ದಿ ಕಾಶ್ಮೀರಿ ಪೈಲ್ಸ್ ಹಿಂದಿನ ಸತ್ಯವೇನು?

ದಿ ಕಾಶ್ಮೀರಿ ಪೈಲ್ಸ್ ಹಿಂದಿನ ಸತ್ಯವೇನು?

Share


ಭಾರತ ದೇಶದಲ್ಲಿ ಮನೋರಂಜನಾ ಮಾಧ್ಯಮವಾದ ಚಲನಚಿತ್ರವೂ ಕೂಡ ಒಂದೊಂದು ಸಾರಿ ಸತ್ಯ ಘಟನೆಯಾಧಾರಿತ ಚಿತ್ರ ನಿರ್ಮಿಸುವ ಮೂಲಕ ಹಲವಾರು ರೀತಿಯ ಸತ್ಯಗಳನ್ನು ಕೆದಕುವ ಪ್ರಯತ್ನವು ಮೊದಲಿನಿಂದಲೂ ನಡೆದು ಬಂದಿದೆ. ಈ ಪ್ರಯತ್ನದ ದಾರಿಯಲ್ಲಿ ದಿ ಕಾಶ್ಮೀರಿ ಪೈಲ್ಸ್ ಚಿತ್ರವು ನೀಲುತ್ತದೇಯೇ? ಈ ಚಿತ್ರಕ್ಕೆ ಭಾರತದ ಒಂದು ವರ್ಗವು ಬೆಂಬಲಕ್ಕೆ ನಿಲ್ಲುವ ಜೊತೆಗೆ ಬಿಜೆಪಿಯು ಚಿತ್ರವನ್ನು ನೋಡಲೇಬೇಕೆನ್ನುವಂತೆ ಜನರ ಮೇಲೆ ಮನಸಿಕ ಒತ್ತಡವನ್ನು ಏರುತ್ತಿದೆ. ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಸತ್ಯವನ್ನು ತೋರಿಸಿದ್ದೇವೆ ಎನ್ನುವ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಕೇಂದ್ರ ಸರ್ಕಾರವು ವೈಶ್ರೇಣಿಯ ಭದ್ರತೆಯನ್ನು ಒದಗಿಸಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಘೋಷಣೆ ಮಾಡಿದೆ. ದೇಶದ ಪುರಾಮಿ ಮೋದಿ ಈ ಚಿತ್ರವನ್ನು ಹಾಡಿ ಹೋಗಳುತ್ತಾರೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಮಾಡುವ ಜೊತೆಗೆ ಚಿತ್ರವನ್ನು ನೋಡುವಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಚಿತ್ರದ ಮುಖ್ಯ ಸಾರಾಂಶವು 1989-90ರ ಸಾಲಿನಲ್ಲಿ ನಡೆದ ಕಾಶ್ಮೀರ್ ಪಂಡಿತರ ಹತ್ಯೆಯ ಕುರಿತಾಗಿದೆ. 1990ರ ಸಂದಂರ್ಭದಲ್ಲಿ ಕಾಂಗ್ರೆಸ್ ಹೆತರ ಸರ್ಕಾರ ಆಡಳಿತ ಮಾಡುತ್ತಿತ್ತು. ಆ ಸಂದಂರ್ಭದಲ್ಲಿ ರಾಷ್ರ್ಟೀಯ ಪ್ರಂಟ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ಪಕ್ಷವು ನೇರವಾಗಿ ವಿ.ಪಿ.ಸಿಂಗ್‍ಗೆ ಬೆಂಬಲ ಕೊಟ್ಟಿದ್ದವು. ಆಗ ಲೋಕಸಭೆಯಲ್ಲಿ ವಾಜಪೇಯಿ ಮತ್ತು ಆಡ್ವಾನಿ ಸೇರಿದಂತೆ 89 ಸದಸ್ಯರನ್ನು ಒಳಗೊಂಡಿತ್ತು. ವಿ.ಪಿ.ಸಿಂಗ್ ಸರ್ಕಾರಕ್ಕೆ ಬಿ.ಜೆ.ಪಿ ಯ ಬೆಂಬಲವು ಅತ್ಯಂತ ನಿರ್ಣಯಕವಾಗಿತ್ತು. ಈ 1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯ ಪಾಲರಾಗಿ ಜಗಮೋಹನ್ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲ ಬಿ.ಜೆ.ಪಿ ಗರು ಮತ್ತು ವಾಜಪೇಯಿ ಮತ್ತು ಅಡ್ವಾನಿಯವರಿಂದ ನೇಮಕಗೊಂಡಿದ್ದರು. ಇಂತಹ ನರಮೇಧದ ಸಂದರ್ಭದಲ್ಲಿ ಸರಕಾರವಾಗಲೀ, ರಾಜ್ಯ ಪಾಲರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಕೇಂದ್ರ ಸರ್ಕಾರವು ಮೌನದಿಂದ ಇದ್ದು ಇದಕ್ಕೂ ನನಗೂ ಸಂಬಂಧವಿಲ್ಲದಂತಿತ್ತು. ಇದರ ಕುರಿತು ಸಂಸತ್ತಿನಲ್ಲಿ ರಾಜೀವ್ ಗಾಂಧಿ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಒದಗಿಸಬೇಕು ಮತ್ತು ಅವರಲ್ಲಿರುವ ಆತಂಕವನ್ನು ದೂರ ಮಾಡಿ ಕಾಶ್ಮೀರದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಆದರೂ ಕೂಡ ಸರ್ಕಾರವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರ ಹಿಂದೆ ಹತ್ತು ಹಲವು ಪ್ರಶ್ನೆಗಳು ಹೇಳುತ್ತವೆ. ಆ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ?

