POST

ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.

ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಿದರು. ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ರೈತರಿಗೆ 25 ಕೆವಿ ಟ್ರಾನ್ಸ್ ಫಾರ್ಮರ್ ನೀಡುವುದಾಗಿ 231 ರೈತರ ಹತ್ತಿರ ತಲಾ ರೂ.30,000ಗಳನ್ನು ಪಡೆಯಲಾಗಿದೆ. ಎರಡು ವರ್ಷಗಳಾದರೂ 25ಕೆವಿ ಟ್ರಾನ್ಸ್ ಫಾರ್ಮರ್ ನೀಡಿಲ್ಲ ಎಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದೇ ವೇಳೆಯಲ್ಲಿ ರೈತರ ಸಂಘ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಅವರು ಮಾತನಾಡಿ ದಿಬ್ಬೂರಹಳ್ಳಿ ಬೆಸ್ಕಾಂ ಶಾಖಾ ಧಿಕಾರಿ ಯವರು ಲಂಚ ಕೊಡುವವರಿಗೆ ಮತ್ತು ಗುತ್ತಿಗೆದಾರರು ಯಾರ ಹಣ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುತ್ತಾರೆ, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯ ರೈತ ಸಂಘ(ಕೆಎಸ್ ಪುಟ್ಟಣ್ಣಯ್ಯ ಬಣ) ವತಿಯಿಂದ ರೈತರಿಗೆ ಆಗುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಬೆಸ್ಕಾಂ ಶಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮುನೇಗೌಡ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಶಂಕರ್ ನಾರಾಯಣ ತಾಲೂಕು ಉಪಾಧ್ಯಕ್ಷ, ಶ್ರೀನಾಥ್, ದೇವರಾಜ್ ,ನಾರಾಯಣಸ್ವಾಮಿ, ಡಿಎಸ್ಎಸ್ ಮುಖಂಡ ಗೊರ್ಲಪ್ಪ, ಚಿಕ್ಕನರಸಿಂಹಪ್ಪ ಇನ್ನು ಹಲವಾರು ರೈತರು ಭಾಗಿಯಾಗಿದ್ದರು

ಯಾವುದೇ ಅಭಿವೃದ್ಧಿ ನಿಲ್ಲಿಸುವುದಿಲ್ಲ: ಜಿ.ಪರಮೇಶ್ವರ್

ಅರಸೀಕೆರೆ: ನಾವು ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿದ್ದು ಯಾವುದೇ ಅಭಿವೃದ್ಧಿಯನ್ನು ನಿಲ್ಲಿಸುವುದಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು. ಭಾನುವಾರ ಪತ್ನಿ ಸಮೇತ ಅರಸೀಕೆರೆ ತಾಲೂಕಿನ, ಹಾರನಹಳ್ಳಿಯಲ್ಲಿರುವ ಕೋಡಿಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಯನ್ನು ಚುನಾವಣೆಗೆ ಮೊದಲೆ ಹೇಳಿದ್ದು ಅದನ್ನು ಈಗ ಅನುಷ್ಠಾನ ಮಾಡ್ತಾ ಇದ್ದೇವೆ. ನಾವು ಜನರ ಮೇಲೆ ಹಾಗೂ ರಾಜ್ಯದ ಅಭಿವೃದ್ಧಿ ಮೇಲೆ ಸಾಮಾಜಿಕ ನ್ಯಾಯದ ಮೇಲೆ ಮಾತನಾಡಿದ್ದು, ಇದೇ ತಿಂಗಳ 30 ರಂದು ಗೃಹಲಕ್ಷಿ÷್ಮ ಯೋಜನೆಗೆ ರಾಹುಲ್‌ಗಾಂಧಿ ಚಾಲನೆ ಕೊಡಲಿದ್ದು, ಅಂದೇ ಜನರ ಖಾತೆಗೆ ಹಣ ಹೋಗಲಿದೆ. ಇನ್ನು ಮುಂದೆ ಪ್ರತಿ ತಿಂಗಳು ಹಣ ಹೋಗುತ್ತೆ ಎಂದರು. ಸ್ವಾಮೀಜಿ ನಮ್ಮ ತಂದೆಯವರ ಕಾಲದಿಂದ ಪರಿಚಯ ಹಾಗಾಗಿ ಅವರನ್ನು ನೋಡಬೇಕು ಅನ್ನಿಸಿತು ಬಂದಿದ್ದೀನಿ ಇದರಲ್ಲಿ ವಿಶೇಷತೆ ಏನಿದೆ, ಏನಾದ್ರು ವಿಶೇಷತೆ ನಿಮಗೆ ಅನ್ಸಿದೆಯಾ ಎಲ್ಲಾ ಬರ್ತಾ ಇರ್ತಾರೆ, ಶ್ರೀಮಠ ಅಂದರೆ ಭಕ್ತಾಧಿಗಳು ಬರಬೇಕಲ್ವಾ ಹಾಗೇ ನಾನು ಬಂದಿದ್ದೀನಿ ಅಷ್ಟೇ, ಬೇರೆ ಅರ್ಥೈಸುವುದು ಅಗತ್ಯವಿಲ್ಲ ಎಂದು ತಿಳಿಸಿದರು. ಮೊದಲು ಬೊಮ್ಮಾಯಿ ಬಜೆಟ್ ಕೊಟ್ಟಿದ್ದರು ಅದರಲ್ಲಿ ನಮ್ಮ ಗ್ಯಾರೆಂಟಿಗೆ ಅನುದಾನ ಇರಲಿಲ್ಲ, ಹಾಗಾಗಿ ಈಗ ಮತ್ತೊಮ್ಮೆಬಜೆಟ್ ನೀಡಿದ್ದು ಬೇರೆ ಬಜೆಟ್ ಆಗಿದೆ. ಒಂದಿಷ್ಟು ಹಣಕಾಸು ವ್ಯವಸ್ಥೆ ಮಾಡಲು ಕಠಿಣ ಆಗಬಹುದು. ಅದಕ್ಕೆ ಅನಗತ್ಯ ಖರ್ಚು ನಿಲ್ಲಿಸುತ್ತೇವೆ. ಜನರಿಗೆ ಅನುಕೂಲವಿರುವ ಯಾವುದೇ ಯೋಜನೆಗಳು ನಿಲ್ಲಲ್ಲ ಎಂದು ಹೇಳಿದರು. ಗೃಹಜ್ಯೋತಿ ಹೆಸರಿನಲ್ಲಿ ಸರ್ಕಾರ ಜನರಿಗೆ ಟೋಪಿ ಹಾಕ್ತಿದೆ ಎಂದಿದ್ದ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಪ್ರಕೃತಿ ನಮ್ಮನ್ನು ಹೇಳಿ ಕೇಳಿ ಮಾಡೋದಿಲ್ಲ, ಈ ಬಾರಿ ಒಂಭತ್ತು ಜಿಲ್ಲೆಗಳಲ್ಲಿ ಮಳೆ ಇಲ್ಲ. ನಮಗೆ ಇದುವರೆಗೆ ಮುಂಗಾರು ಕೊರತೆ ಇದೆ, ಬಹುತೇಕ ಕಡೆ 40 ರಷ್ಟು ಮಳೆ ಕೊರತೆ ಇದ್ದು, ನಮಗೆ ಹೈಡ್ರೋ ಪವರ್ ಉತ್ಪಾದನೆ ಕಡಿಮೆ ಆಗಿದೆ. ಹಾಗಾಗಿ ಸ್ವಲ್ಪ ದಿನ ಹಾಗೇ ಆಗುತ್ತೆ ಅದು ಪ್ರಕೃತಿಯಿಂದ ಆಗುವುದೇ ಹೊರತು ನಾವೇನು ಅದನ್ನು ಮಾಡಿರುವುದಲ್ಲ, ಆದರೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಸಮರ್ಥನೆ ಮಾಡಿಕೊಂಡರು.

ಕುಮಟಾದಲ್ಲಿ 2 ನೇ ಭಾರಿ ಬಿಳಿ ಹೆಬ್ಬಾವು ಪ್ರತ್ಯಕ್ಷ ಉರಗ ತಜ್ಞ ಸ್ನೇಕ್ ಪವನ್ ರಿಂದ ರಕ್ಷಣೆ

ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು. ನಿನ್ನೆ ರಾತ್ರಿ ಕಾಣಿಸಿದ್ದು, ಸಮೀಪದ ಮನೆಯ ಆರ್ ಟಿ ಓ ಒಫಿಸ್ ಹೋಮ್ ಗಾರ್ಡ್ ಗಣೇಶ್ ಮುಕ್ರಿಯವರ ಕರೆಯ ಮೇರೆಗೆ ಪವನ್ ನಾಯ್ಕ ಅವರು ರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. ಕಳೆದ ವರ್ಷವಷ್ಟೇ ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು ಜನರು ಭಯಬೀತರಾಗಿದ್ದು ನೂರಾರು ಜನ ನೆರೆದಿದ್ದರು. ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿದ್ದು . ಹಾಗೂ ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಸ್ನೇಕ್ ಪವನ್ ನಾಯ್ಕ ಅವರಿಗೆ ಸಿಕ್ಕಿದ್ದು ನಂತರ ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಯ ಒಪ್ಪಿಸಲಾಗಿದ್ದು. ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಜೂ ಕಳಿಸಲಾಗಿದೆ. ಡಿ ಎಫ್ ಓ ಶ್ರೀ ರವಿಶಂಕರ್, ಏಸಿಎಫ್ ಶ್ರೀ ಜಿ ಲೋಹಿತ್, ಆರ್ ಎಪ್ ಓ ಶ್ರೀ ಎಸ್ ಟಿ ಪಟಗಾರ್, ಡಿ ಆರ್ ಎಫ್ ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು. ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕರಾದ ಗೋಪಿ ಜೊಲಿಯವರು ತಮ್ಮ ಕ್ಯಾಮೆರಾ ದಲ್ಲಿ ಸೆರೆಹಿಡಿದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ

ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ 23 ಸ್ತಬ್ಧ ಚಿತ್ರಗಳ ಪ್ರದರ್ಶನ- ರಕ್ಷಣಾ ಸಚಿವಾಲಯ

ನವದೆಹಲಿಯ ಕರ್ತವ್ಯ ಪಥದಲ್ಲಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ದೇಶದ ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರ, ಕಲೆ, ಸಾಹಿತ್ಯ ಬಿಂಬಿಸುವ 23 ಸ್ತಬ್ಧ ಚಿತ್ರಗಳ ಪ್ರದರ್ಶನ ಇರಲಿದೆ.

17 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿವಿಧ ಸಚಿವಾಲಯಗಳು, ಇಲಾಖೆಗಳ ಒಟ್ಟಾರೇ 23 ಸ್ತಬ್ಧ ಚಿತ್ರಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ. 

ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರಾಖಂಡ್,. ಜಾರ್ಖಂಡ್, ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಅಸ್ಸಾಂ, ಅರುಣಾಚಲ ಪ್ರದೇಶ ,ತ್ರಿಪುರಾ, ಪಶ್ಚಿಮ ಬಂಗಾಳ ರಾಜ್ಯದಿಂದ  ಮತ್ತು ಜಮ್ಮು-ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ ಮತ್ತು ದಾಮನ್, ಡಿಯೂ ನಿಂದ ಒಟ್ಟಾರೇ 17 ಸ್ತಬ್ಧ ಚಿತ್ರಗಳು ಸಾಗುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಲಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಕೆಸಿಆರ್ 500 ಕೋಟಿ ಡೀಲ್: ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ರಾಜ್ಯ ಕಾಂಗ್ರೆಸ್ ನಾಯಕನಿಗೆ 500 ಕೋಟಿ ರೂಪಾಯಿ ಸುಪಾರಿ ನೀಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸುದ್ದಿಗೋಷ್ಠಿ ಇದೀಗ ದೇಶದಲ್ಲೇ ಭಾರಿ ತಲ್ಲಣ ಸೃಷ್ಟಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಕರ್ನಾಟಕದ ಕಾಂಗ್ರೆಸ್ ನಾಯಕನೊಬ್ಬನ ಕರೆಸಿ ಮೂರು ಮೂರು ಬಾರಿ ಮೀಟಿಂಗ್ ನಡೆಸಿದ್ದಾರೆ. ಇಷ್ಟೇ ಅಲ್ಲ 500 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸೋಲಿಸಲು ಕೆಸಿಆರ್ ಸುಪಾರಿ ನೀಡಿದ್ದಾರೆ ಅನ್ನೋ ವಿಚಾರ ನನಗೆ ಗೊತ್ತಿಲ್ಲ. ಯಾರು ಯಾರನ್ನೂ ಬೇಕಾದರೂ ಭೇಟಿ ಮಾಡುತ್ತಾರೆ. ಕಾಂಗ್ರೆಸ್ ಸೋಲಿಸಿದರೆ ಕೆ ಚಂದ್ರಶೇಖರ್ ರಾವ್‌ಗೆ ಲಾಭ ಏನು? ಕೆಸಿಆರ್ ಅವರ ಹೋರಾಟ ಬಿಜೆಪಿ ವಿರುದ್ಧ. ಕಾಂಗ್ರೆಸ್ ವಿರುದ್ಧ ಅಲ್ಲ ಎಂದಿದ್ದಾರೆ.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಯಾವ ಹಿನ್ನಲೆಯಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ನನಗೆ ಜನತೆಯ ಆಶೀರ್ವಾದ, ನನಗೆ ಜನತೆಯ ಬೆಂಬಲ ಇದೆ. ಹೀಗಾಗಿ ಈ ವಿಚಾರಗಳ ಕುರಿತು ನಾನು ಗಮನ ಹರಿಸುವುದಿಲ್ಲ. ನನಗೆ ಹಣದ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಯಾತ್ರೆ ಮೂಲಕ ಸಂಚರಿಸುತ್ತಿದ್ದೇನೆ. ಅಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.   

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ರೇವಂತ್ ರೆಡ್ಡಿ ಅವರ ಆರೋಪದ ಬಗ್ಗೆ ವರದಿಗಳನ್ನು ಓದಿದ್ದೇನೆ ಮತ್ತು ಈ ವಿಷಯದ ಬಗ್ಗೆ ಸತ್ಯವನ್ನು ಖಚಿತಪಡಿಸಿಕೊಂಡ ನಂತರವೇ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು

