ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತೇಶ್ವರ ಧಾರ್ಮಿಕ ದತ್ತಿ ಸಹಯೋಗದಲ್ಲಿ ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ವಿವಿಧ ಶಿಬಿರ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 22 ರಿಂದ 24ರ ವರೆಗೆ ವಿದ್ಯಾರ್ಥಿಗಳಿಗೆ, 25 ರಿಂದ 27 ರವರೆಗೆ ಯುವಕರಿಗೆ ಹಾಗೂ ಮೇ ಒಂದರಿಂದ ಮೂರರವರೆಗೆ ರೈತರಿಗೆ ಶಿಬಿರವನ್ನು ಏರ್ಪಡಿಸಲಾಗಿದೆ ಉಚಿತವಾಗಿ ಪಾಲ್ಗೊಳ್ಳಬಹುದು. ಚಿಂತನ, ಮಂಥನ, ದೇಸಿ ಆಟಗಳು ಮತ್ತು ಸಾಂಸ್ಕೃತಿ ಕಾರ್ಯಕ್ರಮ ಇರುತ್ತವೆ. ಮಾಹಿತಿಗೆ ಮೊಬೈಲ್ ಸಂಖ್ಯೆ 96 866 77 296. ಸಂಪರ್ಕಿಸಬಹುದು.
POST
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಮೈಸೂರು: ದಿನಾಂಕ 19.04.2026ರಂದು ನಡೆಯುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಂಜನಗೂಡಿನಲ್ಲಿ ಸುಮಾರು 34 ಶಿಕ್ಷಕರು ನಾಮಪತ್ರವನ್ನು ಕೊನೆಯ ದಿನವಾದ ಭಾನುವಾರದಂದು ಸಲ್ಲಿಸಿದ್ದಾರೆ. ಚುನಾವಣಾ ಅಧಿಕಾರಿ ಗಳಾಗಿ ಶಿವಲಿಂಗಪ್ಪನವರು ನಿವೃತ್ತ ಉಪನ್ಯಾಸಕರು ಕಾರ್ಯನಿರ್ವಹಿಸಿದ್ದಾರೆ. ಸೋಮವಾರ ನಾಮಪತ್ರಗಳ ಪರಿಶೀಲನ ಕಾರ್ಯ ನಡೆಯಲಾಗುವುದು. ವಾಪಸ್ ಪಡೆಯಲು ಮಂಗಳವಾರ ಕೊನೆಯ ದಿನವಾಗಿದೆ.
ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ
ಮೈಸೂರ್ : ನಂಜನಗೂಡು ಸರಕಾರಿ ಹಿರಿಯ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಇವರ ವತಿಯಿಂದ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ ಪಟ್ಟಣದ ಐದು ಆರು ವಾರ್ಡಿನಲ್ಲಿ ಮುಖ್ಯ ಶಿಕ್ಷಕರಾದ ಲೀಲಾವತಿ ಮತ್ತು ಸಹ ಶಿಕ್ಷಕರು ಹಾಗೂ ಸಹ ಶಿಕ್ಷಕಿಯರಿಂದ ಮತ್ತು ಮಕ್ಕಳಿಂದ ನಡೆಯಿತು. ಎಲ್ಕೆಜಿ ಇಂಗ್ಲಿಷ್ ಮೀಡಿಯಂ ಶಾಲೆಗೆ ದಾಖಲಾತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸರಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ತಿಳಿಯ ಪಡಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಸಿದ್ದಗಂಗಾ ಶ್ರೀಗಳವರ 119 ನೇ ಜನ್ಮ ದಿನಾಚರಣೆ
ಹಾಸನ ನಗರದ ತಣ್ಣೀರುಹಳ್ಳ ಶ್ರೀಮಠದ ಅವರಣದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಸಿದ್ದಗಂಗಾ ಶ್ರೀಗಳವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಣ್ಣೀರುಹಳ್ಳ ಮಠದ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಕೋಶಾಧಿಕಾರಿ ರುದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಅನಂದ್ ಪಟೇಲ್,ಬೇಲೂರು ತಾಲ್ಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಅಮೃತೇಶ್, ಕದಳಿ ಮಹಿಳಾ ವೇದಿಕೆ ಹಿರಿಯರಾದ ಶರಣೆ ಸೌಭಾಗ್ಯ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರು ಶರಣೆ ಕಲ್ಪನಾ ಸಿದ್ದುರಾಜು, ಬೇಲೂರು ಪ್ರಧಾನ ಕಾರ್ಯದರ್ಶಿ ರಾಜಕುಮಾರ, ಖಜಾಂಚಿ ಧನಂಜಯ, ಸಕಲೇಶಪುರ ಕದಳಿ ಮಹಿಳಾ ವೇದಿಕೆ ಮೀನಾಕ್ಷಿ ಖಾದರ್, ಶಾರಧ ಗುರುಮೂರ್ತಿ, ಭಾವನಾ, ಕಲಾವತಿ, ಪೂಜಾ, ರತ್ನಮ್ನ, ಅನ್ನಪೂರ್ಣ ಇನ್ನೂ ಮುಂತಾದವರು ಪೂಜೆಯಲ್ಲಿ ಭಾಗವಹಿಸಿದ್ದರು.
