಂಗ್ಲಾ ದೇಶವು ತಾನು ಇಸ್ಲಾಂ ದೇಶ ಅಂತ ಹೇಳಿಕೊಳ್ಳದಿದ್ದರೂ ಕೂಡ ಅಲ್ಲಿ ಆಡಳಿತ ಮತ್ತು ಕಾನೂನುಗಳು ಮುಸ್ಲಿಂ ಪರವಾಗಿದ್ದು ಈ ಗಡಿ ದೇಶಗಳಲ್ಲಿ ಮುಸ್ಲಿಂ ಧರ್ಮದವರು ಬಹುಸಂಖ್ಯಾತರಾಗಿದ್ದು, ಈ ದೇಶಗಳಲ್ಲಿ ಮುಸ್ಲಿಂ ಧರ್ಮದವರಿಗೆ ಯಾವುದೇ ರೀತಿಯ ತೊಂದರೆಯೂ ಇಲ್ಲ. ಮಯನ್ಮಾರ ಹಿಂದೂಗಳಿಗೆ ಮತ್ತು ಶ್ರೀಲಂಕಾದ ತಮಿಳಿನ್ನರಿಗೂ ಸಿ.ಎ.ಎ ಮೂಲಕ ತಕ್ಷಣ ಪೌರತ್ವ ದೊರೆಯುವುದಿಲ್ಲ ಏಕೆಂದರೆ ಮಯನ್ಮಾರದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು, ಶ್ರೀಲಂಕಾದಲ್ಲಿ ತಮಿಳರ ಸಮಸ್ಯೆಗಳು ಪರಿಹಾರವಾಗಿದ್ದು ಮತ್ತು ಬಹುಸಂಖ್ಯಾತ ತಮಿಳರು ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಅಕ್ರಮ ವಲಸಿಗರ ಅಕ್ರಮ ಚಟುವಟಿಕೆಗಳನ್ನು ತಡೆಯಲು ದೇಶದ ಸುಕ್ಷರತೆ ಭದ್ರತೆ ಮತ್ತು ದೇಶದ ನಾಗರೀಕರ ಅಭಿವೃದ್ಧಿಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರಿಂದ ದೇಶವಾಸಿಗಳಿಗೆ ಅನುಕೂಲವಾಗಲಿದ್ದು ಆದರೆ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಚದುರಂಗ ಆಟಕ್ಕೆ ಅಮಾಯಕರ ಬಲಿಕೊಡುತ್ತಿವೆ. ದೇಶದಲ್ಲಿ ವಾಸ ಮಾಡುತ್ತಿರುವ ಯಾವುದೇ ಧರ್ಮದವರಿಗೂ ಇದರಿಂದ ತೊಂದರೆ ಆಗುವುದಿಲ್ಲ ಅಕ್ರಮವಾಗಿ ದೇಶದಲ್ಲಿ ಇರುವವರಿಗೆ ಮಾತ್ರ ತೊಂದರೆ ಕುಂಬಳ ಕಾಯಿ ಕಳ್ಳ ಅಂದರೆ ಏಕೆ ಕೇಲವರು ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಅನ್ನುದು ಯಕ್ಷ ಪ್ರಶ್ನೆಯಾಗಿದೆ.
ದೇಶದ ಬಡವರು ಮತ್ತು ಅಲ್ಪಸಂಖ್ಯಾತರು ಈಗ ಸರ್ಕಾರದ ಯೋಜನೆಗಳನ್ನು ಪಡೆಯಲು ಹಲವಾರು ಬಾರಿ ಹಲವಾರು ದಾಖಲೆಗಳನ್ನು ವಿವಿಧ ಸರ್ಕಾರಿ/ಅರೆ ಸರ್ಕಾರಿ ಕಛೇರಿಗಳಿಗೆ ಅಲೆದು ಸರ್ಕಾರಿ ಯೋಜನೆಗಳನ್ನು ಪಡೆಯುವಾಗ ಇರುವ ಆಸಕ್ತಿ ಮನೆ ಬಾಗಲಿಗೆ ಬಂದಾಗ ಕೇವಲ ಯಾವುದಾದರೂ ಎರಡು ದಾಖಲೆಗಳನ್ನು ತೋರಿಸಲು ಏನು ಸಮಸ್ಯೆ ? ದೇಶದ ಅಭಿವೃದ್ಧಿಗಾಗಿ ಅಕ್ರಮ ನುಸುಳುಕೋರರ ತೊಂದರೆಯನ್ನು ತಪ್ಪಿಸಲು ಮತ್ತು ದೇಶದ ಭದ್ರತೆಗಾಗಿ ಇಷ್ಟು ಮಾಡದಿದ್ದರೆ ಹೇಗೆ ? ಅಕ್ರಮವಾಗಿ ದೇಶದಲ್ಲಿ ವಾಸಿಸುವವರಿಂದ ಸ್ಥಳೀಯರಿಗೆ ಉದ್ಯೋಗದ ಕೊರತೆ, ದೇಶದಲ್ಲಿ ವಿನಾಕಾರಣ ಗಲಭೆ ಮತ್ತು ಡೊಂಬಿಗಳು ನಡೆಯುವುದು, ಇಂತಹ ಅಕ್ರಮ ವಲಸಿಗರು ತಮ್ಮ ದೇಶದ ಮೇಲಿನ ಅಭಿಮಾನಕ್ಕೆ ಇಲ್ಲಿ ಕೇಟ್ಟ ಕೆಲಸ ಮಾಡಿ ದೇಶದ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಹಾಳು ಮಾಡುವುದು ಮತ್ತು ಎಲ್ಲಕ್ಕಿಂತಲ್ಲೂ ಮುಖ್ಯವಾಗಿ ಭಯೋತ್ಪಾದನೆ.
