POST

ಉತ್ತರ ಕರ್ನಾಟಕ ಜೈನ ಬಾಂಧವರ ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫


ಉತ್ತರ ಕರ್ನಾಟಕ ಜೈನ ಬಾಂಧವರು ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫ರ ಕಾರ್ಯಕ್ರಮವನ್ನು ಡಾ||ವೀರೇಂದ್ರ ಹೆಗ್ಡೆ ಸಭಾಂಗಣ, ಕರ್ನಾಟಕ ಜೈನ ಭವನ, ಶಂಕರಪುರ, ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮವನ್ನು ಡಿ.ಸುರೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಉಮಾಶ್ರೀ ರವರು ಹಾಗೂ ಭಾರತೀಯ ಜೈನ ಮಿಲನದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಸುರೇಂದ್ರ ಕುಮಾರ್ ಅವರು ಆಗಮಿಸಿದ್ದರು. ಉತ್ತರ ಕರ್ನಾಟಕ ಜೈನ ಬಾಂಧವರ ಅಧ್ಯಕ್ಷರಾದ ಶ್ರೀ ಸುಭಾಷ್ ಜಿನಗೌಡರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಿದರು ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ತುಮಕೂರಿನ ಖ್ಯಾತ ಸಾಹಿತಿಗಳಾದ ಡಾಕ್ಟರ್ ಎಸ್ ಪಿ ಪದ್ಮಪ್ರಸಾದ್ ರವರ ಸವ್ಯಸಾಚಿ ಕಲಾವಿದ ಜಿನೇಂದ್ರ ಪುಸ್ತಕವನ್ನು ಭಾರತೀಯ ಜೈನ ಮಿಲನ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಡಿ ಸುರೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಶಾಂತಿನಾಥ ಹುದ್ದಾರ್ ಕಾರ್ಯದರ್ಶಿಗಳಾದ ಶ್ರೀ ಬಾಹುಬಲಿ ಗೌರಾಜಿ ಮತ್ತು ಕಾರ್ಯಾಧ್ಯಕ್ಷರಾದ ಡಾಕ್ಟರ್ ಅಜಿತ್ ಮರುಗುಂಡೆ ಹಾಗೂ ಉತ್ತರ ಕರ್ನಾಟಕ ಜೈನ ಬಾಂಧವರ ನಿರ್ದೇಶಕರುಗಳು ಹಾಜರಿದ್ದರು ಮತ್ತು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉತ್ತರ ಕರ್ನಾಟಕ ಜೈನ ಮಹಿಳಾ ಮತ್ತು ಮಕ್ಕಳ ಹಾಗೂ ಶ್ರೀಮತಿ ಪ್ರೇಮ ಉಪಾಧ್ಯೆ, ಬೆಳಗಾವಿ ತಂಡಗಳಿAದ ರಸಭರಿತ ಕಾರ್ಯಕ್ರಮಗಳು ಅಲ್ಲಿಗೆ ಆಗಮಿಸಿದ್ದ ಜನರನ್ನು ಮನರಂಜಿಸಿದವು .

ಎಲ್ಲರಿಗೂ ಸೂರು ಯೋಜನೆಯ ಪ್ರಗತಿ ಪರಿಶೀಲಿಸಿದ ಶಾಸಕ ಶಿವಲಿಂಗೇಗೌಡ : ಮಾರ್ಚ್ ಕೊನೆಗೆ 300 ಮನೆ ನಿರ್ಮಾಣ

ಅರಸೀಕೆರೆ: ಹೌಸಿಂಗ್ ಫಾರ್ ಅಲ್ ಯೋಜನೆಯಡಿ 1,180 ಮನೆಗಳು ನಿರ್ಮಾಣ ಆಗಲಿದ್ದು, ಮೊದಲ ಹಂತದಲ್ಲಿ 300 ಮನೆಗಳು ಮಾರ್ಚ್ ಅಂತ್ಯದೊಳಗೆ

  • ಪೂರ್ಣವಾಗಲಿವೆ. ಫಲಾನುಭವಿಗಳು ತಕ್ಷಣ ಕೇವಲ ₹1 ಲಕ್ಷ ವಂತಿಗೆ ನೀಡಿ ಮನೆಯ ಪಡೆಯಬೇಕು ಎಂದು
  • ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು. , ಇಲ್ಲಿನ ಸುಬ್ರಹ್ಮಣ್ಯನಗರ ಬಡಾವಣೆ ಸಮೀಪದಲ್ಲಿ ಹೌಸಿಂಗ್ ಫಾರ್ ಹಾಲ್ ಯೋಜನೆಯ ಕನಸಿನ ಮನೆ ಕಾಮಗಾರಿ ವಿಳಂಬವಾಗಿರುವುದನ್ನು ಬುಧವಾರ ಪರಿಶೀಲಿಸಿದ ನಂತರ ಅವರು
  • ಮಾತನಾಡಿದರು. ,

ವರದಿ ಪರ್ವಿಜ್ ಅಹಮದ್ ಅರಸೀಕೆರೆ

ಬಡವರ ಪಾಲಿಗೆ ಗ್ಯಾರೆಂಟಿ ಯೋಜನೆಗಳು ಸಹಕಾರಿಯಾಗಿದೆ, ಗ್ಯಾರೆಂಟಿ ಯೋಜನೆಗಳು ಸದ್ಬಳಕೆಯಾಗುತ್ತಿದೆ- ಸಚಿವ ದಿನೇಶ್ ಗುಂಡೂರಾವ್

ಗಾಂಧಿನಗರ ವಿಧಾನಸಭಾ ಕ್ಷೇತ್ರ: ಶಾಸಕರ ಕಛೇರಿಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯನ್ನು ಸ್ಥಳೀಯ ಶಾಸಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಸಭೆ ಜರುಗಿತು.

ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಉಮೇಶ್ ಬಾಬುರವರು, ಆಹಾರ ಇಲಾಖೆ ಉಪನಿರ್ದೇಶಕಿ ಸೌಮ್ಯ, ಮತ್ತು ಮಹಿಳಾ ಮತ್ತು ಮಕ್ಕಳ ಕುಟುಂಬ ಇಲಾಖೆ, ಬೆಸ್ಕಾಂ , ಕೆ.ಎಸ್.ಆರ್.ಟಿ.ಸಿ ಮತ್ತು ಬಿಟಿಎಸ್, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳು ವೇಗವಾಗಿ ಜನರಿಗೆ ತಲುಪಿದೆ. ಯೋಜನೆಯ ಲಾಭ ಎಷ್ಟು ಜನರಿಗೆ ಸದುಪಯೋಗ ವಾಗುತ್ತಿದೆ ಮತ್ತು ಇದರಲ್ಲಿ ಬಡವರು, ಮಧ್ಯಮವರ್ಗದವರು ಎಷ್ಟು ಜನರು ಇದ್ದಾರೆ ಎಂದು ಪರಿಶೀಲನೆ ಮಾಡಬೇಕು.

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 200ಯೂನಿಟ್ ವಿದ್ಯುತ್ ಉಚಿತ ಯೋಜನೆಯ ಲಾಭ ಸಾವಿರಾರು ಕುಟುಂಬಗಳಿಗೆ ಯೋಜನೆ ಲಾಭ ತಲುಪಿದೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಸ್ಲಂ ಪ್ರದೇಶದ ವಾಸ ಮಾಡುವ ಕಡೆಗಳಲ್ಲಿ ಗೃಹಜ್ಯೋತಿ ಯೋಜನೆ ಬಳಕೆದಾರರು ಶೇಕಡ 90%ರಷ್ಟು ಇದ್ದಾರೆ.

ಆಹಾರ ಇಲಾಖೆಯಿಂದ ಬಡವರ ಮನೆಗಳಿಗೆ ಖುದ್ದಾಗಿ ಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ನೀಡಲಾಗುತ್ತಿದೆ ಇದರಿಂದ ದುರುಪಯೋಗ ಕಡಿಮೆಯಾಗುತ್ತಿದೆ.

ಹಸಿವಿನಿಂದ ಯಾರು ಮಲಗಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆ ಬಡವರ ಪಾಲಿಗೆ ಅಕ್ಷಯಪಾತ್ರೆಯಾಗಿದೆ.

ಯುವತಿಯರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮಿ ಯೋಜನೆಯಿಂದ ಸ್ವಾವಲಂಭಿ ಬದುಕು ಸಾಗಿಸಲು ಅನುಕೂಲವಾಗಿದೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು, ಸಮಿತಿಯ ಸದಸ್ಯರುಗಳು ಪ್ರತಿ ಮನೆಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಹೊಸ ಫಲಾನುಭವಿಗಳಿಗೆ ಗುರುತಿಸಿ ಯೋಜನೆ ಲಾಭ ತಲುಪುವಂತೆ ಮತ್ತು ಫಲಾನುಭವಿಗಳಿಗೆ ಸರಿಯಾಗಿ ಯೋಜನೆ ಲಾಭ ತಲುಪುತಿದ್ದಿಯ ಎಂದು ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ಶ್ರೀನಿವಾಸಮೂರ್ತಿ, ಸರವಣನ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಓಂಪ್ರಕಾಶ್, ಭಾಗಲಕ್ಷ್ಮಿ, ಅಮರ್ ನಾಥ್ ವಿ, ಮತ್ತು ಕುಮಾರಿ,ಮಾಧುರಿ, ಸೈಯದ್, ಸಲಾವುದ್ದೀನ್, ಮಹೇಶ್ ಜಿ, ದೀಪ, ರೇಖಾ, ಶೇಖರ್, ದರ್ಶನ್ ನಟರಾಜ್, ಮಹೇಶ್ವರಿ ಉಪಸ್ಥಿತರಿದ್ದರು

