ರೇಷ್ಮೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಕೋಲಾರದ ರೀರ‍್ಸ್ಗಳು ರಾಮನಗರ ಮಾದರಿಯಲ್ಲಿ ಕೋಲಾರ ರೇಷ್ಮೆ ಗೂಡು ಮಾರಾಟವಾಗಬೇಕು: ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್

ರೇಷ್ಮೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಕೋಲಾರದ ರೀರ‍್ಸ್ಗಳು ರಾಮನಗರ ಮಾದರಿಯಲ್ಲಿ ಕೋಲಾರ ರೇಷ್ಮೆ ಗೂಡು ಮಾರಾಟವಾಗಬೇಕು: ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್

Share

ಬAಗಾರಪೇಟೆ: ಕೋಲಾರ ಜಿಲ್ಲೆ, ರೇಷ್ಮೆ ಮತ್ತು ಹಾಲಿಗೆ ಬಹಳ ಪ್ರಮುಖವಾಗಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಸಾಕಷ್ಟು ರೈತರು, ರೇಷ್ಮೆ ಬೆಳೆಯನ್ನೇ ವಾಣಿಜ್ಯ ಬೆಳೆಯನ್ನಾಗಿಸಿಕೊಂಡು ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಯನ್ನು ಅತಿ ಹೆಚ್ಚಾಗಿ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಜಿಲ್ಲೆಯ ರೇಷ್ಮೆ ಬೆಳೆಗಾರರು ತಿಂಗಳೆಲ್ಲಾ ಕಷ್ಟಪಟ್ಟು ರೇಷ್ಮೆ ಬೆಳೆ ಬೆಳೆದು ಕೋಲಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ರೇಷ್ಮೆ ಗೂಡನ್ನು ಮಾರಾಟ ಮಾಡುವುದಕ್ಕೆ ಮಾರುಕಟ್ಟೆಗೆ ರೈತರು ಹೋದರೆ, ರೇಷ್ಮೆ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುತ್ತಿದ್ದಾರೆ. ಹಾಗೂ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸೇನೆ ಒತ್ತಾಯಿಸಿ ರೇಷ್ಮೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಮನವಿ ನೀಡಿದರು.
ಈ ವೇಳೆ ಕರ್ನಾಟಕ ರೈತಸೇನೆ ತಾಲ್ಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್ ಮಾತನಾಡಿ, ರೈತರು ಬೆಳೆದಂತಹ ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವ ವ್ಯಾಪಾರಸ್ಥರು (ರೀರ‍್ಸ್ಗಳು) ರೈತನು ಬೆಳೆದ ರೇಷ್ಮೆಗೂಡನ್ನು ಮಾರುಕಟ್ಟೆಯಿಂದ ಸ್ಯಾಂಪಲ್ ತೆಗೆದುಕೊಂಡುಹೋಗಿ ಆ ಗೂಡನ್ನು ದಾರ ಬಿಚ್ಚಾಣಿಕೆಗೆ ಹಾಕಿ ಆ ಗೂಡಿನಿಂದ ದಾರ ಬಿಚ್ಚಾಣಿಕೆ ಬಂದರೆ ಮಾತ್ರ ರೇಷ್ಮೆ ಗೂಡನ್ನು ಉತ್ತಮ ಬೆಲೆಗೆ ಕೊಳ್ಳುತ್ತಾರೆ. ಇಲ್ಲವಾದರೆ ಈ ರೇಷ್ಮೆಗೂಡಿನಲ್ಲಿ ಸರಿಯಾಗಿ ದಾರ ಬಿಚ್ಚಾಣಿಕೆ ಬರುವುದಿಲ್ಲವೆಂದು ರೇಷ್ಮೆ ರೈತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಕೋಲಾರ ಜಿಲ್ಲೆಯ ಲೋಕಲ್ ರೇಷ್ಮೆ ಮಾರುಕಟ್ಟೆಯಲ್ಲಿ ಈ ರೀತಿ ಸ್ಯಾಂಪಲ್ ಚೆಕ್ ಮಾಡುವುದರಿಂದ, ನಿಗಧಿತ ಬೆಲೆಗೆ ವಂಚಿತರಾಗಿ, ರೇಷ್ಮೆ ರೈತರ ಹೊಟ್ಟೆ ಮೇಲೆ ಹೊಡೆಯುವಂತಹ ಕೆಲಸ ರೀರ‍್ಸ್ಗಳು ಮಾಡುತ್ತಿದ್ದಾರೆ. ರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿರುವ ಮಾರುಕಟ್ಟೆಯಲ್ಲೊಂದಾದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ರೇಷ್ಮೆಗೂಡಿಗೆ ಗುಣಮಟ್ಟದ ಆಧಾರದಲ್ಲಿ ಬೆಲೆಯನ್ನು ನಿರ್ಧರಿಸಲಾಗುತ್ತಿದೆ. ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸ್ಯಾಂಪಲ್ ಚೆಕ್ ಮಾಡುವ ಅವಕಾಶವಿರುವುದಿಲ್ಲ. ಆಗಾಗಿ ಇದರಿಂದ ಯಾವುದೇ ರೇಷ್ಮೆ ರೈತರಿಗೆ ಅನ್ಯಾಯವಾಗುವುದಿಲ್ಲ.
ಆದಕಾರಣ ಈ ಕೂಡಲೇ ರೇಷ್ಮೆ ಗೂಡುಗಳನ್ನು ಯಾವುದೇ ಕಾರಣಕ್ಕೂ ರೀರ‍್ಸ್ಗಳು ಗೂಡನ್ನು ಸ್ಯಾಂಪಲ್ ತೆಗೆದುಕೊಂಡು ಹೋಗಿ ದಾರ ಬಿಚ್ಚಾಣಿಕೆ ಮಾಡುವುದಕ್ಕೆ ಕೋಲಾರದ ರೇಷ್ಮೆ ಸಹಾಯಕ ವ್ಯವಸ್ಥಾಪಕ ಅಧಿಕಾರಿಗಳು ಹಾಗೂ ರೈತರು ಅವಕಾಶ ಮಾಡಿಕೊಡಬಾರದು ಹಾಗೂ ರೈತರಿಗೆ ರೇಷ್ಮೆ ಗೂಡಿಗೆ ಗುಣಮಟ್ಟದ ಆಧಾರದ ಮೇಲೆ ಬೆಲೆಯನ್ನು ನಿಗಧಿಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇಣುಗೋಪಾಲಪುರ ಆನಂದ್, ನಾಗೇಶ್‌ಗೌಡ, ನಾರಾಯಣಸ್ವಾಮಿ, ಶ್ರೀನಿವಾಸ್, ಹಾಗೂ ಮುಂತಾದವರು ಹಾಜರಿದ್ದರು.


Share