ಮೈಸೂರು ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಕನ್ನಕಳುವು ಮಾಡುವ ಆರೋಪಿಯನ್ನ ಬಂಧಿಸಲಾಗಿದೆ.ಆರೋಪಿಯಿಂದ 2,60,000/- ಮೌಲ್ಯದ ಚಿನ್ನಾ ಹಾಗೂ ಬೆಳ್ಳಿ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಪಾಲಂ ಗ್ರಾಮ ಮೂಲದ ನಿವಾಸಿಯಾಗಿದ್ದಾನೆ. ಕುವೆಂಪುನಗರ ಠಾಣಾ ವ್ಯಾಪ್ತಿಯ 03 ಕನ್ನ ಕಳುವು ಪ್ರಕರಣಗಳು ಪತ್ತೆಯಾಗಿದೆ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ದ ಹುಬ್ಬಳ್ಳಿ, ಮಂಗಳೂರು ಪೊಲೀಸ್ ಠಾಣೆಗಳು ಹಾಗೂ ಆಂಧ್ರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸ್ವತ್ತು ಕಳುವು ಪ್ರಕರಣಗಳು ದಾಖಲಾಗಿವೆ.
POST
ರೋಗಿಗಳಿಂದ ಹಣ ಪಡೆದ ಸರ್ಕಾರಿ ವೈದ್ಯ ಪ್ರಕರಣ…ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟೀಸ್…
ಹುಣಸೂರು ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡಿದ ಆರೋಪದ ಹಿನ್ನಲೆ ಹುಣಸೂರು ತಾಲೂಕು ಹನಗೂಡು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೇಮಂತ್ ಕುಮಾರ್ ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ನೋಟೀಸ್ ಜಾರಿಯಾಗಿದೆ.2 ದಿನಗಳ ಕಾಲಾವಕಾಶ ನೀಡಿದ್ದು ಸೂಕ್ತ ಸಮಜಾಯಿಷಿ ನೀಡುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.

ಡಾ.ಹೇಮಂತ್ ಕುಮಾರ್ ರವರು ರೋಗಿಗಳಿಂದ ಹಣ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಪ್ರಸಾರವಾಗಿತ್ತು.ಈ ಹಿನ್ನಲೆ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ತ್ಯಾಜ್ಯದ ಬೀಡಾದ ಹುಲ್ಲಹಳ್ಳಿ ನಾಲೆ…ನಂಜನಗೂಡಿಗೆ ಭಕ್ತರನ್ನ ಸ್ವಾಗತಿಸುವ ಗೊಬ್ಬು ವಾಸನೆ…ತುಕ್ಕು ಹಿಡಿದ ದಕ್ಷಿಣಕಾಶಿ ತಾಲೂಕು ಆಡಳಿತ…ಮೇಜರ್ ಸರ್ಜರಿ ಯಾವಾಗ…?
ನಂಜನಗೂಡು ತಾಲೂಕು ಆಡಳಿತ ವೈಖರಿ ತುಕ್ಕು ಹಿಡಿದಂತಾಗಿದೆ.ಒಂದೆಡೆ ಕ್ರೈಂ ರೇಟ್ ಜನರನ್ನ ಬೆಚ್ಚಿಬೀಳಿಸುತ್ತಿದ್ದರೆ ಮತ್ತೊಂದೆಡೆ ಸ್ವಚ್ಛತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಕೊಲೆ,ಸುಲಿಗೆ,ಕಳ್ಳತನಗಳ ಪ್ರಕರಣಗಳಿಂದ ಬೇಸತ್ತ ಜನಕ್ಕೆ ಸ್ವಚ್ಛತೆಯೂ ಸಹ ಆಕ್ರೋಷ ವ್ಯಕ್ತಪಡಿಸುವಂತಾಗಿದೆ.ನಂಜನಗೂಡಿಗೆ ಬರುವ ಭಕ್ತರನ್ನ ಮೊದಲು ಸ್ವಾಗತಿಸುವುದೇ ಗೊಬ್ಬುವಾಸನೆ.ರಾಷ್ಟ್ರಪತಿ ರಸ್ತೆಯ ರೈಲ್ವೆ ಗೇಟ್ ಬಳಿ ನೀವು ಸಾಗಬೇಕೆಂದ್ರೆ ಮೂಗುಮುಚ್ಚಿ ನಡೆಯಲೇ ಬೇಕು..ಇಲ್ಲದಿದ್ದಲ್ಲಿ ವಾಕರಿಕೆ ಬರುವಂತ ಸಂಕಟ,ಅನುಭವ ನಿಮಗಾಗೋದು ಗ್ಯಾರೆಂಟಿ.ಸುಭಾಷ್ ಪಾರ್ಕಿನ ಮಟನ್ ತ್ಯಾಜ್ಯ ಈ ಜಾಗಕ್ಕೆ ಬಂದು ಸೇರುತ್ತದೆ.ಇನ್ನು ಪಟ್ಟಣದ ಹೊರಭಾಗದ ಹುಲ್ಲಹಳ್ಳಿ ನಾಲೆ ಪರಿಸ್ಥಿತಿ ಆ ನಂಜುಂಡೇಶ್ವರನಿಗೇ ಪ್ರೀತಿ..ಮಟನ್ ಮಾರ್ಕೆಟ್ ನ ತ್ಯಾಜ್ಯ ಇಲ್ಲಿ ಸಂಗ್ರಹವಾಗುತ್ತಿದೆ.