ಶ್ರೀ ಗೌತಮಪಂಚಮಹಾರಥೋತ್ಸವ ಮೆರವಣಿಗೆಯನ್ನು ಶಾಸಕರು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು
ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ಶ್ರೀ ಗೌತಮ ಪಂಚ ಮಹಾರಥೋತ್ಸವ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಪ್ರಾರಂಭವಾದವು ಮೆರವಣಿಗೆನ ಶಾಸಕರು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು . ಗಣೇಶ, ಸುಬ್ರಮಣ್ಯ, ಚಂಡಿಕೇಶ್ವರ, ಪಾರ್ವತಮ್ಮ, ನಂಜುಂಡೇಶ್ವರ ಬೃಹತ್ ಮಹಾ ತೇರುಗಳನ್ನು ರಥ. ಬೀದಿಯಲ್ಲಿ ವಿವಿಧ ತಾಳ ಮದ್ದೆಳೆಗಳ ವಾದ್ಯ ಗೋಷ್ಠಿಯೊಂದಿಗೆ ಸಾಗರೋಪಾದಿಯಲ್ಲಿ ಜನಸ್ತೋಮದ ನಡುವೆ ಜೈಕಾರದ ಮೂಲಕ ಸಾಗಿತು.

ಪೊಲೀಸ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಮೆರವಣಿಗೆ ಶಾಂತವಾಗಿ ಸಾಗಿತು. ಸ್ವಾಮಿಗೆಹೂವು ಹಣ್ಣುಗಳನ್ನು ಮಾರ್ಗಗಳಲ್ಲಿ ಭಕ್ತಾದಿಗಳು ಮೇಲೆ ಎಸೆದರು. ರಥೋತ್ಸವ ದೇವಸ್ಥಾನದಲ್ಲಿ ಕೊನೆಯಾಯಿತು. ಮಾರ್ಗದಲ್ಲಿ ಅನ್ನ ಸಂತರ್ಪಣ ಕಾರ್ಯ ಪಟ್ಟಣದ ಎಲ್ಲಾ ಕಡೆ ನಡೆಯಿತು . ಅಲ್ಲಲ್ಲಿ ಮಜ್ಜಿಗೆ ಪಾನಕ ಸಿಹಿ ವಿತರಣಾ ಕಾರ್ಯಗಳು ನಡೆದವು.
ಕುಂತವ್ನೆ ರಥವ ಏರಿ ರಾಜ ನಂಜುಂಡ
ಸೃಷ್ಟಿಕರ್ತನಾದ ಪರಮೇಶ್ವರ ನಾನಾ ರೂಪದಲ್ಲಿ ಗೋಚರಿಸುತ್ತಾನೆ. ಒಂದು ಹುಲ್ಲು ಕಡ್ಡಿಯು ಅಲುಗಾಡಲು ಶಿವನ ಅನುಮತಿ ಬೇಕು ಎಂಬುದು ಭಕ್ತರ ನಂಬಿಕೆ. ಆದ್ದರಿಂದ ಪ್ರಕೃತಿಯೇ ಮಹದೇವ ಎಂಬ ನಂಬಿಕೆ ರಲ್ಲಿ ಆಳವಾಗಿ ಬೇರೂರಿದೆ. ಪಂಚಮಹಾಭೂತ ಗಳಿಂದ ಈ ಜೀವಲೋಕ ಸೃಷ್ಟಿಯಾಯಿತು ಎಂದು ಮಾತಿದೆ ಸೃಷ್ಟಿ, ಸ್ಥಿತಿ, ಲಯ, ಗಳಿಗೆ ಬ್ರಹ್ಮ, ವಿಷ್ಣು, ಪರಮೇಶ್ವರರು ಕಾರಣ ಎಂಬುದು ನಮಗೆ ತಿಳಿದಿದೆ, ಕವಿ ಕುಲ ಗುರು ಎನಿಸಿಕೊಂಡಿರುವ ಮಹಾಕವಿ ಕಾಳಿದಾಸರು”ಪಾರ್ವತಿ ಪರಮೇಶ್ವರರು” ಜಗತ್ತಿಗೆ ತಂದೆ ತಾಯಿಗಳಾದ ದಂಪತಿಗಳು ಎಂದು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಭಾರತ ಪುಣ್ಯ ಸ್ತನಗಳ ನಾಡು ಎಲ್ಲಿ ಅನೇಕ ದೇವದೇವತೆಗಳ ಆವಾಸಸ್ಥಾನವಾಗಿದೆ. ಮಠ ಮಂದಿರಗಳು ಸ್ಥಾಪಿತವಾಗಿದೆ. ಅವುಗಳಿಗೆ ಅದರದ್ದೇ ಆದ ಇತಿಹಾಸ ಇದೆ, ಇದೇ ರೀತಿ ನಮ್ಮ ಗರಳಪುರಿ ಅಂದರೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಮಂದಿರಕ್ಕೂ ಒಂದು ದಂತಕಥೆ, ಇತಿಹಾಸ ಹಾಗೂ ಸ್ಕಂದ ಪುರಾಣ ಗಳಲ್ಲಿ ಉಲ್ಲೇಖ ವಾಗಿದೆ.
