ರಾಣೇಬೆನ್ನೂರು : ಬಸವನಗುಡಿ ನಗರದ ವಾಸಿ ಶ್ರೀ ಮಂಜುನಾಥ ನರಸಗೊಂಡರ ಅವರು ಆಂಧ್ರ ಪ್ರದೇಶದ ಕುಪ್ಪಂ ನ ದ್ರಾವಿಡ ವಿಶ್ವ ವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ ವಿಭಾಗಕ್ಕೆ ಸಲ್ಲಿ ಸಿದ “ದಿ ಪರ್ಫಾರ್ಮನ್ಸ್ ಇವ್ಯಾಲ್ಯೂಯೇಷನ್ಸ ಆಫ್ ಸ್ಮಾಲ್ ಅಂಡ್ ಮೀಡಿಯಂ ಸ್ಕೇಲ್ ಇಂಡಸ್ಟ್ರೀಸ್- ಎ ಕೇಸ್ ಸ್ಟಡಿ ಆಫ್ ದಾವಣಗೆರೆ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧವನ್ನು ವಿಶ್ವ ವಿದ್ಯಾನಿಲಯವು
ಪರಿಗಣಿಸಿ ಪಿಎಚ್.ಡಿ ಪದವಿಯನ್ನು ನೀಡಿರುತ್ತದೆ. ಶ್ರೀ ಮಂಜುನಾಥ ನರಸಗೊಂಡರ ಅವರು ಡಾ. ಎಸ್ ಕೆ ಪಾಟೀಲ್ ಸಹ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರ ವಿಭಾಗ, ಸರ್ಕಾರಿ ಪ್ರ ಥಮ ದರ್ಜೆ
ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ರಾಣೆಬೆನ್ನೂರು ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಸಲ್ಲಿಸಿದ್ದರು ಪ್ರಸ್ತುತ ಮಂಜುನಾಥ ನರಸಗೊಂಡರ ಅವರು ಸರ್ಕಾರಿ ಪ್ರಥಮ
ದರ್ಜೆ ಕಾಲೇಜು, ಹುಬ್ಬಳ್ಳಿಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
