ದಿ ಕಾಶ್ಮೀರಿ ಪೈಲ್ಸ್ ಹಿಂದಿನ ಸತ್ಯವೇನು?

Share


ಭಾರತ ದೇಶದಲ್ಲಿ ಮನೋರಂಜನಾ ಮಾಧ್ಯಮವಾದ ಚಲನಚಿತ್ರವೂ ಕೂಡ ಒಂದೊಂದು ಸಾರಿ ಸತ್ಯ ಘಟನೆಯಾಧಾರಿತ ಚಿತ್ರ ನಿರ್ಮಿಸುವ ಮೂಲಕ ಹಲವಾರು ರೀತಿಯ ಸತ್ಯಗಳನ್ನು ಕೆದಕುವ ಪ್ರಯತ್ನವು ಮೊದಲಿನಿಂದಲೂ ನಡೆದು ಬಂದಿದೆ. ಈ ಪ್ರಯತ್ನದ ದಾರಿಯಲ್ಲಿ ದಿ ಕಾಶ್ಮೀರಿ ಪೈಲ್ಸ್ ಚಿತ್ರವು ನೀಲುತ್ತದೇಯೇ? ಈ ಚಿತ್ರಕ್ಕೆ ಭಾರತದ ಒಂದು ವರ್ಗವು ಬೆಂಬಲಕ್ಕೆ ನಿಲ್ಲುವ ಜೊತೆಗೆ ಬಿಜೆಪಿಯು ಚಿತ್ರವನ್ನು ನೋಡಲೇಬೇಕೆನ್ನುವಂತೆ ಜನರ ಮೇಲೆ ಮನಸಿಕ ಒತ್ತಡವನ್ನು ಏರುತ್ತಿದೆ. ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಸತ್ಯವನ್ನು ತೋರಿಸಿದ್ದೇವೆ ಎನ್ನುವ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಕೇಂದ್ರ ಸರ್ಕಾರವು ವೈಶ್ರೇಣಿಯ ಭದ್ರತೆಯನ್ನು ಒದಗಿಸಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಘೋಷಣೆ ಮಾಡಿದೆ. ದೇಶದ ಪುರಾಮಿ ಮೋದಿ ಈ ಚಿತ್ರವನ್ನು ಹಾಡಿ ಹೋಗಳುತ್ತಾರೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಮಾಡುವ ಜೊತೆಗೆ ಚಿತ್ರವನ್ನು ನೋಡುವಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಚಿತ್ರದ ಮುಖ್ಯ ಸಾರಾಂಶವು 1989-90ರ ಸಾಲಿನಲ್ಲಿ ನಡೆದ ಕಾಶ್ಮೀರ್ ಪಂಡಿತರ ಹತ್ಯೆಯ ಕುರಿತಾಗಿದೆ. 1990ರ ಸಂದಂರ್ಭದಲ್ಲಿ ಕಾಂಗ್ರೆಸ್ ಹೆತರ ಸರ್ಕಾರ ಆಡಳಿತ ಮಾಡುತ್ತಿತ್ತು. ಆ ಸಂದಂರ್ಭದಲ್ಲಿ ರಾಷ್ರ್ಟೀಯ ಪ್ರಂಟ್ ಸರ್ಕಾರ ಆಡಳಿತದಲ್ಲಿತ್ತು. ಬಿಜೆಪಿ ಪಕ್ಷವು ನೇರವಾಗಿ ವಿ.ಪಿ.ಸಿಂಗ್‍ಗೆ ಬೆಂಬಲ ಕೊಟ್ಟಿದ್ದವು. ಆಗ ಲೋಕಸಭೆಯಲ್ಲಿ ವಾಜಪೇಯಿ ಮತ್ತು ಆಡ್ವಾನಿ ಸೇರಿದಂತೆ 89 ಸದಸ್ಯರನ್ನು ಒಳಗೊಂಡಿತ್ತು. ವಿ.ಪಿ.ಸಿಂಗ್ ಸರ್ಕಾರಕ್ಕೆ ಬಿ.ಜೆ.ಪಿ ಯ ಬೆಂಬಲವು ಅತ್ಯಂತ ನಿರ್ಣಯಕವಾಗಿತ್ತು. ಈ 1990ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯ ಪಾಲರಾಗಿ ಜಗಮೋಹನ್ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲ ಬಿ.ಜೆ.ಪಿ ಗರು ಮತ್ತು ವಾಜಪೇಯಿ ಮತ್ತು ಅಡ್ವಾನಿಯವರಿಂದ ನೇಮಕಗೊಂಡಿದ್ದರು. ಇಂತಹ ನರಮೇಧದ ಸಂದರ್ಭದಲ್ಲಿ ಸರಕಾರವಾಗಲೀ, ರಾಜ್ಯ ಪಾಲರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಕೇಂದ್ರ ಸರ್ಕಾರವು ಮೌನದಿಂದ ಇದ್ದು ಇದಕ್ಕೂ ನನಗೂ ಸಂಬಂಧವಿಲ್ಲದಂತಿತ್ತು. ಇದರ ಕುರಿತು ಸಂಸತ್ತಿನಲ್ಲಿ ರಾಜೀವ್ ಗಾಂಧಿ ಕಾಶ್ಮೀರಿ ಪಂಡಿತರಿಗೆ ರಕ್ಷಣೆ ಒದಗಿಸಬೇಕು ಮತ್ತು ಅವರಲ್ಲಿರುವ ಆತಂಕವನ್ನು ದೂರ ಮಾಡಿ ಕಾಶ್ಮೀರದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ಆದರೂ ಕೂಡ ಸರ್ಕಾರವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರ ಹಿಂದೆ ಹತ್ತು ಹಲವು ಪ್ರಶ್ನೆಗಳು ಹೇಳುತ್ತವೆ. ಆ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ?

  1. ಈ ಘಟನೆಯಲ್ಲಿ ಕಾಂಗ್ರೆಸ್‍ನ ವೈಫಲ್ಯವೇನು? ರಾಜಕೀಯ ಪಾತ್ರವೇನು?
  2. 1990ರಲ್ಲಿ ಉಗ್ರಗಾಮಿಗಳನ್ನು 15,000 ಮುಸ್ಲಿಂರನ್ನು ಕೊಂದಿದ್ದರು. 300 ಹಿಂದೂಗಳನ್ನು ಕೊಂದಿದ್ದರು. ಈ ಮಾರಣ ಹೋಮದಲ್ಲಿ 219 ಕಾಶ್ಮೀರಿ ಪಂಡಿತರ ಹತ್ಯೆಯಾಗಿತ್ತು. ಆದರೆ ಚಿತ್ರದಲ್ಲಿ 4,000 ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ ಎಂದು ತೋರಿಸಲಾಗಿದೆ. ಹಾಗಾದರೆ ಈ ಚಿತ್ರವನ್ನು ಸತ್ಯ ಆಧಾರಿತ ಚಿತ್ರವೆಂದು ಹೇಗೆ ವರ್ಗೀಕರಣ ಮಾಡುವುದು?
  3. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಚಿತ್ರವನ್ನು ಏಕೆ ನಿರಾಕರಿಸುತ್ತಾರೆ?
  4. ರಾಜ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಾಶ್ಮೀರಿ ಪೈಲ್ಸ್ ಸಿನಿಮಾ ನೋಡದವರು ದೇಶ ದ್ರೋಹಿಗಳು ಎಂದು ಹೇಳಿದ್ದಾರೆ. ಇದು ಎಷ್ಟು ಸಮಂಜಸವಾದ ಹೇಳಿಕೆ? ರಾಜಕಾರಣಿಗಳ ನಾಲಿಗೆಗೂ ಮೆದುಳಿಗೂ ಸಂಬಂಧವೇ ಇಲ್ಲವೇ?
  5. ಕನ್ನಡದಲ್ಲಿ ರಾಷ್ರ್ಟೀಯ ಅಂತರರಾಷ್ರ್ಟಿಯ ಪ್ರಶಸ್ತಿ ಪಡೆದ ಅದೆಷ್ಟೋ ಚಿತ್ರಗಳಿದ್ದರೂ ಚಕಾರ ವೆತ್ತದ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಈ ಚಿತ್ರವನ್ನು ತಮ್ಮ ಕ್ಷೇತ್ರದಲ್ಲಿ ತಮ್ಮ ಹಣದಲ್ಲಿ ಉಚಿತವಾಗಿ ತೋರಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ?
  6. ವಿ.ಪಿ.ಸಿಂಗ್ ಸರಕಾರದ ನಂತರ ವಾಜಪೇಯಿಯವರ 5 ವರ್ಷದ ಸಂಪೂರ್ಣ ಸರಕಾರ ನಂತರದ ಮೋದಿಯ 2ನೇ ಅವಧಿಯ ಸರಕಾರ ಏಕೆ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೊಡಲಿಲ್ಲ?
  7. 1947 ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಅದೆಷ್ಟೋ ಹತ್ಯೆಗಳು ನಡೆದಿವೆ. ಆ ಹತ್ಯೆಗಳ ಹಿಂದೆ ಉಗ್ರಗಾಮಿಗಳಿದ್ದರು. ಅವರಿಗೆ ನೆರವಾದರು ಪಾಕಿಸ್ನಾನಿಗಳು ದೇಶದ ಒಳಗೆ ನುಸುಳಲು ನೆರವಾದವರು ಈ ದೇಶದ ರಾಜಕಾಣಿಗಳು ಇಂತಹವರಿಗೆ ಏಕೆ ಶಿಕ್ಷೆ ಆಗಲಿಲ್ಲ.
  8. ಭಯೋತ್ಪಾದಕರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್ ಧರ್ಮ ಜಾತಿ ನೋಡದೆ ಅದೆಷ್ಟೋ ಜನರನ್ನು ಕಾಶ್ಮೀರ್ ಸೇರಿದಂತೆ ದೇಶದಲ್ಲಿ ಕೊಂದಿದ್ದಾರೆ. ಆದರೆ ಪಂಡಿತರು ಮಾತ್ರ ಮನುಷ್ಯರು ಉಳಿದವರು ಮನುಷ್ಯರಲ್ಲವೇ?
  9. ಒಂದು ವಿಜ್ಞಾನದ ಅಧ್ಯಯನದ ಪ್ರಕಾರ ಬ್ರಾಹ್ಮಣರು ಈ ದೇಶದ ಮೂಲ ನಿವಾಸಿಗಳೇ ಅಲ್ಲ ಜೊತೆಗೆ ಇತಿಹಾಸದ ಪ್ರಕಾರವೂ ಕೂಡ ದ್ರಾವಿಡರು ಮೂಲ ನಿವಾಸಿಗಳು. ಆರ್ಯರು ಈ ದೇಶಕ್ಕೆ ನೆಲೆಸಲು ಬಂದು ದ್ರಾವಿಡರನ್ನು ಕೆಳತಳ್ಳಿದ್ದಾರೆ. ಇದರ ಬಗ್ಗೆ ಏಕೆ ಪ್ರಶ್ನೆ ಇಲ್ಲ?
  10. ದೇಶದಲ್ಲಿ ಮಳೆಯಿಂದ ಪ್ರಕೃತಿ ವಿಕೋಪದಿಂದ ಬೇರೆ ದಾಳಿಯಿಂದ ರೋಗರುಜಿನಗಳಿಂದ ಅದೆಷ್ಟೋ ಜನ ಸಾಯುತ್ತಾರೆ. ದಾಳಿಗಳಿಂದ ಅದೆಷ್ಟೋ ಸಮುದಾಯಗಳು ನಶಿಸಿ ಹೋಗಿವೆ. ಸರಕಾರದ ಕೆಲವು ಪ್ರಗತಿ ಯೋಜನೆಗಳು ಕೂಡ ಕೆಲವು ಬುಡಕಟ್ಟು ಜನಾಂಗಗಳನ್ನು ಒಕ್ಕಲು ಎಬ್ಬಿಸಿವೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕಾಶ್ಮೀರಿ ಪಂಡಿತರಿಗೆ ಆದ ಸಮಸ್ಯೆ ದೊಡ್ಡದೇ?
  11. ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಇದು ಸಂಘ ಪರಿವಾರದ ಶಕ್ತಿಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಕೊಳ್ಳುವ ಜೊತೆಗೆ ಆರ್.ಎಸ್.ಎಸ್. ನ ಗೀತೆ “ನಮಸ್ತೆ ಸದಾ ವತ್ಸಲೇ” ಸಭೀಕರು ಹಾಡುತ್ತಿರುವ ಒಂದು ತುಣುಕನ್ನು ಟ್ಯಾಗ್ ಮಾಡಿದ್ದಾರೆ. ಹಾಗಾದರೆ ದಿ ಕಾಶ್ಮೀರಿ ಪೈಲ್ಸ್ ಆರ್.ಎಸ್.ಎಎಸ್.ನ ಪ್ರಚಾರವೇ? ಹಾಗದರೆ ಆರ್.ಎಸ್.ಎಸ್ ವು ಕೇವಲ ಬ್ರಾಹ್ಮಣರಿಗೆ ಸೀಮಿತವೇ? ಹಿಂದೂ ಸಂಘಟನೆ ಅಲ್ಲವೇ?
  12. ಚಿತ್ರವನ್ನು ಮನೋರಂಜನೆ ಮಾಧ್ಯಮವಾಗಿ ನೋಡಲಿ ಆದರೆ ಸತ್ಯ ಹೇಳುವ ಕಥೆಯೆಂದು ಏಕೆ ಬಿಂಬಿಸಲಾಗುತ್ತಿದೆ?
  13. ಬಿ.ಜೆ.ಪಿ ರಾಜ್ಯ ಸರಕಾರಗಳಲ್ಲಿ ತೆರಿಗೆ ವಿನಾಯಿತಿ ಮಾಡಿರುವುದು ರಾಜ್ಯಂಗದ ಪ್ರಕಾರ ಎಷ್ಟು ಸರಿ?
  14. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇರುವಾಗ ಈ ಚಿತ್ರದ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ಚರ್ಚೆ ಬೇಕೆ?
  15. ಸ್ವಾಮಿ ವಿವೇಕಾನಂದರು ಹೇಳುವಂತೆ “ನಿನ್ನ ಧರ್ಮದ ಉನ್ನತ ವಿಚಾರಗಳನ್ನು ಹೇಳು ಆದರೆ ಬೇರೆ ಧರ್ಮದ ಬಗ್ಗೆ ಟೀಕೆ ಮಾಡಬೇಡ ಈ ವ್ಯಾಖ್ಯಾನವನ್ನು ಈ ದೇಶದ ಬುದ್ದಿ ಜೀವಿಗಳು ಆರ್.ಎಸ್.ಎಸ್. ನವರು ಹಿಂದೂ ರಾಜಕಾಣಿಗಳು ಹಿಂದೂ ಪರ ಸಂಘನೆಗಳು ಪಾಲಿಸುತ್ತಿದ್ದಾರಾ?
    ಹೋಗಲಿ ಬಿಡಿ ಸರ್ವ ಸಾಮಾನ್ಯನಾಗಿ ನಾನು ವಿಚಾರ ಮಾಡುವುದೇನೆಂದರೆ 80% ಹಿಂದೂಗಳು ಸೋತಿರುವುದು ಆತ್ಮ ವಿಮರ್ಶೆಯಿಲ್ಲದೆ. ಒಂದು ದೇಶದಲ್ಲಿ 80% ಇರುವ ಒಂದು ಧರ್ಮ ಒಂದು ಚಿತ್ರಕ್ಕೆ ಸೀಮಿತವಾಗಬೇಕೆ?
    ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಾವು ಸದೃಢ ಎಂದು ತೋರಿಸಿಕೊಳ್ಳಲು ಇಷ್ಟೇಲ್ಲಾ ಪ್ರಯತ್ನ ಬೇಕೆ! ನೂರು ಜನರಲ್ಲಿ 80 ಜನ ಒಂದಾದರೆ ಇನ್ನು 20 ಜನ ಏನು ಮಾಡುತ್ತಾರೆ? ಹಿಂದೂ ಪರ ಸಂಘನೆಗಳು ಮತ್ತು ಬಿ.ಜೆ.ಪಿ ಪಕ್ಷವು ಹಿಂದೂ ಪರ ಎನ್ನುತ್ತಲೇ ಮೇಲ್ ವರ್ಗಕ್ಕೆ ಮಾತ್ರ ಸೀಮಿತವಾಗಿದೆ. ಇನ್ನೂ ಕಾಂಗ್ರೆಸ್ ಪಕ್ಷವು ಮುಸ್ಲಿಂ ರು ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ಮೇಲ್ವರ್ಗವನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿವೆ? ಹಿಂದೂಗಳು ಅಂದರೆ ಬ್ರಾಹ್ಮಣರು, ಲಿಂಗಾಯಿತರು ಅಷ್ಟೇ? ದಲಿತರು ಸೇರಿದಂತೆ ಕೆಳವರ್ಗದವರು ಹಿಂದೂಗಳಲ್ಲವೇ? ಇಂತಹ ಅದೆಷ್ಟೋ ತಾರತಮ್ಯ ವಿಚಾರಗಳಿಂದ ಭಾರತದಲ್ಲಿ ಹಿಂದೂಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ? ದಿ ಕಾಶ್ಮೀರಿ ಪೈಲ್ಸ್ ಬದಿಗಿಟ್ಟು ಒಗ್ಗಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಭಾರತವು ವಿಶ್ವ ಗುರು ಆಗುತ್ತದೆ.