ಸಿದ್ದರಾಮೇಶ್ವರರ ಕಲ್ಪನೆಯಿಂದಲೆ ನಮ್ಮ ನಿಮ್ಮಲೆರಿಗೂ ಆಶ್ರಯ ಗೂಡುಗಳು :ಸಚಿನ ದಂಡಗುಲ್ಕರ್

ಕಲಬುರಗಿ:ಸಮೀಪದ ಮಹಗಾಂವ್ ಕ್ರಾಸ್ ಚಂದ್ರನಗರನಲ್ಲಿ ಕಾಯಕಯೋಗಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವನ್ನು ಭಾವ ಚಿತ್ರಕ್ಕೆ ಪೂಜಿಸುವ ಮೂಲಕ ಜಯಂತೋತ್ಸವ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮನ್ನು ಉದ್ದೇಶಿಸಿ ಭೂಮಿ ಅಗೆದು ಕಲ್ಲನ್ನು ಕುಟ್ಟಿ ನಮ್ಮ ಆಶ್ರಯಕ್ಕೆ ಕಟ್ಟಿಕೊಟ್ಟ ಮನೆಗಳು ಇವರ ಯೋಜನೆಯಗಳಿಗೆ ಸಿವಿಲ್‌ ಇಂಜಿನಿಯರ್ ಎನ್ನಬಹುದು ಇಂದು ಇವರ ಕಲ್ಲು ಅಗೆದು ತೇಗೆದ್ದಿದ್ದರಿಂದ ದೊಡ್ಡದೊಡ್ಡ ಅಣೆಕಟ್ಟುಗಳನ್ನು ಕಟ್ಟಿದರಿಂದ ನಾವು ಇಂದು ನಮ್ಮ ಹೊಲಗದ್ದೆಗಳಿಗೆ ಮತ್ತು ನಮ್ಮ ದಿನ ನಿತ್ಯ ನೀರು ಬಳಸಿಕೊಳ್ಳಲು ಅನುವು ಮಾಡಿಕೊಟ್ಟ ಮೊದಲ ಇಂಜಿನಿಯರ್ ಎನ್ನಬಹುದು ಹಿಗೆ ಒಂದು ಎರಡಲ್ಲಾ ಹಲಾವಾರು ರೀತಿಯಾಗಿ ನಮ್ಮ ದಿನಚರಿಗೆ ಬಿಸವು ಕಲ್ಲು ಅರಗಲ್ಲು ಹಿಗೆ ಮುಂತಾದವುಗಳನ್ನು ಮಾಡಿಕೊಟ್ಟ ಮನೆ ಸಾಮಗ್ರಿ ಗಳನ್ನು ನಿರ್ಮಿಸಿಕೊಟ್ಟ ಶ್ರೇಯಸ್ಸು ಭೋವಿ ಸಮಾಜಕ್ಕೆ ಸಲ್ಲುತ್ತದೆ ಎಂದು ಸಚಿನ ದಂಡಗುಲ್ಕರ್ ತಿಳಿಸಿದರು ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸಿದ್ರಾಮ ದಂಡಗುಲ್ಕರ್, ಸಿದ್ರಾಮ ದಂಡಗುಲ್ಕರ್, ಭೀಮಶಾ ದಂಡಗುಲ್ಕರ್,ಗುರಪ್ಪ ದಂಡಗುಲ್ಕರ, ಹಣಮಂತ ದಂಡಗುಲ್ಕರ್,ಪವನ್ ಚವ್ಹಾಣ,ಲಕ್ಷ್ಮಣ್ ನಾಯ್ಕಲ್, ಯಲ್ಲಪ್ಪ ಹಳಗುಣಕಿ, ಶಿವರಾಮ ಹಳಗುಣಕಿ,ಮಲ್ಲಿಕಾರ್ಜುನ್ ಚವ್ಹಾಣ್,ನಿರ್ಮಲಾ ಹಣಮಂತ, ವೇದಾವತಿ,ಪ್ರಕಾಶ್,ಗೋಪಾಲ್,ಬಳಿರಾಮ್,ಹಣಮಂತ ವಾಯ್ ,ಆನಂದ,ಸಿದ್ರಾಮ ನಾರಾಯಣ,ಇನ್ನೂ ಹಲವಾರು ಜನ ಉಪಸ್ಥಿತಿಯಲ್ಲಿ ಸಿದ್ದರಾಮೇಶ್ವರ ಜಯಂತೋತ್ಸವನ್ನು ಆಚರಿಸಿದರು

ಶ್ರೀ ಬಂಗಾರಮ್ಮ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಪೂಜೆ ನಡೆಯಿತು.
ಕುಮಟಾ :-ತಾಲೂಕಿನ ದೀವಗಿ ಗ್ರಾಮ ಪಂಚಾಯತ ವಾಪ್ತಿಯ ಮಣಕೋಣ ನದಿಯ ದಡೆಯ ಹತ್ತಿರ ನೆಲೆಸಿರುವ ಶ್ರೀ ಬಂಗಾರಮ್ಮ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಹಬ್ಬದ ದಿನದಂದು ದೇವಿಗೆ ಪೂಜೆ ನಡೆಯಿತು.ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರಿಗೆ ಹಣ್ಣು ಕಾಯಿ ಮಾಡಿ ಪ್ರಸಾದ ಸ್ವೀಕರಿಸಿದರು.

