ಎಚ್.ಡಿ.ಕೋಟೆ ಅಪ್ರಾಪ್ತ ಬಾಲಕಿಯ ಮೇಲೆ ಅರವತ್ತೈದರ ಅಯೋವೃದ್ದನಿಂದ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ. ಹೆಚ್.ಡಿ.ಕೋಟೆಲ್ಲಿ
ಮರಿಗೌಡ (65)ಅಪ್ರಾಪ್ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ.ಪೋಷಕರು ಮನೆಯಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ಬಾಲಕಿ ಪುಸಲಾಯಿಸಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.ಘಟನೆ ಬಳಿಕ ಖಿನ್ನತೆಗೆ ಒಳಗಾಗಿದ್ದ ಬಾಲಕಿಯಿಂದ ಪೋಷಕರಯ ತಡವಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಎಚ್.ಡಿ.ಕೋಟೆ ತಾಲೋಕಿನ ಹಂಪಾಪುರ ಗ್ರಾಮದಲ್ಲಿ ಏ. 11ರಂದು ಘಟನೆ ನಡೆದಿದೆ ಎನ್ನಲಾಗಿದೆ. ಎಚ್.ಡಿ.ಕೋಟೆ ಪೊಲೀಸರಿಗೆ ಏಪ್ರಿಲ್ 18ರಂದು ಬಾಲಕಿ ತಾಯಿ ದೂರು ನೀಡಿದ್ದಾರೆ. ಆರೋಪಿಯನ್ನ ಬಂಧಿಸಲಾಗಿದೆ…
POST
ಹುತಾತ್ಮರ ಸ್ಮರಣೆ ನಮ್ಮ ಕರ್ತವ್ಯದಲ್ಲಿ ಒಂದು- ವಿಭಾಗೀಯ ಮುಖ್ಯಾಧಿಕಾರಿ ಪಿ. ಎಸ್. ಜಯರಾಮ್
ಅರಸೀಕೆರೆ: ಸಾರ್ವಜನಿಕರ ಆಸ್ತಿ ಮತ್ತು ಪ್ರಾಣವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ಮರಣೆ ಮಾಡುವುದು ನಮ್ಮಗಳ ಕರ್ತವ್ಯದಲ್ಲಿ ಅದು ಒಂದು ಭಾಗವಾಗಿದೆ. ಎಂದು ಮೈಸೂರು ಪ್ರಾಂತೀಯ ಅಗ್ನಿಶಾಮಕ ಮುಖ್ಯ ಅಧಿಕಾರಿ ಪಿ.ಎಸ್ ಜಯರಾಮ್ ಅಭಿಪ್ರಾಯ ಪಟ್ಟರು.
ಅವರು ನಗರದ ಅಗ್ನಿಶಾಮಕ ಠಾಣಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹುತಾತ್ಮರ ಸ್ಮಾರಕ ಸ್ತಂಭವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿಯ ಠಾಣೆಯ ಆವರಣದ ವಾತಾವರಣ ಮತ್ತು ಈ ಸ್ತಂಭ ಇವೆಲ್ಲವೂ ನಮ್ಮ ವಿಭಾಗ ಕಚೇರಿಯಂತೆಯೇ ಇದೆ. ಬಹಳ ಉತ್ತಮವಾಗಿ ನಿರ್ವಹಣೆ ಮಾಡಿದ್ದೀರಿ, ಹೆಚ್ಚಿನ ಪರಿಶ್ರಮವನ್ನು ಹಾಕಿದ್ದೀರಿ, ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇದಕ್ಕೆ ಕಾರಣರಾದವರನ್ನು ಅಭಿನಂದಿಸಲು ವಿವರಗಳನ್ನು ಕಳಿಸಿಕೊಡಿ, ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಿ, ನಾನು 14 ರಂದೆ ಬರಬೇಕಿತ್ತು ಕೆಲ ಕಾರ್ಯ ಒತ್ತಡದಲ್ಲಿ ಸಾಧ್ಯವಾಗಲಿಲ್ಲ ಎಂದರು
ಇಲ್ಲಿನ ಠಾಣ ಆವರಣಕ್ಕೆ ಕಾಂಪೌಂಡಿನ ಅಗತ್ಯವಿತ್ತು ಅದಕ್ಕಾಗಿಯೂ ನಾವು ಪ್ರಸ್ತಾವನೆ ನೀಡಿದ್ದೆವು ಆದರೆ ಅನುದಾನದ ಕೊರತೆಯಿಂದ ಸಾಧ್ಯವಾಗಲಿಲ್ಲ, ತಾತ್ಕಾಲಿಕವಾಗಿ ಭದ್ರಪಡಿಸಿಕೊಂಡಿದ್ದೀರಿ, ಉತ್ತಮವಾಗಿ ನಿರ್ವಹಿಸಿದ್ದೀರಿ ಎಂದರು.
ಹುತಾತ್ಮರ ಸ್ಮಾರಕ ಸ್ಥoಭ ನಿರ್ಮಾಣ ಒಳ್ಳೆಯ ಪರಿಕಲ್ಪನೆ ಬಹಳ ಅಚ್ಚುಕಟ್ಟಾಗಿ ತಾಂತ್ರಿಕವಾಗಿ ಕೌಶಲ್ಯದಿಂದ ಕೂಡಿದೆ ನಿಜಕ್ಕೂ ಇದು ನನಗೆ ಸಂತೋಷ ತಂದಿತು ಎಂದ ಅವರು ಠಾಣಾ ಆವರಣದೊಳಗಿನ ಬಾಳೆ, ಹಲಸು, ಅಡಿಕೆ, ತೆಂಗು, ಪರಿಸರವನ್ನು ಅವಲೋಕಿಸಿ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ. ಪಿ. ನವೀನ್ ಕುಮಾರ್ ಕಳೆದ 14 ರಿಂದ ಇದೇ 20ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ ಜಿಲ್ಲೆಯಾದ್ಯಂತ ನಡೆಯುತ್ತಿದೆ, ಇದೇ ಸಂದರ್ಭದಲ್ಲಿ ಹುತಾತ್ಮರ ಸ್ಮಾರಕ ಸ್ತಂಭ ಉದ್ಘಾಟನೆ ಆಗಿರುವುದು ಸಂತೋಷದ ಸಂಗತಿ, ಇದಕ್ಕಾಗಿ ಪರಿಶ್ರಮ ಪಟ್ಟಿದ್ದೀರಿ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ, ನಿಮ್ಮ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ, ಇದೇ ಉತ್ಸಾಹದಿಂದ ಕಾರ್ಯನಿರ್ವಹಿಸಿ ಎಂದು ಆಶಿಸಿದರು.