ಧರ್ಮ-ಸಂಘರ್ಷ, ಪಿ.ಎಸ್.ಐ ಹಗರಣ-ಸಿ.ಎಂ. ಮೌನ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ತಲೆದೂಗುತ್ತಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಉತ್ತರಿಸಬೆಕಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಯವರ ಮೌನದ ಹಿಂದದೆ ಲೆಕ್ಕವಿಲ್ಲದಷ್ಟು ಅರ್ಥಗಳು ಇರಬಹುದು. ಆದರೆ ಅಭಿಪ್ರಾಯದ ಲೆಕ್ಕದಲ್ಲಿ ಹೇಳುವುದಾದರೆ ಕರ್ನಾಟಕದ ಇಂದಿನ ಪರಿಸ್ಥಿತಿಗೆ ಜೆ.ಸಿ.ಬಿ ರಾಜಕಾರಣಿಗಳೇ ಕಾರಣ. ಧರ್ಮದ ಬೆಂಕಿ ಹಚಿಚಿ ಗುಂಡಾಗಿರಿ ನಡೆಸುತ್ತಿರುವುದು ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಅತಿ ಹೆಚ್ಚಾಗಿರುವುದು ,ಸಂತೋಷ ಆತ್ಮಹತ್ಯೆ, ಹಿಂದೂ ಮುಸ್ಲಿಂ ಗಲಾಟೆಗಳು ಈಗ 545 ಪಿ.ಎಸ್.ಐ ಹುದ್ದೆನೆಮಕತಿ ಪ್ರಕರಣದಲ್ಲಿ ಹಗರಣ ಹೀಗೆ ಸಲು ಸಲು ಸಮಸ್ಯೆಗಳು ಇರುವಗಲೂ ಸಿ.ಎಂ ಬಸವರಜ್ ಬೊಮ್ಮಯಿ ಅವರು ಮೌನÀವಹಿಸಿರುವುದನ್ನು ನೋಡಿದರೆ ಆಡಳಿತ ಯಂತ್ರ ಕುಸಿದಿರುವುದು ಕಂಡು ಬಂದರೂ ಕೂಡ ಪ್ರತಿಕ್ರಯೆ ನೀಡದಷ್ಟು ಸಿ.ಎ. ದೂರ ನಿಂತಿರುವುದನ್ನು ಕಂಡರೆ ಪಕ್ಷದ ಒತ್ತಡ ರಾಜಕಾರಣಿಗಳ, ಅಧಿಕರಿಗಳು ಮತ್ತು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಅದರಲ್ಲಿಯೂ ರಾಜ್ಯ, ದೇಶ ಕಂಡರಿಯದ ಪಿ.ಎಸ್.ಐ ಹಗರಣವೊಂದು ರಾಜ್ಯದಲ್ಲಿ ನಡೆದಿದೆ. ಈ ಹಗರಣದ ಮುಖ್ಯರುವಾರಿ ಕಲ್ಬುರ್ಗಿಯ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದು ಇದರ ಮಧ್ಯೆಯು ಹಳೆಯ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಅಕ್ರಮವು ಸೇರಿದಂತೆ 2011 ಕೆ.ಪಿ.ಸಿ.ಎಸ್ ಹಗರಣವು ಹೀಗೆ ಸಾಲು ಸಾಲು ಹಗರಣಗಳ ಜೀವಚಿತಿಕೆ ಮಧ್ಯೆ ಪಿ.ಎಸ್.ಐ ಹಗರಣದ ಬಗ್ಗೆ ಸಿಐಡಿ ತನಿಖೆಯನ್ನು ತೀವ್ರಗೊಳಿಸಿದ್ದು ಈ ಪಿ.ಎಸ್.ಐ ಪರೀಕೆಯು ಅಕ್ರಮದಲ್ಲಿ ಓ ಎಂ. ಆರ್ ಶೀಟ್ ತದ್ದುಪಡಿ ಸೆರಿದಂತೆ ಬ್ಲೂ ಟೂತ್ ಬಳಕೆ, ಬನಿಯನ್ ನಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಪರೀಕ್ಷೆಯಲ್ಲಿ, ಉತ್ತರ ಬರೆಸಿದ ಕೇಂದ್ರವು ಕಲ್ಬುರ್ಗಿಯ ಜ್ಞಾನ ಜ್ಯೋತಿ ಕಾಲ್ಭೆಜ್ ಆಗಿದ್ದು. 545 ಅಭ್ಯರ್ಥಿಗಳ ಪೈಕಿ ಸುಮಾರು 20 ಅಭ್ಯರ್ಥಿಗಳು ಈ ಕೇಂದ್ರದಲೇ ಆಯ್ಕೆಯಾಗಿರುವುದು ಬೆಳಕಿಗೆ ಬಂದಿದೆ. 1 ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಲೂ ಸಹಾಯ ಮಾಡುವುದಕ್ಕ್ಕಾಗಿ 30 ರಿಂದ 40 ಲಕ್ಷ ನಿಗದಿ ಪಡಿಸಲಾಗಿತ್ತು. ಈಗಾಗಲೇ ಹತ್ತಾರು ಜನರನ್ನು ಬಂಧಿಸಿದ ಸಿಐಡಿಗೆ ಪ್ರಕರಣದ ದಿಕ್ಕು ಇನ್ನೂ ಹೆಚ್ಚಾಗುತ್ತಿದ್ದು ಯಾದಗಿರಿ, ರಾಯಚೂರು, ಕಲ್ಬುರ್ಗಿಯ ಪ್ರಮುಖ ಅಧಿಕಾರಿಗಳು , ವ್ಯಕ್ತಿಗಳು ಭಾಗಿಯಾಗಿದ್ದು ಅದರಲ್ಲಿಯೂ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್‍ಪುರ್ ತಾಲೂಕಿನ 43 ಕ್ಕೂ ಅಧಿಕ ಅಭ್ಯರ್ಥಿಗಳು ಪಿ.ಎಸ್.ಐ ಪರೀಕ್ಷೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ. ಇದರ ಮಧ್ಯೆ ಆಳಂದ ಶಾಸಕ ಪಾಟೀಲರ ಅಂಗರಕ್ಷಕನ ಬಂಧನವು ಈ ಪ್ರಕರಣದ ರತಾಜಕೀಯ ವಾಸನೆಯನ್ನು ತಿಳಿಸುತ್ತದೆ. ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಈ ಪ್ರಕರಣದ ವಿರುದ್ದ ಗಟ್ಟಿಧ್ವನಿ ಎತ್ತಿದರೂ ಕೂಡ ರಾಜ್ಯದ ಗೃಹ ಸಚಿವ ಅರಗಜ್ಞಾನೇಂದ್ರ ಮತ್ತು ಸಿ.ಎಂ.ಬಸವರಾಜ ಬೊಮ್ಮಾಯಿ ಮೌನದ ಹಿಂದೆ ನಿಗೂಢ ಅರ್ಥಗಳಿವೆ. ಅರಗಜ್ಞಾನೇಂದ್ರ ಬೇರೆ ಪ್ರಕರಣಗಳಲ್ಲಿ ಬಾಯ್ಬಿಟ್ಟರೂ ಕೂಡ ಪಿ.ಎಸ್.ಐ ಪ್ರಕರಣದಲ್ಲಿ ಮೌನಕ್ಕೆ ಜಾರಿದ್ದರೆ. ಸಿಐಡಿ ಪೋಲಿಸರು ದಿವ್ಯ ಹಾಗರಗಿ ಬಂಧಿಸುವಲ್ಲಿ ಪ್ರಯತ್ನ ಮಾಡುತ್ತಿರುವಾಗಲೇ ಇನ್ನೋಂದಿಷ್ಟು ಹೊಸ ಹೊಸ ವ್ಯಕ್ತಿಗಳ ಆಗಮನ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.
ಹಿಜಾಬ್ ಕೇಸರಿ, ಧರ್ಮ ವ್ಯಾಪಾರ, ಮುಸ್ಲಿಂರಿಗೆ ವ್ಯಾಪರ ನಿಷೇಧ, ಹಲಾಲ್, ಜಟಕಾಕಟ್ ಶಿವಮೊಗ್ಗ ಹರೀಶನ ಹತ್ಯೆ ಶ್ರೀರಾಮ ಸೇನೆಯ ಪ್ರಮೋದ್ ಮುತಲಿಕ್ ಹೇಳಿಕೆಗಳು, ಹುಬ್ಬಳಿಯ ಮೌಲ್ವಿಯ ಹೇಳಿಕೆ, ರಾಜ್ಯದ ಗುಪ್ತದಳ ಹೇಳುವಂತೆ ಹುಬ್ಬಳಿಯ ಗಲಭೆಯು ಬೆಂಗಳೂರಿನ ಡಿ.ಜೆ.ಹಳ್ಲಿ, ಉತ್ತರಹಳ್ಳಿಗಳಂತೆ ಪೂರ್ವ ನಿಯೋಜಿತ ಘಟನೆಗಳಾಗಿದ್ದು ಹಾಗಾದರೆ ಹಿಜಾಬ್ ನಿಂದ ಹಿಡಿದು ಹುಬ್ಬಳ್ಳಿಯ ಗಲಾಟೆವರೆಗೂ ಸಂತೋಷನ ಆತ್ಮಹತ್ಯೆಯಿಂದಿಡಿದು ಪಿ.ಎಸ್.ಐ ಅಕ್ರಮದವರೆಗೂ ಎಲ್ಲರೂ ಮಾತನಾಡಿದರೂ ಮುಖ್ಯಮಂತ್ರಿ ಏಕೆ ಮಾತನಾಡುತ್ತಿಲ್ಲ? ಕೇಂದ್ರದ ನಾಯಕರ ಒತ್ತಡವೋ ಹಿರಿಯ ನಾಯಕರ ಆಜ್ಞೆಯೋ ಅಥವಾ ಈ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕೆಂದು ಸಿ.ಎಂ ಗೆ ಅರ್ಥವಾಗುತ್ತಿಲ್ಲವೋ ಅಥವಾ ಇದುವರೆಗೆ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದ ಬೊಮ್ಮಾಯಿಯವರಿಗೆ ಸಿ.ಎಂ ಎಂಬ ಮಹತ್ವದ ಹುದ್ದೆಯನ್ನು ನಿರ್ವಹಿಸಲು ಆಗುತ್ತಿಲ್ಲವೋ, ಎಸ್.ಆರ್.ಬೊಮ್ಮಾಯಿ ಯಂತೆ ಮಗ ಬಸವರಾಜ್ ಬೊಮ್ಮಾಯಿ ಆಡಳಿತ ನಡೆಸಲು ಆಗುತ್ತಿಲ್ಲ ಏಕೆ? ಇಚಿತಹ ಹಲವರು ಪ್ರಶ್ನೆಗಳನ್ನು ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ಸ್ಭೆರಿದಂತೆ ರಾಜಕಾರಣಿಗಳು , ಬೇರೆ ಪಕ್ಷದ ಕಾರ್ಯಕರ್ತರು, ಜನ ಸಾಮಾನ್ಯರು ಪ್ರಶ್ನೆ ಮಾಡಬೇಕು? ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಷ್ಟು ಸಮಸ್ಯೆಗಳು ಒಚಿದೇ ಸಾರಿ ಬಂದಿರುವುದು ಇದೇ ಮೊದಲು ಎನ್ನಬಹುದು. ಜೊತೆಗೆ ಸಿ.ಎಂ. ಒಬ್ಬರು ಮೌನವಾಗಿರುವುದು ಇದೇ ಮೊದಲು ಎನ್ನಬಹುದು. ಪ್ರತಿಯೊಬ್ಬರು ಪ್ರಶ್ನೆಯನ್ನು ಮಾಡಲೇಬೇಕು. ಸಮಸ್ಯೆಗಳ ಮಧ್ಯೆಯು ಮೌನವಹಿಸುವುದನ್ನು ಕಂಡರೆ ಇತಿಹಸದಲ್ಲಿ ಒಬ್ಬ ರಾಜ ಅರಮನೆಗೆ ಬೆಂಕಿ ಬಿದ್ದಾಗ ಪಿಟೀಲು ನುಡಿಸುತ್ತಿದ್ದನಂತೆ ಹಾಗೆ ನಮ್ಮ ಕರ್ನಾಟಕದ ಪರಿಸ್ಥಿತಿಯಾಗಿದೆ. ಪಕ್ಷ ಮರೆತು ಪ್ರಶ್ನೆ ಮಾಡಿ ಪ್ರಜಾ ಪ್ರಭುತ್ವ ಉಳಿಸಿ.