ಆನಂದಾಶ್ರಮ ಪ್ರೌಢಶಾಲೆಯಲ್ಲಿ ವಾರ್ಷಿಕಸ್ನೇಹ ಸಮ್ಮೇಳನ ಮತ್ತು ಪಾಲಕರ ದಿನಾಚರಣೆ

ಕುಮಟಾ ತಾಲೂಕಿನ ಗೋಕರ್ಣ ಆನಂದಾಶ್ರಮ ಪ್ರೌಢಶಾಲೆಯಲ್ಲಿ ವಾರ್ಷಿಕಸ್ನೇಹ ಸಮ್ಮೇಳನ ಮತ್ತು ಪಾಲಕರ ದಿನಾಚರಣೆ ಗೋಕರ್ಣ ಇಲ್ಲಿಂದ ಅನತಿ ದೂರದಲ್ಲಿರುವ ಪುಟ್ಟ ಹಳ್ಳಿ ಬಂಕಿ ಕೊಡ್ಲ ತನ್ನದೇ ಆದ ಇತಿಹಾಸವನ್ನು ಹೊಂದಿರುವಂತಹ ಇಲ್ಲಿ ಜನ್ಮ ತಾಳಿದ ಶಿಕ್ಷಣ ಸಂಸ್ಥೆಯೇ ರೂರಲ್ ಎಜುಕೇಶನ್ ಸೊಸೈಟಿ ಈ ಸೊಸೈ ಟಿಯ ನಮ್ಮ ತಾಲೂಕಿನ ಜಿಲ್ಲೆಯ ಐತಿಹಾಸಿಕ ಶಾಲೆ ಆನಂದಾಶ್ರಮ ಪ್ರೌಢಶಾಲೆ ವಾರ್ಷಿಕೋತ್ಸವ ಮತ್ತು ಪಾಲಕರ ದಿನಾಚರಣೆ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. 90ರ ದಶಕದಲ್ಲಿ ಶತಮಾನೋತ್ಸವ ಆಚರಿಸಿಕೊಂಡ, ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತ್, ದರಾ ಬೇಂದ್ರೆ ವಿ ಕೃ ಗೋಕಾಕ್ ಇಲ್ಲಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಇದು ಇತಿಹಾಸ. ವಿದ್ಯಾರ್ಥಿನಿಯರ ಪೂರ್ಣ ಕುಂಭ ಹಾಗೂ ಶಿಸ್ತಿನ ಬ್ಯಾಂಡ್ ಸೆಟ್ ನಿಂದ ದೀಪದಾರತಿಯೊಂದಿಗೆ ಅತಿಥಿ ಅಭ್ಯಾಗತರನ್ನು ಆನಂದಾಶ್ರಮ ಸಭಾಭವನಕ್ಕೆ ಆಹ್ವಾನಿಸಲಾಯಿತು. ಇಲ್ಲಿಯ ಆರಾಧ್ಯ ದೈವರಾದ ಅಮ್ಮನವರು ಹಾಗೂ ಮುರ್ಕುಂಡೇಶ್ವರ ದೇವರುಗಳ ಪಾದಾರರಿಂದ ಗಳಿಗೆ ನಮಸ್ಕರಿಸುತ್ತಾ ಪ್ರಾರಂಭವಾದ ಕಾರ್ಯಕ್ರಮ ವಿದ್ಯಾರ್ಥಿಗಳ ಸುಮಧುರ ಕಂಠದ ಪ್ರಾರ್ಥನೆಯೊಂದಿಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯಾಧ್ಯಾಪಕರಾದ ಶ್ರೀಯುತ ಗಂಗಾಧರ್ ಭಟ್ ತುಂಬು ಹೃದಯದಿಂದ ವೇದಿಕೆ ಅಲಂಕರಿಸಿದ ಗಣ್ಯರನ್ನು ಸ್ವಾಗತಿಸಿದರು. ಅತಿಥಿಅ ಭ್ಯಾಗತರ ಪರಿಚಯವನ್ನು ಸಹ ಶಿಕ್ಷಕಿಯರಾದ ಶ್ರೀಮತಿ ಶಾಮಲಾ ಕುಮಾರಿ ಕೆ. ನಡೆಸಿಕೊಟ್ಟರು. ಶಾಲೆಯ ಸಮಗ್ರ ಶೈಕ್ಷಣಿಕ ವರದಿಯನ್ನು ಸಹ ಶಿಕ್ಷಕರಾದ ಆದಿನಾರಾಯಣ ಬಿ.ಕವರಿ ಮಂಡಿಸಿದರು. ವಿದ್ಯಾರ್ಥಿಗಳಿಂದ ಮೂಡಿ ಬಂದ ಕಥೆ ಕವನ ಚುಟುಕು ಗಳನ್ನೊಳಗೊಂಡ ಆನಂದ ಹಸ್ತ ಪತ್ರಿಕೆ ಅನಾವರಣಗೊಳಿಸಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ * .* ರಾಜೇಂದ್ರ ಎಸ್. ನಾಯಕ್ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕೋಟಾಪಡುಕೆರೆ ಉಡುಪಿ ಜಿಲ್ಲೆ .,ಇವರು ಶಬ್ದ ಭಂಡಾರದ ಒಡತಿಯೇ ಓ ಶಾರದೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿ ಒಂದು ಸ್ವಸ್ಥ ಸಮಾಜವನ್ನು ಕಟ್ಟಬಲ್ಲಂತಹ ಜ್ಞಾನ ದೇಗುಲದಲ್ಲಿ ನಾವಿದ್ದೇವೆ ಎನ್ನುತ್ತಾ ಶಾರದೆಗೆ ನಮಸ್ಕರಿಸುತ್ತಾ ಬದುಕಿನ ಸಾರ್ಥಕತೆಗೆ ಶಿಕ್ಷಣ ಬಹು ಮುಖ್ಯ ಸರಿಯಾದ ಕ್ರಮದಲ್ಲಿ ಇಂದಿನ ವ್ಯವಸ್ಥೆಗೆ ಶಿಕ್ಷಣ ಪಡೆಯಬೇಕು, ಬದುಕಿನ ಯಶಸ್ಸಿಗೆ ಶಿಕ್ಷಣ ಅವಶ್ಯಕ, ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿರಬೇಕು , ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾದ ನಾನು ಪ್ರೌಢಶಾಲಾ ದಿನಗಳಲ್ಲಿ ಇಲ್ಲಿಯ ಮಹಾನ ಶಿಕ್ಷಕರು ಹೇಳಿದ ರಾಮಾಯಣ ಮಹಾಭಾರತದ ನೀತಿ ಕಥೆಗಳು ನನ್ನ ಭವಿಷ್ಯವನ್ನು ರೂಪಿಸಿದವು ನಿಮ್ಮ ಎಲ್ಲ ರ ಭವಿಷ್ಯ ಕೂಡ ಉಜ್ವ ಲವಾಗಲಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ 2011ರಲ್ಲಿ 10ನೇ ತರಗತಿ ಮುಗಿಸಿ ಇತ್ತೀಚಿಗೆ ಸಹಾಯಕ ಪ್ರಾಧ್ಯಾಪಕರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಜಿಗೇರಿ ಅಂಕೋಲಕ್ಕೆ ಆಯ್ಕೆಯಾದ ರಾಮಚಂದ್ರ ಅಂಕೋಲೆ ಕರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭವಿಷ್ಯ ರೂಪಿಸಿಕೊಳ್ಳಬೇಕಾದ ನಾವುಗಳು ಸತತ ಪ್ರಯತ್ನವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಸಣ್ಣು ಗೌಡ ಮಾತನಾಡಿ ವಿದ್ಯಾರ್ಥಿಗಳಾದ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ದ್ರ ಡ ನಂಬಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದರು . ಆಡಳಿತ ಮಂಡಳಿಯ ಸದಸ್ಯರಾದ ಜೋತ್ಸ್ನ್ ಕಾಗಲ್ ಮಾತನಾಡಿ ವಿದ್ಯಾರ್ಥಿಗಳು ನಾವು ಶ್ರಮಪಟ್ಟು ಓದಬೇಕು ಹೆಚ್ಚು ಸಾಧನೆ ಮಾಡಬೇಕೆಂದರು. ನಗದು ಬಹುಮಾನ ಯಾದಿಯನ್ನು ಸಹ ಶಿಕ್ಷಕರಾದ ಡಿಕೆ ಗೌಡ, ಸಾಂಸ್ಕೃತಿಕ ಬಹುಮಾನ ಯಾದಿಯನ್ನು ಸಹ ಶಿಕ್ಷಕರಾದ ಗಾಯತ್ರಿ ಚಿತ್ತಾಲ್, ಕ್ರೀಡಾ ಬಹುಮಾನ ಯಾದಿಯನ್ನು ದೈಹಿಕ ಶಿಕ್ಷಕರಾದ ದಯಾನಂದ್ ಗೌಡ ವಾಚಿಸಿದರು. ವೇದಿಕೆ ಮೇಲೆ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ವಿವೇಕ್ ವಿ. ನಾಡ್ಕರ್ಣಿ , ಆಡಳಿತ ಮಂಡಳಿಯ ಸದಸ್ಯರು ನಿವೃತ್ತ ಮುಖ್ಯಾದ್ಯಪಕರಾದ ಬಿ . ವಿ.ನಾಯಕ್ , ನಿವೃತ್ತ ಶಿಕ್ಷಕರಾದಎನ.ವಿ.ಜನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಭಾರತಿ ನಾಯಕ್ ಉಪಸ್ಥಿತರಿದ್ದರು. ಸರ್ವರನ್ನು ಸಹ ಶಿಕ್ಷಕರಾದ ಸಿದ್ದರಾಮಪ್ಪ ಬಟಕುರ್ಕಿ ವಂದಿಸಿದರು. ಸಹ ಶಿಕ್ಷಕರದ ಗಿರೀಶ್ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಲಘುಮನಂಜನ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲಿನ ಪಾಲಕರು ಪೋಷಕರು, ಊರ ನಾಗರಿಕರು ಕಾರ್ಯಕ್ರಮವನ್ನು ಕಣ್ತುಂಬಿ ಕೊಂಡರು.