ರೈಲ್ವೆ ಗೇಟ್ ಹಾಕಿದ್ರಂತೂ ವಾಹನ ಸವಾರರು ಗೊಬ್ಬುವಾಸನೆಯಿಂದ ಹೈರಾಣರಾಗಿದ್ದಾರೆ.ಸಮೀಪದಲ್ಲೇ ಕಾಲೇಜು ಇದೆ.ಶಿಕ್ಷಕರ ಭವನವಿದೆ,ಶನಿದೇವರ ದೇವಾಲಯವಿದೆ.ಜನನಿಬಿಡ ಪ್ರದೇಶವೂ ಇದಾಗಿದೆ.ಅಶುಚಿತ್ವ ತಾಂಡವವಾಡುತ್ತಿದೆ.ನಂಜನಗೂಡಿನ ಅಭಿವೃದ್ದಿಯ ಕನಸು ಕಾಣುತ್ತಿರುವ ಶಾಸಕ ದರ್ಶನ್ ಧೃವನಾರಾಯಣ್ ಕಣ್ಣಿಗೆ ಇದು ಕಾಣಿಸದಿರುವುದು ದುರಂತ.ಈಗಾಗಲೇ ಸ್ಥಳೀಯರು ತಾಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.ಗೊಬ್ಬೆದ್ದು ನಾರುತ್ತಿರುವ ನಂಜನಗೂಡಿನಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡದಿದ್ದಲ್ಲಿ ರೋಗರುಜಿನಗಳ ಗೂಡಾಗುವುದರಲ್ಲಿ ಸಂಶಯವಿಲ್ಲ.ಇನ್ನಾದ್ರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದಲ್ಲಿ ಭಾರಿ ದಂಡ ತೆರಬೇಕಾಗುತ್ತದೆ
ವರದಕ್ಷಣೆಗಾಗಿ ಬ್ಯಾಂಕ್ ನೌಕರನಿಂದ ಹೆಂಡತಿಗೆ ದೈಹಿಕ ವಾಗಿ ಮಾನಸಿಕವಾಗಿ ಕಿರುಕುಳ
ಚಿಕ್ಕೋಡಿ ತಾಲ್ಲೂಕಿನ ಹಾಲಟ್ಟಿ ವಿದ್ಯಾನಗರದಲ್ಲಿ ನಡೆದ ಘಟನೆ
ಈ ಘಟನೆ ಕಳೆದ ಎರಡು ವರ್ಷಗಳಿಂದ ಈ ಹೆಣ್ಣು ಮಗಳಿಗೆ ವರದಕ್ಷಿಣೆ ಕಿರುಕುಳ ನಿಡುತ್ತಿದ್ದರೆ.