ಅರಸೀಕೆರೆ ಠಾಣಾಧಿಕಾರಿ ಕೆ ಎಂ ಪುಟ್ಟಮಲ್ಲೇಗೌಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ನಮ್ಮ ಸಿಬ್ಬಂದಿಗಳ ಸಹಕಾರದಿಂದ ಇಲ್ಲಿನ ಅಭಿವೃದ್ಧಿ ಕೆಲಸಕ್ಕೆ ಕಾರಣವಾಗಿದೆ. ಎಂದರು
ಕಾರ್ಯಕ್ರಮಕ್ಕೆ ಮುನ್ನ ಗಣ್ಯರು ಹುತಾತ್ಮರ ಸ್ಮಾರಕ ಸ್ತಂಭ ಉದ್ಘಾಟಿಸಿ ಪುಷ್ಪ ನಮನ ಸಲ್ಲಿಸಿದರು. ವರದಿ ಪರ್ವಿಜ್ ಅಹಮದ್ ಅರಸೀಕೆರೆ
ಸುರಪುರದಲ್ಲಿ 22ರಂದು ರಾಮ್ ಸೇನಾ ವತಿಯಿಂದ ಹನುಮ ಜಯಂತಿ ಉತ್ಸವ
ಸುರಪೂರ:: ರಾಮ ನವಮಿ ಹಾಗೂ ಹನುಮ ಜಯಂತಿ ಪ್ರಯುಕ್ತ ದಿನಾಂಕ 22- 4 -2025 ರಂದು ಸುರಪುರ ಪಟ್ಟಣದಲ್ಲಿ ಹನುಮಾನ್ ಮೂರ್ತಿಯ ಹಾಗೂ ಶ್ರೀ ಪ್ರಭು ರಾಮ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದು ರಾಮ್ ಸೇನೆಯ ಜಿಲ್ಲಾ ಅಧ್ಯಕ್ಷರಾದ ಶರಣು ನಾಯಕ್ ದೊಣ್ಣೆಗೇರಿ.
ಸುರಪುರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿತ್ತಿ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.
ಇದೇ 22ನೇ ತಾರೀಖರಂದು ಸುರಪುರ ಪಟ್ಟಣದಲ್ಲಿ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿಯ ಪ್ರಯುಕ್ತ ಮಧ್ಯಾಹ್ನ 1:00 ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ಗಾಂಧಿ ವೃತ ಮಾರ್ಗವಾಗಿ ದರ್ಬಾರ್ ರಸ್ತೆಯ ಮಾರ್ಗವಾಗಿ ವಲ್ಲಾಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಪುನಃ ಶ್ರೀ ವೇಣುಗೋಪಾಲ ದೇವಸ್ಥಾನದವರೆಗೆ ಶ್ರೀ ಹನುಮ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಗುವುದು ಇಂದು ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದು ತಾವುಗಳು ಎಲ್ಲಾ ಹಿಂದೂ ಧರ್ಮದವರು ಒಗ್ಗಟ್ಟಾಗಿ ಭಾರತದ ಸಂಸ್ಕೃತಿಯ ಹಿಂದೂ ಧರ್ಮದ ರಕ್ಷಣೆ ಗೋಸ್ಕರ ಒಗ್ಗಟ್ಟಾಗಿ ಎಂದು ಶರಣು ನಾಯಕ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಮ್ ಸೇನಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ರವರು ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ರಾಮ್ ಸೇನೆಯ ಸಂಘಟನೆಯ ಸದಸ್ಯರು. ಸುರಪೂರು ಶಹಾಪುರ ಯಾದಗಿರಿ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷರಾದ ಲೋಕೇಶ್ ನಾಯಕ್,ಸಂಘದ ಗೌರವಾಧ್ಯಕ್ಷರಾದ ಪ್ರಮೋದ್ ಜೋಶಿ, ಅಕ್ಷಯವಗ್ಮೊಡೆ, ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ತಹಶಿಲ್ದಾರ್ ಡಾ.ಪ್ರತಿಭಾ ಅವರಿಂದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಶೀಲನೆ
ಉಡುಪಿ:ಕಾಪು ತಾಲೂಕ ತಹಶಿಲ್ದಾರ್ ಡಾ.ಪ್ರತಿಭಾ ರವರಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಕುರಿತು DC ಯವರಿಗೆ ವರದಿ ಸಲ್ಲಿಕೆ
ಇಂದು ಕಾಪುವಿನ ರಾಷ್ಟ್ರೀಯ ಹೆದ್ದಾರಿ NH 66 ನ ಉದ್ದಕ್ಕೂ ಸಂಚರಿಸಿ ಕಟಪಾಡಿಯಿಂದ ಹೆಜಮಾಡಿಯವರೆಗೆ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಪರಿಶೀಲನೆ ನಡೆಸಿ ಮಳೆಗಾಲಕ್ಕೆ ಪೂರ್ವಸಿದ್ಧತೆ ನಡೆಸಿದ್ದಾರೆ.
ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಇತ್ಯಾದಿ ಜಾಗಗಳಿಗೆ ಭೇಟಿ ನೀಡಿ ಅಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಇರಲು ಕಾರಣಗಳನ್ನು ಪಟ್ಟಿ ಮಾಡಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.
ಕಟಪಾಡಿ:
ಕಟಪಾಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ, ತಹಶಿಲ್ದಾರ್ ರವರಿಗೆ ಸಾತ್ ನೀಡಿ ಹೆದ್ದಾರಿ ಸಮಸ್ಯೆಯ ಬಗ್ಗೆ ವಿವರ ನೀಡಿದರು. ಸ್ಥಳೀಯರು ಸಹ ಬಂದು ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿರುವುದರ ಬಗ್ಗೆ ಅಳಲು ತೋಡಿಕೊಂಡರು.
ಗ್ರಾಮಾಡಳಿತಾಧಿಕಾರಿ ಡೇನಿಯಲ್ ಕಳೆದ ಬಾರಿ ನೆರೆ ರಕ್ಷಣೆಗೆ ಪಾಡುಬಿದ್ದುದನ್ನು ನೆನಪಿಸಿಕೊಂಡು ಮತ್ತೆ ಅದು ಮರುಕಳಿಸದಂತೆ ವ್ಯವಸ್ಥೆ ಆಗಬೇಕು ಎಂದರು.
ಕಟಪಾಡಿ ಸಮೀಪದ ಉದ್ಯಾವರ ಬ್ರಿಡ್ಜ್ ಕೆಳಗಡೆಯಿಂದ ಹೋಗುವ ಒಳಚರಂಡಿ ಇದ್ದು ಅದರಲ್ಲಿ ಸರಾಗವಾಗಿ ನೀರು ಹರಿದು ಹೋಗುವುದಿಲ್ಲ.
ಪರಿಹಾರ:
ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಇದ್ದು ಚರಂಡಿಯ ಇಕ್ಕೆಲಗಳಲ್ಲಿ ಇರುವ ಹುಲ್ಲು ಮತ್ತು ಒಳಚರಂಡಿಯಲ್ಲಿ ಮಣ್ಣು ತುಂಬಿರುತ್ತದೆ ಸದ್ರಿ ಒಳಚರಂಡಿಯನ್ನು ಸ್ವಚ್ಛಗೊಳಿಸಿದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತದೆ
ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಜಂಕ್ಷನ್ ನಿಂದ ಸುಮಾರು 2 km ಒಳಚರಂಡಿ ನಿರ್ಮಿಸಿದ್ದು ಸರ್ವಿಸ್ ರಸ್ತೆ ಮುಕ್ತಾಯವಾಗುವಲ್ಲಿ ಒಳಚರಂಡಿ ಕಾಮಗಾರಿಯನ್ನು ನಿಲ್ಲಿಸಿರುತ್ತಾರೆ. ನೀರು ಮುಂದಕ್ಕೆ ಹರಿದುಹೋಗಲು ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಮಳೆಗಾಲದ ನೀರು ಒಂದೇ ಕಡೆ ಶೇಖರಣೆಯಾಗಿದ್ದು ಅಲ್ಲಿರುವ ವಾಸ್ತವ್ಯದ ಮನೆಗಳಿಗೆ ನೆರೆಹಾನಿಯಾಗಿರುತ್ತದೆ ಪರಿಹಾರ ಕಟಪಾಡಿ ಜಂಕ್ಷನ್ ನಿಂದ ಸುಮಾರು 2 km ನಿಂದ ನಿರ್ಮಿಸಿದ ಒಳಚರಂಡಿ ಕಾಮಗಾರಿ ನಿಲುಗಡೆಯಾದ ಸ್ಥಳದಿಂದ ಕಲ್ಲಾಪು ಸೇತುವೆ ವರೆಗೆ ಒಳಚರಂಡಿ ನಿರ್ಮಿಸಿ ಸಂಪರ್ಕ ನೀಡಿದಲ್ಲಿ ನೀರು ಸರಾಗವಾಗಿ ಹರಿದು ಹೋಗುವುದರಿಂದ ಸದ್ರಿ ಸ್ಥಳದ ಮನೆಗಳಿಗೆ ನೆರೆಹಾನಿಯಿಂದ ಶಾಶ್ವತವಾಗಿ ಪರಿಹಾರ ನೀಡಬಹುದು.