ಒಂದು ಕಾಲದಲ್ಲಿ ಗರುಳಾಪುರಿ ಎಂಬ ಹೆಸರು ಪಡೆದಿದ್ದ, ಈ ನಂಜನಗೂಡಿನ ಕ್ಷೇತ್ರದ ಮಹಿಮೆ ಯನ್ನು ಸೂತರು ಶೌನಕಾದಿ ಮುನಿಗಳಿಗೆ ವಿವರವಾಗಿ ಪುರಾಣ ರೂಪದಲ್ಲಿ ತಿಳಿಸಿದರು. ಸ್ಕಂದ ಪುರಾಣದಲ್ಲಿರುವ ಸಂಸ್ಕೃತ ಸಾಹಿತ್ಯವೇ ಇದರ ಆಧಾರವಾಗಿದೆ. ಕೈಲಾಸ ಅಧಿಪತಿ ಯಾದ ಮಹದೇವ ಶಂಕರನೊಂದಿಗೆ ಆತನ ಅರ್ಧಾಂಗಿನಿ ಯಾದ ಪಾರ್ವತಿ ಮಾತೆಯು ಲೋಕದ ಹಿತಕ್ಕಾಗಿ ಪ್ರಭು ಮಾನವನ ಜೀವನದಲ್ಲಿ ಆವರಿಸಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ ರಾಧಿ ಪ್ರಕಾರದ ವಿಷದ ನಂಜನ್ನು ಪರಿಹರಿಸಿಕೊಳ್ಳಲು ಯಾವುದಾದರೂ ಒಂದು ಪುಣ್ಯಸ್ಥಳ ಭೂಲೋಕದಲ್ಲಿ ಇದೆಯೇ? ಎಂದು ತಾಯಿ ಜಗನ್ಮಾತೆ ಭಗವಾನ್ ಶಂಕರನನ್ನು ಪ್ರಶ್ನೆ ಮಾಡಿದಳು. ಜಗತ್ತಿಗೆ ತಂದೆ ತಾಯಿಗಳು ಶಿವ ಪಾರ್ವತಿ ಯರಿಗೆ ನಡೆದ ಈ ಸಂವಾದ ಕುರಿತು ಶಿವನು ಆ ಪುಣ್ಯ ಸ್ಥಳದ ಉಲ್ಲೇಖ ಇದೆ ಅದೇ “ಗರಳಾಪುರಿ ಮಹಾತ್ಮೆ”ಎಂಬ ಹೆಸರಿನಿಂದ ಸ್ಕಂದ ಪುರಾಣ ಭಾಗದಲ್ಲಿ ನೋಡಬಹುದಾಗಿದೆ. ಗರುಳಪುರಿ ಮಹಾತ್ಮೆಯನ್ನು ಕೈಲಾಸ ಅಧಿಪತಿಯಾದ ಶಂಕರನು ತುಂಬಾ ಸ್ವಾರಸ್ಯಕರವಾಗಿ ಹೀಗೆ ವಿವರಿಸಿದೆನು.
ಒಂದು ಕಾಲದಲ್ಲಿ ದೇವಾ ದಾನವರು ಇಬ್ಬರು ಮಂದಾರ ಪರ್ವತವನ್ನು ಕಡಗೋಲನ್ನಾಗಿ ಮಾಡಿ ಶಿವನ ಕೊರಳ ಹಾರವಾದ ವಾಸುಕಿ ನಾಗನನ್ನು ಅದಕ್ಕೆ ಸುತ್ತಿ ಹಾಕಿ, ಒಂದು ಭಾಗ ದೇವತೆಗಳು ಮತ್ತೊಂದು ಭಾಗ ದಾನವರಿಗೆ ಹೀಗೆ ವಾಸಕಿಯ ಮುಖದ ಭಾಗ ಒಬ್ಬರು ಬಾಲದ ಭಾಗ ಒಬ್ಬರು ಹೀಗೆ ವಿಭಾಗ ಮಾಡಿಕೊಂಡು ಸಮುದ್ರಮಂತನ ಮಾಡಲು ನಿರತರಾದರು. ದೇವ ದಾನವರು ನಡೆಸುತ್ತಿದ್ದ ಈ ಮಂಥನದಿಂದ ಅಮೂಲ್ಯವಾದ ರತ್ನಗಳು ಹೊರಬಂದವು ಅವುಗಳನ್ನು ದೇವ ದಾನವರು ಹಂಚಿಕೊಂಡರು. ಹೀಗೆ ಮಂಥನವನ್ನು ಮುಂದುವರಿಸುತ್ತಾ ಮುಂದುವರಿಸುತ್ತಾ ಕಾರ್ಕೋಟಕ ವಾದ ವಿಷ ಹೊರಬಂದಿತು ಅದರ ಪ್ರಭಾವದಿಂದ ಮೂರು ಲೋಕಗಳು ತಲ್ಲಣಿಸಿ ಹೋದವು. ದೇವತೆಗಳು ರಕ್ಕಸರು ನಡುಗಿ ಹೋದರು. ಆಗ ಲೋಕದ ರಕ್ಷಣೆಗಾಗಿ ದಾವಿಸಿ ಬಂದ ದೇವಾದಿ ದೇಮಹಾದೇವ ಕಾರ್ಕೋಕೋ ವಿಷಯವನ್ನು ತಾನೇ ಕುಡಿದ. ಹೀಗೆ ಕುಡಿಯುವ ಸಂದರ್ಭದಲ್ಲಿ ಈ ವಿಷದ ಕೆಲವು ಹನಿಗಳು ಕೆಳಗಡೆ ಬಿದ್ದವು ಆ ಬಿದ್ದ ಸ್ಥಳವೇ ಗರಳಪುರಿ ಆಗ ಅಲ್ಲಿ ಕೇಶಿ ಎಂಬ ದಾನವ ಆ ವಿಷದ ಹನಿಗಳನ್ನು ತನ್ನ ಬಳಿ ಇಟ್ಟುಕೊಂಡ ವಿಷವನ್ನು ಕುಡಿದ ಶಿವ ನೀಲಕಂಠನಾದ ಹೀಗೆ ಭಗವಾನ್ ಶಿವನು ತ್ರಿಲೋಕವನ್ನ ರಕ್ಷಿಸಿದ ನಂತರ ಸಮುದ್ರ ಮಂಥನ ಮುಂದುವರೆಯಿತು ಸಮುದ್ರ ಮಂಥನದಿಂದ ಅತ್ಯಂತ ಅಮೂಲ್ಯ ವಸ್ತುಗಳು ಹೊರಬಂದವು ಹೀಗೆ ಮಂಥನ ಮುಂದು ವರದಂತೆ ಸಮುದ್ರದ ಆಳದಿಂದ ಧನ್ವಂತರಿ ದೇವ ಅಮೃತದ ಕಳಸದೊಂದಿಗೆ ಕಾಣಿಸಿಕೊಂಡನು. ಆಗ ಅತ್ಯಂತ ಅಮೂಲ್ಯವಾದ ಅಮೃತಕ್ಕಾಗಿ ದೇವಾ ದಾನವರ ನಡುವೆ ಕಲಹ ಗಳು ನಡೆಯಿತು ಆಗ ಭಗವಾನ್ ಮಹಾವಿಷ್ಣು ಮೋಹಿನಿ ಅವತಾರಕ್ಕೆ ಬಂದು ಎಲ್ಲರಿಗೂ ಸರಿಯಾಗಿ ಅಮೃತವನ್ನು ಹಂಚುವುದಾಗಿ ಹೇಳಿ ಮೊದಲು ದೇವತೆಗಳಿಗೆ ಅಮೃತವನ್ನು ಹಂಚುವುದಕ್ಕೆ ಮೋಹಿನಿ ಯು ಆರಂಭಿಸಿದರು ಹೀಗೆ ಅಮೃತವನ್ನು ಹಂಚುವಾಗ ಅಮೃತದ ಒಂದು ಹನಿ ಗರಳ ಪುರಿಗೆ ಬಂದು ಬಿದ್ದಿತು ಆಗ ಗರಳಪುರಿಯಲ್ಲಿ ಇದ್ದ ದಾನವ ಕೇಶಿಗೆ ಆ ಅಮೃತ ಹನಿ ಸಿಕ್ಕಿತು ಮೊದಲು ಸಿಕ್ಕ ವಿಷದ ಹನಿ ಹಾಗೂ ಈಗ ಸಿಕ್ಕ ಅಮೃತದ ಹನಿ ಎರಡು ಸೇರಿ ಪ್ರಾಶನ ಮಾಡಿದನು ಇದರಿಂದ ವಿಷದ ಜೊತೆ ಅಮೃತ ಅವನ ದೇಹ ಸೇರಿತು. ಕೇಶಿ ಇದರಿಂದ ಅಹಂಕಾರದ ಮದ ಅವನ ಮನ ಸೇರಿತು ಇದರಿಂದ ಭೂಲೋಕದಲ್ಲಿ ಋಷಿಮುನಿಗಳಿಗೆ ಉಪಟಳ ಕೊಡಲು ಆರಂಭಿಸಿದರು ಯಜ್ಞ ಯಾಗಾದಿಗಳನ್ನು ದ್ವಂಸ ಮಾಡಲು ಆರಂಭಿಸಿದನು. ಇವನ ಉಪಟಳವನ್ನು ಸಹಿಸಲಾಗದೆ ಅನೇಕ ಋಷಿಮುನಿಗಳು ದೇವತೆ ಗಳಾದ ಬ್ರಹ್ಮ ಮತ್ತು ವಿಷ್ಣು ಪರಮಾತ್ಮರ ಮೊರೆ ಹೊಕ್ಕರು. ಆಗ ಬ್ರಹ್ಮ ಮತ್ತು ವಿಷ್ಣು ಪರಮಾತ್ಮರು ಋಷಿಗಳಿಗೆ ನೀವು ಭೂಲೋಕದಲ್ಲಿ ಗರಳಾಪುರಿಗೆ ಹೋಗಿ ಅಲ್ಲಿ ರುದ್ರದೇವನ ಕುರಿತು ಹೋಮವನ್ನು ಆಚರಿಸಿ ಆಗ ಕೇಶಿ ರಕ್ಕಸ ಯಜ್ಞವನ್ನು ಹಾಳು ಮಾಡಲು ಬರುತ್ತಾನೆ. ಆ ಸಮಯ ದಲ್ಲಿ ಗಂಗಾಧರನು ತನ್ನ ತ್ರಿನೇತ್ರದಿಂದ ಆ ಕೇಶಿ ದೈತ್ಯ ನನ್ನು ಯಜ್ಞ ಕುಂಡಕ್ಕೆ ಆಹುತಿ ಯಾಗುವಂತೆ ಮಾಡುತ್ತಾನೆ ನಿಮಗೆಲ್ಲಾ ಆ ರುದ್ರದೇವ ಅನುಗ್ರಹಿಸುತ್ತಾನೆ ಚಿಂತಿಸದಿರಿ ಮೊದಲು ಯಾಗವನ್ನು ಮಾಡಿ ಎಂದು ವಿಷ್ಣು ಭಗವಂತ ತಿಳಿಸಿದ ಅದೇ ರೀತಿ ಋಷಿಗಳು ಕಪಿಲ ಮತ್ತು ಕೌಂಡಿಣ್ಯ ನದಿಗಳ ದಂಡೆ ಮೇಲೆ ಹೋಮ ಹವನ ಕಾರ್ಯ ಆಯಿತು ಇದನ್ನು ಕಂಡು ಕೇಶಿ ದೈತ್ಯ ಅದನ್ನ ನಾಶ ಮಾಡಲು ಬಂದ ಆಗ ಪ್ರತ್ಯಕ್ಷನಾದ ರುದ್ರದೇವನ ತನ್ನ ತ್ರಿನೇತ್ರದ ಜ್ವಾಲೆಯಿಂದ ಕೆಶಿ ಯನ್ನು ಸಂಹರಿಸಿದನು. ತದನಂತರ ದೇವತೆಗಳು ಋಷಿಮುನಿಗಳ ಕೋರಿಕೆಯ ವಿನಂತಿಯ ಮೇರೆಗೆ ಭಗವಾನ್ ಶಂಕರ ತಾನು