ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನಂಜನಗೂಡು ಇವರ ವತಿಯಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಸಮಾರಂಭ ತಾಲೂಕು ಆವರಣದಲ್ಲಿ ನಡೆಯಿತು. ಈ ಸಮಾರಂಭವನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಪೂಜ್ಯ ಬಸವೇಶ್ವರರು ವಿಶ್ವದ ಅತಿ ಶ್ರೇಷ್ಠ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆಗಾಗಿ ತಮ್ಮ ಜೀವನಮನೆ ಮುಡಿಪಿಟ್ಟರು ಕಾಯಕವೇ ಕೈಲಾಸ ಎಂಬ ನಾಣ್ನುಡಿಯನ್ನು ವಿಶ್ವಕ್ಕೆ ಸಾರಿದರು. ನೊಂದವರ ದೀನ ದಲಿತರ ಕಷ್ಟಕ್ಕೆ ಒಳಗಾದವರ ಸೇವೆಯನ್ನು ಮಾಡುವುದು, ಅವರಿಗೆ ಸಹಾಯವನ್ನು ಮಾಡುವುದನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿದ್ದ ಹಲವಾರು ಗಣ್ಯರು ಶಾಸಕರು ಬಸವೇಶ್ವರಗೆ ಪುಷ್ಪಾರ್ಚನೆ, ಹೂಮಾಲೆಯನ್ನು ಧರಿಸಿದರು ಹಾಗೂ ಅವರನ್ನು ಸ್ಮರಣೆ ಮಾಡಿದರು. ತಾಲೂಕು ದಂಡಾಧಿಕಾರಿಗಳಾದ ಡಾಕ್ಟರ್ ಸ್ಮಿತಾ ರಾಮನ್ ರವರು ಜಗಜ್ಯೋತಿ ಬಸವೇಶ್ವರರ ಬಗ್ಗೆ ಹಿತವನ್ನು ಸಾರಿದರು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್, ಹಿರಿಯ ಪತ್ರಕರ್ತರಾದ ಮಧು, ದ್ವಾರಕನಾಥ್, ಪಟ್ಟಣ ಠಾಣೆ ನಿರೀಕ್ಷಕರಾದ ರವೀಂದ್ರ, ರೈತ ಸಂಘದ ಪ್ರತಿನಿಧಿಗಳು, ಹಲವಾರು ಗಣ್ಯ ಪುರುಷರು ಮಹಿಳೆಯರು ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆ, ಪ್ರಾರ್ಥನೆ, ಸ್ವಾಗತ ಪ್ರೇಮ ವಂದನಾರ್ಪಣೆ ಕಿರಣ್ ನಡೆಸಿಕೊಟ್ಟರು.
