ಬಸವ ತತ್ವಗಳು ನೋಟಕ್ಕಿಂತ ಮನಕ್ಕೆ ಇಳಿಯಬೇಕು !

ಬಸವ ತತ್ವಗಳು ನೋಟಕ್ಕಿಂತ ಮನಕ್ಕೆ ಇಳಿಯಬೇಕು !

Share

ಬಸವೇಶ್ವರ ತತ್ವಗಳು ಮತ್ತು ವಿಚಾರಗಳು ಜಗತ್ತಿಗೆ ಬೆಳಕು ನೀಡುವಷ್ಟು ಪ್ರಖರವಾಗಿದ್ದು, ಮಾನವಕುಲದ ಅಭಿವೃದ್ಧಿ ಮತ್ತು ಭವಿಷ್ಯಕ್ಕಾಗಿ ವಚನಗಳ ಸೃಷ್ಠ ಆಗಿದೆ ಅನ್ನಬಹುದು. ಬಸವಾದಿ ಶರಣರ ವಚನಗಳ ಮೂಲಕ ಸಾರಿದ ತತ್ವಗಳು ಲಿಂಗಾಯತ-ವೀರಶೈವ ಸೇರಿದಂತೆ ಎಲ್ಲಾ ಧರ್ಮಿಯರಿಗೂ ಅನ್ವಯಿಸುತ್ತವೆ.12ನೇ ಶತಮಾನದಲ್ಲಿ ಬಸವಣ್ಣ,ಅಲ್ಲಮಪ್ರಭು ಮತ್ತು ಅಕ್ಕ ಮಹಾದೇವಿ ಸೇರಿದಂತೆ ಎಲ್ಲಾ ಶರಣರು ಕೂಡ ಜಗತ್ತಿನ ಅಂದಕಾರವನ್ನು ಹೋಗಲಾಡಿಸಿ ಮಾನವಕುಲದ ಆತ್ಮದಲ್ಲಿ ಜ್ಞಾನದ ಜ್ಯೋತಿ ಬೆಳೆಗೆಸುವ ಪ್ರಯತ್ನ ಮಾಡಿದ್ದರು. ಹಿಂದೂ ಧರ್ಮದ ಜಾತಿ ಪದ್ದತಿಯನ್ನು ವಿರೋಧಿಸಿದ್ದು ವಚನ ಸಾಹಿತ್ಯ. ಶರಣರು ಅಚಿದೇ ಕೆಳಜಾತಿಯ ಮತ್ತು ಮೇಲ್ಜಾತಿ ಜೊತೆಗೆ ವಿವಾಹ ಮಾಡಿದ್ದು, ಮೂರ್ತಿ ಪೂಜೆ ವಿರೋಧಿಸಿದರು. ಮೇಲು-ಕೀಳು ವಿರೋಧಸಿದರು,ಲಿಂಗ ಬೇಧ ಮಾಡಲಿಲ್ಲ, ಹೆಣ್ಣಿಗೂ ಸ್ವಾತಂತ್ರ್ಯ ಇದೆ ಅಂತ ತೊರಿಸಿದ ಹೆಮ್ಮೆ ಅನುಭವ ಮಂಟಪಕ್ಕೆ ಇದೆ. ಅಕ್ಕ ಮಹಾದೇವಿಗೆ ಅವಕಾಶ ನೀಡುವ ಮೂಲಕ ಹೆಣ್ಣು ಮಕ್ಕಳು ಮನೆಯಲ್ಲೂ ಮತ್ತು ಸಮಾಜದಲ್ಲೂ ಮಾತನಾಡಬಹುದು ಅಂತ ಜಗತ್ತಿಗೆ ತೊರಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. 6ನೇ ಶತಮಾನದಲ್ಲಿ ಜಗತ್ತಿನಲ್ಲೂ ಧರ್ಮ ಉದಯದ ಪರ್ವ ಅಂದರೆ 12ನೇ ಶತಮಾನವನ್ನು ಶರಣರ ಮೂಲಕ ಜಗತ್ತಿಗೆ ಬೆಳಕು ನೀಡಿದ ಯುಗ ಅಂತ ಕರೆಯಬಹುದು. ಆತ್ಮ ಮತ್ತು ಆತ್ಮ ಶುದ್ಧಿ ಜೊತೆಗೆ ಪರರ ಆತ್ಮಕ್ಕೂ ಲೇಸು ಬಯಸುವುದೇ ಶ್ರೇಷ್ಠ ಮತ್ತು ಕಾಯಕ ನಿಷ್ಠೆ ಹೀಗೆ ಹಲವಾರು ತತ್ವಗಳನ್ನು ಸಾರಿದ ಮಹನೀಯರು ಶರಣರು.