  1. ಈ ಘಟನೆಯಲ್ಲಿ ಕಾಂಗ್ರೆಸ್‍ನ ವೈಫಲ್ಯವೇನು? ರಾಜಕೀಯ ಪಾತ್ರವೇನು?
  2. 1990ರಲ್ಲಿ ಉಗ್ರಗಾಮಿಗಳನ್ನು 15,000 ಮುಸ್ಲಿಂರನ್ನು ಕೊಂದಿದ್ದರು. 300 ಹಿಂದೂಗಳನ್ನು ಕೊಂದಿದ್ದರು. ಈ ಮಾರಣ ಹೋಮದಲ್ಲಿ 219 ಕಾಶ್ಮೀರಿ ಪಂಡಿತರ ಹತ್ಯೆಯಾಗಿತ್ತು. ಆದರೆ ಚಿತ್ರದಲ್ಲಿ 4,000 ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ ಎಂದು ತೋರಿಸಲಾಗಿದೆ. ಹಾಗಾದರೆ ಈ ಚಿತ್ರವನ್ನು ಸತ್ಯ ಆಧಾರಿತ ಚಿತ್ರವೆಂದು ಹೇಗೆ ವರ್ಗೀಕರಣ ಮಾಡುವುದು?
  3. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಚಿತ್ರವನ್ನು ಏಕೆ ನಿರಾಕರಿಸುತ್ತಾರೆ?
  4. ರಾಜ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಾಶ್ಮೀರಿ ಪೈಲ್ಸ್ ಸಿನಿಮಾ ನೋಡದವರು ದೇಶ ದ್ರೋಹಿಗಳು ಎಂದು ಹೇಳಿದ್ದಾರೆ. ಇದು ಎಷ್ಟು ಸಮಂಜಸವಾದ ಹೇಳಿಕೆ? ರಾಜಕಾರಣಿಗಳ ನಾಲಿಗೆಗೂ ಮೆದುಳಿಗೂ ಸಂಬಂಧವೇ ಇಲ್ಲವೇ?
  5. ಕನ್ನಡದಲ್ಲಿ ರಾಷ್ರ್ಟೀಯ ಅಂತರರಾಷ್ರ್ಟಿಯ ಪ್ರಶಸ್ತಿ ಪಡೆದ ಅದೆಷ್ಟೋ ಚಿತ್ರಗಳಿದ್ದರೂ ಚಕಾರ ವೆತ್ತದ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಈ ಚಿತ್ರವನ್ನು ತಮ್ಮ ಕ್ಷೇತ್ರದಲ್ಲಿ ತಮ್ಮ ಹಣದಲ್ಲಿ ಉಚಿತವಾಗಿ ತೋರಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ?
  6. ವಿ.ಪಿ.ಸಿಂಗ್ ಸರಕಾರದ ನಂತರ ವಾಜಪೇಯಿಯವರ 5 ವರ್ಷದ ಸಂಪೂರ್ಣ ಸರಕಾರ ನಂತರದ ಮೋದಿಯ 2ನೇ ಅವಧಿಯ ಸರಕಾರ ಏಕೆ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೊಡಲಿಲ್ಲ?