ಗರಳ ಪುರಿ ಎಲ್ಲೇ ನೆಲೆಯಾಗಿ ನಿಲ್ಲುವುದಾಗಿ ಅಭಯ ವನ್ನು ನೀಡಿ ನೆಲೆ ನಿಂತನು ಶಿವನು ನೆಲೆ ನಿಂತ ಸ್ಥಳ ವೇ ಗರುಳಪುರಿ ಎಂದು ಪ್ರಸಿದ್ಧಿಯಾಯಿತು. ಗರಳ ಪುರಿ ಮಹಾತ್ಮೆಯ ಕಥೆಯನ್ನು ತಿಳಿದ ನಂತರ ಪಾರ್ವತಿಯ ಪ್ರಭುವೇ ತಾವು ಕೃಪೆ ಮಾಡಿ ಕಪಿಲ ಹಾಗೂ ಕೌಂಡಿಣ್ಯ ನದಿಗಳ ವಿಚಾರ ತಿಳಿಸಿ ಎಂದು ಕೇಳಿದಾಗ ಭಗವಾನ್ ಶಂಕರನು ಹೀಗೆ ತಿಳಿಸಿದರು ಮಹಾಮುನಿ ಗಳಾದ ಕಪಿಲ ಮಹಾ ಋಷಿಗಳು ತಪಸನ್ನು ಆಚರಿಸುವಾಗ ಅನೇಕ ಅಡೆತಡೆಗಳು ಉಂಟಾದ್ದರಿಂದ ಅವರು ದಕ್ಷಿಣ ಪ್ರದೇಶಕ್ಕೆ ಬಂದು ನೀಲಾಚಲ ವೆಂಬ ಸ್ಥಳದಲ್ಲಿ ಒಂದು ಆಶ್ರಮ ನಿರ್ಮಿಸಿ ತಪೋನಿರತರಾದರು ಅವರ ಕಠೋರ ತಪಸ್ಸನ್ನು ಮೆಚ್ಚಿದ ಶಿವನು ಕಪಿಲ ಮಹಾ ಋಷಿಗೆ ಒಂದು ಆಶೀರ್ವಾದ ನೀಡಿದರು ಏನೆಂದರೆ ಕಪಿಲ ಮಹಾ ಮುನಿಗಳೇ ನಿಮ್ಮ ಬ್ರಹ್ಮ ರಂಧ್ರ ಅಂದರೆ ತಲೆಯ ನೆತ್ತಿ ಯ ಮೇಲ್ಬಾಗದಿಂದ ತಪೋಶಕ್ತಿ ನದಿಯ ರೂಪದಲ್ಲಿ ಧಾರಾಕಾರವಾಗಿ ಹರಿಯಲಿ ಎಂದು ಆಶೀರ್ವದಿಸಿದರು. ನಿಮ್ಮ ಕಪಿಲ ನದಿ ಎಲ್ಲಿ ಯಾರು ಸ್ನಾನವನ್ನು ಮಾಡಿ ನನ್ನ ದರ್ಶನ ಪಡೆಯಲು ಬರುತ್ತಾರೋ ಅವರಿಗೆ ಕೈಲಾಸ ಲೋಕ ದಯಪಾಲಿಸುವೆ ಎಂದು ವರ ಪ್ರಧಾನ ಮಾಡಿದರು. ಅಂದಿನಿಂದ ಕಪಿಲಾ ನದಿ ಈ ಸ್ಥಳದಲ್ಲಿ ಹರಿಯುತ್ತಿದೆ. ಇದು ಕಪಿಲಾ ನದಿಯ ಕಥೆಯಾದರೆ ಕೌಂಡಿಣ್ಯ ನದಿಯ ಬಗ್ಗೆ ತಿಳಿಸಿ ಎಂದು ಶ್ರೀಮಾತೆ ಯು ಪ್ರಭು ಶಂಕರನಲ್ಲಿ ಕೇಳಿದಳು ಆಗ ಶಂಕರನ್ನು ಒಂದು ಕಾಲದಲ್ಲಿ ಕೌಂಡಿಣ್ಯ ಮುನಿ ತಮ್ಮ ಪತ್ನಿ ಸುಶೀಲೆ ಯೊಂದಿಗೆ ಸುಖ ವಾಗಿದ್ದರು ದಂಪತಿಗಳು ಧರ್ಮ ಶ್ರದ್ಧೆ ಭಕ್ತಿಯಿಂದ ಜೀವನ ಸಾಗಿಸುತ್ತಿದ್ದರು. ಕೌಂಡಿಣ್ಯ ದಂಪತಿಗಳು ಮಾಡಿದ ಒಂದು ಸಣ್ಣ ತಪ್ಪಿನಿಂದ ಅವರ ಆಶ್ರಮದಲ್ಲಿ ಕಳ್ಳ ಕಾಕರು ಆಶ್ರಮವನ್ನು ಸಂಪೂರ್ಣವಾಗಿ ದೋಚಿದರು ಹಾಗೂ ಗೋಸ ಸಂಪತ್ತು ನಾಶವಾಯಿತು. ದಂಪತಿಗಳಿಬ್ಬರು ನಿರ್ಗತಿಕರಾದರು ತಾವು ಮಾಡಿದ ಪಾಪ ನಿವಾರಣೆಗಾಗಿ ತೀರ್ಥಕ್ಷೇತ್ರಗಳನ್ನು ಸುತ್ತಿದರು ಹೀಗೆ ನೊಂದ ದಂಪತಿಗಳ ಸ್ವಪ್ನದಲ್ಲಿ ಬಂದ ಭಗವಾನ್ ಶಂಕರನು ನೀವಿಬ್ಬರು ಗೋವರ್ಧನ ಪರ್ವತ ದಲ್ಲಿ ವಾಸಿಸಿ ತಪವನ್ನು ಆಚರಿಸಿ ಒಂದು ಪರ್ವಕಾಲದಲ್ಲಿ ಭಕ್ತಿಯಿಂದ ಅನಂತಪದ್ಮನಾಭ ವ್ರತವನ್ನು ಆಚರಿಸಿ ಇದರಿಂದ ನಿಮ್ಮ ಪಾಪ ನಾಶವಾಗುವುದು ನಂತರ ನೀವು ನದಿಯಾಗಿ ತೊರೆಯಾಗಿ ಹರಿದು ಕೌಂಡಿಣ್ಯ ನದಿಯಾಗಿ ಲೋಕ ಪ್ರಸಿದ್ಧಿ ಆಗುವಿರಿ ನದಿಯಾಗಿ ಹರಿಯುತ್ತಾ ಕಪಿಲ ನದಿಯನ್ನು ಸೇರುವಿರಿ ನೀವು ಹರಿಯುವ ಸ್ಥಳದ ಸಮೀಪದಲ್ಲೇ ನಾನು ಸ್ಥಾಪಿತನಾಗಿರುವೆ ಎಂದು ಆ ದಂಪತಿಗಳಿಗೆ ಭಗವಾನ್ ಶಂಕರನ್ನು ವರವನ್ನು ಕೊಟ್ಟನು.

