ಇತ್ತೀಚಿಗೆ ನಡೆದ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ) ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು . ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ವಕೀಲರ ಸಾಹಿತ್ಯ ಸಮ್ಮೇಳನ 2024 ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದ್ದು.ಕಾರ್ಯಕ್ರಮದಲ್ಲಿ ಹಾಸನ ನಗರದ ‘ಸಾಹಿತ್ಯದ ನವಿಲು’ ‘ಮಹಿಳಾ ಸಾಧಕಿ’,’ಬಹುಮುಖ ಪ್ರತಿಭೆ’ ‘ಗಡಿನಾಡ ಕನ್ನಡತಿ’ಎಂದು ಬಿರುದು ಪಡೆದಿರುವ ಸಂಸ್ಥಾಪಕ ಅಧ್ಯಕ್ಷರು ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ. ಹಾಸನ ನಗರದ ಸಾಹಿತಿ.ಶಿಕ್ಷಕಿ.ಸಮಾಜ ಸೇವಕಿ.ಸಾಮಾಜಿಕ ಚಿಂತಕಿ.ಪತ್ರಕರ್ತೆ.ಅಂಕಣಗಾರ್ತಿ,ಕವಯತ್ರಿ ಲೇಖಕಿ, ವಿಮರ್ಶಕಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರಿಗೆ ಸಾಮಾಜಿಕ,’ಸಾಹಿತ್ಯ ಕ್ಷೇತ್ರ’ ಶೈಕ್ಷಣಿಕ ಕ್ಷೇತ್ರ ಕ್ಕೆ ರಾಜ್ಯಮಟ್ಟದ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ‘ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಹಲವಾರು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ರವರ ‘ ಪ್ರತಿಮಾವಲೋಕನ ( ಕೃತಿ ವಿಮರ್ಶನಾ ಲೋಕದಲ್ಲೊಂದು ಪಯಣ )ಕೃತಿಯು ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ‘ಪ್ರತಿಮಾವಲೋಕನ’ ಕೃತಿ ಲೋಕಾರ್ಪಣೆಯನ್ನು ಶ್ರೀ .ಎಂ ಪ್ರಕಾಶಮೂರ್ತಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ ಹಾಗೂ ಅತಿಥಿಗಳು ಕೃತಿ ಬಿಡುಗಡೆಯನ್ನು ಮಾಡಿದರು. ಕೃತಿ ಬಗ್ಗೆ ಕುರಿತು ಸಿ ಎಂ ಪ್ರಕಾಶಮೂರ್ತಿರವರು ಕೃತಿಯು ಹೆಚ್.ಎಸ್ ಪ್ರತಿಮಾ ಹಾಸನ್ ರವರ ಕೃತಿಯ ಓದಿನ ನಂತರದ ಆಂತರ್ಯದ ಭಾವಗಳನ್ನು ವಿಮರ್ಶಾ ರೀತಿಯಲ್ಲಿ ಬರಹದ ಮುಖಾಂತರ ಲೇಖನಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಈ ಕೃತಿಯಲ್ಲಿ ಒಟ್ಟು 35 ಕೃತಿಗಳ ಅವಲೋಕನಗಳಿವೆ. ವಿಭಿನ್ನವಾಗಿ ಅವರ ಹೆಸರಿನ ಜೋಡಣೆಯಲ್ಲಿ ಅವಲೋಕನದ ಹೆಸರು ಬಂದಿರುವುದು ವಿಶೇಷತೆಯಾಗಿದೆ. ಎಲ್ಲವೂ ಪತ್ರಿಕೆಗಳಲ್ಲಿ ಪ್ರಕಟಗೊಂಡು ಮೆಚ್ಚುಗೆ ಪಡೆದಂತಹ ಕೃತಿ ವಿಮರ್ಶೆಯ ಲೇಖನಗಳಾಗಿದ್ದು. ವಿಮರ್ಶಕಿಯಾಗಿ ಇವರ ಕೃತಿಯ ವಿಮರ್ಶೆಗಳು ಉತ್ತಮವಾಗಿ ಹೊರಬಂದಿದೆ. ಕೃತಿ ಬಗ್ಗೆ ತಿಳಿಯಬೇಕಾದರೆ ಕೃತಿಯನ್ನು ಓದಬೇಕು.ಇವರ 10ನೇ ಕೃತಿಯಾಗಿರುವ ಈ ಕೃತಿಯು ಓದುಗರ ಮನಮುಟ್ಟುವ ರೀತಿ ಇದೆ.ಇನ್ನು ಹೆಚ್ಚು ಹೆಚ್ಚು ಕೃತಿಗಳು ಇವರಿಂದ ಸಾಹಿತ್ಯ ಲೋಕಕ್ಕೆ ಹೊರಹೊಮ್ಮಲೆಂದು ಆಶಿಸುತ್ತೇನೆ ಬಹುಮುಖ ಪ್ರತಿಭೆಯಾಗಿರುವ ಇವರಿಗೆ ಶುಭವಾಗಲಿ ಎಂದು ಹಾರೈಸಿದರು. ನಂತರ ಇವರ ಎಲ್ಲ ಕ್ಷೇತ್ರದ ಸಾಧನೆಗೆ ಹೆಚ್.ಎಸ್. ಪ್ರತಿಮಾ ಹಾಸನ್ ರವರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರು ಶ್ರೀ ನಂಜಪ್ಪ ಕಾಳೇಗೌಡ ವಕೀಲರು, ಸಂಸ್ಕೃತಿ ಚಿಂತಕರು, ಶ್ರೀ ಪ್ರಕಾಶ್ ವಸ್ತ್ರದ ಸಾಹಿತಿಗಳು ಮತ್ತು ವಕೀಲರು ಮುಧೋಳು ಬಾಗಲಕೋಟೆ ಜಿಲ್ಲೆ, ಸಿ.ಎಂ.ರಮೇಶ ಕಮತಗಿ ಅಧ್ಯಕ್ಷರು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ. ಬಾಗಲಕೋಟೆ ಜಿಲ್ಲೆ.ಹಾಗೂ ಡಾ. ಶಿವಣ್ಣ ಜಿ ಸಂಸ್ಥಾಪಕ ಅಧ್ಯಕ್ಷರು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್.ಬೆಂಗಳೂರು ಇನ್ನು ಹಲವರು ಉಪಸ್ಥಿತರಿದ್ದರು.
