ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನಂಜನಗೂಡು ಇವರ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಸಮಾರಂಭ ತಾಲೂಕು ಆವರಣದಲ್ಲಿ ನಡೆಯಿತು. ಈ ಸಮಾರಂಭವನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಪೂಜ್ಯ ಬಸವೇಶ್ವರರು ವಿಶ್ವದ ಅತಿ ಶ್ರೇಷ್ಠ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆಗಾಗಿ ತಮ್ಮ ಜೀವನಮನೆ ಮುಡಿಪಿಟ್ಟರು ಕಾಯಕವೇ ಕೈಲಾಸ ಎಂಬ ನಾಣ್ನುಡಿಯನ್ನು ವಿಶ್ವಕ್ಕೆ ಸಾರಿದರು. ನೊಂದವರ ದೀನ ದಲಿತರ ಕಷ್ಟಕ್ಕೆ ಒಳಗಾದವರ ಸೇವೆಯನ್ನು ಮಾಡುವುದು, ಅವರಿಗೆ ಸಹಾಯವನ್ನು ಮಾಡುವುದನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿದ್ದ ಹಲವಾರು ಗಣ್ಯರು ಶಾಸಕರು ಬಸವೇಶ್ವರಗೆ ಪುಷ್ಪಾರ್ಚನೆ, ಹೂಮಾಲೆಯನ್ನು ಧರಿಸಿದರು ಹಾಗೂ ಅವರನ್ನು ಸ್ಮರಣೆ ಮಾಡಿದರು. ತಾಲೂಕು ದಂಡಾಧಿಕಾರಿಗಳಾದ ಡಾಕ್ಟರ್ ಸ್ಮಿತಾ ರಾಮನ್ ರವರು ಜಗಜ್ಯೋತಿ ಬಸವೇಶ್ವರರ ಬಗ್ಗೆ ಹಿತವನ್ನು ಸಾರಿದರು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ಹಿರಿಯ ಪತ್ರಕರ್ತರಾದ ಮಧು, ದ್ವಾರಕನಾಥ್, ಪಟ್ಟಣ ಠಾಣೆ ನಿರೀಕ್ಷಕರಾದ ರವೀಂದ್ರ, ರೈತ ಸಂಘದ ಪ್ರತಿನಿಧಿಗಳು, ಹಲವಾರು ಗಣ್ಯ ಪುರುಷರು ಮಹಿಳೆಯರು ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆ, ಪ್ರಾರ್ಥನೆ, ಸ್ವಾಗತ ಪ್ರೇಮ ವಂದನಾರ್ಪಣೆ ಕಿರಣ್ ನಡೆಸಿಕೊಟ್ಟರು.
Category: LiveTV
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಚಿಂತನ, ಮಂಥನ
ಸುತ್ತೂರು ಮಠ, ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತೇಶ್ವರ ಧಾರ್ಮಿಕ ದತ್ತಿ ಸಹಯೋಗದಲ್ಲಿ ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ವಿವಿಧ ಶಿಬಿರ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 22 ರಿಂದ 24ರ ವರೆಗೆ ವಿದ್ಯಾರ್ಥಿಗಳಿಗೆ, 25 ರಿಂದ 27 ರವರೆಗೆ ಯುವಕರಿಗೆ ಹಾಗೂ ಮೇ ಒಂದರಿಂದ ಮೂರರವರೆಗೆ ರೈತರಿಗೆ ಶಿಬಿರವನ್ನು ಏರ್ಪಡಿಸಲಾಗಿದೆ ಉಚಿತವಾಗಿ ಪಾಲ್ಗೊಳ್ಳಬಹುದು. ಚಿಂತನ, ಮಂಥನ, ದೇಸಿ ಆಟಗಳು ಮತ್ತು ಸಾಂಸ್ಕೃತಿ ಕಾರ್ಯಕ್ರಮ ಇರುತ್ತವೆ. ಮಾಹಿತಿಗೆ ಮೊಬೈಲ್ ಸಂಖ್ಯೆ 96 866 77 296. ಸಂಪರ್ಕಿಸಬಹುದು.