ಭಗವಾನ್ ಪರಶುರಾಮರು ಮಾತೃ ಹತ್ಯೆ ದೋಷ ಪರಿಹಾರಕ್ಕಾಗಿ ಎಲ್ಲಾ ತೀರ್ಥಕ್ಷೇತ್ರಗಳಿಗೂ ಭೇಟಿ ಕೊಟ್ಟರು ಆದರೆ ಅವರ ಮಾತೃ ಹತ್ಯ ದೋಷ ಪರಿಹಾರ ವಾಗಿದ್ದು ಈ ಗರಳ ಪುರಿ ಕ್ಷೇತ್ರದಲ್ಲೇ ಆದರಿಂದ ಇದನ್ನು ಪರಶುರಾಮ ಕ್ಷೇತ್ರ ಎಂತಲೂ ಕರೆಯಲಾಗುತ್ತದೆ. ದೇವೇಂದ್ರ ನಿಗೂ ಹಾಗೂ ಅಹಲ್ಯಗೂ ಗೌತಮ ಋಷಿಗಳು ಶಾಪವನ್ನು ಕೊಟ್ಟರು. ಇದರಿಂದ ದಿಕ್ಕು ಕಾಣದೆ ಇಂದ್ರನು ಗರುಳ ಪುರಿ ಬಂದು ಕಪಿಲಾ ನದಿಯಲ್ಲಿ ಮಿಂದು ನಂಜುಂಡೇಶ್ವರನ ದರ್ಶನವನ್ನ ಮಾಡಿ ಭಕ್ತಿಯಿಂದ ಬೇಡಿದರು ಇದರ ಫಲವಾಗಿ ಇಂದ್ರನ ಶಾಪ ವಿಮೋಚನೆ ಆಯಿತು. ಮಹಾಮನಿ ಗೌತಮರು ಈ ಕ್ಷೇತ್ರಕ್ಕೆ ಬಂದು ಕಠಿಣ ದೀರ್ಘ ತಪಸ್ಸನ್ನು ಆಚರಿಸಿ ಶಿವನ ಕೃಪೆಗೆ ಪಾತ್ರರಾಗಿ ಶಿವನನ್ನು ಪ್ರಸನ್ನ ಗೊಳಿ ಸಿದರು ಪ್ರತ್ಯಕ್ಷನಾದ ಪರಮಾತ್ಮನು ಗೌತಮರನ್ನು ಆಶೀರ್ವದಿಸಿ ಈ ಕ್ಷೇತ್ರ ಗೌತಮ ಕ್ಷೇತ್ರ ಎಂದು ಹೆಸರಾಗಲಿ ಎಂದು ವರ ನೀಡಿದರು ಗೌತಮರು ಪರಶುರಾಮರು ನಿರ್ಮಿಸಿದ್ದ ನಂಜುಂಡೇಶ್ವರ ಗುಡಿ ಯನ್ನು ವಿಸ್ತರಿಸಿ ಅಂದಿನಿಂದ ಗೌತಮ ಮುನಿಗಳು ರಥೋತ್ಸವವನ್ನು ಏರ್ಪಾಡು ಮಾಡಿದರು ಅವರು ಪ್ರಾರಂಭಿಸಿದ ರಥೋತ್ಸವ ಪ್ರತಿ ವರ್ಷ ಈಗಲೂ ಕೂಡ ಗೌತಮರ ಹೆಸರಿನಿಂದ ಪಂಚ ರಥೋತ್ಸವ ನಡೆಯುತ್ತಿದೆ ರಥದಲ್ಲಿ ಕೂರಿಸುವ ಉತ್ಸವ ನಂಜುಂಡೇಶ್ವರನ ಮೂರ್ತಿಯು ಗೌತಮ ಋಷಿಗಳ ಕಾಲದಿಂದ ಪೂಜಿತ ವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ನಂಜುಂಡೇಶ್ವರನ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ ರಥದಲ್ಲಿ ಕೂತು ಬರುವ ನಂಜುಂಡೇಶ್ವರ ನನ್ನು ಕಣ್ಣಲ್ಲಿ ನೋಡುತ್ತಾ. ಕುಂತವ್ನೆ ರಥಾವ ಏರಿ ದೇವ ನಂಜುಂಡ ಎಂದು ಬಾಯಲ್ಲಿ ಹಾಡುತ್ತಾ ಮನಸಲ್ಲಿ ಆ ಶ್ರೀಕಂಠೇಶ್ವರ ನಂಜುಂಡೇಶ್ವರನನ್ನು ನಮಸ್ಕರಿಸೋಣ
ಸುನಿಲ್ ಕುಮಾರ ಎಸ್.ಲೇಖಕರು ಮತ್ತು ಶಿಕ್ಷಕರು.ನಂಜನಗೂಡು
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಕರಿಗಾಗಿ ಶಿಬಿರ