Share

ದೇಶದ್ರೋಹ- ರಾಜಕೀಯ ಅಪರಾಧ -ಸುಪ್ರೀಂ ಚಾಟಿ

Share

ಭಾರತದ ಸಂವಿಧಾನವು ಅತ್ಯಂತ ಅರ್ಥಪೂರ್ಣವಾಗಿದ್ದು, ದೇಶದ ಅಭಿವೃದ್ಧಿ, ಸಮಾನತೆ, ಏಕತೆ, ಐಕ್ಯತೆ, ಜಾತ್ಯಾತೀತತೆಗೆ ಒತ್ತು ನೀಡಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗವು ಒಂದು ಇನ್ನೊಂದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಹಲವಾರು ಸಂದರ್ಭದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಜನರು ನಂಬಿಕೆ ಕಳೆದುಕೊಂಡಾಗಲೂ ನ್ಯಾಯಾಂಗವು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ತನ್ನ ಘನತೆಯನ್ನು ಎತ್ತಿ ಹಿಡಿದಿದೆ. ಇಂದಿಗೂ ನ್ಯಾಯಾಂಗದ ಮೇಲೆ ಜನತೆಗೆ ಅಪಾರವಾದ ನಂಬಿಕೆ ಇದ್ದು, ಈ ನಂಬಿಕೆಗಳಿಗೆ ಪೂರಕವಾಗಿ ಇತ್ತೀಚಿನ 2 ತೀರ್ಪುಗಳನ್ನು ಉಲ್ಲೇಖಿಸಬಹುದು. 1 ಬ್ರಿಟೀಷರ ಕಾಲದ ‘ದೇಶದ್ರೋಹ’ ಕಾಯ್ದೆಯ ಇನ್ನು ಏಕೆ ? 2 ಕ್ರಿಮಿನಲ್ ಹಿನ್ನಲೆ ಹೊಂದಿದವರು ಕಾನೂನು ಮಾಡುವುದು ತಪ್ಪು ದೇಶದ್ರೋಹ ಕಾಯ್ದೆ IPಅ 124 ಎ ಅತ್ಯಂತ ಹಳೆಯದು ಮತ್ತು ಇದು ಬ್ರಿಟೀಷರು ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಭಾರತೀಯರು
ವಿರೋಧಿಸದಂತೆ ನಿಯಂತ್ರಿಸಲು ರಚನೆ ಆಗಿದ್ದು, ಸಂವಿಧಾನ 377 ಸೆಕ್ಷನ್ ಅನ್ನು ರದ್ದು ಪಡಿಸಿದಂತೆ 124ಎ ಅನ್ನು ರದ್ದುಪಡಿಸಬಹುದಲ್ಲವೆ ? ಎಂದು ಮಾಜಿ ಎ.ಜಿ. ಮುಕುಲ್ ರೋಹಟಗಿ ವಿವರಣೆ ನೀಡುವ ಮೂಲಕ ಸುಪ್ರೀಂ ಕೋರ್ಟ್‍ನ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಒಂದು ಕೇಸಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‍ವು ದೇಶದಲ್ಲಿ ‘ದೇಶದ್ರೋಹ’ ಕಾಯ್ದೆಯನ್ನು ಆಡಳಿತ ವರ್ಗ ದುರುಪಯೋಗಪಡಿಸಿಕೊಳ್ಳುತ್ತಿದೆ. ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷದ ಇಲ್ಲಿಯವರೆಗೂ ‘ದೇಶದ್ರೋಹ’ ಕಾಯ್ದೆ ಬಳಸುವಂತಹ ಯಾವುದೇ ಪ್ರಕರಣವು ನಡೆದಿಲ್ಲ. ದೇಶದ ವಿರುದ್ಧ ಮಾತನಾಡುವವರಿಗೆ ವಿರೋಧಿಸುವವರಿಗೆ ಬೇರೆ ರೀತಿಯ ಕಾಯ್ದೆಗಳು ಇವೆ. ಅಥವಾ ಕೇಂದ್ರ ಸರಕಾರವು ಅದಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸಲಿ. ಆದರೆ ಪುರಾತನವಾದ ಈ ಕಾಯ್ದೆಯನ್ನು ರದ್ದುಪಡಿಸಲು ಕೇಂದ್ರ ಸರಕಾರ ಸಲಹೆ ನೀಡಿದೆ. ಇನ್ನು ಎರಡನೆಯ ವಿಚಾರ ಕಾನೂನು ರಚಿಸುವಲ್ಲಿ ಅಪರಾಧ ಹಿನ್ನೆಲೆಯವರು ಇರಬಾರದು. ಬಿಹಾರ ವಿಧಾನಸಭಾ ಚುನಾವಣೆಯ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರಕಾರಕ್ಕೆ ಸಾಕಷ್ಟು ಬಾರಿ ಹೇಳಿದರೂ ಅಪರಾಧ ಹಿನ್ನೆಲೆಯವರು ರಾಜಕಾರಣಿಗಳು ಆಗದಂತೆ ನೋಡಿಕೊಳ್ಳಬೇಕು.
ಕಾನೂನು ರಚಿಸಬೇಕೆಂದು ಹೇಳಿದಾಗಲೂ ಮೌನ ವಹಿಸುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಕಾನೂನು ಮಾಡುವ ಇಚ್ಚೆ ಇಲ್ಲ. ಅಪರಾಧ ಹಿನ್ನೆಲೆಯವರು ದೇಶದ ಕಾನೂನುಗಳನ್ನು ರಚನೆ ಮಾಡುತ್ತಿರುವುದು ಜನತೆಯ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಈಗಾಗಲೇ ಜನರು ರೊಚ್ಚಿಗೆದ್ದಿದ್ದಾರೆ. ಈಗಲಾದರೂ ಅಪರಾಧ ಹಿನ್ನೆಲೆಯ ರಾಜಕಾರಣಿಗಳನ್ನು ಚುನಾವಣೆಯ ಸ್ಪರ್ಧೆ ಮಾಡದಂತೆ ತಡೆಯಲು ಸೂಕ್ತ ಕಾನೂನು ರೂಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಖಡಕ್ ಎಚ್ಚರಿಕೆ ನೀಡಿದೆ. ಈ ಎರಡು ವಿಚಾರಗಳು ಭಾರತದ ಜನತೆಯಲ್ಲಿ ನ್ಯಾಯಾಲಯದ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಏಕೆಂದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಈ ಎರಡು ವಿಚಾರಗಳು ಅತ್ಯಂತ ಮುಖ್ಯವಾಗಿದ್ದು, ದೇಶದ್ರೋಹ ಕಾಯ್ದೆಯನ್ನು ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟವರೆ ಬಳಸುತ್ತಿದ್ದರೂ ಹಾಗೇ ಇಂದು ರಾಜಕೀಯವು ಅತ್ಯಂತ ಅಪರಾಧ ಹಿನ್ನೆಲೆಯುಳ್ಳವರಿಂದ ತುಂಬಿದೆ. ರಾಜಕೀಯ ಬದಲಾದರೆ ಸರಕಾರ ಅಂದರೆ ಶಾಸಕಾಂಗ ವ್ಯವಸ್ಥೆ ಬದಲಾಗುತ್ತದೆ. ದೇಶದ ಅಭಿವೃದ್ಧಿ ಜೊತೆಗೆ ಪ್ರಕಾಶಮಾನವಾಗಿ ಬೆಳಗುತ್ತದೆ.