ಪಡುಬಿದ್ರಿ:
ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಡ್ರೈನೇಜ್ನಲ್ಲಿ ಸರಾಗವಾಗಿ ನೀರು ಹರಿದು ಹೋಗದೆ ರಸ್ತೆಯ ಮೇಲೆ ಮಳೆಗಾಲದ ನೀರು ತುಂಬಾ ನೆರೆ ಬಂದು ಕೆಲವು ಮನೆ ಮುಳುಗಡೆಯಾಗಿರುತ್ತದೆ ನಾಲ್ಕಾರು ಮನೆಗಳು ಪ್ರತಿ ವರ್ಷ ಕೃತಕ ನೆರೆಯಿಂದ ಒಳಗಡೆಯಾಗುತ್ತದೆ ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನ ಸಂಚಾರ ನಡೆದು ಹೋಗಲು ತುಂಬಾ ಸಮಸ್ಯೆಯಾಗಿದೆ ಪರಿಹಾರ ಮಂಗಳೂರು ರಸ್ತೆ ಪಡುಬಿದ್ರಿ ಸರ್ವಿಸ್ ರಸ್ತೆ ಕೊನೆಯಲ್ಲಿ ಚರಂಡಿ ಸರಿಯಾಗಿ ಇರುವುದಿಲ್ಲ ಪಡುಬಿದ್ರಿ ಬಂಟರ ಭವನದ ಎದುರು ಹೈವೇ ಚರಂಡಿ ಇರುವುದಿಲ್ಲ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಹೈವೇ ಚರಂಡಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಕನ್ನಂಗಾರು ಗರಡಿಯಿಂದ ಅರಥ ಹೋಟೆಲ್ ವರೆಗೆ ಸರ್ವಿಸ್ ರಸ್ತೆ ಇರುವುದಿಲ್ಲ ಎಲ್ಲಾ ಹೈವೇ ಚರಂಡಿಗಳಿಗೆ ಸಂಪರ್ಕ ರಸ್ತೆ ಇರುವುದಿಲ್ಲ ಮಹಾ ಗಣಪತಿ ದೇವಸ್ಥಾನದಿಂದ ಬಂಟರ ಭವನದ ಕಡೆ NHಗೆ ಅಡ್ಡಲಾಗಿ ನೀರು ಹರಿಯಲು ರಚಿಸಿರುವ ಅಂಡರ್ ಪಾಸ್ ಕಾಲುವೆಯ ನಿರ್ಮಾಣ ಅವೈಜ್ಞಾನಿಕವಾಗಿದ್ದು ಪಕ್ಕದಲ್ಲಿನ ಕಿರಿದಾದ ಚರಂಡಿ ವ್ಯವಸ್ಥೆಯೇ ಈ ಸಮಸ್ಯೆಗೆ ಕಾರಣ.
ಪರಿಹಾರ:
ಈಗಾಗಲೇ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳನ್ನು ಅಗಲಗೊಳಿಸುವುದು ಮತ್ತು ಚರಂಡಿ ನಿರ್ಮಿಸುವುದು ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದು ಮತ್ತು ಎನ್ ಹೆಚ್ ಪಕ್ಕದ ಚರಂಡಿಯನ್ನು ಅಗಲೀಕರಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸುವುದು.
ಹೆಜಮಾಡಿ
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಮನೆಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿರುತ್ತದೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇದ್ದು ಚರಂಡಿಯನ್ನು ಸ್ವಚ್ಛಗೊಳಿಸಿ ತಡೆಗೋಡೆ ನಿರ್ಮಿಸುವುದು ಸೂಕ್ತವಾಗಿರುತ್ತದೆ.
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಶಿವನಗರದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದ ನೀರು ಶಾಲೆಯ ಎದುರುಗಡೆ ನಿಂತು ಶಾಲಾ ಮಕ್ಕಳಿಗೆ ತೊಂದರೆ ಹಾಗೂ ಶಿವನಗರ ದೇವಸ್ಥಾನದ ಕಮಾನಿನ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗುವ ಸಾಧ್ಯತೆ ಇರುತ್ತದೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದರೆ ಇದು ಸರಿಯಾಗುತ್ತದೆ.
ಪ್ರತಿ ಮಳೆಗಾಲದಲ್ಲಿ ಈ ಅವೈಜ್ಞಾನಿಕ ಕಾಮಗಾರಿಯಿಂದ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತದೆ. ಕಳೆದ ವರ್ಷ ಇದೇ ರೀತಿಯ ಅವಾಂತರ ಉಂಟಾಗಿ ತಹಶಿಲ್ದಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.
ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ:
“ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ವರ್ಷ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಕಂದಾಯ ಇಲಾಖೆ ನೆರೆ ರಕ್ಷಣಾ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಸಾರ್ವಜನಿಕ ರಕ್ಷಣೆ ನಮ್ಮ ಮೊದಲ ಆದ್ಯತೆ. ಅವೈಜ್ಞಾನಿಕ ಕಾಮಗಾರಿಯ ಕುರಿತು ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತರಲಾಗಿದೆ.
ತಹಶಿಲ್ದಾರ್ ರವರ ಜೊತೆ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿಗಳಾದ ಡೇನಿಯಲ್ ಡಿಸೋಜ, ಜಗದೀಶ್, ಶ್ರೀಕಾಂತ್, PDO ಗಳಾದ ಚಂದ್ರಕಲಾ, ಸತೀಶ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಭಾ ಶೆಟ್ಟಿ ಮುಂತಾದವರು ಹಾಜರಿದ್ದು ಪರಿಶೀಲನೆಗೆ ಸಹಕಾರ ನೀಡಿದರು.
