ಕುಮಟಾ :-ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಹೂವನ್ನು ಕಟ್ಟಿ ಮಾರುವ ಸುಮಾರು 39 ತಾಯಂದಿರಿಗೆ ಸನ್ಮಾನಿಸುವ ಮೂಲಕ ಅಮ್ಮನಮನ ಎನ್ನುವ ಭಾವನಾತ್ಮಕ ಕಾರ್ಯಕ್ರಮ ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ನಡೆಸಲಾಯಿತು.
ತಾಲೂಕಿನ ಆರೋಗ್ಯಾಧಿಕಾರಿಯಾದ ಶ್ರೀಮತಿ ಆಜ್ಞಾ ನಾಯಕ ಅವರು ಮಾತನಾಡಿ ದೇವರು ಹಾಗೂ ಮನುಷ್ಯನ ನಡುವಿನ ಸೇತುವೆಯಾಗಿ ಹೂವು ಮಾರುವವರು ಕೆಲಸ ಮಾಡುತ್ತಿದ್ದು ಗುರುತಿಸಿ ಸನ್ಮಾನಿಸುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು. ದೇವಾಲಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮೂಡ್ಲಗೀರಿ ನಾಯಕ ಹಾಗೂ ಪುರಸಭೆಯ ಸಮುದಾಯ ಸಂಘಟಕರಾದ ಶ್ರೀಮತಿ ಮೀನಾಕ್ಷಿ ಆಚಾರಿ ಅವರು ಕಾರ್ಯಕ್ರಮದ ಕುರಿತು ಹರ್ಷವ್ಯಕ್ತಪಡಿಸಿದರು. ಶ್ರೀಮತಿ ವಿಜಯ ನಾಯಕ ಬರ್ಗಿ ಇವರು ಎಲ್ಲಾ ತಾಯಂದಿರಿಗೆ ಸೀರೆಯನ್ನು ನೀಡಿದರು.
ಯುವಾ ಬ್ರಿಗೇಡ್ ತಾಲೂಕ ಸಂಚಾಲಕರಾದ ಸಚೀನ್ ಭಂಡಾರಿಯವರು ಸ್ವಾಗತಿಸಿದರು ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತುಗಳನಾಡಿದರು, ಗೌರೀಶ ನಾಯ್ಕ ನಿರೂಪಿಸಿದರು, ಸದಸ್ಯರಾದ ರವೀಶ ನಾಯ್ಕ, ಚಿಂದಂಬರ ಅಂಬಿಗ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಜ್ಯೋತಿನಾಯ್ಕ, ಗಾಯತ್ರಿ ಮಡಿವಾಳ ಇನ್ನಿತರರು ಇದ್ದರು.