Share

ಗ್ಯಾಂಡಿ-ಗಾಂಧಿ ಆಗಿರುವ ರೋಚಕ ಸತ್ಯ.

Share

ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಂದಿರಾ ಮಕ್ಕಳಿಗೆ ‘ಗಾಂಧಿ’ ಅಡ್ಡ ಹೆಸರು ಬರಲು ಕಾರಣವೇನು ? ಇದರ ಸುತ್ತ ಅಂತೆ-ಕಂತೆಗಳ ಕಥೆಗಳು ಸಾಕಷ್ಟು ಹೊರಬಂದಿದೆ. ಕೆಲವರು ಹೇಳುವ ಫಿರೋಜ್‍ನನ್ನು ಮಹಾತ್ಮ ಗಾಂಧಿ ದತ್ತು ಪಡೆದಿದ್ದರು. ನೆಹರು ಮಗಳು ಇಂದಿರಾ ಗಾಂಧಿಯನ್ನು ಪ್ರೀತಿಸಿ ಮದುವೆ ಆಗಿದ್ದರಿಂದ ನೆಹರು ಕುಟುಂಬಕ್ಕೆ ‘ಗಾಂಧಿ’ ಅಡ್ಡ ಹೆಸರು ಬಂದಿದೆ ಅಂತ ವಾದಿಸುವವರ ಸಂಖ್ಯೆಯೂ ಬಹಳ ಇದೆ. ಆದರೆ 2ನೇ ಅಕ್ಟೋಬರ್ 1869 ರಲ್ಲಿ ಹುಟ್ಟಿ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ಮತ್ತು ಹೋರಾಟ ನಂತರದ ಭಾರತಕ್ಕೆ ಆಗಮಿಸಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಾಂತಿಯುತ ಹೋರಾಟದಿಂದ ಹೆಸರುವಾಸಿಯಾದ ಗಾಂಧಿ ಕುಟುಂಬಕ್ಕೂ ನೆಹರೂ ಆಗಲಿ, ಫಿರೋಜ್ ಕುಟುಂಬಕ್ಕಾಗಿ ಸಂಬಂಧವಿಲ್ಲ. ಗಾಂಧೀಜಿಯವರಿಗೆ ಮಕ್ಕಳು ಇದ್ದು ತಮ್ಮ 36ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದ ನಂತರ ಯಾರನ್ನು ದತ್ತು ಪಡೆಯಲಿಲ್ಲ. ಹಾಗಾದರೆ ಫಿರೋಜ್ ಮುಂದೆ ಅಡ್ಡ ಹೆಸರಾಗಿ ಗಾಂಧಿ ಸೇರಿದ್ದು ಹೇಗೆ ತಿಳಿಯಬೇಕಾದರೆ ಫಿರೋಜ್‍ನ ಇತಿಹಾಸ ತಿಳಿಯಬೇಕು. 12ನೇ ಸೆಪ್ಟೆಂಬರ್ 1912 ರಲ್ಲಿ ಮುಂಬೈನಲ್ಲಿ ಜನಿಸಿದ ಫಿರೋಜ್ ಗುಜರಾತ್ ಮೂಲದ ಪಾರ್ಸಿ ಕುಟುಂಬಕ್ಕೆ ಸೇರಿದವರು. ಈ ಪಾರ್ಸಿಗಳು ಮುಸ್ಲಿಮರಲ್ಲ ಇವರದೊಂದು ಜೋರಾಸ್ಟ್ರಿಯನ್ ಧರ್ಮ ಪರ್ಷಿಯಾ ದೇಶ ಇಸ್ಲಾಂನ ಆಕ್ರಮಣಕ್ಕೆ ಒಳಗಾದಾಗ ಬದುಕು ಕಟ್ಟಿಕೊಳ್ಳುವುದರ ಸಲುವಾಗಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆ ನಿಂತು ಭಾರತೀಯರಿಗಿಂತ ಹೆಚ್ಚು ಭಾರತೀಯರಾದರು. ಪರ್ಷಿಯಾದಿಂದ ಬಂದಿದ್ದರಿಂದ ‘ಪಾರ್ಸಿ’ಗಳು ಅಂತ ಕರೆಯುತ್ತಿದ್ದರು. ಪಾರ್ಸಿ ಕುಟುಂಬದ ಜೆಹಾಂಗೀರ್ ಫೆರಾಜೋನ್ ಗ್ಯಾಂಡಿ ಮತ್ತು ರತಿಮಾಯಿಯ ಮಗ ಫಿರೋಜ್ ಜೆಹಾಂಗೀರ್ ಗ್ಯಾಂಡಿ ಫಿರೋಜ್ ತಂದೆ ಇಂಜಿನೀಯರ್ ಆಗಿದ್ದರೂ ಈ ಕಾರಣದಿಂದ ಕೆಲಸದ ನಿಮಿತ್ತ ಗುಜರಾತಿನಿಂದ ಮುಂಬೈಗೆ ಬಂದು ನೆಲೆಸಿದರು. 1930 ರಲ್ಲಿ ಫಿರೋಜ್ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಕಾಂಗ್ರೆಸ್ಸಿನ ಯುವ ದಳವಾದ ‘ವಾನರ ಸೇನೆ’ಯ ಸದಸ್ಯರಾದರು. ಇದು ಕೂಡ ತಂದೆಯ ಮರಣಾ ನಂತರ ಉತ್ತರ ಪ್ರದೇಶದ ಅಲಹಾಬಾದ್ ತಾಯಿಯ ಜೊತೆಗೆ ನೆಲೆಸಿದಾಗ ನಡೆದ ಘಟನೆ. ಈ ‘ವಾನರ್ ಸೇನೆ’ ಸಕ್ರಿಯ ನಾಯಕಿ ಇಂದಿರಾ ಅಥವಾ ಜವಾಹರಲಾಲ ನೆಹರೂ ಅವರ ಪ್ರೀತಿಯ ಪ್ರಿಯದರ್ಶಿನಿ ಇಬ್ಬರ ಮಧ್ಯ ಪರಿಚಯವಾಗಿ ಆತ್ಮೀಯತೆ ಬೆಳೆಯುತ್ತದೆ. ಫಿರೋಜ್ ಇಂದಿರಾ ಪ್ರಿಯದರ್ಶಿನಿ ನೆಹರು ಅವರಿಗೆ 16 ವರ್ಷ ಇರುವಾಗಲೇ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಸರಳ ಆಕರ್ಷಕ ಫಿರೋಜ್‍ನ ಪ್ರೇಮದಲ್ಲಿ ಇಂದಿರಾ ಸಿನಿಮೀಯ ರೀತಿಯಲ್ಲಿ ತೇಲುತ್ತಾರೆ. ಇತ್ತ ನೆಹರೂಗೆ ಈ ವಿಷಯದಲ್ಲಿ ಬಾರಿ ವಿರೋಧ ಇರುತ್ತದೆ. ಇವರ ಪ್ರೀತಿಯನ್ನು ಒಪ್ಪುವುದಿಲ್ಲ.

ಈ ಮಧ್ಯ ಭಾರತ ಸ್ವಾತಂತ್ರ್ಯ ಹೋರಾಟವು ತೀವ್ರಗೊಳ್ಳುತ್ತದೆ. ಗಾಂಧಿ, ನೆಹರೂ ಸೇರಿದಂತೆ ಹಲವರು ಹೋರಾಟ ಜೈಲು ಅಂತ ಕುಟುಂಬಗಳಿಂದ ದೂರ ಉಳಿಯುತ್ತಾರೆ. ಇಂದಿರಾನ ಮೇಲಿನ ಪ್ರೀತಿಯಿಂದ ಫಿರೋಜ್ ಮನೆಗೆ ಬರಲು ಪ್ರಾರಂಭಿಸುತ್ತಾನೆ. ಆರೋಗ್ಯದ ಸಮಸ್ಯೆ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇಂದಿರಾ ಅವರ ತಾಯಿ ಕಮಲಾ ನೆಹರು ಅವರ ಆತ್ಮೀಯತೆ ಬೆಳೆಸಿಕೊಂಡು ಅವರ ಸೇವೆ ಮಾಡುತ್ತಾ ಫಿರೋಜ್ ಬಹುಕಾಲ ಮನೆಯಲ್ಲೇ ಕಳೆಯುತ್ತಾರೆ. ನೆಹರು ಅವರ ಮನವಿಯ ಮೇರೆಗೆ ಗಾಂಧೀಜಿಯವರು ಕೂಡ ಫಿರೋಜ್‍ನನ್ನು ಕರೆದು ಬುದ್ಧಿ ಹೇಳುತ್ತಾರೆ. ಆದರೂ ಇಂದಿರಾ ಮತ್ತು ಫಿರೋಜ್ ಅವರ ಮಾತನ್ನು ಒಪ್ಪುವುದಿಲ್ಲ. ಜೊತೆಗೆ 26 ಮಾರ್ಚ್ 1942 ರಲ್ಲಿ ಮದುವೆ ಆಗುತ್ತಾರೆ. ಫಿರೋಜ್ ಗ್ಯಾಂಡಿ ಅವರಿಗೆ ಎಂ.ಕೆ. ಗಾಂಧಿಯವರ ಅಪರಾಧವಾದ ಅಭಿಮಾನ, ಭಕ್ತಿ ಇರುತ್ತದೆ. ಈ ಅಭಿಮಾನ ಮತ್ತು ಭಕ್ತಿ ಸೂಚಕವಾಗಿ ಫಿರೋಜ್ ತನ್ನ ಹೆಸರಿನ ಮುಂದೆ ‘ಗಾಂಧಿ’ ಅಂತ ಸೇರಿಸಿಕೊಳ್ಳುತ್ತಾರೆ. ಇದರಲ್ಲಿ ಒಪ್ಪಿಗೆ ಅಥವಾ ಕಾನೂನಿನ ಮಾನ್ಯತೆ ಇಲ್ಲದಿದ್ದಾಗಲೂ ಭವಿಷ್ಯದಲ್ಲಿ ಫಿರೋಜ್ ಗಾಂಧಿ ಅಂತ ಪ್ರಸಿದ್ಧಿ ಪಡೆಯುತ್ತಾರೆ. ಇವರನ್ನು ನೆಹರು ತಮ್ಮ ಕೊನೆಯ ಕ್ಷಣದವರೆಗೂ ವಿರೋಧಿಸುತ್ತಾ ಬಂದಿದ್ದಾರೆ. ಹಾಗೇ ಫಿರೋಜ್ ಕೂಡಾ ಮೊದಲ ಹಣಕಾಸು ಹಗರಣವನ್ನು ಬೆಳಕಿಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ.
ಕಮಲ ನೆಹರೂ ಸಂಬಂಧದ ಬಗ್ಗೆ ಅನುಮಾನಗಳು ನೆಹರೂ ವಿರುದ್ಧ ಹಗರಣಗಳನ್ನು ಬೆಳಕಿಗೆ ತರಲು ಪ್ರಯತ್ನ. ಈ ಎಲ್ಲಾ ಕಾರಣಗಳಿಂದ ಇಂದಿರಾ ಮತ್ತು ಫಿರೋಜ್ ಗಾಂಧಿಯ ಸಂಬಂಧಗಳು ಹಳಸುತ್ತವೆ. ಸಮಾಜವಾದಿ ವಿಚಾರಗಳು ಸ್ವಾತಂತ್ರ್ಯ ಹೋರಾಟದ ಪ್ರಯತ್ನಗಳಲ್ಲೇ ಅಂದರೆ 1930 ರಲ್ಲೇ ‘ಗಾಂಧಿ’ ಹೆಸರನ್ನು ಫಿರೋಜ್ ತನ್ನ ಹೆಸರಿನೊಂದಿಗೆ ಬಳಸಿಕೊಂಡಿರುತ್ತಾನೆ. ಫಿರೋಜ್‍ನನ್ನು ಒಪ್ಪಂದ ನೆಹರೂ ಕುಟುಂಬ ‘ಗಾಂಧಿ’ ಅಡ್ಡ ಹೆಸರನ್ನು ಬಳಸಿಕೊಂಡು ಇಷ್ಟು ವರ್ಷ ರಾಜಕೀಯ ಮಾಡುತ್ತಿದ್ದಾರೆ. ನೆಹರೂ ಕುಟುಂಬ ಬ್ರಾಹ್ಮಣ ಕುಟುಂಬವಾದರೂ ಕೂಡಾ ಫಿರೋಜ್ ಪಾರ್ಸಿ ಆಗಿದ್ದರಿಂದ ಇವತ್ತಿನ ಗಾಂಧಿ ಕುಡಿಗಳು ‘ಪಾರ್ಸಿ’ಗಳೇ ಹೊರತು ಬ್ರಾಹ್ಮಣರಲ್ಲ. ಫಿರೋಜ್ ಉತ್ತಮ ಸಮಾಜವಾದಿ ಚಿಂತಕ, ಭ್ರಷ್ಟಾಚಾರದ ವಿರೋಧಿ 1960ರಲ್ಲಿ ಹೃದಯಾಘಾತದಿಂದ ನಿಧನರಾದರು. ಈಗ ಗಾಂಧಿ ಕುಟುಂಬಕ್ಕೆ ಸಂಬಂಧವಿಲ್ಲದವರು ‘ಗಾಂಧಿ’ ಬಳಸುತ್ತಾರೆ. ಇಂದಿರಾ ಗಾಂಧಿ ಇತಿಹಾಸ ಎಲ್ಲರಿಗೂ ಗೊತ್ತು ಹಾಗಾದರೆ ‘ಗಾಂಧಿ’ ಬಳಸುವುದು ಎಷ್ಟು ಸರಿ ?


Share

ಮಾಧ್ಯಮ ಧರ್ಮ

Share

ಮಾಧ್ಯಮದ ಇತಿಹಾಸವು ಅತ್ಯಂತ ರೋಚಕವಾಗಿದ್ದು ಇಂತಹ ಇತಿಹಾಸವುಳ್ಳ ಮಾಧ್ಯಮದ ಹುಟ್ಟಿನಲ್ಲಿ ಧರ್ಮ ಪ್ರಚಾರ, ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯೆತ್ತುವವರು ಮಾಧ್ಯಮವನ್ನು ಆಯಾ ಪ್ರಾಂತೀಯ ಸಂಸ್ಕೃತಿಯ ರಾಯಭಾರಿ ಎನ್ನಬಹುದು. ಇಂತಹ ಮಾಧ್ಯಮಗಳ ಬಗ್ಗೆ ತನ್ನದೇ ಆದ ಧರ್ಮವಿದೆ ಅದು ಪತ್ರಿಕಾ ಧರ್ಮ. ಇಲ್ಲಿ ಧರ್ಮ ಎಂದರೆ ಒಗ್ಗಟ್ಟು, ನೈತಿಕತೆ, ಸಿದ್ದಾಂತದ ಪಾಲನೆ ಒಂದು ಸಿದ್ದಾಂತಕ್ಕಾಗಿ ಹೋರಾಟ ಒಳಗೊಂಡಿದೆ ಹೊರತು ಸ್ಪರ್ಧೆ, ಮೋಸ, ಬೆಳವಣಿಗೆಗಾಗಿ ಮತ್ತೊಬ್ಬರಿಗೆ ಹಾನಿ ಮಾಡುವುದು ಸೇರುವುದಿಲ್ಲ. ಮಾಧ್ಯಮವು ಮಾತಿನ ಮೂಲಕ, ಬರಹದ ಮೂಲಕ, ಚಿತ್ರದ ಮೂಲಕ, ಸನ್ನೆಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವುದರಿಂದ ಅತ್ಯಂತ ಜಾಗೃತಿವಹಿಸಬೇಕಾಗುತ್ತದೆ. ಚಲನಚಿತ್ರ, ನಾಟಕ, ಜಾನಪದ, ಬರಹ, ನಾಟ್ಯ, ತಾಳೆಗರಿಯ ಬರಹ ಮುಂದುವರಿಯುತ್ತ ಪತ್ರಿಕಾ ಲೋಕ ನಂತರದ ಸಾಲಿನಲ್ಲಿ ಟಿವಿ ಮತ್ತು ಆನ್‌ಲೈನ್‌ಗಳ ಭರಾಟೆಯಲ್ಲಿ ಪತ್ರಿಕಾ ಧರ್ಮಕ್ಕೆ ಕುತ್ತು ಬರುತ್ತಿದೆ. ಇಂದು ಸಾಮಾಜಿಕ ಜಾಲತಾಣಗಳೇ ದೊಡ್ಡ ಮಾಧ್ಯಮದಂತೆ ಅನಿಸುತ್ತಿದ್ದು ಈ ಮಾಧ್ಯಮಗಳ ಸಮೂಹದಲ್ಲಿ ಸುದ್ದಿ ಚಾನಲ್ ಗಳೂ ಕೂಡ ಮಾಧ್ಯಮ ಧರ್ಮವನ್ನು ಗಾಳಿಗೆ ತೂರುತ್ತಿದೆ.
ಪ್ರತಿಯಂದು ಪತ್ರಿಕೆ ಮತ್ತು ಟಿವಿ ವಾಹಿನಿಗಳು ತನ್ನದೇ ಆದ ವಿಚಾರ, ಗುರಿ, ನೈತಿಕತೆ ಮತ್ತು ಭವಿಷ್ಯವನ್ನು ಇಟ್ಟುಕೊಂಡು ಪ್ರಾರಂಭವಾಗಿರುತ್ತದೆ. ಆದ್ದರಿಂದ ಉಳಿವಿನ ಪ್ರಶ್ನೆಗಾಗಿ, ಭವಿಷ್ಯಕ್ಕಾಗಿ ಆಧುನಿಕ ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡಲು ಸೋಲುತ್ತಿರುವ ಹಿನ್ನಲೆಯಲ್ಲಿ ತಮ್ಮ ನೈತಿಕತೆಯನ್ನು ಗಾಳಿಗೆ ತೂರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಮಾಧ್ಯಮ ಧರ್ಮವನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ. ಹಾಗಾದರೆ ಮಾಧ್ಯಮ ಧರ್ಮ ಎಂದರೆ ಏನು? ಮಾಧ್ಯಮವು ಆಯಾ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಸಂಪಾದಕರು ಆಥವಾ ಆ ಮಾಧ್ಯಮದ ಸೃಷ್ಠಿಕರ್ತರ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೂ ಕೂಡ ಮಾಧ್ಯಮದ ನೈತಿಕತೆ ಮತ್ತು ಧರ್ಮವನ್ನು ಸಾಮಾನ್ಯವಾಗಿ ಹೇಳಬೇಕೆಂದರೆ ಈ ಕೆಳಗಿನ ವಿಚಾರಗಳನ್ನು ಒಳಗೊಂಡಿರಬೇಕು.
1. ರಾಷ್ಟç ಪ್ರೇಮವನ್ನು ಹುಟ್ಟಿಸುವಂತಹ ವಿಚಾರಗಳಿಗೆ ಒತ್ತು ನೀಡಬೇಕು.
2. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಬೇಕು.
3. ಯಾವುದೇ ಕಾರಣಕ್ಕೂ ಧರ್ಮ ಮತ್ತು ಜಾತಿಯ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಧ್ಯಮ ಮಾಡಬಾರದು.
4. ದೇಶದ ಪ್ರತಿಬಿಂಬಗಳಾದ ರಾಷ್ಟçಧ್ವಜ, ರಾಷ್ಟçಲಾಂಛನ, ಸಂವಿಧಾನಕ್ಕೆ ಮತ್ತು ನ್ಯಾಯಾಲಯಗಳಿಗೆ ಗೌರವ ಕೊಡಬೇಕು.
5. ಅಶ್ಲೀಲ ಪದಬಳಕೆ, ವ್ಯಕ್ತಿಗೆ ಮಾನಹಾನಿ ಆಗುವಂತಹ ಪದಬಳಕೆ ಮಾಡಬಾರದು.
6. ಸುದ್ದಿಯನ್ನು ಸುದ್ದಿಯಾಗಿ ಮಾಡಬೇಕೆ ಹೊರತು ತಮ್ಮ ವೈಯಕ್ತಿಕ ಧ್ವೇಷ, ಅಸೂಯೆ ತುಂಬಬಾರದು.
7. ಓರ್ವ ಪತ್ರಕರ್ತ ಅಥವಾ ಮಾಧ್ಯಮವು ಬಿಳಿ ಹಾಳೆಯಷ್ಟೇ ಶುದ್ದವಾಗಿರಬೇಕು. ಯಾವುದೇ ರೀತಿಯ ಭ್ರಮೆ, ಒತ್ತಡ, ಅಭಿಮಾನ, ವೈಯಕ್ತಿಕ ಧ್ವೇಷ, ಸೇಡಿನ ಮನೋಭಾವ, ಸ್ವಹಿತಾಸಕ್ತಿ, ಲಾಭ ಒಳಗೊಂಡಿರಬಾರದು.
8. ಯಾವುದೇ ಮಾಧ್ಯಮವು ತನ್ನದೇ ಆದ ವಿಚಾರ ಮತ್ತು ಗುರಿಯನ್ನು ಇಟ್ಟುಕೊಂಡು ನೈತಿಕತೆ ಪಾಲಿಸುತ್ತ ಬೆಳೆಯಬೇಕು.
9. ತನಿಖಾ ವರದಿಗಳನ್ನು ಮಾಡುವಾಗ ಎಲ್ಲಾ ಆಯಾಮಗಳನ್ನು ಅಧ್ಯಯನ ಮಾಡಿ ಸರಿಯಾದ ತನಿಖಾ ವರದಿಗಳನ್ನು ಸಿದ್ದಪಡಿಸಬೇಕು ಅಂದರೆ ಯಾವುದೇ ಕಾರಣಕ್ಕೂ ನಿರಪರಾಧಿಗೆ ಶಿಕ್ಷೆ ಆಗಬಾರದು.
10. ನಕಲಿ ಪತ್ರಿಕೋಧ್ಯಮ ಕಾನೂನು ಬಾಹಿರ ಪತ್ರಿಕೋಧ್ಯಮ ಮಾಡಬಾರದು.
11. ಮಾಧ್ಯಮಗಳು ಭಯ ಹುಟ್ಟಿಸುವ ವ್ಯವಸ್ಥೆಗಳಾಗಬಾರದು ಮಾಹಿತಿ ನೀಡುವ ಆಗರಗಳಾಗಬೇಕು.
12. ಯಾವುದೇ ವಿಚಾರಗಳನ್ನು ಬಲವಂತವಾಗಿ ಜನರ ಮನಸ್ಸಿನಲ್ಲಿ ತುಂಬಬಾರದು.
13. ಯಾರ ಪರ ಅಥವಾ ಯಾರ ವಿರುದ್ದವೂ ಇರಬಾರದು.
14. ಮಾಧ್ಯಮವು ರಾಜಕಾರಣಿಗಳಿಂದ, ರಾಜಕೀಯ ಪಕ್ಷಗಳಿಂದ ಮತ್ತು ರಾಜಕೀಯ ವ್ಯವಸ್ಥೆಯಿಂದ ಆದಷ್ಟು ದೂರನಿಂತು ಸುದ್ದಿ ಮಾಡಬೇಕು.
15. ಮಾಧ್ಯಮವು ಸರ್ಕಾರ, ವ್ಯವಸ್ಥೆ ಅಥವಾ ಇನ್ನೂ ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ಹೊಗಳಬೇಕು. ತಪ್ಪು ಮಾಡಿದಾಗ ಕಂಡಿಸುವ ಧೈರ್ಯ ಮಾಡಬೇಕು.
16. ಹಣ, ಕೀರ್ತಿಗಾಗಿ ಮಾಧ್ಯಮ ಮಾಡಬಾರದು. ಗುರಿ ಮತ್ತು ನೈತಿಕತೆಯ ಆಧಾರದಲ್ಲಿ ಮಾತ್ರ ಮಾಧ್ಯಮ ಕಟ್ಟಬೇಕು.
17. ಸುದ್ದಿ ಮಾಡುವುದರ ಜೊತೆಗೆ ಸಹಾಯ ಮಾಡುವ ಮನಸ್ಥಿತಿ ಇರಬೇಕು.
18. ಮಾಧ್ಯಮದಲ್ಲಿ ಶುದ್ದ ಹಸ್ತದವರು ಇರಬೇಕು. ಭ್ರಷ್ಟಚಾರ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ಮಾಧ್ಯಮದಲ್ಲಿ ಇರಬಾರದು.
ಇಂತಹ ಹಲವಾರು ಮಾಧ್ಯಮ ನೈತಿಕತೆಯನ್ನು ಬಳಸಿಕೊಂಡು ನಾನು ಯಾವುದಕ್ಕಾಗಿ ಮಾಧ್ಯಮಕ್ಕೆ ಬಂದಿದ್ದೇನೆ, ಭವಿಷ್ಯದಲ್ಲಿ ನನ್ನಿಂದ ಏನು ಬದಲಾಗಬೇಕು? ಸಮಾಜ ಮತ್ತು ದೇಶಕ್ಕಾಗಿ ನಾನು ಏನು ಮಾಡಬಹುದು? ಎಂಬ ವಿಚಾರಗಳನ್ನು ಮಾಡುತ್ತಾ ಮಾಧ್ಯಮದಲ್ಲಿ ಸೇರಬೇಕು. ಮಾಧ್ಯಮದ ಧರ್ಮ ಪಾಲನೆಯು ಅತ್ಯಂತ ಶ್ರೇಷ್ಠವಾಗಿದ್ದು ಮಾಧ್ಯಮದ ಧರ್ಮವನ್ನು ತಾಯಿಗೆ ಹೋಲಿಸಬಹುದು. ತಾಯಿಯ ಶ್ರೇಷ್ಠತೆಯಂತೆ ಪತ್ರಿಕಾ ಧರ್ಮವನ್ನು ಪಾಲಿಸಬೇಕು.