ವರದಿ:ಡಾ.ನಂದುಪೂಜಾರಿ
ರಾಜ್ಯ ವರದಿಗಾರರು
ಬೇಸಿಗೆ ಕಾಲದ ನೀರಿನ ತೀವ್ರ ಸಮಸ್ಯೆಯನ್ನು ಶೀಘ್ರ ಪರಿಹರಿಸ ಬೇಕೆಂದು ಮನವಿ
ಕಲಬುರಗಿಯ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಾಪ್ಲ ನಾಯಕ್ ತಾಂಡದಲ್ಲಿ ಬೇಸಿಗೆ ಕಾಲದ ನೀರಿನ ತೀವ್ರ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಮಾಡಬೇಕೆಂದು ಚಿಂಚೋಳಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ತಾಲೂಕ ಅಧ್ಯಕ್ಷರಾದ ಲಿಂಬಾಜಿ ಚವಾಣ್, ನೇತೃತ್ವದಲ್ಲಿ ಶಾದಿಪುರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಮಾಧ್ಯಮದವರ ಜೊತೆಗೆ ಲಿಂಬಾಜಿ ಚವಾಣ್, ಅವರು ಮಾತನಾಡಿ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಾಪ್ಲ ನಾಯಕ್ ತಾಂಡದಲ್ಲಿ ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಎಂಬ ದೊಡ್ಡ ಸಮಸ್ಯೆಯು ನಿರ್ಮಾಣವಾಗಿದ್ದು, ತಾಂಡದ ಜನತೆಗಳು ಕುಡಿಯುವ ನೀರಿಗಾಗಿ ತೀವ್ರ ಹಠಾತ್ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಜನರ ಕಷ್ಟವನ್ನು ಮನಗಂಡು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ವತಿಯಿಂದ ಮನವಿ ಮಾಡಿಕೊಂಡಿದ್ದೇವೆ ಕೂಡಲೇ ಶಾದಿಪುರಗ್ರಾಮ ಪಂಚಾಯತ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚಾಪ್ಲ ನಾಯಕ್ ತಾಂಡದ ಜನರ ನೀರಿನ ಕೊರತೆಯನ್ನು ತಕ್ಷಣವೇ ಪರಿಹರಿಸಲು ಹಳೆಯ ಬೋರ್ವೆಲ್ಗಳಿಗೆ ಮರುಸೇವೆಯನ್ನು, ಹೊಸ ಬೋರ್ವೆಲ್ಗಳು ಅಥವಾ ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಿ ಜನರ ಸಂಕಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಬೇಕೆಂದು ಚಿಂಚೋಳಿ ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆ) ತಾಲೂಕ ಅಧ್ಯಕ್ಷರಾದ ಲಿಂಬಾಜಿ ಚವಾಣ್, ಅವರು ಆಗ್ರಹಿಸಿದ್ದಾರೆ
ಬಸವ ಜಯಂತಿಯ ಉತ್ಸವ ಸಭೆ
ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಹರವಲಯದ ಪ್ರವಾಸಿಗ ಮಂದಿರದಲ್ಲಿ ಗುರುವಾರರಂದು
ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಜೀವ ಕುಮಾರ್ ಪಾಟೀಲ್ ಅವರು ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿ ಕಲ್ಬುರ್ಗಿಯಲ್ಲಿ ಏಪ್ರಿಲ್ 29ರಂದು ಜಿಲ್ಲಾ ಬಸವ ಜಯಂತಿ ಸಮಿತಿ ವತಿಯಿಂದ ಬಸವ ಜಯಂತಿ ಹಮ್ಮಿಕೊಂಡಿದ್ದಾರೆ ಆದರೆ ಈ ಜಯಂತಿಯು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವತಿಯಿಂದ ಮಾಡುತ್ತಿದ್ದಾರೆ ಎಂದು ಬಿಂಬುಸುತ್ತಿದ್ದಾರೆ ಏಕೆಂದರೆ ಚಿಂಚೋಳಿಯಲ್ಲಿ ಇಂದು
ಜಿಲ್ಲಾ ಬಸವ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ ವೈ ಪಾಟೀಲ, ಅವರ ಅಧ್ಯಕ್ಷತೆಯಲ್ಲಿ ಜರುಗಿದೆ ಈ ಸಭೆಯಲ್ಲಿ ತಾಲೂಕ ಲಿಂಗಾಯತ ಸಮಾಜದ ತಾಲೂಕ ಪದಾಧಿಕಾರಿಗಳಿಗೆ ಹಾಗೂ ಇನ್ನು ಉಳಿದ ಬಸವ ಪರ ಸಂಘಟನೆಗಳಿಗೆ ಜಿಲ್ಲಾ ಬಸವ ಜಯಂತಿಯ ಅಧ್ಯಕ್ಷರು ಸಭೆ ಇದೆ ಎಂದು ಹೇಳಿಲ್ಲ ಈ ಸಭೆ ಬ್ಯಾನರ್ ನೋಡಿದ್ದಾರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಜಿಲ್ಲಾಧ್ಯಕ್ಷರು ಫೋಟೋ ಮತ್ತು ಚಿಂಚೋಳಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷರ ಫೋಟೋ ಹಾಕೊಂಡು ಸಭೆಯನ್ನು ಮಾಡಿದ್ದಾರೆ ಇದಕ್ಕೆ ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕ ಘಟಕ ವತಿಯಿಂದ ಖಂಡಿಸುತ್ತೇವೆ ಏಕೆಂದರೆ ಜಿಲ್ಲಾ ಬಸವ ಜಯಂತಿಯ ಕಾರ್ಯಕ್ರಮವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ವತಿಯಿಂದ ಮಾಡುತ್ತಿಲ್ಲ ಈ ಜಯಂತಿಯು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮತ್ತು ಜಿಲ್ಲಾ ವೀರಶೈವ ಲಿಂಗಾಯತ್ ಸಮಾಜ ಹಾಗೂ ಅನೇಕ ಬಸವ ಪರ ಸಂಘಟನೆಗಳು ಕಲ್ತು ಮಾಡುತ್ತಿದ್ದಾರೆ. ಇಂದು ಚಿಂಚೋಳಿಯಲ್ಲಿ ನಡೆದ ಸಭೆಯ ಬ್ಯಾನರ್ ನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪಾಟೀಲ್ ಎಸ್ ಕೊಡಲಹಂಗರಗಾ, ಅವರ ಫೋಟೋನೇ ಹಾಕಿಲ್ಲ ಹಾಗಾಗಿ ಇನ್ನು ಮುಂದೆ ದಿನಗಳಲ್ಲಿ ಬೇರೆ ತಾಲೂಕಕ್ಕೆ ಜಿಲ್ಲಾ ಬಸವ ಸಮಿತಿ ಅಧ್ಯಕ್ಷರು ಸಭೆ ಮಾಡುವಾಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರ ಫೋಟೋಗಳನ್ನು ಹಾಕಿ ಸಭೆ ಮಾಡಬೇಕು ಅದೇ ರೀತಿ ಬಸವ ಪರ ಸಂಘಟನೆಗಳ ಜಿಲ್ಲಾ ಅಧ್ಯಕ್ಷರ ಫೋಟೋವನ್ನು ಹಾಕಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ರೇವಣಸಿದ್ದಪ್ಪ ದಾದಾಪೂರ, ವಿಜಯಕುಮಾರ ಬೆಳಕೇರಿ, ಉಮಾ ಪಾಟೀಲ, ಬೀಡ ಜಂಗಮದ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಉಡುಪಿ, ವೀರಶೆಟ್ಟಿ ಮಗಿ, ಶಿವಶರಣಪ್ಪ ಡೆಂಗಿ, ಸಂಪತ್ ಮುಸ್ಟರಿ, ಸಂತೋಷ್ ಪಾಟೀಲ, ವೀರೇಶ್ ಪಾಟೀಲ್, ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು
ದಿ. ದ್ಯಾನೇಶ್ವರಿ ಹುಟ್ಟು ಹಬ್ಬದ ಪ್ರಯುಕ್ತ ವೃದ್ಧಾಶ್ರಮಕ್ಕೆ ಪರಿಕರಗಳ ವಿತರಣೆ
ದಿ. ದ್ಯಾನೇಶ್ವರಿ ಹುಟ್ಟು ಹಬ್ಬದ ಪ್ರಯುಕ್ತ ವೃದ್ಧಾಶ್ರಮಕ್ಕೆ ಪರಿಕರಗಳ ವಿತರಣೆ ಹೂವಿನಹಡಗಲಿ. ಪಟ್ಟಣದಲ್ಲಿ ಕೃಪಾಶ್ರಯ ಟ್ರಸ್ಟ್ ನ ವೃದ್ಧಾಶ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ದೊಡ್ಡ ಬಸಯ್ಯ ನವರ ಕುಟುಂಬದ ವತಿಯಿಂದ ತಮ್ಮ ಮಗಳ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಗುರುವಾರ ಸಂಜೆ ವೃದ್ಧಾಶ್ರಮದ ಮಹಿಳೆಯರಿಗೆ ಪರಿಕರಗಳನ್ನು ವಿತರಣೆ ಮಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿ.ಕೆರ್. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಹೆಚ್ ಎಂ ವಿರೇಶ ನಗರೀಕರಣ, ಪತಿ-ಪತ್ನಿ ಉದ್ಯೋಗ, ಸಂಕುಚಿತ ಮನೋಭಾವ, ವಿಭಕ್ತ ಕುಟುಂಬ ಹೀಗೆ ಅನೇಕ ಕಾರಣಗಳಿಂದ ಮಕ್ಕಳಿಂದ ನಿರ್ಲಕ್ಷಕ್ಕೆ ಒಳಗಾದ ತಂದೆ-ತಾಯಿಯರು ವೃದ್ದಾಶ್ರಮದ ಆಸರೆಗೆ ಬರುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದು ದುರಂತ. ನಮ್ಮ ಮಲ್ಲಿಗೆ ನಾಡಿನಲ್ಲಿ ಸೇವಾ ಮನೋಭಾವನೆಯ ಈ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿರುವುದು ಹಿರಿಯ ಜೀವಗಳಿಗೆ ತುಸು ನೆಮ್ಮದಿ ಎನಿಸಿವೆ ಎಂದರು.ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಹಡಗಲಿ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ಇಂದಿನ ದಿನಗಳಲ್ಲಿ ಹೆತ್ತವರು ನಮ್ಮ ಏಕಾಂತಕ್ಕೆ ಅಡ್ಡಿ ತರುತ್ತಾರೆಂದು ಅವರನ್ನೇ ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಪ್ರವೃತಿ ಹೆಚ್ಚಾಗುತ್ತಿದ್ದು. ಇನ್ನು ಆವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದು ದೂರದ ಮಾತಾಗಿದೆ.
ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಹೆಚ್ಚೆಂದರೆ ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತ ಮಕ್ಕಳ ಏಳಿಗೆ ಬಯಸುತ್ತಾ ಜೀವನ ಸಾಗಿಸಬೇಕು ಎಂಬ ಆಸೆ ಇರುತ್ತದೆ . ಆದರೆ ಈಗ ಹಣ ನೀಡಿ ವೃದ್ಧಾಶ್ರಮಕ್ಕೆ ಬಿಡುವಷ್ಟು ಹೀನ ಮನಸ್ಸಿನ ಮನುಷ್ಯರಿದ್ದು, ಮನುಷ್ಯತ್ವಕ್ಕೆ ಬೆಲೆ ಎಲ್ಲಿದೆ ಹೇಳಿ
ಒಂಬತ್ತು ತಿಂಗಳು ಹೊತ್ತು ಹೊಸ ಜೀವಕ್ಕೆ ಜನ್ಮವಿತ್ತು ತಾನು ಮರುಜನ್ಮ ಪಡೆಯುವವಳು -ತಾಯಿ, ನೋವನ್ನೆಲ್ಲಾ ನುಂಗುತ್ತಾ ನಗುವನ್ನು ಮಾತ್ರ ಮಕ್ಕಳಿಗಾಗಿ ಮೀಸಲಿಡುವುದು-ತಂದೆ ತಾಯಿ ಅವರನ್ನು
ಮರೆತರೆ ಸಮಯ ಬಂದಾಗ ಎಲ್ಲವೂ ಅರಿವಾಗುವುದು, ಹೇಗೆ ನಾವು ಹಿರಿಯರೊಂದಿಗೆ ವರ್ಥಿಸುವೆವೋ ಹಾಗೆಯೆ ನಮ್ಮನ್ನು ನೋಡಿ ನಮ್ಮ ಮಕ್ಕಳು ಕೂಡ ಕಳಿತುಕೊಳ್ಳುತ್ತಾರೆ ಎಂದರು. ಅಧ್ಯಕ್ಷತೆಯನ್ನು ಕೃಪಾಶ್ರಯ ಟ್ರಸ್ಟ್ ನ ಫಾಸ್ಟ್ ರ್ ಕೆ. ಹಾಲೇಶ ನಾಯ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ್ರ ಕೊಟ್ರುಗೌಡ. ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ,ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದ ಗದಗ ತಾಲೂಕು ಅಭಿವೃದ್ಧಿ ಅಧಿಕಾರಿ ಉದಯಕುಮಾರ ಎಲಿವಾಳ. ಮಾತನಾಡಿದರು.ನಾಗತಿಬಸಾಪುರದ ಕಸ ವಿಲೇವಾರಿ ವಾಹನ ಚಾಲಕಿ ಕೆ. ಸುಧಾ,ಡಿ ಗ್ರೂಪ್ ನೌಕರ ಹೆಚ್ ಗಿರಿರಾಜ, ಪೌರ ಕಾರ್ಮಿಕ ಜಿ ಸೋಮಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶಿಕ್ಷಕ ಹಡಗಲಿ ಬಸವರಾಜ. ಪತ್ರಕರ್ತ ಹಲಗಿ ಸುರೇಶ. ಬಿ. ಎಂ ದೊಡ್ಡ ಬಸಯ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ನಮ್ರತಾ, ರವಿತೇಜ ಪ್ರಾರ್ಥಿಸಿದರು.