ಜೈನ ಭೋಧನೆ ಮತ್ತು ಇಂದಿನ ಜಗತ್ತು

ಜೈನ ಧರ್ಮ ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆಯ ಅನುಸಾರ ವೃಷಭ ದೇವ ಈ ಸತ್ಯಗಳನ್ನು ಅರತ ಮೊದಲಿಗರೆನ್ನಬಹುದು. ಜೈನ ಧರ್ಮವು 23 ಜನ ತೀರ್ಥಂಕರರ ಸತ್ಯಗಳನ್ನೋಳಗೊಂಡ ಧರ್ಮವಾಗಿದ್ದು ವರ್ಧಮಾನ ಮಹಾವೀರರು ಕೊನೆಯ ತೀರ್ಥಂಕರರಾಗಿದ್ದಾರೆ. ಜೈನ ಎಂದರೆ ಜಿನ ಎಂಬ ಶಬ್ದದಿಂದ ಉತ್ಪತ್ತಿಯಾಗಿದ್ದು ಜಿನ ಎಂದರೆ ಇಂದ್ರಿಯಗಳನ್ನು ಗೆದ್ದವನು ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವರು. ಜೀನರು ಎಂದು ಕರೆಯುವುದರಿಂದ ಜೀನರಿಂದ ಉಪದೇಶಿಸಲ್ಪಟ್ಟ ಧರ್ಮವೇ ಜೈನ ಧರ್ಮ. ಜೈನ ಧರ್ಮವು ಸತ್ಯ ನೀತಿ , ಉತ್ತಮ ನಡವಳಿಕೆ, ಅಹಿಂಸೆ ಮತ್ತು ದಯೆಗಳನ್ನು ಜಗತ್ತಿಗೆ ಸಾರಿವೆ. ಬ್ರಹ್ಮಚರ್ಯ, ಪೂಜೆ ಧರ್ಮಮಾರ್ಗಗಳು ಜೈನ ಧರ್ಮದ ವಿಶೇಷತೆಯಿಂದ ಕೂಡಿದ್ದು ಜಗತ್ತಿಗೆ ಮಾದರಿಯಾಗಿದೆ.
ಇಂದಿನ ಜಗತ್ತು ಹಿಂಸೆ, ಕ್ರೂರತೆ, ಆಸೆ ಮತ್ತು ದುರಾಸೆಯಿಂದ ಕೂಡಿದ್ದು ಮನುಷ್ಯರು ಜಗತ್ತಿನೊಂದಿಗೆ ತನ್ನ ಹೋಲಿಕೆ ಮತ್ತು ಹೋರಾಟದಿಂದ ಮಾನಸೀಕ ಸ್ವಾಸ್ಥ್ಯವನ್ನು ಕಳೆದುಕೊಂಡಿದ್ದಾನೆ. ಮನುಷ್ಯನ ಈ ಮಾನಸಿಕ ಹೊಯ್ದಾಟಗಳು ಮತ್ತು ಕರ್ಮಾದಿಬಂಧಗಳು, ಆಧುನಿಕ ಆಸೆಗಳು ಮತ್ತು ಜಗತ್ತಿನ ಇಂದಿನ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜೈನ ಧರ್ಮದ ತತ್ವಗಳು ಮಾನವನ ಮನಸ್ಸಿಗೆ ಮುಟ್ಟಬೇಕು. ಪ್ರಾಣಿ ಹಿಂಸೆಯಂತಹ ಆಚರಣೆಗಳು ಮನುಷ್ಯನ ಮೂಢನಂಬಿಕೆಗಳನ್ನು ಹೋಗಲಾಡಿಸುವುದು. ಜೈನ ಧರ್ಮದಲ್ಲಿ ಮಾರ್ಗಗಳುಂಟು. ಇಂದಿನ ಜಗತ್ತಿನಲ್ಲಿ ಧರ್ಮ ಮತ್ತು ದೇವರಿಂದ ದೂರನಿಲ್ಲುವ ನಾಸ್ತಿಕವಾದವು ಹೆಚ್ಚಾಗುತ್ತಿದ್ದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ದೇವರನ್ನು ಸುಳ್ಳು ಎಂದು ಸಾರುವ ಜನ ಒಂದುಕಡೆಯಾದರೆ, ಧರ್ಮಾಧರಿತ ಜನ ಇನ್ನೋಂದು ಕಡೆ, ಬಲಪಂಕ್ತಿಯ ಮತ್ತು ಎಡ ಪಂಕ್ತಿಯ ನಡುವೆ ದೇವರನ್ನು ಜಗತ್ತಿನ ಕರ್ತೃ ಅಲ್ಲ ಎಂದು ನಂಬುವ ನಾಸ್ತಿಕರು ಹೆಚ್ಚಾಗಿದ್ದು ಈ ವಾದವನ್ನು ಜೈನ ಧರ್ಮವು ಕ್ರಿ.ಪೂ.6ನೇ ಶತಮಾನದಲ್ಲಿ ಹೇಳಿದ್ದು ದೇವರನ್ನು ಒಪ್ಪದಿದ್ದರೂ ಕೂಡ ಕರ್ಮ ಬಂಧಗಳಿಂದ ಮುಕ್ತವಾಗಲು ಪೂಜೆ ಮತ್ತು ಆರಾಧನೆ ಬಗ್ಗೆ ಜೈನ ಧರ್ಮವು ಸಸ್ಯಹಾರದ ಮಹತ್ವವನ್ನು ಸಾರಿದ್ದು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮನುಷ್ಯ ಅತ್ಯಂತ ಸರಳ ರೀತಿಯಿಂದ ಬೇರೆಬೇರೆ ತೊಂದರೆಯಾಗದಂತೆ ಬದುಕ ಬೇಕೆಂದು ಸಮ್ಯಕದರ್ಶನ, ಸಮ್ಯಕ ಜ್ಞಾನ, ಸಮ್ಯಕ ಚಾರಿತ್ರ್ಯ ಈ ಮೂರು ರತ್ನಗಳನ್ನು ಪಾಲಿಸಲು ಮತ್ತು ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಪರಿಗ್ರಹ ಮತ್ತು ಗೃಹಸ್ಥರಿಗೆ ಏಕಪತ್ನಿತ್ವ ಮತ್ತು ಸಂತೋಷದ ಜೊತೆಗೆ ಕರ್ಮಮಾರ್ಗಗಳನ್ನು ಅತ್ಯಂತ ಸರಳ ಆಡುಭಾಷೆಯಲ್ಲಿ ಮಾನವನಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದೆ. ಇಂದಿನ ಆಧುನಿಕತೆಯ ಜೀವನದ ಒತ್ತಡದ ಮಧ್ಯೆ ಕಷ್ಟಕರವಾದ ಧರ್ಮಗಳನ್ನು ಪಾಲಿಸುವುದು ಅಸಾಧ್ಯದ ಮಾತು. ಅತ್ಯಂತ ಸರಳ ಮತ್ತು ಮಾರ್ಗಯೋಗ್ಯವಾದ ಭೋಧನೆಯುಳ್ಳ ಜೈನ ಧರ್ಮವನ್ನು ಕೆನಡಾ, ಹಾಂಗ್‍ಕಾಂಗ್, ಜಪಾನ್, ಸಿಂಗಾಪುರ, ಸೇರಿದಂತೆ ಹಲವಾರು ದೇಶಗಳು ಮತ್ತು ಹಲವಾರು ಜನರು ಈ ಧರ್ಮವನ್ನು ಅಪ್ಪಿಕೊಂಡಿದ್ದಾರೆ. ಆಧುನಿಕತೆಯ ಬದುಕಿಗೆ ಹೊಂದಿಕೆ ಮತ್ತು ಸುಲಭ ಮೋಕ್ಷಕ್ಕೆ ದಾರಿಯಾದ ಜೈನ ಧರ್ಮವು ವಿಶ್ವವನ್ನು ಆಳುವಂತಾಗಲಿ. ಶಾಂತಿ, ನೆಮ್ಮದಿಯ ಬದುಕು ಮನುಷ್ಯನಿಗೆ ದೊರೆತು ಮಹಾವೀರರ ಆಸೆ ನೆರವೇರಲಿ.

ಬಸವ ತತ್ವಗಳು ನೋಟಕ್ಕಿಂತ ಮನಕ್ಕೆ ಇಳಿಯಬೇಕು !