Share

ಭಾರತದ 62,100 ಸೇರಿ, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣ: ಸಂಶೋಧನಾ ವರದಿ

Share

ವಾಷಿಂಗ್ಟನ್: ಕಳೆದ ವರ್ಷ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧನಾ ವರದಿಯೊಂದು ಹೊರಹಾಕಿದೆ.

ದಿ ಲ್ಯಾನ್ಸೆಟ್ ಆಂಕಾಲಜಿ ವರದಿಯಲ್ಲಿ ಈ ಕುರಿತಂತೆ ಮಹತ್ವದ ಮಾಹಿತಿ ನೀಡಿದ್ದು, 2020ರಲ್ಲಿ ವಿಶ್ವದಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ. ಆಲ್ಕೊಹಾಲ್ ಅಥವಾ ಮದ್ಯಪಾನ ಸೇವನೆಯು ಸ್ತನ, ಪಿತ್ತಜನಕಾಂಗ, ಕೊಲೊನ್, ಗುದನಾಳ, ಒರೊಫಾರ್ನೆಕ್ಸ್,  ಧ್ವನಿಪೆಟ್ಟಿಗೆಯನ್ನು ಮತ್ತು ಅನ್ನನಾಳವನ್ನು ಒಳಗೊಂಡಂತೆ ವಿವಿಧ ಕ್ಯಾನ್ಸರ್ಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಬಲವಾದ ಪುರಾವೆಗಳಿವೆ. ಕಡಿಮೆ ಮಟ್ಟದ ಕುಡಿಯುವಿಕೆಯೂ ಕೂಡ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದಾಗ್ಯೂ, ಸಾರ್ವಜನಿಕರಲ್ಲಿ ಜಾಗೃತಿ ಕಡಿಮೆ ಇದೆ:  ಬ್ರಿಟನ್ ಸಮೀಕ್ಷೆಯೊಂದರಲ್ಲಿ, 2018 ರಲ್ಲಿ, 10 ಜನರಲ್ಲಿ ಒಬ್ಬರಿಗೆ ಮಾತ್ರ ಆಲ್ಕೊಹಾಲ್ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿದಿತ್ತು.

2020 ರಲ್ಲಿ ಜಾಗತಿಕವಾಗಿ 741,300 ಕ್ಯಾನ್ಸರ್ ಪ್ರಕರಣಗಳು ಆಲ್ಕೋಹಾಲ್ ನಿಂದ ಉಂಟಾಗಿವೆ. ಆಲ್ಕೋಹಾಲ್ ಲೇಬಲ್‌ಗಳಿಗೆ ಕ್ಯಾನ್ಸರ್ ಎಚ್ಚರಿಕೆ ಇರಬೇಕು, ಆಲ್ಕೋಹಾಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಬಹುದು ಮತ್ತು ಪಾನೀಯಗಳ ಮಾರಾಟವನ್ನು ಕಡಿಮೆ ಮಾಡಬಹುದು ಎಂದು ಈ ಅಧ್ಯಯನದ  ಸಹ-ಲೇಖಕರೂ ಕೂಡ ಆಗಿರುವ ಫ್ರಾನ್ಸ್ ನ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನ ಹ್ಯಾರಿಯೆಟ್ ರುಮ್ಗೇ ಅವರು ಹೇಳಿದ್ದಾರೆ.

‘ಆಲ್ಕೋಹಾಲ್ ಜಾಗತಿಕವಾಗಿ ಕ್ಯಾನ್ಸರ್ ನ ಗಣನೀಯ ಹೊರೆಯನ್ನು ಉಂಟುಮಾಡುತ್ತದೆ ಮತ್ತು ಇದೇ ರೀತಿಯ ದುಷ್ಪರಿಣಾಮ ಕಡಿಮೆ ಮಟ್ಟದ ಕುಡಿತದಲ್ಲೂ ಕಂಡುಬರುತ್ತದೆ. ಕ್ಯಾನ್ಸರ್ ಮೇಲೆ ಆಲ್ಕೋಹಾಲ್ ನ ಪರಿಣಾಮವು ಹೆಚ್ಚಾಗಿ ತಿಳಿದಿಲ್ಲ ಅಥವಾ ಕಡೆಗಣಿಸಲಾಗುತ್ತದೆ, ಆದ್ದರಿಂದ ಆಲ್ಕೋಹಾಲ್ ಮತ್ತು  ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ನಮಗೆ ಹೆಚ್ಚಿನ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ, ಮತ್ತು ಆಲ್ಕೋಹಾಲ್ ನಿಂದ ಉಂಟಾಗುವ ಕ್ಯಾನ್ಸರ್ ಗಳು ಮತ್ತು ಇತರ ರೋಗಗಳ ಹೊರೆಯನ್ನು ತಡೆಗಟ್ಟಲು ಒಟ್ಟಾರೆ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವ ನೀತಿಗಳ ಅಗತ್ಯವಿದೆ ಎಂದು ರುಮ್ಗೇ  ಹೇಳಿದ್ದಾರೆ

2020 ರಲ್ಲಿ ಪುರುಷರಲ್ಲಿ ಅಂದಾಜು 568,700 ಕ್ಯಾನ್ಸರ್ ಪ್ರಕರಣಗಳು ಮತ್ತು ಮಹಿಳೆಯರಲ್ಲಿ 172,600 ಪ್ರಕರಣಗಳ ಹಿಂದೆ ಆಲ್ಕೋಹಾಲ್ ಸೇವನೆ ಇದೆ ಎಂದು ಫಲಿತಾಂಶಗಳು ಸೂಚಿಸಿವೆ, ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಅನ್ನನಾಳ, ಯಕೃತ್ತು ಮತ್ತು ಸ್ತನಗಳ ಕ್ಯಾನ್ಸರ್ ಗಳನ್ನು ಒಳಗೊಂಡಿವೆ. ಆದಾಗ್ಯೂ, ಪ್ರತಿ  ಕ್ಯಾನ್ಸರ್ ಪ್ರಕಾರದ ಕಾರಣಗಳನ್ನು ಪ್ರತ್ಯೇಕವಾಗಿ ನೋಡಿದಾಗ, ಆಲ್ಕೋಹಾಲ್ ನಿಂದ ಉಂಟಾಗುವ ಪ್ರಕರಣಗಳ ಪ್ರಮಾಣವು ಅನ್ನನಾಳ, ಗಂಟಲು ಮತ್ತು ತುಟಿ ಮತ್ತು ಬಾಯಿ ಕ್ಯಾನ್ಸರ್ ಗಳಿಗೆ ಅತ್ಯಧಿಕವಾಗಿತ್ತು.

‘ಆಲ್ಕೋಹಾಲ್ ಸೇವನೆ ಮತ್ತು ಸಂಭಾವ್ಯ ಕ್ಯಾನ್ಸರ್ ಬೆಳವಣಿಗೆಯ ನಡುವೆ ವಿಳಂಬವಾಗಿದೆ, ಆದ್ದರಿಂದ ಆಲ್ಕೋಹಾಲ್ ಒಡ್ಡುವಿಕೆ ದತ್ತಾಂಶದ ವರ್ಷ ಮತ್ತು ಕ್ಯಾನ್ಸರ್ ರೋಗನಿರ್ಣಯದ ವರ್ಷದ ನಡುವಿನ ವಿಳಂಬದ ಅವಧಿಯ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಈ ಬಗ್ಗೆ ಮತ್ತಷ್ಟು ಸಂಶೋಧನೆಗಳ ಅಗತ್ಯವಿದೆ  ಎಂದು ಹೇಳಿದ್ದಾರೆ.

ಭಾರತದಲ್ಲಿ 62,100 ಪ್ರಕರಣಗಳು
ಇನ್ನು 2020 ರಲ್ಲಿ ವಿಶ್ವಾದ್ಯಂತ ದಾಖಲಾದ  740,000 ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳಿಗೆ ಆಲ್ಕೊಹಾಲ್ ಕಾರಣವಾಗಿದೆ, ಈ ಪೈಕಿ ಭಾರತದಲ್ಲೇ ಶೇ.5ರಷ್ಟು ಅಂದರೆ 62,100 ಪ್ರಕರಣಗಳಿವೆ ಎಂದು ವರದಿಯಿಂದ ತಿಳಿದುಬಂದಿದೆ.  ಜಾಗತಿಕವಾಗಿ 2020ರಲ್ಲಿ ಹೊಸದಾಗಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ  ಶೇ.4ರಷ್ಟು ಮದ್ಯಪಾನಕ್ಕೆ ಸಂಬಂಧಿಸಿರಬಹುದು ಎಂದು ಈ ಅಧ್ಯಯನವು ಅಂದಾಜಿಸಿದೆ. ಮಹಿಳೆಯರೊಂದಿಗೆ ಹೋಲಿಸಿದರೆ ಪುರುಷರು ಶೇ.77 (568,700 ಪ್ರಕರಣಗಳು) ಆಲ್ಕೊಹಾಲ್-ಸಂಬಂಧಿತ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗಿದ್ದಾರೆ ಎಂದು ಅಧ್ಯಯನವು ಅಂದಾಜಿಸಿದೆ.

172,600 ಪ್ರಕರಣಗಳು ಅನ್ನನಾಳ, ಯಕೃತ್ತು ಮತ್ತು ಸ್ತನದ ಕ್ಯಾನ್ಸರ್ ಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳಿಗೆ ಕಾರಣವಾಗಿವೆ. ಇದಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಆರೋಗ್ಯ ಸೇವೆ ಮತ್ತು ಕ್ಯಾನ್ಸರ್ ಸೇವೆಗಳಿಗೆ ಉಂಟಾಗುವ ಅಡೆತಡೆಗಳು ಆ ವರ್ಷದ ರೋಗನಿರ್ಣಯದ  ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ದಾಖಲಾದ ದತ್ತಾಂಶಗಳಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಅಂದಾಜು ಮಾಡಲು ಕಾರಣವಾಗಬಹುದು ಎಂದು ಅಧ್ಯಯನ ಹೇಳಿದೆ.


