ಉರ್ದು ಭಾಷೆ ಮತ್ತು ಸಂಸ್ಕೃತಿ ಕೋರಮಂಗಲದಲ್ಲಿ ಅದ್ಧೂರಿ ಆಚರಣೆ

Share

“ಜಶ್ನ್-ಇ-ಯಾಮ್-ಎ-ಉರ್ದು: ಬೆಂಗಳೂರಿನಲ್ಲಿ ಉರ್ದು ಭಾಷೆ ಮತ್ತು ಸಂಸ್ಕೃತಿಯ ಫೆಬ್ರವರಿ 8, 2025ರಂದು ಕೋರಮಂಗಲದಲ್ಲಿ ಅದ್ಧೂರಿ ಆಚರಣೆ”.
ಯುನೈಟೆಡ್ ಕೌನ್ಸಿಲ್ ಫಾರ್ ಎಜುಕೇಶನ್ ಅಂಡ್ ಕಲ್ಚರ್ (ಯುಸಿಇಸಿ), ಮಹಫಿಲ್ -ಎ-ನಿಸಾ ಸಹಯೋಗದೊಂದಿಗೆ ಉರ್ದು ಭಾಷೆಯ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಆಚರಿಸಲು ‘ಜಶ್ನ್-ಇ-ಯಾಮ್-ಇ-ಉರ್ದು’ (ಉರ್ದು ದಿನ) ಆಯೋಜಿಸಲು ಸಜ್ಜಾಗಿದೆ. 
ತಾ:8-2-25ರಂದು ಬೆಂಗಳೂರಿನ ಕೋರ ಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 9:00 AM ರಿಂದ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.ಈ ಪ್ರತಿಷ್ಠಿತ ಆಚರಣೆಯು ಸಾಂಸ್ಕೃತಿಕ ಪ್ರದರ್ಶನಗಳು,
ಸಂವಾದಾತ್ಮಕ ಚಟುವಟಿಕೆಗಳು ಮತ್ತು ಸ್ಪೂರ್ತಿದಾಯಕ ಪ್ರಸ್ತುತಿಗಳ ಮೂಲಕ ಉರ್ದುವಿನ ಸೌಂದರ್ಯ, ಪರಂಪರೆ ಮತ್ತು ಪ್ರಭಾವವನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ. 

ಈವೆಂಟ್‌ನ ಪ್ರಮುಖ ಮುಖ್ಯಾಂಶವೆಂದರೆ ಅದ್ಭುತವಾದ ಏರೋಬಿಕ್ಸ್ ಪ್ರದರ್ಶನ ಮ ತ್ತು ವಿವಿಧತೆಯಲ್ಲಿ ರಾಷ್ಟ್ರದ ಏಕತೆಯನ್ನು ಸಂಕೇತಿಸುವ ವಿದ್ಯಾರ್ಥಿಗಳ ಭಾರತ ನಕ್ಷೆ ಯ ರಚನೆ.ವೇದಿಕೆಯಲ್ಲಿ ಸುಮಾರು 800 ಶಾಲಾ ಮಕ್ಕಳ ಸಕ್ರಿಯ ಭಾಗವಹಿಸುವಿಕೆಗೆ ಈವೆಂಟ್ ಸಾಕ್ಷಿಯಾಗಲಿದೆ, ಸುಮಾರು 2,000 ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ಭಾಷಾ ಭಿಮಾನಿಗಳು ಪ್ರೇಕ್ಷಕರಾಗಿ ಭಾಗವಹಿಸಲಿದ್ದಾರೆ.  ಆಚರಣೆಯ ಭಾಗವಾಗಿ, ಒಳಾಂಗಣ ಕ್ರೀಡಾಂಗಣದಿಂದ ಮಕ್ಕಳ ರ್ಯಾಲಿಯನ್ನು ನಡೆಸಲಾಗುವು ದು, ರಾಷ್ಟ್ರೀಯ ಕ್ರೀಡಾ ಗ್ರಾಮ(ಎನ್‌ಜಿವಿ) ಮೂಲಕ ಹಾದು ಹೋಗುತ್ತದೆ ಮತ್ತು ಕ್ರೀಡಾಂಗಣಕ್ಕೆ ಹಿಂತಿರುಗುವ ಮೊದಲು ಜಿಎಸ್‌ಟಿ ಕಚೇರಿ ಮತ್ತು ಪಾಸ್‌ಪೋರ್ಟ್ ಕಚೇರಿಯಂತಹ ಪ್ರಮುಖ ಹೆಗ್ಗುರುತುಗ ಳನ್ನು ಒಳಗೊಂಡಿದೆ.ಬ್ಗಣ್ಯರು ಮತ್ತು ವಿಶೇಷ ಅತಿಥಿಗಳು, ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯ ಕ್ರಮದ ಮಹತ್ವವನ್ನು ಹೆಚ್ಚಿಸಿದ್ದಾರೆ. ರ್ಯಾಲಿಯನ್ನು ಕರ್ನಾಟಕ ಸರ್ಕಾರದ ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮ ಲಿಂಗಾರೆಡ್ಡಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳು: ಡಾ.ಕೆ.ರೆಹಮಾ ನ್ ಖಾನ್ – ಮಾಜಿ ಕೇಂದ್ರ ಸಚಿವ ಮತ್ತು ಮಾಜಿ ಉಪ ಸಭಾಪತಿ-ರಾಜ್ಯಸಭೆ.ಶ್ರೀ. ಜಮೀರ್ ಅಹಮದ್ ಖಾನ್ – ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು, ಕರ್ನಾಟಕ ಸರ್ಕಾರ.ಶ್ರೀ ನಸೀರ್ ಅಹಮದ್ – MLC ಮತ್ತು ಕರ್ನಾಟಕದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ.ಶ್ರೀಮತಿ ಬಿಲ್ಕೀಸ್ ಬಾನೋ – MLC, ಕರ್ನಾಟಕ ಸರ್ಕಾರ.ಮೌಲಾನಾ ಮೊಹಮ್ಮದ್ ಅಲಿ ಖಾಜಿ – ಅಧ್ಯಕ್ಷರು, ಕರ್ನಾಟಕ ಉರ್ದು ಅಕಾಡೆಮಿ. ಇವರು ಗಳು ಭಾಗವಹಿಸುವರು”ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.


