“ಕುಷ್ಟಗಿ: ೪ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ”

“ಕುಷ್ಟಗಿ: ೪ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ”

Share

ತಾಲೂಕಿನ ನಾಲ್ಕು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಷ್ರರಂಭವಾಗಲಿದ್ದು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ವರದಾನವಾಗಿದೆ ದೋಟಿಹಾಳ ಗ್ರಾಮಸ್ಥರಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಆಂಗ್ಲ ವ್ಯಾಮೋಹ ಅನೇಕರಲ್ಲಿ ಹೆಚ್ಚಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆ ಬಂದಿದ್ದರೆ ಅನೇಕ ಸರಕಾರಿ ಶಾಲೆಗಳು ಮುಚ್ಚುವ ಬಿತಿಯನ್ನು ಎದುರಿಸುತ್ತಿದ್ದು. ಇದನ್ನು ಹೋಗಲಾಡಸಲು ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗವನ್ನು ತೆರೆದಿದೆ. ಕುಷ್ಟಗಿ ತಾಲೂಕಿನಲ್ಲಿ ದೋಟಿಹಾಳ, ಚಳಗೇರಾ, ಹನಮನಾಳ, ನೆಲೋಗಲ್ ಗಳಲ್ಲಿ ೨೦೨೧-೨೦೨೨ಸಾಲಿಗೆ ೧ನೇ ತರಗತಿಯನ್ನು ಆರಂಭಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಶಾಲೆಗೆ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರೀಯ ಪಠ್ಯ ಕ್ರಮದಂತೆ ಆಂಗ್ಲ ಮಾಧ್ಯಮದ ಬೋಧನೆ ಇರಲಿದ್ದು, ಇಂಗ್ಲಿಷ್, ಗಣಿತ ವಿಷಯಗಳಿಗೆ ಕೇಂದ್ರ ಸರ್ಕಾರದ (ಎನ್ ಸಿ ಇ ಆರ್ ಟಿ )ಪಠ್ಯ ಪುಸ್ತಕ ಹಾಗೂ ಪರಿಸರ ಅಧ್ಯಯನದ ಕನ್ನಡ ವಿಷಯಗಳಿಗೆ (ಕೆ.ಟಿ.ಬಿ.ಎಸ್) ಪುಸ್ತಕಗಳನ್ನು ಅನುಸರಿಸಿಲಾಗುವದು. ಈ ವಿಭಾಗಗಳನ್ನು ಪರಿಸರ, ಗಣಿತ ವಿಶೇಷಯಗಳಿಗೆ ದ್ವಿಬಾಷಯಲ್ಲಿ (ಬೈಲಿಂಗ್ವಾಲ್ ಉಭಯ ಪಠ್ಯ ಪುಸ್ತಕ) ಗಳನ್ನು ಅಳವಡಿಸಲಾಗಿದೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿ ಮಗುವಿಗೆ ಯಾವ ರಿತಿ ಶಿಕ್ಷಣ ನೀಡಲಾಗುತ್ತದೆಯೋ ಅದೇ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ. ಮೂವತ್ತು ಮಕ್ಕಳು ಮಾತ್ರ ಪ್ರವೇಶ ಇದ್ದು ಹೆಚ್ಚಿಗೆ ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ದೋಟಿಹಾಳ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಶಿದ್ರಾಮಪ್ಪ ಅಮರಾವತಿ ವಿವರಿಸಿದರು. ಜಾಗೃತಿ ಕೊರತೆ:- ಸರ್ಕಾರಿ ಶಾಲೆಗಳಲ್ಲಿ ಈ ವಷ೯ವೇ ಆಂಗ್ಲ ಮಾಧ್ಯಮ ಆರಂಭವಾಗುತ್ತಿರುವುದರಿಂದ ಪಾಲಕರು, ಶಿಕ್ಷಣ ಪ್ರೇಮಿಗಳನ್ನು ಶಾಲೆಯಲ್ಲಿ ಸಭೆ ಕರೆದು ಮಾಹಿತಿ ನೀಡಲಾಗುತ್ತಿದೆ. ಆದರೂ ಸಹ ಜಾಗೃತಿ ಕೊರತೆ ಎದ್ದು ಕಾಣುತ್ತಿದೆ. ಶಾಲೆಯಲ್ಲಿ ದೊರೆಯುವ ಸೌಲಭ್ಯ ಶಿಕ್ಷಣ ಗುಣಮಟ್ಟ ಸೇರಿ ವಿಶೇಷತಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಕಾಯ೯ವಾಗಬೇಕಿದೆ. ಎಲ್ಲದಕ್ಕಿಂತ ಮಿಗಿಲಾಗಿ ಸರಕಾರಿ ನೌಕರರ ಮಕ್ಕಳೂ ಸರಕಾರಿ ಶಾಲೆಗೆ ಬರುವಂತಾಗುಬೇಕು. ಪುಸ್ತಕ ಸರಬರಾಜು ಇಲ್ಲಾ:- ಜೂಲೈ ಮತ್ತು ಆಗಸ್ಟ್ ತಿಂಗಳ ದಾಖಲಾತಿಗಳು ಪೂರ್ಣಗೊಂಡ ನಂತರ ತರಗತಿ ಪ್ರಾರಂಭ ಮಾಡಲಾಗುತ್ತದೆ. ಹೀಗಾಗಿ ಸರಕಾರ ತ್ವರೀತವಾಗಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದರಿಂದ ೧,೨ ನೇ ವಗ೯ದ ವಿಧ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸಮವಸ್ತ್ರ ಮದ್ಯಾಹ್ನದ ಉಪಹಾರ,ಶೂ ಮತ್ತು ಸಾಕ್ಷಗಳನು ಉಚಿತವಾಗಿ ನೀಡಲಾಗುವುದು ಎಂದು ಸರಕಾರಿ ಘೋಷಣೆ ಮಾಡಿದೆ. ಆದರೂ ಇನ್ನು ಕೂಡಾ ಆಯಾ ಶಾಲೆಗಳಿಗೆ ಪುಸ್ತಕ ಮತ್ತು ಸಮವಸ್ತ್ರಗಳು ಬಂದಿಲ್ಲ. ತಾಲೂಕಿನ ನಾಲ್ಕು ಕಡೆಗಳಲ್ಲಿ ಆಂಗ್ಲ ಶಾಲೆ ತೆರೆಯಲಾಗಿದ್ದು ಉತ್ತಮವಾಗಿದೆ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಾಲೆಗಳನ್ನು ಪ್ರಾರಂಭಿಸಿರುವುದು ಮಕ್ಕಳು ಕಲಿಕಾ ವಿಧಾನ ಬದಲಾವಣೆಯಾಗಲಿದೆ. ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಪುಸ್ತಕ ಮತ್ತು ಸಮವಸ್ತ್ರಗಳು ಬಂದಿಲ್ಲ. ▪️ಚನ್ನಬಸಪ್ಪ ಮಗ್ಗದ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ.

✍️ವರದಿ ಶರಣಬಸಪ್ಪ ಬಾಲಪ್ಪ ಗೋಜ೯ನಾಳ ದೋಟಿಹಾಳ


Share

Leave a Reply

Your email address will not be published. Required fields are marked *