Share

ಮಾಧ್ಯಮ ಶಾಸನಗಳು

Share

ಭಾರತೀಯ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತು. ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ಏಕೆಂದರೆ ಅಮೇರಿಕಾದಂತಹ ದೇಶಗಳ ಶೇ 30% ರಷ್ಟು ಹೆಚ್ಚು ಒಟ್ಟಾರೆ 1,46,385 ಪದಗಳ ಬಳಕೆಯಲ್ಲಿ ರಚನೆಯಾದ ಬೃಹತ್ ಸಂವಿಧಾನವಾಗಿದೆ. ಈ ಸಂವಿಧಾನದ ಮೂಲ ಸೃಷ್ಠಿಕರ್ತರು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ರಚನಾ ಸಮಿತಿಗಳು ಹಲವಾರು ದೇಶಗಳನ್ನು ಸುತ್ತಿ ಅಧ್ಯಯನ ಮಾಡಿ ದೇಶದ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಠಿಯಿಂದ ರಚನೆಯಾಗಿದೆ. govrnment of india act 1935 ಮತ್ತು Indian independence act 1947 ರ  ಪ್ರಭಾವ ಮತ್ತು ನೇರ ಬೆಳಕು ಚೆಲ್ಲುತ್ತಾ ಭಾರತೀಯ ಸಂವಿಧಾನವು ರಚನೆ ಆಗಿರುವುದರಿಂದ ದೇಶದ ಜನರ ಅಭಿವೃದ್ಧಿ ಸ್ವಾತಂತ್ರ ಮತ್ತು ಧಾರ್ಮಿಕ ಸ್ವಾತಂತ್ರಗಳ0ತಹ ಮುಂತಾದ ಮಾನವ ಅಭಿವೃದ್ಧಿ ಸ್ನೇಹಿ ಕಾನೂನುಗಳ ರಚನೆ ಆಗಿದೆ. ಡಾ||ಬಿ.ಆರ್.ಅಂಬೇಡ್ಕರ್ ರವರು ಸುಮಾರು 60 ದೇಶಗಳ ಸಂವಿಧಾನ ಅಧ್ಯಯನ  ಮಾಡುವ ಮೂಲಕ ಭಾರತೀಯ ಸಂವಿಧಾನವನ್ನು ರಚನೆ ಮಾಡಿದ್ದಾರೆ. ಈ ಕಾರಣದಿಂದ ಭಾರತೀಯ ಸಂವಿಧಾನದ ಪಿತಾಮಹ ಎಂದು ಅಂಬೇಡ್ಕರ್‌ರವರನ್ನು ಕರೆಯುತ್ತಾರೆ. ಭಾರತ ಸಂವಿಧಾನದ ಜನರ ಆಶೋತ್ತರವಾದ ಹಕ್ಕುಗಳು ಈ ದೇಶದ ಪ್ರತಿಯೊಬ್ಬ ನಾಗರೀಕರಿಗೂ ದೊರೆಯುತ್ತದೆ. ಕಾರ್ಮಿಕ ವರ್ಗ , ಸಾಮಾನ್ಯ ಜನರು, ಬಡವ, ಶ್ರೀಮಂತ, ಉದ್ಯಮಿ, ಪತ್ರಕರ್ತ ಎನ್ನದೇ ಎಲ್ಲರಿಗೂ ಸಮಾನವಾದ ಮತ್ತು ಅಭಿವೃದ್ಧಿ ಶೀಲ ಕಾನೂನುಗಳು ರಚನೆಯಾಗಿವೆ. ಮೂಲ ಸಂವಿಧಾನದಲ್ಲಿ ಮಾಧ್ಯಮಕ್ಕೆ ಸಂಬ0ಧಿಸಿದ ವಿಶೇಷ ಕಾನೂನುಗಳು ಇಲ್ಲದಿದ್ದರೂ ಕೂಡ ಬೇರೆ ಕಾನೂನುಗಳು ಮತ್ತು ಹಕ್ಕುಗಳು ಪತ್ರಕರ್ತ ಮತ್ತು ಪತ್ರಿಕೆಗಳಿಗೆ ರಕ್ಷಣೆ ನೀಡಲಾಗಿತ್ತು. ನಮ್ಮ ಮೂಲಭೂತ ಹಕ್ಕುಗಳು

  1. ಸಮಾನತೆಯ ಹಕ್ಕು
  2. ಸ್ವಾತಂತ್ರದ ಹಕ್ಕು
  3. ಶೋಷಣೆಯ ವಿರುದ್ದ ಹಕ್ಕು
  4. ಧಾರ್ಮಿಕ ಸ್ವಾತಂತ್ರದ ಹಕ್ಕು
  5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
  6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು

ಮೇಲಿನ 5 ಹಕ್ಕುಗಳ ಅನುಷ್ಠಾನಕ್ಕೆ ಸಂವಿಧಾನಿಕ ಪರಿಹಾರ ಪಡೆಯುವ ಹಕ್ಕು ಅಂದರೆ “ಸಂವಿಧಾನಾತ್ಮಕ ಪರಿಹಾರಗಳ ಹಕ್ಕು” ಈ ಕಾರಣದಿಂದ ಡಾ||ಬಿ.ಆರ್.ಅಂಬೇಡ್ಕರ್ ಅವರು 32 ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದರು. ಈ ಹಕ್ಕುಗಳು ಭಾರತದ ಪ್ರತಿಯೊಬ್ಬ ನಾಗರೀಕರಿಗೂ ದೊರೆಯುತ್ತದೆ. ಉದ್ಯೋಗ ,ಧರ್ಮ,ಜಾತಿ ಮತ್ತು ಭಾಷೆ ಮುಂತಾದ ವಿಷಯಗಳಿಂದ ಯಾವುದೇ ವ್ಯಕ್ತಿಗೂ ಸಂವಿಧಾನದ ಹಕ್ಕುಗಳನ್ನು ನಿರ್ಭಂಧಿಸುವುದಿಲ್ಲ. ಈ ಹಕ್ಕುಗಳ ಜೊತೆಗೆ ಭಾರತೀಯ ನಾಗರೀಕರಿಗೆ ಕರ್ತವ್ಯಗಳನ್ನು ಕೂಡ ತಿಳಿಸಲಾಗಿದೆ. ಈ ಎಲ್ಲಾ ವಿಚಾರದಲ್ಲೂ ಭಾರತೀಯ ಪತ್ರಕರ್ತ ಮತ್ತು ಮಾಧ್ಯಮ ಸಂಸ್ಥೆ ಅಥವಾ ಮಾಧ್ಯಮ ಕಾರ್ಮಿಕನಿಗೂ ಅನ್ವಯಿಸುತ್ತದೆ. ಭಾರತದಲ್ಲಿ ಪತ್ರಿಕೋಧ್ಯಮ ಆದರೂ ಕೂಡ

  1. ಮಾಧ್ಯಮಗಳಿಗೆ / ಪತ್ರಕರ್ತನಿಗೆ ಯಾವುದೇ ಹಕ್ಕು ಭಾಧ್ಯತೆಗಳಿಲ್ಲ.
  2. ಯಾವುದೇ ರೀತಿಯ ವಿನಾಯಿತಿ ಇಲ್ಲ.
  3. ವೃತ್ತಿ ಸ್ವಾತಂತ್ರಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
  4. ಬರೆದದ್ದು ಅಥವಾ ಬಿತ್ತರಿಸಿದ್ದು ಸತ್ಯವೇ ಆಗಿದ್ದರೂ ಪತ್ರಿಕೆ/ ಪತ್ರಕರ್ತ ಅದರ ಪರಿಣಾಮಗಳನ್ನು ಎದುರಿಸುವುದು ಸುಲಭದ ಮಾತಾಗಿಯೇ ಉಳಿದಿಲ್ಲ ತೂಗುಕತ್ತಿ ತೂಗುತ್ತಿರುತ್ತದೆ.
  5. ಪತ್ರಕೆ ಮೇಲೆ ನಿರ್ಭಂಧ , ಸೆನ್ಸಾರ್ ಹೇರಿಕೆ ಮಾಧ್ಯಮಗಳ ವಾಗ್ದಂಡನೆ, ದುಷ್ಕರ್ಮಿಗಳ ದಾಳಿ ಸಾಮಾನ್ಯ ಪತ್ರಕರ್ತನ ಅಪಹರಣ, ಕೊಲೆ, ಹಲ್ಲೆ ಸಾಮಾನ್ಯ.  ಜಗತ್ತಿನ ಮಾಧ್ಯಮದ ಸ್ವಾತಂತ್ರಯ ಸೂಚ್ಯಾಂಕದಲ್ಲಿ ಭಾರತವು 147ನೇ ಸ್ಥಾನದಲ್ಲಿ ಇರುವುದು ಅತ್ಯಂತ ಖೇದಕರ ವಿಷಯವಾಗಿದೆ. ಅಂದರೆ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶದಲ್ಲಿ ಮಾಧ್ಯಮ ಸ್ವಾತಂತ್ರವು ಹಲವಾರು ಬಾರಿ ಮೊಟಕುಗೊಳ್ಳುತ್ತಿದ್ದು  ಇದರಿಂದ ನಿಷ್ಠಾವಂತ ಪತ್ರಕರ್ತರು ಸಣ್ಣ ಮಾಧ್ಯಮಗಳು ಬಲಹೀನ ಆಗುತ್ತಿದೆ. ಮಾಧ್ಯಮ ಕಾನೂನುಗಳು (media law) ಅಷ್ಟು ಪರಿಣಾಮಕಾರಿಯಾಗಿಲ್ಲ. ಭಾರತ ಸಂವಿಧಾನದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರöವನ್ನು ಅಳವಡಿಸಲಾಗಿದೆ. ಈ ಸ್ವಾತಂತ್ರöವು ಸಾಮಾನ್ಯ ನಾಗರೀಕನಿಗೆ ಇರುವಂತೆಯೇ ಪತ್ರಕರ್ತರಿಗೂ ಇದೆ. ಅಂದ ಮಾತ್ರಕ್ಕೆ ಪತ್ರಕರ್ತರು ಸರ್ವತಂತ್ರ ಸ್ವತಂತ್ರರೇನಲ್ಲ ಕಣ್ಣಲ್ಲಿ ನೋಡಿದ್ದು, ಕಿವಿಯಲ್ಲಿ ಕೇಳಿದ್ದು ತಮ್ಮ ಅನುಭವಕ್ಕೆ ಬಂದದ್ದನ್ನೆಲ್ಲಾ ಬರೆಯುವ ಮುಕ್ತ ಅವಕಾಶವಿದ್ದರೂ ಪತ್ರಕರ್ತರು ಅನೇಕ ವಿಷಯಗಳಲ್ಲಿ ಕಾನೂನಿನ ಪ್ರತಿಬಂಧಕಗಳ ಚೌಕಟ್ಟಿನಲ್ಲೇ ಕೆಲಸ ಮಾಡಬೇಕಾಗುತ್ತದೆ. ಸಂವಿಧಾನವು ಸ್ವಾತಂತ್ರö ನೀಡುವ ಜೊತೆಗೆ ನಿರ್ಬಂಧ ಕೂಡ ಹೇರುತ್ತದೆ.” ಸ್ವಾತಂತ್ರöವು ಹೆಚ್ಚಾದರೆ ಸ್ವೆಚ್ಚಾರವಾಗುತ್ತದೆ” ಎಂದು ಗಾಂಧೀಜಿಯವರ ಮಾತು ಕೂಡ ಒಪ್ಪಲೇಬೇಕಾಗುತ್ತದೆ. ಭಾರತೀಯ ಸಂವಿಧಾನವು ಸಹಜ ಪ್ರಜೆಗಳ ಖಾಸಗಿ ಜೀವನದ ಗೌಪ್ಯತೆಯನ್ನು ಕಾಪಾಡಲು ನಮ್ಮ ಸಮಾಜದ ನೈತಿಕ ಸ್ವಾಸ್ತöಯವನ್ನು ಕಾಪಾಡಲು  ರಾಷ್ಟçವನ್ನು ರಕ್ಷಣೆ ಮಾಡಲು ಶಾಸಕಾಂಗ – ನ್ಯಾಯಾಂಗಗಳ ಹಕ್ಕು ಭಾಧ್ಯತೆಗಳನ್ನು ಮತ್ತು ಅವುಗಳ ಘನತೆ-ಗೌರವವನ್ನು ರಕ್ಷಣೆ ಮಾಡಲು ಕಾರ್ಯಾಂಗ ಅಂದರೆ ಆಡಳಿತ ವ್ಯವಸ್ಥೆಯಲ್ಲಿ ಹಸ್ತ ಕ್ಷೇಪ ಮತ್ತು ಬಲವಂತ ಸುಳ್ಳು ಆಪಾದನೆಗಳಿಗಾಗಿ ಪತ್ರಕರ್ತ ಮತ್ತು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ . ಇದರ ಮಧ್ಯ ಕೂಡ ಹಲವಾರು ಕಾಯ್ದೆಗಳು ಸಾಮಾನ್ಯರಂತೆ ಪತ್ರಕರ್ತರಿಗೂ ರಕ್ಷಣೆ ನೀಡುತ್ತದೆ. 1950 ರ ನಂತರ ಸಂವಿಧಾನ ತಿದ್ದುಪಡಿಗಳು  ಮತ್ತು ಕಾಯ್ದೆಗಳನ್ನು ರೂಪಿಸುವ ಮೂಲಕ ಮಾಧ್ಯಮ ರಂಗಕ್ಕೆ ಸರಕಾರವು ಒಂದಿಷ್ಡು ಅನುಕೂಲ ಮಾಡಿಕೊಟ್ಟಿದೆ. ಭಾರತೀಯ ಮಾಧ್ಯಮಕ್ಕೆ ಸಂಬAಧಿಸಿದAತೆ ಕೆಲವು ಕಾನೂನುಗಳು
  6. The Indian official secrets act-1923
  7. The Press (objectionable matters)act-1951
  8. The copyright act-1957
  9. The newspaper(price & page) act-1956
  10. The working Journalists (conditions at service) and miscellaneous provisions act-1955 & 1957
  11. Working Journalists and other news paper employees Tribunal Rules-1979
  12. The working Journalists (Fixation of rates at wages) act-1958
  13. The press council act-1965
  14. The delivery at books & news papers ( public libraries) act-1954 (amended in-1965)
  15. The parliamentary proceedings ( protection of publication ) act- 1956
  16. Prasar bharti (broadcasting cooperation of India) act-1990
  17. The press council act-1978.
  18. Right to information act-2005( freedom at information act-2005)
  19. Cable television networks (regulation) act-1995
  20. The trade marks act-1999-1995 (amendment 202)
  21. Information technology act-2000
  22. Critical evaluation of IT act(amendment)-2008
  23. Amendment in CTN rules-1994
  24. Cable Television networks (amendments) rules-2021
  25. The press & Registration at book act-1867