Share

ರಸ್ತೆ ಕಾಮಗಾರಿ ಗುದ್ದಲಿ ಪೂಜಾ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಡಿ. ರವಿಶಂಕರ್

Share

ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆದ ರಸ್ತೆ ಕಾಮಗಾರಿ ಗುದ್ದಲಿ ಪೂಜಾ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಡಿ. ರವಿಶಂಕರ್ ರವರಿಗೆ ನಾಯಕ ಸಮಾಜದ ವತಿಯಿಂದ ಶಾಲು ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ದೊಡ್ಡ ಸ್ವಾಮಿಗೌಡ, ರಾಜ್ಯ ವಾಲ್ಮೀಕಿ ನಿಗಮದ ಅಧ್ಯಕ್ಷ ಎಸ್.ಸಿ.ಬಸವರಾಜು, ರಾಜ್ಯ ಕಾಂಗ್ರೆಸ್ ಎಸ್.ಟಿ ಘಟಕದ ಕಾರ್ಯದರ್ಶಿ ಹೊಸೂರು ಕಲ್ಲಳ್ಳಿ ಶ್ರೀನಿವಾಸ್, ಕೆ.ಆರ್.ನಗರ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ತಿಪ್ಪರು ಮಹಾದೇವ, ಮುಂಜನಹಳ್ಳಿ ಮಹಾದೇವ್‌, ಗ್ರಾಪಂ ಮಾಜಿ ಅಧ್ಯಕ್ಷ ಮಧು, ಸಾಲಿಗ್ರಾಮ ಎಸ್‌ ಘಟಕದ ಅಧ್ಯಕ್ಷ ನರಸಿಂಹ ನಾಯಕ, ಚಿಕ್ಕಭೇರ್ಯ ಶ್ರೀನಿವಾಸ್ ಇತರರು ಭಾಗವಹಿಸಿದ್ದರು.


Share

ಮುಡಾ ಸೈಟ್ ಕೊಡಿಸುವ ಆಮಿಷ.ಮಹಿಳೆಗೆ 30 ಲಕ್ಷ ಪಂಗನಾಮ.ಹಣ ಕೇಳಿದ್ದಕ್ಕೆ ಹಲ್ಲೆ.ಮೂವರ ವಿರುದ್ದ FIR ದಾಖಲು.

Share

ಮೈಸೂರು: ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಮಹಿಳೆಗೆ ಆಮಿಷ ತೋರಿಸಿ 30 ಲಕ್ಷ ವಂಚಿಸಿದ ಪ್ರಕರಣ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಣ ವಾಪಸ್ ಕೊಡುವಂತೆ ಕೇಳಿದ ಮಹಿಳೆ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ.ವಂಚನೆ ಮಾಡಿ ಹಲ್ಲೆ ನಡೆಸಿದ ಮೂವರ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.