ಗಂಡ ಬಸವರಾಜ್ ಕೊಲ್ಕಾರ ಮತ್ತು ಮಾವ ಸದಾಶಿವ ಕೊಲ್ಕಾರ ಅತ್ತೆ ಕಮಲಾ ನಾದನಿ ಸೂಜಾತಾ ನಿಂದ ಹಲ್ಲೆಗೋಳಗಾದ ಪೂಜಾ ಕೊಲ್ಕಾರ
ಹೆಂಡತಿಮೇಲೆ ಮಧ್ಯರಾತ್ರಿ ಹಲ್ಲೆ ಮಾಡಿ ಹೊರಹಾಕಿದ ಗಂಡ ಬಸವರಾಜ್ ಮತ್ತು ಮಾವ ಅತ್ತೆ
ಬಸವರಾಜ್ ಕೊಲ್ಕಾರ ಎಂಬುವವನು ಡಿಸಿಸಿ ಬ್ಯಾಂಕ್ ನಿಪ್ಪಾಣಿಯಲ್ಲಿ ಕ್ಲರ್ಕ್ ಆಗಿರುತ್ತಾನೆ
ಬಸವರಾಜ್ ಗಂಡ ಮತ್ತು ಮಾವ ಸದಾಶಿವ ಅತ್ತೆ ಕಮಲಾ ಪೂಜಾಳನ್ನ ಅವಾಚ್ಚ ಶಬ್ದಗಳಿಂದ ಬೈಯುವುದು ಮತ್ತು ಕೊಲ್ಲುವ ಬೆದರಿಕೆ ಹಾಕುವುದು ಮತ್ತು ಹೊಡೆಯುವುದು ಮಾಡುತ್ತಾರೆ.
ಈಗ ಹೇಗೋ ನೆನ್ನೆ ಒಂದು ರಾತ್ರಿಯನ್ನು ಕಳೆದು ಈಗ ತಂದೆ ತಾಯಿಯರ ಜೊತೆ ಪೊಲೀಸರ ಮೊರೆ ಹೋಗಿರುತ್ತಾರೆ ಪೂಜಾ .
ಹೀಗಾಗಿ ಹಲ್ಲೆ ಗೋಳಗಾದ ಪೂಜಾ ಆಸ್ಪತ್ರೆಗೆ ದಾಖಲಾಗಿದ್ದು . ಚಿಕಿತ್ಸೆ ಪಡೆಯುತ್ತಿದ್ದಾಳೆ
ಮದುವೆ ಆಗಿ -6 ವರುಷ ಆಯ್ತು ಮದುವೆ ಯಾದ ನಂರತ ಕೇವಲ 9 ತಿಂಗಳು ಚನ್ನಾಗಿ ಇದ್ದರು ನಂತರ ಒಂದು ಹೆಣ್ಣು ಮಗು ಆದ ನಂತರ ಈಗ ಹೆಂಡತಿಗೆ ಗಂಡ ಮತ್ತು ಗಂಡನ ಮನೆಯವರಿಂದ ವರದಕ್ಷಣೆಗಾಗಿ ಕಿರುಕುಳ ಕೊಡುತ್ತಾಬಂದ್ದಿದಾರೆ …
ಆಗ ಪದೆ ಪದೆ ಹಿಗೇ ಆಗುತ್ತಿರುವದರಿಂದ
ಹಿಗಿರುವಾಗ ಒಂದು ಬಾರಿ ಪೋಲಿಸ್ complete ಮಾಡಿದ್ದು ನ್ಯಾಯ ಸಿಗದೆ ಇದ್ದಾಗ ಕೋರ್ಟ ಮಟ್ಟಲೆರಿದಳು ಬಳಿಕ ಒಂದು ವರ್ಷತನಕ ತನ್ನ ತಂದೆ ತಾಯಿ ಮನೆಯಲ್ಲಿ ವಾಸಿಸಿ ನಂತರ ನ್ಯಾಯಲದ ಆದೇಶದಂತೆ ನ್ಯಾಯಧಿಶರು ನಾನು ಇದ್ದೆನೆ ನೀನಗೆ ಏನು ಆಗುವುದಿಲ್ಲ ನೀನು ನಿನ್ನ ಗಂಡನ ಮನೆಗೆ ಎಲ್ಲವನ್ನು ಮರೆತು ಜಿವನವನ್ನು ಮಾಡಲು ಹೋಗು ಮತ್ತೆ ಇದೆ ರೀತಿ ಏನಾದರು ಕೀರುಕುಳ ಕೋಲೆ ಮಾಡಲು ಏನಾದರು ಪ್ರಯತ್ನಿಸಿದರೆ .ಮತ್ತೆ ಕೋರ್ಟ ಮೋರೆ ಬಾ ಎಂದು ಹೇಳಿ ಕಳಿಸಿದರು .. ತದ ನಂತ್ತರ ನ್ಯಾಯಾಲಯಕ್ಕೆ ಗೌರವ್ ಸಲ್ಲಿಸಿ ಜಡ್ಜ ಹೇಳಿದಂತೆ ಪೂಜಾ ಬಸವರಾಜ ಕೋಲ್ಕಾರ ತನ್ನ ಗಂಡನ ಮನೆಗೆ ಸಂಸಾರ ಮಾಡಲು ಹೋಗಿರುತ್ತಾಳೆ….