  7. 1947 ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಅದೆಷ್ಟೋ ಹತ್ಯೆಗಳು ನಡೆದಿವೆ. ಆ ಹತ್ಯೆಗಳ ಹಿಂದೆ ಉಗ್ರಗಾಮಿಗಳಿದ್ದರು. ಅವರಿಗೆ ನೆರವಾದರು ಪಾಕಿಸ್ನಾನಿಗಳು ದೇಶದ ಒಳಗೆ ನುಸುಳಲು ನೆರವಾದವರು ಈ ದೇಶದ ರಾಜಕಾಣಿಗಳು ಇಂತಹವರಿಗೆ ಏಕೆ ಶಿಕ್ಷೆ ಆಗಲಿಲ್ಲ.
  8. ಭಯೋತ್ಪಾದಕರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್ ಧರ್ಮ ಜಾತಿ ನೋಡದೆ ಅದೆಷ್ಟೋ ಜನರನ್ನು ಕಾಶ್ಮೀರ್ ಸೇರಿದಂತೆ ದೇಶದಲ್ಲಿ ಕೊಂದಿದ್ದಾರೆ. ಆದರೆ ಪಂಡಿತರು ಮಾತ್ರ ಮನುಷ್ಯರು ಉಳಿದವರು ಮನುಷ್ಯರಲ್ಲವೇ?
  9. ಒಂದು ವಿಜ್ಞಾನದ ಅಧ್ಯಯನದ ಪ್ರಕಾರ ಬ್ರಾಹ್ಮಣರು ಈ ದೇಶದ ಮೂಲ ನಿವಾಸಿಗಳೇ ಅಲ್ಲ ಜೊತೆಗೆ ಇತಿಹಾಸದ ಪ್ರಕಾರವೂ ಕೂಡ ದ್ರಾವಿಡರು ಮೂಲ ನಿವಾಸಿಗಳು. ಆರ್ಯರು ಈ ದೇಶಕ್ಕೆ ನೆಲೆಸಲು ಬಂದು ದ್ರಾವಿಡರನ್ನು ಕೆಳತಳ್ಳಿದ್ದಾರೆ. ಇದರ ಬಗ್ಗೆ ಏಕೆ ಪ್ರಶ್ನೆ ಇಲ್ಲ?
  10. ದೇಶದಲ್ಲಿ ಮಳೆಯಿಂದ ಪ್ರಕೃತಿ ವಿಕೋಪದಿಂದ ಬೇರೆ ದಾಳಿಯಿಂದ ರೋಗರುಜಿನಗಳಿಂದ ಅದೆಷ್ಟೋ ಜನ ಸಾಯುತ್ತಾರೆ. ದಾಳಿಗಳಿಂದ ಅದೆಷ್ಟೋ ಸಮುದಾಯಗಳು ನಶಿಸಿ ಹೋಗಿವೆ. ಸರಕಾರದ ಕೆಲವು ಪ್ರಗತಿ ಯೋಜನೆಗಳು ಕೂಡ ಕೆಲವು ಬುಡಕಟ್ಟು ಜನಾಂಗಗಳನ್ನು ಒಕ್ಕಲು ಎಬ್ಬಿಸಿವೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕಾಶ್ಮೀರಿ ಪಂಡಿತರಿಗೆ ಆದ ಸಮಸ್ಯೆ ದೊಡ್ಡದೇ?
  11. ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಇದು ಸಂಘ ಪರಿವಾರದ ಶಕ್ತಿಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೊಳ್ಳುವ ಜೊತೆಗೆ ಆರ್.ಎಸ್.ಎಸ್. ನ ಗೀತೆ “ನಮಸ್ತೆ ಸದಾ ವತ್ಸಲೇ” ಸಭೀಕರು ಹಾಡುತ್ತಿರುವ ಒಂದು ತುಣುಕನ್ನು ಟ್ಯಾಗ್ ಮಾಡಿದ್ದಾರೆ. ಹಾಗಾದರೆ ದಿ ಕಾಶ್ಮೀರಿ ಪೈಲ್ಸ್ ಆರ್.ಎಸ್.ಎಎಸ್.ನ ಪ್ರಚಾರವೇ? ಹಾಗದರೆ ಆರ್.ಎಸ್.ಎಸ್ ವು ಕೇವಲ ಬ್ರಾಹ್ಮಣರಿಗೆ ಸೀಮಿತವೇ? ಹಿಂದೂ ಸಂಘಟನೆ ಅಲ್ಲವೇ?