ಮೈಸೂರು: ಸುತ್ತೂರು ಶ್ರೀ ಮಠ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತೇಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತ ಶ್ರೇಯ ದಲ್ಲಿ ಏಪ್ರಿಲ್ 4 ರಿಂದ 6 ರವರೆಗೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಕರಿಗಾಗಿ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ರಾಜ್ಯದ ಎಲ್ಲಾ ಶಿಕ್ಷಕರುಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದಲ್ಲಿ ಸಾಮೂಹಿಕ ಪ್ರಾರ್ಥನೆ ಯೋಗ, ವಿಶೇಷ ಉಪನ್ಯಾಸ, ಚಿಂತನ, ಮಂಥನ, ದೇಸಿ ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವ ಶಿವರಾತ್ರಿಗಳು ಶಿಬಿರದ ಸಂಚಾಲಕರಾದ ಎಚ್ಎಸ್ ನಾಗರಾಜು 95 91 57 79 57, ಎಸ್ಎನ್ ನಾಗೇಂದ್ರ ಪ್ರಸಾದ್ . 96 11 55 21 44, ಎನ್ ರಮೇಶ್ 83 10 92 75 15, ಶ್ರೀಮತಿ ಸೌಮ್ಯ 99 80 07 60 66 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
28ಕ್ಕೆ ಕೊರವಾರ ಮುಖ್ಯಪ್ರಾಣ ದೇವರ ಜಾತ್ರಾ ಮಹೋತ್ಸವ.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆಗಳನ್ನು ದೇವಸ್ಥಾನದ ಸಮಿತಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಜಾತ್ರೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ ಗೋವಾ ಆಂಧ್ರ ಪ್ರದೇಶ್ ತಮಿಳುನಾಡು ಹಲವಾರು ರಾಜ್ಯಗಳಿಂದ ಆಗಮಿಸುತ್ತಿದ್ದು ಪ್ರತಿ ವರ್ಷದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಕಲ ಭಕ್ತಾದಿಗಳು ಜಾತ್ರಾ ಆಗಮಿಸಿ ಪ್ರಾಣದೇವರಾಯ ಕೃಪೆ ಪಾತ್ರರಾಗಬೇಕೆಂದು ದೇವಸ್ಥಾನದ ಅರ್ಚಕರಾದ ವಾದಿರಾಜ್ ಮತ್ತು ದೇವಸ್ಥಾನದ ಪೂಜಾರಿಕ ಬಳಗದವರು ತಿಳಿಸಿದರು
(NRG) ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್ ಪೋಸ್ಟರ್ ಬಿಡುಗಡೆ
ಸುರಪುರ ತಾಲೂಕಿನ ಮಾಜಿ ಸಚಿವರಾದ ಕಾರ್ಯಾಲಯದಲ್ಲಿ ನಮ್ಮ ಜನ ನಮ್ಮ ಕ್ಷೇತ್ರ (NRG) ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್ 2026ರ ಪೋಸ್ಟರನ್ನು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ರಾಜಾ ಹನಮಪ್ಪ ನಾಯಕ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು.