ಸಂವಿಧಾನ ಮೂಲ ಆಶೆಯನ್ನು ಈ ಕಾಯ್ದೆ ಹಾಳು ಮಾಡುತ್ತದೆ ಅಂತ ಕೇಲವರು ವಾದಿಸುತ್ತಾರೆ. ಸಂವಿಧಾನದಲ್ಲಿ ಹಲವಾರು ಬದಲಾವಣೆಗಳು ಆಗಿದ್ದು ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ಕೂಡ. ಬದಲಾವಣೆ ಜಗದ ನಿಯಮ ಅಲ್ಲವೇ? ಗಾಂಧಿ ಅಂಬೇಡ್ಕರ್ ಯಾರೂ ಮನೆಯವರನ್ನು ಉಪವಾಸ ಬಿಟ್ಟು ಕಂಡವರಿಗೆ ಮ್ರಷ್ಠಾನ್ನ ಭೋಜನೆ ನೀಡಿ ಅಂತ ಎಲ್ಲೂ ಹೇಳಿಲ್ಲ. ಈ ದೇಶದ ಅಲ್ಲ ವಿಶ್ವದ ಯಾವುದೇ ತತ್ವಜ್ಞಾನಿ ಕೂಡ ತಮ್ಮವರನ್ನು ಬೀದಿಯಲ್ಲಿ ಬಿಟ್ಟು ಬೇರೆಯವರನ್ನು ಉಪಚರಿಸಿ ಅಂತ ಹೇಳಿಲ್ಲ. ಈ ದೇಶದ ಅಲ್ಪಸಂಖ್ಯಾತರು ಮತ್ತು ಎಲ್ಲ ಧರ್ಮದ ಬಡವರನ್ನು ಮೊದಲು ಒಂದು ಹಂತಕ್ಕೆ ತರಬೇಕಾದ ಅತ್ಯಂತ ಮಹತ್ವದ ಜವಾಬ್ದಾರಿ ಆಡಳಿತ ಸರ್ಕಾರ ಮತ್ತು ಆಡಳಿತ ವಿಭಾಗದ ಮೇಲೆ ಇದ್ದು, ಕಾಟಾಚಾರಕ್ಕೆ ವಿಶ್ವಸಂಸ್ಥೆಯ ನಿಯಮಗಳನ್ನು ಪಾಲಿಸುತ್ತೇವೆ ಅಂತ ತೋರಿಸಲು ನಮ್ಮವರನ್ನು ನಿರ್ಗತಿಕರಾಗಿಸುವುದು ಯಾವ ನ್ಯಾಯ ? ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕಾಯ್ದೆಯ ಅವಶ್ಯಕತೆ ಇದ್ದು ದೇಶದ ಮೂಲ ನಿವಾಸಿಗಳು ಯಾವುದೇ ಗಾಳಿ ಸುದ್ದಿ ಅಥವಾ ದ್ರಶ್ಯ ಮಾಧ್ಯಮಗಳು ಟಿ. ಆರ್. ಪಿ ಗಾಗಿ ಕೇಲ ಬುದ್ಧಿ(ಲದ್ದಿ) ಜೀವಿಗಳ ಪಾನೇಲ್ ಚರ್ಚೆಯನ್ನು ನೋಡಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಬರುವ ಪೋಸ್ಟಗಲನ್ನು ನೋಡಿ ಭಾವೋದ್ರಕ್ಕೆ ಒಳಗಾಗಿ ಗಲಾಟೆ, ಬಂಧ ಮಾಡಬಾರದು ಇದರಿಂದ ಆಗುವ ಹಾನಿಗಳನ್ನು ಯಾವ ಧರ್ಮದ ದೇವರಾಗಲಿ, ಬುದ್ದಿಜೀವಿಯಾಗಲಿ ಮರಳಿ ಕೊಡಲಾರರು, ಮಂಗಳೂರಿನಲ್ಲಿ ಜೀವ ಬಲಿಗೆ ಈ ದೇಶದ ಬುದ್ದಿಜೀವಿಗಳು ಮತ್ತು ಹೋರಾಟ ಮಾಡಬೇಕು ಎಂಬ ಹುಚ್ಚು ಮನಸ್ಸುಗಳೆ ಕಾರಣ ಆದರೆ ಆ ಜೀವಗಳನ್ನು ಮರಳಿ ತರುವ ಶಕ್ತ ಈ ಲದ್ದಿಗಳಿಗೆ ಮತ್ತು ಯಾವುದೋ ನೆಲಕಚ್ಚುತ್ತಿರುವ ರಾಜಕೀಯ ಪಕ್ಷಗಳ ಮುಂಖಡರಿಗೆ ಅಥವಾ ಹೋರಾಟ ಆಯೋಜಿಸಿದವರಿಗೆ ಇದ್ದೇಯಾ ?