ಲಲಿತಾದ್ರಿಪುರ ಗ್ರಾಮದ ಮನಿಷಾ ಎಂಬ ಮಹಿಳೆ ವಂಚನೆಗೆ ಒಳಗಾದವರು.ಆಲನಹಳ್ಳಿ ಗ್ರಾಮದ ಪವಿತ್ರಾ ಹಾಗೂ ವಿಶ್ವನಾಥ್ ಶೆಟ್ಟಿ ಮತ್ತು ಪವಿತ್ರಾ ಪುತ್ರನ ವಿರುದ್ದ ಮನಿಷಾ ಪ್ರಕರಣ ದಾಖಲಿಸಿದ್ದಾರೆ.ಒಂದು ವರ್ಷದ ಹಿಂದೆ ಮುಡಾ ದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಪವಿತ್ರ ಹಾಗೂ ವಿಶ್ವನಾಥ ಶೆಟ್ಟಿ ಮನಿಷಾ ರಿಂದ 30 ಲಕ್ಷ ಪಡೆದಿದ್ದರು.ತಿಂಗಳುಗಳೆ ಉರುಳಿದರೂ ನಿವೇಶನವೂ ಇಲ್ಲ ಹಣವೂ ಇಲ್ಲ.ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ ಮನಿಷಾ ರವರು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಾರೆ.ಹಣ ನೀಡುವುದಾಗಿ ಮನೆ ಬಳಿ ಕರೆಸಿಕೊಂಡ ಪವಿತ್ರಾ ತನ್ನ ಮಗ ಹಾಗೂ ವಿಶ್ವನಾಥಶೆಟ್ಟಿ ಕುಮ್ಮಕ್ಕಿನಿಂದ ಮನಿಷಾ ಮೇಲೆ ಹಲ್ಲೆ ನಡೆಸಿದ್ದಾರೆ.ಈ ಸಂಭಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ FIR ದಾಖಲಾಗಿದೆ.


Share

ಹಿರೇಗುತ್ತಿ ಕಾಲೇಜ್ ಪ್ರತಿಭಾ ಪುರಸ್ಕಾರದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕಾಲೇಜ ಫಲಿತಾಂಶ ಶೇಕಡಾ ೧೦೦ ಆಗಲು ಕಾರತಣೀಕರ್ತರಾದ ಉಪನ್ಯಾಸಕರಿಗೆ ಗೌರವ ಸನ್ಮಾನ

Share

ಕುಮಟಾ: ಸರಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿ ೨೦೨೪-೨೫ ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಾಲೇಜ್ ಅಭಿವೃದ್ಧಿ ಸಮಿತಿ ಮತ್ತು ಬ್ರಹ್ಮಜಟಕ ಯುವಕ ಸಂಘದ ವತಿಯಿಂದ ಹಿರೇಗುತ್ತಿ ಪದವಿಪೂರ್ವ ಕಾಲೇಜ್ ೨೦೨೩-೨೪ನೇ ಸಾಲಿನಲ್ಲಿ ಕಾಲೇಜಿನ ಫಲಿತಾಂಶ ಶೇಕಡಾ ೧೦೦ ಕ್ಕೆ ೧೦೦ ಆಗಲು ಕಾರಣೀಕರ್ತರಾದ ೨೦೨೩-೨೪ನೇ ಸಾಲಿನ ಪ್ರಬಾರಿ ಪ್ರಾಂಶುಪಾಲರಾದ ನಾಗರಾಜ ವಿ ಗಾಂವಕರ ಹಾಗೂ ಉಪನ್ಯಾಸಕರಾದ ನೇತ್ರಾವತಿ ನಾಯಕ, ಸುಜಾತಾ ನಾಯಕ, ವಿಜಯಲಕ್ಷ್ಮಿ ಗಾಂವಕರ, ಶಾರದಾ ನಾಯಕ, ರಮೇಶ ಗೌಡ, ಶೀಲಾ ನಾಯ್ಕ, ಸೀಮಾ ಪಿ.ಪಿ, ಮಹಾಲಕ್ಷ್ಮಿ ಭಂಡಾರಿ, ವಿನಯಾ ಗೌಡ, ಮಧುರಾ ಗೌಡರವರಿಗೆ ಶಾಸಕರಾದ ದಿನಕರ ಕೇ ಶೆಟ್ಟಿಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಾಡ ಕಾಲೇಜ್ ಪ್ರಾಂಶುಪಾಲರಾದ ಮೋಹನ ನಾಯಕ, ಹಿರೇಗುತ್ತಿ ಪ್ರಿನ್ಸಿಪಾಲ್ ರಾಜೀವ, ಸುನೀಲ್ ಪೈ, ರಾಜೀವ ಗಾಂವಕರ, ಪ್ರೇಮಾನಂದ ಗಾಂವಕರ, ಬೊಮ್ಮಯ್ಯ ಬೊಮ್ಮನ್, ರಾಮು ಕೆಂಚನ್, ಹಿರೇಗುತ್ತಿ ಗ್ರಾ.ಪಂ ಸದಸ್ಯರಾದ ಮಹೇಶ ನಾಯಕ ಮೊರಬಾ, ಆನಂದ ನಾಯಕ ಹಾಗೂ ಮಹೇಶ(ಬಾಬು) ನಾಯಕ, ಎನ್ ರಾಮು ಹಿರೇಗುತ್ತಿ, ಬಾಲಚಂದ್ರ ಅಡಿಗೋಣ, ವೆಂಕಟ್ರಾಯ ನಾಯಕ, ಉದ್ದಂಡ ಗಾಂವಕರ, ಸುರೇಂದ್ರ ನಾಯಕ, ದೇವಿದಾಸ ನಾಯಕ, ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷ ಕಿಟ್ಟು ನಾಯಕ, ಉಪಾಧ್ಯಕ್ಷ ಆಕಾಶ ನಾಯಕ, ಕಾರ್ಯದರ್ಶಿ ಪ್ರೀತಮ್ ಗಾಂವಕರ, ಸುಭಾಸ್ ನಾಯಕ, ಉಪಸ್ಥಿತರಿದ್ದರು


