ಅರಸೀಕೆರೆ: ತಾಲೂಕಿನ ಸುಲ್ತಾನುಲ್ ಹಿಂದ್ ಟ್ರಸ್ಟ್ ಕಾರ್ಯದರ್ಶಿ, ಕನಸಿನ ಭಾರತ ಪತ್ರಿಕೆ ವರದಿಗಾರರು ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಅರಸೀಕೆರೆ ತಾಲೂಕು ಕಾರ್ಯದರ್ಶಿಗಳಾದ ಪರ್ವಿಜ್ ಅಹಮದ್ ರವರ ಸಮಾಜ ಸೇವಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಕಲಾಭೂಮಿ ಪ್ರತಿಷ್ಠಾನ (ರಿ) ವತಿಯಿಂದ ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