ಈ ಎಲ್ಲಾ ಕಾನೂನುಗಳ ಜೊತೆಗೆ ಸಾರ್ವಜನಿಕರು ಮತ್ತು ಇನ್ನಿತರ ಕಾರ್ಮಿಕ ವರ್ಗಗಳಿಗೆ ಸಿಗಬಹದಾದ ಕಾನೂನುಗಳ ರಕ್ಷಣೆ ಮತ್ತು ಫಲಗಳು ದೊರೆಯುತ್ತವೆ. ಪತ್ರಿಕೆಗಳ ನೊಂದಾವಣಿಗಾಗಿ Govt at India  office at Registrar of news papers For India ಇದ್ದು TV, FM  ಸಮೂಹ ಬಾನುಲಿ ಕೇಂದ್ರಗಳು ಮತ್ತು ಕೇಬಲ್ DTH, MSO ಗಳಿಗಾಗಿ Ministry of Information & Broad casting ಇಲಾಖೆ ಇದೆ. ಈ ಇಲಾಖೆಯ ಮೂಲಕ data center, satellite TV Channels,  Temporary  uplinking , LCO, MSO’s  Teleports & psngs, DTH, HITS operators TRP Agencies, news Agencies, community Radio stations  & private FM Channels ಗಳನ್ನು  ನೊಂದಾವಣಿ ಮಾಡಬಹುದು. ಕೇಂದ್ರ ಸರಕಾರ / ರಾಜ್ಯ ಸರಕಾರಗಳು ವಾರ್ತಾ ಇಲಾಖೆಯ ಮೂಲಕ ಪತ್ರಕರ್ತರಿಗೆ ಹಲವಾರು  ಅನುಕೂಲಗಳನ್ನು ಮಾಡುತ್ತಿದ್ದಾರೆ. ಸರಕಾರದ ಕಾರ್ಯ ಕ್ರಮಗಳಿಗೆ  ಮಾಧ್ಯಮದವರಿಗೆ ಅವಕಾಶ, ಮಾಸಾಚನ, ಕೆಲ ರಾಜ್ಯ ಸರಕಾರಗಳು ಪತ್ರಕರ್ತರಿಗೆ ವಸತಿ ಯೋಜನೆಗಳಲ್ಲಿ  ಮೀಸಲಾತಿ ಕೂಡ ನೀಡುತೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪತ್ರಿಕೋಧ್ಯಮಕ್ಕೆ  ಗೌರವ ಸೂಚಿಸಲು ಹಲವಾರು ಪ್ರಶಸ್ತಿಗಳನ್ನು ನೀಡುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ  ಹಲವಾರು ಪ್ರಶಸ್ತಿಗಳಲ್ಲಿ  ಮಾಧ್ಯಮ ವಿಭಾಗವು ಇದೆ. ಇನ್ನು ಮಾಧ್ಯಮ ರಂಗಕ್ಕೆ  ಸಂಬ0ಧಿಸಿದ0ತೆ ಹಲವಾರು ಸಂಘ ಸಂಸ್ಥೆ, ವೇದಿಕೆ ಮತ್ತು ಕ್ಲಬ್‌ಗಳು  ಇದ್ದು ಮಾಧ್ಯಮ ಮತ್ತು ಪತ್ರಕರ್ತರ ರಕ್ಷಣೆ ಮಾಡುತ್ತಿವೆ. ಆದರೆ ಇದರ ಮಧ್ಯ ಕೆಲವು  ಕಾನೂನುಗಳು ಮಾಧ್ಯಮದ  ಸ್ವಾತಂತ್ರಕ್ಕೆ ತಡೆಗೋಡೆಯಾಗುತ್ತಿದೆ.

ಅದರಲ್ಲಿ ಮುಖ್ಯವಾಗಿ 1. ಮಾನಹಾನಿ ಕೇಸ್, India penal code ನಲ್ಲಿ ಮಾನನಷ್ಟ ಕುರಿತು ಕ್ರಿಮಿನಲ್ ಕಾನೂನು 1860 ರಿಂದ ಜಾರಿಗೆ ಬಂದಿದೆ. India penal code 490 ಪ್ರಕಾರ ವ್ಯಕ್ತಿಯ ಹೆಸರು, ಚಾರಿತ್ರ, ಕೀರ್ತಿ, ಸಂಸ್ಥೆ ವ್ಯವಸ್ಥೆ  ಸರಕಾರ ಹಾನಿಯಾಗುವಂತೆ ಬರೆಯುವುದು, ಸುದ್ದಿ ಮಾಡುವುದು. TV/ FM ಅಥವಾ Social media ಗಳಲ್ಲಿ  ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. 2. Ipc -171 G ಪ್ರಕಾರ ಚುನಾವಣೆಯ ಸಂಬ0ಧವಾಗಿ ಸುಳ್ಳು ಹೇಳೀಕೆಯನ್ನು ಕೊಡುವುದು. 3. Ipc -295(A)  ಯಾವುದೇ ವರ್ಗದ ಜನರ ಧರ್ಮವನ್ನಾಗಲಿ , ಧಾರ್ಮಿಕ ನಂಬಿಕೆಯನ್ನಾಗಲಿ ಅವಮಾನಗೊಳಿಸುವುದರಿಂದ ಅವರ ಧಾರ್ಮಿಕ ಭಾವನೆಗಳಿಗೆ ಭಂಗ ಪಡಿಸುವ ಉದ್ದೇಶದಿಂದ ಮಾಡಿದ ಬುದ್ದಿ ಪೂರ್ವಕವಾದ ದುರ್ಭಾವನೆಯ ಕೃತ್ಯ. 4.Ipc -153A(1)  ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆ, ಜಾತಿ ಸಮುದಾಯ ಅಥವಾ ಇನ್ನಿತರ ಯಾವುದೇ ಕಾರಣಗಳ ಮೇಲೆ ಬಿನ್ನ ಗುಂಪುಗಳಲ್ಲಿ ವೈರತ್ವವನ್ನು ಪ್ರದರ್ಶಿಸುವುದು ಸಾಮರಸ್ಯ ಪಾಲನೆಯ ಭಾವುಕವಾಗುವಂತಹ ಕೃತ್ಯಗಳನ್ನು ಎಸಗುವುದು. 5.Ipc -153(B) ರಾಷ್ಟಿಯ ಐಕ್ಯತೆಗೆ ಬಾಧಕವಾದ ಆರೋಪಗಳು ಮತ್ತು ಧೃಢೀಕಾರಕ ಹೇಳಿಕೆಗಳು.  6. ಸಂವಿಧಾನದ 21 ನೇ ಅನುಚ್ಚೇದ ಪಾಲಿಸಲೇಬೇಕು. 7.Ipc -500  ಮಾನಹಾನಿಗೆ ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ. 8.Ipc -501 ಮಾನಹಾನಿಕಾರಕವೆಂದು ತಿಳಿದಿರುವ ವಿಷಯವನ್ನು ಮುದ್ರಣ ಮಾಡುವುದು ಇಲ್ಲ ಕೆತ್ತನೆ ಮಾಡುವುದು. 9. Ipc -502 ಮುದ್ರಣಗೊಳಿಸಲಾದ ಇಲ್ಲವೇ ಕೆತ್ತನೆ ಮಾಡಲಾದ ಮಾನ ಹಾನಿಕಾರಕ ವಿಷಯವುಳ್ಳ ಪದಾರ್ಥವನ್ನು ಮಾರಾಟ ಮಾಡುವುದು ಈ ಮೇಲಿನ ಎಲ್ಲಾ IPC ಈ ಕಾಯ್ದೆಗಳಲ್ಲಿ ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗೂ ಶಿಕ್ಷೆ ಆಗುತ್ತದೆ. ಈ ಕಾಯ್ದೆಗಳು ಮಾಧ್ಯಮದವರಿಗೆ ರಿಯಾಯಿತಿ ನೀಡಿಲ್ಲ. ಕೆಲವು ಸಂಧರ್ಭದಲ್ಲಿ ಅಂದರೆ ಸತ್ಯ ಹೇಳಿದಾಗ ಆಪಾದನೆ ಸಾಬೀತಾದರೆ ರಾಷ್ಟ ಅಥವಾ ಸರಕಾರ ಸಾರ್ವಜನಿಕರಿಗೆ ಒಳಿತಾಗುವಂತಾದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ದೇಶದ್ರೋಹ ಕಾಯ್ದೆ ಕೂಡ 1860 ರಿಂದ ಜಾರಿಯಲ್ಲಿ ಇದು Ipc -121, 121(A), 122, 124(A) ಗಳು ದೇಶದ ಬಗ್ಗೆ ಪಿತೂರಿ ರೂಪಿಸುವ ವ್ಯಕ್ತಿ ಅಥವಾ ಮಾಧ್ಯಮದವರನ್ನು ಶಿಕ್ಷೆ ಕೊಡಲು ಬಳಸಲಾಗುತ್ತದೆ.

