ನಂಜನಗೂಡು: ಅತಿ ವೇಗವಾಗಿ ಬೆಳೆಯುತ್ತಿರುವ ನಂಜನಗೂಡು ಪಟ್ಟಣ ವಾಗಿದ್ದು ತಾಲೂಕು ಕೇಂದ್ರವಾಗಿದೆ. ಚಿಂತಾಮಣಿ ಗಣಪತಿ ದೇವಸ್ಥಾನದ ಮುಂದೆ ಹಲವರು ಹೂ ಮಾರುವ ಕಾಯಕವನ್ನು ಮಾಡಿಕೊಂಡಿದ್ದು ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ದೇವರ ಕಾರ್ಯವನ್ನು ಹಾಗೂ ಭಕ್ತಾದಿಗಳ ಸೇವೆಯನ್ನು ಹೂ ಮಾರುವುದರ ಮೂಲಕ ಬದುಕನ್ನು ಕಂಡುಕೊಂಡಿದ್ದಾರೆ. ಆದರೆ ಈಗ ಆ ಸ್ಥಳದಲ್ಲಿ ಜನದಟ್ಟಣೆ ಮತ್ತು ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಅಕ್ಷರಸಹ ಸತ್ಯವಾಗಿದೆ. ಆದರೆ ಈಗ ಪಟ್ಟಣ ಸಂಚಾರಿ ಉಪನಿರೀಕ್ಷಕರು ಹೂ ಮಾರುವವರಿಗೆ ಸ್ಥಳವ ಬದಲಾವಣೆ ಮಾಡಿ ಎಂದು ಸೂಚನೆ ನೀಡಿದ್ದು, ಹೂ ಮಾರುವರು ನಮ್ಮ ಜೀವನ ಇದರಲ್ಲೇ ಸಾಗಬೇಕೆಂದು ದೇವಸ್ಥಾನದ ಮುಂದೆ ನಮ್ಮ ಕಾಯಕವನ್ನು ಮುಂದುವರೆಸಲು ಅವಕಾಶ ನೀಡಬೇಕೆಂದು ಪತ್ರಿಕೆಯ ಮೂಲಕ ಭರತ್, ಲಕ್ಷ್ಮಮ್ಮ ಮನವಿ ಮಾಡಿದ್ದಾರೆ.