ಆದರೆ ಮತ್ತೆ ಹೋಗಿ ಏಳು ಎಂಟು ತಿಂಗಳು ಚನ್ನಾಗಿ ಸಂಸಾರ ನಡೆಸಿದ ಪೂಜಾ ಬಸವರಾಜ ಕೋಲ್ಕಾರ ಹೆಣ್ಣುಮಗಳಿಗೆ ದಿನಾಂಕ 23/12/2025 ರಂದು ಮತ್ತೆ ರಾತ್ರಿ 9:30 ,10 ಗಂಟೆಗೆ ಆ ಹೆಣ್ಣು ಮಗಳಿಗೆ ವಿನಾಕಾರಣ ವರದಕ್ಷಿಣೆ ಕೀರುಕಳು, ಹಾಗೂ ಮಾನಸಿಕ ವಾಗಿ ದೈಹಿಕ ವಾಗಿ ಹೋಡೆ ,ಬಡಿ ಮಾಡಿ ಪೂಜಾಳಗೆ ಚಿತ್ರ ಹಿಂಸೆಯನ್ನ ಕೊಟ್ಟಿದ್ದಾರೆ . ಇಷ್ಟೆ ಅಲ್ಲದೆ ಮಾವನಾದ ಸದಾಶಿವ ಕೊಲ್ಕಾರ ಮತ್ತು ಅತ್ತೆ ಪೂಜಾಳಿಗೆ ನಮ್ನ ಮನೆ ಬಿಟ್ಟು ಹೋಗ ಇಲ್ಲಿಂದ ನಡೆ ಇಲ್ಲಿಂದ ಎಂದು ಗಟಾರದಲ್ಲಿ ನೂಗಿಸಿ ಹೋಗಿ ಅವಾಚ್ಯ್ಚ ಶಬ್ದ ಗಳಿಂದ ನಿಂದಮಾಡಿದ್ದರೆ … ಹೀಗಾಗಿ ಮನನೋಂದು ಪೂಜಾ ಹೋರಗಡೆ 1ಗಂಟೆವರೆಗು ಹೋರಗಡೆ ಇದ್ದು ಬಾಗಿಲನ್ನು ತೆರೆಯರಿ ಎಂದು ಎಷ್ಟೋ ಬಾರಿ ಕಾಲು ಬಿದ್ದು ಬಾಗಿಲನ್ನು ತೆಗೆಯಿರಿ ನನಗೆ ಬಯವಾಗಿತ್ತಿದೆ ಎಂದು ಎಷ್ಷೋ ಬಾರಿ ಗೋಳಾಡಿ ಕೊಂಡು ಆದ ಬಳಿಕ ಮಧ್ಯರಾತ್ರಿ ,2 ಗಂಟೆ ಸುಮಾರಿಗೆ ಬಾಗಿಲವನ್ನು ತೆರೆದ್ದಾರೆ…
ಮತ್ತೆ ಬೇಳಕು ಹರಿಯುತ್ತಿದ್ದಂತೆ ಯಾವುದೋ ಒಂದು ನೇವ ಇಟ್ಟುಕೋಂಡು ರಾತ್ರಿ ಎಲ್ಲಿ ಹೋಗಿದ್ದಿ ಯಾರ ಜೋತೆ ಹೋಗಿದ್ದಿ ಯಾವನ್ ಜೋತೆ ಓಡಿ ಹೋಗಿದ್ದಿ ಎಂದು ಸುಳ್ಳುಗಳ್ಳನ್ನ ಸೃಷ್ಟಿ ಮಾಡಿ ಪೂಜಾಳನ್ನ ಬಡಿ ಹೋಡಿ ಬಡಿ ಮಾಡಿ ಕೊಲ್ಲುವ ಪ್ರಯತ್ನ ಮಾಡಿದ್ದಾರೆ ಆಗ ಪೂಜಾ ತಕ್ಷಣವೇ ತನ್ನ ತಂದೆಗೆ ಪೋನು ಮಾಡಿದ್ದಾಳೆ . ಇದನ್ನ ಕೇಳಿ ತಂದೆ ಗಾಬೆರಿ ಗೊಂಡು ಮಗಳ ಮನೆಗೆ ತಕ್ಷಣವೆ ದಾವಿಸಿ ಮಗಳನ್ನು ಉಳಿಸಿಕೋಳಳ್ಳು ಪ್ರಯತ್ನಿಸಿದಾಗ ಪೂಜಾಳ ತಂದೆ ಮೇಲೆ ಕೂಡ ಮಾವನಾದ ಶದಾಸಿವ, ಬಸವರಾಜ್ ಮಾರಣಾಂತಿಕ ವಾಗಿ ಮಾರಕ ಅಸ್ತ್ರ ಕಲ್ಲುಗಳಿಂದ ಹೋಡೆ ಬಡಿ ಮಾಡಿಮಾಡಿದ್ದರೆ…..
