ಕುಣಿಗಲ್ ತಾಲೂಕಿನಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸರ್ವ ಸದಸ್ಯರ ಸಭಾ ಕಾರ್ಯಕ್ರಮ.

ಕುಣಿಗಲ್ ತಾಲೂಕಿನಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸರ್ವ ಸದಸ್ಯರ ಸಭಾ ಕಾರ್ಯಕ್ರಮ.

Share

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಪುಣ್ಯಕ್ಷೇತ್ರವಾದ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸರ್ವ ಸದಸ್ಯರ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಸರ್ವ ಸದಸ್ಯರ ಹಾಗೂ ಪದಾಧಿಕಾರಿಗಳನ್ನುದ್ದೇಶಿಸಿ ಸಂಘಟನೆಯ ಜವಾಬ್ದಾರಿಯೂ ತುಂಬಾ ಮುಖ್ಯ ಸದಸ್ಯರು ಸ್ವಾತಂತ್ರ ಹೋರಾಟದ ಮನೋಭಾವ ನಿರ್ಧಾರ ನಿಲುವು ಸಾಮಾಜಿಕ ಜಾಲತಾಣದ ಬಳಕೆ ಅವಶ್ಯಕತೆ ಇರುತ್ತದೆ ಸಂಘಟನೆ ಬೆಳೆದರೆ ನಾವು ಸಮಾಜದಲ್ಲಿ ಬೆಳೆಯುವುದರಲ್ಲಿ ಸಂಶಯವಿಲ್ಲ ಸಂಘಟನೆಯ ಹೋರಾಟ ರೂಪುರೇಷೆಗಳಿಗೆ ದಾನಿಗಳ ಅವಶ್ಯಕತೆ ಇದೆ ಮತ್ತು ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಹಾಗೂ ಹೊಸ ಸಮಿತಿಯ ರಚನೆ ಮುಖ್ಯವಾಗಿರುತ್ತದೆ ಅಧಿಕಾರಿಗಳನ್ನು ಮಂತ್ರಿಗಳನ್ನು ಶಾಸಕರನ್ನು ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಹಾಗೂ ರಾಜ್ಯ ಸಮಿತಿ ಪ್ರತಿ ಆರು ತಿಂಗಳಿಗೆ ಒಮ್ಮೆ ಸಭೆ ನಡೆಸಬೇಕು ಮತ್ತು ಜಿಲ್ಲಾ ಹಾಗೂ ತಾಲೂಕ ಸಮಿತಿಯವರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಕೊನೆಗೆ ಸಭಾ ನಡುವಳಿಯ ಪುಸ್ತಕ ಬರೆಯಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಎಚ್ ಜಿ ರಮೇಶ್ ಕುಣಿಗಲ್ ರಾಜ್ಯ ಸಂಘಟನೆಯ ಉಪಾಧ್ಯಕ್ಷರಾದ ನರಸಿಂಹ ಗೌಡ, ಪ್ರಧಾನ ಕಾರ್ಯದರ್ಶಿಯಾದ ರುದ್ರೇಶ್, ರಾಜ್ಯ ಕಾರ್ಯಧ್ಯಕ್ಷರಾದ ಚನ್ನಯ್ಯ.ಎಂ .ವಸ್ತ್ರದ ಸಂಘಟನಾ ಕಾರ್ಯದರ್ಶಿಯಾದ ಟಿ ಹೆಚ್ ಎಂ ರಾಜಕುಮಾರ ಮಾಧ್ಯಮ ಪ್ರತಿನಿಧಿಯಾದ ಮನೋಜ್ ಹಾಗೂ ಧಾರವಾಡ ಬಳ್ಳಾರಿ ಹರಪನಹಳ್ಳಿ ಸಿಂಧನೂರು ಹಾವೇರಿ ದಾವಣಗೆರೆ ಕೋಲಾರ ತುಮಕೂರು ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಚರ್ಚೆ ಮತ್ತು ನಿರ್ಣಯದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಧ್ಯಕ್ಷರಾದ ಚೆನ್ನಯ್ಯ ವಸ್ತ್ರದ ಅವ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ ಜಟ್ಟಪ್ಪ ಎಸ ಪೂಜಾರಿ


Share