Share

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಮೈಮೂಲ್ ನಿರ್ದೇಶಕ ಎ. ಟಿ ಸೋಮಶೇಖರ್ ಉದ್ಘಾಟಿಸಿದರು

Share

ಚುಂಚನಕಟ್ಟೆ ಸಮೀಪದ ಚಿಬುಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಮೈಮೂಲ್ ನಿರ್ದೇಶಕ ಎ. ಟಿ ಸೋಮಶೇಖರ್ ಉದ್ಘಾಟಿಸಿ ಮಾತನಾಡಿದ ಅವರು. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಜನರ ಆರ್ಥಿಕ ಪ್ರಗತಿಯ ಮುಖ್ಯ ಕಸುಬಾಗಿದ್ದು ಪ್ರತಿಯೊಬ್ಬ ಉತ್ಪಾದಕರು ರಾಸುಗಳಿಗೆ ಸಮತೋಲನ ಆಹಾರ ನೀಡುವುದರಿಂದ ಗುಣಮಟ್ಟದ ಹಾಲು ಪಡೆಯಲು ಸಾಧ್ಯ. ಗುಣಮಟ್ಟದಿಂದ ಕೂಡಿದ ಹಾಲು ಪೂರೈಕೆಯಿಂದ ಹೆಚ್ಚು ಲಾಭ ಪಡೆದು ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವುದರ ಜತೆಗೆ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಗ್ರಾಮೀಣ ಜನರ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸುವಲ್ಲಿ ಹೈನುಗಾರಿಕೆ ಪ್ರಮುಖ ಉದ್ಯೋಗವಾಗಿದೆ. ಉತ್ತಮ ದರ್ಜೆಯ ಹಾಲು ಪೂರೈಕೆ ಮಾಡಿದಷ್ಟು ಹೆಚ್ಚು ಲಾಭವನ್ನು ಉತ್ಪಾದಕರು ಪಡೆಯುತ್ತಾರೆ. ಪೌಷ್ಟಿಕ ಆಹಾರವನ್ನು ರಾಸುಗಳಿಗೆ ನೀಡಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಅಲ್ಲದೆ ವಿಮೆ, ಲಸಿಕೆ ಹಾಕಿಸುವ ಮೂಲಕ ರಾಸುಗಳ ಅರೋಗ್ಯ ಕಾಪಾಡ ಬೇಕು ಎಂದ. ಅವರು. ಸಂಘಗಳು ಹೈನುಗಾರರ ಮೇಲೆ ಅವಲಂಬಿತವಾಗಿವೆ ಮೈಮೂಲ್ ನಿಂದ ಸಿಗುವ ಸಹಾಯಧನ ಹಾಗೂ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಉಮೇಶ್ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲ ಮನೋಹರ್, ಜಿಲ್ಲಾ ಮೈಮುಲ್ ವ್ಯವಸ್ಥಾಪಕ ಕರಿಬಸವರಾಜು, ತಾಲೂಕು ಸಹಾಯಕ ವ್ಯವಸ್ಥಾಪಕ ಪ್ರವೀಣ್ ಪತ್ತರ್ ಅಭಿಲಾಶ್, ಸಂತೋಷ, ಚಿಬುಕಹಳ್ಳಿ ಬಸವರಾಜು, ಮಹದೇವ, ಗಿರಿಜಮ್ಮ, ಸಂಘದ ಅಧ್ಯಕ್ಷ ಸಿ. ಟಿ ಪಾಪಣ್ಣ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಜವರಯ್ಯ, ರಾಮೇಗೌಡ, ರಾಜಪ್ಪ, ಪುಟ್ಟೇಗೌಡ, ಸೋಮೇಗೌಡ, ಶೇಷಾ ಕುಮಾರ್, ರವೀಶ, ಸೋಮಶೇಖರ್, ಪ್ರಸನ್ನ, ಮಹಾದೇವಮ್ಮ, ಕಾರ್ಯದರ್ಶಿ ಲೋಕೇಶ್, ಹಾಲು ಪರೀಕ್ಷಕ ಮಂಜೇಶ್, ಸಹಾಯಕ ಜಗದೀಶ್ ಸೇರಿದಂತೆ ಮತ್ತಿತರರು ಇದ್ದರು.