ತ್ಯಾಜ್ಯದ ಬೀಡಾದ ಹುಲ್ಲಹಳ್ಳಿ ನಾಲೆ…ನಂಜನಗೂಡಿಗೆ ಭಕ್ತರನ್ನ ಸ್ವಾಗತಿಸುವ ಗೊಬ್ಬು ವಾಸನೆ…ತುಕ್ಕು ಹಿಡಿದ ದಕ್ಷಿಣಕಾಶಿ ತಾಲೂಕು ಆಡಳಿತ…ಮೇಜರ್ ಸರ್ಜರಿ ಯಾವಾಗ…?
ನಂಜನಗೂಡು ತಾಲೂಕು ಆಡಳಿತ ವೈಖರಿ ತುಕ್ಕು ಹಿಡಿದಂತಾಗಿದೆ.ಒಂದೆಡೆ ಕ್ರೈಂ ರೇಟ್ ಜನರನ್ನ ಬೆಚ್ಚಿಬೀಳಿಸುತ್ತಿದ್ದರೆ ಮತ್ತೊಂದೆಡೆ ಸ್ವಚ್ಛತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಕೊಲೆ,ಸುಲಿಗೆ,ಕಳ್ಳತನಗಳ ಪ್ರಕರಣಗಳಿಂದ ಬೇಸತ್ತ ಜನಕ್ಕೆ ಸ್ವಚ್ಛತೆಯೂ ಸಹ ಆಕ್ರೋಷ ವ್ಯಕ್ತಪಡಿಸುವಂತಾಗಿದೆ.ನಂಜನಗೂಡಿಗೆ ಬರುವ ಭಕ್ತರನ್ನ ಮೊದಲು ಸ್ವಾಗತಿಸುವುದೇ ಗೊಬ್ಬುವಾಸನೆ.ರಾಷ್ಟ್ರಪತಿ ರಸ್ತೆಯ ರೈಲ್ವೆ ಗೇಟ್ ಬಳಿ ನೀವು ಸಾಗಬೇಕೆಂದ್ರೆ ಮೂಗುಮುಚ್ಚಿ ನಡೆಯಲೇ ಬೇಕು..ಇಲ್ಲದಿದ್ದಲ್ಲಿ ವಾಕರಿಕೆ ಬರುವಂತ ಸಂಕಟ,ಅನುಭವ ನಿಮಗಾಗೋದು ಗ್ಯಾರೆಂಟಿ.ಸುಭಾಷ್ ಪಾರ್ಕಿನ ಮಟನ್ ತ್ಯಾಜ್ಯ ಈ ಜಾಗಕ್ಕೆ ಬಂದು ಸೇರುತ್ತದೆ.ಇನ್ನು ಪಟ್ಟಣದ ಹೊರಭಾಗದ ಹುಲ್ಲಹಳ್ಳಿ ನಾಲೆ ಪರಿಸ್ಥಿತಿ ಆ ನಂಜುಂಡೇಶ್ವರನಿಗೇ ಪ್ರೀತಿ..ಮಟನ್ ಮಾರ್ಕೆಟ್ ನ ತ್ಯಾಜ್ಯ ಇಲ್ಲಿ ಸಂಗ್ರಹವಾಗುತ್ತಿದೆ.

ರೈಲ್ವೆ ಗೇಟ್ ಹಾಕಿದ್ರಂತೂ ವಾಹನ ಸವಾರರು ಗೊಬ್ಬುವಾಸನೆಯಿಂದ ಹೈರಾಣರಾಗಿದ್ದಾರೆ.ಸಮೀಪದಲ್ಲೇ ಕಾಲೇಜು ಇದೆ.ಶಿಕ್ಷಕರ ಭವನವಿದೆ,ಶನಿದೇವರ ದೇವಾಲಯವಿದೆ.ಜನನಿಬಿಡ ಪ್ರದೇಶವೂ ಇದಾಗಿದೆ.ಅಶುಚಿತ್ವ ತಾಂಡವವಾಡುತ್ತಿದೆ.ನಂಜನಗೂಡಿನ ಅಭಿವೃದ್ದಿಯ ಕನಸು ಕಾಣುತ್ತಿರುವ ಶಾಸಕ ದರ್ಶನ್ ಧೃವನಾರಾಯಣ್ ಕಣ್ಣಿಗೆ ಇದು ಕಾಣಿಸದಿರುವುದು ದುರಂತ.ಈಗಾಗಲೇ ಸ್ಥಳೀಯರು ತಾಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.ಗೊಬ್ಬೆದ್ದು ನಾರುತ್ತಿರುವ ನಂಜನಗೂಡಿನಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡದಿದ್ದಲ್ಲಿ ರೋಗರುಜಿನಗಳ ಗೂಡಾಗುವುದರಲ್ಲಿ ಸಂಶಯವಿಲ್ಲ.ಇನ್ನಾದ್ರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದಲ್ಲಿ ಭಾರಿ ದಂಡ ತೆರಬೇಕಾಗುತ್ತದೆ
ಗಡಿನಾಡಲ್ಲಿ ಕನ್ನಡ ಶಕ್ತಿ ಪ್ರದರ್ಶನ! ಅತ್ತಿಬೆಲೆಯಲ್ಲಿ 70ನೇ ರಾಜ್ಯೋತ್ಸವ: ವಸಿಷ್ಠ ಸಿಂಹ, ರೂಪೇಶ್ ರಾಜಣ್ಣ ಭಾಗಿ; ಉಚಿತ ಟೈಲರಿಂಗ್ ಮಿಷನ್ ವಿತರಣೆ
ಕನ್ನಡ ನಾಡಿನ ಗಡಿನಾಡು ಅತ್ತಿಬೆಲೆ ಪ್ರದೇಶದಲ್ಲಿ ಕನ್ನಡ ಪ್ರೀತಿ ಮತ್ತು ಸಮಾಜ ಸೇವೆಯನ್ನು ಸಾರುವ ಉದ ಗಡಿನಾಡು ಕನ್ನಡ ಯುವ ಸೇನೆಯು ತನ್ನ 70ನೇ ಕನ್ನಡ ರಾಜ್ಯೋತ್ಸವ ಮಹೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ನಾಗರಾಜ್ (ಸೋನಿ) ಅವರು ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳನ್ನು ಪ್ರಕಟಿಸಿದರು.
ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಸಾರಿಗೆ ಸಂಚಾರ
ರಾಜ್ಯೋತ್ಸವ ಸಮಾರಂಭವು ಶನಿವಾರ, ಡಿಸೆಂಬರ್ 13, 2025 ರಂದು ಸಂಜೆ 6:00 ಗಂಟೆಗೆ ಅತ್ತಿಬೆಲೆಯ ಸರ್ಕಾರಿ ಬಾಲಕರ ಪ್ರಾಥಮಿಕ ಪಾಠಶಾಲೆ ಆಟದ ಮೈದಾನದಲ್ಲಿರುವ ಡಾ. ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ನಡೆಯಲಿದೆ.