ಕಾಳಗಿ ತಾಲೂಕಿನಾದ್ಯಂತ ಸಿದ್ದರಾಮೇಶ್ವರ ಜಯಂತಿ ಆಚರಣೆ

ಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ಭೋವಿ ಸಮಾಜ ಸಂಕಲ್ಪ
ಕಾಳಗಿ:ತಾಲೂಕಿನಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡಲಾಯಿತು.ಇಲ್ಲಿಯ ರಾಮನಗರದಲ್ಲಿ ಭೋವಿ ಸಮಾಜದ ಪ್ರಮುಖ ಮುಖಂಡರ ನೇತೃತ್ವದಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಜಿಸಿ, ಪುಸ್ಪನಮನಗೈದು ಅರ್ಥಪೂರ್ಣವಾಗಿ ಜಯಂತಿ ಆಚರಣೆ ಮಾಡಿದರು.ಭೋವಿ ಸಮಾಜದಿಂದ ಭವನ ನಿರ್ಮಾಣದ ಸಂಕಲ್ಪ: ಸಿದ್ದರಾಮೇಶ್ವರ ಜಯಂತೋತ್ಸವ ನಿಮಿತ್ಯವಾಗಿ ಮಾತನಾಡಿರುವ ಭೋವಿ ಸಮಾಜದ ಕಾಳಗಿ ತಾಲೂಕಾಧ್ಯಕ್ಷ ಲಕ್ಷ್ಮಣ ಭೋವಿ ಅಪಾರವಾದ ಭಕ್ತಿ ನಿಷ್ಠರಾಗಿರುವ ಕರ್ಮಯೋಗಿ ಸಿದ್ದರಾಮೇಶ್ವರರು ತಮ್ಮ ಕಾಯಕ ನಿಷ್ಠೆಯಿಂದ ಶಿವಯೋಗಿಗಳಾದರು.ಸಿದ್ದರಾಮರು ಹಾಕಿಕೊಟ್ಟ ಮಾರ್ಗ ನಮ್ಮೇಲ್ಲರಿಗೂ ದಾರಿದೀಪ ಎಂದರು. ಅವರ ಪ್ರೇರಣೆಯೇ ನಮಗೆ ಶಕ್ತಿ. ಕಾರಣ ಕಾಳಗಿ ತಾಲೂಕು ಕೇಂದ್ರದಲ್ಲಿ ಭವ್ಯವಾದ ಸಿದ್ದರಾಮೇಶ್ವರರ ತಾಲೂಕು ಭವನ ನಿರ್ಮಾಣಕ್ಕಾಗಿ ಸಂಕ್ರಮಣ ಪುಣ್ಯಕಾಲದಂದೇ ನಾವೇಲ್ಲರೂ ಸಂಕಲ್ಪ ಮಾಡೋಣವೆಂದರು.ನಿವೇಶನ ನಿಡಲು ತಹಸೀಲ್ದಾರ ಭರವಸೆಇಲ್ಲಿಯ ತಾಲೂಕು ಆಡಳಿತದಿಂದ ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡಿರುವ ಗ್ರೇಡ್-1ತಹಸೀಲ್ದಾರ ಘಮವತಿ ರಾಠೋಡ ಅವರು, ಸಿದ್ದರಾಮೇಶ್ವರರ ಸುಂದರವಾದ ತಾಲ್ಲೂಕು ಭವನ ನಿರ್ಮಾಣಕ್ಕಾಗಿ ಸೂಕ್ತ ವಾದ ನಿವೇಶನ ನೀಡುವುದಾಗಿ ಭರವಸೆ ನೀಡಿದರು.ಪಟ್ಟಣ ಪಂಚಾಯತಿಯಲ್ಲಿ ಮುಖ್ಯಾಧೀಕಾರಿ ಪಂಕಜಾ ಎ ಅವರ ನೇತೃತ್ವದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಪಟ್ಟಣ ಪಂಚಾಯತ್ ಸಿಬ್ಬಂದಿ ದತ್ತು ಗುತ್ತೆದಾರ,ಆನಂದ ಕಾಶಿ,ಸಾವಿತ್ರಿ ಒಡೆಯರಾಜ,ಕಾಳೇಶ್ವರ ಮಡಿವಾಳ,ಉದಯ ಶಿಂಗಶೇಟ್ಟಿ,ಕಾಳಗಿ ತಾಲೂಕು ಗೌರವ ಅಧ್ಯಕ್ಷ ಹಣಮಂತ ಒಡೆಯರಾಜ ಭೋವಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಭೋವಿ,ರಾಜು ಒಡೆಯರಾಜ,ನಗರ ಅಧ್ಯಕ್ಷ ಶರಣಪ್ಪ ಬೇಲೂರು, ಬಲರಾಮ ವಲ್ಯಾಪುರೆ, ಭೀಮಣ್ಣ ದಂಡಗುಲ್ಕರ,ಭೀಮಯ್ಯ ಬೆಲೋರ,ಭಿಮಯ್ಯ ಜಾಧವ್, ನಾಗಶೇಟ್ಟಿ ಜಾಧವ್ , ಶಂಕರ್ ರಾಜಾಪುರ, ಗ್ರೇಡ್-1 ತಹಸೀಲ್ದಾರ ಘಮವತಿ ರಾಠೋಡ ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿಕೆ, ಪಪಂ.ಮುಖ್ಯಾಧಿಕಾರಿ ಪಂಕಜಾ ಎ, ಗ್ರಾಪಂ.ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಮಾತನಾಡಿದರು. ಪಟ್ಟಣ ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಕದಂ,ಸಂತೋಷ ನರನಾಳ,ರೇವಣಸಿದ್ದಪ್ಪ ಪೂಜಾರಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ದೇಶದ ಭಕ್ತಿ ಉಸಿರಿನ ಕಣ ಕಣದಲ್ಲೂ ತುಂಬಿರಲಿ