Share

ಬಸವಣ್ಣನ ಪ್ರತಿಮೆಗೆ ಅವಮಾನ ಖಂಡಿಸಿ ಕಾಳಗಿ ಬಂದ್ ಯಶಸ್ವಿ

Share

ಕಾಳಗಿ : ಬೀದ‌ರ್ ಜಿಲ್ಲೆ ಭಾಲ್ಕಿ ತಾಲೂಕಿನ ದಗಡಿ ಗ್ರಾಮದಲ್ಲಿ ಬಸವೇಶ್ವರ ಪ್ರತಿಮೆಗೆ ಧ್ವಂಸ ಮಾಡಿರುವ ಘಟನೆ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿ ಶವ ಪತ್ತೆ ಖಂಡಿಸಿ ವೀರಶೈವ ಲಿಂಗಾಯತ ಸಮಾಜ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ
ಬುಧವಾರ ಹಮ್ಮಿಕೊಂಡ ಕಾಳಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನಕಾರರು ರಸ್ತೆಗಿಳಿದು ಹಳೆ ಬಸ್‌ ನಿಲ್ದಾಣ, ಅಂಬೇಡ್ಕರ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಬಸ್ ಮತ್ತಿತರ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಹಳೆ-ಹೊಸ ಬಸ್‌ ನಿಲ್ದಾಣ, ಮುಖ್ಯಬಜಾರ್ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದವು.

ಕಾಳಗಿಯಿಂದ ಕಲಬುರಗಿ, ಚಿಂಚೋಳಿ ಮಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ಪಟ್ಟಣದ ಮುಖ್ಯಬಜಾರ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಜರುಗಿತು. ನಂತರ ಕಲಬುರಗಿ ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಕಾಳಗಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಬಸವಣ್ಣನವರು ಸಮಾನತೆ, ಸಹೋದರತ್ವದ ಸಂದೇಶ ನೀಡಿದ್ದಾರೆ. ಆದ್ದರಿಂದ ಶಾಂತಿಯುತವಾಗಿ ಹೋರಾಟ ನಡೆಸಲಾಗುತ್ತಿದೆ. ಅಂಥ ಗುರುವಿನ ಪ್ರತಿಮೆಗೆ ಹಾನಿ ಮಾಡುವುದೆಂದರೆ ಮಾನವೀಯತೆಗೆ ಅವಮಾನ ಮಾಡಿದಂತೆ. ಬಸವೇಶ್ವರರ ತತ್ವ ಸಿದ್ಧಾಂತ ಎಲ್ಲರಿಗೂ ಮಾದರಿ. ಆದರೆ, ಅಪರಾಧಿಗಳು ಮಹಾನ್ ವ್ಯಕ್ತಿತ್ವವನ್ನು ಅಗೌರವಿಸಲು ಪ್ರಯತ್ನಿಸಿದರು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.

ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಲು ಯತ್ನಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರ್ಕಾರ ಕಬ್ಬಿಣದ ಕಡಲೆಯಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪ್ರತಿಮೆ ವಿರೂಪಗೊಳಿಸಿದ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಹಾಗೆಯೇ ಜಿಲ್ಲೆಯ ಜೇವರ್ಗಿಯಲ್ಲಿ ಅಪ್ರಾಪ್ತ ಬಾಲಕಿಯ ಪ್ರಾಣಕ್ಕೆ ಕುತ್ತು ತಂದ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಆದರೆ ಆತನನ್ನು ಅಪ್ರಾಪ್ತ ಎಂದು ಬಿಂಬಿಸಲು ಸತತ ಪ್ರಯತ್ನಗಳು ನಡೆದಿವೆ. ಇಂತಹ ಕ್ರಮವನ್ನು ವೀರಶೈವ ಲಿಂಗಾಯತ ಸಮಾಜ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಅವರನ್ನು ಕೂಡಲೇ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.

