ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ಶ್ರೀ ಗೌತಮ ಪಂಚ ಮಹಾರಥೋತ್ಸವ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಪ್ರಾರಂಭವಾದವು ಮೆರವಣಿಗೆನ ಶಾಸಕರು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು . ಗಣೇಶ, ಸುಬ್ರಮಣ್ಯ, ಚಂಡಿಕೇಶ್ವರ, ಪಾರ್ವತಮ್ಮ, ನಂಜುಂಡೇಶ್ವರ ಬೃಹತ್ ಮಹಾ ತೇರುಗಳನ್ನು ರಥ. ಬೀದಿಯಲ್ಲಿ ವಿವಿಧ ತಾಳ ಮದ್ದೆಳೆಗಳ ವಾದ್ಯ ಗೋಷ್ಠಿಯೊಂದಿಗೆ ಸಾಗರೋಪಾದಿಯಲ್ಲಿ ಜನಸ್ತೋಮದ ನಡುವೆ ಜೈಕಾರದ ಮೂಲಕ ಸಾಗಿತು.

ಪೊಲೀಸ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಮೆರವಣಿಗೆ ಶಾಂತವಾಗಿ ಸಾಗಿತು. ಸ್ವಾಮಿಗೆಹೂವು ಹಣ್ಣುಗಳನ್ನು ಮಾರ್ಗಗಳಲ್ಲಿ ಭಕ್ತಾದಿಗಳು ಮೇಲೆ ಎಸೆದರು. ರಥೋತ್ಸವ ದೇವಸ್ಥಾನದಲ್ಲಿ ಕೊನೆಯಾಯಿತು. ಮಾರ್ಗದಲ್ಲಿ ಅನ್ನ ಸಂತರ್ಪಣ ಕಾರ್ಯ ಪಟ್ಟಣದ ಎಲ್ಲಾ ಕಡೆ ನಡೆಯಿತು . ಅಲ್ಲಲ್ಲಿ ಮಜ್ಜಿಗೆ ಪಾನಕ ಸಿಹಿ ವಿತರಣಾ ಕಾರ್ಯಗಳು ನಡೆದವು.