ತದನಂತರ ಇದಾದ ಭಳಿಕ ತಕ್ಷಣವೇ ಸ್ಥಳೀಯ ಪೋಲಿಸ್ ಠಾಣೆಯ ಮೋರೆ ಹೋಗಿದ್ದಾರೆ….
ಹೆಂಡತಿಮೇಲೆ ಮಧ್ಯರಾತ್ರಿ ಹಲ್ಲೆ ಮಾಡಿ ಹೊರಹಾಕಿದ ಗಂಡ ಬಸವರಾಜ್ ಮತ್ತು ಮಾವ ಅತ್ತೆ
ಬಸವರಾಜ್ ಕೊಲ್ಕಾರ ಎಂಬುವವನು ಡಿಸಿಸಿ ಬ್ಯಾಂಕ್ ನಿಪ್ಪಾಣಿಯಲ್ಲಿ ಕ್ಲರ್ಕ್ ಆಗಿರುತ್ತಾನೆ
ಬಸವರಾಜ್ ಮತ್ತು ಮಾವ ಸದಾಶಿವ ಪೂಜಾಳನ್ನ ಅವಾಚ್ಚ ಶಬ್ದಗಳಿಂದ ಬೇಯುವುದು ಮತ್ತು ಕೊಲ್ಲುವ ಬೆದರಿಕೆ ಹಾಕುವುದು ಮತ್ತು ಹೊಡೆಯುವುದು ಮಾಡುತ್ತಾರೆ.
ಈಗ ಹೇಗೋ ನೆನ್ನೆಯ ರಾತ್ರಿಯನ್ನು ಕಳೆದು ಈಗ ತಂದೆ ತಾಯಿಯರ ಜೊತೆ ಪೊಲೀಸರ ಮೊರೆ ಹೋಗಿರುತ್ತಾರೆ ಪೂಜಾ
ಬಲೂನ್ ತುಂಬುವ ಗ್ಯಾಸ್ ಸಿಲಿಂಡರ್ ಸ್ಪೋಟ.ಓರ್ವ ಸಾವು.4 ಮಂದಿಗೆ ಗಾಯ.ಅರಮನೆ ಬಳಿ ಘಟನೆ.