ಬಸವೇಶ್ವರ ತತ್ವಗಳು ಮತ್ತು ವಿಚಾರಗಳು ಜಗತ್ತಿಗೆ ಬೆಳಕು ನೀಡುವಷ್ಟು ಪ್ರಖರವಾಗಿದ್ದು, ಮಾನವಕುಲದ ಅಭಿವೃದ್ಧಿ ಮತ್ತು ಭವಿಷ್ಯಕ್ಕಾಗಿ ವಚನಗಳ ಸೃಷ್ಠ ಆಗಿದೆ ಅನ್ನಬಹುದು. ಬಸವಾದಿ ಶರಣರ ವಚನಗಳ ಮೂಲಕ ಸಾರಿದ ತತ್ವಗಳು ಲಿಂಗಾಯತ-ವೀರಶೈವ ಸೇರಿದಂತೆ ಎಲ್ಲಾ ಧರ್ಮಿಯರಿಗೂ ಅನ್ವಯಿಸುತ್ತವೆ.12ನೇ ಶತಮಾನದಲ್ಲಿ ಬಸವಣ್ಣ,ಅಲ್ಲಮಪ್ರಭು ಮತ್ತು ಅಕ್ಕ ಮಹಾದೇವಿ ಸೇರಿದಂತೆ ಎಲ್ಲಾ ಶರಣರು ಕೂಡ ಜಗತ್ತಿನ ಅಂದಕಾರವನ್ನು ಹೋಗಲಾಡಿಸಿ ಮಾನವಕುಲದ ಆತ್ಮದಲ್ಲಿ ಜ್ಞಾನದ ಜ್ಯೋತಿ ಬೆಳೆಗೆಸುವ ಪ್ರಯತ್ನ ಮಾಡಿದ್ದರು. ಹಿಂದೂ ಧರ್ಮದ ಜಾತಿ ಪದ್ದತಿಯನ್ನು ವಿರೋಧಿಸಿದ್ದು ವಚನ ಸಾಹಿತ್ಯ. ಶರಣರು ಅಚಿದೇ ಕೆಳಜಾತಿಯ ಮತ್ತು ಮೇಲ್ಜಾತಿ ಜೊತೆಗೆ ವಿವಾಹ ಮಾಡಿದ್ದು, ಮೂರ್ತಿ ಪೂಜೆ ವಿರೋಧಿಸಿದರು. ಮೇಲು-ಕೀಳು ವಿರೋಧಸಿದರು,ಲಿಂಗ ಬೇಧ ಮಾಡಲಿಲ್ಲ, ಹೆಣ್ಣಿಗೂ ಸ್ವಾತಂತ್ರ್ಯ ಇದೆ ಅಂತ ತೊರಿಸಿದ ಹೆಮ್ಮೆ ಅನುಭವ ಮಂಟಪಕ್ಕೆ ಇದೆ. ಅಕ್ಕ ಮಹಾದೇವಿಗೆ ಅವಕಾಶ ನೀಡುವ ಮೂಲಕ ಹೆಣ್ಣು ಮಕ್ಕಳು ಮನೆಯಲ್ಲೂ ಮತ್ತು ಸಮಾಜದಲ್ಲೂ ಮಾತನಾಡಬಹುದು ಅಂತ ಜಗತ್ತಿಗೆ ತೊರಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. 6ನೇ ಶತಮಾನದಲ್ಲಿ ಜಗತ್ತಿನಲ್ಲೂ ಧರ್ಮ ಉದಯದ ಪರ್ವ ಅಂದರೆ 12ನೇ ಶತಮಾನವನ್ನು ಶರಣರ ಮೂಲಕ ಜಗತ್ತಿಗೆ ಬೆಳಕು ನೀಡಿದ ಯುಗ ಅಂತ ಕರೆಯಬಹುದು. ಆತ್ಮ ಮತ್ತು ಆತ್ಮ ಶುದ್ಧಿ ಜೊತೆಗೆ ಪರರ ಆತ್ಮಕ್ಕೂ ಲೇಸು ಬಯಸುವುದೇ ಶ್ರೇಷ್ಠ ಮತ್ತು ಕಾಯಕ ನಿಷ್ಠೆ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹನೀಯರು ಶರಣರು.
ಶರಣರ ತತ್ವಗಳು ಜಗತ್ತಿಗೆ ಬೆಳಕಾಗಬೇಕಾಗಿತ್ತು ಆದರೆ ವೀರಶೈವ ಲಿಂಗಾಯತರಿಗೆ ಸೀಮಿತವಾದವು. ಎಂಬಿಎ ಅಂತಹ ಪಠ್ಯಕ್ರಮದಲ್ಲಿ ವಚನ ಸಿದ್ದಾಂತಗಳು ಸೇರಬೇಕಾಗಿದ್ದವು ಆದರೆ ಲಿಂಗಾಯತ ಗ್ರಂಥಾಯಲಯದಲ್ಲಿ ದೂಳು ಹಿಡಿಯುತ್ತಿವೆ. ಮೂರ್ತಿ ಪೂಜೆ ವಿರೋಧಿಸಿದ ಬಸವಣ್ಣನವರ ಮೂರ್ತಿಗಳನ್ನು ರಾಜ್ಯ,ರಾಷ್ಟ್ರ ಮತ್ತು ಅಚಿತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಡೆ ಸ್ಥಾಪಿಸಿದರೂ ಹೊರತು ಅವರ ತತ್ವಗಳನ್ನು ಜನರ ಮನಸ್ಸಿಗೆ ಮುಟ್ಟಿಸಲೇ ಇಲ್ಲ. ಬಸವಣ್ಣ ಸೇರಿದಂತೆ ಶರಣರ ಭಾವಚಿತ್ರಗಳು ದೇವರ ಮನೆಸೇರಿದವು ಹೊರತು ಅವರ ತತ್ವಗಳು ಮನಸೇರಲೇ ಇಲ್ಲ. ವಚನಗಳ ಪುಸ್ತಕಗಳು,ಬಸವಾದಿ ಶರಣರ ಪುಸ್ತಕಗಳು ಅಲಂಕಾರಿಕ ವಸ್ತುಗಳಂತೆ ಮನೆಯಲ್ಲಿ ಇವೆ ಹೊರತು ಅವುಗಳನ್ನು ಓದಿ ಪಾಲಿಸುತ್ತಿಲ್ಲ. ಮಕ್ಕಳಿಗೆ ವಚನಗಳ ಮಹತ್ವ ಹೇಳುವಂತಹ ಪ್ರಯತ್ನವನ್ನು ಪಾಲಕರು ಮಾಡುತ್ತಿಲ್ಲ. ಇಡೀ ಜೀವನದ ಸಾರಾಂಶವು ವಚನ ಸಾಹಿತ್ಯದಲ್ಲಿ ಅಡಗಿದೆ. ವೇಧ,ಭಗವತ್ತಗೀತೆ,ಕುರಾನ್ ಮತ್ತು ಬೈಬಲ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳಲ್ಲಿ ಇರುವ ಅಮೃತಕ್ಕಿಂತ ಶ್ರೇಷ್ಠ ಅನುಭವ ಅಮೃತ ವಚನಗಳಲ್ಲಿ ಇದ್ದರೂ ಕೂಡ ಅದನ್ನು ಮನೆ-ಮನಗಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ. ಬಸವ ಜಯಂತಿ ಅಂದು ಸಿಹಿಹಂಚಿ ಸುಮ್ಮನಾಗುವುದೇ ಬಸವಣ್ಣಗೆ ಮಾಡುವ ಅಪಮಾನವಾಗಿದೆ.
ಒಂದು ಕಡೆ ನಾವು ಬಸವಣ್ಣ ಅನುವಾಯಿಗಳು ಅಂತ ಹೇಳುತ್ತಲ್ಲೇ ಬಸವ ತತ್ವಗಳನ್ನು ಆಚರಸದೇ ಮತ್ತು ಬಸವ ವಿರೋಧಿ ಪದ್ಧತಿಗಳನ್ನು ಆಚರಣೆ ತರುವ ಮೂಲಕ ಸಾಗರದ ಆಚೆಗೂ ಮುಟ್ಟಬೇಕಾದ ಬಸವ ತತ್ವಗಳನ್ನು ಕಟ್ಟಿ ಹಾಕಿರುವುದು ನಮ್ಮವರೇ ಅನ್ನುವಷ್ಟು ಸತ್ಯ ಇದೆ. ಧಾರ್ಮಿಕ ಆಚರಣೆಯಿಂದ ಹಿಡಿದು, ದೇವರ ಬಗ್ಗೆ ಸ್ವಷ್ಟ ಪರಿಕಲ್ಪನೆಯನ್ನು ಕಂಡುಕೊಂಡು ಜಗತ್ತಿಗೆ ವಚನಗಳ ಮೂಲಕ ಸಾರಿದವರು ಶರಣರು ಆದರೆ ಇಂದು ಅವರು ಪೂಜೆಗೆ ಮಾತ್ರ ಸೀಮಿತವಾಗಿದ್ದಾರೆ. ಆಡಳಿತ, ರಾಜಕೀಯ ಮತ್ತು ಧರ್ಮ ಹಾಗೂ ಪದ್ದತಿಗಳ ಬಗ್ಗೆ ಅತ್ಯಂತ ಸರಳ ರೂಪದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ.ಆದರೆ ಅವುಗಳನ್ನು ಮುಟ್ಟಿಸುವಲ್ಲಿ ಧರ್ಮ ಗುರುಗಳು, ಮಠಾದೀಶರು, ಸಮಾಜ ಮುಂಡರು, ರಾಜಕೀಯ ನಾಯಕರು ಮತ್ತು ಧರ್ಮ ಪಾಲಕರು ಸೊತ್ತಿದ್ದಾರೆ. ಇಂದಿನ ಆಧುನಿಕ ಭಾರತವು ಬಸವ ಭಾರತ ಆಗಬೇಕಿತ್ತು ಆದರೆ ಪ್ರಚಾರದ ಕೊರತೆಯಿಂದ ಆಗಿಲ್ಲ.
ಬಸವ ಸಮಿತಿ, ಕೂಡಲಸಂಗಮ ಮಠ ಸೇರಿದಂತೆ ಕೇಲ ಪ್ರಯತ್ನಗಳು ನಡೆದರೂ ಕೂಡ ಇನ್ನುಳಿದಂತೆ ದೊಡ್ಡ ಮಟ್ಟದ ಪ್ರಯತ್ನಗಳು ಎಲ್ಲರಿಂದ ನಡೆದರೇ ಮಾತ್ರ ಬಸವಣ್ಣ ಪುಸ್ತಕದಿಂದ ಹೊರ ಬಂದು ಜಗತ್ತಿಗೆ ಬೆಳಕಾಗಿ ಜನಸಾಮಾನ್ಯರ ಮನ ಸೇರುತ್ತಾರೆ-ಆಗ ಜಾತಿ,ಧರ್ಮ ಭೇದವಿಲ್ಲದ,ಸಮಾನತೆಯ ಮತ್ತು ಉದ್ಯೋಗಸ್ಥ,ಮೂಡನಂಬಿಕೆ ಇಲ್ಲದ ಸಮಾಜ ನಿರ್ಮಾಣವಾಗುತ್ತದೆ.