ಕುಮಟಾ ತಾಲೂಕಿನ ಜನತಾ ವಿದ್ಯಾಲಯ ಧಾರೇಶ್ವರ ಮತ್ತು ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಧಾರೇಶ್ವರದ ಸಂಯುಕ್ತ ಆಶ್ರಯದಲ್ಲಿ ನಮ್ಮ ಸಂವಿಧಾನ ವಿಷಯದ ಮೇಲೆ ಸಂವಿಧಾನ ಸನ್ಮಾನ ಅಭಿಯಾನದ ಕಾರ್ಯಕ್ರಮದ ಅಡಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿಜೇತರಿಗೆ ಶಿಕ್ಷಣ ಪ್ರಕೋಷ್ಠ ದ ರಾಜ್ಯ ಸಾಹಸoಚಾಲಕರಾದ ಎಂ ಜಿ ಭಟ್ ರವರು ಬಹುಮಾನ ವನ್ನು ವಿತರಿಸಿ ದೇಶ ಭಕ್ತಿ ನಮ್ಮ ಉಸಿರಿನ ಕಣ ಕಣದಲ್ಲೂ ತುಂಬಿರಬೇಕು. ಎಂದರು.ಸಂವಿಧಾನದ ಮೇಲೆ ಹಲವು ವಿಷಯಗಳ ಕುರಿತು ಮಾತನಾಡಿದರು. ಸಂವಿಧಾನದ ರಚನೆ ಮಹತ್ವ, ನಮ್ಮ ಭಾಧ್ಯತೆ, ಹಾಗೂ ಸಂವಿಧಾನದ ರಚನೆ ಯಲ್ಲಿ ಅಂಬೇಡ್ಕರರ ಪಾತ್ರ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಕುರಿತು ಅರಿವು ಹೆಚ್ಚಿಸಿಕೊಳ್ಳುವಂತೆ ಮಕ್ಕಳಿಗೆ ಹೇಳಿದರ
ಈ ಸಂದರ್ಭದಲ್ಲಿ ಜನತಾ ವಿದ್ಯಾಲಯ ಹಾರೇಶ್ವರದ ಮುಖ್ಯ ಅಧ್ಯಾಪಕರಾದ ಶ್ರೀ ಗೋಪಿನಾಥ್ ಭಜಂತ್ರಿ ಹಾಗೂ
ದಿನಕರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀ ಜಗದೀಶ್ ಗುನಗ ಇದ್ದರು ಯೋಗೇಶ್ ಪಟಗಾರರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು ಉಳಿದ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

ಜನತಾ ವಿದ್ಯಾಲಯ ಬಾಡ-ಕಾಗಾಲ ವಾರ್ಷಿಕ ಸ್ನೇಹ ಸಮ್ಮೇಳನ:


‘ದಿನಕರರ ಸ್ಮರಣೆಯಲ್ಲಿ ಬೆಳಗಿದ ಎಪ್ಪತ್ತರ ಜ್ಯೋತಿ’
ಕುಮಟಾ: ‘ಜ್ಞಾನ, ಕೌಶಲ್ಯ, ಆರೋಗ್ಯ ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡ ವ್ಯಕ್ತಿ ಜೀವನದಲ್ಲೆಂದೂ ಸೋಲಲಾರ. ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ಜೀವನಪ್ರೀತಿಯಿಂದ ಅತಂರಂಗ ಗಟ್ಟಿಯಾಗಿಸಿಕೊಳ್ಳಬೇಕು. ಮನಸ್ಸಿನ ಧಿಃಶಕ್ತಿಯನ್ನು ಎಂದಿಗೂ ತ್ಯಜಿಸಬಾರದು. ಬರುವ ಅವಕಾಶಗಳನ್ನೆಂದೂ ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ. ಯಾವ ಕೇಸಲವನ್ನು ಮಾಡಿದರೂ ಅದಕ್ಕೆ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಆಗ ಮಾತ್ರ ಯಶಸ್ಸು ದೊರೆಯುತ್ತದೆ. ಮಾನವೀಯತೆಯನ್ನು ಗುರುತಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ, ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು’ ಎಂದು ನಿವೃತ್ತ ಮುಖ್ಯಾಧ್ಯಾಪಕ ಎನ್.ಆರ್. ಗಜು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಜನತಾ ವಿದ್ಯಾಲಯ ಬಾಡ-ಕಾಗಾಲ ಪ್ರೌಢಶಾಲೆಯ 70ನೆಯ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರತ್ನಾಕರ ನಾಯ್ಕ ಅವರು ಶಾಲಾ ಹಸ್ತಪತ್ರಿಕೆ ‘ಅಭಿಜಾತ’ವನ್ನು ಅನಾವರಣಗೊಳಿಸಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಯಾವತ್ತೂ ನೆರವಿನ ಹಸ್ತ ಚಾಚುವುದಾಗಿ ಘೋಷಿಸಿದರಲ್ಲದೇ, ತಮ್ಮ ಶಾಲೆ ತಮ್ಮ ಹೆಮ್ಮೆಯೆಂದುಕೊಂಡು ಎಲ್ಲದಕ್ಕೂ ತಾವು ಬೆಂಗಾವಲಾಗಿ ನಿಲ್ಲುತ್ತೇನೆಂದರು. ಆತ್ಮ ಪರೀಕ್ಷೆ, ಅಂತಃಸತ್ವಗಳನ್ನು ತಿಳಿದುಕೊಂಡು, ಶಿಸ್ತಿನ ವ್ಯಾಸಂಗದೊಂದಿಗೆ ದೃಢತೆಯನ್ನು ಮೈಗೂಡಿಕೊಂಡು ಪ್ರಗತಿಪಥದಲ್ಲಿ ವಿದ್ಯಾರ್ಥಿಗಳು ಸಾಗಬೇಕೆಂದು ಕರೆ ಕೊಟ್ಟರು. ನ್ಯಾಯವಾದಿ ಮಮತಾ ಆರ್. ನಾಯ್ಕ ಅವರು ಶಾಲಾ ಸ್ನೇಹ ಸಮ್ಮೇಳನದಲ್ಲಿ ಪಾಲಕರ ಭಾಗಿಯಾಗುವಿಕೆಯ ಔಚಿತ್ಯವನ್ನು ಅರುಹಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಎಸ್.ಎಸ್. ಭಟ್ ಲೋಕೇಶ್ವರ, ನಿವೃತ್ತ ಸಂಸ್ಕøತ ಉಪನ್ಯಾಸಕ ಗೋಪಾಲ ಹೆಗಡೆ, ಶಿಕ್ಷಣಾಭಿಮಾನಿ ಎಚ್.ಎಸ್. ಹಳ್ಳೇರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಕುಮಾರಿ ಮಾನಸಾ ಮತ್ತು ಸಂಗಡಿಗರು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಮುಖ್ಯಾಧ್ಯಾಪಕ ಸಂದೇಶ ಡಿ. ಉಳ್ಳಿಕಾಸಿ ಸ್ವಾಗತಿಸಿ, ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಬ್ರಾಯ ಜಿ. ನಾಯ್ಕ ಅಧ್ಯಕ್ಷೀಯ ಮಾತುಗಳನ್ನಾಡಿದರು. ಶಿಕ್ಷಕರಾದ ಐ.ವಿ ಭಟ್ಟ, ರಂಜನಾ ಬಿ, ಸಿ.ಬಿ. ಪಿಸ್ಸೆ, ತನುಜಾ ನಾಯಕ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಧುಕರ ಜೆ. ನಾಯಕ ಕ್ರೀಡಾ ಸಂಪದವನ್ನು ನಡೆಸಿಕೊಟ್ಟರು. ಶಿಕ್ಷಕ ಫಕ್ಕೀರಪ್ಪ ಎಚ್. ನಾಗಣ್ಣವರ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ಸುಮುಖ ಆಚಾರಿ, ಕುಮಾರಿ ಮಾನ್ಯ ನಾಯ್ಕ ಸಹಕರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ವಾಲಿಬಾಲ್ ಪಟು ಯತೀಶ್ ನಾಯ್ಕ, ರಾಜ್ಯಮಟ್ಟದ ಓಟಗಾರ್ತಿ ಜಯಾ ಗೌಡ, ಸ್ವಯಂ ನಿವೃತ್ತಿ ಪಡೆದ ಮುಖ್ಯ ಅಡಿಗೆ ಸಿಬ್ಬಂದಿ ಜಯಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಅಪರಾಹ್ನದ ಹೊತ್ತು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಶಿಗ್ಗಾವಿಯಲ್ಲಿ ಕೆ ಆರ್ ಎಸ್ ರೈತ ಸಮೃದ್ಧಿ ಕೇಂದ್ರ

