ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಠಾಣಾಮಟ್ಟದ ಗೌರಿ ಗಣೇಶ ಹಬ್ಬದ ಜನ ಸಂಪರ್ಕ ಶಾಂತಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗೌರಿ ಗಣೇಶ ಹಬ್ಬದ ಆಚರಣೆಯ ಸಲಹೆ ಸೂಚನೆಗಳನ್ನು ತಿಳಿಸಲಾಯಿತು. ಎಲ್ಲರೂ ಗೌರಿ ಗಣೇಶ ಹಬ್ಬವನ್ನು ಶಾಂತಿಯಿಂದ ಸಂಭ್ರಮವಾಗಿ ಆಚರಿಸಬೇಕೆಂದು ಸೂಚನೆ ನೀಡಲಾಯಿತು ಸಭೆಯಲ್ಲಿ ಡಿವೈಎಸ್ಪಿ ರಘು ಹಾಗೂ ಉಪನಿರೀಕ್ಷಕರು ರವೀಂದ್ರ ಹಾಜರಿದ್ದರು. ಪಟ್ಟಣ ಠಾಣೆಯ ಗೌರಿ ಗಣೇಶ ಹಬ್ಬದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