ಅರ್ಥ ಕಳೆದುಕೊಳ್ಳುತ್ತಿರುವ ಕಾರ್ಮಿಕ ದಿನ

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಮೇ 1 ನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ದಿನ ಎಂದು ಆಚರಿಸಲಾಗುತ್ತದೆ. ಈ ಕಾರ್ಮಿಕ ದಿನಾಚರಣೆಯ ಹಿನ್ನಲೆಯು ಆಸ್ಟ್ರೇಲಿಯಾ ಮತ್ತು ಅಮೇರಿಕಾ ದಿಂದ ಹುಟ್ಟಿದ್ದು ಆದರೇ ಅಲ್ಲಿ ಮೇ 1 ರಂದು ಕಾರ್ಮಿಕ ದಿನಾಚರಣೆ ಆಚರಿಸುವುದಿಲ್ಲ. ಕೆಂಪು ವರ್ಣೀಯ ಅಥವಾ ಕಮ್ಯುನಿಸ್ಟ್ ತತ್ವ ಸಿದ್ದಾಂಥಗಳ ಒತ್ತಡವು ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಮೇಲೆ ಬಲವಂತವಾಗಿ ಹೇರಲ್ಪಡುತ್ತವೆ. ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಮೇ 1ನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ದಿನವೆಂದು ಆಚರಿಸಿ ಕಾರ್ಮಿಕರಿಗೆ ಸಿಹಿ ಹಂಚಿಯೋ ಅಂದು ರಜಾ ನೀಡಿಯೋ ಸುಮ್ಮನಾಗುತ್ತಾರೆ. ಅದೇ ಚೀನಾ , ಅಮೇರಿಕಾ ಆಸ್ಟ್ರೇಲಿಯಾ ನಂತಹ ಮುಂದುವರೆದ ದೇಶಗಳು ಕಾರ್ಮಿಕ ವರ್ಗವನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡುತ್ತಾರೆ. ಅಂತರ್ ರಾಷ್ಟ್ರೀಂiÀi ಮಾನವ ಹಕ್ಕುಗಳು ಸಮಾನ ದುಡಿಮೆಗೆ ಸಮಾನ ವೇತನ ನೌಕರನಂತೆ ಸಾಮಾನ್ಯ ಕಾರ್ಮಿಕನಿಗೆ ನೈಸರ್ಗಿಕ ಭತ್ಯೆಗಳನ್ನು ನೀಡಬೇಕೆಂದು ಕಮ್ಯುನಿಸ್ಟ್ ವಾದವನ್ನು ನಮ್ಮಂತಹ ಪ್ರಗತಿ ಶೀಲ ದೇಶಗಳ ಮುಂದೆ ಮಾನವೀಯತೆ ಮರೆಯಾಗಿರುತ್ತವೆ. ಭಾರತದಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲು ಮೇ 1 ಏಕೆಂದರೆ ಉತ್ತರವಿಲ್ಲ. 1886ರ ಸುಮಾರಿಗೆ ಮೇ 1 ರಂದು ಆಸ್ಟ್ರೇಲಿಯಾದಲ್ಲಿ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಮಾತ್ರ ಸಾಧ್ಯ ಎಂಬ ಹೋರಾಟ ಹೊತ್ತಿಕೊಂಡು ಅಮೇರಿಕದಲ್ಲಿಯೂ ಕೂಡ ಕಾರ್ಮಿಕ ದಂಗೆಗಳು ಮೇ 1 ರಿಂದ ಪ್ರಾರಂಭವಾಗಿದ್ದರಿಂದ ಮೇ 1ನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ದಿನವೆಂದು ಆಚರಿಸಲಾಗುತ್ತದೆ. ಆದರೇ ಅಮೇರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಅಲ್ಲ. ಭಾರತ ಮಟ್ದದಲ್ಲಿ ಹೇಳುವುದಾದರೇ ಕಾರ್ಮಿಕ ದಂಗೆಗಳು ಹಲವಾರು ನಡೆದಿವೆ. ಸೆಣಬು ಕಾರ್ಖಾನೆ ಕಾರ್ಮಿಕರ ದಂಗೆ, ರೈಲ್ವೆ ಕಾರ್ಮಿಕರ ದಂಗೆ, ಜವಳಿ ಕಾರ್ಮಿಕರ ದಂಗೆ , ಸರ್ಕಾರಿ ಮುದ್ರಣಾಲಯದ ಕೆಲಸಗಾರರ ದಂಗೆ ಹೀಗೆ ಬೆಳೆಯುತ್ತಾ ಹೋಗುತ್ತದೆ. ಅದರಲ್ಲಿಯೂ ಇತ್ತೀಚೆಗೆ ಅಂದರೆ ತಮಿಳುನಾಡಿನಲ್ಲಿ ದಿವಂಗತ ಜಯಲಲಿತ 2003 ರಲ್ಲಿ ಮುಷ್ಕರ ನಿರತ 1 ಲಕ್ಷದ 76 ಸಾವಿರ ಸರ್ಕಾರಿ ನೌಕರರು ಮತ್ತು ಶಿಕ್ಷಕರನ್ನು ವಜಾ ಮಾಡಿದ್ದು ಹೋರಾಟದ ಬಿಸಿಯಿಂದ ಮತ್ತೆ ಕೆಲಸಕ್ಕೆ ತೆಗೆದುಕೊಂಡಿದ್ದು ಇತಿಹಾಸದ ಪುಟದಲ್ಲಿ ಸ್ಪಷ್ಟವಾಗಿದ್ದರೂ ಕೂಡ ಮೇ 1ನ್ನು ನಾವೇಕೆ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಬೇಕು?
ಇನ್ನೂ ಕಾರ್ಮಿಕ ದಿನಾಚರಣೆಯ ಅರ್ಥ ವ್ಯಾಪ್ತಿಯನ್ನು ಅರ್ಥೈಸುವುದಾದರೆ ಭಾರತವು ಅತ್ಯಂತ ಸಂಕೀರ್ಣ ಅರ್ಥ ವ್ಯವಸ್ಥೆಯ ದೇಶವಾಗಿದ್ದು ದೇಶದ ಅರ್ಥ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು, ಖಾಸಗೀ ನೌಕರರು ಮತ್ತು ಅಸಂಘಟಿತ ಕಾರ್ಮಿಕ ವರ್ಗ ಎಂದು 3 ವಲಯಗಳಾಗಿ ವಿಂಗಡಿಸಬಹುದು. ಅಸಂಘಟಿತ ವಲಯ ಎಂದರೆ ಗಾರ್ಮೆಂಟ್ಸ್ ಉಧ್ಯಮ, ಖಾಸಗೀ ವಾಹನ ಚಾಲಕರು, ಗುತ್ತಿಗೆ ಆಧಾರದ ನೌಕರರು ಮತ್ತು ಸಣ್ಣ ಪುಟ್ಟ ಕಛೇರಿ, ಅಂಗಡಿಗಳ ಕೆಲಸಗಾರರು ಸೇರುತ್ತಾರೆ. ಈ ವಲಯದಲ್ಲಿ ಕೆಲಸದ ಅತಂತ್ರದ ಜೊತೆಗೆ ಹಲವಾರು ಸವಾಲುಗಳನ್ನು ಕಾರ್ಮಿಕ ವರ್ಗವು ಅನುಭವಿಸುತ್ತಿದೆ. ಸರ್ಕಾರವಾಗಲೀ, ಉಧ್ಯಮದಾರರಾಗಲೀ, ಕಾರ್ಮಿಕವರ್ಗದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಇನ್ನು ಕಾರ್ಮಿಕರ ಹೆಸರಿನಲ್ಲಿ ಕೆಲವು ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡು ಕಾರ್ಮಿಕರ ಹಿತ ಕಾಯುವ ಬದಲು ತಮ್ಮ ಲಾಭಿ ಮಾಡಿಕೊಳ್ಳುವುದು. ಮೋಜು ಮಸ್ತಿಯಲ್ಲಿ ತೊಡಗುವುದು, ಮಾಲೀಕರ ಪರವಾಗಿ ನಿಂತು ಕಾರ್ಮಿಕರಿಗೆ ಅನ್ಯಾಯ ಮಾಡುವುದೇ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕಾರ್ಮಿಕರು ದಿನದ 10 ರಿಂದ 15 ಗಂಟೆಗಳ ಕಾಲ ಪ್ರಾಣಿಗಳಂತೆ ದುಡಿಯುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಏಕೆಂದರೆ ಜೀವನ ನಿರ್ವಹಣೆಗೆ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣ, ಬೆಲೆ ಏರಿಕೆಯಂತಹ ಪರಿಸ್ಥಿತಿಗಳು ಸಾಮಾನ್ಯ ಕಾರ್ಮಿಕನ ಮೇಲೆ ಬರೆ ಎಳೆಯುತ್ತಿದೆ. ಜೊತೆಗೆ ಭಾರತದಂತಹ ಅಭಿವೃದ್ಧಿ ಶೀಲ ದೇಶಗಳಲ್ಲಿ ನವ ಉಧ್ಯಮ ಸೇರಿದಂತೆ ಸಣ್ಣ ಮತ್ತು ಮಧ್ಯಮ ಗಾತ್ರದ ಉಧ್ಯಮ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಹೀಗೆ ಇರುವಾಗ ರಜಾಕ್ಕಾಗಿ, ಸಿಹಿಗಾಗಿ, ಮೋಜು ಮಸ್ತಿಗಾಗಿ ಮೇ 1 ನ್ನು ಕಾರ್ಮಿಕ ದಿನ ಎಂದು ಆಚರಿಸಲಾಗುತ್ತಿದೆ.