ಶರಣರ ತತ್ವಗಳು ಜಗತ್ತಿಗೆ ಬೆಳಕಾಗಬೇಕಾಗಿತ್ತು ಆದರೆ ವೀರಶೈವ ಲಿಂಗಾಯತರಿಗೆ ಸೀಮಿತವಾದವು. ಎಂಬಿಎ ಅಂತಹ ಪಠ್ಯಕ್ರಮದಲ್ಲಿ ವಚನ ಸಿದ್ದಾಂತಗಳು ಸೇರಬೇಕಾಗಿದ್ದವು ಆದರೆ ಲಿಂಗಾಯತ ಗ್ರಂಥಾಯಲಯದಲ್ಲಿ ದೂಳು ಹಿಡಿಯುತ್ತಿವೆ. ಮೂರ್ತಿ ಪೂಜೆ ವಿರೋಧಿಸಿದ ಬಸವಣ್ಣನವರ ಮೂರ್ತಿಗಳನ್ನು ರಾಜ್ಯ,ರಾಷ್ಟ್ರ ಮತ್ತು ಅಚಿತರಾಷ್ಟ್ರೀಯ ಮಟ್ಟದಲ್ಲಿ ಹಲವು ಕಡೆ ಸ್ಥಾಪಿಸಿದರೂ ಹೊರತು ಅವರ ತತ್ವಗಳನ್ನು ಜನರ ಮನಸ್ಸಿಗೆ ಮುಟ್ಟಿಸಲೇ ಇಲ್ಲ. ಬಸವಣ್ಣ ಸೇರಿದಂತೆ ಶರಣರ ಭಾವಚಿತ್ರಗಳು ದೇವರ ಮನೆಸೇರಿದವು ಹೊರತು ಅವರ ತತ್ವಗಳು ಮನಸೇರಲೇ ಇಲ್ಲ. ವಚನಗಳ ಪುಸ್ತಕಗಳು,ಬಸವಾದಿ ಶರಣರ ಪುಸ್ತಕಗಳು ಅಲಂಕಾರಿಕ ವಸ್ತುಗಳಂತೆ ಮನೆಯಲ್ಲಿ ಇವೆ ಹೊರತು ಅವುಗಳನ್ನು ಓದಿ ಪಾಲಿಸುತ್ತಿಲ್ಲ. ಮಕ್ಕಳಿಗೆ ವಚನಗಳ ಮಹತ್ವ ಹೇಳುವಂತಹ ಪ್ರಯತ್ನವನ್ನು ಪಾಲಕರು ಮಾಡುತ್ತಿಲ್ಲ. ಇಡೀ ಜೀವನದ ಸಾರಾಂಶವು ವಚನ ಸಾಹಿತ್ಯದಲ್ಲಿ ಅಡಗಿದೆ. ವೇಧ,ಭಗವತ್ತಗೀತೆ,ಕುರಾನ್ ಮತ್ತು ಬೈಬಲ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳಲ್ಲಿ ಇರುವ ಅಮೃತಕ್ಕಿಂತ ಶ್ರೇಷ್ಠ ಅನುಭವ ಅಮೃತ ವಚನಗಳಲ್ಲಿ ಇದ್ದರೂ ಕೂಡ ಅದನ್ನು ಮನೆ-ಮನಗಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಆಗುತ್ತಿಲ್ಲ. ಬಸವ ಜಯಂತಿ ಅಂದು ಸಿಹಿಹಂಚಿ ಸುಮ್ಮನಾಗುವುದೇ ಬಸವಣ್ಣಗೆ ಮಾಡುವ ಅಪಮಾನವಾಗಿದೆ.