ಕೆ ಆರ್ ಎಸ್ ಸೈನಿಕರೇ ಶಿಗ್ಗಾವಿ-ಸವಣೂರು ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ನಮ್ಮ ನೆಚ್ಚಿನ KRS ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಶ್ರೀ ರವಿ ಕೃಷ್ಣಾರೆಡ್ಡಿಯವರು ಚುನಾವಣೆ ಸಮಯದಲ್ಲಿ ತಮ್ಮ ಗಮನಕ್ಕೆ ಬಂದಿರುವ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ರೈತರು ಉತ್ತಮ ಗುಣಮಟ್ಟದ ಬೀಜಗಳು, ರಸಗೊಬ್ಬರ, ಕೀಟನಾಶಕಗಳಿಗೆ MRP ಗಿಂತ ಜಾಸ್ತಿ ಬೆಲೆ ಕೊಡುವುದನ್ನು ತಪ್ಪಿಸಲು “KRS ರೈತ ಸಮೃದ್ಧಿ ಕೇಂದ್ರ” ವನ್ನು ಸ್ಥಾಪಿಸಿದ್ದಾರೆ. ರೈತರಿಗೆ ಕೃಷಿಯಲ್ಲಿ ಖರ್ಚು ಕಮ್ಮಿ ಮಾಡಿ, ಲಾಭಾಂಶ ಹೆಚ್ಚು ಮಾಡಿಕೊಡುವ ದೃಷ್ಠಿಯಿಂದ MRP ದರದಲ್ಲಿ ಮತ್ತು ಇನ್ನೂ ಕಡಿಮೆ ದರಗಳಲ್ಲಿ ಗುಣಮಟ್ಟದ ಬೀಜಗಳನ್ನು, ರಸಗೊಬ್ಬರವನ್ನು, ಕೀಟನಾಶಕಗಳನ್ನು “KRS ರೈತ ಸಮೃದ್ಧಿ ಕೇಂದ್ರ” ದಲ್ಲಿ ಒದಗಿಸಲು ವ್ಯವಸ್ಥೆ ಮಾಡಿದ್ದಾರೆ.

ಈ ಕೇಂದ್ರದ ಉದ್ಘಾಟನೆಯನ್ನು ಜನವರಿ 14, 2025 ಮಂಗಳವಾರ, ಮಕರ ಸಂಕ್ರಾಂತಿಯ ಶುಭದಿನದಂದು ಬೆಳಿಗ್ಗೆ 11 ಗಂಟೆಗೆ ಶಿಗ್ಗಾವಿ ಸವಣೂರು ಮತಕ್ಷೇತ್ರದ ರೈತರು, ಶ್ರೀ ರವಿ ಕೃಷ್ಣಾರೆಡ್ಡಿಯವರ ಸಮ್ಮುಖದಲ್ಲಿ ನೆರವೇರಿಸಲಿದ್ದಾರೆ. ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ವಿನಂತಿ.

ಧನ್ಯವಾದಗಳೊಂದಿಗೆ,

KRS ತಂಡ

1 2 3 227