ಎಲ್ಲಿದ್ದೇ ಇಲಿಯತನಕ-ಸೋಗಲಾಡಿ ರಾಜಕಾರಣ

ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ 2023ಕ್ಕೆ ಮುಗಿಯುತ್ತದೆ.ಇದರ ಮಧ್ಯ ಕೇಲವು ರಾಜಕಾರಣಿಗಳು ಮತ್ತು ರಾಜಕೀಯ ಚಿಂತಕರ ಅಭಿಪ್ರಾಯದಂತೆ ಇದೇ ವರ್ಷ ನವಂಬರ್ ಅಥವಾ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಬಹುದು ಅಂತ ರಾಜಕೀಯ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಬಿಜೆಪಿಯು ಕೂಡಾ ಸಂಪುಟ ವಿಸ್ತರಿಸುವ ಬದಲಿಗೆ ಚುನಾವಣೆಗೆ ಹೋಗುವ ಇಂಗಿತ ವ್ಯಕ್ತವಾದಂತೆ ಕಾಣುತ್ತದೆ. ರಾಜ್ಯ ಸೇರಿದಂತೆ ದೇಶದಲ್ಲಿ ಈ ಹಿಂದಿನ 4 ವರ್ಷಗಳಲ್ಲಿ ಹಲವಾರು ಬದಲಾವಣೆಗಳು ಕಂಡುಬಂದಿವೆ. ಕರೋನ ಇಡೀ ಜಗತ್ತನ್ನು 15ರಿಂದ 20 ವರ್ಷ ಹಿಂದಕ್ಕೆ ಒಯ್ಯುವ ಜೊತೆಗೆ ಮಾನವಕುಲಕ್ಕೆ ಭಯದ ಪರಿಚಯ ಮಾಡಿಸಿದೆ. ಇದು ದೇಶ ಮತ್ತು ರಾಜ್ಯದಲ್ಲೂ ನಡೆದಿದ್ದು, ಅಭಿವೃದ್ಧಿ ಮಾಡುವುದಕ್ಕಿಂತ ಬದುಕುವುದು ಮತ್ತು ಬದುಕಿಸುವುದೇ ದೊಡ್ಡ ಸಾಧನೆ ಆಗಿತ್ತು ಕರೋನ ಮೊದಲ ಅಲೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಕೊಟ್ಟಿತ್ತು ಎರಡನೆಯ ಅಲೆಗೆ ಕರ್ನಾಟಕ ಸ್ಭೆರಿಂದಂತೆ ಭಾರತವು ಸಿದ್ದವಾಗಿತ್ತು. ಈಗ ಮತ್ತೆ ಮೂರನೆಯ ಅಲೆಯ ಸದ್ದು ಮಾಡುತ್ತಿದೆ. ಇದರ ಮಧ್ಯ ಚುನಾವಣೆಗಳು ರಾಜಕಾರಣಿಗಳ ಪಕ್ಷಾಂತರ, ಅಧಿಕಾರಕ್ಕಾಗಿ ರಸ್ತೆಗಿಳಿದು ಜಗಳ ಹೀಗೆ ಮಾಡುತ್ತಾ ಕಾಲಕಳೆದ ರಾಜಕಾರಣಿಗಳು ಚುನಾವಣೆ ಹತ್ತಿರ ಬರುತ್ತಲ್ಲೆ ಜನರತ್ತ ಮುಖ ಮಾಡಿದ್ದಾರೆ. ಜೀವನವನ್ನೆ ನಡೆಸಲು ಕಷ್ಟವಾದಾಗ, ತಮ್ಮವರೇ ಸತ್ತಾಗ ಮುಖ ನೋಡಲು ಆಗದಿದ್ದಾಗ ಮತ್ತು ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಅನ್ನಿಸಿದ್ದಾಗ ಕಾಣದ ರಾಜಕಾರಣಿಗಳು ಈಗ ಕಷ್ಟ ಕೇಳಲು ಮನೆಗೆ ಬರುತ್ತಿದ್ದಾರೆ.
ಬಿಜೆಪಿ,ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯ ತಯಾರಿಗೆ ಸಿದ್ದತೆ ನಡೆಸುತ್ತಿವೆ. ಕಾಂಗ್ರೇಸ್ ಪಕ್ಷವು ಮೇಕೆದಾಟು ಹೋರಾಟ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ಹೋರಾಟಗಳು 2023 ಚುನಾವಣೆಗೆ ಬೆಂಬಲವಾಗಿವೆ ಹೊರತು ರಾಜ್ಯಕ್ಕೆ ಅನುಕೂಲವಾಗಲಿ ಅಂತ ಇಲ್ಲ. ಇನ್ನೂ ಜೆಡಿಎಸ್‍ವು ಜನತಾ ಜಲಧಾರೆ ಎಂಬ ಕಾರ್ಯಕ್ರಮ ರೂಪಿಸಿಕೊಂಡು ಜನತೆಯ ಹತ್ತಿರವಾಗುತ್ತಿದ್ದಾರೆ. ಕುಮಾರಸ್ವಾಮಿ ಅದೇ ಹಳೆಯ ವರ್ಷೆ ಪ್ರಾರಂಭಿಸಿದ್ದಾರೆ- ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರದಿದ್ದರೆ ಪಕ್ಷವನ್ನು ವಿಸರ್ಜಸುತ್ತೇವೆ ಅನ್ನುತ್ತಲ್ಲೆ ಕಣ್ಣಿರು ಹಾಕುತ್ತಿದ್ದಾರೆ. ಹಿಂದೆ ಯಡ್ಡಿಯೂರಪ್ಪ ಅಧಿಕಾರ ನೀಡದೇ ಮೋಸ ಮಾಡಿದ ಕುಮಾರಸ್ವಾಮಿ ಮತ್ತು ಕಾಂಗ್ರೇಸ್‍ಗೂ ಅನ್ಯಾಯ ಮಾಡಿದ್ದಾರೆ ಆದರೂ ಕೂಡ ತಾವು ಅತ್ಯಂತ ಪ್ರಾಮಾಣಿಕ ಸಿದ್ದಾಂತವಾದಿ ರಾಜಕಾರಣಿಯಂತೆ ಪೋಜ್ ಕೋಡುತ್ತಿದ್ದಾರೆ. ತಾವೇ ಮುಖ್ಯಮಂತ್ರಿಯಾದಾಗ ಕೇಳಿದ ಸಮಸ್ಯೆಗಳನ್ನು ಬಗ್ಗೆ ಹರಿಸದೇ ಈಗ ಅವುಗಳನ್ನೆ ಕಾಂಗ್ರೇಸ್ ಮತ್ತು ಬಿಜೆಪಿ ಮೇಲೆ ಹಾಕುತ್ತಾ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.