ಮೈಸೂರು ಗ್ಯಾಸ್ ಬಲೂನ್ ಸ್ಪೋಟದಿಂದ ಒಬ್ಬರು ಸಾವನ್ನಪ್ಪಿದ ದುರ್ಘಟನೆ ಅರಮನೆ ಗೇಟ್ ಬಳಿ ನಡೆದಿದೆ.ಘಟನೆಯಲ್ಲಿ 4 ಮಂದಿ ಗಾಯಗೊಂಡಿದ್ದು ಈ ಪೈಕಿ ಇಬ್ಬರ ಸ್ಥಿತಿ ಗಂಭೀರ ಎಂದು ಹೇಳಲಾಗಿದೆ.ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಘಟನೆಯಿಂದ ಬೆಚ್ಚಿಬಿದ್ದಿದೆ.ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹರಪನಹಳ್ಳಿ ತಾಲೂಕು ವಾಲ್ಮೀಕಿ ಗುರುಪೀಠಕ್ಕೆ ಪ್ರತಿನಿಧಿಯಾಗಿ ಜಿಟ್ಟನಕಟ್ಟಿ ಎಚ್ ಕೆ ಮಂಜುನಾಥ್ ಆಯ್ಕೆ
ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಹರಪನಹಳ್ಳಿ ತಾಲೂಕು ಪ್ರತಿನಿಧಿಯಾಗಿ ಜಿಟ್ಟನಕಟ್ಟಿ ಎಚ್ ಕೆ ಮಂಜುನಾಥ್ ಆಯ್ಕೆಯಾಗಿದ್ದಾರೆ. ಈ ವೇಳೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನ ನಂದ ಸ್ವಾಮೀಜಿ ಅವರು ಜಿಟ್ಟನಕಟ್ಟಿ ಎಚ್ ಕೆ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ವರದಿ ಭರ್ಮಪ್ಪ ಮಾಗಳದ
ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರ ರಸ್ತೆಯನ್ನು ಸ್ವಚ್ಛಗೊಳಿಸಿ ಸಿಸಿ ರಸ್ತೆಯನ್ನು ನಿರ್ಮಿಸಬೇಕು ಎಂದು ಅಗ್ರಹಿಸಿ ಮಹೆಬೂಬ್ ಕೆ ಚೌದರಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಆಗ್ರಹಪಡಿಸಿದ್ದಾರೆ…
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರ ರಸ್ತೆಯ ಮೇಲೆ ಚರಂಡಿ ನೀರು ಚರಂಡಿ ಹರಿದು ಹೋಗುತ್ತಿದೆ ಇದರಿಂದ ಗಬ್ಬುನಾಥ ಬಂದು ಚಿಕ್ಕ ಮಕ್ಕಳು ಹಿರಿಯರು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿಯಾಗಿ ಕ್ರಿಮಿಕೀಟಗಳ ಬಾದೆಯಿಂದ ರೋಗ ಬರುವ ಬಿತಿಯಿಂದ ಇಲ್ಲಿನ ವಾರ್ಡ್ ನಂಬರ್ ಒಂದರ ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಇಲ್ಲಿನ ವಾರ್ಡ್ ನಂಬರ್ ಒಂದರ ರಸ್ತೆಯನ್ನು ಮುರುಮ್ಮ ಹಾಕಿ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನವು ಮಾಡಿಕೊಡಬೇಕು ಹಾಗು ಸರ್ಕಾರದಿಂದ ಗ್ರಾಮಗಳ ಸಬಲೀಕರಣಕ್ಕಾಗಿ ಬಿಡುಗಡೆಯಾದ ಕೋಟ್ಯಾಂತರ ರೂಪಾಯಿ ಅನುದಾನವು ಗ್ರಾಮಗಳ ಅಭಿವೃದ್ಧಿಗೆ ಸದ್ಬಳಿಕೆಯಾಗಬೇಕು. ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆಗುವುದನ್ನು ಪ್ರತಿಯೊಬ್ಬ ಯುವಕರು ಪ್ರಶ್ನಿಸಿ ತಡೆಗಟ್ಟಬೇಕು ಎಂದು ಬಿಳವಾರ್ ಗ್ರಾಮ ಪಂಚಾಯತ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದೆವೆಂದು ಗ್ರಾಮಸ್ಥರಾದ ಮೆಹಬೂಬ್ ಕೆ ಚೌದರಿ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಒಂದು ವೇಳೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರಿದರೆ ಗ್ರಾಮ ಪಂಚಾಯಿತಿಗೆ ಬೀಗವನ್ನು ಜಡೆದು ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ
ವರದಿ ಜೇಟ್ಟೆಪ್ಪ ಎಸ್ ಪೂಜಾರಿ
ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ. ಸಾಕಾನೆಗಳಿಂದ ಕೂಂಬಿಂಗ್.
ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ. ಸಾಕಾನೆಗಳಿಂದ ಕೂಂಬಿಂಗ್. ಹುಣಸೂರಿನ ನಾಗಮಂಗಲ ಗ್ರಾಮ ಹೊರವಲಯದಲ್ಲಿ ಕಾಣಿಸಿಕೊಂಡ ಹುಲಿ. ಭಯಭೀತರಾದ ಗ್ರಾಮಸ್ಥರು.
ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದ ಮೇಲೆ ಕುಳಿತ ಹುಲಿ.ನಾಲ್ಕು ಹುಲಿಗಳು ಓಡಾಡುತ್ತಿರುವ ಬಗ್ಗೆ ಮಾಹಿತಿ.ಕೂಂಬಿಂಗ್ ಆಪರೇಷನ್ ಗರ ಸಾಕಾನೆಗಳಾದ
ಭೀಮ, ಏಕಲವ್ಯ, ವರಲಕ್ಷ್ಮಿ ಆನೆಗಳ ಬಳಕೆ.
ಎರಡು ಥರ್ಮಲ್ ಡ್ರೋಣ್ ಮುಖಾಂತರ ಕಾರ್ಯಾಚರಣೆ.
ಗಡಿನಾಡಲ್ಲಿ ಕನ್ನಡ ಶಕ್ತಿ ಪ್ರದರ್ಶನ! ಅತ್ತಿಬೆಲೆಯಲ್ಲಿ 70ನೇ ರಾಜ್ಯೋತ್ಸವ: ವಸಿಷ್ಠ ಸಿಂಹ, ರೂಪೇಶ್ ರಾಜಣ್ಣ ಭಾಗಿ; ಉಚಿತ ಟೈಲರಿಂಗ್ ಮಿಷನ್ ವಿತರಣೆ
ಕನ್ನಡ ನಾಡಿನ ಗಡಿನಾಡು ಅತ್ತಿಬೆಲೆ ಪ್ರದೇಶದಲ್ಲಿ ಕನ್ನಡ ಪ್ರೀತಿ ಮತ್ತು ಸಮಾಜ ಸೇವೆಯನ್ನು ಸಾರುವ ಉದ ಗಡಿನಾಡು ಕನ್ನಡ ಯುವ ಸೇನೆಯು ತನ್ನ 70ನೇ ಕನ್ನಡ ರಾಜ್ಯೋತ್ಸವ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ನಾಗರಾಜ್ (ಸೋನಿ) ಅವರು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳನ್ನು ಪ್ರಕಟಿಸಿದರು.
ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಸಾರಿಗೆ ಸಂಚಾರ
ರಾಜ್ಯೋತ್ಸವ ಸಮಾರಂಭವು ಶನಿವಾರ, ಡಿಸೆಂಬರ್ 13, 2025 ರಂದು ಸಂಜೆ 6:00 ಗಂಟೆಗೆ ಅತ್ತಿಬೆಲೆಯ ಸರ್ಕಾರಿ ಬಾಲಕರ ಪ್ರಾಥಮಿಕ ಪಾಠಶಾಲೆ ಆಟದ ಮೈದಾನದಲ್ಲಿರುವ ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ನಡೆಯಲಿದೆ.

ಖ್ಯಾತನಾಮರ ಸಮಾಗಮ: ಕನ್ನಡದ ಶಕ್ತಿಗೆ ಪ್ರೋತ್ಸಾಹ
ಗಡಿನಾಡಿನ ಈ ಕನ್ನಡ ಹಬ್ಬಕ್ಕೆ ಕನ್ನಡದ ಪ್ರಮುಖ ತಾರೆಯರು ಮತ್ತು ಹೋರಾಟಗಾರರು ಆಗಮಿಸುತ್ತಿರುವುದು ವಿಶೇಷವಾಗಿದೆ:
ಮನರಂಜನೆ : ‘ತಿಸ್ಟಾರ್ ಈವೆಂಟ್ಸ್’ ತಂಡದವರಿಂದ ಮನರಂಜನಾ ಕಾರ್ಯಕ್ರಮಗಳು, ಜೊತೆಗೆ ಸಾಂಸ್ಕೃತಿಕವಾಧ್ಯಗೋಷ್ಠಿ ನಡೆಯಲಿದೆ.
ಬಡವರಿಗಾಗಿ ಟೈಲರಿಂಗ್ ಮಿಷನ್ ಹಾಗೂ ಆಟೋ ರ್ಯಾಲಿ
ಸೇವೆಗೆ ಒತ್ತು : ರಾಜ್ಯೋತ್ಸವದ ಅಂಗವಾಗಿ ಬಡ ಮಹಿಳೆಯರ ಸ್ವಾವಲಂಬನೆಗಾಗಿ ಉಚಿತ ಟೈಲರಿಂಗ್ ಮಿಷನ್ಗಳ ವಿತರಣೆ ಮತ್ತು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಕಂಬಳಿ (ಕಮ್ಮಳಿ) ವಿತರಣೆ ಮಾಡಲಾಗುವುದು.