ನಂತರ ತಹಶಿಲ್ದಾರ ಘಮಾವತಿ ರಾಠೋಡ ಮುಖಾಂತರ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಮಂಗಲಗಿ ಪೂಜ್ಯ ಡಾ. ಶಾಂತ ಸೋಮನಾಥ ಶಿವಾಚಾರ್ಯರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶರಣರು,
ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಜಗಧೀಶ್ ಮಾಲಿಪಾಟೀಲ, ಹಿಂದೂ ಜಾಗೃತ ಸೇನೆ ತಾಲೂಕಾಧ್ಯಕ್ಷ ಶಂಕರ ಚೌಕಾ, ಮುಖಂಡರಾದ ದಿವ್ಯಾ ಹಾಗರಗಿ, ಮಲ್ಲಿನಾಥ ಪಾಟೀಲ‌ ಕಾಳಗಿ, ಶಿವರಾಜ್ ಪಾಟೀಲ ಕಲಗುರ್ತಿ, ಶರಣು ಮಜ್ಜಿಗೆ, ಶರಣು ಪಾಟೀಲ ಮೊತಕಪಳ್ಳಿ, ವೀರಣ್ಣ ಗಂಗಾಣಿ, ವಿಜಯಕುಮಾರ್ ಚೆಂಗಟಿ, ಶಿವರಾಜ್ ಪಾಟೀಲ ಗೊಣಗಿ, ಶಿವಕುಮಾರ್ ಕೊಡಸಾಲಿ, ಕಾಳಶೆಟ್ಟಿ ಪಡಶೆಟ್ಟಿ, ಚಂದ್ರಶೆಟ್ಟಿ ಮಾನಶೆಟ್ಟಿ, ಅಮೃತರಾವ ಪಾಟೀಲ್, ರೇವಣಸಿದ್ಧ ಕಲಶೆಟ್ಟಿ, ರಾಜಶೇಖರ ಗುಡದಾ, ನಾಗರಾಜ ಚಿಕ್ಕಮಠ, ನಾಗರಾಜ ಬೇವಿನಕರ್, ಸೋಮಶೇಖರ್ ಮಾಕಪನೋರ, ಸಂತೋಷ ಹೊಸ್ಸಳ್ಳಿ, ಮಂಜುನಾಥ ಭೇರನ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಹಾಗೂ ಬಸವ ಅಭಿಮಾನಿಗಳು ಇದ್ದರು.ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿ ಕೆ, ರವರ ನೇತೃತ್ವದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ ಮಾಡಲಾಗಿತ್ತು


Share

ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣದ ಸಭೆ

Share

ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕು ನಾಯಕ ಸಂಘ ರಿ ಆಹ್ವಾನದ ಮೇರೆಗೆ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟೇಬಲ್ ಟ್ರಸ್ಟ್ ನ ಗೌರವ ಸಲಹೆಗಾರರಾದ ಶ್ರೀ ಎಂ.ಅಪ್ಪಣ್ಣ ಅವರು ಸಭೆಗೆ ಭಾಗವಹಿಸಿದಾಗ ಸಂಘದ ಪದಾಧಿಕಾರಿಗಳು ಜೊತೆ ಸಭೆ ನಡೆಸಿದರು. ಅಧ್ಯಕ್ಷರಾದ ಸಿ.ಸಿ ಮಹದೇವ್ ಅವರು ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಮಂಡಿಸಿದರು ಸಾಲಿಗ್ರಾಮ ತಾಲ್ಲೂಕು ವಾಲ್ಮೀಕಿ ಭವನ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಕಳೆದ ಐದಾರು ವರ್ಷಗಳಿಂದ ಜಮೀನು ಮಂಜೂರು ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ,ಸಮಾಜದ ಸಂಘಟನೆ ಮಾಡುವ ವಿಚಾರ , ಪ್ರತಿ ಗ್ರಾಮದಲ್ಲಿ ಸಂಘಕ್ಕೆ ಸದಸ್ಯತ್ವ ಮಾಡುವ ವಿಚಾರ,ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಮಂಡಿಸಿದರು ಶ್ರೀ ಎಂ.ಅಪ್ಪಣ್ಣ ಅವರು ಎಲ್ಲಾ ವಿಚಾರಗಳನ್ನು ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದರು.

ಪ್ರಮುಖವಾಗಿ ಸಾಲಿಗ್ರಾಮ ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಕಳೆದ ಐದಾರು ವರ್ಷಗಳಿಂದ ತಾಲ್ಲೂಕು ಆಡಳಿತ ನಿವೇಶನ ನೀಡಲು ವಿಳಂಬ ಮತ್ತು ತಾರತಮ್ಯ ಮಾಡಿರುವ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ,ತಾಲ್ಲೂಕು ಆಡಳಿತಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ,ತಹಶಿಲ್ದಾರರಿಗೆ ಹಾಗೂ ಶಾಸಕರಾದ ಶ್ರೀ ರವಿಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ನಿವೇಶನ ನೀಡದಿರುವ ಬಗ್ಗೆ ಹಾಗೂ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಶೀಘ್ರವಾಗಿ ನಿವೇಶನ ಮಂಜೂರು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಶಿಪಾರಸ್ಸು ಮಾಡಿ ಸಮಾಜದ ಅಭಿವೃದ್ಧಿ ಸಹಕರಿಸಬೇಕೆಂದು ತಿಳಿಸಿದರು.

ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷರ ತಂಡ ಮಾಡುತ್ತಿರುವ ಕಾರ್ಯಕ್ರಮಗಳು ರಾಜ್ಯ ನಾಯಕರ ಗಮನಸೆಳೆದಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ.ಕಾಟೂರು, ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷರಾದ ಸಿ.ಸಿ.ಮಹದೇವ್, ಉಪಾಧ್ಯಕ್ಷ ತಂದ್ರೆ ವೆಂಕಟೇಶನಾಯಕ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.


Share

ಕಾರು ಬೈಕ್ ನಡುವೆ ಆಪಘಾತ ಯುವತಿ ಸ್ಥಳದಲ್ಲೇ ಸಾವು

Share

ಹೊನ್ನಾವರ- ಮುರುಡೇಶ್ವರ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಪೂಜಾ ಗೌಡ ಸಾವನಪ್ಪಿದ್ದಾರೆ.
ಹೊನ್ನಾವರದ ಅಪ್ಪಿಕೆರಿ ನಿವಾಸಿಯಾದ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿ ಸೋಮವಾರ ಮರಳಿ ಬರುವಾಗ ಹೊನ್ನಾವರ ಬಳಿಯ ಶರಾವತಿ ಸೇತುವೆಯಲ್ಲಿ ಹಿಂಬದಿಯಿಂದ ಬರುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಕಾರು ಮತ್ತೆ ಬೈಕ್ ಜಾಖಂಗೊಂಡಿದೆ ಸುರೇಶ ಗೌಡ ಬೈಕಿನಿಂದ ಹಾರಿ ಕೆಳಗೆ ಬಿದಿದ್ದು ಪೂಜಾ ಗೌಡ ಸಹ ನೆಲಕ್ಕೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share

ಔಷಧಿ ಸಸ್ಯಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಿಸಿ :ಗಜು ಪೈ

Share

ಕುಮಟಾ :-ತಾಲೂಕಿನ ಕತಗಾಲದಲ್ಲಿ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ನಡೆದ ಔಷಧ ಸಸ್ಯಗಳ ಕಾರ್ಯಗಾರವನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕೋವಿಡ ಸಂಧರ್ಭದಲ್ಲಿ ಗ್ರಾಮೀಣ ಭಾಗದ ಜನತೆಗೆ ಅಮೃತ ಬಳ್ಳಿಯ ಕಷಾಯ ಬಳಸಿದ್ದರಿಂದ ವೈರಾಣು ಎದುರಿಸಿರುವ ಎಷ್ಟೋ ಉದಾಹರಣೆಗಳಿವೆ ಎಂದು ಗಜು ಪೈ ಹೇಳಿದರು.ರಾಜ್ಯ ಔಷಧಿ ಗಿಣಮೂಲಿಕೆ ಪ್ರಾಧಿಕಾರ
ಜೀವ ವೈವಿಧ್ಯ ಮಂಡಳಿ ಹಾಗೂ ಕುಮಟಾದ ಐಕ್ಯ ಎನ್ ಜಿ ಓ ಅವರ ಸಹಕಾರದೊಂದಿಗೆ ಸಸ್ಯಗಳ ಕಾರ್ಯಾಗ್ರಹ ನಡೆಯಿತು.ಔಷಧ ಗಿಡಮೂಲಿಕಾ ಪ್ರಧಿಕಾರದ ವಿಜ್ಞಾನಿ ಡಾ ಎಮ್ ಜಿ ಪ್ರಭು ಮಾತನಾಡಿ ಆಯುರ್ವೇದದಲ್ಲಿ 2351 ನಾಟಿ ವೈದ್ಯ ಪದ್ಧತಿಯಲ್ಲಿ 5137 ಹಾಗೂ ಹೊಮಿಯೋಪತಿಯ ವೈದ್ಯ ಪದ್ಧತಿಯಲ್ಲಿ 506 ಬಗೆಯ ಗಿಡಮೂಲಿಕೆಯನ್ನು ಔಷಧಿ ತಯಾರಿಕೆಕೆ ಬಳಕೆ ಮಾಡುತ್ತಾರೆ.ಔಷಧಿ ಸಸ್ಯಗಳ ಬೇಡಿಕೆ ಅನುಗುಣವಾಗಿ ಅವುಗಳನ್ನು ಬೆಳೆಯಬೇಕು. ಎಂದು ತಿಳಿಸಿದರು.ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ ಎಮ್ ಡಿ ಸುಭಾಷ್ ಚಂದ್ರನ ಕರಾವಳಿ ಪ್ರದೇಶದಲ್ಲಿ ಬೆಳೆಯುವ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು.ಔಷಧಿ ಗಿಡಮೂಲಿಕಾ ಪ್ರಾಧಿಕಾರದ ವಿಜ್ಞಾನಿ ಡಾ ಕೆ ಎಮ್ ಪ್ರಭು ಕ್ರಷಿ ನಿರ್ಹವಣೆಯ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ವಿ ಪಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ರಾಜೀವ ಭಟ್ಟ,ಉದಯ ಭಟ್ಟ,ಪ್ರದೀಪ್ ಹೆಗಡೆ,ಶ್ರೀಧರ್ ಹೆಬ್ಬಾರ್,ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ಸಹಕಾರಿ ಸಂಘದ ಕಾರ್ಯನಿರ್ವಾಹಕ ಜಾನ್ ಫೆರ್ನಾಂಡಿಸ್,ಸಮಾಜ ಸೇವಕರಾದ ವಿ ಎಂ ಜಾಲಿಸತ್ತ್ಗಿ,ಕೆ ಪಿ ಭಟ್,ಜಗದೀಶ್ ನಾಯ್ಕ್,ಹಾಗೂ ಐಕ್ಯ ಎನ್ ಜಿ ಓ ಅಧ್ಯಕ್ಷ ಎಂ ಜಿ ನಾಯ್ಕ್ ಕಾರ್ಯಾಗಾರ ಸಂಹವನದಲ್ಲಿ ಪಾಲ್ಗೊಂಡರು.