ಖ್ಯಾತನಾಮರ ಸಮಾಗಮ: ಕನ್ನಡದ ಶಕ್ತಿಗೆ ಪ್ರೋತ್ಸಾಹ
ಗಡಿನಾಡಿನ ಈ ಕನ್ನಡ ಹಬ್ಬಕ್ಕೆ ಕನ್ನಡದ ಪ್ರಮುಖ ತಾರೆಯರು ಮತ್ತು ಹೋರಾಟಗಾರರು ಆಗಮಿಸುತ್ತಿರುವುದು ವಿಶೇಷವಾಗಿದೆ:
ಮನರಂಜನೆ : ‘ತಿಸ್ಟಾರ್ ಈವೆಂಟ್ಸ್’ ತಂಡದವರಿಂದ ಮನರಂಜನಾ ಕಾರ್ಯಕ್ರಮಗಳು, ಜೊತೆಗೆ ಸಾಂಸ್ಕೃತಿಕವಾಧ್ಯಗೋಷ್ಠಿ ನಡೆಯಲಿದೆ.
ಬಡವರಿಗಾಗಿ ಟೈಲರಿಂಗ್ ಮಿಷನ್ ಹಾಗೂ ಆಟೋ ರ್ಯಾಲಿ
ಸೇವೆಗೆ ಒತ್ತು : ರಾಜ್ಯೋತ್ಸವದ ಅಂಗವಾಗಿ ಬಡ ಮಹಿಳೆಯರ ಸ್ವಾವಲಂಬನೆಗಾಗಿ ಉಚಿತ ಟೈಲರಿಂಗ್ ಮಿಷನ್ಗಳ ವಿತರಣೆ ಮತ್ತು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಕಂಬಳಿ (ಕಮ್ಮಳಿ) ವಿತರಣೆ ಮಾಡಲಾಗುವುದು.
ಐತಿಹಾಸಿಕ ಆಟೋ ರ್ಯಾಲಿ : ಕಾರ್ಯಕ್ರಮಕ್ಕೆ ಮುನ್ನ, ಆನೇಕಲ್ ತಾಲ್ಲೂಕಿನ ಪ್ರಮುಖ ನಾಯಕರು, ಚಲನಚಿತ್ರ ನಟರು ಹಾಗೂ ವಿಶೇಷವಾಗಿ ಆಟೋ ಚಾಲಕ ಬಂಧುಗಳ ವತಿಯಿಂದ ಗಡಿನಾಡಿನಲ್ಲಿ ಕನ್ನಡದ ಶಕ್ತಿಯನ್ನು ಸಾರುವ ಅದ್ದೂರಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ನಾಗರಾಜ್ (ಸೋನಿ) ಅವರು, “ಗಡಿನಾಡಿನಲ್ಲಿ ಕನ್ನಡದ ಶಕ್ತಿ ಕುಂದದಂತೆ ನೋಡಿಕೊಳ್ಳುವುದು ನಮ್ಮ ಸಂಕಲ್ಪ. ಕನ್ನಡ ರಾಜ್ಯೋತ್ಸವವನ್ನು ಸೇವಾ ಕಾಯಕದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ. ಸಮಸ್ತ ಕನ್ನಡಾಭಿಮಾನಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮದ ರೂವಾರಿಗಳು ಮತ್ತು ಸಹಕಾರ ನೀಡಿದವರು
ಈ ಬೃಹತ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವವರು ನಾಗರಾಜ್ ಸೋನಿ (ರಾಜ್ಯಾಧ್ಯಕ್ಷರು), ವಸಂತ ಕುಮಾರ್, ಮಂಜುನಾಥ್, ಮುನಿರಾಜು, ರವಿ ಕಿರಣ್, ರವಿ, ನಚ್ಚಿ ಛಲವಾದಿ, ಮಂಜುನಾಥ್ ಎಮ್ ಆರ್, ಶ್ರೀನಿವಾಸ್ ಟಿ.
ವಿಶೇಷ ಸಹಕಾರ : ಆಟೋ ಅಂಬರೀಷ್, JMC ಸೌಂಡ್ಸ್ ಮಾಲೀಕರು ಮುನಿಕೃಷ್ಣ, ಹಾಗೂ ಸಮಸ್ತ ಆಟೋ ಚಾಲಕ ಬಂಧುಗಳು.
ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ…ಕಾರ್ಖಾನೆ ಮಾಲೀಕನಿಂದ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ…ಮಾಲೀಕನ ವಿರುದ್ದ FIR…
ಮೈಸೂರು,
ಸೆಕ್ಸ್ ನಲ್ಲಿ ಹೆಲ್ಪ್ ಮಾಡಿದ್ರೆ ನಿನ್ನ ಚೆನ್ನಾಗಿ ನೋಡಿಕೊಳ್ತೀನಿ ಎಂದು ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಸಲ್ಯೂಷನ್ಸ್ ಮ್ಯಾನುಫ್ಯಾಕ್ಚರ್ ಕಂಪನಿಯ ಮಾಲೀಕ ಮುರಳಿಧರ್ ಎಂಬುವರ ಮೇಲೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಗರ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ.ಸೆಕ್ಸುವಲ್ ನಲ್ಲಿ ಸಹಾಯ ಮಾಡಿದ್ರೆ ಚೆನ್ನಾಗಿ ನೋಡಿಕೊಳ್ತೀನಿ ಎಂದು ಒತ್ತಾಯಿಸಿದ್ದಾರೆ.ಮೊಬೈಲ್ ಗಳಿಂದ ಮೆಸೇಜ್ ಮಾಡಿದ್ದಾರೆ.ಇದರಿಂದ ನೊಂದ ಉದ್ಯೋಗಿ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಾರೆ.ಹೀಗಿದ್ದೂ ಬಿಡದ ಮಾಲೀಕ ಮುರಳಿಧರ್ ಮಹಿಳೆ ಹಿಂದೆ ಬಿದ್ದಿದ್ದಾನೆ.ಮನೆಗೆ ಬಂದು ಕೆಲಸಕ್ಕೆ ಹಿಂದಿರುಗುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ.ನಿನ್ನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಹೆದರಿಸಿದ್ದಾನೆ.ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿರುವ ನೊಂದ ಮಹಿಳಾ ಉದ್ಯೋಗಿ ಮಾಲೀಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
ಭೀಮ ಸೇನೆಯ ಭಾಸ್ಕರ್ ಪ್ರಸಾದ್ ರವರನ್ನು ಪೊಲೀಸರು ಬಂಧಿಸಿರುವುದು ಖಂಡಿಸಿ ಮಾದಿಗ ಸಮಾಜದ ಸಂಘಟನೆ ಹೋರಾಟ.
ಒಳ ಮೀಸಲಾತಿ ಹೋರಾಟ ಸಮಿತಿ ಹುಣಸೂರು ವತಿಯಿಂದ ನೆನ್ನೆ ಟಿ ನರಸೀಪುರದಲ್ಲಿ ನಡೆದ ಬಿ ಆರ್ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ಭೀಮ ಸೇನಾನಿಗಳು ವಿಭಿನ್ನ ಕ್ರಾಂತಿಕಾರಿ ಹೋರಾಟ ಮಾಡುವ ಸಂದರ್ಭದಲ್ಲಿ ಪೊಲೀಸ್ ರವರು ಬಂಧಿಸಿರುತ್ತಾರೆ.ಮತ್ತು ಪುಟ್ಟಪ್ಪ ಎನ್ನುವ ಪೊಲೀಸ್ ಪೇದೆ ಹೋರಾಟಗಾರರನ್ನುಅವ್ಯಾಚ ಶಬ್ದಗೊಳಿಂದ ನಿಂದಿಸಿರುತ್ತಾನೆ ಆ ಪೊಲೀಸ್ ನನ್ನು ಅಮಾನತು ಗೊಳಿಸಬೇಕು,ಹೋರಾಟಗಾರರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಈದಿನ ಹುಣಸೂರು ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಮಾದಿಗ ಹೋರಾಟ ಸಮಿತಿ
ಹುಣಸೂರು ಹೋರಾಟಗಾರರಾದ ಮಾದಿಗ ಹೋರಾಟ ಸಮಿತಿ ಅಧ್ಯಕ್ಷರು ಪರಶುರಾಮ್, ಪ್ರಧಾನಕಾರ್ಯದರ್ಶಿ ಬೆಳ್ತೂರು ವೆಂಕಟೇಶ್.ಆರ್ ಮಹದೇವ್, ಕಿಟ್ಟು ಎಸ್, ಸ್ವಾಮಿ ರಾಯನಹಳ್ಳಿ, ಶಿವರಾಮು ಹೆಚ್ಚು ಎಸ್, ಹೊಸೂರ್ ವೆಂಕಟರಾಮ್, ಚಲುವಯ್ಯ,ರಾಜು, ವೈರಮುಡಿ, ಮಹದೇವ್ ಬನ್ನಿಕುಪ್ಪೆ, ಶಂಕರ್, ಕೆ ಆರ್ ನಗರದ ರಮೇಶ್, ಕುಮಾರ್, ತಿರುಮಲ ಎಂಬ ಮುಖಂಡರು ಭಾಗವಹಿಸಿದ್ದರು.
