ಜೆವರ್ಗಿ ತಾಲೂಕಿನ ಜನ ಮೆಚ್ಚಿದ ವೈದ್ಯಧಿಕಾರಿ ಡಾ. ಸಿದ್ದು ಪಾಟೀಲ್ ಅವರ ನೇತೃತ್ವದ ಮೇರೆಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಡಾ. ಉಮೇಶ್ ಶರ್ಮಾ ಅವರ ಮಾರ್ಗದರ್ಶನದ ಮೇರೆಗೆ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿಗಳಾದ ಡಾ ಅನಂತರಡ್ಡಿ ಬಿ ಕೊಂಡಗುಳಿ ಅವರು ಬಿಳವಾರ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ರೋಗಿಗಳ ಉತ್ತಮ ಆರೈಕೆಯಲ್ಲಿ ಮತ್ತು ಗ್ರಾಮಸ್ಥರೊಂದಿಗೆ ಒಳ್ಳೆಯ ಸೌಜನ್ಯ ಪೂರ್ವಕ ನಿಕಟ ಪೂರ್ವಕ ಬಾಂಧವ್ಯವನ್ನು ಹೊಂದಿದ್ದಾರೆ ಹಾಗೂ ಕಿರಿಯ ರೊಂದಿಗೆ ಸ್ನೇಹಿತರಾಗಿ ಹಿರಿಯರೊಂದಿಗೆ ವಿನಯ ಪೂರ್ವಕವಾಗಿ ಔಷಧಪಚಾರ ನೀಡುವುದರ ಜೊತೆಗೆ ರೋಗಿಗಳಿಗೆ ನೈತಿಕ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಅದೇ ರೀತಿಯಾಗಿ ಸುರಕ್ಷಣಾಧಿಕಾರಿಗಳಾದ ಶ್ರೀಮತಿ ಸ್ನೇಹಲೋಕ ಪವರ್ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳಾದ ಕುಮಾರಿ ಯಶೋದ ಅವರು ಗ್ರಾಮಸ್ಥರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಸಮಾಜ ಸೇವಕರಾದ ಪರಶುರಾಮ ದಂಡಗುಲ್ಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ…