Share

ಉತ್ತರ ಕರ್ನಾಟಕ ಜೈನ ಬಾಂಧವರ ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫

Share


ಉತ್ತರ ಕರ್ನಾಟಕ ಜೈನ ಬಾಂಧವರು ಆರನೇ ವರ್ಷದ ಸಂಕ್ರಾ0ತಿ ಸಂಭ್ರಮಾಚರಣೆ ೨೦೨೫ರ ಕಾರ್ಯಕ್ರಮವನ್ನು ಡಾ||ವೀರೇಂದ್ರ ಹೆಗ್ಡೆ ಸಭಾಂಗಣ, ಕರ್ನಾಟಕ ಜೈನ ಭವನ, ಶಂಕರಪುರ, ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮವನ್ನು ಡಿ.ಸುರೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ. ಉಮಾಶ್ರೀ ರವರು ಹಾಗೂ ಭಾರತೀಯ ಜೈನ ಮಿಲನದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಸುರೇಂದ್ರ ಕುಮಾರ್ ಅವರು ಆಗಮಿಸಿದ್ದರು. ಉತ್ತರ ಕರ್ನಾಟಕ ಜೈನ ಬಾಂಧವರ ಅಧ್ಯಕ್ಷರಾದ ಶ್ರೀ ಸುಭಾಷ್ ಜಿನಗೌಡರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಿದರು ಮತ್ತು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ತುಮಕೂರಿನ ಖ್ಯಾತ ಸಾಹಿತಿಗಳಾದ ಡಾಕ್ಟರ್ ಎಸ್ ಪಿ ಪದ್ಮಪ್ರಸಾದ್ ರವರ ಸವ್ಯಸಾಚಿ ಕಲಾವಿದ ಜಿನೇಂದ್ರ ಪುಸ್ತಕವನ್ನು ಭಾರತೀಯ ಜೈನ ಮಿಲನ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಶ್ರೀಮತಿ ಅನಿತಾ ಡಿ ಸುರೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಶಾಂತಿನಾಥ ಹುದ್ದಾರ್ ಕಾರ್ಯದರ್ಶಿಗಳಾದ ಶ್ರೀ ಬಾಹುಬಲಿ ಗೌರಾಜಿ ಮತ್ತು ಕಾರ್ಯಾಧ್ಯಕ್ಷರಾದ ಡಾಕ್ಟರ್ ಅಜಿತ್ ಮರುಗುಂಡೆ ಹಾಗೂ ಉತ್ತರ ಕರ್ನಾಟಕ ಜೈನ ಬಾಂಧವರ ನಿರ್ದೇಶಕರುಗಳು ಹಾಜರಿದ್ದರು ಮತ್ತು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉತ್ತರ ಕರ್ನಾಟಕ ಜೈನ ಮಹಿಳಾ ಮತ್ತು ಮಕ್ಕಳ ಹಾಗೂ ಶ್ರೀಮತಿ ಪ್ರೇಮ ಉಪಾಧ್ಯೆ, ಬೆಳಗಾವಿ ತಂಡಗಳಿAದ ರಸಭರಿತ ಕಾರ್ಯಕ್ರಮಗಳು ಅಲ್ಲಿಗೆ ಆಗಮಿಸಿದ್ದ ಜನರನ್ನು ಮನರಂಜಿಸಿದವು .


Share
1 2 3 17