ಅಶ್ಲೀಲತೆ:- ಅಶ್ಲೀಲ ಬರವಣಿಗೆ ಮತ್ತು ಪ್ರಸಾರವನ್ನು ನಿರ್ಬಂಧಿಸಲಾಗಿದೆ. ಭಾರತದ ಸಂವಿಧಾನದ 19 ನೇ ಅನುಚ್ಚೇದ 2ನೇ ಕಾಲಂ ಪ್ರಕಾರ Ipc-292, 292(1), 292(2)_292(2)E,293, 294 ಕಾಲಂಗಳು ಅಶ್ಲೀಲ, ಕಾಮ ಕ್ರೀಡೆ, ಕೆಟ್ಟ ಮುದ್ರಣ ಮತ್ತು ಪ್ರಸಾರ ಮಾರಾಟವನ್ನು ನಿಷೇಧಿಸುವ ಜೊತೆಗೆ ಉಗ್ರ  ಶಿಕ್ಷೆಯ ಜೊತೆಗೆ ದಂಡ ವಿಧಿಸುವ ಅಧಿಕಾರವು ಇದೆ. 1898 Indian post office act ಪ್ರಕಾರ ಅಶ್ಲೀಲತೆ ಪ್ರಕಟಣೆಯ ಪುಸ್ತಕಗಳನ್ನು ಅಂಚೆ ಮೂಲಕ ಕಳಿಸುವುದನ್ನು ತಡೆ ಹಿಡಿಯುವ ಅಧಿಕಾರ ಇದೆ.

ಸ್ವಾತಂತ್ರಯ ಪೂರ್ವದಲ್ಲಿ ಬ್ರಿಟಿಷರು ಪತ್ರಿಕೆಗಳನ್ನು ಹತ್ತಿಕ್ಕಲು ಹಲವಾರು ಕಾಯ್ದೆಗಳನ್ನು ರೂಪಿಸಿದರು. ಸ್ವಾತಂತ್ರಯ ನಂತರ ದೇಶದಲ್ಲಿ ಅಮೂಲ್ಯವಾದ ಬದಲಾವಗಣೆÀ ಆಗುತ್ತಾ ಮಾಧ್ಯಮ ಸ್ನೇಹಿ ರಾಷ್ಟದ ಪರಿಕಲ್ಪನೆ ಪ್ರಾರಂಭವಾಗಿದೆ.

ನ್ಯಾಯಾಲಯ ನಿಂದನೆ:- ನ್ಯಾಯಾಲಯದ ಒಳಗಿನ ಸುದ್ದಿಗಳನ್ನು ಮಾಡುವಂತಿಲ್ಲ. ಜೊತೆಗೆ ನ್ಯಾಯಾಲಯ ಅಥವಾ ನ್ಯಾಯಾಲಯ  ನೀಡುವ ತೀರ್ಪುಗಳನ್ನು ನಿಂದನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ನ್ಯಾಯಾಲಯ ನಿಂದನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಮಾಧ್ಯಮ ಶಾಸನಗಳು (media acts):- ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಅತ್ಯಂತ ಪ್ರಭಾವಶಾಲಿ ಸಾಧನ. ದೃಶ್ಯ, ಶ್ರವಣ ಮಾಧ್ಯಮಗಳಾದ  ಟೆಲಿವಿಷನ್ ಇಂಟರ್‌ನೆಟ್, ವೃತ್ತ ಪತ್ರಿಕೆ, ರೆಡಿಯೋ ಸೇರಿದಂತೆ ಒಟ್ಟಾರೆ ಮಾಧ್ಯಮವು ಹಲವಾರು ಕಾಯ್ದೆಗಳ ಅಡಿಪಾಯದಲ್ಲಿ ನಿಂತಿದೆ.

  1. The press & registration at books act-1867
  2. The copy Right Act-1952
  3. The official secrets Act-1923
  4. Parlimentary Proceedings (public security)Act-1956
  5. The contempt at courts Act-1971

ಇವುಗಳ ಮಾಧ್ಯಮ ಪರ ಮತ್ತು ವಿರುದ್ದವಾದ ಬೆಳಕು ಚೆಲ್ಲುತ್ತಾ ದೇಶದ ಮಾಧ್ಯಮವನ್ನು ಅಭಿವೃದ್ಧಿಯ ಜೊತೆಗೆ ನಿಯಂತ್ರಣ ಮಾಡಲಾಗುತ್ತಿದೆ. ಭಾರತೀಯ ಅಧಿಕೃತ ಗೌಪ್ಯತಾ ಕಾಯ್ದೆಯ IPC ಗಳ ಪ್ರಕಾರ ಹಲವಾರು ಇಲಾಖೆಗಳು ಮಾಹಿತಿಯನ್ನು ಕೇಳಿದಾಗ ನೀಡುವುದಿಲ್ಲ. ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಮಾಧ್ಯಮಗಳನ್ನು ನೈತಿಕವಾಗಿ ಮತ್ತು ಬೌಧ್ಧಿಕವಾಗಿ ಕೊಂಡುಕೊಳ್ಳುತ್ತಿದ್ದು ಪ್ರಾಮಾಣಿಕ ಪರ್ತಕರ್ತ ಅಥವಾ ಮಾಧ್ಯಮಗಳು ಸತ್ರ ತನಿಖಾ ವರದಿಗೆ ನಿಂತಾಗ ಆಗುವ ತೊಂದರೆಗಳು ಹಲವು ಅವುಗಳೆಂದರೆ

  1. ಮಾನಹಾನಿ ಕೇಸ್ ಹಾಕುವುದು.
  2. ಜಾತಿನಿಂದನೆ ಕೇಸ್ ಹಾಕುವುದು.
  3. ಅತ್ಯಾಚಾರದಂತಹ ಕೇಸ್ ಗಳನ್ನು ಹಾಕುವುದು.

4.ಕಿರುಕುಳ ಅಥವಾ ಗೌಪ್ಯ ಮಾಹಿತಿ ಕೇಳಿದ್ದಾರೆ ಎನ್ನುವುದು.

5.ಸರಕಾರಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸುಳ್ಳು ಕೇಸ್ ಹಾಕುವುದು.

6.ದೇಶದ್ರೋಹದ ಆರೋಪ ಹೊರಿಸುವುದು.

  1. ಕರ್ತವ್ಯಕ್ಕೆ ಅಡ್ಡಿ ಪಡಿಸಿದ India penal code ಪ್ರಕಾರ ದೂರ ನೀಡುವುದು IPC 353 ರ ಪ್ರಕಾರವು ದೂರು ನೀಡುತ್ತಾರೆ.

ಹೀಗೆ ಹಲವಾರು ಮುಖಗಳಿಂದ ಪತ್ರಕರ್ತರ ಅಥವಾ ಮಾಧ್ಯಮದ ಮೇಲೆ ದಾಳಿ ಆಗುತ್ತದೆ. ದೈಹಿಕ ದಾಳಿಗಿಂತ ಮಾನಸಿಕ ಮತ್ತು ಕಾನೂನಾತ್ಮಕ ದಾಳಿ ಅತ್ಯಂತ ಭಯಾನಕವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ working  journalists  act ಪ್ರಕಾರ ಕೆಲಸದ ಅವಧಿ ,ಸಂಬಳ, ರಜೆ, ಹುದ್ದೆ ಮತ್ತು ಗೌರವದ ಬಗ್ಗೆ ತಿಳಿಸುತ್ತದೆ. ಈ ನಿಯಮಗಳನ್ನು ಸಣ್ಣ ಮಾಧ್ಯಮಗಳು ಪಾಲಿಸಲು ಆಗುವುದಿಲ್ಲ. ವಿದೇಶಿ ಬಂಡವಾಳವನ್ನು ಮಾಧ್ಯಮದಲ್ಲಿ ಅನುಪಾತ ರೀತಿ ನಿರ್ಧಾರ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ದೇಶದಲ್ಲಿ ಬಲಿಷ್ಠ ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಕೈಯಲ್ಲಿ ಮಾಧ್ಯಮಗಳು ನಡೆಯುತ್ತಿದ್ದು  ಈ ಕಾರಣಗಳಿಂದ ಮಾಧ್ಯಮಗಳು ರಾಜಕೀಯ ಪಕ್ಷ ರಾಜಕಾರಣ ಧರ್ಮ, ಜಾತಿ, ಭಾಷೆಯ ಮಾಡುತ್ತಾ ತಮ್ಮ ಪ್ರಕಾರ TRP ಗಳಿಗಾಗಿ ಮಾತ್ರ ಪ್ರಯತ್ನಿಸುತ್ತಿವೆ ಹೊರತು ಸಿದ್ದಾಂತ ಮಾಧ್ಯಮ ಧರ್ಮವನ್ನು ಪಾಲಿಸುತ್ತಿಲ್ಲ. Accredited journalist ಗಳಿಗೆ ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಪ್ರವೇಶ parlimentory proceedings & privileges Act ಜಾರಿಗೆ ತಂದರು ಕೂಡ ಇತ್ತೀಚಿನ  ತಿದ್ದುಪಡಿಗಳು ಮತ್ತು ಘಟನೆಗಳಿಂದ ಹಲವಾರು ರಾಜ್ಯಗಳು ಪ್ರವೇಶವನ್ನು ನಿಷೇಧಿಸಿ ದೂರದರ್ಶನಕ್ಕೆ ಮಾತ್ರ ಅವಕಾಶ ನೀಡಿವೆ. ಭಾರತದ ಪತ್ರಿಕಾ ಮಂಡಳಿ (press council of India) ಮಾಧ್ಯಮದ ಸ್ವಾತಂತ್ರö್ಯ ಪತ್ರಕರ್ತರಿಗೆ ನೀತಿ ಸಂಹಿತೆ, ಮಾಧ್ಯಮಕ್ಕೆ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಆದರೂ ಕೂಡ ಮಾಧ್ಯಮದ ಮೇಲೆ ನಡೆಯುತ್ತಿರುವ ಕೊಲೆ ಬೆದರಿಕೆ , ಹತ್ಯೆ, ಭಯ ಹುಟ್ಟಿಸುವುದು ಅಪಹರಣ ಅತ್ಯಾಚಾರ ಸುದ್ದಿಗಾಗಿ ಮಾಧ್ಯಮವನ್ನು ಸೃಷ್ಠಿಸುವುದು ಅಥವಾ ಕೊಂಡುಕೊಳ್ಳುವುದು ದೇಶದಲ್ಲಿ ನಡೆಯುತ್ತಲೇ ಇದೆ.

ಅಂತರಾಷ್ಟಿçÃಯ ಮಟ್ಟದಲ್ಲಿ ಭಾರತೀಯ ಪತ್ರಕರ್ತರಿಗೆ ಸ್ವಾತಂತ್ರದ ಕೊರತೆ ಎದ್ದು ಕಾಣುತ್ತಿದೆ. ಸಂಪನ್ಮೂಲದ ಕೊರತೆ  ಕಾನೂನುಗಳು ಪರ-ವಿರೋಧ ಜ್ಞಾನದ ಕೊರತೆ , ಶಿಕ್ಷಣದ ಕೊರತೆಗಳಿಂದ ದೇಶದ ಮಾಧ್ಯಮ ವ್ಯವಸ್ಥೆಯು ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಇದ್ದು ಇದರಿಂದ ನೊಂದಾವಣಿಯಾದ ಪತ್ರಿಕೆಗಳಲ್ಲಿ ಶೇ2% ರಷ್ಟು ಮಾತ್ರ ನಡೆಯುತ್ತಿದ್ದು ಉಳಿದವು ಹೆಸರಿಗೆ ಮಾತ್ರ ಉಳಿದಿವೆ. ಮಾಧ್ಯಮ ಬೆಳವಣಿಗೆ ಜೊತೆಗೆ ಸಣ್ಣ ಮಾಧ್ಯಮಗಳ ಅವನ್ನತಿಯೂ ಆಗುತ್ತಿದೆ.

“ ಮಾಧ್ಯಮದಲ್ಲಿ ಇರುವವರು ಕಾನೂನು ಅರಿಯಬೇಕು ಜೊತೆಗೆ ಪ್ರಶ್ನಾತೀತ ಚಿಹ್ನೆ ಮತ್ತು ಉದ್ಗಾರ ವಾಚಕ ಚಿಹ್ನೆಗಳ ಬಗ್ಗೆ ತಿಳಿದಿರಬೇಕು ಜನರಿಗೆ ಸುದ್ದಿ ಜೊತೆಗೆ ಮಾಹಿತಿ ಸತ್ಯದ ದರ್ಶನ ಮೂಡಿಸಬೇಕು”

 

 

ರಮೇಶ್ ಎಸ್.ಜಿ.

ಸಂಪಾದಕರು

ಕನಸಿನ ಭಾರತ

 


Share