ಹೋರಾಟದ ಹೊರತಾಗಿಯೂ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಲು ಸಾಕಷ್ಟು ಮಾರ್ಗಗಳು ಇವೆ. ಒಂದು ವೇಳೆ ಈ ಕಾಯ್ದೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಅದರ ನಂತರವು ಈ ಕಾಯ್ದೆಯಲ್ಲಿ ಲೋಪ-ದೋಷಗಳು ಕಂಡು ಬಂದರೆ ಶಾಂತಿಯುತ ಮೆರವಣೆಗೆಯ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು, ಗಾಂಧಿ ಬಗ್ಗೆ ಮಾತನಾಡುವವರೇ ಬೆಂಕಿ ಹಚ್ಚುತ್ತಿರುವುದು ನೋಡಿದ್ದಾಗ ಗಾಂಧಿ ತತ್ವಗಳನ್ನು ಪಾಲಿಸುವವಲ್ಲಿ ಎಲ್ಲರೂ ಎಡವಿದ್ದಾರೆ ಅಂತ ಅನ್ನಿಸುತ್ತದೆ. ಗಾಂಧಿಯವರು ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದರು ಸತ್ಯಾಗ್ರಹದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಗಾಂಧಿಯವರ ಭಾವಚಿತ್ರ ಬಳಸುವವರು ದೇಶದಲ್ಲಿ ಹೆಚ್ಚಾಗಿದ್ದಾರೇ ಹೊರತು ಅವರ ಆದರ್ಶ ಮತ್ತು ತತ್ವಗಳನ್ನು ಪಾಲಿಸುವವರ ಸಂಖ್ಯೆ ಅತ್ಯಂತ ಕಡಿಮೆ ಆಗಿದೆ.
ಅಂತೆ-ಕಂತೆ ಸುದ್ದಿಗಳಿಗೆ ದ್ವನಿಯಾಗಿ ದೇಶದ ಐಕ್ಯತೆ ದಕ್ಕೆ ತರುವ ಕೆಲಸ ಯಾರು ಮಾಡಬೇಡಿ ಏಕೆಂದರೆ ಭಾರತವು ಸ್ವಾತಂತ್ರ್ಯ ನಂತರದಲ್ಲಿ ಜಾತ್ಯಾತೀತವಾಗಿ ನೆಮ್ಮದಿಯಿಂದ ಬದುಕುತ್ತಿದೆ. ಈ ದೇಶದ ಅನ್ನ ತಿಂದು ದೇಶದ ವಿರುದ್ದ ಭಾಷಣ ಮಾಡುವವರನ್ನು ಬುದ್ದಿಜೀವಿಗಳು ಅನ್ನುವ ಈ ಕಾಲದಲ್ಲಿ ಇಂತಹ ಮನೆ ಹಾಳು ಮಾಡುವವರ ಮಾತು ಕಟ್ಟಿಕೊಂಡು ನಿಮ್ಮ ಅಮೂಲ್ಯ ಜೀವ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಶಾಂತಿ-ನೆಮ್ಮದಿಯಿಂದ ಬದುಕಿ, ನಾವೇಲ್ಲರೂ ಒಂದು ಭಾರತಾಂಭೆಯ ಮಕ್ಕಳು ಇಲ್ಲಿಯ ಮೂಲ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ ಒಂದು ವೇಳೆ ಮುಂದೆ ತೊಂದರೆ ಬಂದರೆ ನಾವು ನಿಮ್ಮೊಂದಿಗೆ ಇದ್ದೇವೆ. ಹಿಂದೂ-ಮುಸ್ಲಿಂ ಅಣ್ಣ-ತಮ್ಮರಂತೆ ಬದುಕಿ ದೇಶವನ್ನು ಕಟ್ಟೋಣ. ಶಾಂತಿ ಹೆಸರಾದ ದೇಶದಲ್ಲಿ ಶಾಂತಿ ಕಾಪಾಡಿ. ಸಿ.ಎ.ಎ ಬಗ್ಗೆ ಸರಿಯಾಗಿ ತಿಳಿದು ಅಥೈಸಿಕೊಂಡು ಮಾತನಾಡಿ.


Share