ಒಂದು ಕಡೆ ನಾವು ಬಸವಣ್ಣ ಅನುವಾಯಿಗಳು ಅಂತ ಹೇಳುತ್ತಲ್ಲೇ ಬಸವ ತತ್ವಗಳನ್ನು ಆಚರಸದೇ ಮತ್ತು ಬಸವ ವಿರೋಧಿ ಪದ್ಧತಿಗಳನ್ನು ಆಚರಣೆ ತರುವ ಮೂಲಕ ಸಾಗರದ ಆಚೆಗೂ ಮುಟ್ಟಬೇಕಾದ ಬಸವ ತತ್ವಗಳನ್ನು ಕಟ್ಟಿ ಹಾಕಿರುವುದು ನಮ್ಮವರೇ ಅನ್ನುವಷ್ಟು ಸತ್ಯ ಇದೆ. ಧಾರ್ಮಿಕ ಆಚರಣೆಯಿಂದ ಹಿಡಿದು, ದೇವರ ಬಗ್ಗೆ ಸ್ವಷ್ಟ ಪರಿಕಲ್ಪನೆಯನ್ನು ಕಂಡುಕೊಂಡು ಜಗತ್ತಿಗೆ ವಚನಗಳ ಮೂಲಕ ಸಾರಿದವರು ಶರಣರು ಆದರೆ ಇಂದು ಅವರು ಪೂಜೆಗೆ ಮಾತ್ರ ಸೀಮಿತವಾಗಿದ್ದಾರೆ. ಆಡಳಿತ, ರಾಜಕೀಯ ಮತ್ತು ಧರ್ಮ ಹಾಗೂ ಪದ್ದತಿಗಳ ಬಗ್ಗೆ ಅತ್ಯಂತ ಸರಳ ರೂಪದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ.ಆದರೆ ಅವುಗಳನ್ನು ಮುಟ್ಟಿಸುವಲ್ಲಿ ಧರ್ಮ ಗುರುಗಳು, ಮಠಾದೀಶರು, ಸಮಾಜ ಮುಂಡರು, ರಾಜಕೀಯ ನಾಯಕರು ಮತ್ತು ಧರ್ಮ ಪಾಲಕರು ಸೊತ್ತಿದ್ದಾರೆ. ಇಂದಿನ ಆಧುನಿಕ ಭಾರತವು ಬಸವ ಭಾರತ ಆಗಬೇಕಿತ್ತು ಆದರೆ ಪ್ರಚಾರದ ಕೊರತೆಯಿಂದ ಆಗಿಲ್ಲ.
ಬಸವ ಸಮಿತಿ, ಕೂಡಲಸಂಗಮ ಮಠ ಸೇರಿದಂತೆ ಕೇಲ ಪ್ರಯತ್ನಗಳು ನಡೆದರೂ ಕೂಡ ಇನ್ನುಳಿದಂತೆ ದೊಡ್ಡ ಮಟ್ಟದ ಪ್ರಯತ್ನಗಳು ಎಲ್ಲರಿಂದ ನಡೆದರೇ ಮಾತ್ರ ಬಸವಣ್ಣ ಪುಸ್ತಕದಿಂದ ಹೊರ ಬಂದು ಜಗತ್ತಿಗೆ ಬೆಳಕಾಗಿ ಜನಸಾಮಾನ್ಯರ ಮನ ಸೇರುತ್ತಾರೆ-ಆಗ ಜಾತಿ,ಧರ್ಮ ಭೇದವಿಲ್ಲದ,ಸಮಾನತೆಯ ಮತ್ತು ಉದ್ಯೋಗಸ್ಥ,ಮೂಡನಂಬಿಕೆ ಇಲ್ಲದ ಸಮಾಜ ನಿರ್ಮಾಣವಾಗುತ್ತದೆ.


Share