ಡಾ :: ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ
ಸುರಪುರ ತಾಲೂಕಿನ ದೇವಪುರ ಗ್ರಾಮದ ದೇವಪುರ್ ಕ್ರಾಸ್ ಬಳಿ ಬಳಿ ಡಾ: ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ದಿನಾಂಕ 14 -4- 2025 ರಂದು ಮುಂಜಾನೆ 8-0ಗಂಟೆಗೆ ಸುಮಾರಿಗೆ ಡಾ: ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ದೇವಪುರ ಗ್ರಾಮ ಪಂಚಾಯತಿಯಲ್ಲಿ ಮತ್ತು ಅದೇ ರೀತಿ ದೇವಪುರ ಕ್ರಾಸಿನಲ್ಲಿರುವಂತ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಜ್ರಮಣೆಯಿಂದ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದಂತಹ ಶರಣಪ್ಪ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಬಲಭೀಮ ನಾಯಕ್ ನ್ಯಾಯವಾದಿಗಳು ಇವರು ಡಾ. ಬಿಆರ್ ಅಂಬೇಡ್ಕರ್ ಅವರ ಆದರ್ಶ ತತ್ವ ಭಾರತ ಸಂವಿಧಾನದ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು ಬಲಭೀಮ ನಾಯಕ್ ವಕೀಲರು ಮಾತನಾಡಿ ಹಿಂದುಳಿದ ವರ್ಗದಲ್ಲಿ ಬಡತನದಲ್ಲಿ ಜನಿಸಿದ ಡಾ:ಬಿ ಆರ್ ಅಂಬೇಡ್ಕರ್ ಅವರು ಹಿಂದುಳಿದ ವರ್ಗದ ಸಮುದಾಯಗಳಿಗೆ ಎಲ್ಲಾ ಇಲಾಖೆಯಲ್ಲಿ ಸಮಾನ ಸ್ಥಾನವನ್ನು ಸಿಗಲು ಹೋರಾಟ ಮಾಡಿದ ಬಗ್ಗೆ ತಿಳಿಸುತ್ತಾ ಭಾರತಕ್ಕೆ ಅಮೂಲ್ಯ ರತ್ನವಾಗಿ ನೀಡಿದ್ದುಹಿಂದುಳಿದ ವರ್ಗದ ಕುಟುಂಬವಾಗಿದ್ದು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು. ಅನೇಕ ಮುಖಂಡರು ಅಂಬೇಡ್ಕರ್ ಅವರ ಆದರ್ಶ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಚೆನ್ನಪ್ಪ ತಳವಾರ್ ಡಿಎಸ್ಎಸ್ ಮುಖಂಡರು, ವೆಂಕಟೇಶ್ ಜಂಗಿನ್, ಜಾನಕಾರ್,ಬಸವರಾಜ್ ಸಂತೋಷ್ ಬಾಗಲಿ,ಹನುಮಂತ ದೊಡ್ಡಮನಿ,ಅಶೋಕ್ ಕೌಲಿ,ಈಸೂಪ್ ಕಂಡಕ್ಟರ್,ಹುಸೇನ್ ಸಾಬ್ ತಿಂಥಣಿ, ಇರ್ಫಾನ್ ಮುಲ್ಲಾ,ಡಾಕ್ಟರ್ ಕಣ್ಣೀರ್ ಚಂದ್ರಕಾಂತ್ ಕವಲಿ,ದೇವಪುರ ಗ್ರಾಮದ ಹಿರಿಯರು ಯುವಕರು ದಲಿತಪರ ಸಂಘಟನೆಗಳು,ಎಲ್ಲರೂ ಪಾಲುಗೊಂಡು ಅಂಬೇಡ್ಕರ್ ಜಯಂತಿಯನ್ನು ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶಬರಿಮಲೈಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ
ಹಾನಗಲ್:
ತಾಲೂಕಿನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮಿನಿ ಬಸ್ನಲ್ಲಿ ಶಬರಿಮಲೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ಬೆಳಗಿನ ಜಾವ ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮಲೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿ ಹಲವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಹಾನಗಲ್ ನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ೩೦ ಕ್ಕೂ ಹೆಚ್ಚು ಮಾಲಾಧಾರಿಗಳು ಸೋಮವಾರ ಬೆಳಗ್ಗೆ ಹಾನಗಲ್ಲಿನಿಂದ ಶಬರಿಮಲೈಗೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ನಾನಾ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಎರುಮಲೈಯಲ್ಲಿ ಸೇವೆ ಸಲ್ಲಿಸಿ ಶಬರಿಮಲೈಯತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ, ಸ್ಥಳೀಯ ಶಿವಮಣಿ ಅಯ್ಯಪ್ಪಸ್ವಾಮಿ ಆಶ್ರಮದ ಗುರುಸ್ವಾಮಿ ಮಾರುತಿ ಹರಿಹರ (೫೦) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಂತೋಷ ಜಾಧವ ಮತ್ತು ಗಿರಿರಾಜ ಕಲಾಲ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರನ್ನೆಲ್ಲ ಕೇರಳದ ಪಾಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಕೂಡಲೇ ಶಾಸಕ ಶ್ರೀನಿವಾಸ ಮಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮೂಲಕ ಕೇರಳ ಸರ್ಕಾರಕ್ಕೆ ಮಾತನಾಡಿಸಿ ಗಾಯಾಳುಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಮೃತಪಟ್ಟ ಓರ್ವ ಮಾಲಾಧಾರಿಯ ಶರೀರ ತರಲು ಹಾಗೂ ಗಾಯಾಳುಗಳ ನೆರವಿಗೆ ಧಾವಿಸಲು ಐವರು ಮುಖಂಡರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಏಳು ಜನರ ತಂಡವನ್ನು ವಿಮಾನದ ಮೂಲಕ ಕೊಚ್ಚಿನ್ಗೆ ಕಳುಹಿಸಿದ್ದಾರೆ. ಸಂಜೆ ಹೊತ್ತಿಗೆ ಘಟನಾ ಸ್ಥಳ ತಲುಪಿದ ತಂಡ ಶರೀರ ತರಲು ವ್ಯವಸ್ಥೆ ಮಾಡುತ್ತಿದ್ದು, ಗಾಯಾಳುಗಳಿಗೆ ನೆರವಾಗಿದೆ.
ಶ್ಯಾನುಭೋಗನಹಳ್ಳಿ ನ್ಯಾಯಬೆಲೆ ಅಂಗಡಿ ವರ್ಗಾವಣೆಗೆ ಮನವಿ.ಪರಿಶೀಲನೆ ನಡೆಸಿ ವರದಿ ನೀಡುವಂತೆ ತಹಸೀಲ್ದಾರ್ ಗೆ ಸೂಚನೆ.
ಹುಣಸೂರು ಗ್ರಾಮಗಳಿಗೆ ತೆರಳಿ ಪಡಿತರದಾರರಿಂದ ಹೆಬ್ಬೆಟ್ಟು ಪಡೆದು ಆಹಾರ ಇಲಾಖೆ ನಿಯಮಗಳನ್ನ ಗಾಳಿಗೆ ತೂರಿದ ಆರೋಪ ಎದುರಿಸುತ್ತಿರುವ ಹುಣಸೂರು ತಾಲೂಕಿನ ಶ್ಯಾನುಭೋಗನ ಹಳ್ಳಿ ನ್ಯಾಯಬೆಲೆ ಅಂಗಡಿಯನ್ನ ಕೊಳಘಟ್ಟ ಗ್ರಾಮಕ್ಕೆ ವರ್ಗಾವಣೆ ಮಾಡುವಂತೆ ಕನಸಿನ ಭಾರತ ಮಾಧ್ಯಮದ ವರದಿಗಾರ ವಿಶಾಂತ್ ನೀಡಿದ ಮನವಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸ್ಪಂದಿಸಿದೆ.ಕೂಡಲೇ ಈ ಸಂಭಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಆಹಾರ ಇಲಾಖೆ ಜಂಟಿ ನಿರ್ದೇಶಕರು ಹುಣಸೂರು ತಹಸೀಲ್ದಾರ್ ಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.ಕೆಲವು ದಿನಗಳ ಹಿಂದೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ಪಡಿತರದಾರರಿಂದ ಬಯೋಮೆಟ್ರಿಕ್ ಪಡೆದು ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಹಾಗೂ ಪಡಿತರ ದುರುಪಯೋಗವಾಗುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿ ಸುದ್ದಿ ಮಾಡಲಾಗಿತ್ತು.ಈ ಸಂಭಂಧ ತಹಸೀಲ್ದಾರ್ ರವರು ನಿಯಮಗಳನ್ನ ಗಾಳಿಗೆ ತೂರಿದ ಬಗ್ಗೆ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ರು.ಅಲ್ಲದೆ ಸರ್ವರ್ ಪ್ರಾಬ್ಲಂ ಎಂ ಕಾರಣ ನೀಡಿ ನ್ಯಾಯಬೆಲೆ ಅಂಗಡಿ ಪರ ಬ್ಯಾಟಿಂಗ್ ಮಾಡಿದ್ರು.ಸರ್ವರ್ ಸಮಸ್ಯೆ ಇದ್ದಲ್ಲಿ ನ್ಯಾಯಬೆಲೆ ಅಂಗಡಿಯನ್ನ ಕೊಳಘಟ್ಟ ಗ್ರಾಮಕ್ಕೆ ಶಿಫ್ಟ್ ಮಾಡಿ ಪಡಿತರದಾರರಿಗೆ ಅನುಕೂಲ ಮಾಡಿಕೊಡುವಂತೆ ವಿಶಾಂತ್ ದೂರು ನೀಡಿದ್ದರು.ವಿಶಾಂತ್ ರವರ ಮನವಿಗೆ ಸ್ಪಂದಿಸಿದ ಇಲಾಖೆ ಈ ಸಂಭಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಗೆ ಸೂಚನೆ ನೀಡಿದ್ದಾರೆ…