ಮಳೆ ಹಾನಿಯಿಂದ ಬೆಳೆ ಹಾನಿ ಕೂಡಲೇ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಧನ ವಿತರಿಸಬೇಕು ಭರತ್ ಎಮ್ ದೊರೆ ಅಗ್ರಹ…
ಜೈ ಕನ್ನಡಿಗರ ಸೇನೆ ತಾಲೂಕಾ ಸಮಿತಿಯ ವತಿಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಮಳೆ ಹಾನಿಯಿಂದ ಬೆಳೆ ಹಾನಿಯಾಗಿ ರೈತರು ಬೆಳೆದಂತಹ ಎಲ್ಲಾ ಬೆಳೆಗಳು ಸಂಪೂರ್ಣ ಕುಳಿತು ಹೋಗಿವೆ ಹೀಗಾಗಿ
ಅವಳಿ ತಾಲೂಕುಗಳ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ ಹಾಗಾಗಿ ಅವರ ನೆರವಿಗೆ ಕೂಡಲೇ ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಯಡ್ರಾಮಿ ತಾಲೂಕಾ ದಂಡಾಧಿಕಾರಿಗಳ ಮುಖಾಂತರವಾಗಿ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ಜೈ ಕನ್ನಡಿಗರ ಸೇನೆಯ ತಾಲೂಕಾ ಅಧ್ಯಕ್ಷರಾದ ಭರತ್ ಎಂ ದೊರೆ ,ಹಾಗು
ಗೌರವ ಸಲಹೆಗಾರರಾದ ಗಂಗಾಧರ್ ಎಸ್ ಕರಕಹಳ್ಳಿ ,
ಕಾರ್ಯದರ್ಶಿಗಳಾದ ಆನಂದ್ ದೊಡಮನಿ ,
ನಾಗು ಬಡಿಗೇರ್ ಯತ್ನಾಳ್ ,
ಮಲ್ಲಿಕಾರ್ಜುನ್ ಕೊಠಾರ್ ಇನ್ನಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು
ವರದಿ ಜಟ್ಟಪ್ಪ ಎಸ್ ಪೂಜಾರಿ
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೂರ್ವಭಾವಿ ಸಭೆ
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಸರಹದ್ದಿನ ಎಲ್ಲಾ ಮಸೀದಿಗಳ ಮುಖಂಡರನ್ನು ಠಾಣೆಗೆ ಕರೆಸಿ ಪೂರ್ವಭಾವಿ ಸಭೆಯನ್ನು ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು
ನೀಡಲಾಯಿತು. ಸಭೆಯಲ್ಲಿ ಪಿಎಸ್ಐ ಮೋಹನ್ ರಾಜ್ ರವರು ಉಪಸ್ಥಿತರಿದ್ದರು.
