RTO ಕಚೇರಿಗೆ ಲೋಕಾಯುಕ್ತ ದಿಢೀರ್ ದಾಳಿ!

RTO ಕಚೇರಿಗೆ ಲೋಕಾಯುಕ್ತ ದಿಢೀರ್ ದಾಳಿ!

Share

ಕಚೇರಿ ಆವರಣದಲ್ಲಿದ್ದ.ಬ್ರೋಕರ್ ಗಳು ಪರಾರಿ.ಕಚೇರಿ ಎದುರು ಅನಧಿಕೃತವಾಗಿ ದಾಖಲಾತಿ ಮಾಡಿಕೊಡುತ್ತಿದ್ದ ಓಮಿನಿ ವಶ.ಕಾರಿನಲ್ಲಿ ದ್ದ ಲ್ಯಾಪ್ ಟಾಪ್ ಸ್ಕ್ಯಾನರ್ ಮತ್ತಿತರ ದಾಖಲಾತಿ ವಶಕ್ಕೆ.ಸಾರ್ವಜನಿಕರ ಕೆಲಸದಲ್ಲಿ ವಿಳಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ ಪಿ ಸಜೀತ್ ನೇತೃತ್ವದಲ್ಲಿ ಸಜಾಯಕ ಸಾರಿಗೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ ಲೋಕಾಯುಕ್ತ ಸಿಬ್ಬಂದಿಗಳು.ತಪಾಸಣೆ ವೇಳೆ ಆವರಣದ ಹೊರಗೆ ನಿಂತಿದ್ದ ಕಾರಿನಲ್ಲಿ ಹಲವು ದಾಖಲೆಗಳು ಪತ್ತೆ.ಎರಡು ಜೀವ್ ಒಂದು ಕಾರಿನಲ್ಲಿ ಬಂದಿದ್ದ ಲೊಕಾಯುಕ್ತ ಅಧಿಕಾರಿಗಳಿಂದ ಕಾರುಗಳಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ.ಕಚೇರಿಯಲ್ಲಿ ಕೆಲಸ ವಿಳಂಬ. ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಸಿಬ್ಬಂದಿಗಳು.ಆರು ತಿಂಗಳಿನಿಂದ ಪೆಡಿಂಗ್ ಇರುವ ಕಡತಗಳ ಪರಿಶೀಲನೆ ನಡೆಸಿದರು.ಆರ್ ಟಿ ಓ ಕೊಠಡಿಯ ಕಂಪ್ಯೂಟರ್ ಡೇಟಾ ಪರಿಶೀಲನೆ ನಡೆಸಿದರು.ಕಚೇರಿಯ ಸಿಬ್ಬಂದಿ ಹಾಗೂ ಆರ್ ಟಿ ಓ ಬಗವಾನ್ ದಾಸ್ ರಂದಲೂ ಮಾಹಿತಿ ಪಡೆದರು.ಆರ್ ಟಿ ಓ ಬಗವಾನ್ ದಾಸ್ ಈ ಹಿಂದೆ ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿತ್ತು.ಇದೀಗ ಸರಿಯಾಗಿದ್ದು.ಸಾರ್ವಜನಿಕರಿಗೆ ಸೌಲಬ್ಯ ನೀಡಲಾಗುತ್ತಿದೆ ಎಂಬ ಮಾಹಿತಿಗೆ ಎಲ್ಲವೂ ಎಂಟ್ರಿಯಾಗಿದೆಯಲ್ಲಾ ಪ್ಲಾಫಿ ಯಲ್ಲಿ ಪರಿಶೀಲನೆ ನಡೆಸಲು ಸಿಬ್ಬಂದಿಗಳಿಗೆ ಎಸ್ ಪಿ ಸೂಚಿಸಿದರು.
ನಂತರ
ಮಾತನಾಡಿದ ಲೊಕಾಯುಕ್ತ ಎಸ್ ಪಿ ಸಜೀತ್ ರವರು ಸಾಕಷ್ಟು ದೂರಿನ ಹಿನ್ನೆಲೆಯಲ್ಲಿ ಕಡತಗಳನ್ನು ಪರಿಶೀಲಿಸಲಾಗುತ್ತಿದೆ.
ಸಾರಿಗೆ ಇಲಾಖೆಯ ಸಾರಥಿಯಲ್ಲಿ ಅಪ್ ಲೋಡ್ ಮಾಡಲು ಗೊತ್ತಿಲ್ಲದವರು ಹೊರಗೆ ಕಾರಿನಲ್ಲಿ ಮಾಡಿಸಲು ದಾಖಲಾತಿ ನೀಡಿದ್ದಾರೆ. ಇಲಾಖೆಯಲ್ಲಿ 28 ರೀತಿಯ ಸೌಲಬ್ಯಗಳಿದ್ದು. ಎಲ್ಲವನ್ನೂ ಕುಲಂಕುಷವಾಗಿ ಪರಿಶೀಲಿಸಲಾಗುವುದು ತಪ್ಪು ಕಂಡು ಬಂದಲ್ಲಿ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದೆಂದು ಎಸ್ ಪಿ ಸಜೀತ್ ಮಾಹಿತಿ ನೀಡಿದರು.ದಾಳಿಯಲ್ಲಿ ಡಿವೈಎಸ್ ಪಿ ಕೃಷ್ಣಪ್ಪ. ಇನ್ಸ್ ಪೆಕ್ಟರ್ ರೂಪಾ. ಸಬ್ ಇನ್ಸ್ ಪೆಕ್ಟರ್ ಮಹೇಶ್ ಹಾಗೂ ಸಬ್ಬಂದಿಗಳಿ ಬಾಗವಹಿಸಿದ್ದರು. ಕಚೇರಿ ವೇಳೆಯ ನಂತರವೂ ಕಡತ ಪರಿಶೀಲನೆ ನಡೆಯುತ್ತಿದೆ.


Share