  12. ಚಿತ್ರವನ್ನು ಮನೋರಂಜನೆ ಮಾಧ್ಯಮವಾಗಿ ನೋಡಲಿ ಆದರೆ ಸತ್ಯ ಹೇಳುವ ಕಥೆಯೆಂದು ಏಕೆ ಬಿಂಬಿಸಲಾಗುತ್ತಿದೆ?
  13. ಬಿ.ಜೆ.ಪಿ ರಾಜ್ಯ ಸರಕಾರಗಳಲ್ಲಿ ತೆರಿಗೆ ವಿನಾಯಿತಿ ಮಾಡಿರುವುದು ರಾಜ್ಯಂಗದ ಪ್ರಕಾರ ಎಷ್ಟು ಸರಿ?
  14. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇರುವಾಗ ಈ ಚಿತ್ರದ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ಚರ್ಚೆ ಬೇಕೆ?
  15. ಸ್ವಾಮಿ ವಿವೇಕಾನಂದರು ಹೇಳುವಂತೆ “ನಿನ್ನ ಧರ್ಮದ ಉನ್ನತ ವಿಚಾರಗಳನ್ನು ಹೇಳು ಆದರೆ ಬೇರೆ ಧರ್ಮದ ಬಗ್ಗೆ ಟೀಕೆ ಮಾಡಬೇಡ ಈ ವ್ಯಾಖ್ಯಾನವನ್ನು ಈ ದೇಶದ ಬುದ್ದಿ ಜೀವಿಗಳು ಆರ್.ಎಸ್.ಎಸ್. ನವರು ಹಿಂದೂ ರಾಜಕಾಣಿಗಳು ಹಿಂದೂ ಪರ ಸಂಘನೆಗಳು ಪಾಲಿಸುತ್ತಿದ್ದಾರಾ?
    ಹೋಗಲಿ ಬಿಡಿ ಸರ್ವ ಸಾಮಾನ್ಯನಾಗಿ ನಾನು ವಿಚಾರ ಮಾಡುವುದೇನೆಂದರೆ 80% ಹಿಂದೂಗಳು ಸೋತಿರುವುದು ಆತ್ಮ ವಿಮರ್ಶೆಯಿಲ್ಲದೆ. ಒಂದು ದೇಶದಲ್ಲಿ 80% ಇರುವ ಒಂದು ಧರ್ಮ ಒಂದು ಚಿತ್ರಕ್ಕೆ ಸೀಮಿತವಾಗಬೇಕೆ?
    ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಾವು ಸದೃಢ ಎಂದು ತೋರಿಸಿಕೊಳ್ಳಲು ಇಷ್ಟೇಲ್ಲಾ ಪ್ರಯತ್ನ ಬೇಕೆ! ನೂರು ಜನರಲ್ಲಿ 80 ಜನ ಒಂದಾದರೆ ಇನ್ನು 20 ಜನ ಏನು ಮಾಡುತ್ತಾರೆ? ಹಿಂದೂ ಪರ ಸಂಘನೆಗಳು ಮತ್ತು ಬಿ.ಜೆ.ಪಿ ಪಕ್ಷವು ಹಿಂದೂ ಪರ ಎನ್ನುತ್ತಲೇ ಮೇಲ್ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇನ್ನೂ ಕಾಂಗ್ರೆಸ್ ಪಕ್ಷವು ಮುಸ್ಲಿಂ ರು ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ಮೇಲ್ವರ್ಗವನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿವೆ? ಹಿಂದೂಗಳು ಅಂದರೆ ಬ್ರಾಹ್ಮಣರು, ಲಿಂಗಾಯಿತರು ಅಷ್ಟೇ? ದಲಿತರು ಸೇರಿದಂತೆ ಕೆಳವರ್ಗದವರು ಹಿಂದೂಗಳಲ್ಲವೇ? ಇಂತಹ ಅದೆಷ್ಟೋ ತಾರತಮ್ಯ ವಿಚಾರಗಳಿಂದ ಭಾರತದಲ್ಲಿ ಹಿಂದೂಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ? ದಿ ಕಾಶ್ಮೀರಿ ಪೈಲ್ಸ್ ಬದಿಗಿಟ್ಟು ಒಗ್ಗಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಭಾರತವು ವಿಶ್ವ ಗುರು ಆಗುತ್ತದೆ.

Share