ಸುರಪುರ ತಾಲೂಕಿನ ಸುರಪುರ ಮತಕ್ಷೇತ್ರದ ಕ್ರಿಕೆಟ್ ಪಟುಗಳು ಮಾತ್ರಪಾಲ್ಗೊಳ್ಳಬಹುದು.
18 ವರ್ಷ ಒಳಗಿನ ಕ್ರೀಡಾಪಟುಗಳಿಗೆ ಆಡಲು ಅವಕಾಶವನ್ನು ನೀಡಿದ್ದು ಆಟಗಾರ ಒಂದು ತಂಡದಲ್ಲಿ ಮಾತ್ರ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುತ್ತದೆ.
ಈ ಕಾರ್ಯಕ್ರಮದಲ್ಲಿ ಶಂಕರ್ ನಾಯಕ್ ಬಲಭೀಮ್ ನಾಯಕ್ ಬೈರಿಮಡ್ಡಿ ರಾಜ ಜಯರಾಮ ನಾಯಕ್ ಭೀಮಣ್ಣ ಬೇವಿನಾಳ ವೆಂಕಟೇಶ್ ನಾಯಕ್ ಬೈರಿಮಡ್ಡಿ ಪ್ರವೀಣ್ ನಾಯಕ್ ಈಶ್ವರ್ ನಾಯಕ್ ದರ್ಶನ್ ಶ್ರೀನಿವಾಸ್ ದರ್ಬಾರಿ ರಾಜ ವಿಜಯ ವರ್ಧನ್ ನಾಯಕ್ ನಾಗರಾಜ್ ನಾಯಕ್ ತಾತನ ರಾಜ ಹರ್ಷವರ್ಧನ್ ನಾಯಕ್ ದತ್ತಾತ್ರೇಯ ಗುತ್ತೇದಾರ್ ಬಲಭೀಮ ನಾಯಕ್ ದೇವಪುರ್ ರಾಜುಗೌಡ ಅಭಿಮಾನಿ ಬಳಗ ಉಪಸ್ಥಿತರಿದ್ದರು.
ಸಿದ್ದರಾಮ ಬೇವಿನಮಟ್ಟಿ
ಎಂಐಟಿ ಕಾಲೇಜಿನಲ್ಲಿ ಮಾರ್ಚ್ 23ರಿಂದ ಎರಡು ವಾರಗಳ ಕಾಲ ಉಚಿತ ಸಿಇಟಿ ತರಬೇತಿ
ಮೈಸೂರು: ನಂಜನಗೂಡು ದೇಶದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ನಂಜನಗೂಡು ತಾಂಡುಪುರ ಎಂಐಟಿ ಕಾಲೇಜಿನಲ್ಲಿ ಮಾರ್ಚ್ 23ರಿಂದ ಎರಡು ವಾರಗಳ ಕಾಲ ಉಚಿತ ಸಿಇಟಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಎಂದು ಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವೈ ಟಿ ಕೃಷ್ಣೇಗೌಡ ತಿಳಿಸಿದರು. ಕನಸಿನ ಭಾರತ ಪತ್ರಿಕೆಯೊಂದಿಗೆ ಮಾತನಾಡಿದ ಅವರು ನಂಜನಗೂಡಿನ ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 23 ರಿಂದ ತರಬೇತಿ ಶಿಬಿರ ಆರಂಭವಾಗಲಿದೆ. ಶಿಬಿರದಲ್ಲಿ ಅನುಭವವೇ ನುರಿ ಉಪನ್ಯಾಸಕರಗಳು ಹಾಗೂ ಸರಕಾರಿ ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ನರಸೀಪುರ ಎಚ್ ಡಿ ಕೋಟೆ ಗುಂಡ್ಲುಪೇಟೆ ಕೆ ಆರ್ ನಗರ ಕೆಆರ್ ಪೇಟೆ, ಹುಣಸೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಶಿಬಿರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ಕಲಿಕೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ರಚನಾತ್ಮಕ ಮತ್ತು ಪ್ರಯೋಜನಕಾರಿ ಅಧ್ಯಯನ ಸಾಮಗ್ರಿ ಒದಗಿಸುವ ಕಾರಣಕ್ಕೆ 999 ರೂ ನೊಂದಣಿ ಶುಲ್ಕವನ್ನು ನಿಗದಿ ಮಾಡಲಾಗಿದೆ ಇದರ ಹೆಚ್ಚಿನ ಮಾಹಿತಿಗಾಗಿ ಮಹಮದ್ ಸಲಾಮತ್, ಪ್ರದೀಪ್9980832371 ಮತ್ತು8310854887, ಇವರನ್ನು ಸಂಪರ್ಕಿಸಬಹುದು ಎಂದು ಎಂಐಟಿ ಪ್ರಾಂಶುಪಾಲರು ಕನಸಿನ ಭಾರತ ಪತ್ರಿಕೆಯ ಮೂಲಕ ಕೋರಿದ್ದಾರೆ
