ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ನಿರ್ದೆಶಕರ ಸಭೆ ಇಂದು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಸಂಘದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿKWJV ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ನಿರ್ದೆಶಕರುಗಳು ಆಯ್ಕೆಯಾದ ಬಗ್ಗೆ ಪಟ್ಟಿಯನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. KWJV ಶಿವಮೊಗ್ಗ ಜಿಲ್ಲಾ ಘಟಕದ ಸಂಘದ ಹೊಸ ಕಚೇರಿ ಮಾಡುವ ಬಗ್ಗೆ ಮತ್ತು KWJV ಶಿವಮೊಗ್ಗ ಘಟಕದ ಪತ್ರಿಕಾ ಭವನ ಮಾಡಿ ಸದರಿ ಜಾಗದಲ್ಲಿ ಪ್ರೆಸ್ ಮೀಟ್ ಮಾಡುವ ಬಗ್ಗೆ ಚರ್ಚಿಸಲಾಯಿತು. ಎಲ್ಲರೂ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿ ಅಧ್ಯಕ್ಷರ ತೀರ್ಮಾನಕ್ಕೆ ಬಿಡಲಾಯಿತು. ಬರುವ 2025 ಹೊಸ ವರ್ಷದಲ್ಲಿ KWJVOICE ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲು ಮತ್ತು ಪ್ರೆಸ್ ನೋಟ್ ಸ್ವೀಕರಿಸಲು ಒಪ್ಪಿಗೆ ಪಡೆಯಲಾಯಿತು. ಸಭೆಯು ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಸಂಘದ ಬಲವರ್ಧನೆಗೆ ಮತ್ತು ಅಭಿವೃದ್ಧಿಗೆ ಹಾಗೂ ಮುಂದಿನ ಸಂಘದ ಕಾರ್ಯಚಟುವಟಿಕೆ ಬಗ್ಗೆ ಸಹಕರಿಸುವಂತೇ ಮತ್ತು ತಮ್ಮ ಸಲಹೆಗಳನ್ನು ನೀಡುವಂತೆ ಕೋರಿದರು. ಈಗಾಗಲೇ ಹಲವು ಸದಸ್ಯರಿಗೆ ಐಡಿ ಕಾರ್ಡ್ ನೀಡಿದ್ದು,ಹೊಸದಾಗಿ 50 ಕ್ಕೂ ಹೆಚ್ಚು ಸದಸ್ಯರು ನೊಂದಣಿಗೆ ಅರ್ಜಿ ಸಲ್ಲಿಸಿದ್ದು ಪರಿಶೀಲಿಸಿ ಐಡಿ ಕಾರ್ಡ್ ನೀಡಲು ಒಪ್ಪಿಗೆ ಪಡೆಯಲಾಯಿತು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ಚಿತ್ರಪ್ಪ ಯರಬಾಳ,ಪ್ರಧಾನ ಕಾರ್ಯದರ್ಶಿ ಡಿ.ಪಿ.ಅರವಿಂದ್,ಕಾರ್ಯದರ್ಶಿ R.V.ಕ್ರೃಷ್ಣ,ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ,ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ.ಎಂ,ಖಜಾಂಚಿ ಸತೀಶ್ ಗೌಡ ಕೆ.ಎಂ,ಮತ್ತು ನಿರ್ದೇಶಕರಾದ ನಂದನ್ ಕುಮಾರ್ ಸಿಂಗ್,ಲಿಯೋ ಅರೋಜ,ಲಕ್ಷ್ಮಣಕುಮಾರ್ ಉದಾವತ್,ಹೆಚ್.ಎಸ್.ವಿಷ್ಣುಪ್ರಸಾದ್, ಭರದ್ವಾಜ್ ಯು.ಎಸ್,ಸುರೇಶ್ ಬಿ.ಎ,ಗಿರೀಶ್ ಬಿ.ಎಸ್. ಷಡಾಕ್ಷರಪ್ಪ ಜಿ.ಆರ್ ಉಪಸ್ಥಿತರಿದ್ದರು.