ಐತಿಹಾಸಿಕ ಆಟೋ ರ್ಯಾಲಿ : ಕಾರ್ಯಕ್ರಮಕ್ಕೆ ಮುನ್ನ, ಆನೇಕಲ್ ತಾಲ್ಲೂಕಿನ ಪ್ರಮುಖ ನಾಯಕರು, ಚಲನಚಿತ್ರ ನಟರು ಹಾಗೂ ವಿಶೇಷವಾಗಿ ಆಟೋ ಚಾಲಕ ಬಂಧುಗಳ ವತಿಯಿಂದ ಗಡಿನಾಡಿನಲ್ಲಿ ಕನ್ನಡದ ಶಕ್ತಿಯನ್ನು ಸಾರುವ ಅದ್ದೂರಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ನಾಗರಾಜ್ (ಸೋನಿ) ಅವರು, “ಗಡಿನಾಡಿನಲ್ಲಿ ಕನ್ನಡದ ಶಕ್ತಿ ಕುಂದದಂತೆ ನೋಡಿಕೊಳ್ಳುವುದು ನಮ್ಮ ಸಂಕಲ್ಪ. ಕನ್ನಡ ರಾಜ್ಯೋತ್ಸವವನ್ನು ಸೇವಾ ಕಾಯಕದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಸಮಸ್ತ ಕನ್ನಡಾಭಿಮಾನಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದ ರೂವಾರಿಗಳು ಮತ್ತು ಸಹಕಾರ ನೀಡಿದವರು
ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವವರು ನಾಗರಾಜ್ ಸೋನಿ (ರಾಜ್ಯಾಧ್ಯಕ್ಷರು), ವಸಂತ ಕುಮಾರ್, ಮಂಜುನಾಥ್, ಮುನಿರಾಜು, ರವಿ ಕಿರಣ್, ರವಿ, ನಚ್ಚಿ ಛಲವಾದಿ, ಮಂಜುನಾಥ್ ಎಮ್ ಆರ್, ಶ್ರೀನಿವಾಸ್ ಟಿ.
ವಿಶೇಷ ಸಹಕಾರ : ಆಟೋ ಅಂಬರೀಷ್, JMC ಸೌಂಡ್ಸ್ ಮಾಲೀಕರು ಮುನಿಕೃಷ್ಣ, ಹಾಗೂ ಸಮಸ್ತ ಆಟೋ ಚಾಲಕ ಬಂಧುಗಳು.
ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ…ಕಾರ್ಖಾನೆ ಮಾಲೀಕನಿಂದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ…ಮಾಲೀಕನ ವಿರುದ್ದ FIR…
ಮೈಸೂರು,
ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ ಎಂದು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಸಲ್ಯೂಷನ್ಸ್ ಮ್ಯಾನುಫ್ಯಾಕ್ಚರ್ ಕಂಪನಿಯ ಮಾಲೀಕ ಮುರಳಿಧರ್ ಎಂಬುವರ ಮೇಲೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಗರ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ.ಸೆಕ್ಸುವಲ್ ನಲ್ಲಿ ಸಹಾಯ ಮಾಡಿದ್ರೆ ಚೆನ್ನಾಗಿ ನೋಡಿಕೊಳ್ತೀನಿ ಎಂದು ಒತ್ತಾಯಿಸಿದ್ದಾರೆ.ಮೊಬೈಲ್ ಗಳಿಂದ ಮೆಸೇಜ್ ಮಾಡಿದ್ದಾರೆ.ಇದರಿಂದ ನೊಂದ ಉದ್ಯೋಗಿ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಾರೆ.ಹೀಗಿದ್ದೂ ಬಿಡದ ಮಾಲೀಕ ಮುರಳಿಧರ್ ಮಹಿಳೆ ಹಿಂದೆ ಬಿದ್ದಿದ್ದಾನೆ.ಮನೆಗೆ ಬಂದು ಕೆಲಸಕ್ಕೆ ಹಿಂದಿರುಗುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ.ನಿನ್ನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಹೆದರಿಸಿದ್ದಾನೆ.ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿರುವ ನೊಂದ ಮಹಿಳಾ ಉದ್ಯೋಗಿ ಮಾಲೀಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
