ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಡಿ ಮಲ್ಲಯ್ಯ ಇವರ ಮಗಳನ್ನು ಪ್ರೀತಿಸುತ್ತಿರುವ ಮಂಜುನಾಥಗೌಡನನ್ನು ಕೊಲೆ ಮಾಡಿರುವ ದುರ್ಘಟನೆ ನಾರಾವಿ ಗ್ರಾಮದಲ್ಲಿ ನಡೆದಿದ್ದು ಕೊಲೆ ಮಾಡಿದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹಗರಿ ನದಿಯಲ್ಲಿ ಮಂಜುನಾಥಗೌಡ ತಂದೆ ಶಂಕರಗೌಡ ವ,:22ವರ್ಷ, ರಾರಾ ವಿ ಗ್ರಾಮದವನು ಈತನ ಅರ್ಧ ದೇಹ ಭಾಗವನ್ನು ಹಗರಿ ನದಿಯಲ್ಲಿ ಹೂತ್ತಿಟ್ಟಿರುವ ಸ್ಥಿತಿಯಲ್ಲಿ ಶವವು ಕಂಡು ಬಂದ ಮೇರೆಗೆ ಮೃತನ ಅಣ್ಣ ಹನುಮಂತ ಗೌಡ ತನ್ನ ತಮ್ಮನ ಸಾವಿನ ಬಗ್ಗೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲೆಸಿದ್ದಾನೆ.
ಪ್ರಕರಣ ಬೆನ್ನು ಹತ್ತಿದ ಸಿರುಗುಪ್ಪ ಪೊಲೀಸರ ತಂಡ ಡಿ ಮಲ್ಲಯ್ಯ ನನ್ನ ವಶಕ್ಕೆ ಪಡೆದು ವಿಚಾರಿಸಲಾಗಿ ಸಮಯದಲ್ಲಿ ಆರೋಪಿತರ ಕೊಲೆಯಾದ ಮಂಜುನಾಥಗೌಡನ ತಮ್ಮ ಮಗಳನ್ನು ಪ್ರೀತಿ ಮಾಡಬಾರದೆಂದು ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಸಹ ಪ್ರೀತಿ ಮಾಡುವುದನ್ನು ಮುಂದುವರಿಸಿದ್ದು ಇದೇ ದ್ವೇಷವನ್ನು ಇಟ್ಟುಕೊಂಡು 28-12-2024 ರಂದು ರಾತ್ರಿ ಸುರೇಶ್ ತಂದೆ ಮಲ್ಲಯ್ಯ 23ವರ್ಷ ಮತ್ತು ಮಲ್ಲಯ್ಯ ತಂದೆ ವೆಂಕಟೇಶ 44ವರ್ಷ,ರಾರಾವಿಯ ಗ್ರಾಮದ ವರ ವಲಯದ ಹುಣಸೆ ಮರದ ತೋಟಕ್ಕೆ ಮಂಜುನಾಥಗೌಡನನ್ನು ಕರೆಯಿಸಿ ಕುತ್ತಿಗೆಗೆ ಟವಲ್ ಬಿಗಿದು ಮುಖಕ್ಕೆ ಸಾಲಿಕ್ಕೆಯಿಂದ ಹೊಡೆದು ಸಾಯಿಸಿ ಹಗರಿ ನದಿಯಲ್ಲಿ ಹೂತಿ ಹಾಕಿರುವುದಾಗಿ ತಿಳಿಸಿದ್ದಾರೆ ಇಬ್ಬರು ಆರೋಪಿತರನ್ನು ಕೊಲೆ ಪ್ರಕರಣದಲ್ಲಿ ಪತ್ತೆ ಹಚ್ಚಿದ್ದಾರೆ.
ಪ್ರಕರಣದ ತನಿಖೆಗೆ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಸೋಬರಾಣಿ ವಿ. ಜೆ ನೀಡಿದ ಮಾರ್ಗದರ್ಶನದ ಮೇರೆಗೆ ಸಿರುಗುಪ್ಪ ಉಪ ವಿಭಾಗದ ಡಿ ಎಸ್ ಪಿ ವೆಂಕಟೇಶ ಇವರ ನೇತೃತ್ವದಲ್ಲಿ ಸಿರುಗುಪ್ಪ ವೃತ್ತ ನಿರೀಕ್ಷಕರಾದ ಹನುಮಂತಪ್ಪ,ಪಿಎಸ್ಐ ಗಳಾದ ಪರಶುರಾಮ್, ಶಶಿಧರ ಹಚ್ಚೋಳ್ಳಿ ಸಿಬ್ಬಂದಿರವರಾದ ಚಿನ್ನಪ್ಪ ಗುಡಿಕೆರೆ ಹೆಚ್, ಬಸವರಾಜ ಪಿಸಿ, ಬಾಲಚಂದ್ರ ರಾಥೋಡ್, ಈರಣ್ಣ ಪಿಸಿ, ವಿಷ್ಣು ಮೋಹನ್ ಪಿಸಿ, ಮುದಕಯ್ಯ ಶಿಕಾಲಿ, ಅಮರೇಶ ಪಿಸಿ, ಕುಪ್ಪಣ್ಣ ಪಿಸಿ, ಮಲ್ಲನಗೌಡ, ಗಾದಲಿಂಗಪ್ಪ ರವರನ್ನೊಳಗೊಂಡ ತಂಡ ಕಾರ್ಯಚರಣೆ ಮಾಡಿ ಪತ್ತೆ ಹಚ್ಚಿದ್ದಾರೆ…
ವರದಿ ಶೇಖರ್ ಹೆಚ್