ಉತ್ತರ ಕರ್ನಾಟಕ ಜೈನ ಬಾಂಧವರು ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫ರ ಕಾರ್ಯಕ್ರಮವನ್ನು ಡಾ||ವೀರೇಂದ್ರ ಹೆಗ್ಡೆ ಸಭಾಂಗಣ, ಕರ್ನಾಟಕ ಜೈನ ಭವನ, ಶಂಕರಪುರ, ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮವನ್ನು ಡಿ.ಸುರೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಉಮಾಶ್ರೀ ರವರು ಹಾಗೂ ಭಾರತೀಯ ಜೈನ ಮಿಲನದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಸುರೇಂದ್ರ ಕುಮಾರ್ ಅವರು ಆಗಮಿಸಿದ್ದರು. ಉತ್ತರ ಕರ್ನಾಟಕ ಜೈನ ಬಾಂಧವರ ಅಧ್ಯಕ್ಷರಾದ ಶ್ರೀ ಸುಭಾಷ್ ಜಿನಗೌಡರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಿದರು ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ತುಮಕೂರಿನ ಖ್ಯಾತ ಸಾಹಿತಿಗಳಾದ ಡಾಕ್ಟರ್ ಎಸ್ ಪಿ ಪದ್ಮಪ್ರಸಾದ್ ರವರ ಸವ್ಯಸಾಚಿ ಕಲಾವಿದ ಜಿನೇಂದ್ರ ಪುಸ್ತಕವನ್ನು ಭಾರತೀಯ ಜೈನ ಮಿಲನ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಡಿ ಸುರೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಶಾಂತಿನಾಥ ಹುದ್ದಾರ್ ಕಾರ್ಯದರ್ಶಿಗಳಾದ ಶ್ರೀ ಬಾಹುಬಲಿ ಗೌರಾಜಿ ಮತ್ತು ಕಾರ್ಯಾಧ್ಯಕ್ಷರಾದ ಡಾಕ್ಟರ್ ಅಜಿತ್ ಮರುಗುಂಡೆ ಹಾಗೂ ಉತ್ತರ ಕರ್ನಾಟಕ ಜೈನ ಬಾಂಧವರ ನಿರ್ದೇಶಕರುಗಳು ಹಾಜರಿದ್ದರು ಮತ್ತು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉತ್ತರ ಕರ್ನಾಟಕ ಜೈನ ಮಹಿಳಾ ಮತ್ತು ಮಕ್ಕಳ ಹಾಗೂ ಶ್ರೀಮತಿ ಪ್ರೇಮ ಉಪಾಧ್ಯೆ, ಬೆಳಗಾವಿ ತಂಡಗಳಿAದ ರಸಭರಿತ ಕಾರ್ಯಕ್ರಮಗಳು ಅಲ್ಲಿಗೆ ಆಗಮಿಸಿದ್ದ ಜನರನ್ನು ಮನರಂಜಿಸಿದವು .