ಕುಮಾರ ಸ್ವಾಮಿ ಒಮ್ಮೆ ಬಿಜೆಪಿ ವಿರೋಧಿಸಿದ್ದರೆ ಮತ್ತೊಮ್ಮೆ ಹೋಗಳುತ್ತಾರೆ. ಇತ್ತ ಕಾಂಗ್ರೇಸ್ ಜೊತೆಗೂ ಅದೇ ರೀತಿ ನಡೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವು ಕನ್ನಡಿಗರ ಪಕ್ಷ ಅನ್ನುವುದಕ್ಕಿಂತ ದೇವೆಗೌಡರ ಕುಟುಂಬ ಪಕ್ಷ ಅನ್ನಬಹುದು. ಕುಮಾರಸ್ವಾಮಿಯ ನಾಟಕಗಳು ಚುನಾವಣೆ ಹತ್ತಿರವಾಗುತ್ತಲ್ಲೆ ಹೆಚ್ಚಾಗುತ್ತವೆ. ಇದೇ ಸಾಲಿನಲ್ಲಿ ಆಮ್ ಆದ್ಮೀ ಪಕ್ಷ ಮತ್ತು ಕೆ.ಆರ್.ಎಸ್ ಪಕ್ಷಗಳು ಕೂಡ ಚುನಾವಣೆ ಗೆಲ್ಲಬೇಕು ಅನ್ನುವ ಒಚಿದೇ ಕಾರಣಕ್ಕೆ ಒಂದಿಷ್ಟು ಕ್ರಿಯಾಶೀಲವಾಗಿ ಕಾಣುತ್ತಿವೆ.ಇಲ್ಲಿಯವರೆಗೆ ಸುಮ್ಮನಿದ್ದು ಚುನಾವಣೆ ಹತ್ತಿರ ಬರುತ್ತಲ್ಲೆ ಹೋರಾಟ, ಸೇವೆ ಮತ್ತು ಕಾರ್ಯಕ್ರಮಗಳು ಮತ್ತು ಭವಿಷ್ಯದ ದೃಷ್ಠಿಕೋನಗಳು ಹೀಗೆ ಹೇಳುತ್ತಾ ಜನರಿಗೆ ಹತ್ತಿರವಾಗುತ್ತಿರುವ ರಾಜಕಾರಣಿಗಳ ಸೋಗಲಾಡಿತನವನ್ನು ಜನ ಅರ್ಥ ಮಾಡಿಕೊಳ್ಳಬೇಕು. ಹಿರಿಯ ಕಿರಿಯ ರಾಜಕಾರಣಿಗಳು ಕ್ಷೇತ್ರ ಸುತ್ತುವ ಜೊತೆಗೆ ಜನರ ಮನೆ ಬಾಗಲಿಗೆ ಹೋಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಸಮಯಸಾಧಕರು ತಮ್ಮ ಲಾಭಕ್ಕಗಿ ಜನರನ್ನು ಮರಳು ಮಾಡಲು ಬರುತ್ತಿದ್ದಾರೆ.
ಚುನಾವಣೆ ಹತ್ತಿರ ಬರುತ್ತಲ್ಲೆ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತವೆ, ಯುವ ನಾಯಕರು ಹುಟ್ಟಿಕೊಳ್ಳುತ್ತಾರೆ, ಸಮಾಜ ಸೇವಕರು ಹುಟ್ಟಿಕೊಳ್ಳುತ್ತಾರೆ ಹಾಗೂ ಪತ್ರಿಕೆಗಳು ಮಾಧ್ಯಮಗಳು ಹುಟ್ಟಿಕೊಳ್ಳುತ್ತವೆ ಚುನಾವಣೆ ಮುಗಿದ ನಂತರ ಎಲ್ಲವು ಮಾಯ ! ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮತ್ತು ಹೊಸ ಪಕ್ಷಗಳು ಚುನಾವಣೆಗೆ ಕೊಡುವಷ್ಟು ಮಹತ್ವವನ್ನು ಅಭಿವೃದ್ದಿಗೆ ನೀಡಿದ್ದರೆ ಸಮಸ್ಯೆಮುಕ್ತ ಜಗತ್ತಿನ ನಂಬರ್ ಒನ್ ದೇಶ ನಮ್ಮದಾಗಿರುತ್ತಿತ್ತು.ಜನ ಮರಳೋ ಜಾತ್ರೆ ಮರಳೋ ಅನ್ನುವಂತೆ ಜನತೆಯನ್ನು ಮರಳು ಮಾಡುತ್ತಿದ್ದಾರೆ ರಾಜಕಾರಣಿಗಳು. ಚುನಾವಣೆ ದೂರ ಇರುವಾಗ ಒಂದು ರೂಪಾಯಿ ಖರ್ಚು ಮಾಡದ ರಾಜಕಾರಣಿಗಳು ಚುನಾವಣೆ ಬರುತ್ತಲ್ಲೆ ಕೋಟಿ-ಕೋಟಿ ಖರ್ಚು ಮಾಡುತ್ತಾರೆ.ಕೇಳಿದ್ದು ಕೊಡುತ್ತಾರೆ. ಹೀಗೆ ಚುನಾವಣೆಗೆಗಾಗಿ ಚರ್ಚು ಮಾಡುವುದನ್ನೆ ಕೇಲವರು ಭವಿಷ್ಯದ ದೃಷ್ಟಿ ಅಥವಾ ಸಮಾಜಸೇವೆ ಅಂತ ಹೇಳುತ್ತಾರೆ.ಚುನಾವಣೆ ಮುಗಿದ ನಂತರ ನಾಪತ್ತೆ ಆಗುವ ರಾಜಕಾರಣಿಗಳು ಅಂದರೆ ಗೆದ್ದªರು ಸೋತ್ತವರು ಇಬ್ಬರು ಅಷ್ಟೆ ಏಕೆಂದರೆ ಒಂದೇ ಬಾವಿಯ ಕಪ್ಪೆಗಳಂತೆ ಈ ರಾಜಕಾರಣಿಗಳ ಬುದ್ದಿ.
ಚುನಾವಣೆಯ ಪ್ರಣಾಳಿಕೆ ಹೆಸರಿನಲ್ಲಿ ಜನತೆಗೆ ಹಲವಾರು ಆಶೆ ತೋರಿಸಿ ಮತ ಕಿತ್ತುಕೊಳ್ಳುತ್ತಾರೆ,ಕೆಲವರಿಗೆ ಹಣ ಹೆಚಿಡ ಬಟ್ಟೆ ಕುಕ್ಕರ್ ಇತ್ಯಾದಿ ಕೊಟ್ಟು ಕೊಂಡುಕೊಳ್ಳುತ್ತಾರೆ.ಹೀಗೆ ಮಾರಿದ ಅಥವಾ ಆಸೆಯಿಂದ ಕೊಟ್ಟ ಮತದಿಂದ ಕೊಳ್ಳೆಹೊಡೆಯುತ್ತಾರೆ.ಕಷ್ಟಕ್ಕೆ ಬರದ ರಾಜಕಾರಣಿಗಳು ಇನ್ನು ಮುಂದೆ ಬರುತ್ತಾರೆ ಏಕೆಂದರೆ 2023ಕ್ಕೆ ಚುನಾವಣೆಗಾಗಿ ಇದು ಹೇಗೆ ಅಂದರೆ ಅಂದು ಬ್ರಿಟಿಷರು ವ್ಯಾಪಾರಕ್ಕಾಗಿ ಬಂದು ದೇಶ ಆಳಿದರು ಇಂದು ಸಹಾಯ ಮಾಡುತ್ತೇವೆ ಅಥವಾ ಕನಸು ತುಂಬಿ ದೇಶ ಲೂಟಿ ಮಾಡುವ ಪ್ರಬುದ್ಧ ಕ್ರಿಮೀನಲ್ ಬರುತ್ತಾರೆ ಈಗಲಾದರೂ ಎಚ್ಚರದಿಂದ ಇರಿ. ಭವಿಷ್ಯದ ಅಭಿವೃದ್ಧಿಗಾಗಿ ಮತನೀಡಿ-ಪ್ರಜಾಪ್ರಭುತ್ವ

1 2 3 11